Homeಮುಖಪುಟಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

ಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

- Advertisement -
- Advertisement -

ಆರ್‌ಎಸ್‌ಎಸ್‌ನ ಹಲವು ವಿಚಾರಗಳು ಎಡಪಂಥೀಯದಂತಿವೆ. ಹಿಂದುತ್ವವು ಎಡವೂ ಅಲ್ಲ, ಬಲವೂ ಅಲ್ಲ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮುಖಂಡ ರಾಮ್‌ ಮಹದೇವ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಮಾತನಾಡಿರುವ ಅವರು, ಭೌಗೋಳಿಕ, ಧಾರ್ಮಿಕ ಮತ್ತು ರಾಜಕೀಯ ವಿಭಜನೆಯಾದ ಎಡ-ಬಲ, ಪೂರ್ವ-ಪಶ್ಚಿಮಗಳು ಮಸುಕಾಗಿವೆ, ಕರಗಿಹೋಗಿವೆ ಎಂದು ತಿಳಿಸಿದ್ದಾರೆ.

“ಇದುವರೆಗೆ ಜಗತ್ತು ಎಡಕ್ಕೆ ನಡೆದಿದೆ ಅಥವಾ ಬಲವಂತವಾಗಿ ಎಡಕ್ಕೆ ಹೋಗಿದೆ. ಈಗಿನ ಪರಿಸ್ಥಿತಿಯಲ್ಲಿ ಜಗತ್ತು ಬಲಕ್ಕೆ ಚಲಿಸುತ್ತಿರುವುದರಿಂದ ಅದು ಕೇಂದ್ರದಲ್ಲಿದೆ. ಹಿಂದುತ್ವ ಎಂದರೆ ಎಡವೂ ಅಲ್ಲ, ಬಲವೂ ಅಲ್ಲ” ಎಂದು ಹೇಳಿರುವ ಹೊಸಬಾಳೆ, “ಮಾನವತಾವಾದವು ಹಿಂದುತ್ವದ ಅವಿಭಾಜ್ಯ ಅಂಗ” ಎಂದು ಪ್ರತಿಪಾದಿಸಿದ್ದಾರೆ.

“ನಾನು ಆರ್‌ಎಸ್‌ಎಸ್‌ನಿಂದ ಬಂದವನು. ಸಂಘದ ತರಬೇತಿ ಶಿಬಿರಗಳಲ್ಲಿ ನಮ್ಮ ಬೋಧನೆಯಲ್ಲಿ ನಾವು ಎಂದಿಗೂ ಬಲಪಂಥೀಯರು ಎಂದು ಹೇಳಿಲ್ಲ. ನಮ್ಮ ಅನೇಕ ವಿಚಾರಗಳು ಎಡಪಂಥೀಯ ವಿಚಾರಗಳಂತೆ ಮತ್ತು ಅನೇಕವು ಖಂಡಿತವಾಗಿಯೂ ಬಲಪಂಥೀಯ ವಿಚಾರಗಳಂತೆ ಇವೆ” ಎಂದಿದ್ದಾರೆ.

ಹೀಗಾಗಿ ಬಲ-ಎಡ, ಪೂರ್ವ ಪಶ್ಚಿಮ ಎಂಬ ಭೌಗೋಳಿಕ, ಧಾರ್ಮಿಕ ರಾಜಕೀಯ ವಿಭಾಗೀಕರಣ ಆಗಿದೆ. ಆ ಎಲ್ಲ ವಿಷಯಗಳು ಮಸುಕಾಗಿವೆ, ಮಂಕಾಗಿವೆ ಮತ್ತು ಕರಗಿದೆ ಎಂದು ನಾನು ಭಾವಿಸುತ್ತೇನೆ. ಇಂದು ಜಗತ್ತು ಪರಸ್ಪರರ ಆಲೋಚನೆಗಳನ್ನು ಸ್ವೀಕರಿಸುತ್ತಿದೆ, ಹೊಸ ಮನುಷ್ಯ ಹೊರಹೊಮ್ಮುತ್ತಿದ್ದಾನೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಪ್ರಚಾರಕ್‌ ಹಾಗೂ ಭಾರತೀಯ ಜನ ಸಂಘದ ಅಧ್ಯಕ್ಷರಾಗಿದ್ದ ದೀನ್‌ದಯಾಳ್‌ ಉಪಾಧ್ಯಾಯ ಅವರು, ಪ್ರಾಚೀನ ಭಾರತದ ವಿಚಾರಗಳನ್ನು ಆಧುನಿಕ ಪರಿಭಾಷೆಗೆ ತಂದು ನವಪೀಳಿಗೆ ಹೇಗೆ ಆಚರಿಸಬೇಕೆಂದು ತಿಳಿಸಲು ಯತ್ನಿಸಿದ್ದಾರೆ ಎಂದು ಹೊಸಬಾಳೆ ವಿವರಿಸಿದ್ದಾರೆ.

ಭಾರತದ ವಿಚಾರಗಳಿಗೆ ಹಾಗೂ ಸಂಪ್ರದಾಯಕ್ಕೆ ಪೂರ್ಣ ವಿರಾಮ ಎಂಬುದಿಲ್ಲ. ಪೂರ್ವ- ಪಶ್ಚಿಮ, ಎಡ- ಬಲಗಳೆಲ್ಲವೂ ಪ್ರಸ್ತುತ ರಾಜಕೀಯ ಡಿಸ್‌ಕೋರ್ಸ್ ಹಾಗೂ ಭೌಗೋಳಿಕ ರಾಜಕೀಯ ಎಂದು ಹೇಳಲು ಬಯಸುತ್ತೇನೆ. ಪ್ರಸ್ತುತ ಎಂದರೆ ಎರಡನೇ ಮಹಾಯುದ್ಧ ನಂತರದ ಹಾಗೂ ಜಾಗತೀಕರಣ ಕಾಲವಾಗಿದೆ” ಎಂದು ವಿವರಿಸಿದ್ದಾರೆ.

“ಪಶ್ಚಿಮವು ಸಂಪೂರ್ಣವಾಗಿ ಪೂರ್ವವಲ್ಲ, ಪೂರ್ವವು ಸಂಪೂರ್ಣವಾಗಿ ಪೂರ್ವವಲ್ಲ. ಎಡವು ಸಂಪೂರ್ಣವಾಗಿ ಎಡವಲ್ಲ ಅಥವಾ ಬಲವು ಸಂಪೂರ್ಣವಾಗಿ ಬಲವಲ್ಲ” ಎಂದು ಹೊಸಬಾಳೆ ಅವರು ಒತ್ತಿ ಹೇಳಿದ್ದಾರೆ.

ದೀನದಯಾಳ್ ಉಪಾಧ್ಯಾಯ ಅವರು ಹಿಂದುತ್ವ ಮಾದರಿ ಎಂಬ ಪದವನ್ನು ಬಳಸಿಲ್ಲ, ಆದರೆ ಸಮಗ್ರ ಮಾನವತಾವಾದಿ ತತ್ವಶಾಸ್ತ್ರ ಎಂದು ಬಳಸಿದ್ದಾರೆ ಎಂದು ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಕಾನೂನಿನ ಭಾರತೀಕರಣ ಕುರಿತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ  ಎನ್‌.ವಿ.ರಮಣ ಅವರು ಹೇಳಿದ್ದಾರೆಂದು ಉಲ್ಲೇಖಿಸಿರುವ ಹೊಸಬಾಳೆ, “ಸಾಮಾನ್ಯವಾಗಿ ನಮ್ಮ ನ್ಯಾಯ ವಿತರಣೆಯು ಸಾಮಾನ್ಯ ಜನರಿಗೆ ಅನೇಕ ಅಡೆತಡೆಗಳನ್ನು ಉಂಟುಮಾಡುತ್ತಿದೆ. ನ್ಯಾಯಾಲಯದ ಕೆಲಸ ಮತ್ತು ಶೈಲಿಯು ಭಾರತದ ಸಂಕೀರ್ಣತೆಗಳಿಗೆ ಸರಿಹೊಂದುವುದಿಲ್ಲ. ವಸಾಹತುಶಾಹಿ ಮೂಲದ ಕಾನೂನುಗಳು, ಭಾರತೀಯ ಜನಸಂಖ್ಯೆಯ ಅಗತ್ಯಗಳಿಗೆ ಸೂಕ್ತವಾಗಿರುವುದಿಲ್ಲ. ನಮ್ಮ ಕಾನೂನು ವ್ಯವಸ್ಥೆಯ ಭಾರತೀಕರಣ ಇಂದಿನ ಅಗತ್ಯವಾಗಿದೆ” ಎಂದಿದ್ದಾರೆ.


ಇದನ್ನೂ ಓದಿರಿ: ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯದ ವಿರೋಧಿ, ಅದು ಮನುಸ್ಮೃತಿಯನ್ನು ನಂಬುತ್ತದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೊಸಬಾಲೆಯವರ RSS ಬಗೆಗಿನ ವ್ಯಾಖ್ಯಾನ, ಅಚ್ಚರಿದಾಯಕವಾದರೂ ಸ್ವಾಗತರ್ಹವಾಗಿದೆ.
    ಭಾರತ ಮತ್ತು ಅಲ್ಪಸಂಖ್ಯಾತರ ಬಗ್ಗೆ, ಶ್ರೀ ಮೋಹನ್ ಭಾಗವತ್ ಅವರ ವಿಚಾರಗಳು, ಹೆಗಡೆವರ್ ಮತ್ತು ಇತರೆ ಆರ್ಎಸ್ಎಸ್ ನ ಹಿರಿಯರ ಪರಿಕಲ್ಪನೆಗಿಂತ ಹೆಚ್ಚು ವಾಸ್ತವಿಕ ಮತ್ತು ಇಂದಿನ ಪರಿಸ್ಥಿತಿಗೆ ಅನುಗುಣವಾಗಿದೆ.
    ತಮ್ಮ ವಿಚಾರಧಾರೆ ಹಾಗು ವಾಸ್ತವಂಶಗಳನ್ನು ಸಂಘದ ಎಲ್ಲಾ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಅನಿವಾರ್ಯವಾಗಿರುವ ತರಬೇತಿ ಶಿಬಿರಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಬೇಕು.
    ಅನಿವಾರ್ಯವಾದರೆ ರಾಜಕೀಯ ಸಂಘಟನೆಯಾದ BJP ಯಿಂದ ಸ್ವಲ್ಪ ಮಟ್ಟದ ಅಂತರವನ್ನು ಕಾಯ್ದು ಕೊಳ್ಳುವತ್ತಾಲೂ ಯೋಚಿಸಬೇಕು.
    ವಿಚಾರಧಾರೆ ಹಾಗು ಅದರ ಅಳವಡಿಕೆ ಮುಖ್ಯವೇ ಹೊರತು ರಾಜಕೀಯ ಅಧಿಕಾರವಲ್ಲ.
    ಈ ನಿಟ್ಟಿನಲ್ಲಿ ಯೋಚಿಸಲಿಕ್ಕದರೂ ಪ್ರಾರಂಭಿಸೋಣ

    ??

    Jai Hind

    Innie

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...