Homeಮುಖಪುಟಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ...

ಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ…

- Advertisement -
- Advertisement -

ಹಿಂದುಳಿದ ತಾಲೂಕಾದ ಮಸ್ಕಿಯ ಉಪ ಚುನಾವಣೆಯಲ್ಲಿ ಯಾರು ಗೆದ್ದರು ಎಂಬುದಕ್ಕಿಂತ, ಯಾರು ಸೋತರು, ಅದಕ್ಕೂ ಮುಖ್ಯವಾಗಿ ಯಾವ ಪಕ್ಷ ಸೋತಿತು ಎಂಬುದು ಮಹತ್ವದ ಸಂಗತಿಯಾಗಿದೆ.

ಇಲ್ಲೀಗ ಕಾಂಗ್ರೆಸ್ ಪಕ್ಷವು ಸುಮಾರು 30 ಸಾವಿರ ಲೀಡ್‌ನಿಂದ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ 86,222 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪಗೌಡ ಪಾಟೀಲ್ 55,581 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಅಲ್ಲಿಗೆ 30,641 ಮತಗಳ ಅಂತರದಿಂದ ಸೋಲನ್ನಪಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ನಂತರ ಆಪರೇಷನ್ ಕಮಲದ ಬಲೆಗೆ ಬಿದ್ದು ಬಿಜೆಪಿ ಸರ್ಕಾರ ಸ್ಥಾಪನೆಗೆ ‘ಕೊಡುಗೆ’ ನೀಡಿದ್ದ ಪ್ರತಾಪಗೌಡ ಪಾಟೀಲರನ್ನು ಹೀನಾಯವಾಗಿ ಸೋತಿದ್ದಾರೆ.

ನಾನುಗೌರಿ.ಕಾಂ ಮಸ್ಕಿ ಉಪ ಚುನಾವಣೆ ಕುರಿತು ಏಳೆಂಟು ವರದಿಗಳನ್ನು ಪ್ರಕಟಿಸಿದೆ, ಮೊದಲ ವರದಿಯೇ, ‘ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?’ ಎಂಬ ಶೀರ್ಷಿಕೆ ಹೊಂದಿತ್ತು. ಇವತ್ತು ಅದು ನಿಜವಾಗಿದೆ.

ಎನ್‌ಆರ್‌ಸಿಬಿ 5-ಎ ( ಕೃಷ್ಣಾ ನೀರಿನ ನಾರಾಯಣಪೂರ ಬಲದಂಡೆ ನೀರಾವರಿ ಯೋಜನೆಗೆ ಒಳಪಡುತ್ತದೆ) ಕಾಲುವೆ ಹೋರಾಟ ಸುದೀರ್ಘವಾಗಿದೆ. 13 ವರ್ಷಗಳಿಂದ ಈ ಬೇಡಿಕೆ ಇದೆ. ಈ 13 ವರ್ಷ ಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ಲಾಭ ಪಡೆದು ಶಾಸಕರಾಗಿದ್ದ ಪ್ರತಾಪಗೌಡರು ಎಂದೂ 5-ಎ ಕಾಲುವೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಲೇ ಇಲ್ಲ. ಅದಿರಲಿ, ‘ಏ ಅದು ಅವೈಜ್ಞಾನಿಕ ಯೋಜನಾ ಅದ… ಕೋಟೆಕಲ್ ಬಸವಣ್ಣ ನೀರಾವರಿ ಯೋಜನಾ ಮಾಡಿಸ್ತೀನಿ’ ಎಂದು ಉಡಾಫೆಯ ಮಾತು ಹೇಳುತ್ತ ಬಂದರು.

ಈ ಸಲ ಗೆಲ್ಲುವುದು ಕಷ್ಟ ಅನಿಸಿದ ಕೂಡಲೇ ಕೃಷ್ಣಾ ನದಿಯಿಂದ ಮಸ್ಕಿ ಕ್ಷೇತ್ರದ 18 ಕೆರೆಗಳಿಗೆ ನೀರು ಹರಿಸುವ 500 ಕೋಟಿ ರೂ, ಯೋಜನೆ ಬಜೆಟ್‌ನಲ್ಲಿ ಘೋಷಣೆ ಆಗುವಂತೆ ಮಾಡಿದರು. ಆದರೆ ಈ 18 ಕೆರೆಗಳೋ, ಅದರಲ್ಲಿ ಭಾಗಶಃ ಮುಚ್ಚಿವೆ, ಭಾಗಶಃ ಕಿರಿದಾಗಿವೆ. 480 ಕೋಟಿ ರೂ,ಗಳನ್ನು ಇದಕ್ಕೆ ವೆಚ್ಚ ಮಾಡಿ ಲೂಟಿ ಹೊಡೆಯಲಾಗಿದೆ ಎಂಬುದು ರೈತರ ಆರೋಪವಾಗಿದೆ.

ವಿಜಯೇಂದ್ರರ ಉಸ್ತುವಾರಿ

ಈ ಕ್ಷೇತ್ರದ ಬಗ್ಗೆ ತುಂಬ ತಲೆ ಕೆಡಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಚುನವಣಾ ಪ್ರಕ್ರಿಯೆ ಶುರುವಾದಾಗ ಇಲ್ಲೇ ಠಿಕಾಣಿ ಹಾಕಿದ್ದರು. ಜಾತಿವಾರು ಸಭೆಗಳನ್ನು ನಡೆಸಿ, ಚುನಾವಣಾ ‘ವಹಿವಾಟು’ ನಡೆಸಿದ ಅವರು ಇಲ್ಲಿ ಸಾಕಷ್ಟು ರೊಕ್ಕದ ಹೊಳೆ ಹರಿಸಿದರು ಎಂದು ರೈತ ಹೋರಾಟಗಾರರು ಮತ್ತು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಹಲವರು ಬಿಜೆಪಿ ಕಾರ್ಯಕರ್ತರು ಹಣ ಹಂಚುವಾಗ ಸಿಕ್ಕಬಿದ್ದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಹಾಸನ, ದಾವಣಗೆರೆ ಮುಂತಾದ ಕಡೆಯಿಂದ ಸಂಘ ಪರಿವಾರದವರನ್ನು ಕರೆ ತಂದು ಹಣಹಂಚುವ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪಗಳಿಗೆ ಸಾಕ್ಷಿಯಾಗಿ ಹತ್ತಾರು ವಿಡಿಯೋ ಹೊರಬಂದವು, ಎರಡು-ಮೂರು ಕೇಸುಗಳು ದಾಖಲಾದವು, ತುರವಿಹಾಳದಲ್ಲಿ ಹಾಸನದ ಮುವರು ಯುವಕರು ಬಿಜೆಪಿ ಪರ ಹಣ ಹಂಚಿ ಜನರ ಕೈಗೆ ಸಿಕ್ಕಿ ಬಿದ್ದು ಬಂಧನಕ್ಕೆ ಒಳಗಾದರು.

‘ಮೂಟೆಗಳಲ್ಲಿ ಬಿಜೆಪಿ ಹಣ ಸಾಗಿಸಿದೆ, ಪಿಎಸ್‌ಐ ಒಬ್ಬರು ಇದಕ್ಕೆ ನೆರವಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಸ್ಕಿಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದರು.
ಬಂಜಾರಾ ಸಮುದಾಯದ ಪ್ರತಿಭಾನ್ವಿತ ಗಾಯಕಿ ಮಂಗ್ಲಿ (ಸಾವಿತ್ರಿ ರಾಠೋಡ್) ಅವರನ್ನು ಇಲ್ಲಿಗೆ ಕರೆ ತಂದು ಕ್ಷೇತ್ರದ ತಾಂಡಾಗಳಲ್ಲಿ ಬಿಜೆಪಿ ಪ್ರಚಾರ ಮಾಡಿಸಿತು!

ಹಣದ ಹೊಳೆ ವರ್ಸಸ್ ಹೋರಾಟದ ಕಾಲುವೆ!

ಹಿಂದಿನ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಹಣದ ಹೊಳೆ ಹರಿಸಿ, ಜಾತಿವಾರು ಧೂರ್ತ ನಾಯಕರನ್ನು ಖರೀದಿಸಿ ಮತ್ತು ಭಾವನಾತ್ಮಕ ವಿಷಯವನ್ನು ಅಲ್ಲಲ್ಲಿ ಮುಂದು ಮಾಡಿ ಗೆಲ್ಲುತ್ತಲೇ ಬಂದಿದೆ. ಆದರೆ, ಈ ಎಲ್ಲವನ್ನೂ ಪ್ರಯೋಗಿಸಿಯೂ ಅದು 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದೆ.

ಇದಕ್ಕೆ ಹಲವು ಕಾರಣಗಳಿವೆ:
• ಪ್ರತಾಪಗೌಡ ಸತತವಾಗಿ ಮುರು ಸಲ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದು ಗೆದ್ದರು. ಆಪರೇಷನ್ ಕಮಲದಲ್ಲಿ ಆಸಕ್ತಿ ವಹಿಸಿದರೆ ಹೊರತು ನೀರಾವರಿ ಮನವಿಯ ಕುರಿತಲ್ಲ ಎಂದು ಅವರ ಬಗ್ಗೆ ಅಸಮಾಧಾನವಿತ್ತು.
• ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರವಿಹಾಳ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪಗೌಡರ ಎದುರು ಕೇವಲ 231 ಮತಗಳಿಂದ ಸೋತಿದ್ದರು. ಈ ಸಲ ಕಾಂಗ್ರೆಸ್ ಅಭ್ಯರ್ಥಿ ಆದ ಅವರಿಗೆ ಒಂದು ಮಟ್ಟದ ಅನುಕಂಪ ಇತ್ತು.

ಟರ್ನಿಂಗ್ ಪಾಯಿಂಟ್!

ಮೇಲಿನ ಎರಡು ಕಾರಣಗಳಷ್ಟೇ ಇದ್ದರೆ ಹಣ ಮತ್ತು ಜಾತಿ ಲೆಕ್ಕದಲ್ಲಿ ಪ್ರತಾಪಗೌಡ ಹೇಗೋ ಗೆಲ್ಲುತ್ತಿದ್ದರು. ಇಡೀ ಚುನಾವಣಾ ಪ್ರಕ್ರಿಯೆಗೆ ಟ್ವಿಸ್ಟ್ ಕೊಟ್ಟಿದ್ದೇ 5-ಎ ಕಾಲುವೆ ನೀರಾವರಿ ಹೋರಾಟ. 58 ಹಳ್ಳಿಗಳ ಈ ಹೋರಾಟವು, ಭೂ ಮಾಲೀಕ ಲಿಂಗಾಯತ ರೆಡ್ಡಿಗಳು, ಸಣ್ಣ ಹಿಡುವಳಿಯ ಕುರುಬರು, ನಾಯಕರು, ದಲಿತರು ಮತ್ತು ಗುಳೆ ಹೋಗಿಯೇ ಬದುಕು ಸವೆಸುತ್ತ ಬಂದ ಎಲ್ಲ ಜಾತಿಗಳ ಭೂರಹಿತರನ್ನು ಒಟ್ಟು ಮಾಡಿತು.

ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಜಪ್ಪ ಹರ್ವಾಪುರ, ಪ್ರಧಾನ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ, ಖಜಾಂಚಿ ಶಿವನಗೌಡ ವಟಗಲ್ ಮತ್ತು ಸಾವಿರಾರು ಯುವ ಹೋರಾಟಗಾರರು ಹಳ್ಳಿ ಹಳ್ಳಿಗಳಿಗೆ ತಲುಪಿ, ಬಿಜೆಪಿ ಸೋಲಿಸಿ ಎಂಬ ಭಾಷಣಗಳನ್ನು ಮಾಡಿದ್ದಲ್ಲದೇ, ಪ್ರಜಾಪ್ರಭುತ್ವದ ಆಶಯಗಳ ಅರಿವು ಮೂಡಿಸಿದರು. ಈಗ ಹೋರಾಟ 164ನೇ ದಿನಕ್ಕೆ ತಲುಪಿದೆ. ಈಗಿನ ಹೊಸ ಶಾಸಕ ಕನಿಷ್ಠ, ಕೊಡೆಕಲ್ ಬಸವಣ್ಣ ಯೋಜನೆ ಬದಲು ಎನ್‌ಆರ್‌ಬಿಸಿ 5-ಎ ಕಾಲುವೆ ಯೋಜನೆ ಬಗ್ಗೆ ಧ್ವನಿ ಎತ್ತಬೇಕು ಎಂದು ಹೋರಾಟ ಸಮಿತಿ ಹೇಳಿದೆ. ಹೋರಾಟ ಎಂದಿನಂತೆ ಮುಂದುವರೆಯಲಿದೆ ಎಂದೂ ಸ್ಪಷ್ಟಪಡಿಸಿದೆ. ಇಂದು ಫಲಿತಾಂಶದ ದಿನವೂ ಹೋರಾಟ ನಡೆಯುತ್ತಿದೆ.

ಹಣದ ಹೊಳೆಯನ್ನು ಒಂದು ಹೋರಾಟದ ಪುಟ್ಟ ಕಾಲುವೆ ಹಿಮ್ಮೆಟ್ಟಿಸಿದ ಕತೆಯಿದು. ಇಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಹೋರಾಟ ಮಾಡುವವರಿಗೆ ಕೆಲವು ಪಾಠಗಳಂತೂ ಇವೆ…
* ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...