Homeಅಂಕಣಗಳುಅಶ್ಫಾಕುಲ್ಲಾ ಖಾನ್ ಎಂಬ ಅಪ್ಪಟ ದೇಶಪ್ರೇಮಿಯ ನೆನೆಯುತ್ತಾ: ಡಿ.ಉಮಾಪತಿ

ಅಶ್ಫಾಕುಲ್ಲಾ ಖಾನ್ ಎಂಬ ಅಪ್ಪಟ ದೇಶಪ್ರೇಮಿಯ ನೆನೆಯುತ್ತಾ: ಡಿ.ಉಮಾಪತಿ

ಅಶ್ಫಾಕ್ ಒಂದೊಮ್ಮೆ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್‍ಗೆ ಪತ್ರ ಬರೆಯಬಯಸಿದ್ದ. ಆತ ಗಲ್ಲಿಗೇರುವ ಮುನ್ನ ಆತನ ಸಂದೇಶವನ್ನು ಸೆರೆಮನೆಯಿಂದ ಕದ್ದು ಹೊರ ಸಾಗಿಸಲಾಗಿತ್ತು.

- Advertisement -
- Advertisement -

ಅಶ್ಫಾಕುಲ್ಲಾ ಖಾನ್ ಬದುಕಿದ್ದಿದ್ದರೆ ಇದೇ ಅಕ್ಟೋಬರ್ 22ರಂದು ಅವರಿಗೆ 120 ವರ್ಷ ತುಂಬುತ್ತಿತ್ತು. ಉತ್ತರಪ್ರದೇಶದ ಶಹಜಹಾನಪುರ ಆತನ ಹುಟ್ಟೂರು. ಖಾನ್ ಬೆಳೆದದ್ದು ಗಾಂಧೀಜಿ ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ನೀಡದಂತೆ ಕರೆ ನೀಡಿ ಅಸಹಕಾರ ಚಳವಳಿ ಹೂಡಿದ್ದ ದಿನಗಳಲ್ಲಿ.

ಹಿಂದುಸ್ತಾನಿ ರಿಪಬ್ಲಿಕನ್ ಅಸೋಸಿಯೇಷನ್‍ನ (ಎಚ್.ಆರ್.ಎ) ಕ್ರಾಂತಿಕಾರಿ ತಲೆಯಾಳು ರಾಮಪ್ರಸಾದ್ ಬಿಸ್ಮಿಲ್ ಸಂಗಡ 1924ರಲ್ಲಿ ಕಾಕೋರಿ ರೈಲು ದರೋಡೆಯಲ್ಲಿ ಭಾಗವಹಿಸಿದ್ದ ಖಾನ್ ಕೇವಲ 27ನೆಯ ವಯಸ್ಸಿನಲ್ಲಿ ಬ್ರಿಟಿಷರ ನೇಣುಗಂಬಕ್ಕೆ ಕೊರಳೊಡ್ಡಿದ ಹುತಾತ್ಮ. ಬ್ರಿಟಿಷ್ ವಿರೋಧಿ ಬೆಂಕಿಯುಂಡೆ.
ಕಾಕೋರಿಯಿಂದ ಲಖ್ನೋಗೆ ರೈಲುಗಾಡಿಯಲ್ಲಿ ಸಾಗಿಸಲಾಗುತ್ತಿದ್ದ ಬ್ರಿಟಿಷ್ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿ, ಆ ಹಣದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾಗಿದ್ದ ಹತಾರುಗಳನ್ನು ಖರೀದಿಸುವುದು ಕಾಕೋರಿ ದರೋಡೆ ಹಿಂದಿನ ಕಾರ್ಯಸೂಚಿಯಾಗಿತ್ತು.

ಉರ್ದು ಕಾವ್ಯವೆಂದರೆ ಖಾನ್‍ಗೆ ಅಚ್ಚುಮೆಚ್ಚು. ವಾರಸಿ ಇಲ್ಲವೇ ಹಜರತ್ ಕಾವ್ಯನಾಮದೊಂದಿಗೆ ಬರೆಯುತ್ತಿದ್ದರು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಕೂಡ ಸ್ವಾತಂತ್ರ್ಯ ಹೋರಾಟದ ಕೆಚ್ಚಿಗೆ ಮತ್ತು ಉರ್ದು ಕವಿತೆಗೆ ಹೆಸರಾಗಿದ್ದವರು. ಅವರ ಉರ್ದು ಕಾವ್ಯಪ್ರತಿಭೆ ಮತ್ತು ಕಲಿತನದ ಕತೆಗಳನ್ನು ಎಳೆಯ ಖಾನ್ ತನ್ನ ಅಣ್ಣನಿಂದ ಕೇಳಿ ಅರಿತಿದ್ದ. ಅವಕ್ಕೆ ಮಾರುಹೋಗಿ ಅಭಿಮಾನಿಯೇ ಆಗಿಬಿಟ್ಟಿದ್ದ. ಚೌರಿಚೌರಾ ಹಿಂಸಾತ್ಮಕ ಘಟನೆಯ ನಂತರ ಗಾಂಧೀಜಿ ತಮ್ಮ ಅಸಹಕಾರ ಚಳವಳಿಯನ್ನು ವಾಪಸು ತೆಗೆದುಕೊಂಡಿದ್ದರು. ಅವರ ಈ ಹೆಜ್ಜೆ ಸಾವಿರಾರು ಯುವ ಕ್ರಾಂತಿಕಾರಿಗಳಿಗೆ ತೀವ್ರ ನಿರಾಶೆ ಉಂಟು ಮಾಡಿತ್ತು. ಅಹಿಂಸಾತ್ಮಕ ಹಾದಿ ಕುರಿತು ಅವರಲ್ಲಿ ಭ್ರಮನಿರಸನ ಮೂಡಿಸಿತ್ತು. ಈ ಪೈಕಿ ಅಶ್ಫಾಕುಲ್ಲಾ ಖಾನ್ ಕೂಡ ಒಬ್ಬನಾಗಿದ್ದ. ರಾಮಪ್ರಸಾದ್ ಬಿಸ್ಮಿಲ್ ಸಂಘಟನೆಯನ್ನು (ಎಚ್.ಆರ್.ಎ) ಸೇರಲು ತವಕಿಸಿದ. ಆದರೆ ಸೇರಿಸಿಕೊಳ್ಳಲು ಆರಂಭದಲ್ಲಿ ಬಿಸ್ಮಿಲ್ ಉತ್ಸುಕತೆ ತೋರಲಿಲ್ಲ. ಶಹಜಹಾನಪುರದ ಇತರೆ ಪಠಾಣ ಕುಟುಂಬಗಳಂತೆ ಖಾನ್ ಕುಟುಂಬ ಕೂಡ ಸಿರಿವಂತಿಕೆ ಸೂಸಿತ್ತು. ತಂದೆ ಕೊತ್ವಾಲ ಹುದ್ದೆಯಲ್ಲಿದ್ದರು. ಅಂತಿಮವಾಗಿ ಇಬ್ಬರನ್ನೂ ಹತ್ತಿರ ತಂದದ್ದು ಉರ್ದು ಕವಿತೆಯೆಡೆಗಿನ ಕಡುಪ್ರೇಮ ಮತ್ತು ತಾಯ್ನೆಲವನ್ನು ದಾಸ್ಯದಿಂದ ಬಿಡಿಸುವ ಪಣ ತೊಟ್ಟ ನಿಗಿನಿಗಿ ದೇಶಭಕ್ತಿ. ಬ್ರಾಹ್ಮಣ ಮತ್ತು ಮುಸ್ಲಿಮ್ ತರುಣರಿಬ್ಬರು ಪ್ರಸಿದ್ಧ ಪ್ರಾಣಸ್ನೇಹಿತರಾಗಿ ಇತಿಹಾಸ ಸೇರಿದರು.

PC : Facebook

ಬಂದೂಕು, ಬಾಂಬುಗಳಂತಹ ಹತಾರುಗಳ ಖರೀದಿಗೆ ಹಣ ಹೊಂದಿಸಲು ಇಬ್ಬರೂ ಹೂಡಿದ ಹಂಚಿಕೆ ಕಾಕೋರಿ ರೈಲು ದರೋಡೆ. 1925ರ ಆಗಸ್ಟ್ ಒಂಬತ್ತರ ದರೋಡೆಯ ನಂತರ ಇವರಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚುತ್ತದೆ ಬ್ರಿಟಿಷ್ ಸರ್ಕಾರ. ಬೇಟೆಯಾಡಿ ಸೆರೆಹಿಡಿದು ಗಲ್ಲಿಗೇರಿಸಿದ ನಾಲ್ವರು ಕ್ರಾಂತಿಕಾರಿಗಳ ಪೈಕಿ ಬಿಸ್ಮಿಲ್ ಮತ್ತು ಖಾನ್ ಪ್ರಮುಖರು. ಉಳಿದಿಬ್ಬರು ರಾಜೇಂದ್ರನಾಥ ಲಾಹಿರಿ ಮತ್ತು ರೋಶನ್ ಸಿಂಗ್.

ಯುವಕ ಅಶ್ಫಾಕ್ ಒಂದೊಮ್ಮೆ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್‍ಗೆ ಪತ್ರ ಬರೆಯಬಯಸಿದ್ದ. 1927ರ ಡಿಸೆಂಬರ್ 19ರಂದು ಗಲ್ಲಿಗೇರುವ ಮುನ್ನ ಆತನ ಸಂದೇಶವನ್ನು ಸೆರೆಮನೆಯಿಂದ ಕದ್ದು ಹೊರ ಸಾಗಿಸಲಾಗಿತ್ತು. ಸ್ವಾತಂತ್ರ್ಯದ ಜೊತೆಗೆ ಸಮಾನತೆ ಸಾಧಿಸುವುದೂ ಅಶ್ಫಾಕ್ ಆಸೆಯಾಗಿತ್ತು.

“ಬಡವರು ಸಂತಸದಿಂದ ಸಲೀಸಾಗಿ ಬಾಳುವೆ ಮಾಡಲು ಸಾಧ್ಯವಿರುವಂತಹ ಸ್ವಾತಂತ್ರ್ಯ ಹಿಂದೂಸ್ತಾನಕ್ಕೆ ಬೇಕಿದೆ. ವರ್ಕ್‍ಶಾಪಿನಲ್ಲಿ ಕೆಲಸ ಮಾಡುವ ಮೆಕ್ಯಾನಿಕ್ ಅಬ್ದುಲ್ಲಾ, ಚಪ್ಪಲಿ ಹೊಲೆಯುವ ಧನಿಯಾ ಹಾಗೂ ಸಾಧಾರಣ ರೈತರು ಲಖ್ನೋದ ನವಾಬರ ಅರಮನೆಯಲ್ಲಿ ಗಣ್ಯರ ಮುಂದಿನ ಸಾಲುಗಳ ಕುರ್ಚಿಗಳಲ್ಲಿ ಇದಿರುಬದಿರಾಗಿ ಕುಳಿತುಕೊಳ್ಳುವ ದಿನಗಳು ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುವೆ. ಕಮ್ಯುನಿಸ್ಟರೊಂದಿಗೆ ನನ್ನ ಸಮಹಮತವಿದೆ. ಬಡರೈತರು ಮತ್ತು ಅಸಹಾಯಕ ಕಾರ್ಮಿಕರಿಗಾಗಿ ನನ್ನ ಹೃದಯ ಸದಾ ಅಳುತ್ತಿರುತ್ತದೆ. ಕಾಕೋರಿ ದರೋಡೆ ಪ್ರಕರಣದ ನಂತರ ತಲೆ ಮರೆಸಿಕೊಂಡು ತಿರುಗುತ್ತಿದ್ದಾಗ ಇಂತಹ ಕುಟುಂಬಗಳೊಂದಿಗೆ ವಾಸವಿದ್ದೆ. ಅವರ ಬವಣೆ ನನ್ನ ಕಣ್ಣುಗಳ ತೇವವಾಗಿಸಿತ್ತು. ನಮ್ಮ ಪೇಟೆ ಪಟ್ಟಣ ನಗರಗಳು ಥಳಗುಟ್ಟುವುದು ಇವರಿಂದಾಗಿಯೇ. ನಮ್ಮ ಗಿರಣಿಗಳು, ಕಾರ್ಖಾನೆಗಳು ನಡೆಯುವ ಹಿಂದಿನ ಶ್ರಮ ಇವರದೇ. ಪ್ರಪಂಚದ ಪ್ರತಿ ಕಾಮಗಾರಿಯ ಹಿಂದೆ ಇರುವುದು ಇವರದೇ ಬೆವರು. ಬೆಳೆಯುವ-ಉತ್ಪಾದಿಸುವ ಈ ಶ್ರಮಿಕರನ್ನು ದುಃಖ-ದುಸ್ಥಿತಿಗಳು ಬಿಡದೆ ಬೆಂಬತ್ತಿವೆ. ಅವರ ಈ ಕಷ್ಟ ಕಣ್ಣೀರಿನ ಮೂಲಕಾರಣ ಬಿಳಿತೊಗಲಿನ ಒಡೆಯರು ಮತ್ತು ಅವರ ಏಜೆಂಟರು. ಹಳ್ಳಿ ಹಳ್ಳಿಗೆ ಹೋಗಿ, ಗಿರಣಿ ಕಾರ್ಖಾನೆಗಳಿಗೆ ತೆರಳಿ ಅವರ ದುಸ್ಥಿತಿಯನ್ನು ಅಧ್ಯಯನ ಮಾಡಬೇಕು ಮತ್ತು ಅವರಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸಬೇಕು” ಎಂಬುದು ಖಾನ್‍ನ ಅಂತಿಮ ಸಂದೇಶವಾಗಿತ್ತು. ಆರ್ಥಿಕ ಸ್ವಾತಂತ್ರ್ಯದ ಜೊತೆ ಜೊತೆಗೆ ಸಾಮಾಜಿಕ-ಸಾಂಸ್ಕೃತಿಕ ಸಮಾನತೆಯೂ ಈ ಸಂದೇಶದಲ್ಲಿ ಸೇರಿತ್ತು ಎಂಬುದನ್ನು ಗಮನಿಸಬೇಕಿದೆ.

ಎಲ್ಲ ಬಗೆಯ ಪರಕೀಯ ಆಳ್ವಿಕೆ ನ್ಯಾಯಬಾಹಿರ. ಅಂಚಿನಲ್ಲಿ ಜೋತುಬಿದ್ದು ಜೀವ ಹಿಡಿದ ದೀನ ದರಿದ್ರರ ಹಕ್ಕುಗಳನ್ನು ಮಾನ್ಯ ಮಾಡದಿರುವ, ಬಂಡವಾಳಶಾಹಿಗಳು ಮತ್ತು ಜಮೀನುದಾರರ ಹಿತವನ್ನು ಕಾಪಾಡುವ, ಕಾರ್ಮಿಕರು ಮತ್ತು ರೈತರ ಸಮಾನ ಭಾಗವಹಿಸುವಿಕೆ ಇಲ್ಲದಿರುವ ಹಾಗೂ ಯಥಾಸ್ಥಿತಿವಾದಿ ತಾರತಮ್ಯಗಳು ಮತ್ತು ವಿಶೇಷಾಧಿಕಾರಗಳನ್ನು ಕಾಪಾಡಲು ಕಾಯಿದೆ ಕಾನೂನು ಮಾಡುವ ಯಾವುದೇ ಸರ್ಕಾರ ಕೂಡ ನ್ಯಾಯಬಾಹಿರ. ಭಾರತ ಸ್ವತಂತ್ರ ದೇಶವಾಗಿ ನಮ್ಮದೇ ಜನರ ಸರ್ಕಾರ ಬಂದ ನಂತರವೂ ಬಡವರು-ಬಲ್ಲಿದರು, ಉಳುವವರು-ಜಮೀನುದಾರರ ನಡುವಣ ತಾರತಮ್ಯ ಎಂದಿನಂತೆ ಕೊನೆಸಾಗಿದರೆ ಅದಕ್ಕಿಂತ ಹೀನಾಯ ಮತ್ತೊಂದೇನಿದೆ. ಸಮಾನತೆ ಎಂಬುದು ನೆಲೆಸುವ ತನಕ ಸ್ವಾತಂತ್ರ್ಯವನ್ನು ನೀಡಬೇಡ ಎಂದು ದೇವರಲ್ಲಿ ಪ್ರಾರ್ಥಿಸುವೆ. ಇಂತಹ ನಂಬಿಕೆಗಾಗಿ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚಿದರೂ ಪರವಾಗಿಲ್ಲ. ನಾನು ದೇವರಲ್ಲಿ ನಂಬಿಕೆ ಉಳ್ಳವನು. ದೇವರು ಎಲ್ಲರನ್ನೂ ಸಮಾನರನ್ನಾಗಿಯೇ ಸೃಷ್ಟಿಸುತ್ತಾನೆ ಎಂಬ ಅಶ್ಫಾಕ್ ಮಾತುಗಳಲ್ಲಿ ಆವರ ಮಾನವೀಯ ಚಿಂತನೆ ಹರಳುಗಟ್ಟಿದೆ. ಹಿಂದೂ-ಮುಸ್ಲಿಮರನ್ನು ಒಡೆವ ಪಿತೂರಿಯ ಕುರಿತೂ ಆತ ಮಾತಾಡಿದ್ದರು. ಅಂತಹವರೇ ದೇಶದ ನಿಜ ಶತ್ರುಗಳು ಎಂದು ಬಣ್ಣಿಸಿದ್ದರು.

ಅಶ್ಫಾಕ್ ಶಂಕೆ- ಸಂದೇಹಗಳು ಇಂದಿನ ಭಾರತದಲ್ಲಿ ನಿಜರೂಪ ಧರಿಸಿ ಅಬ್ಬರಿಸಿವೆ.


ಇದನ್ನೂ ಓದಿ: ಬಹುಜನ ಭಾರತ: ಕೋಮುವಾದದ ಇರುಳ ಸೀಳುವ ಬೆಳಕು ಭಗತ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...