Homeಮುಖಪುಟವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

ವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

- Advertisement -
- Advertisement -

| ಲೋಕೇಶ್ ಮಾಲ್ತಿ ಪ್ರಕಾಶ್ |
ಅನುವಾದ: ನಿಖಿಲ್ ಕೋಲ್ಪೆ

ಸತ್ತವರ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನೇ ಆಡುವುದು ನಮ್ಮ ದೇಶದ ಸಂಪ್ರದಾಯ. ನಾವು ದೈವಭಯ ಇರುವ ಜನರು ಮತ್ತು ನಮಗಿಂತ ಸತ್ತವರು ದೇವರಿಗೆ ಹೆಚ್ಚು ಹತ್ತಿರವಾದವರು ಎಂದು ನಂಬುವವರಾದುದರಿಂದ ನಾವು ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತೇವೆ. ಸತ್ತವರು ನಮಗೆ ಭಾರತದ ನ್ಯಾಯಾಲಯದಲ್ಲಿಯ ಬೆಳಗ್ಗಿನ ದೇಖಾವೆಗೆ ಪಕ್ಕಾ ಟಿಕೆಟ್ ದೊರಕಿಸಿಕೊಡಬಲ್ಲ ಖಾನ್ ಮಾರ್ಕೆಟ್ ಗ್ಯಾಂಗ್ ಇದ್ದಂತೆ. ಕೆಲವೊಮ್ಮೆ ನಾವು ಹಿಟ್ಲರ್ ನಮ್ಮಲ್ಲಿ ಹುಟ್ಟಲಿಲ್ಲವಲ್ಲ ಎಂದು ಸ್ವಲ್ಪ ಸಮಾಧಾನಪಡುವುದುಂಟು! ಖಂಡಿತವಾಗಿಯೂ ಆತನಿಗೆ ಸ್ಪರ್ಧೆ ನೀಡಬಲ್ಲ ದೇಸಿ ತಳಿಗಳು ನಮ್ಮಲ್ಲಿವೆಯದರೂ….

ಆದುದರಿಂದ, ಮೊನ್ನೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯವು ಪವಿತ್ರವಾದುದು, ಅದರಲ್ಲಿ ಚೌಕಾಸಿ ಮಾಡುವಂತಿಲ್ಲ ಎಂದಿತ್ಯಾದಿಯಾಗಿ ಮೂಲಭೂತ ಹಕ್ಕುಗಳ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದಾಗ ನನಗೆ ಸ್ವಲ್ಪ ಗಲಿಬಿಲಿಯಾಯಿತು. ಹೌದೇ? ಇದು ನಿಜವೇ? “ಏ ಇಲ್ಲ! ಇದು ಹಸಿಸುಳ್ಳು” ಎಂದು ಗಟ್ಟಿಯಾಗಿ ಕಿರುಚಿಕೊಳ್ಳುವುದರಿಂದ ನಾನು ಸ್ವಲ್ಪ ಪ್ರಯತ್ನದ ಬಳಿಕವಷ್ಟೇ ತಡೆದುಕೊಂಡೆ! ಸ್ವಾತಂತ್ರ್ಯದ ಹಕ್ಕು ಸತ್ತಿದೆಯೇ? ಸಾವು ಮತ್ತು ವಂಚನೆಯ ಈ ಭವದಲ್ಲಿ ಬಿಟ್ಟು ಅದು ಸ್ವರ್ಗವಾಸಿಯಾಗಿದೆಯೆ? (ಅದಕ್ಕಾಗಿಯೇ ಹೊಗಳುತ್ತಿದ್ದಾರೆಯೆ?)

ಈ ದೇಶದಲ್ಲಿ ಮೂಲಭೂತ ಹಕ್ಕುಗಳು ಸತ್ತು ಬಹಳ ಕಾಲವಾಗಿಹೋಗಿದೆ ಎಂದು ಟೀಕಾಕಾರರು ಖಂಡಿತಾ ಹೇಳಬಹುದು. ಇವರಲ್ಲಿ ಕಟು ಟೀಕಾಕಾರರು, ಇಲ್ಲಪ್ಪಾ, ಅದು ಇನ್ನೂ ಹುಟ್ಟಿಯೇ ಇಲ್ಲವಾದುದರಿಂದ ಸಾಯುವ ಪ್ರಶ್ನೆ ಶುದ್ಧ ಸುಳ್ಳೆಂದು ತಗಾದೆ ಎತ್ತಬಹುದು.

ಈ ವಿಷಯಕ್ಕೆ ಬಂದಾಗ, ನಾನೊಬ್ಬ ದೇಶಭಕ್ತ ಮತ್ತು ಈ ತಳಿಯ ಇತರ ಪ್ರಭೇದಗಳಂತೆ. ಮತ್ತು ಅವರಷ್ಟೇ ನಾನು ಕೂಡಾ ವಾಕ್ ಸ್ವಾತಂತ್ರ್ಯದ ಸಂಪೂರ್ಣ ಬೆಂಬಲಿಗ ಎಂದು ಮೊದಲಿಗೇ ಹೇಳಿಬಿಡುತ್ತೇನೆ. ನಮ್ಮ ಸರಕಾರಗಳು ಸಂವಿಧಾನವನ್ನು ಅಕ್ಷರಶಃ ಅನುಸರಿಸುತ್ತವೆ. ಮತ್ತು ಸರಕಾರವೂ ದೇಶಭಕ್ತವಾಗಿದ್ದಲ್ಲಿ ಸಂವಿಧಾನದ ಕುರಿತು ಅದರ ನಿಷ್ಟೆಯನ್ನು ಯಾರೂ ಸಂಶಯಿಸಬಾರದು. ಮೊನ್ನೆಯಷ್ಟೇ ಮೋದೀಜಿ ಸಂವಿಧಾನಕ್ಕೆ ಹೇಗೆ ಕೈಮುಗಿದು ತಲೆಬಾಗಿದರೆಂದು ನೀವು ನೋಡಿಲ್ಲವೆ? ಸಂವಿಧಾನ ಮತ್ತು ಕಾನೂನು ಯಾವತ್ತೂ ಇದಕ್ಕಿಂತ ಸುರಕ್ಷಿತ ಕೈಗಳಲ್ಲಿ ಇರಲಿಲ್ಲ; ಇರುವುದು ಸಾಧ್ಯವೂ ಇಲ್ಲ.

ಹೀಗಿದ್ದರೂ, ಈ ಖಾನ್ ಮಾರ್ಕೆಟ್ ಗ್ಯಾಂಗ್ ಒಂದು ದೇಶಭಕ್ತ ಸರಕಾರ ಮತ್ತದರ ವೀರ ಪೊಲೀಸರನ್ನು ಮೇಲೆ ಕೆಸರೆರಚುವ ಕಿಂಚಿತ್ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಬಗೆಗಿನ ಕೆಲವು ಜುಜುಬಿ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿಯೋ, ಅದಾವುದೋ ನ್ಯೂಸ್ ಚಾನೆಲಿನಲ್ಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿಯೋ ಕೆಲವು ಪತ್ರಕರ್ತರನ್ನು ಬಂಧಿಸಿದ ಚಿಕ್ಕ ವಿಷಯದ ಬಗ್ಗೆ ಸುಮ್ಮಸುಮ್ಮನೆ ಗದ್ದಲ ಎಬ್ಬಿಸಲಾಗುತ್ತಿದೆ. ಅವರು ಮಾಧ್ಯಮ ವೃತ್ತಿಯ ಮರ್ಯಾದೆಯನ್ನು ಮೀರಿದ್ದಾರೆ. ಅವರಿಗೆ ಟ್ವೀಟ್ ಮಾಡಲು ಬೇರೆಷ್ಟೋ ವಿಷಯಗಳಿದ್ದವು. ಅವರು ಬೇಕಾದರೆ ಯೋಗಿ ಸರಕಾರ ಮತ್ತೆ ಜೀವನೀಡುತ್ತಿರುವ ಏಂಟಿರೋಮಿಯೋ ಸ್ಕ್ವಾಡ್ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದು ಬೇಡವೆಂದರೆ ಬೆಂಕಿಹಚ್ಚುವ ಭಾಷಣಗಳ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದೂ ಬೇಡ ಎಂದಾದರೆ, ಹದಗೆಡುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆಗಳು, ಸರಕಾರಿ ಶಾಲಾ ಸೌಲಭ್ಯಗಳ ಬಗ್ಗೆ, ನಿರುದ್ಯೋಗದ ಬಗ್ಗೆ, ಗೋರಕ್ಷಕ ಗ್ಯಾಂಗುಗಳ ಬಗ್ಗೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಮಾತಾಡಬಹುದಿತ್ತು. ಮಾತಾಡಲು ಮತ್ತು ಟ್ವೀಟ್ ಮಾಡಲು ಎಷ್ಟೊಂದು ವಿಷಯಗಳಿವೆ! ಇಷ್ಟಿದ್ದರೂ ಅವರು ಸುಮ್ಮಸುಮ್ಮನೇ ಗಾಸಿಪ್‌ಗಳ ಹಿಂದೆಬಿದ್ದರು! ಯೋಗಿ ಸಾರ್ವಜನಿಕ ನೈತಿಕತೆಯ ಟೇಕೇದಾರನಾಗಿರುವುದರಿಂದ ಕ್ರಮ ಕೈಗೊಳ್ಳಲೇಬೇಕಾಗಿತ್ತು, ಅವರಿಗೆಲ್ಲಾ ಒಂದು ಪಾಠ ಕಲಿಸಲೇಬೇಕಾಗಿತ್ತು.. ಅವರ ಪೊಲೀಸರು ಆ ಕೆಲಸ ಮಾಡಿದರು ಅಷ್ಟೇ.

ನೈತಿಕ ಶಿಕ್ಷಣಕ್ಕೆ ಹೊರತಾಗಿ ಯುಪಿ ಪೊಲೀಸರು ಕಾನೂನು ಮತ್ತು ಶಿಸ್ತು ಅಥವಾ ನಿಖರವಾಗಿ ಹೇಳಬೇಕೆಂದರೆ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವ ಕೆಲಸವನ್ನು ಕೈಗೆತ್ತಿಕೊಂಡರು. ಪೊಲೀಸರು ಏನು ಮಾಡಬೇಕೋ ಯುಪಿ ಪೊಲೀಸರು ಅದನ್ನೇ ಮಾಡಿದರು. ಕೆಲ ಸಮಯದ ಹಿಂದೆ ಬಂಗಾಳದಲ್ಲಿ, ಕರ್ನಾಟಕದಲ್ಲಿ, ಮತ್ತೇ ಅನೇಕ ಕಡೆಗಳಲ್ಲಿ ಮಾಡಿದ್ದನ್ನೇ ಅವರು ಮಾಡಿದ್ದು. ಪೋಲೀಸರು ಇಲ್ಲದಿದ್ದರೆ, ಈ ದೇಶದಲ್ಲಿ ಕಾನೂನು ಮತ್ತು ಶಿಸ್ತು ಎಂಬುದೊಂದು ಇದೆ ಎಂದು ಈ ಜನಸಾಮಾನ್ಯರು ಮರೆತೇಬಿಡುತ್ತಾರೆ. ಇದರಿಂದ ವಿನಾಯಿತಿ ಇರುವುದು ನೀರವ್ ಮೋದಿಯಂತಹ ಜನರಿಗೆ ಮಾತ್ರ. ಅದನ್ನು ಇತರರಿಗೆ ನೀಡುವಂತಿಲ್ಲ. ಅದೂ ಕೂಡಾ ರಾಮರಾಜ್ಯ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ಅದನ್ನು ಕೊಡಲಾದೀತೆ? ಪೊಲೀಸರ ತ್ವರಿತ ಕ್ರಮಕ್ಕಾಗಿ ಅವರಿಗೆ ಶಹಬ್ಬಾಷ್‌ಗಿರಿ ನೀಡಬೇಕಾದಲ್ಲಿ ಈ ಖಾನ್ ಮಾರ್ಕೆಟ್ ಗ್ಯಾಂಗ್ ಪೊಲೀಸರ ಮಾನಹಾನಿ ಮಾಡಿ ಅವರ ನೈತಿಕ ಸ್ಥೈರ್ಯವನ್ನು ಕೆಡಿಸಲು ಎದ್ದುನಿಂತಿದೆ.

ಬಾಲಿವುಡ್ ಚಿತ್ರಗಳಲ್ಲಿ ಕೂಡ ಸಮಯಕ್ಕೆ ಸರಿಯಾಗಿ ತಲುಪಿ ಅಪರಾಧವನ್ನು ತಡೆಗಟ್ಟಲಾಗದ ಪೋಲಿಸರು ನಿಜ ಜೀವನದಲ್ಲಿ ಹಿಂದೆಂದೂ ಕಾಣದ ತ್ವರಿತತೆಯಿಂದ ಕ್ರಮ ಕೈಗೊಂಡಿದ್ದಾರೆ. ಇದು ಅತ್ಯಂತ ಜನಭರಿತ ರಾಜ್ಯವನ್ನು ಭಾರೀ ಕಾನೂನು ಮತ್ತು ಶಿಸ್ತಿನ ಮಹಾ ಬಿಕ್ಕಟ್ಟಿನಿಂದ ಬಚಾವು ಮಾಡಿದೆ. ಅದು ಸಾರ್ವಜನಿಕ ಶಾಂತಿಯನ್ನು ಯಾರಾದರೂ ಕದಡುವ ಮುನ್ನವೇ ಕಾಪಾಡಿದೆ. ಇದು ಮಹಾ ಗಟ್ಟಿಗ ನಾಯಕನ ನಾಯಕತ್ವದಲ್ಲಿ ಮಾತ್ರ ಸಾಧ್ಯ. ಅವರ ಕಾರ್ಯದಕ್ಷತೆಯನ್ನು ಕೊಂಡಾಡುವ ಬದಲು ಟೀಕಾಕಾರರು ಪೊಲೀಸರು ಮತ್ತು ಯೋಗಿಯ ಮೇಲೆ ಎಗರಿಬಿದ್ದಿದ್ದಾರೆ

ಒಬ್ಬ ಮಹಿಳೆ ಮುಖ್ಯಮಂತ್ರಿ ಯೋಗಿಯ ಮೇಲೆ (ಪರಸ್ಪರ) ಪ್ರೇಮ ತೋರುವ ವಿಡಿಯೊ ಯೋಗಿ ಭಕ್ತರನ್ನು ರೊಚ್ಚಿಗೆಬ್ಬಿಸುತ್ತದೆ ಎಂದು ಯುಪಿಯ ಪೊಲೀಸ್‌ವಾಲರಿಗೆ ಗೊತ್ತು. ಭಾವನೆ ಘಾಸಿಗೊಂಡ ಭಕ್ತರು ಸಾಮೂಹಿಕ ವಿನಾಶದ ಅಸ್ತ್ರಗಳಿಗಿಂತಲೂ ಅಪಾಯಕಾರಿ ಎಂಬುದೂ ಅವರಿಗೆ ಗೊತ್ತು.

ಆದುದರಿಂದ, ಸಾರ್ವಜನಿಕ ಶಾಂತಿಗೆ ಭಾರೀ ಬಿಕ್ಕಟ್ಟು ಕವಿದಿರುವುದನ್ನು ಪೊಲೀಸರು ಸರಿಯಾಗಿಯೇ ಗ್ರಹಿಸಿದ್ದಾರೆ. ತ್ವರಿತ ಕಾರ್ಯಾಚರಣೆಯ ಮೂಲಕ ಇಂತಹ ಒಂದು ಸ್ಫೋಟಕ ಮಾಹಿತಿಯನ್ನು ಪ್ರಸಾರ ಮಾಡಿದ ಜನರನ್ನು ಬಂಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯದ ಹಕ್ಕಿಗೆ ಏನಾದರೂ ಆದರೆ, ಯಾರು ತಾನೇ ಲೆಕ್ಕಿಸುತ್ತಾರೆ! ಬಹುಶಃ ಅದು ಬಹಳ ಹಿಂದೆಯೇ ಸತ್ತಿದೆ. ಬಹುಶಃ ನಾವೀಗ ಕೊನೆಯ ಸುತ್ತಿನ ಶ್ರದ್ಧಾಂಜಲಿಯನ್ನು ಓದುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...