Homeಮುಖಪುಟಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ...

ಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ…

- Advertisement -
- Advertisement -

ಹಿಂದುಳಿದ ತಾಲೂಕಾದ ಮಸ್ಕಿಯ ಉಪ ಚುನಾವಣೆಯಲ್ಲಿ ಯಾರು ಗೆದ್ದರು ಎಂಬುದಕ್ಕಿಂತ, ಯಾರು ಸೋತರು, ಅದಕ್ಕೂ ಮುಖ್ಯವಾಗಿ ಯಾವ ಪಕ್ಷ ಸೋತಿತು ಎಂಬುದು ಮಹತ್ವದ ಸಂಗತಿಯಾಗಿದೆ.

ಇಲ್ಲೀಗ ಕಾಂಗ್ರೆಸ್ ಪಕ್ಷವು ಸುಮಾರು 30 ಸಾವಿರ ಲೀಡ್‌ನಿಂದ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ 86,222 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪಗೌಡ ಪಾಟೀಲ್ 55,581 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಅಲ್ಲಿಗೆ 30,641 ಮತಗಳ ಅಂತರದಿಂದ ಸೋಲನ್ನಪಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ನಂತರ ಆಪರೇಷನ್ ಕಮಲದ ಬಲೆಗೆ ಬಿದ್ದು ಬಿಜೆಪಿ ಸರ್ಕಾರ ಸ್ಥಾಪನೆಗೆ ‘ಕೊಡುಗೆ’ ನೀಡಿದ್ದ ಪ್ರತಾಪಗೌಡ ಪಾಟೀಲರನ್ನು ಹೀನಾಯವಾಗಿ ಸೋತಿದ್ದಾರೆ.

ನಾನುಗೌರಿ.ಕಾಂ ಮಸ್ಕಿ ಉಪ ಚುನಾವಣೆ ಕುರಿತು ಏಳೆಂಟು ವರದಿಗಳನ್ನು ಪ್ರಕಟಿಸಿದೆ, ಮೊದಲ ವರದಿಯೇ, ‘ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?’ ಎಂಬ ಶೀರ್ಷಿಕೆ ಹೊಂದಿತ್ತು. ಇವತ್ತು ಅದು ನಿಜವಾಗಿದೆ.

ಎನ್‌ಆರ್‌ಸಿಬಿ 5-ಎ ( ಕೃಷ್ಣಾ ನೀರಿನ ನಾರಾಯಣಪೂರ ಬಲದಂಡೆ ನೀರಾವರಿ ಯೋಜನೆಗೆ ಒಳಪಡುತ್ತದೆ) ಕಾಲುವೆ ಹೋರಾಟ ಸುದೀರ್ಘವಾಗಿದೆ. 13 ವರ್ಷಗಳಿಂದ ಈ ಬೇಡಿಕೆ ಇದೆ. ಈ 13 ವರ್ಷ ಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ಲಾಭ ಪಡೆದು ಶಾಸಕರಾಗಿದ್ದ ಪ್ರತಾಪಗೌಡರು ಎಂದೂ 5-ಎ ಕಾಲುವೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಲೇ ಇಲ್ಲ. ಅದಿರಲಿ, ‘ಏ ಅದು ಅವೈಜ್ಞಾನಿಕ ಯೋಜನಾ ಅದ… ಕೋಟೆಕಲ್ ಬಸವಣ್ಣ ನೀರಾವರಿ ಯೋಜನಾ ಮಾಡಿಸ್ತೀನಿ’ ಎಂದು ಉಡಾಫೆಯ ಮಾತು ಹೇಳುತ್ತ ಬಂದರು.

ಈ ಸಲ ಗೆಲ್ಲುವುದು ಕಷ್ಟ ಅನಿಸಿದ ಕೂಡಲೇ ಕೃಷ್ಣಾ ನದಿಯಿಂದ ಮಸ್ಕಿ ಕ್ಷೇತ್ರದ 18 ಕೆರೆಗಳಿಗೆ ನೀರು ಹರಿಸುವ 500 ಕೋಟಿ ರೂ, ಯೋಜನೆ ಬಜೆಟ್‌ನಲ್ಲಿ ಘೋಷಣೆ ಆಗುವಂತೆ ಮಾಡಿದರು. ಆದರೆ ಈ 18 ಕೆರೆಗಳೋ, ಅದರಲ್ಲಿ ಭಾಗಶಃ ಮುಚ್ಚಿವೆ, ಭಾಗಶಃ ಕಿರಿದಾಗಿವೆ. 480 ಕೋಟಿ ರೂ,ಗಳನ್ನು ಇದಕ್ಕೆ ವೆಚ್ಚ ಮಾಡಿ ಲೂಟಿ ಹೊಡೆಯಲಾಗಿದೆ ಎಂಬುದು ರೈತರ ಆರೋಪವಾಗಿದೆ.

ವಿಜಯೇಂದ್ರರ ಉಸ್ತುವಾರಿ

ಈ ಕ್ಷೇತ್ರದ ಬಗ್ಗೆ ತುಂಬ ತಲೆ ಕೆಡಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಚುನವಣಾ ಪ್ರಕ್ರಿಯೆ ಶುರುವಾದಾಗ ಇಲ್ಲೇ ಠಿಕಾಣಿ ಹಾಕಿದ್ದರು. ಜಾತಿವಾರು ಸಭೆಗಳನ್ನು ನಡೆಸಿ, ಚುನಾವಣಾ ‘ವಹಿವಾಟು’ ನಡೆಸಿದ ಅವರು ಇಲ್ಲಿ ಸಾಕಷ್ಟು ರೊಕ್ಕದ ಹೊಳೆ ಹರಿಸಿದರು ಎಂದು ರೈತ ಹೋರಾಟಗಾರರು ಮತ್ತು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಹಲವರು ಬಿಜೆಪಿ ಕಾರ್ಯಕರ್ತರು ಹಣ ಹಂಚುವಾಗ ಸಿಕ್ಕಬಿದ್ದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಹಾಸನ, ದಾವಣಗೆರೆ ಮುಂತಾದ ಕಡೆಯಿಂದ ಸಂಘ ಪರಿವಾರದವರನ್ನು ಕರೆ ತಂದು ಹಣಹಂಚುವ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪಗಳಿಗೆ ಸಾಕ್ಷಿಯಾಗಿ ಹತ್ತಾರು ವಿಡಿಯೋ ಹೊರಬಂದವು, ಎರಡು-ಮೂರು ಕೇಸುಗಳು ದಾಖಲಾದವು, ತುರವಿಹಾಳದಲ್ಲಿ ಹಾಸನದ ಮುವರು ಯುವಕರು ಬಿಜೆಪಿ ಪರ ಹಣ ಹಂಚಿ ಜನರ ಕೈಗೆ ಸಿಕ್ಕಿ ಬಿದ್ದು ಬಂಧನಕ್ಕೆ ಒಳಗಾದರು.

‘ಮೂಟೆಗಳಲ್ಲಿ ಬಿಜೆಪಿ ಹಣ ಸಾಗಿಸಿದೆ, ಪಿಎಸ್‌ಐ ಒಬ್ಬರು ಇದಕ್ಕೆ ನೆರವಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಸ್ಕಿಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದರು.
ಬಂಜಾರಾ ಸಮುದಾಯದ ಪ್ರತಿಭಾನ್ವಿತ ಗಾಯಕಿ ಮಂಗ್ಲಿ (ಸಾವಿತ್ರಿ ರಾಠೋಡ್) ಅವರನ್ನು ಇಲ್ಲಿಗೆ ಕರೆ ತಂದು ಕ್ಷೇತ್ರದ ತಾಂಡಾಗಳಲ್ಲಿ ಬಿಜೆಪಿ ಪ್ರಚಾರ ಮಾಡಿಸಿತು!

ಹಣದ ಹೊಳೆ ವರ್ಸಸ್ ಹೋರಾಟದ ಕಾಲುವೆ!

ಹಿಂದಿನ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಹಣದ ಹೊಳೆ ಹರಿಸಿ, ಜಾತಿವಾರು ಧೂರ್ತ ನಾಯಕರನ್ನು ಖರೀದಿಸಿ ಮತ್ತು ಭಾವನಾತ್ಮಕ ವಿಷಯವನ್ನು ಅಲ್ಲಲ್ಲಿ ಮುಂದು ಮಾಡಿ ಗೆಲ್ಲುತ್ತಲೇ ಬಂದಿದೆ. ಆದರೆ, ಈ ಎಲ್ಲವನ್ನೂ ಪ್ರಯೋಗಿಸಿಯೂ ಅದು 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದೆ.

ಇದಕ್ಕೆ ಹಲವು ಕಾರಣಗಳಿವೆ:
• ಪ್ರತಾಪಗೌಡ ಸತತವಾಗಿ ಮುರು ಸಲ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದು ಗೆದ್ದರು. ಆಪರೇಷನ್ ಕಮಲದಲ್ಲಿ ಆಸಕ್ತಿ ವಹಿಸಿದರೆ ಹೊರತು ನೀರಾವರಿ ಮನವಿಯ ಕುರಿತಲ್ಲ ಎಂದು ಅವರ ಬಗ್ಗೆ ಅಸಮಾಧಾನವಿತ್ತು.
• ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರವಿಹಾಳ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪಗೌಡರ ಎದುರು ಕೇವಲ 231 ಮತಗಳಿಂದ ಸೋತಿದ್ದರು. ಈ ಸಲ ಕಾಂಗ್ರೆಸ್ ಅಭ್ಯರ್ಥಿ ಆದ ಅವರಿಗೆ ಒಂದು ಮಟ್ಟದ ಅನುಕಂಪ ಇತ್ತು.

ಟರ್ನಿಂಗ್ ಪಾಯಿಂಟ್!

ಮೇಲಿನ ಎರಡು ಕಾರಣಗಳಷ್ಟೇ ಇದ್ದರೆ ಹಣ ಮತ್ತು ಜಾತಿ ಲೆಕ್ಕದಲ್ಲಿ ಪ್ರತಾಪಗೌಡ ಹೇಗೋ ಗೆಲ್ಲುತ್ತಿದ್ದರು. ಇಡೀ ಚುನಾವಣಾ ಪ್ರಕ್ರಿಯೆಗೆ ಟ್ವಿಸ್ಟ್ ಕೊಟ್ಟಿದ್ದೇ 5-ಎ ಕಾಲುವೆ ನೀರಾವರಿ ಹೋರಾಟ. 58 ಹಳ್ಳಿಗಳ ಈ ಹೋರಾಟವು, ಭೂ ಮಾಲೀಕ ಲಿಂಗಾಯತ ರೆಡ್ಡಿಗಳು, ಸಣ್ಣ ಹಿಡುವಳಿಯ ಕುರುಬರು, ನಾಯಕರು, ದಲಿತರು ಮತ್ತು ಗುಳೆ ಹೋಗಿಯೇ ಬದುಕು ಸವೆಸುತ್ತ ಬಂದ ಎಲ್ಲ ಜಾತಿಗಳ ಭೂರಹಿತರನ್ನು ಒಟ್ಟು ಮಾಡಿತು.

ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಜಪ್ಪ ಹರ್ವಾಪುರ, ಪ್ರಧಾನ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ, ಖಜಾಂಚಿ ಶಿವನಗೌಡ ವಟಗಲ್ ಮತ್ತು ಸಾವಿರಾರು ಯುವ ಹೋರಾಟಗಾರರು ಹಳ್ಳಿ ಹಳ್ಳಿಗಳಿಗೆ ತಲುಪಿ, ಬಿಜೆಪಿ ಸೋಲಿಸಿ ಎಂಬ ಭಾಷಣಗಳನ್ನು ಮಾಡಿದ್ದಲ್ಲದೇ, ಪ್ರಜಾಪ್ರಭುತ್ವದ ಆಶಯಗಳ ಅರಿವು ಮೂಡಿಸಿದರು. ಈಗ ಹೋರಾಟ 164ನೇ ದಿನಕ್ಕೆ ತಲುಪಿದೆ. ಈಗಿನ ಹೊಸ ಶಾಸಕ ಕನಿಷ್ಠ, ಕೊಡೆಕಲ್ ಬಸವಣ್ಣ ಯೋಜನೆ ಬದಲು ಎನ್‌ಆರ್‌ಬಿಸಿ 5-ಎ ಕಾಲುವೆ ಯೋಜನೆ ಬಗ್ಗೆ ಧ್ವನಿ ಎತ್ತಬೇಕು ಎಂದು ಹೋರಾಟ ಸಮಿತಿ ಹೇಳಿದೆ. ಹೋರಾಟ ಎಂದಿನಂತೆ ಮುಂದುವರೆಯಲಿದೆ ಎಂದೂ ಸ್ಪಷ್ಟಪಡಿಸಿದೆ. ಇಂದು ಫಲಿತಾಂಶದ ದಿನವೂ ಹೋರಾಟ ನಡೆಯುತ್ತಿದೆ.

ಹಣದ ಹೊಳೆಯನ್ನು ಒಂದು ಹೋರಾಟದ ಪುಟ್ಟ ಕಾಲುವೆ ಹಿಮ್ಮೆಟ್ಟಿಸಿದ ಕತೆಯಿದು. ಇಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಹೋರಾಟ ಮಾಡುವವರಿಗೆ ಕೆಲವು ಪಾಠಗಳಂತೂ ಇವೆ…
* ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...