Homeಕರ್ನಾಟಕನಾಳೆಯ ಸಭೆಯಲ್ಲಿ ಭೂ ಸ್ವಾಧೀನ ಕೈ ಬಿಡುವ ಬಗ್ಗೆ ತಿಳಿಸಿ, ಪರಿಹಾರ ಹಣದ ಮಾತು ಬೇಡ:...

ನಾಳೆಯ ಸಭೆಯಲ್ಲಿ ಭೂ ಸ್ವಾಧೀನ ಕೈ ಬಿಡುವ ಬಗ್ಗೆ ತಿಳಿಸಿ, ಪರಿಹಾರ ಹಣದ ಮಾತು ಬೇಡ: ನಟ ಪ್ರಕಾಶ್ ರಾಜ್

"ದೇವನಹಳ್ಳಿಯ ರೈತರಿಂದ 10 ದಿನಗಳ ಸಮಯ ಕೇಳಿ ಸಿಎಂ, ಸಚಿವರು ದಿಲ್ಲಿಗೆ ಹೋಗಿದ್ದು ಏಕೆ? ಡಿಫೆನ್ಸ್ ಕಾರಿಡಾರ್, ಏರೋ ಸ್ಪೇಸ್‌ಗೆ ಮನವಿ ಮಾಡಿದ್ದು ಏಕೆ? "

- Advertisement -
- Advertisement -

ದೇವನಹಳ್ಳಿ ರೈತರ ಭೂಸ್ವಾಧೀನ ಸಂಬಂಧ ನಾಳೆ ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ಭೂ ಸ್ವಾಧೀನ ಕೈ ಬಿಡುವ ಬಗ್ಗೆ ಮಾತ್ರ ಚರ್ಚೆ ನಡೆಯಬೇಕೇ ಹೊರತು, ಭೂಮಿ ಕೊಟ್ಟರೆ ಪರಿಹಾರ ಕೊಡುತ್ತೇವೆ ಎಂಬುವುದು ಅಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಎದ್ದೇಳು ಕರ್ನಾಟಕ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತರಿಂದ 10 ದಿನಗಳ ಸಮಯ ಕೇಳಿ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ದೆಹಲಿಗೆ ಹೋಗಿದ್ದಾರೆ. ಅಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಡಿಫೆನ್ಸ್ ಕಾರಿಡಾರ್ ಮತ್ತು ಏರೋ ಸ್ಪೇಸ್‌ಗೆ ಮನವಿ ಮಾಡಿದ್ದಾರೆ. ದೇವನಹಳ್ಳಿ ರೈತರ ಭೂಸ್ವಾಧೀನ ಕೈ ಬಿಡಲು ಕಾನೂನು ತೊಡಕಿದೆ ಎಂದು ನಮಗೆ ಹೇಳಿ, ನೀವು ದೆಹಲಿಗೆ ಹೋಗಿದ್ದು ಏಕೆ? ಎಂದು ಪ್ರಶ್ನಿಸಿದರು.

ದೇವನಹಳ್ಳಿಯ ರೈತರು ನಾವು ಭೂಮಿ ಕೊಡುವುದಿಲ್ಲ ಎಂದು ಮೂರುವರೆ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಇಷ್ಟು ಸಮಯ ಬೇಕಾಯಿತು. ಈಗ ಕಾನೂನಿನ ತೊಡಕಿದೆ ಎಂದು 15ನೇ ತಾರೀಖಿನವರೆಗೆ ಸಮಯ ಕೇಳಿದ್ದಾರೆ. ಈ ನಡುವೆ ನಾವು ಭೂಮಿ ಕೊಡುತ್ತೀವಿ ಎಂದು ದೀಢೀರ್ ಕಾಣಿಸಿಕೊಂಡ ಗುಂಪಿಗೆ ಭೇಟಿ ಮಾಡಲು ಅವಕಾಶ ಕೊಟ್ಟಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿ ಕೊಡುತ್ತೇವೆ ಎಂದು ದಿಢೀರ್ ಕಾಣಿಸಿಕೊಂಡ ಗುಂಪು ಎಕರೆಗೆ 3.5 ಕೋಟಿ ಕೇಳಿದೆ. ಸುತ್ತಮುತ್ತಲ ಉಳಿದ ಪ್ರದೇಶವನ್ನು ಹಳದಿ ವಲಯ ಮಾಡುವಂತೆ ಕೋರಿದೆ. ರೈತರು ಮೂರುವರೆ ಕೋಟಿ ಕೇಳಿದ್ದಾರೆ ಎಂದು ಎಂ.ಬಿ ಪಾಟೀಲರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಪಾಟೀಲರೇ ನೀವು ಮಾತನಾಡುತ್ತಿರುವುದು ನ್ಯಾಯನಾ? ಎಕರೆಗೆ ಮೂರುವರೆ ಕೋಟಿ ಕೊಡಲು ನೀವು ಯಾರು? ಅಷ್ಟೊಂದು ಹಣ ಎಲ್ಲಿಂದ ಕೊಡುತ್ತೀರಿ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.

ಎಂ.ಬಿ ಪಾಟೀಲರೇ ನಿಮ್ಮ ಸುಸ್ಥಿರ ಅಭಿವೃದ್ಧಿ ಏನು? ಪಕ್ಕದ ರಾಜ್ಯದಲ್ಲಿ 95 ಪೈಸೆಗೆ ಕಂಪನಿಗಳಿಗೆ ಜಮೀನು ಕೊಟ್ಟರು ಅಂತ ನೀವು ರೈತರಿಂದ ಮೂರುವರೆ ಕೋಟಿಗೆ ಜಮೀನು ತಗೊಂಡು ಅದನ್ನು ಕಂಪನಿಗಳಿಗೆ 75 ಪೈಸೆಗೆ ಕೊಡುತ್ತೀರಾ? ಮೂರುವರೆ ಕೋಟಿ ಯಾರಪ್ಪನ ದುಡ್ಡು? ನಿಮ್ಮ ಮನೆಯಿಂದ ತಂದಿದ್ದೀರಾ? ಅದು ನಮ್ಮಂತ ನಾಗರಿಕರ ತೆರಿಗೆ ಹಣ. ನೀವು ಗ್ಯಾರಂಟಿಗಳನ್ನು ಕೊಟ್ಟು ಅದಕ್ಕೆ ದುಡ್ಡಿಲ್ಲ ಎನ್ನುತ್ತೀರಿ, ಇಲ್ಲಿ ಸಾವಿರಾರು ಎಕರೆಗೆ ತಲಾ ಮೂರುವರೆ ಕೋಟಿ ಕೊಡುತ್ತೀವಿ ಎನ್ನುತ್ತೀರಿ. ಎಲ್ಲಿಂದ ದುಡ್ಡು ತರುತ್ತೀರಿ? ಎಂದು ಕೇಳಿದರು.

ರೈತರ ನಡುವೆ ನಾವು ಒಡಕು ಹುಟ್ಟಿಸಿಲ್ಲ ಎಂದು ಎಂ.ಬಿ ಪಾಟೀಲ್ ಹೇಳುತ್ತಿದ್ದಾರೆ. ಹಾಗಾದರೆ ಒಡಕು ಹುಟ್ಟಿಸಿದವರು ಯಾರು? ನೀವು ಒಡಕು ಮೂಡಿಸಲು 10 ದಿನಗಳ ಕಾಲವಕಾಶ ತೆಗೆದುಕೊಂಡಿದ್ದಾ? ಸಿಎಂ 10 ದಿನಗಳ ಸಮಯ ಕೇಳಿದ ಮೇಲೆ ಸಚಿವರೊಂದಿಗೆ ದೆಹಲಿಗೆ ಭೇಟಿ ನೀಡಿದ್ದಾರೆ. ದಲ್ಲಾಲಿಗಳ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಎಂ.ಬಿ ಪಾಟೀಲ್ ಕುಹದ ಮಾತುಗಳನ್ನು ಆಡುತ್ತಿದ್ದಾರೆ. ಹೋರಾಟಗಾರರ ಹಿಂದೆ ಯಾರಿದ್ದಾರೆ ಎಂಬುವುದು ನಮಗೆ ಗೊತ್ತಿದೆ ಎಂದಿದ್ದಾರೆ. ನಮ್ಮ ಹಿಂದೆ ಇರುವವರ ಪಟ್ಟಿಯನ್ನು ನಾವು ಕೊಡುತ್ತೇವೆ ಎಂದರು.

ದೇವನಹಳ್ಳಿ ರೈತರ ಹೋರಾಟಕ್ಕೆ ದೇಶದ ವಿವಿಧ ಭಾಗಗಳ 50 ರಷ್ಟು ಜನಪರ ಸಂಘಟನೆಗಳು, ಪ್ರಖ್ಯಾತ ಚಿಂತಕರು ಹಾಗೂ ಹೋರಾಟಗಾರರು ಬೆಂಬಲ ನೀಡಿದ್ದಾರೆ. ನಮ್ಮ ಹಿಂದೆ ಯಾರಿದ್ದಾರೆ ಎಂದು ನಾವು ಹೇಳಿದ್ದೇವೆ. ನಿಮ್ಮ ಹಿಂದೆ ಯಾರಿದ್ದಾರೆ ಅಂತ ನೀವು ಹೇಳಿ ಎಂದು ಹೇಳಿದರು.

ಎಂ.ಬಿ ಪಾಟೀಲರೆ ನೀವು ಕಥೆಗಳನ್ನು ಹೇಳುವುದನ್ನು ನಿಲ್ಲಿಸಿ. ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಭೂ ಸ್ವಾಧೀನ ಕೈ ಬಿಡಲು ಇರುವ ಕಾನೂನು ತೊಡಕುಗಳು ಏನು? ಅದಕ್ಕೆ ಪರಿಹಾರಗಳೇನು ಎಂದು ಹೇಳಬೇಕು. ಅದನ್ನು ಹೊರತು ಎಕರೆಗೆ ಇಷ್ಟು ಪರಿಹಾರ ಕೊಡುತ್ತೇವೆ ಎಂಬ ಮಾತುಗಳು ನಮಗೆ ಬೇಡ. ಮಣ್ಣು ಮಾರಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ ಎಂದರು.

ನಮಗೆ ಗೊತ್ತಿರುವ ಕಾನೂನಿನ ಪ್ರಕಾರ, ನಮ್ಮ ಸಂವಿಧಾನದ ಪ್ರಕಾರ ಭೂ ಸ್ವಾಧೀನ ಸಂಬಂಧ ಹೊರಡಿಸಿರುವ ಸರ್ಕಾರದ ಮೊದಲ ಅಧಿಸೂಚನೆಯೇ ತಪ್ಪು. ಹಸಿರು ವಲಯವನ್ನು ಕೈಗಾರಿಕಾ ಪ್ರದೇಶ ಮಾಡಲು ಕೈಗಾರಿಕಾ ನೀತಿಯಲ್ಲಿ ಅವಕಾಶ ಇಲ್ಲ. ಸಂವಿಧಾನದ ಪ್ರಕಾರ ಭೂಮಿಯನ್ನು ಕೈಗಾರಿಕಾ ಪ್ರದೇಶ ಎಂದು ಗುರುತಿಸದೆ ನೀವು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಅಧಿಸೂಚನೆಯೇ ಸರಿ ಇಲ್ಲ. ಅದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ತಿಳಿಸಿದರು.

ಸಂವಿಧಾನದ ಪ್ರಕಾರ ಒಂದು ಪ್ರದೇಶವನ್ನು ಹಳದಿ ವಲಯ ಎಂದು ಘೋಷಿಸಬೇಕಾದರೆ ಸ್ಥಳೀಯ ಸಂಸ್ಥೆಯ ನಾಲ್ಕನೇ ಒಂದು ಭಾಗದಷ್ಟು ಜನರು ನಮ್ಮ ಪ್ರದೇಶದಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಆ ಬಳಿಕ ಪರಿಸರ ಸಮೀಕ್ಷೆ ಮಾಡಬೇಕು. ಆ ಬಳಿಕ ನಿರ್ಧರಿಸಬೇಕು. ದೇವನಹಳ್ಳಿಯಲ್ಲಿ ಇದೆಲ್ಲಾ ಆಗಿದೆಯಾ? ನೀವು ಕಾನೂನಿನ ಕಥೆಗಳನ್ನು ಹೇಳುತ್ತಿರುವುದು ಯಾರಿಗೆ? ಹಸಿರು ವಲಯವನ್ನು ತೆಗೆದು ಹಾಕುತ್ತೀವಿ ಎನ್ನುತ್ತೀರಿ. ನೀವೇನು ರೈತರನ್ನು ಹೆದರಿಸುತ್ತಿದ್ದೀರಾ? ಎಂದು ಕಿಡಿಕಾರಿದರು.

ಎಂ.ಬಿ ಪಾಟೀಲರು ನಾವು ಬಿಜಾಪುರವನ್ನು ಸಂಪತ್ಬರಿತ ನಾಡು ಮಾಡಿದ್ದೇನೆ ಎನ್ನುತ್ತಿದ್ದಾರೆ. ಬಿಜಾಪುರದಲ್ಲೂ ರೈತರ ಹೋರಾಟ ನಡೆಯುತ್ತಿದೆ. ಹಾಗಾಗಿ, ಯಾವುದೋ ಊರಿನ ಕಥೆ ಹೇಳಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಕುತಂತ್ರಗಳನ್ನು ನಿಲ್ಲಿಸಿ. ನೀವು ನಿಮ್ಮ ಸರ್ಕಾರ ಹೋರಾಟಗಾರರಿಗೆ ಕಾನೂನು ತೊಡಕಿದೆ ಎಂದು ಹೇಳಿದ್ದೀರಿ. ನಾಳೆ ಅದರ ಮಾತುಕತೆ ಮಾತ್ರ ನಡೆಯಬೇಕು, ಹೊರತು ಪರಿಹಾರದ ಮಾತುಕಥೆಯಲ್ಲ ಎಂದರು.

ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಈ ಕ್ಷಣವೇ ಭೂ ಸ್ವಾಧೀನ ಕೈ ಬಿಡಬಹುದು. ಆದರೆ, ಸಿದ್ದರಾಮಯ್ಯ ಸರ್ಕಾರಕ್ಕೆ ರೈತ ಹಿತ ಕಾಯುವ ಇಚ್ಚಾಶಕ್ತಿ ಇದೆಯಾ? ಅಥವಾ ಕಾರ್ಪೋರೇಟ್ ಹಿತಾಸಕ್ತಿ ಇದೆಯಾ? ಇದು ಗೊತ್ತಾಗಬೇಕಿದೆ. ರೈತ ಹಿತ ಕಾಯುವ ಇಚ್ಚಾಶಕ್ತಿ ಇದ್ದರೆ ಕಾನೂನಿನಡಿ ಸರ್ಕಾರಕ್ಕೆ ಎಲ್ಲಾ ಅಧಿಕಾರವೂ ಇದೆ. ಹಾಗಾಗಿ, ಸರ್ಕಾರದ ನಿಲುವು ನಾಳೆ ಗೊತ್ತಾಗಲಿದೆ ಎಂದರು.

ಕಳೆದ ಮೂರು ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳ ಒಬ್ಬನೇ ಒಬ್ಬ ಜನಪ್ರತಿನಿಧಿ ರೈತರನ್ನು ಬೆಂಬಲಿಸಿಲ್ಲ. ಇದು ಈ ರಾಜ್ಯದ ದೌರ್ಭಾಗ್ಯ. ನಮ್ಮ ಹೋರಾಟ ನಿಲ್ಲಲ್ಲ, ಕಾನೂನು ಹೋರಾಟವೂ ನಡೆಯಲಿದೆ. ರೈತರ ಭೂ ಕಬಳಿಸುವ ಸರ್ಕಾರಗಳ ಕ್ರಮ ದೇವನಹಳ್ಳಿಯಲ್ಲೇ ಕೊನೆಯಾಗಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.

ಎದ್ದೇಳು ಕರ್ನಾಟಕದ ಕೆ.ಎಲ್‌ ಅಶೋಕ್ ಅವರು ಮಾತನಾಡಿ, ” ದೇವನಹಳ್ಳಿಯ ರೈತರು ಕಳೆದ ಮೂರುವರೆ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ನಾಳೆಯ ಮುಖ್ಯಮಂತ್ರಿಗಳ ನಿರ್ಣಾಯಕ ಸಭೆಯಲ್ಲಿ ರೈತಪರ ನಿಲುವು ಪ್ರಕಟಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ದೇವನಹಳ್ಳಿಯ ಹೋರಾಟ ಇಡೀ ದೇಶದ ರೈತ ಹೋರಾಟಕ್ಕೆ ಹೊಸತೊಂದು ದಿಕ್ಕನ್ನು ತೋರಿಸಿದೆ ಎಂದರು.

ಮಾನವ ಹಕ್ಕುಗಳ ಕಾರ್ಯಕರ್ತೆ ಹಾಗೂ ಎದ್ದೇಳು ಕರ್ನಾಟಕದ ಪ್ರಮುಖರಾದ ತಾರಾರಾವ್, ಬೋರಯ್ಯ ಚಿತ್ರದುರ್ಗ, ರೈತ ನಾಯಕ ವೀರಸಂಗಯ್ಯ, ದಲಿತ ಮುಖಂಡರಾದ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ದೇವನಹಳ್ಳಿ: “ರೈತರಿಗೆ ಭೂಮಿ ಕೇವಲ ಆಸ್ತಿಯಲ್ಲ, ಗುರುತು!” – ರೈತ ಹೋರಾಟಕ್ಕೆ ದೇಶದ 30 ಸಂಘಟನೆಗಳ ಬೆಂಬಲ ಘೋಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...