Homeಚಳವಳಿಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್: ಸುಳ್ಳು, ಸಂಚು, ದಮನಗಳೇ ತಿರುಗುಬಾಣವಾದ ಗಳಿಗೆ

ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್: ಸುಳ್ಳು, ಸಂಚು, ದಮನಗಳೇ ತಿರುಗುಬಾಣವಾದ ಗಳಿಗೆ

ಜನವರಿ 26 ರ ಕೆಂಪುಕೋಟೆಯ ಅಹಿತಕರ ಘಟನೆಯನ್ನೇ ಮುಂದೆ ಮಾಡಿಕೊಂಡು, ಒಂದು ಅಪ್ರತಿಮ ಹೋರಾಟವನ್ನು ಬಲಪ್ರಯೋಗದಿಂದ ಹಿಮ್ಮೆಟ್ಟಿಸಲು ಯೋಚಿಸಿದ್ದ, ಯೋಜಿಸಿದ್ದ ಸರ್ಕಾರಕ್ಕೆ ಅದೇ ತಿರುಗುಬಾಣವಾಗುತ್ತಿದೆ.

- Advertisement -
- Advertisement -

ಉತ್ತರಪ್ರದೇಶ-ದೆಹಲಿ ಗಡಿಯ ಗಾಜಿಪುರ್‌‌ ಪ್ರದೇಶದಲ್ಲಿ ರಾಕೇಶ್ ಟಿಕಾಯತ್ ನೇತೃತ್ವದ ಭಾರತ್ ಕಿಸಾನ್ ಯುನಿಯುನ್ (ಬಿಕೆಯು) ಅಡಿಯಲ್ಲಿ 60 ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಮುಗಿಸಿಬಿಡಲು ಅರೆಸೇನಾ ತುಕಡಿಗಳು, ಸಿಅರ್‌ಪಿಎಫ್ ತುಕಡಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ಗುರುವಾರ ಸಂಜೆ ನಿಯೋಜಿಸಲಯಿತು.

ಇದಕ್ಕು ಮೊದಲೆ ಗುರುವಾರ ರಾತ್ರಿಯೊಳಗೆ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಬೇಕು ಎಂದು ಉತ್ತರಪ್ರದೇಶ ಆಡಳಿತವು ಹುಕುಂ ಚಲಾಯಿಸಿತ್ತು. ಮಧ್ಯರಾತ್ರಿ ಹೊತ್ತಿಗೆ ಪೊಲೀಸ್ ಲಾಠಿಗಳು, ಅಶ್ರುವಾಯು, ಜಲಫಿರಂಗಿಗಳನ್ನು ಬಳಸಿ ವ್ಯವಸ್ಥಿತವಾಗಿ ರೈತರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಸಂಚು ರೂಪುಗೊಂಡಿತ್ತು. ಅದಕ್ಕೆ ಪೂರ್ವಭಾವಿಯಾಗಿ 144 ಸೆಕ್ಷನ್ ಹೇರಲಾಗಿತ್ತು.

ಹರಿಯಾಣ

ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ

ಮೀಡಿಯಾಗಳು ಸಹಜವಾಗಿಯೇ ಪ್ರತಿಭಟನೆ ಮುಗಿದ ಕತೆ ಎನ್ನುತ್ತ, ಮತ್ತೆ ಮತ್ತೆ ದೆಹಲಿಯ ಅಹಿತಕರ ಘಟನೆಯ ತುಣಕನ್ನು ಪ್ರದರ್ಶಿಸುತ್ತಿದ್ದವು. ಇದು ದೇಶದ ಎಲ್ಲ ಭಾಗದ ರೈತರಷ್ಟೇ ಅಲ್ಲದೇ, ಈ ಚಳವಳಿಯನ್ನು ಬೆಂಬಲಿಸುತ್ತ ಬಂದವರೆಲ್ಲರಿಗೂ ಆತಂಕ, ಸಂಕಟ ಶುರುವಾಗಿತ್ತು. ಎಷ್ಟೋ ಜನ ಮಧ್ಯರಾತ್ರಿ 2 ರವರೆಗೂ ನಿದ್ದೆ ಮಾಡದೇ ಏನಾಗುವುದೋ ಎಂದು ಟಿವಿ, ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದರು.

ರಾತ್ರಿಯಾಗುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರೊಂದಿಗೆ ಬಂದು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಒತ್ತಡ ಹೇರುತ್ತ ಧಮಕಿ ಹಾಕತೊಡಗಿದರು. ಅವರ ಬೆನ್ನಿಗೆ ಪೊಲೀಸ್ ಪಡೆಯಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಆಗಲೇ ಭಯ ಹುಟ್ಟಿಸಿದ್ದರು. ಇನ್ನೇನು ದೌರ್ಜನ್ಯದಿಂದ ಅಲ್ಲಿನ ರೈತರನ್ನು ಓಡಿಸುತ್ತಾರೆ ಎನ್ನುವ ಹೊತ್ತಿಗೆ ಹಿರಿಯ ರೈತ ನಾಯಕ ರಾಕೇಶ್ ಟಿಕಾಯತ್ ಮೈಕ್ ತೆಗೆದುಕೊಂಡರು.

ಇದನ್ನೂ ಓದಿ: ರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌‌

ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್

ತೀವ್ರ ನೊಂದಿದ್ದ ಟಿಕಾಯತ್, “ನಾವು ಇಲ್ಲಿಂದ ಕದಲುವುದಿಲ್ಲ. ಗುಂಡಿಗೆ ಬೇಕಾದರೆ ಎದೆ ಕೊಡುತ್ತೇನೆ ಇಲ್ಲವೇ ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ಪೊಲೀಸರು ಮತ್ತು ಬಿಜೆಪಿಯವರು ಸೇರಿ ನಮ್ಮನ್ನೆಲ್ಲ ದೌರ್ಜನ್ಯದಿಂದ ಕೊಲ್ಲಲು ಬಂದಿದ್ದಾರೆ. ಆದರೆ ಯಾರೂ ಧೃತಿಗೆಡಬೇಡಿ” ಎನ್ನುತ್ತ ಭಾವುಕರಾದರು. ಅವರ ಕಣ್ಣುಗಳು ತೇವಗೊಂಡವು.

ಅಲ್ಲಿಗೇ ಮತ್ತೆ ರೈತರಲ್ಲಿ ಹೊಸ ಚೈತನ್ಯ ಸಂಚಯವಾಯಿತು. ನಾವ್ಯಾರೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಸಾರಿದರು. ಟಿಕಾಯತ್ ಭಾಷಣ ವೈರಲ್ ಆಯಿತು. ಇದು ಪಶ್ಚಿಮ ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿ ಪೊಲೀಸರ ಮೇಲೆ ಆಕ್ರೋಶ ಹೆಚ್ಚಲು ಕಾರಣವಾಯಿತು, ರಾತ್ರಿಯೇ ತಂಡೋಪತಂಡವಾಗಿ ಟ್ರ್ಯಾಕ್ಟರಿಗಳಲ್ಲಿ ರೈತರು ಗಾಜಿಪುರ್‌ದತ್ತ ಬರತೊಡಗಿದರು. ಆಗ ರೈತಶಕ್ತಿಯೇ ಪ್ರಭುತ್ವಕ್ಕೆ ಒಂದು ಮಾಸ್ಟರ್‌ಸ್ಟ್ರೋಕ್ ತೋರಿಸಿದಂತಾಗಿತು. ಮುಂಜಾನೆ ಹೊತ್ತಿಗೆ ರೈತರ ಜಮಾವಣೆ ಹೆಚ್ಚುತ್ತಲೇ ಹೋಯಿತು. ದೇಶದ ಎಲ್ಲೆಡೆಯಿಂದ ರೈತರಿಗೆ ಬೆಂಬಲ ದ್ವಿಗುಣಗೊಂಡಿತು.

ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಮಿಂದೆದ್ದ ರೈತ ಗಣರಾಜ್ಯೋತ್ಸವ: ವಿಶೇಷ ವರದಿ

ಜಾಟರ ಸಿಟ್ಟು ಬಿಜೆಪಿ ಮೇಲೆ

ಪಶ್ಚಿಮ ಉತ್ತರಪ್ರದೇಶ, ಹರಿಯಾಣ ಮತ್ತು ಪೂರ್ವ ರಾಜಸ್ತಾನದಲ್ಲಿ ಕೃಷಿಕ ಜಾಟ್ ಸಮುದಾಯ ಪ್ರಬಲವಾಗಿದೆ, ಜನಸಂಖ್ಯೆಯಲ್ಲೂ ಗಣನೀಯವಾಗಿದೆ. 2013 ರಲ್ಲಿ ಉತ್ತರಪ್ರದೇಶದ ಮುಜಾಫರ್‌ಘರ್‌ನಲ್ಲಿ ಸಂಭವಿಸಿದ (ಸೃಷ್ಟಿಸಿದ) ಹೇಯ ಕೋಮು ಗಲಭೆಯ ನಂತರ, ಜಾಟರು ಮತ್ತು ಮುಸ್ಲಿಮರ ನಡುವೆ ಬಿರುಕು ತಂದ ಬಿಜೆಪಿ ಅಲ್ಲಿ ಜಾಟರ ವೊಟ್‌ಬ್ಯಾಂಕ್ ಅನ್ನು ಭದ್ರಪಡಿಸಿಕೊಂಡು ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ.

ನೇರ ರಾಜಕಾರಣ ಮಾಡದಿದ್ದರೂ ಟಿಕಾಯತ್ ಸಹೋದರರು ಬಿಜೆಪಿಗೆ ಬಹಿರಂಗ ಬೆಂಬಲ ಕೊಡುತ್ತ ಬಂದಿದ್ದರು. ತಮ್ಮ ರೈತ ನಾಯಕ ಕಣ್ಣೀರು ಹಾಕುವಂತೆ ಮಾಡಿದ ಬಿಜೆಪಿ ವಿರುದ್ದ ಜಾಟರು ತಿರುಗಿ ಬೀಳಬಹುದು ಎಂದು ರಾಜಕಿಯ ವಿಶ್ಲೇಷಕರು ಅಬಿಪ್ರಾಯ ಪಟ್ಟಿದ್ದಾರೆ. ಶುಕ್ರವಾರ ಅದರ ಕುರುಹುಗಳು ಢಾಳಾಗಿಯೇ ಗೋಚರಿಸಿವೆ ಅಲ್ಲವೇ?

ತಿರುಗುಬಾಣ

ಈ ಮಾಸ್ಟರ್‌ಸ್ಟ್ರೋಕ್‌ನಿಂದಾಗಿ ಕೇಂದ್ರ ಸರ್ಕಾರದ ಸುಳ್ಳು, ಸಂಚು ಮತ್ತು ದಮನಕಾರಿ ಪ್ರವೃತ್ತಿಯೇ ಅದಕ್ಕೆ ತಿರುಗುಬಾಣವಾಗಿತು. ರಾತ್ರಿಯೇ ಸ್ಥಗಿತಗೊಂಡಿದ್ದ ವಿದ್ಯುತ್, ನೀರು ಸೌಲಭ್ಯ ಮುಂಜಾನೆ ವಾಪಸ್ ಬಂದಿತು. ಹೆಚ್ಚುವರಿ ತುಕಡಿಗಳು ಮತ್ತು ಪೊಲೀಸರನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಂಡಿತು. ಜಾಗ ಖಾಲಿ ಮಾಡಿಸಲು ಬಂದ ಸರ್ಕಾರವೇ ಜಾಗ ಖಾಲಿ ಮಾಡಬೇಕಾಯಿತು.

ಶುಕ್ರವಾರ ಮಧ್ಯಾಹ್ನ ಪಕ್ಷವೊಂದರ ಬಾಲಂಗೋಚಿಗಳಾದ ದುಷ್ಕರ್ಮಿಗಳು ಪ್ರತಿಭಟನೆಯ ಒಂದು ಸ್ಥಳಕ್ಕೆ ನುಗ್ಗಿ ದಾಂಧಲೆ ಮಾಡಿ, ರೈತರನ್ನು ಬೆದರಿಸಲು ನೋಡಿದರು. ರೈತರು ಅದಕ್ಕೆ ಪ್ರತ್ಯುತ್ತರ ನೀಡಿದರು.
ಶುಕ್ರವಾರ ಸಿಂಘುವಿನಲ್ಲಿ ಸಂಯುಕ್ತ್ ಕಿಸಾನ್ ಮೋರ್ಚಾ ತನ್ನ ಪ್ರತಿಭಟನೆಯನ್ನು ಚುರುಕುಗೊಳಿಸಿದೆ, ಪ್ರತಿಭಟನಾಕಾರರ ಹುಮ್ಮಸ್ಸನ್ನು ಹೆಚ್ಚಿಸಿದೆ.

ಸರ್ಕಾರ ಬೇರೊಂದು ಮಾರ್ಗದಲ್ಲಿ ದಮನ ಮಾಡಲು ಯತ್ನಿಸಬಹುದು. ಅದನ್ನು ವಿಫಲಗೊಳಿಸುವ ಶಕ್ತಿ ರೈತ ಹೋರಾಟಕ್ಕೆ ಇನ್ನಷ್ಟು ಸಂಚಯವಾಗಲಿ. ಅದಾಗಬೇಕೆಂದರೆ, ನಮ್ಮ ನಮ್ಮ ನೆಲೆಯಲ್ಲಿ ನಾವು ರೈತರ ಪರ ಧ್ವನಿ ಎತ್ತಬೇಕಾದ ತುರ್ತು ಸಮಯವಿದು.

ಇದನ್ನೂ ಓದಿ: ‘ಜ. 26ರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ’: ಬಿಜೆಪಿ ತೊರೆದ ಹಿರಿಯ ನಾಯಕ ರಾಂಪಾಲ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...