Homeಮುಖಪುಟಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ 'ಗೆಟ್ ಔಟ್'!

ಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ ‘ಗೆಟ್ ಔಟ್’!

2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ

- Advertisement -
- Advertisement -

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ. ಇದರ ಬಗ್ಗೆ ಅಲ್ಲಿ ತೀವ್ರವಾದ ಚರ್ಚೆಗಳಾಗುತ್ತಿವೆ. ಇದರಿಂದಾಗಿ ಈ ಚಿತ್ರ ಅಲ್ಲಿ ಎಬ್ಬಿಸಿರುವ ಕಂಪನಗಳ ಮಹತ್ವದ ಅರಿವಾಗುತ್ತದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ ಈ ಚಿತ್ರ ನೋಡಿದ ನಂತರ ಅಮೆರಿಕಾದ ಕರಿಯರು; ಹೀಗೆನ್ನುವ ಬದಲು ಅಮೆರಿಕಾದ ದಲಿತರು ಎನ್ನುವುದೇ ಹೆಚ್ಚು ಸೂಕ್ತ. ಇವರ ಮತ್ತು ಭಾರತದ ದಲಿತರ ಸಾಮಾಜಿಕ ಸ್ಥಿತಿಗತಿಗಳು ಒಂದೇ… ಇವರಿಬ್ಬರೂ ಸಮಾಜೋ –ರಾಜಕೀಯ ಸ್ಥಾನಮಾನಗಳಿಂದ ನಿಜವಾದ ಅರ್ಥದಲ್ಲಿ ವಂಚಿತರು ಎನಿಸುತ್ತದೆ.

ಇಂಥದ್ದೊಂದು ಥಿಯರಿಯನ್ನು ಹಾಲಿವುಡ್ ನಿರ್ದೇಶಕ ಜೋರ್ಡನ್ ಪಿಲೇ ಮುಂದಿಟ್ಟಿದ್ದಾರೆ ಎನಿಸುತ್ತದೆ. ಅವರ “ಗೆಟೌಟ್” ಸಿನೆಮಾ ಇಂಥದೊಂದು ಅಭಿಪ್ರಾಯವನ್ನು ಹುದುಗಿಸಿಕೊಂಡಿದೆ. ಇಂಥ ಥಿಯರಿ ಸುಮ್ಮನೆ ಮೂಡಿದ್ದಲ್ಲ. ಶತಶತಮಾನಗಳಿಂದಲೂ ಅಮೆರಿಕಾದಲ್ಲಿರುವ ಆಫ್ರಿಕನ್ –ಅಮೆರಿಕನ್ ಪ್ರಜೆಗಳು ತಾತ್ಸಾರ, ನಿಂದನೆ, ಅವಮಾನ, ಕಗ್ಗೊಲೆಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಅವರನ್ನು ಅವಮಾನಿಸುವ ಪ್ರಕರಣಗಳೂ ಇಂದಿಗೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೆಟೌಟ್ ಸಿನೆಮಾ ಮೂಡಿರುವಂತೆ ಕಾಣುತ್ತದೆ.

ಅಮೆರಿಕಾ ಸಿನೆ-ಟಿವಿರಂಗದಲ್ಲಿ ಜೋರ್ಡನ್ ಪಿಲೆಯದು ಖ್ಯಾತ ಹೆಸರು. ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಗೆಟೌಟ್ ಸಿನೆಮಾದ ವಿಶೇಷ ಸಂಗತಿಯೆಂದರೆ ನಿರ್ದೇಶಕರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ ಪಿಲೆ ಕೂಡ ಆಫ್ರಿಕನ್ ಅಮೆರಿಕನ್. ಇದು ಕೂಡ ಇಥದ್ದೊಂದು ಥಿಯರಿಗೆ ಮತ್ತಷ್ಟೂ ಬಲಕೊಟ್ಟಿದೆ.

ಅಮೆರಿಕಾದ ಕುಕೇಶಿಯನ್ (ಶ್ವೇತವರ್ಣಿಯರು) ಆಫ್ರಿಕಾದವರನ್ನು ಶತಶತಮಾನಗಳ ಕಾಲ ಗುಲಾಮರನ್ನಾಗಿ ನಡೆಸಿಕೊಂಡಿದೆ. ಇಂದು ಗುಲಾಮಗಿರಿ ಪದ್ಧತಿ ಅಳಿದಿದೆ. ಆದರೆ ಅದನ್ನು ಕುಕೇಶಿಯನ್ ಸಮಾಜ ಬೇರೊಂದು ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ ಎಂಬ ವಾದವನ್ನು ಜೋರ್ಡನ್ ಪಿಲೆ ನಮ್ಮ ಮುಂದಿಡುತ್ತಾರೆ.

ತಮ್ಮ ವಾದವನ್ನು ಕಥಾರೂಪಕ್ಕೆ ತಂದಿರುವ ಪಿಲೆ ಅದಕ್ಕೆ ಸಶಕ್ತ ಚಿತ್ರಕಥೆ ಸ್ವರೂಪ ನೀಡಿದ್ದಾರೆ. ಇದು ಎಷ್ಟು ಪರಿಪಕ್ವವಾಗಿದೆ ಎಂದರೆ ಎಲ್ಲಿಯೂ ಗೋಜಲು – ಗೊಂದಲವಿಲ್ಲ. ಸಂಭಾಷಣೆ ಕೂಡ ಅಷ್ಟೆ ಸ್ಪಷ್ಟತೆ-ನಿಖರತೆ ಹೊಂದಿದೆ. ಇದನ್ನು ಪಿಲೆ ಮತ್ತು ಅವರ ಸಂಗಡಿಗ ತಂತ್ರಜ್ಞರು ತೆರೆ ಮುಂದೆ ಕಾಣಿಸಿರುವ ರೀತಿ ಅನನ್ಯ.

“ಗೆಟೌಟ್” ಸಾಮಾಜಿಕ-ರಾಜಕೀಯ ಕಥನ. ಕೊಂಚ ಹಳಿ ತಪ್ಪಿದ್ದರೂ ಇದೊಂದು ನಿರ್ದೇಶಕನ ಹಳಹಳಿಕೆಯ ದುರ್ಬಲ ಡಾಕ್ಯುಮೆಂಟರಿಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜೋರ್ಡನ್ ಪಿಲೆಯ ಪರಿಶ‍್ರಮ ಅದಕ್ಕೆ ಅವಕಾಶ ನೀಡಿಲ್ಲ. ಈ ಕಾರಣದಿಂದ ಸಿನೆಮಾದ ಎಲ್ಲ ದೃಷ್ಟಿಕೋನಗಳಲ್ಲಿಯೂ ಇದು ಅತ್ಯುತ್ತಮ.

ಗೆಟೌಟ್ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಆಗರ್ಭ ಶ್ರೀಮಂತ ಕುಕೇಶಿಯನ್ ಮನೆತನದ ಯುವತಿ ರೋಸಿ ಆರ್ಮಿಟೆಜ್ ತನ್ನ ಆಫ್ರಿಕನ್ –ಅಮೆರಿನ್ ಬಾಯ್ ಫ್ರೆಂಡ್ ಕ್ರಿಸ್ ಜೊತೆ ತನ್ನ ಅರಮನೆಯಂಥ ಮನೆಗೆ ಅಡಿಯಿಡುತ್ತಾಳೆ. ಕಾಲಿಟ್ಟ ಗಳಿಗೆಯಿಂದಲೂ ಕ್ರಿಸ್ ಗೆ ನಾನಾರೀತಿಯ ಮಾನಸಿಕ ಯಾತನೆಗಳು ಶುರುವಾಗುತ್ತವೆ. ರೋಸಿ ಅಪ್ಪ ಡೀನ್ ಅರ್ಮಿಟೇಜ್ ನರರೋಗ ಶಾಸ್ತ್ರಜ್ಞ. ಅಮ್ಮ ಕ್ಯಾಥ್ರೆನ್ ಕೀನರ್ ಸಮ್ಮೋಹಿನಿ ತಜ್ಞೆ.

ಈ ಎರಡು ಪಾತ್ರಗಳು ಮಾಡುತ್ತಿರುವ ವೃತ್ತಿಗಳು ಕೂಡ ಸಾಂಕೇತಿಕ. ಡೀನ್ ಅರ್ಮಿಟೇಜ್ ತನ್ನ ಮನೆತನದ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ ಹೋಗುತ್ತಾನೆ. ಪ್ರತಿಹಂತದಲ್ಲಿಯೂ ಆ ಎಲ್ಲ ಮಾತುಗಳು ಆತ ಆಫ್ರಿಕನ್ –ಅಮೆರಿಕನ್ ಸಮುದಾಯ (ಕರಿಯರು) ದವರ ಬಗ್ಗೆ ಹೊಂದಿರುವ ಹೇವರಿಕೆಗಳನ್ನು ವ್ಯಕ್ತ ಮಾಡುತ್ತಲೇ ಹೋಗುತ್ತವೆ. ಈತನ ಹೆಂಡತಿ, ಮಗ ಕೂಡ ಇದೇ ಸ್ವಭಾವದವರು: ಚಿತ್ರದ ಕೊನೆಕೊನೆ ಹಂತ ನಮ್ಮನ್ನು ಮತ್ತೊಂದು ಮಹಾನ್ ಶಾಕ್ ಗೆ ದೂಡುತ್ತದೆ. ಅದನ್ನು ನಾನಿಲ್ಲಿ ವಿವರಿಸಲು ಹೋಗುವುದಿಲ್ಲ.

ಗೆಟ್ ಔಟ್ ಚಿತ್ರದ ದೃಶ್ಯ

ಡೀನ್ ಅರ್ಮಿಟೇಜ್ ತಾನು ಲಿಬರಲ್ ಧೋರಣೆಯುಳ್ಳವನು, ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯಲ್ಲಿ ಬರಾಕ್ ಒಬಾಮನನ್ನು ಬೆಂಬಲಿಸಿದೆ ಎನ್ನುತ್ತಾನೆ. ಮಾತುಗಳು ಪ್ರಗತಿಪರತೆಯ ಮುಖವಾಡ ಹೊಂದಿವೆ. ಆದರೆ ಆತನ ಅಂತರಂಗದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ.

ಡೀನ್ ಅರ್ಮಿಟೇಜ್ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆಫ್ರಿಕನ್ –ಅಮೆರಿಕನ್ ಸಮುದಾಯದವರು. ಇವರ ವರ್ತನೆ, ಹಾವಭಾವ-ಸ್ವಭಾವ ಎಲ್ಲವೂ ಕೃತಕ ಎಂದು ಕ್ರಿಸ್ ಗೆ ಮೇಲಿಂದ ಮೇಲೆ ಅನಿಸತೊಡಗುತ್ತದೆ. ಈ ದೊಡ್ಡಮನೆಯ ಪಾರ್ಟಿಗೆ ಬಂದ ಕುಕೇಶಿಯನ್ ಸಮುದಾಯದವರಿಗೂ ಕೂಡ ಆಫ್ರಿಕನ್ –ಅಮೆರಿಕನ್ ಸಮುದಾಯದ ಬಗ್ಗೆ ಹೇವರಿಕೆ ನೋಟ. ಅಲ್ಲೊಬ್ಬ ಕಪ್ಪುವರ್ಣೀಯ ಯುವಕನ ಜೊತೆ ಆತನಿಗಿಂತ ವಯಸಿನಲ್ಲಿ ಸಾಕಷ್ಟು ಹಿರಿಯಳಾದ ಮಹಿಳೆ ಸಾಂಗತ್ಯ ಹೊಂದಿರುತ್ತಾಳೆ. ಅದ್ಹೇಕೆ ಎಂದು ಚಿತ್ರ ತನ್ನದೇ ಧಾಟಿಯಲ್ಲಿ ವಿವರಿಸುತ್ತದೆ.

ತನ್ನ ಗ್ರಹಿಕೆಗಳೆಲ್ಲವನ್ನೂ ಕ್ರಿಶ್ ತನ್ನ ಪೊಲೀಸ್ ಗೆಳೆಯನ ಜೊತೆ ಪೋನಿನಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಅದು ಕೂಡ ಕೊನೆಯಲ್ಲಿ ಈತನ ನೆರವಿಗೆ ಬರುತ್ತದೆ. ಕ್ರಿಸ್ ಗೆ ಕುಕೇಶಿಯನ್ ರೋಸಿ ಮನೆತನದ ಎಲ್ಲರ  ಸ್ವಭಾವ ಆಷಾಢಭೂತಿತನದಿಂದ ಕೂಡಿದೆ, ಬೇಗನೆ ಇಲ್ಲಿಂದ ಪಾರಾಗಬೇಕು ಎಂದು ಮನದಟ್ಟಾಗುತ್ತದೆ. ಹೊರಡಲು ಅನುವಾಗುತ್ತಾನೆ. ಅಷ್ಟರಲ್ಲೆ ಆತನ ಕೊಲೆಯ ಪಿತೂರಿ ನಡೆಯುತ್ತದೆ. ಇದರಿಂದ ಕ್ರಿಸ್ ಹೇಗೆ ಪಾರಾದ ಎನ್ನುವುದನ್ನು ಸಿನೆಮಾ ನೋಡಿ ಅರಿಯುವುದೇ ಸೂಕ್ತ.

ಇಂದಿಗೂ ಅಮೆರಿಕಾದಲ್ಲಿ ಜನಾಂಗೀಯ ದ್ವೇಷ ನಿಂತಿಲ್ಲ. ಕುಕೇಶಿಯನ್ (ಶ್ವೇತವರ್ಣೀಯರು) ಆಫ್ರಿಕನ್ –ಅಮೆರಿಕನ್ಸ್ ವ್ಯಕ್ತಿಗಳನ್ನು ಕಗ್ಗೊಲೆ ಮಾಡಿದ ವರದಿಗಳು ಆಗಾಗ್ಗೆ ಬರುತ್ತಲೇ ಇವೆ. ಅಲ್ಲಿನ ಪೊಲೀಸ್ ಇಲಾಖೆಯ ಕುಕೇಶಿಯನ್ಸ್ ಗಳಲ್ಲಿಯೂ ಇಂಥ ಜನಾಂಗೀಯ ದ್ವೇಷವಿದೆ. ಕಪ್ಪುವರ್ಣೀಯರು, ಶ್ವೇತವರ್ಣೀಯ ಪೊಲೀಸ್ ಅಧಿಕಾರಿಗಳ ಗುಂಡೇಟಿಗೆ ವಿನಾಃಕಾರಣ ಬಲಿಯಾದ ಉದಾಹರಣೆಗಳು ಸಾಕಷ್ಟು.

ಇಂಥ ಉದಾಹರಣೆಗಳು ಕೂಡ “ಗೆಟೌಟ್” ಸಿನೆಮಾದ ಅಂತ್ಯ ಬದಲಾಗಲು ಕಾರಣವಾಗಿದೆ. ಈ ಮೊದಲು ಇದರ ಕ್ಲೈಮ್ಯಾಕ್ಸ್ ಬೇರೆಯದೇ ಆಗಿತ್ತು. ಯಾವಾಗ ಅಲ್ಲಿನ ಪೊಲೀಸರ ಎನ್ ಕೌಂಟರಿಗೆ ಕಪ್ಪುವರ್ಣೀಯರು ಬಲಿಯಾಗುವ ಪ್ರಕರಣಗಳು ಹೆಚ್ಚಾಯಿತೋ ಆಗ ನಿರ್ದೇಶಕ ಜೋರ್ಡನ್ ಪಿಲೆ ಮತ್ತು ತಂಡದವರು ಕ್ಲೈಮ್ಯಾಕ್ಸ್ ಗೆ ಬೇರೆಯದೇ ಸ್ವರೂಪ ನೀಡಲು ನಿರ್ಧರಿಸಿದರು.

ಕುಕೇಶಿಯನ್ ಸಮಾಜದಲ್ಲಿ ಮಡುಗಟ್ಟಿರುವ ಜನಾಂಗೀಯ ದ್ವೇಷ ಯಾವ ಆಯಾಮಗಳನ್ನು ತೆಗೆದುಕೊಂಡಿದೆ, ಅದು ಯಾವ ಸ್ವರೂಪದಲ್ಲಿ ಮುಂದುವರಿದಿದೆ ಎನ್ನುವುದನ್ನು ನಿರ್ದೇಶಕ ಜೋರ್ಡನ್ ಪಿಲೆ ಗ್ರಹಿಸಿ  ಮುಂದಿಟ್ಟಿರುವ ರೀತಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ.

ಜೋರ್ಡನ್ ಪಿಲೆ

ಈ ಸಿನೆಮಾಕ್ಕೆ ಟೊನಿ ಲಿವರ್ ಕ್ಯಾಮೆರಾ ಹಿಡಿದಿದ್ದಾರೆ. ಅದು ಚಿತ್ರಕಥೆಯ ಸಶಕ್ತತೆಯನ್ನು ಮತ್ತಷ್ಟೂ ಹೆಚ್ಚಿಸಿದೆ. ಮೈಕೆಲ್ ಅಬ್ಲಸ್ ನೀಡಿರುವ ಸಂಗೀತಕ್ಕೂ ಇದೇ ಮಾತು ಸಲ್ಲುತ್ತದೆ. 2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ.

ಅಭಿನಯದ ಬಗ್ಗೆ ಹೇಳುವುದಾದರೆ ಕ್ರಿಸ್ ಆಗಿರುವ ಡ್ಯಾನಿಯಲ್ ಅಭಿನಯ ಅನನ್ಯ. ಈತನ ಕಂಗಳೇ ಸಂಭಾಷಣೆಗಳನ್ನು ಹೇಳುತ್ತವೆ. ಕೆಲವೊಂದು ದೃಶ್ಯಗಳಲ್ಲಿ ಈತನ ಅಭಿನಯ ಅಬ್ಬಾ ಎಂಬ ಉದ್ಗಾರದೊಡನೆ ಮೆಚ್ಚುಗೆ ಪಡೆಯುತ್ತದೆ. ರೋಸ್ ಅರ್ಮಿಟೇಜ್ ಆಗಿರುವ ಆಲಿಸನ್ ವಿಲಿಯಮ್ಸ್, ಮಿಸ್ಸಿ ಅರ್ಮಿಟೇಜ್ ಆಗಿರುವ ಕ್ಯಾಥೆರಿನ್ ಕೀರ್ನರ್, ಡೀನ್ ಅರ್ಮಿಟೇಜ್ ಪಾತ್ರಧಾರಿ ಬ್ರಾಡ್ಲಿ, ಜಿಮ್ ಹಡ್ಸನ್ ಆಗಿ ಅಭಿನಯಿಸಿರುವ ಸ್ಟಿಫನ್ ರೂಟ್ ಅಭಿನಯ ಮನೋಜ್ಞ.

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...