Homeಕರ್ನಾಟಕಮೌಢ್ಯದ ವಕ್ತಾರರಾದ ವಿಜ್ಞಾನಿ, ಕೋಮುವಾದ ಅಪ್ಪಿಕೊಂಡ ಸಾಹಿತಿ, ವಿದ್ಯಾರ್ಥಿಸ್ನೇಹಿಯಾದ ರಾಜಕಾರಣಿ... ಯಾರು ಗೊತ್ತೆ?

ಮೌಢ್ಯದ ವಕ್ತಾರರಾದ ವಿಜ್ಞಾನಿ, ಕೋಮುವಾದ ಅಪ್ಪಿಕೊಂಡ ಸಾಹಿತಿ, ವಿದ್ಯಾರ್ಥಿಸ್ನೇಹಿಯಾದ ರಾಜಕಾರಣಿ… ಯಾರು ಗೊತ್ತೆ?

- Advertisement -
- Advertisement -

ಈ ವಾರ ಸಂಭವಿಸಿದ ಮೂವರು ಗಣ್ಯರ ವಿಶೇಷ ನಡೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲಿ ಒಂದು ವೈರುಧ್ಯವಿದೆ. ಸಾಮಾನ್ಯವಾಗಿ, ಅದರಲ್ಲು ಬಿರುಸಿನ ರಾಜಕೀಯ ಚಟುವಟಿಕೆ ನಡೆದಿರುವ ಹೊತ್ತಿನಲ್ಲಿ ರಾಜಕಾರಣ ಬದಿಗಿಟ್ಟು ವಿದ್ಯಾರ್ಥಿಗಳ ಜೊತೆ ರಾಜಕಾರಣಿ ನಿಂತರೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಯತ್ನಿಸಬೇಕಾದ ವಿಜ್ಞಾನಿ ಮೂಢನಂಬಿಕೆಯನ್ನು ವೈಭವಿಕರಿಸಿದರು. ಇತ್ತೀಚಿಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಹೆಸರು ಉಲ್ಲೇಖಿಸಲ್ಪಟ್ಟಿರುವ ವಿದ್ಯಾರ್ಥಿ ಸಂಘಟನೆಯನ್ನು ಪ್ರಮೋಟ್ ಮಾಡಲು ‘ಪ್ರಗತಿಪರ’ ಸಾಹಿತಿ ಹೊರಟರು… ಇದನ್ನು ವಿವರಿಸುವ ಮೂರು ತುಣುಕುಗಳಲ್ಲಿ ಇವೆ:.

1. ದೇವಸ್ಥಾನದೊಳ್ ಚಂದ್ರಯಾನ್: ಇಸ್ರೋ ಮುಖ್ಯಸ್ಥರ ಟೆಂಪಲ್‍ರನ್!
ಅಯ್ಯ ತನ್ನ ತಾನರಿಯಬೇಕಲ್ಲದೇ,
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ
ಕೇಳಲುಂಟೇ ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಎನಗೆ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿವೆನು
-ಅಕ್ಕಮಹಾದೇವಿ

ಇಸ್ರೋ ಮುಖ್ಯಸ್ಥರು ವಿದ್ಯಾದೀಶತೀರ್ಥ ಸ್ವಾಮಿಯವರ ಮುಂದೆ ಕುಳಿತ ಚಿತ್ರ ನೋಡಿದಾಗ ಅಕ್ಕನ ಈ ವಚನ ನೆನಪಾಗಿತು.. ‘ಅನ್ಯರ’ ಮುಂದೆ ತಲೆಬಾಗಿ ಅವರು ತಮ್ಮ ಅರಿವಿಗಷ್ಟೇ ಅಲ್ಲ, ಇಸ್ರೋದ ‘ಅರಿವು’, ಅದರ ಸಾಧನೆ-ಶ್ರೇಯಸ್ಸುಗಳಿಗೇ ಕಳಂಕ ತಂದಿದ್ದಾರೆ.
ಜುಲೈ 15ರಂದು ಇಸ್ರೋದ ಬಹು ಮಹತ್ತರ ‘ಚಂದ್ರಯಾನ-2’ ಆರಂಭಗೊಳ್ಳಲಿದ್ದು, ಅದರ ಯಶಸ್ಸಿಗಾಗಿ ಇಸ್ರೊ ಮುಖ್ಯಸ್ಥ ಶಿವನ್ ಅವರು ಜುಲೈ 7ರಂದು ದೇವಸ್ಥಾನಗಳನ್ನು ಸುತ್ತಿ ದೇವರ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಇಂಥದ್ದನ್ನು ನಮ್ಮ ರಾಜಕಾರಣಿಗಳು ಮಾಡಿದಾಗ ಟೆಂಪಲ್ ರನ್ ಎನ್ನುವ ಮಾಧ್ಯಮಗಳು ಇದಕ್ಕೆ ಮಾತ್ರ ಚಕಾರ ಎತ್ತಿಲ್ಲ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಅವರು ವಿದ್ಯಾದೀಶತೀರ್ಥ ಸ್ವಾಮಿಯವರ ಮುಂದೆ ನಮ್ರತೆಯಿಂದ ತಲೆಬಾಗಿ ಚಂದ್ರಯಾನ ಯಶಸ್ವಿಗೆ ಆಶೀರ್ವಾದ ಪಡೆಯುವ ಮೂಲಕ ತಮ್ಮ ಘನ ಹುದ್ದೆಗೆ ಅವಮಾನ ಮಾಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಮಠಕ್ಕೂ ಭೇಟಿ ನೀಡಿ ಚಂದ್ರಯಾನ ಯಶಸ್ಸಿಗೆ ಪೂಜೆ ಸಲ್ಲಿಸಿದ್ದಾರೆ.

ಸಾವಿರಾರು ವಿಜ್ಞಾನಿಗಳು ಮತ್ತು ಇಂಜಿನಿಯರ್‍ ಗಳ ಅವಿರತ ಶ್ರವನ್ನು ಶಿವನ್ ಅವಮಾನಿಸಿದ್ದಾರೆ. ಈ ಹಿಂದೆಯೂ ಹಲವು ಇಸ್ರೋ ಅಧ್ಯಕ್ಷರು ಉಪಗ್ರಹಗಳ ಪ್ರತಿಕೃತಿಗಳನ್ನು ತಿರುಪತಿ ತಿಮ್ಮಪ್ಪನ ಮುಂದೆ ಇಟ್ಟು ಪೂಜೆ ಮಾಡಿಸಿ ಇಂತಹ ಮೂರ್ಖತನ ಮೆರದಿದ್ದರು. ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಇಂತಹ ನಡೆ ತಪ್ಪು ಸಂದೇಶಗಳನ್ನು ರವಾನೆ ಮಡುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಇಂಹ ವಿಜ್ಞಾನಿಗಳು ಮೂಢನಂಬಿಕೆಗಳ ವಕ್ತಾರರಂತೆ ವರ್ತಿಸುವುದು ಅಕ್ಷಮ್ಯ.

ರಾಜಸ್ಥಾನದಲ್ಲಿ ವೈದ್ಯ ಸಂಘದ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಮಹಿಳೆಯರು ಕುಳಿತಿದ್ದಕ್ಕೆ ಕೋಪಗೊಂಡ ಸ್ವಾಮೀಜಿಯೊಬ್ಬ ಕಾರ್ಯಕ್ರಮ ಬಹಿಷ್ಕರಿಸಿ ನಡೆದಿದ್ದಾನೆ. ಆತನ ಸ್ತ್ರೀದ್ವೇಷಿ ಗುಣ ಗೊತ್ತಿದ್ದರೂ ಆತನ್ನು ಕಾರ್ಯಕ್ರಮಕ್ಕೆ ವೈದ್ಯರು ಕರೆಯುತ್ತಾರೆಂದರೆ?

2. ‘ಕಾಡುಕುದುರೆ’ಗಳ ಸಂಗದಲ್ಲಿ ಕಂಬಾರರು!
ಸೃಜನಶೀಲ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ಸ್ಥಾನ ಗಳಿಸಿರುವ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು ಎಬಿವಿಪಿಯ ಸದಸ್ಯತ್ವ ಪಡೆದು, ಆ ಸಂಘಟನೆಯ ಸದಸ್ಯತ್ವ ಅಭಿಯಾನದ ಬ್ರ್ಯಾಂಡ್ ಅಂಬಾಸೆಡರ್ ಆಗಿದ್ದಾರೆ. ಕಂಬಾರ ಬ್ರಾಹ್ಮಣಶಾಹಿಯ ಆರಾಧಕರಲ್ಲ ನಿಜ. ಆದರೆ ಅಧಿಕಾರ, ಸ್ಥಾನಮಾನಕ್ಕಾಗಿ ಏನನ್ನು ಮಾಡಬಲ್ಲರು ಎಂಬುದು ಪದೇಪದೇ ಸಾಬೀತಾಗಿದೆ. ಅವರು ಮೊದಲ ಸಲ ಕನ್ನಡ ವಿವಿಯ ಕುಲಪತಿಯಾಗುವಾಗ ಅಂದಿನ ಮುಖ್ಯಮಂತ್ರಿ ಬಂಗಾರಪ್ಪರ ಎದುರು ತಳ ಸಮುದಾಯದ ಸಾಹಿತಿಯಾಗಿ (ಕನ್ನಡ ವಿವಿಯ ಕುಲಪತಿಯಾಗುವ ಎಲ್ಲ ಅರ್ಹತೆಗಳು ಅವರಿದ್ದರೂ), ಅಲ್ಲಿ ಎರಡನೇ ಅವಧಿಗೆ ವಿಸ್ತರಣೇ ಮಾಡಿಕೊಳ್ಳುವಾಗ ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲರ ಎದುರು ಸಮಾಜವಾದಿ ಸಾಹಿತಿಯಾಗಿ ತಮ್ಮನ್ನು ಪ್ರಸ್ತುತಪಡಿಸಿಕೊಂಡಿದ್ದರು.

 

ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮತ್ತು ಇಲ್ಲೂ ಅದೇ ಸರ್ಕಾರ ಬರಬಹುದಾದ್ದರಿಂದ ಆ ಪಕ್ಷದ ವಿದ್ಯಾರ್ಥಿ ಸಂಘಟನೆ ವಕ್ತಾರರಾಗುವ ಮೂಲಕ ಸಾಹಿತ್ಯಾಸಕ್ತರಲ್ಲಿ ಅಸಹ್ಯ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಹೆಸರು ತಗಲು ಹಾಕಿಸಿಕೊಂಡಿರುವ, ಕೋಮುವಾದಿ ಸಿದ್ದಾಂತಗಳ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗುವ ಮೂಲಕ ಅವರು ಯಾವ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೋ?

3. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾದ ರಾಜಕಾರಣಿ
ಸಮಾಜಕ್ಕೆ ಆದರ್ಶವಾಗಬೇಕಿದ್ದ ವಿಜ್ಞಾನಿ ಮತ್ತು ಸಾಹಿತಿ ತಪ್ಪು ನಡೆಗಳನ್ನು ಇಟ್ಟ ಈ ಸಂದರ್ಭದಲ್ಲಿ ರಾಜಧಾನಿಯ ಮಹತ್ವದ ರಾಜಕೀಯ ಚಟುವಟಿಕೆಗಳನ್ನು ಬದಿಗೆ ಸರಿಸಿ, ವಿದ್ಯಾರ್ಥಿಗಳೊಂದಿಗೆ ಒಂದು ದಿನವನ್ನು ಕಳೆಯುವ ಮೂಲಕ ಎಚ್.ಕೆ. ಪಾಟೀಲರು ಆದರ್ಶದ ನಡೆ ಇಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ವಿ.ವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ಬ್ಯಾಚಿನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದೇ ಬೆಂಗಳೂರಿನಿಂದ ಗದಗಿಗೆ ಬಂದು ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ, ಗ್ರಾಮೀಣ ಭಾರತದ ಅಭಿವೃದ್ಧಿ ಅಗತ್ಯತೆಯ ಕುರಿತು ಮಾತಾಡಿದ್ದಾರೆ, ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರೆಲ್ಲೂ ರಾಜಕಾರಣದ ವಿಷಯ ಪ್ರಸ್ತಾಪಿಸದೇ ಘನತೆ ಮೆರೆದಿದ್ದಾರೆ.

ಇವತ್ತು ರಾಜಕಾರಣಿಗಳೆಲ್ಲ ಪಕ್ಷ ರಾಜಕಾರಣದಲ್ಲಿ ಮುಳುಗಿರುವ ‘ಅಧಿಕಾರದ ಅಮಲಿನ’ ಸಂದರ್ಭದಲ್ಲಿ ಎಚ್. ಕೆ. ಪಾಟೀಲ ವಿದ್ಯಾರ್ಥಿಗಳ ಜೊತೆ ಇದ್ದುದು ಆದರ್ಶಪ್ರಾಯವಾದರೆ, ಶಿವನ್ ಮತ್ತು ಕಂಬಾರ ಮಾತ್ರ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಸಣ್ಣವರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...