Homeಮುಖಪುಟಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

ಆರ್‌‌ಎಸ್‌‌ಎಸ್‌ನ ಅನೇಕ ವಿಚಾರಗಳು ಎಡಪಂಥೀಯದಂತಿವೆ: ದತ್ತಾತ್ರೇಯ ಹೊಸಬಾಳೆ

- Advertisement -
- Advertisement -

ಆರ್‌ಎಸ್‌ಎಸ್‌ನ ಹಲವು ವಿಚಾರಗಳು ಎಡಪಂಥೀಯದಂತಿವೆ. ಹಿಂದುತ್ವವು ಎಡವೂ ಅಲ್ಲ, ಬಲವೂ ಅಲ್ಲ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮುಖಂಡ ರಾಮ್‌ ಮಹದೇವ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಮಾತನಾಡಿರುವ ಅವರು, ಭೌಗೋಳಿಕ, ಧಾರ್ಮಿಕ ಮತ್ತು ರಾಜಕೀಯ ವಿಭಜನೆಯಾದ ಎಡ-ಬಲ, ಪೂರ್ವ-ಪಶ್ಚಿಮಗಳು ಮಸುಕಾಗಿವೆ, ಕರಗಿಹೋಗಿವೆ ಎಂದು ತಿಳಿಸಿದ್ದಾರೆ.

“ಇದುವರೆಗೆ ಜಗತ್ತು ಎಡಕ್ಕೆ ನಡೆದಿದೆ ಅಥವಾ ಬಲವಂತವಾಗಿ ಎಡಕ್ಕೆ ಹೋಗಿದೆ. ಈಗಿನ ಪರಿಸ್ಥಿತಿಯಲ್ಲಿ ಜಗತ್ತು ಬಲಕ್ಕೆ ಚಲಿಸುತ್ತಿರುವುದರಿಂದ ಅದು ಕೇಂದ್ರದಲ್ಲಿದೆ. ಹಿಂದುತ್ವ ಎಂದರೆ ಎಡವೂ ಅಲ್ಲ, ಬಲವೂ ಅಲ್ಲ” ಎಂದು ಹೇಳಿರುವ ಹೊಸಬಾಳೆ, “ಮಾನವತಾವಾದವು ಹಿಂದುತ್ವದ ಅವಿಭಾಜ್ಯ ಅಂಗ” ಎಂದು ಪ್ರತಿಪಾದಿಸಿದ್ದಾರೆ.

“ನಾನು ಆರ್‌ಎಸ್‌ಎಸ್‌ನಿಂದ ಬಂದವನು. ಸಂಘದ ತರಬೇತಿ ಶಿಬಿರಗಳಲ್ಲಿ ನಮ್ಮ ಬೋಧನೆಯಲ್ಲಿ ನಾವು ಎಂದಿಗೂ ಬಲಪಂಥೀಯರು ಎಂದು ಹೇಳಿಲ್ಲ. ನಮ್ಮ ಅನೇಕ ವಿಚಾರಗಳು ಎಡಪಂಥೀಯ ವಿಚಾರಗಳಂತೆ ಮತ್ತು ಅನೇಕವು ಖಂಡಿತವಾಗಿಯೂ ಬಲಪಂಥೀಯ ವಿಚಾರಗಳಂತೆ ಇವೆ” ಎಂದಿದ್ದಾರೆ.

ಹೀಗಾಗಿ ಬಲ-ಎಡ, ಪೂರ್ವ ಪಶ್ಚಿಮ ಎಂಬ ಭೌಗೋಳಿಕ, ಧಾರ್ಮಿಕ ರಾಜಕೀಯ ವಿಭಾಗೀಕರಣ ಆಗಿದೆ. ಆ ಎಲ್ಲ ವಿಷಯಗಳು ಮಸುಕಾಗಿವೆ, ಮಂಕಾಗಿವೆ ಮತ್ತು ಕರಗಿದೆ ಎಂದು ನಾನು ಭಾವಿಸುತ್ತೇನೆ. ಇಂದು ಜಗತ್ತು ಪರಸ್ಪರರ ಆಲೋಚನೆಗಳನ್ನು ಸ್ವೀಕರಿಸುತ್ತಿದೆ, ಹೊಸ ಮನುಷ್ಯ ಹೊರಹೊಮ್ಮುತ್ತಿದ್ದಾನೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಪ್ರಚಾರಕ್‌ ಹಾಗೂ ಭಾರತೀಯ ಜನ ಸಂಘದ ಅಧ್ಯಕ್ಷರಾಗಿದ್ದ ದೀನ್‌ದಯಾಳ್‌ ಉಪಾಧ್ಯಾಯ ಅವರು, ಪ್ರಾಚೀನ ಭಾರತದ ವಿಚಾರಗಳನ್ನು ಆಧುನಿಕ ಪರಿಭಾಷೆಗೆ ತಂದು ನವಪೀಳಿಗೆ ಹೇಗೆ ಆಚರಿಸಬೇಕೆಂದು ತಿಳಿಸಲು ಯತ್ನಿಸಿದ್ದಾರೆ ಎಂದು ಹೊಸಬಾಳೆ ವಿವರಿಸಿದ್ದಾರೆ.

ಭಾರತದ ವಿಚಾರಗಳಿಗೆ ಹಾಗೂ ಸಂಪ್ರದಾಯಕ್ಕೆ ಪೂರ್ಣ ವಿರಾಮ ಎಂಬುದಿಲ್ಲ. ಪೂರ್ವ- ಪಶ್ಚಿಮ, ಎಡ- ಬಲಗಳೆಲ್ಲವೂ ಪ್ರಸ್ತುತ ರಾಜಕೀಯ ಡಿಸ್‌ಕೋರ್ಸ್ ಹಾಗೂ ಭೌಗೋಳಿಕ ರಾಜಕೀಯ ಎಂದು ಹೇಳಲು ಬಯಸುತ್ತೇನೆ. ಪ್ರಸ್ತುತ ಎಂದರೆ ಎರಡನೇ ಮಹಾಯುದ್ಧ ನಂತರದ ಹಾಗೂ ಜಾಗತೀಕರಣ ಕಾಲವಾಗಿದೆ” ಎಂದು ವಿವರಿಸಿದ್ದಾರೆ.

“ಪಶ್ಚಿಮವು ಸಂಪೂರ್ಣವಾಗಿ ಪೂರ್ವವಲ್ಲ, ಪೂರ್ವವು ಸಂಪೂರ್ಣವಾಗಿ ಪೂರ್ವವಲ್ಲ. ಎಡವು ಸಂಪೂರ್ಣವಾಗಿ ಎಡವಲ್ಲ ಅಥವಾ ಬಲವು ಸಂಪೂರ್ಣವಾಗಿ ಬಲವಲ್ಲ” ಎಂದು ಹೊಸಬಾಳೆ ಅವರು ಒತ್ತಿ ಹೇಳಿದ್ದಾರೆ.

ದೀನದಯಾಳ್ ಉಪಾಧ್ಯಾಯ ಅವರು ಹಿಂದುತ್ವ ಮಾದರಿ ಎಂಬ ಪದವನ್ನು ಬಳಸಿಲ್ಲ, ಆದರೆ ಸಮಗ್ರ ಮಾನವತಾವಾದಿ ತತ್ವಶಾಸ್ತ್ರ ಎಂದು ಬಳಸಿದ್ದಾರೆ ಎಂದು ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಕಾನೂನಿನ ಭಾರತೀಕರಣ ಕುರಿತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ  ಎನ್‌.ವಿ.ರಮಣ ಅವರು ಹೇಳಿದ್ದಾರೆಂದು ಉಲ್ಲೇಖಿಸಿರುವ ಹೊಸಬಾಳೆ, “ಸಾಮಾನ್ಯವಾಗಿ ನಮ್ಮ ನ್ಯಾಯ ವಿತರಣೆಯು ಸಾಮಾನ್ಯ ಜನರಿಗೆ ಅನೇಕ ಅಡೆತಡೆಗಳನ್ನು ಉಂಟುಮಾಡುತ್ತಿದೆ. ನ್ಯಾಯಾಲಯದ ಕೆಲಸ ಮತ್ತು ಶೈಲಿಯು ಭಾರತದ ಸಂಕೀರ್ಣತೆಗಳಿಗೆ ಸರಿಹೊಂದುವುದಿಲ್ಲ. ವಸಾಹತುಶಾಹಿ ಮೂಲದ ಕಾನೂನುಗಳು, ಭಾರತೀಯ ಜನಸಂಖ್ಯೆಯ ಅಗತ್ಯಗಳಿಗೆ ಸೂಕ್ತವಾಗಿರುವುದಿಲ್ಲ. ನಮ್ಮ ಕಾನೂನು ವ್ಯವಸ್ಥೆಯ ಭಾರತೀಕರಣ ಇಂದಿನ ಅಗತ್ಯವಾಗಿದೆ” ಎಂದಿದ್ದಾರೆ.


ಇದನ್ನೂ ಓದಿರಿ: ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯದ ವಿರೋಧಿ, ಅದು ಮನುಸ್ಮೃತಿಯನ್ನು ನಂಬುತ್ತದೆ: ಮಲ್ಲಿಕಾರ್ಜುನ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹೊಸಬಾಲೆಯವರ RSS ಬಗೆಗಿನ ವ್ಯಾಖ್ಯಾನ, ಅಚ್ಚರಿದಾಯಕವಾದರೂ ಸ್ವಾಗತರ್ಹವಾಗಿದೆ.
    ಭಾರತ ಮತ್ತು ಅಲ್ಪಸಂಖ್ಯಾತರ ಬಗ್ಗೆ, ಶ್ರೀ ಮೋಹನ್ ಭಾಗವತ್ ಅವರ ವಿಚಾರಗಳು, ಹೆಗಡೆವರ್ ಮತ್ತು ಇತರೆ ಆರ್ಎಸ್ಎಸ್ ನ ಹಿರಿಯರ ಪರಿಕಲ್ಪನೆಗಿಂತ ಹೆಚ್ಚು ವಾಸ್ತವಿಕ ಮತ್ತು ಇಂದಿನ ಪರಿಸ್ಥಿತಿಗೆ ಅನುಗುಣವಾಗಿದೆ.
    ತಮ್ಮ ವಿಚಾರಧಾರೆ ಹಾಗು ವಾಸ್ತವಂಶಗಳನ್ನು ಸಂಘದ ಎಲ್ಲಾ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಅನಿವಾರ್ಯವಾಗಿರುವ ತರಬೇತಿ ಶಿಬಿರಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಬೇಕು.
    ಅನಿವಾರ್ಯವಾದರೆ ರಾಜಕೀಯ ಸಂಘಟನೆಯಾದ BJP ಯಿಂದ ಸ್ವಲ್ಪ ಮಟ್ಟದ ಅಂತರವನ್ನು ಕಾಯ್ದು ಕೊಳ್ಳುವತ್ತಾಲೂ ಯೋಚಿಸಬೇಕು.
    ವಿಚಾರಧಾರೆ ಹಾಗು ಅದರ ಅಳವಡಿಕೆ ಮುಖ್ಯವೇ ಹೊರತು ರಾಜಕೀಯ ಅಧಿಕಾರವಲ್ಲ.
    ಈ ನಿಟ್ಟಿನಲ್ಲಿ ಯೋಚಿಸಲಿಕ್ಕದರೂ ಪ್ರಾರಂಭಿಸೋಣ

    ??

    Jai Hind

    Innie

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...