Homeಮುಖಪುಟಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಭಾರತದ ಮಟ್ಟಿಗೆ ಪೊಲೀಸರು ತಾವು ಪ್ರಶ್ನಾತೀತ ಸಂಘಟನೆ ಎಂದೇ ತಿಳಿದಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡುವುದೇ ಒಂದು ಅಪರಾಧ ಎಂಬ ಮನೋಭಾವ ಅವರ ಆಳವಾದ ಮನಸ್ಸಿನಲ್ಲಿ ಅಚ್ಚೊತ್ತಿದೆ.

- Advertisement -
- Advertisement -

ತಮಿಳಿನ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ’ಚಂದ್ರಕುಮಾರ್’ ಅವರ ಕಾದಂಬರಿಯಾದ ’ಲಾಕಪ್’ ಮತ್ತು ಇದೇ ಕಾದಂಬರಿಯನ್ನು ಆಧರಿಸಿ 2015ರಲ್ಲಿ ಬಿಡುಗಡೆಯಾದ ’ವಿಸಾರಣೈ’ ಎಂಬ ಚಿತ್ರ ಕಳೆದ ಕೆಲವು ದಿನಗಳಲ್ಲಿ ಮತ್ತೆ ಮುನ್ನಲೆಗೆ ಬಂದು ಚರ್ಚೆಯಾಗುತ್ತಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾನ್ಕುಳಂನಲ್ಲಿ ನಡೆದಿರುವ ಜೋಡಿ ಲಾಕಪ್ ಡೆತ್ ಪ್ರಕರಣ ಇದಕ್ಕೆ ಕಾರಣ ಎಂದು ಊಹಿಸಲು ಕಷ್ಟವೇನಲ್ಲ.

ಅಸಲಿಗೆ “ಲಾಕಪ್” ಎಂಬ ಕಾದಂಬರಿ ನೈಜ ಘಟನೆಯ ಎಳೆಯನ್ನು ಆಧರಿಸಿದ್ದ ಕಾದಂಬರಿ. 30 ವರ್ಷಗಳ ಹಿಂದೆ ತಾನು ಸ್ವತಃ ಜೈಲಿನಲ್ಲಿ ಅನುಭವಿಸಿದ್ದ ಘೋರ ದೈಹಿಕ ದೌರ್ಜನ್ಯದ ಕುರಿತು ಬರಹಗಾರ ಚಂದ್ರಕುಮಾರ್ ಈ ಪುಸ್ತಕದಲ್ಲಿ ಓದುಗರಿಗೆ ಅಘಾತವಾಗುವಂತೆ ಬರೆದಿದ್ದರು. ಈ ಪುಸ್ತಕವನ್ನು ಅಷ್ಟೇ ಶ್ರದ್ಧೆಯಿಂದ ಪರಿಣಾಮಕಾರಿಯಾಗಿ ಅಡವಳಿಸಿಕೊಂಡು ಸಿನಿಮಾ ಮಾಡುವಲ್ಲಿ ನಿರ್ದೇಶಕ ವೆಟ್ರಿಮಾರನ್ ಯಶಸ್ವಿಯಾಗಿದ್ದರು.

ಇದು 30 ವರ್ಷದ ಹಿಂದಿನ ಕಥೆ. ಆದರೆ, ಪಸ್ತುತ ದಿನಗಳಲ್ಲಿ ಮಾನವ ಹಕ್ಕುಗಳು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕಾದಂಬರಿಯಲ್ಲಿ ಉಲ್ಲೇಖಿಸಿರುವಂತೆಯೇ ಪೊಲೀಸರ ದೌರ್ಜನ್ಯಕ್ಕೆ ಈಗಲೂ ಜನ ಬಲಿಯಾಗುತ್ತಿದ್ದಾರೆ ಎಂಬುದು ಇಂತಹ ಸಂದರ್ಭದಲ್ಲೂ ಹೋಲಿಕೆಯಾಗುತ್ತಿರುವ ಮಾತ್ರ ದುರಂತ. ಪೊಲೀಸರ ಪೈಶಾಚಿಕ ಕೃತ್ಯಕ್ಕೆ ಎರಡೆರಡು ಲಾಕಪ್ ಡೆತ್ ಆಗುತ್ತದೆ ಎಂದರೆ ಇಡೀ ವ್ಯವಸ್ಥೆ ತಲೆತಗ್ಗಿಸಬೇಕಿದೆ.

ಕಳೆದ ಜೂನ್ 19 ರಂದು ತಮಿಳುನಾಡಿನ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಜಯರಾಜ್ ಮತ್ತು ಬೆನಿಕ್ಸ್ ಸಾವಿನ ವಿರುದ್ಧ ಇಂದು ಇಡೀ ತಮಿಳುನಾಡಿನ ಜನ ಒಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಭಾರತದ ವಿವಿಧ ಮೂಲೆಗಳಿಗೂ ಈ ಹೋರಾಟ ಹಬ್ಬಿದೆ.

ಪರಿಣಾಮ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ತಮಿಳುನಾಡಿನ ಮಧುರೈ ಹೈಕೋರ್ಟ್ ಪೀಠ ತಪ್ಪಿತಸ್ಥ ನಾಲ್ಕೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಈ ಪ್ರಕರಣವನ್ನು ಈಗಾಗಲೇ ಸಿಬಿಐ ವಿಚಾರಣೆಗೆ ವರ್ಗಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾತಾನ್ಕುಳಂ ಘಟನೆಯ ಬಗ್ಗೆ ’ಲಾಕಪ್’ ಕಾದಂಬರಿ ಬರಹಗಾರ ಚಂದ್ರಕುಮಾರ್ ’ನ್ಯಾಯಪಥ’ದ ಜೊತೆಗೆ ಮಾತನಾಡಿದ್ದಾರೆ. ಈ ಘಟನೆ ಮತ್ತು ಭಾರತದಲ್ಲಿ ನಡೆಯುತ್ತಿರುವ ಪೊಲೀಸ್ ಅರಾಜಕತೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“ಲಾಕಪ್ ಇದು ನೈಜ ಘಟನೆಯನ್ನು ಆಧರಿಸಿ ಬರೆದ ಕಾದಂಬರಿ. ಆದರೆ, ವರ್ಷಗಳೇ ಉರುಳಿದರೂ ಪೊಲೀಸರ ದೌರ್ಜನ್ಯ ಮಾತ್ರ ಈವರೆಗೆ ಬದಲಾಗಿಲ್ಲ. 1983ರಲ್ಲಿ ನಾನು ಮಾಡದ ತಪ್ಪಿಗೆ ಎರಡು ವಾರಗಳ ಕಾಲ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅಂದು ಸತತ ಎರಡು ವಾರಗಳ ಕಾಲ ಪೊಲೀಸರು ನಡೆಸಿದ ದೌರ್ಜನ್ಯದಿಂದ ನಾನು ಬದುಕಿ ಬಂದದ್ದೇ ದೊಡ್ಡ ಪವಾಡ.

“ಆನಂತರವೂ ಕಳೆದ 37 ವರ್ಷಗಳಿಂದ ದೇಶದ ನಾನಾ ಮೂಲೆಗಳಲ್ಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ, ಲಾಕಪ್ ಡೆತ್ ಕುರಿತ ಸುದ್ದಿಗಳನ್ನು ನಾನು ಕೇಳುತ್ತಲೇ ಇದ್ದೇನೆ. ಆದರೆ, ಜಯರಾಜ್ ಮತ್ತು ಬೆನಿಕ್ಸ್ ಸಾವು ಮಾತ್ರ ಮಾನವ ಸಮಾಜ ಅರಗಿಸಿಕೊಳ್ಳಲು ಸಾಧ್ಯವಾಗದ ಕ್ರೌರ್ಯದ ಪರಮಾವಧಿ ಎಂದರೆ ತಪ್ಪಾಗಲಾರದು.

“ಪೊಲೀಸರ ಕೈಗೆ ಶಸ್ತ್ರವನ್ನು ಕೊಡಲಾಗಿದೆ. ಎಲ್ಲೇ ತಪ್ಪು ನಡೆದರೂ ಸಹ ಅದನ್ನು ಪ್ರಶ್ನೆ ಮಾಡುವ ಹಕ್ಕು ನೀಡಲಾಗಿದೆ. ಈ ಅಧಿಕಾರವನ್ನು ಪೊಲೀಸರು ಸಮಾಜಘಾತುಕ ಶಕ್ತಿಯ ವಿರುದ್ಧ ಬಳಸಬೇಕು. ಆದರೆ, ದುರಾದೃಷ್ಟವಶಾತ್ ಅವರ ಈ ಶಕ್ತಿ ಸಾಮಾಜಿಕ ಧಮನಕ್ಕೆ ಮತ್ತು ಜನರನ್ನು ಕೊಲ್ಲುವ ಮೂಲಭೂತ ಅರ್ಹತೆಯಾಗಿ ಬದಲಾಗಿದೆ.

“ಕ್ರೌರ್ಯ ಮತ್ತು ನಿರ್ದಯಿಗಳಿಗೆ ಮಾತ್ರ ಪೊಲೀಸ್ ಕೆಲಸ ಎಂಬಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಜಯರಾಜ್ ಮತ್ತು ಬೆನಿಕ್ಸ್ ಸಾವಿಗಾಗಿ ಈ ಪೊಲೀಸರಿಗೆ ಏನೇ ಶಿಕ್ಷೆ ನೀಡಿದರೂ ಸಹ, ಖಂಡಿತ ಅದರಿಂದ ಸತ್ತವರಿಗೆ ನ್ಯಾಯ ದೊರಕಲಾಗದು.

“ತಕ್ಕ ಮಟ್ಟಿಗೆ ಪೊಲೀಸರು 24 ಗಂಟೆ ಕೆಲಸ ನಿರ್ವಹಿಸಲು ಮಾನಸಿಕವಾಗಿ ಸಿದ್ದವಾದ ನಂತರವೇ ಪೊಲೀಸ್ ಇಲಾಖೆಯು ಅವರನ್ನು ಕೆಲಸಕ್ಕೆ ನಿಯೋಜಿಸುತ್ತದೆ. ಸಮಾಜದಲ್ಲಿನ ಆಂತರಿಕ ಹಿಂಸಾಚಾರವನ್ನು ನಿಗ್ರಹಿಸುವ ಮೂಲಕ ಜನರಲ್ಲಿ ಶಾಂತಿ ಮತ್ತು ನೆಮ್ಮದಿ ತರುವುದು ಅವರ ಕೆಲಸ. ಆದರೆ, ಹೊರಗಿನ ಜನರಿಗೆ ತಿಳಿದಿರುವ ಪೊಲೀಸರ ಚಿತ್ರಕ್ಕಿಂತ ಅವರ ಕೆಲಸ ಮತ್ತು ಮಾನಸಿಕ ಸ್ಥಿತಿ ಭಿನ್ನ ಎಂಬುದೇ ಸತ್ಯ.

“ಅಸಲಿಗೆ ಪೊಲೀಸ್ ಇಲಾಖೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಪರಿಪಾಲಿಸಬಾರದು ಎಂಬ ಕಾರಣಕ್ಕೆ ಲಂಚ ಎಂಬ ಅಸ್ತ್ರ ಅಧಿಕಾರ ವರ್ಗದಲ್ಲಿ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುತ್ತದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬದಲಿಸದೆ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯವಿಲ್ಲ. ಪೊಲೀಸರಿಂದ ನೈತಿಕತೆಯನ್ನು – ಕರುಣೆಯನ್ನು ಎದುರುನೋಡುವುದಂತೂ ಅಸಾಧ್ಯವಾದ ಮಾತು.

“ಇನ್ನೂ ಕಳೆದ ಮೂರು ನಾಲ್ಕು ತಿಂಗಳಿನಿಂದ ದೇಶದಾದ್ಯಂತ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಇದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. ಜನ ಮನೆಯಿಂದ ಹೊರಗಡೆ ಹೋಗಿಲ್ಲ. ಹೀಗಾಗಿ ಪೊಲೀಸರಿಗೆ ಲಂಚದ ರೂಪದಲ್ಲಿ ಹರಿದು ಬರಬೇಕಾಗಿದ್ದ ಅಪಾರ ಪ್ರಮಾಣದ ಹಣ ಅವರ ಕೈಸೇರಿಲ್ಲ. ಇದು ಸಾಮಾನ್ಯವಾಗಿ ಅವರ ಮಾನಸಿಕ ಸ್ಥಿಮಿತವನ್ನು ಹದಗೆಡಿಸಿದೆ. ಸ್ವಯಂ-ಅಸಮ್ಮತಿ, ಒತ್ತಡ ಮತ್ತು ಅತಿರೇಕದ ಚಟುವಟಿಕೆ ಕಾರಣವಾಗಿದೆ.

“ಈ ನಡುವೆ ಕಳೆದ ತಿಂಗಳು ಪೊಲೀಸ್ ಅಧಿಕಾರಿ ರಘು, ಬೆನಿಕ್ಸ್ ಮೊಬೈಲ್ ಅಂಗಡಿಯಲ್ಲಿ ಉಚಿತವಾಗಿ ಮೊಬೈಲ್ ಕೇಳಿದ್ದಾರೆ. ಮೊದಲೇ ವ್ಯಾಪಾರ ಇಲ್ಲದ ಕಾರಣ ಬೆನಿಕ್ಸ್ ಉಚಿತವಾಗಿ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಇದೇ ಕೋಪದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇನ್ನು ಅವರನ್ನು ಕೊಲ್ಲಬೇಕು ಎಂದೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂಬುದು ಘಟನೆಗಳನ್ನು ಪರಾಮರ್ಶಿಸಿದರೆ ತಿಳಿಯುತ್ತದೆ.

“ಏಕೆಂದರೆ ಸಾಮಾನ್ಯವಾಗಿ ಯಾರನ್ನಾದರೂ ಕೊಲ್ಲಬೇಕು ಎಂದರೆ ಮಾತ್ರ ಪೊಲೀಸರು ಅಪರಾಧಿಗಳ ಗುದದ್ವಾರದಲ್ಲಿ ಲಾಠಿ ಪ್ರಯೋಗಿಸುತ್ತಾರೆ. ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ನಗ್ನಗೊಳಿಸಿ ಅವರಿಬ್ಬರ ಗುದದ್ವಾರದಲ್ಲಿ ಲಾಠಿ ಪ್ರಯೋಗಿಸಿರುವುದು ನಿಜ ಎಂಬುದಾದರೆ, ಆ ಇಬ್ಬರೂ ಅಮಾಯಕನ್ನು ಕೊಲೆ ಮಾಡುವುದೇ ಪೊಲೀಸರ ಉದ್ದೇಶವಾಗಿತ್ತು ಎಂಬುದು ವೇದ್ಯವಾಗುತ್ತದೆ.

ವಿಸಾರಣೈ ಸಿನಿಮಾದ ದೃಶ್ಯ

ಭಾರತದ ಮಟ್ಟಿಗೆ ಪೊಲೀಸರು ತಾವು ಪ್ರಶ್ನಾತೀತ ಸಂಘಟನೆ ಎಂದೇ ತಿಳಿದಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡುವುದೇ ಒಂದು ಅಪರಾಧ ಎಂಬ ಮನೋಭಾವ ಅವರ ಆಳವಾದ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಉದಾಹರಣೆಗೆ:- ಪೊಲೀಸರಿಗೆ ಹಣ ನೀಡಿದರೆ ನೀವು ರಾತ್ರಿ ಎಷ್ಟು ಹೊತ್ತು ಬೇಕಿದ್ದರೂ ಅಂಗಡಿ ಬಾಗಿಲು ತೆರೆಯಬಹುದು. ಇಲ್ಲದಿದ್ದರೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಈ ಕುರಿತು ಪ್ರಶ್ನೆ ಮಾಡಿದ ಕಾರಣಕ್ಕಾಗಿಯೇ ಇಂದು ಜಯರಾಜ್ ಮತ್ತು ಬೆನಿಕ್ಸ್ ಅನ್ಯಾಯವಾಗಿ ಬಲಿಯಾಗಿದ್ದಾರೆ. ದೇಶದಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಇದು ವ್ಯವಸ್ಥೆಯ ಭಾಗವಾಗಿರುವ ಎಲ್ಲರಿಗೂ ತಿಳಿಯದ ವಿಚಾರವೇನಲ್ಲ. ಹಲವೆಡೆ ಪೊಲೀಸರೇ ಹಣವನ್ನು ಬೆದರಿಸಿ ಸುಲಿಗೆ ಮಾಡಿರುವ ಉದಾಹರಣೆಗಳೂ ದೇಶದಲ್ಲಿ ಸಾಕಷ್ಟಿವೆ.

“ಇನ್ನೂ ಲಾಕಪ್‍ಡೆತ್ ಭಾರತದ ಮಟ್ಟಿಗೆ ಹೊಸದೇನಲ್ಲ. ಕೇಂದ್ರ ಅಪರಾಧ ವಿಭಾಗ ನೀಡುವ ಅಂಕಿಅಂಶದ ಪ್ರಕಾರ 2019ರಲ್ಲಿ ಭಾರತದಲ್ಲಿ 1,606 ಜನ ಪೊಲೀಸರ ಸುಪರ್ದಿಯಲ್ಲಿದ್ದಾಗ ಲಾಕಪ್‍ನಲ್ಲೇ ಸಾವಿಗೀಡಾಗಿದ್ದಾರೆ. ಈ ಪೈಕಿ ಉತ್ತರಪ್ರದೇಶದಲ್ಲಿ ಅಧಿಕ ಜನ ಸಾವನ್ನಪ್ಪಿದ್ದರೆ, ತಮಿಳುನಾಡು, ಪಂಜಾಬ್ ಮತ್ತು ಬಿಹಾರ ಎರಡನೇ ಸ್ಥಾನದಲ್ಲಿವೆ. ಹಾಗಾದರೆ ಈ ಲಾಕಪ್ ಡೆತ್‍ಗಳಗೆ ಪರಿಹಾರ ಏನು? ಎಂಬುದು ನಮ್ಮ ಮುಂದೆ ನಿಲ್ಲುವ ಬಹುದೊಡ್ಡ ಪ್ರಶ್ನೆ.

“ಅಸಲಿಗೆ ದೇಶದಲ್ಲಿ ಸಾಕಷ್ಟು ಲಾಕಪ್‍ಡೆತ್‍ಗಳು ಸಂಭವಿಸುತ್ತಲೇ ಇವೆ. ಆದರೂ, ಇವುಗಳಿಗೆ ಕೊನೆ ಇಲ್ಲ ಏಕೆ? ಎಂದರೇ, ಲಾಕಪ್‍ಡೆತ್ ಅಪರಾಧದಲ್ಲಿ ಪಾಲ್ಗೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ದೇಶದಲ್ಲಿ ಪ್ರಬಲವಾದ ಕಾನೂನು ಇಲ್ಲ. ಹೆಚ್ಚೆಂದರೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಮೂರು ತಿಂಗಳ ಕಾಲ ಸಸ್ಪೆಂಡ್ ಮಾಡಿ ಬೇರೆಡೆ ವರ್ಗಾವಣೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಪ್ರಕರಣ ಖುಲಾಸೆಯಾಗುತ್ತದೆ. ಆತ ಮತ್ತೆ ಉನ್ನತ ಹುದ್ದೆಗೆ ಏರುತ್ತಾನೆ. ಆದರೆ, ಆತನಿಂದ ಸತ್ತ ವ್ಯಕ್ತಿಗೆ ಕೊನೆಯವರೆಗೂ ನ್ಯಾಯ ದೊರೆಯುವುದೇ ಇಲ್ಲ.

“ಹೀಗಾಗಿ ಇನ್ನಾದರೂ ಲಾಕಪ್‍ಡೆತ್ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಸ್ಥಳಾಂತರಿಸುವುದು, ವಜಾಗೊಳಿಸುವುದು ಇದಕ್ಕೆ ಪರಿಹಾರವಲ್ಲ. ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಗಾಯಗೊಂಡಿದ್ದರೂ ಸುಳ್ಳು ಪ್ರಮಾಣ ಪತ್ರ ನೀಡುವ ಸರ್ಕಾರಿ ವೈದ್ಯಾಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕ್ರಮಗಳಿಂದ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸುವುದು ಸಾಧ್ಯ. ಇಲ್ಲದಿದ್ದರೆ, ಫ್ಯಾಸಿಸಂ ಆಡಳಿತಕ್ಕೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸ ಇಲ್ಲದಂತಾಗುತ್ತದೆ.

“ಅಮೇರಿಕದ ಜಾರ್ಜ್ ಫ್ಲಾಯ್ಡ್ ಸಾವಿಗೆ ಒಟ್ಟುಗೂಡುತ್ತಿರುವ ಜನಸಮೂಹವು ಜಯರಾಜ್ ಬೆನಿಕ್ಸ್ ಸಾವಿಗೂ ಒಂದಾಗಬೇಕು. ಜಾರ್ಜ್ ಫ್ಲಾಯ್ಡ್ ಅವರಿಗಾದ ಅನ್ಯಾಯದ ವಿರುದ್ಧದ ಹೋರಾಟಗಳು ಸ್ವಾಗತಾರ್ಹ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ಬೀದಿಗಳಲ್ಲಿ, ಮಾಧ್ಯಮಗಳ ಮೂಲಕ ಜಾರ್ಜ್ ಪರವಾಗಿ ಹೋರಾಡಿದರು. ಜಾರ್ಜ್ ಫ್ಲಾಯ್ಡ್ ಪರ ಹೋರಾಟಗಳು ಭಾರತದಲ್ಲಿ ರಾಜಕೀಯ ಬದಲಾವಣೆಯನ್ನು ತರುವುದಿಲ್ಲ. ಆದರೆ, ಜಯರಾಜ್ ಮತ್ತು ಬೆನಿಕ್ಸ್ ಪರವಾದ ಹೋರಾಟ ಇಲ್ಲಿ ರಾಜಕೀಯ ಬದಲಾವಣೆಯನ್ನು ತರಬಲ್ಲದು.

“ತಮಿಳುನಾಡಿನ ಡೈರಿ ಅಸೋಸಿಯೇಷನ್ ಮತ್ತು ವ್ಯಾಪಾರ ಸಂಘಟನೆಗಳು ತಪ್ಪಿತಸ್ಥ ಪೊಲೀಸರ ಕುಟುಂಬಗಳಿಗೆ ನಾವು ಯಾವುದೇ ಆಹಾರ ಸಾಮಗ್ರಿಗಳನ್ನು ನೀಡುವುದಿಲ್ಲ ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಇದು ಸ್ವಾಗತಾರ್ಹ. ಆದರೆ, ನಾಡಿನ ಎಲ್ಲಾ ಜನರ ಇಂತಹ ಮಾನವೀಯ ಹೋರಾಟದ ಭಾಗವಾದರೆ ಮಾತ್ರ ವ್ಯವಸ್ಥೆಯನ್ನು ಬದಲಿಸುವುದು ಸಾಧ್ಯ. ಜನರ ಇಂತಹ ಸಾತ್ವಿಕ ಸಿಟ್ಟಿನ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಹೊರಹೊಮ್ಮಲಿದೆ.

“ಇನ್ನೂ ಜನರ ಮೇಲಿನ ಪೊಲೀಸರ ದೌರ್ಜನ್ಯವನ್ನು ಕಡಿಮೆ ಮಾಡಲು ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾವು ಕಳೆದ 10 ವರ್ಷಗಳಿಂದ ಹೋರಾಡುತ್ತಿದ್ದೇವೆ. ಆದರೆ, ಆ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಯ ಸುರಕ್ಷತೆಗಾಗಿ ಹೊರಗೆ ಅಳವಡಿಸಲಾಗಿದೆಯೇ ಹೊರತು, ಪೊಲೀಸ್ ಠಾಣೆಯ ಒಳಗೆ ಅಳವಡಿಸಲಾಗಿಲ್ಲ. ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಯ ಒಳಗೂ ಅಳವಡಿಸುವವರೆಗೆ ಪಾರದರ್ಶಕತೆ ಅಸಾಧ್ಯ.”


ಇದನ್ನು ಓದಿ: 8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕ್ರಿಮಿನಲ್ ವಿಕಾಸ್ ದುಬೆ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...