Homeಚಳವಳಿಪ್ರಜಾಪ್ರಭುತ್ವದ ಮುಖವಾಡ ಹಾಕುವಲ್ಲಿ ಸಫಲವಾದ ಜೀವವಿರೋಧಿ ಮೋದಿ ಸರ್ಕಾರ: ಜಿ.ರಾಜಶೇಖರ್

ಪ್ರಜಾಪ್ರಭುತ್ವದ ಮುಖವಾಡ ಹಾಕುವಲ್ಲಿ ಸಫಲವಾದ ಜೀವವಿರೋಧಿ ಮೋದಿ ಸರ್ಕಾರ: ಜಿ.ರಾಜಶೇಖರ್

ಸದ್ಯಕ್ಕೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಪ್ರಭುತ್ವ ತನ್ನ ಜೀವವಿರೋಧಿ ಹಾಗೂ ಮಾನವ ದ್ವೇಷಿಯಾದರೂ ಪ್ರಜಾಪ್ರಭುತ್ವದ ಮುಖವಾಡ ಹಾಕುವುದರಲ್ಲಿ ಸಫಲವಾಗಿದೆ

- Advertisement -
- Advertisement -

ಉಡುಪಿಯಲ್ಲಿ ಜೀವವಿಮಾ ಕಂಪೆನಿಯ ನೌಕರರಾಗಿದ್ದ ಜಿ. ರಾಜಶೇಖರ್ ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕರಲ್ಲೊಬ್ಬರು. ತನಗೆ ಸತ್ಯ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಗಟ್ಟಿದನಿಯಲ್ಲಿ ನೇರವಾಗಿ ಹೇಳುವುದು ಅವರ ಬರಹ ಮತ್ತು ಬದುಕುಗಳ ಸ್ಥಾಯೀಗುಣ. ಕರಾವಳಿ ಪ್ರದೇಶದ ಕೋಮುವಾದೀಕರಣ ಹೆಚ್ಚುತ್ತಿದ್ದಂತೆ ಸತ್ಯ ಹೇಳುವ ದಿಟ್ಟತನವೂ ರಾಜಶೇಖರ್ ಅವರಲ್ಲಿ ಹೆಚ್ಚುತ್ತಾ ಹೋಯಿತು. ತಾನು ಅಭಿಮಾನಿಸುವ ಎಡಪಂಥದ ಕುರಿತ ಭಿನ್ನಮತವನ್ನೂ ಅಷ್ಟೇ ದಿಟ್ಟವಾಗಿ ಮುಂದಿಡುತ್ತಾ, ನೆಲದ ಸಂಕಷ್ಟಕ್ಕೆ ಸದಾ ಓಗೊಡುವ ಸಾವಯವ ಬುದ್ಧಿಜೀವಿ.

ಇದು ಎಂತಹ ಕೆಟ್ಟಕಾಲ ಎಂದರೆ ಜನಸಾಮಾನ್ಯರಲ್ಲಿ ಹೆಚ್ಚಿನವರಿಗೆ ಸ್ವಾತಂತ್ರ್ಯವಿಲ್ಲ ಎಂಬ ಸತ್ಯ ಕೂಡ ಗೊತ್ತಿಲ್ಲ. ಅವರು ಈಗಲೂ ತಾವು ಸ್ವತಂತ್ರರು ಎಂಬ ಭ್ರಮೆಯಲ್ಲಿ ಇದ್ದಾರೆ. ಸ್ವಾತಂತ್ರ್ಯದ ಮರೀಚಿಕೆಯನ್ನೇ ಜನರೆಲ್ಲಾ ವಾಸ್ತವವೆಂದು ನಂಬಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅವರಿಗೆ ಅವರ ಪರಾಧೀನತೆಯನ್ನು ಹೇಗೆ ಮನವರಿಕೆ ಮಾಡುವುದು? ಜಗತ್ತಿನಲ್ಲಿ ಯಾವ ಪ್ರಭುತ್ವವು ತನ್ನ ಪ್ರಜೆಗಳ ಬಗ್ಗೆ ಎಲ್ಲಾ ಸತ್ಯಗಳನ್ನು ಹೇಳುವುದಿಲ್ಲ ಎಂಬುದು ನಾವು ಎದುರಿಸಲೇಬೇಕಾದ ವಾಸ್ತವ. ಜಗತ್ತಿನ ಪ್ರಭುತ್ವಗಳ ನಡುವೆ ತರತಮ ವ್ಯತ್ಯಾಸಗಳಿವೆ. ಮೇಲುನೋಟಕ್ಕೆ ನಮಗೆಲ್ಲ ತಿಳಿದಿರುವ ಹಾಗೆ, ಕೆಲವು ಪ್ರಭುತ್ವಗಳು ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಿ ತಮ್ಮ ಆಳ್ವಿಕೆಯ ಬಗ್ಗೆ ಪ್ರಾಮಾಣಿಕವಾಗಿ ಜನರ ಮುಂದೆ ಹೇಳಿಕೊಳ್ಳುತ್ತವೆ. ಆದರೆ ಸದ್ಯಕ್ಕೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಪ್ರಭುತ್ವ ತನ್ನ ಜೀವವಿರೋಧಿ ಹಾಗೂ ಮಾನವ ದ್ವೇಷಿಯಾದರೂ ಪ್ರಜಾಪ್ರಭುತ್ವದ ಮುಖವಾಡ ಹಾಕುವುದರಲ್ಲಿ ಸಫಲವಾಗಿದೆ.

ಈ ದೃಷ್ಟಿಯಿಂದ ನೋಡಿದರೆ ಕಾಶ್ಮೀರದಲ್ಲಿ ಸದ್ಯಕ್ಕೆ ಇರುವ ಕತ್ತು ಹಿಸುಕುವ ವಾತಾವರಣ ಇಡೀ ದೇಶದ ರೂಪಕವಾಗಿದೆ. ಶ್ರೀಮಂತ ಪಟ್ಟಭದ್ರರು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅವುಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳ ಒತ್ತಾಸೆಯೊಂದಿಗೆ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಪಕ್ಷ ಚುನಾವಣೆಗಳನ್ನು ಗೆದ್ದುಕೊಂಡು ಅಧಿಕಾರಕ್ಕೆ ಬಂದಿದೆ. ಇದಕ್ಕೆ ಭಾರತದ ಎಡ ಪಕ್ಷಗಳನ್ನು ಹೊರತುಪಡಿಸಿ ಇತರ ಸೋ ಕಾಲ್ಡ್ ಲಿಬರಲ್, ಸೆಕ್ಯುಲಾರ್, ರಾಜಕೀಯ ಪಕ್ಷಗಳು – ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಗೋಸುಂಬೆ ನೀತಿಯು ಸ್ವಲ್ಪ ಕಾರಣವೆಂಬುದನ್ನು ನಾವು ಮರೆಯಕೂಡದು.

ನಿಜಕ್ಕೂ ಜನಾಂಗ ದ್ವೇಷಿ ರಾಜಕೀಯ ಪಕ್ಷ ಬಿಜೆಪಿ ಮತ್ತು ಅದಕ್ಕೆ ಎದುರಾಗಿ ಇನ್ನೊಂದು ಮಾನವೀಯತೆಯ ಮುಖವಾಡ ತೊಟ್ಟ ಆದರೆ ತನ್ನ ಎದುರಾಳಿಯಷ್ಟೇ ಅಲ್ಪಸಂಖ್ಯಾತರನ್ನು ತಿರಸ್ಕಾರದಿಂದ ಕಾಣುವ ರಾಜಕೀಯ ಪಕ್ಷ ಕಾಂಗ್ರೆಸ್, ಸದ್ಯಕ್ಕೆ ಇದು ನಮ್ಮ ರಾಜಕೀಯ ಸನ್ನಿವೇಶ! (ಈ ಮಾತು ಉತ್ಪ್ರೇಕ್ಷೆ ಎಂದು ಭಾವಿಸುವವರು ಬಾಬರಿ ಮಸೀದಿ ಧ್ವಂಸದ ನಂತರ ಮುಂಬೈ ಶಹರದಲ್ಲಿ ಕಾಂಗ್ರೆಸ್ ಸರಕಾರದ ಆಳ್ವಿಕೆಯಲ್ಲಿ ಭುಗಿಲೆದ್ದ ಮುಸ್ಲಿಮ್ ವಿರೋಧಿ ಹಿಂಸೆಯನ್ನು ಮರೆಯಬಾರದು). ಈ ಹಿನ್ನೆಲೆಯಲ್ಲಿ ಪ್ರಜೆಗಳ ಪ್ರಜಾಸತ್ತಾತ್ಮಕ ಆಯ್ಕೆಯ ಸ್ವಾತಂತ್ರ್ಯ ಎಂಬುದು ನಿಜಕ್ಕೂ ಒಂದು ಮರೀಚಿಕೆಯೇ ಸರಿ!

ಚುನಾವಣೆ ಎಂಬುದು ಕೇವಲ ದುಡ್ಡಿನ ಚೀಲಗಳ ಮೇಲಾಟವಲ್ಲ. ಅದು ಮತಾಂಧತೆ ಧರ್ಮನಿರಪೇಕ್ಷತೆ ಸಮಾಜವಾದ ಮುಂತಾದ ಛದ್ಮವೇಶ ವೇಷಗಳನ್ನು ತೊಟ್ಟು ದುಡ್ಡಿನ ಚೀಲಗಳು ಆಡುವ ನಾಟಕ ಕೂಡ! ಇಂತಹ ಸೋಗಲಾಡಿ ಪ್ರಜಾಪ್ರಭುತ್ವವಿರುವಾಗಲೇ ನಮ್ಮ ದೇಶದಲ್ಲಿ ಗೌರಿ ಲಂಕೇಶ್ ಮಾತ್ರವಲ್ಲ, ನರೇಂದ್ರ ಧಾಬೋಲ್ಕರ್ ಗೋವಿಂದ ಪನ್ಸಾರೆ ಎಂಎಂ ಕಲಬುರ್ಗಿ ಮುಂತಾದವರು ಕೊಲೆಯಾಗುತ್ತಾರೆ ಎಂದರೆ ಈ ನಾಡು ಎಂತಹ ದುಸ್ಥಿತಿಯಲ್ಲಿದೆ ಎಂದು ಯಾರಿಗಾದರೂ ದಿಗ್ಭ್ರಮೆ ಆದೀತು.

ಮೊನ್ನೆ ಸೆಪ್ಟೆಂಬರ್ 5ಕ್ಕೆ ಗೌರಿ ಕೊಲೆಯಾಗಿ ಎರಡು ವರ್ಷಗಳಾದವು. ಕರ್ನಾಟಕದಲ್ಲಿ ಆಕೆಯ ಸಂಸ್ಮರಣೆಯ ಕುರಿತ ಕಾರ್ಯಕ್ರಮವನ್ನು ನನಗೆ ಗೊತ್ತಿರುವ ಮಟ್ಟಿಗೆ ಯಾರು ಹಮ್ಮಿಕೊಳ್ಳಲಿಲ್ಲ. ಅಥವಾ ನಮ್ಮ ಪತ್ರಿಕೆಗಳು ಆ ಬಗ್ಗೆ ವರದಿ ಮಾಡಲೇ ಇಲ್ಲವೇ? ಅದು ಹೇಗಿದ್ದರೂ ಈ ನಾಡನ್ನು ನಾಡಿನ ಜನತೆಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಜನಸಾಮಾನ್ಯರ ಏಳಿಗೆಯನ್ನು ನನ್ನ ಬದುಕಿನ ಉಸಿರಾಗಿ ಮಾಡಿಕೊಂಡ ಒಂದು ಜೀವದ ಕೊಲೆಯಾಗಿ ಇದೇ ಸೆಪ್ಟೆಂಬರ್ 5ಕ್ಕೆ ಎರಡು ವರ್ಷ ಕಳೆಯಿತು. ನನಗೆ ಗೊತ್ತಿರುವ ಮಟ್ಟಿಗೆ ಕರ್ನಾಟಕದಲ್ಲಿ ಯಾರು ಅಷ್ಟೊಂದು ತೀವ್ರವಾಗಿ ಹಚ್ಚಿಕೊಂಡಂತೆ ಕಾಣಲಿಲ್ಲ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಎಂಎಂ ಕಲಬುರ್ಗಿ ಮುಂತಾದ ಈ ನಾಡಿನ ಸಂಸ್ಕೃತಿಯ ಹೀರೋಗಳು. ಹೀರೋಗಳು ಎಂಬ ಕಾರಣಕ್ಕೇನೆ ಕೊಲೆಯಾಗಿ ಜನ ಅದನ್ನು ತೀವ್ರವಾಗಿ ಹಚ್ಚಿಕೊಳ್ಳದಿದ್ದರೆ ಕ್ರಮೇಣ ಮಾನವ ದ್ವೇಷಿಗಳು ಸಾಮಾನ್ಯರನ್ನು ಸಹ ಕಾರಣವಿಲ್ಲದೆ ಕೊಲೆ ಮಾಡುವುದು ಸುಲಭವಾಗುತ್ತದೆ.

ಇದಕ್ಕೆ ಒಂದು ಉದಾಹರಣೆ ಎಂದರೆ ಎರಡು ವರ್ಷಗಳ ಕೆಳಗೆ, ನಿಖರವಾಗಿ ಹೇಳಬೇಕು ಎಂದರೆ 2017ರ ಜೂನ್ ತಿಂಗಳ 27ನೇ ತಾರೀಖಿನಂದು ರಾಜಧಾನಿ ನವದೆಹಲಿಯ ಹೊರವಲಯದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಾಗಿದ್ದ ಹದಿಹರೆಯದ ಮುಸ್ಲಿಂ ಯುವಕ ಹಾಫೀಸ್ ಜುನೈದ್ ಖಾನ್ ಎಂಬ ಮುಸ್ಲಿಂ ತರುಣನನ್ನು ಅವನಿಗೆ ಚೂರು ಪರಿಚಯವಿಲ್ಲದ ಅವನ ಸಹಪ್ರಯಾಣಿಕರು ಹಣ್ಣು ಕತ್ತರಿಸುವ ಸಾಮಾನ್ಯ ಚಾಕುವಿನಲ್ಲಿ ಇರಿದು ಇರಿದು ಕೊಂದರು. ಈ ಕೊಲೆಗೆ ಕಾರಣವಾದದ್ದು ಹಾಫೀಸ್ ಜುನೈದ್ ಧರಿಸಿದ ಟೊಪ್ಪಿಗೆ. ಅದು ಮುಸ್ಲಿಮರು ಮಾತ್ರ ಧರಿಸುವಂತಹ ನಮೂನೆಯ ಟೊಪ್ಪಿಗೆ ಆಗಿತ್ತು. ಜುನೈದ್ ಅದನ್ನು ಧರಿಸಿದ್ದೆ ಅವನು ಒಬ್ಬ ಮುಸ್ಲಿಂ ಎಂದು ಅವನ ಪ್ರಯಾಣಿಕರಿಗೆ ಗೊತ್ತಾಗಿ ಅವನು ಕೊಲೆಯಾದ. ಹಾಫೀಸ್ ಜುನೈದ್‍ಗೆ ತನ್ನ ಕೊಲೆಗಡುಕರಲ್ಲಿ ಯಾರ ಪರಿಚಯವೂ ಇರಲಿಲ್ಲ. ಹಾಫೀಸ್‍ನನ್ನು ಕೊಂದವರಿಗೆ ಸಹ ಅವನ ಪರಿಚಯವಿರಲಿಲ್ಲ. ಹಾಫೀಸ್‍ನನ್ನು ಕೊಲ್ಲುವ ಆ ಅಪರಾಧಿ ಕೃತ್ಯಕ್ಕೆ ಅವನು ಕೊಲೆಗಡುಕರ ಧರ್ಮಕ್ಕಿಂತ ಭಿನ್ನವಾದ ಇನ್ನೊಂದು ಧರ್ಮಕ್ಕೆ ಸೇರಿದವನು ಎಂಬ ಕಾರಣ ಬಿಟ್ಟರೆ ಬೇರೆ ಕಾರಣವೇ ಇರಲಿಲ್ಲ.

ತಮ್ಮ ಧರ್ಮ ಕೊಲೆಗಡುಕ ಎಂದು ಕರೆದರೆ ಬಹುಸಂಖ್ಯಾತ ಹಿಂದೂಗಳು ಈಗಲೂ ಬೆಚ್ಚಿಬೀಳುತ್ತಾರೆ. ಆದರೆ ಈ ವರ್ತಮಾನ ಕಾಲದಲ್ಲೂ ಹಿಡಿಯಷ್ಟು ಸಂಖ್ಯೆಯ ಹಿಂದುತ್ವವಾದಿಗಳು ಹಿಂದೂ ಧರ್ಮವನ್ನು ಒಂದು ಕೊಲೆಗಡುಕ ಶ್ರದ್ಧೆಯನ್ನಾಗಿ ಪರಿವರ್ತಿಸಲು ತಮ್ಮ ಸಂಘಟಿತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಿಂತ ದುರದೃಷ್ಟಕರವಾದ ಸಂಗತಿಯೆಂದರೆ ನಮ್ಮ ಸದ್ಯದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಮತ್ತು ಪ್ರಜೆಗಳ ಹಕ್ಕುಗಳ ಸಂವಿಧಾನದ ಚೌಕಟ್ಟನ್ನು ಬಳಸಿಕೊಂಡೆ ಅವರು ತಮ್ಮ ಸಂಘಟನೆಯ ಮತೀಯ ದ್ವೇಷದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಫೀಸ್ ಜುನೈದ್‍ನನ್ನು ಸಲೀಸಾಗಿ ಕೊಲ್ಲುವ ಸಮಾಜದಲ್ಲಿ ಅಷ್ಟೇ ಸುರಳೀತವಾಗಿ ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಅಂತವರನ್ನು ಕೊಲ್ಲಲಾಗುತ್ತದೆ. ಹಾಗಾಗಿ ಸಾಮಾನ್ಯರ ಕೊಲೆ ಬುದ್ಧಿಜೀವಿಗಳ ಕೊಲೆ ಎಂದು ಕೊಲೆಗಳನ್ನು ನಾವು ವಿಂಗಡಿಸುವುದು ಮತ್ತು ಬುದ್ಧಿಜೀವಿಗಳ ಕೊಲೆಯನ್ನು ಮಾತ್ರ ಮುಖ್ಯವಾಗಿ ಪರಿಗಣಿಸುವುದು ಸರಿಯಲ್ಲ. ನಮ್ಮ ಸೂಕ್ಷ್ಮಜ್ಞರು ಈ ಸತ್ಯಗಳನ್ನು ಇನ್ನಾದರೂ ಗಮನಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...