Homeಮುಖಪುಟಎಲ್ಐಸಿ ಶೇರು ಮಾರಾಟಕ್ಕೆ ಸಿದ್ದತೆ : ಆತಂಕಗೊಂಡ ಪಾಲಿಸಿದಾರರು...

ಎಲ್ಐಸಿ ಶೇರು ಮಾರಾಟಕ್ಕೆ ಸಿದ್ದತೆ : ಆತಂಕಗೊಂಡ ಪಾಲಿಸಿದಾರರು…

ಜೀವ ವಿಮಾ ಸಂಸ್ಥೆಯಲ್ಲಿ 30 ಕೋಟಿ ಮಂದಿ ಪಾಲಿಸಿದಾರರು ತಮ್ಮ ಹಣವನ್ನು ತೊಡಗಿಸಿದ್ದಾರೆ. ಎಲ್ಐಸಿ ಸಂಸ್ಥೆ ಮೇಲೆ ಜನರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಇದು ಸಾಕ್ಷಿಯಾಗಿದೆ.

- Advertisement -
- Advertisement -

ಭಾರತೀಯ ಜೀವ ವಿಮಾನ ನಿಗಮದಿಂದ ತನ್ನ ಶೇರುಗಳನ್ನು ಮಾರಾಟ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಸ್ಪರ್ಧಾತ್ಮಕ ಯುಗದಲ್ಲೂ ಅತ್ಯಂತ ಬಲಿಷ್ಟ ಸಂಸ್ಥೆಯಾದ ಜೀವ ವಿಮಾ ನಿಗಮವನ್ನು ಖಾಸಗಿಯವರ ಕೈಗೊಪ್ಪಿಸಿ ಎಳ್ಳುನೀರು ಬಿಡಲು ಸರ್ಕಾರ ಹೊರಟಿದೆ. ಖಾಸಗಿ ವಿಮಾ ಕಂಪನಿಗಳ ಜೊತೆ ಸಮರ್ಥ ಪೈಪೋಟಿ ನೀಡಿ ಲಾಭದಲ್ಲಿರುವ ಸಂಸ್ಥೆಯನ್ನು ಏಕಾಏಕಿ ಖಾಸಗಿಯವರ ಕೈಗೆ ಒಪ್ಪಿಸಿದರೆ ಮುಂದಿನ ಪರಿಣಾಮ ಏನಾಗಬಹುದೆಂಬುದನ್ನು ಕೇಂದ್ರ ಊಹಿಸಿದಂತೆ ಕಾಣುತ್ತಿಲ್ಲ.

ಸೆಪ್ಟೆಂಬರ್ 1, 1956ರಲ್ಲಿ 231 ಖಾಸಗಿ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಭಾರತೀಯ ಜೀವ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಅಂದು ಈ ಖಾಸಗಿ ವಿಮಾ ಕಂಪನಿಗಳು ಸಾರ್ವಜನಿಕರಿಗೆ ಮೋಸ ಮಾಡುವುದರಲ್ಲಿ ತೊಡಗಿದ್ದವು. ಸಾಕಷ್ಟು ಜನರ ಹಣಕ್ಕೆ ಯಾವುದೇ ಭದ್ರತೆ ಇರಲಿಲ್ಲ. ಇದನ್ನು ಮನಗಂಡ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಖಾಸಗಿ ಕಂಪನಿಗಳನ್ನು ಒಂದುಗೂಡಿಸಿದ್ದರು. ಹೀಗಾಗಿ ಪಾಲಿಸಿದಾರರು ನಿಟ್ಟುಸಿರು ಬಿಟ್ಟರು. ಪಾಲಿಸಿದಾರರ ಹಣಕ್ಕೆ ಭದ್ರತೆ ಸಿಕ್ಕಿತ್ತು.

ಐದು ಕೋಟಿ ರೂಪಾಯಿಗಳಿಂದ ಆರಂಭವಾದ ಭಾರತೀಯ ಜೀವ ವಿಮಾ ನಿಗಮ ಇಂದು ದೇಶಾದ್ಯಂತ ವಿಸ್ತರಿಸಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿದೆ. 8 ವಲಯಗಳು, 114 ವಿಭಾಗಗಳು ಮತ್ತು 2100 ಶಾಖೆ ಗಳನ್ನುಹೊಂದಿರುವ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯಲ್ಲಿ ಅಧಿಕಾರಿಗಳು, ನೌಕರರು ಸೇರಿ 2 ಲಕ್ಷ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 12 ಲಕ್ಷ ಮಂದಿ ಏಜೆಂಟರು ಇಡೀ ದೇಶಾದ್ಯಂತ ಹರಡಿ ಹೋಗಿದ್ದಾರೆ.. ಇವರನ್ನು ನಂಬಿ 14 ಲಕ್ಷ ಕುಟುಂಬಗಳ ಸುಮಾರು ಒಂದು ಕೋಟಿ ಜನರು ಜೀವನ ನಿರ್ವಹಣೆಗೆ ಸಂಸ್ಥೆ ಅನುಕೂಲ ಕಲ್ಪಿಸಿದೆ.

ಜೀವ ವಿಮಾ ಸಂಸ್ಥೆಯಲ್ಲಿ 30 ಕೋಟಿ ಮಂದಿ ಪಾಲಿಸಿದಾರರು ತಮ್ಮ ಹಣವನ್ನು ತೊಡಗಿಸಿದ್ದಾರೆ. ಎಲ್ಐಸಿ ಸಂಸ್ಥೆ ಮೇಲೆ ಜನರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಇದು ಸಾಕ್ಷಿಯಾಗಿದೆ. ಭಾರತೀಯ ಜೀವ ವಿಮಾ ನಿಗಮವನ್ನು ಸರಿಗಟ್ಟಬಲ್ಲ ಖಾಸಗಿ ಸಂಸ್ಥೆಯೊಂದು ಇದುವರೆಗೂ ಹುಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಹಲವು ಖಾಸಗಿ ವಿಮಾ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಿಸುತ್ತಿದ್ದರೂ ಸರ್ಕಾರಿ ವಿಮಾ ಸಂಸ್ಥೆಯಷ್ಟು ನಂಬಿಕೆ ಉಳಿಸಿಕೊಂಡಿಲ್ಲ. ಸಾಮಾನ್ಯ ಬಡ ರೈತ, ಹೂವಿನ ವ್ಯಾಪಾರಿಯಿಂದ ಹಿಡಿದು ನೌಕರರು, ಅಧಿಕಾರಿಗಳು ಶ್ರೀಮಂತರೂ ಕೂಡ ಎಲ್ಐಸಿ ಪಾಲಿಸಿದಾರರಾಗಿದ್ದಾರೆ. ಇದು ಸಾರ್ವಜನಿಕ ಸಂಸ್ಥೆಯ ಹೆಗ್ಗಳಿಕೆ.

ಇಂತಹ ಹೆಗ್ಗಳಿಕೆ, ಜನರ ವಿಶ್ವಾಸ, ನಂಬಿಕೆ ಮತ್ತು ಪ್ರೀತಿಗೆ ಪಾತ್ರವಾಗಿರುವ ಭಾರತೀಯ ಜೀವ ವಿಮಾ ನಿಗಮದ ಕತ್ತು ಹಿಸುಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ಲಾಭದಲ್ಲಿರುವ ಸಾರ್ವಜನಿಕ ಸಂಸ್ಥೆಯೊಂದರ ಶೇರುಗಳನ್ನು ಖಾಸಗಿ ಕಂಪನಿಯರಿಗೆ ಕೊಳ್ಳೆ ಕೊಡಲು ಕೇಂದ್ರ ಮನಸ್ಸು ಮಾಡಿದ್ದು ಜನರ ನಂಬಿಕೆಗೆ ಭಾರೀ ಪೆಟ್ಟು ನೀಡಲು ಸಿದ್ದತೆ ಮಾಡಿಕೊಂಡಿದೆ. ಇದು ಸಮರ್ಥನೀಯವಾದ ಕಾರ್ಯವಲ್ಲ. ಇಂತಹ ಕೆಲಸಕ್ಕೆ ಕೈಹಾಕುವ ಮೊದಲು ಸರ್ಕಾರ ಹತ್ತು ಬಾರಿ ಆಲೋಚಿಸಬೇಕು. ಇಲ್ಲಿದಿದ್ದರೆ ಜನರು ಸರ್ಕಾರಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಈ ಎಚ್ಚರಿಕೆ ಪ್ರತಿಯೊಂದು ಸರ್ಕಾರಕ್ಕೂ ಇರಬೇಕು.

ಒಂದೊಮ್ಮೆ ಖಾಸಗೀಕರಣಗೊಳಿಸಿದರೆ ಸರ್ಕಾರಿ ಸ್ವಾಮ್ಯದ ಎಲ್ಐಸಿಯ ಭಾರತದ ಸ್ವಭಾವವು ವಿನಾಶಕಾರಿ ಬದಲಾವಣೆಗೆ ಬರಲಿದೆ ಎಂದು ಭಾವಿಸಲಾಗಿದೆ, ಇದು ಕೋಟಿಗಟ್ಟಲೆ ಪಾಲಿಸಿದಾರರು ಮತ್ತು ಒಟ್ಟಾರೆ ದೇಶದ ಮೇಲೆ ಪರಿಣಾಮ ಬೀರುತ್ತದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕುರುಡಾಗಿ ಉಳಿಸಲು ಭಾರತದ ಸಾಮಾನ್ಯ ಜನರು ಎಲ್‌ಐಸಿಗೆ ನೀಡಿರುವ ನಂಬಿಕೆ ಬಿರುಕು ಬಿಡುತ್ತದೆ. ನಿರ್ಣಾಯಕ ಆರ್ಥಿಕ ಸಂದರ್ಭಗಳಲ್ಲಿ ಎಲ್ಐಸಿಗೆ ರಾಷ್ಟ್ರದ ಸಂರಕ್ಷಕನಾಗಿ ಬರಲು ಸಾಧ್ಯವಾಗುವುದಿಲ್ಲ ಮತ್ತು ಮೇಲಾಗಿ ಸರ್ಕಾರಕ್ಕೆ ಭಾರಿ ಪ್ರಮಾಣದ ಲಾಭಾಂಶವನ್ನು ನೀಡಲಾಗುತ್ತದೆ ಎಂದು ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ನಂಜುಂಡಸ್ವಾಮಿ ಹೇಳುತ್ತಾರೆ.

ಎಲ್‌ಐಸಿಯ ಅಡಿಪಾಯ ಎಷ್ಟು ಪ್ರಬಲವಾಗಿದೆ. ವಿಮಾ ವಲಯವನ್ನು ತೆರೆದ 20 ವರ್ಷಗಳ ನಂತರವೂ ಎಲ್‌ಐಸಿ 70 ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಮಾರುಕಟ್ಟೆಯ ನಾಯಕರಾಗಿ ಉಳಿದಿದೆ ಮತ್ತು ಇತರ 23 ಜೀವ ವಿಮಾ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿದೆ. ಈ ಹಣಕಾಸು ವರ್ಷದ ಎಲ್‌ಐಸಿ 6ರಷ್ಟು ಮಾರುಕಟ್ಟೆ ಪಾಲನ್ನು ಮರಳಿ ಪಡೆದಿದೆ ಮತ್ತು ಕೈಗಾರಿಕಾ ಬೆಳವಣಿಗೆಗಿಂತ ಎಲ್‌ಐಸಿ ಬೆಳವಣಿಗೆ ಹೆಚ್ಚಾಗಿದೆ. ಎಲ್ಐಸಿ ಕಳೆದ 15 ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಲಾಭದ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಲೇ ಬರುತ್ತಿದೆ.

ಆದಿತ್ಯ ಬಿರ್ಲಾ ಸನ್ ಲೈಪ್, ಎಚ್.ಡಿ.ಎಫ್.ಸಿ, ಐಸಿಐಸಿಐ ಪ್ರುಡೆನ್ಸಿಯಲ್ ಲೈಪ್, ಮ್ಯಾಕ್ಸ್ ಲೈಪ್, ಎಸ್.ಬಿ.ಐ ಲೈಪ್, ಶ್ರೀರಾಮ್ ಲೈಪ್ ಐಡಿಬಿಐ ಫೆಡರಲ್ ಲೈಪ್ ಹೀಗೆ 24 ಖಾಸಗಿ ವಿಮಾ ಕಂಪನಿಗಳು ಮಾರುಕಟ್ಟೆಯಲ್ಲಿದ್ದರೂ ಎಲ್.ಐ.ಸಿ ಸಂಸ್ಥೆಯ ಎತ್ತರಕ್ಕೆ ಯಾರೂ ಬೆಳೆಯಲಾಗಿಲ್ಲ. ಜನರ ನಂಬಿಕೆ, ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ ಎಲ್.ಐ.ಸಿಯ 1 ಲಕ್ಷ ಕೋಟಿ ಶೇರುಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ ಎಂದು ತಿಳಿದುಬಂದಿದೆ. ಸರ್ಕಾರ ಎಲ್ಐಸಿ ಶೇರುಗಳನ್ನು ಮಾರಾಟಕ್ಕಿಟ್ಟರೆ ಪಾಲಿಸಿದಾರರ ಹಣಕ್ಕೆ ಯಾವುದೇ ಭದ್ರತೆ ಇರುವುದಿಲ್ಲ.

ಈಗಾಗಲೇ ಬಿಎಸ್ಎನ್ಎಲ್ ಟೈಟಾನಿಕ್ ನಂತೆ ಮುಳುಗುತ್ತಿದೆ. ಹಾಗೆಯೇ ಎಲ್ಐಸಿಯನ್ನು ಖಾಸಗೀಕರಣಗೊಳಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ಬಾಗಿಲು ಮುಚ್ಚಿಕೊಳ್ಳಲಿದೆ. ಎಲ್.ಐ.ಸಿ ಶೇರುಗಳ ಮಾರಾಟದ ಮಾಹಿತಿ ಪಾಲಿಸಿದಾರರಲ್ಲಿ ದುಗುಡವನ್ನು ತಂದೊಡ್ಡಿದೆ. ನಮ್ಮ ಹಣ ಬರುತ್ತದೋ ಇಲ್ಲವೇ ಎಂಬ ಅತಂಕ ಪಾಲಿಸಿದಾರರಲ್ಲಿ ಮನೆ ಮಾಡಿದೆ. ಇದೇ ಕಾರಣಕ್ಕೆ ಏಜೆಂಟರನ್ನು ಕಂಡು ಹಣವನ್ನು ಹಿಂತೆಗೆದುಕೊಳ್ಳುವ ಕುರಿತು ಮಾತನಾಡುತ್ತಿದ್ದಾರೆ. ಈಗ ಪಾಲಿಸಿದಾರರ ಪಾಡು ಹೇಳತೀರದಾಗಿದೆ. ಯಾವುದೇ ಕಾರಣಕ್ಕು ಎಲ್ಐಸಿಯನ್ನು ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನೆಗಳು ತೀವ್ರಗೊಳುತ್ತಿವೆ. ಬಜೆಟ್ ನಲ್ಲಿ ಪ್ರಸ್ತಾಪವಾದ ಈ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. LICಯ ಖಾಸಗೀಕರಣ ಅನ್ಯಾಯದ ಪರಮಾವಧಿ. ಜನಸಾಮಾನ್ಯರ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕ ಹಕ್ಕೂ ಇಲ್ಲ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...