Homeಮುಖಪುಟಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

ಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

- Advertisement -
- Advertisement -

ಒಂದು ಪ್ರಸಂಗ: ಅಂದು ಶನಿವಾರ. ಕಿರಣ್ ಮತ್ತು ಆರಿಫ್ ಇಬ್ಬರೂ ಅರ್ಧ ದಿನದ ಶಾಲೆ ಮುಗಿಸಿ, ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ, ಕಿರಣ್ ಆರಿಫ್‌ಗೆ ಹೀಗಂದ: ’ಲೇ, ಆರಿಫ್ ಏನೋ ಇಷ್ಟೊಂದ್ ಬಿಸಿಲಿದೆ ಇವತ್ತು. ಮೈಯಲ್ಲಾ ಚುರ್ ಚುರ್ ಅಂತಿದೆ’. ಅದಕ್ಕೆ ಆರಿಫ್, ’ಏ ಬೇಸಿಗೆ ಕಾಲದಲ್ಲಿ ಬಿಸಿಲು ಬರ್‌ದಿರಾ ಮಳೆನಾ ಬರತ್ತೆ’ ಅಂದಾ. ಕಿರಣ್: ’ಏ ಅದ್ ನನಗೂ ಗೊತ್ತೋ. ಬೇಸಿಗೆ ಕಾಲ ಇದು ಅಂತ. ಆದರೆ, ಅದೆಂಗೋ ಬೇಸಿಗೆ ಕಾಲದಲ್ಲಿ ಬಿಸ್ಲು, ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಬರತ್ತೆ? ನಂಗಂತೂ ಇದು ಅರ್ಥಾನೇ ಆಗಿಲ್ಲ. ಆರಿಫ್: ’ಏ ಬಿಡೋ, ನನಗೆ ಈ ವರ್ಷ ಕಾಲಗಳು ಅನ್ನೋ ಪಾಠ ಐತೆ. ಅದನ್ನ ಇನ್ನೂ ಮೇಷ್ಟ್ರು ಪಾಠ ಹೇಳಿಲ್ಲ. ಅವ್ರು ಪಾಠ ಮಾಡಿದ್ಮೇಲೆ ನಾನೇ ನಿನಗೆ ಹೇಳ್ತಿನಿ. ಆದ್ರೇ ಈ ಜೋಸೆಫ್ ಅವ್ನಲ್ಲಾ’. ಕಿರಣ್: ’ಯಾರೇಳು? ಅದೇ ಆ ಪಕ್ದೂರೋನ್ ಅಲ್ವಾ’. ಆರಿಫ್: ’ಹೌದೋ ಅವ್ನೇ, ಅವ್ನು ಒಂದ್ ಕಥೆ ಹೇಳ್ತಿದ್ದಾ.. ಭೂಮಿ ಸೂರ್ಯನ ಸುತ್ತ ಅಂಡಾಕಾರದಲ್ಲಿರುವ ಕಕ್ಷೆಯಲ್ಲಿ ಸುತ್ತುತ್ತಿರಬೇಕಾದ್ರೆ, ಸೂರ್ಯನಿಗೆ ಹತ್ತಿರ ಬಂದಾಗ ಬೇಸಿಗೆ ಕಾಲ, ದೂರ ಹೊದಾಗ ಮಳೆಗಾಲ ಅಂತ. ಅದೆ ಇರಬೇಕೆನೊ!’.

ಈ ಪ್ರಸಂಗದಲ್ಲಿ ಆರಿಫ್ ಹೇಳಿದ ಉತ್ತರ ನಿಮಗೆ ಸರಿ ಅನ್ನಿಸತ್ತಾ? ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ಭೂಮಿಗೆ ಶಾಖವು ಹೆಚ್ಚಿರುತ್ತದೆ ಹಾಗಾಗಿ ಬೇಸಿಗೆ ಕಾಲ ಬರುತ್ತದೆ ಎಂಬ ಈ ವಿವರಣೆ ಸರಿಯೇ? ಅಥವಾ ತಪ್ಪೇ? ನಿಮಗೂ ಕೂತಹಲ ಹೆಚ್ಚುತ್ತಿರಬೇಕಲ್ಲವಾ?

ನಮಗೆಲ್ಲರಿಗೂ ತಿಳಿದಿರುವಹಾಗೆ ಭೂಮಿ ಸೂರ್ಯನ ಸುತ್ತ ಗೋಳಾಕಾರದಲ್ಲಿ ಸುತ್ತುತ್ತಿದೆ. ಅಲ್ಲದೇ, ಆ ಗೋಳಾಕಾರಕ್ಕೆ ಎರಡು ಕೇಂದ್ರ ಬಿಂದು ಇದ್ದು, ಸೂರ್ಯನು ಒಂದು ಕೇಂದ್ರ ಬಿಂದುವಿನಲ್ಲಿದ್ದಾನೆ ಎಂಬುದು ತಿಳಿದಿದೆ. ಹಾಗಿದ್ದಾಗ, ಭೂಮಿಯು ಸೂರ್ಯನ ಸುತ್ತ ಸುತ್ತವಾಗ, ವರ್ಷದ ಕೆಲವು ತಿಂಗಳು ಸೂರ್ಯನಿಂದ ದೂರ ಮತ್ತು ಕೆಲವು ತಿಂಗಳು ಸೂರ್ಯನ ಹತ್ತಿರ ಬರುವುದು ಸಹಜ. ಆದರೆ, ಭೂಮಿಯು ಸೂರ್ಯನಿಂದ ದೂರವಿದ್ದಾಗಿನ ಅಂತರ ಮತ್ತು ಹತ್ತಿರವಿದ್ದಾಗಿನ ಅಂತರವನ್ನು ತೆಗೆದುಕೊಂಡು ಅದರ ವ್ಯತ್ಯಾಸ ನೋಡಿದರೆ, ಕೇವಲ ಶೇ.2ರಷ್ಟು ಮಾತ್ರ ಬದಲಾಗುತ್ತದೆ. ಅಂದರೆ, ಖಗೋಳ ವಿಜ್ಞಾನದ ಮಾಪನದಲ್ಲಿ ಶೇ.೨ರಷ್ಟು ವ್ಯತ್ಯಾಸ ಅತೀ ಕಡಿಮೆಯದ್ದು. ಇದು ಭೂಮಿಗೆ ಭೌತಿಕವಾಗಿ ಅಥವಾ ಭೂಮಿಯ ವಾತಾವರಣಕ್ಕೆ ಯಾವ ಬದಲಾವಣೆಯನ್ನು ತರುವುದಿಲ್ಲ. ಈ ಅಂತರವು ಭೂಮಿಯಲ್ಲಿ ಬೇಸಿಗೆ ಕಾಲ, ಚಳಿ ಕಾಲ ಮತ್ತು ಮಳೆ ಕಾಲ ಎಂಬ ಯಾವ ಋತು ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಹಾಗಾದರೆ, ಭೂಮಿಯ ಮೇಲೆ ಕಾಲಗಳು (seasons) ಹೇಗೆ ಉಂಟಾಗುತ್ತವೆ?

ಭೂಮಿಯ ಮೇಲೆ ವಿವಿಧ ಕಾಲಗಳು ಉಂಟಾಗಲು ಕಾರಣ ಭೂಮಿ ಸೂರ್ಯನಿಂದ ಹತ್ತಿರ ಮತ್ತು ದೂರ ಹೋಗುವುದರಿಂದಲ್ಲ ಬದಲಾಗಿ, ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಕಕ್ಷೆಯ ಲಂಭಕ್ಕೆ, ಭೂಮಿಯ ಅಕ್ಷವು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ ಮತ್ತು ಭೂಮಿ ಸೂರ್ಯನ ಸುತ್ತು ಸುತ್ತುತ್ತಿದ್ದರೂ ಈ ಕೋನವು ಒಂದೇ ದಿಕ್ಕನಲ್ಲಿ ಮುಖ ಮಾಡಿರುತ್ತದೆ. ಈ ಕೋನದಿಂಲೇ, ಭೂಮಿಯ ಮೇಲೆ ಕಾಲಗಳು (seasons) ಬದಲಾಗುವುದು.

ಮತ್ತೊಂದು ವಿಸ್ಮಯದ ವಿಚಾರವೇಂದರೆ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ ಇರುವಾಗ ಅಂದರೆ ನಮಗೆ ಬೇಸಿಗೆ ಕಾಲ ಇರುವಾಗ, ಭೂಮಿಯು ಸೂರ್ಯನಿಂದ ದೂರದಲ್ಲಿರುತ್ತಾನೆ! ಆದರೂ ನಮಗೆ ಬೇಸಿಗೆ ಕಾಲವಿರುತ್ತದೆ. ಏಕೆಂದರೆ, ಈ 23.5 ಡಿಗ್ರಿ ಕೋನವು ಆ ಸ್ಥಾನದಲ್ಲಿ ಸೂರ್ಯವಿರುವ ದಿಕ್ಕೆಗೆ ಬಾಗಿದ್ದು, ಉತ್ತರ ಗೋಳದಲ್ಲಿ ಸೂರ್ಯನ ಕಿರಣ ನೇರವಾಗಿ ಬೀಳುತ್ತಿರುತ್ತದೆ, ದಕ್ಷಿಣ ಗೋಳದಲ್ಲಿ ನೇರವಾಗಿ ಬೀಳದೆ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಬಾಗಿರುತ್ತದೆ. ಆದುದರಿಂದ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ, ದಕ್ಷಿಣ ಗೋಳದಲ್ಲಿ ಚಳಿಗಾಲ! ಹಾಗಾಗಿ, ಯಾವುದೇ ಸಂದರ್ಭದಲ್ಲಿ, ಭೂಮಿಯ 23.5 ಡಿಗ್ರಿ ಭಾಗುವಿಕೆಯ ಕಾರಣದಿಂದಾಗಿ, ಭೂಮಿಯ ಉತ್ತರ ಗೋಳದಲ್ಲಿ ಯಾವ ಕಾಲವಿರುವುದೋ, ದಕ್ಷಿಣ ಗೋಳದಲ್ಲಿ ಅದರ ವಿರುದ್ಧ ಕಾಲವಿರುತ್ತದೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...