Homeಕರ್ನಾಟಕಬದುಕು ಸಂಸ್ಥೆಯಿಂದ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್: ಅರ್ಜಿ ಕರೆ

ಬದುಕು ಸಂಸ್ಥೆಯಿಂದ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್: ಅರ್ಜಿ ಕರೆ

ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಂಚಿನಲ್ಲಿರುವವರು ಈ ಕ್ಷೇತ್ರಗಳಲ್ಲಿ ಇರಬೇಕೆಂಬುದು ಬದುಕು ಸಂಸ್ಥೆಯ ಉದ್ದೇಶ: ಮುರಳಿ ಮೋಹನ್‌ ಕಾಟಿ

- Advertisement -
- Advertisement -

ಬದುಕು ಸೆಂಟರ್‌ ಫಾರ್‌ ಲೈವ್ಲಿಹುಡ್ಸ್‌ ಲರ್ನಿಂಗ್ ಸಂಸ್ಥೆಯಿಂದ ಸಂವಹನ ಮತ್ತು ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ‘ಕ್ರಿಯಾಶೀಲ ಮಾಧ್ಯಮ’ ಹೆಸರಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.

ವರದಿಗಾರಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜೊತೆಗೆ ಕಿರುತೆರೆ-ಹಿರಿತೆರೆಗಳಿವೆ ಸೃಜನಶೀಲ ಸ್ಕ್ರಿಪ್ಟ್‌ ಬರವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್‌ (ಪ್ರಿಂಟ್‌ ವೆಬ್‌) ಬಗ್ಗೆ ಅನುಭವಿ ತಂತ್ರಜ್ಞರಿಂದ ತರಗತಿ, ಮೊಬೈಲ್ ಜರ್ನಲಿಸಂ, ವೆಬ್‌ಸೈಟ್‌, ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್‌, ಆನ್‌‌ಲೈನ್‌ ಜರ್ನಲಿಸಂನ ಆಧುನಿಕ ತಂತ್ರಜ್ಞಾನ ಕೌಶಲಗಳ ತರಬೇತಿ, ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ಬರವಣಿಗೆ ಮುಂತಾದ ಕೌಶಲಗಳ ಕುರಿತು ಬೆಳಕು ಚೆಲ್ಲಲಾಗುವುದು, ಮಾಧ್ಯಮ ಸಂಸ್ಥೆಗಳು ಮತ್ತು ಮನೋರಂಜನ ಕ್ಷೇತ್ರದಲ್ಲಿ ಇಂಟರ್‌ಶಿಪ್‌, ಉದ್ಯೋಗವಕಾಶ ಕಲ್ಪಿಸಲಾಗುವುದು ಬದುಕು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪತ್ರಿಕೆ, ಸುದ್ದಿವಾಹಿನಿ, ಮನರಂಜನಾ ವಾಹಿನಿ, ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಈ ಕೋರ್ಸ್ ನಡೆಸಲಾಗುತ್ತಿದೆ. ಹೀಗಾಗಲೇ ಯುವತಿಯರ ಪ್ರವೇಶಾತಿ ನಡೆದಿರುವುದರಿಂದ ಕೆಲವೇ ಕೆಲವು ಯುವತಿಯರಿಗೆ ಮಾತ್ರ ಸೀಟುಗಳು ಲಭ್ಯವಿದೆ. ಅಭ್ಯರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ಅನುಗುಣವಾಗಿ ತರಬೇತಿ ಶುಲ್ಕ, ಸೂಕ್ತ ಅಭ್ಯರ್ಥಿಗಳಿಗೆ ವಿಶೇಷ ಸ್ಕಾಲರ್‌ಶಿಪ್, ಫೆಲೋಶಿಪ್‌ಗಳಿಗೆ ಅವಕಾಶವಿದೆ. ಅಗತ್ಯವಿರುವವರಿಗೆ ಉಚಿತ ವಸತಿ ಸೌಕರ್ಯ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಇಂಗ್ಲಿಷ್‌ ಕಲಿಕೆ-ಬಳಕೆಯೊಂದಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಲಿದೆ. ಗೂಗಲ್‌ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಲು https://forms.gle/NmSpEjkQFpiY998ZA ಲಿಂಕ್‌‌ ಬಳಸಬಹುದು. ಸ್ವವಿವರ ಹಾಗೂ ಅರ್ಜಿಯನ್ನು [email protected]ಗೆ ಇಮೇಲ್‌ ಮಾಡಬಹುದು. ಕಚೇರಿ ವಿಳಾಸ: ಬದುಕು- ಎ ಸೆಂಟರ್‌ ಫಾರ್‌ ಲಿವ್ಲಿಹುಡ್ಸ್‌‌ ಲರ್ನಿಂಗ್ಸ್‌ #136/7, 2ನೇ ಅಡ್ಡರಸ್ತೆ, ಎಲಿಫ್ಯಾಂಟ್‌ ರಸ್ತೆ, ಸೌತ್‌ ಎಂಡ್‌ ಸರ್ಕಲ್, ಲೈಬ್ರರಿ ಹಿಂಭಾಗ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು- 560011. ಹೆಚ್ಚಿನ ವಿವರಗಳಿಗೆ 9916376954, 9945065060, 99720 89471 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್‌ 15 ಕೊನೆಯದಿನವಾಗಿದೆ ಎಂದು ತಿಳಿಸಿದೆ.

‘ನಾನುಗೌರಿ.ಕಾಮ್‌’ನೊಂದಿಗೆ ಮಾತನಾಡಿದ ಬದುಕು ಸಂಸ್ಥೆಯ ಪ್ರೋಗ್ರಾಮ್‌ ಕನ್ವಿನರ್‌ ಮುರಳಿ ಮೋಹನ್‌ ಕಾಟಿ, “ಸಮಾಜದಲ್ಲಿ ಪರಿಣಾಮ ಬೀರುವಂತಹ ಕೋರ್ಸ್‌‌ಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಸ್ಥಿತಿ ಇಲ್ಲವಾಗಿದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಂಚಿನಲ್ಲಿರುವವರು ಈ ಕ್ಷೇತ್ರಗಳಲ್ಲಿ ಇಲ್ಲ. ಅವರು ಕೂಡ ಈ ಕ್ಷೇತ್ರಗಳಲ್ಲಿ ಕಾಲಿಟ್ಟರೆ ಪರಿಣಾಮ ಬೇರೆಯದ್ದೇ ಆಗಿರುತ್ತದೆ ಎಂಬುದು ಬದುಕು ಸಂಸ್ಥೆಯ ಉದ್ದೇಶವಾಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಬದುಕು ಸಂಸ್ಥೆಯು ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ಪತ್ರಿಕೋದ್ಯಮ, ಆಪ್ತಸಮಾಲೋಚನೆ, ವೃತ್ತಿಪರ ಮಾರ್ಗದರ್ಶನ, ತ್ಯಾಜ್ಯ ನಿರ್ವಹಣೆ, ಸುಸ್ಥಿರ ಕೃಷಿ, ಫಿಲ್ಮ್‌ ಮೇಕಿಂಗ್, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಪ್ರತಿವರ್ಷ ಪ್ರತಿ ಕೋರ್ಸ್‌ಗೆ ಇಪ್ಪತ್ತು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತೇವೆ. ಕೃಷಿ ಸಂಬಂಧಿತ ಕೋರ್ಸ್ ತರಗತಿಗೆ ಸೀಮಿತವಾಗಿರುವುದಿಲ್ಲ. ತರಗತಿ ಕಲಿಕೆ ತುಂಬಾ ಕಡಿಮೆ ಇರುತ್ತದೆ. ರೈತರ ಹೊಲಗಳೇ ಕಲಿಕಾ ಕೇಂದ್ರಗಳಾಗಿರುತ್ತವೆ. ಯಶಸ್ವಿಯಾಗಿ ಸುಸ್ಥಿರ ಕೃಷಿ ಮಾಡುತ್ತಿರುವವರಲ್ಲಿಗೆ ಹೋಗಿ ಕಲಿಯಲಾಗುತ್ತದೆ. ಉಳಿದ ತರಗತಿಗಳು ತರಗತಿಯಲ್ಲಿ ನಡೆಯುತ್ತವೆ. ಊಟ, ವಸತಿ ಉಚಿತವಾಗಿ ನೀಡುತ್ತೇವೆ. ಕೋರ್ಸ್ ಶುಲ್ಕವು ಕೂಡ ಕಡಿಮೆ ಇರುತ್ತದೆ. ಅದರಲ್ಲೂ ತುಂಬಾ ಆರ್ಥಿಕವಾಗಿ ಹಿಂದುಳಿದ ಶೇ. 25 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡುತ್ತೇವೆ” ಎಂದರು.

“ನಾಲ್ಕು ತರಗತಿ ಕೊಠಡಿಗಳಿರುವ ತರಬೇತಿ ಕೇಂದ್ರ ಕಟ್ಟಿದ್ದೇವೆ. ಸ್ಥಳಾವಕಾಶದ ಕೊರತೆಯಿಂದಾಗಿ ಮೊದಲೆಲ್ಲ ಒಂದು ಕೋರ್ಸ್ ಮುಗಿದ ಬಳಿಕ ಮತ್ತೊಂದು ಕೋರ್ಸ್ ನಡೆಸುತ್ತಿದ್ದೆವು. ಈಗ ನಾಲ್ಕು ಕೋರ್ಸ್ ಒಟ್ಟಿಗೆ ನಡೆಯಲಿವೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿರಿ: ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್‌; ಆರೋಪಗಳಿಗೆ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...