Homeಕರ್ನಾಟಕಮೋದಿಯವರ ಸಚಿವ ಸಂಪುಟದಲ್ಲಿ ‘ಸಾಮಾಜಿಕ ನ್ಯಾಯ’ದ ದನಿ ಹುಡುಕುತ್ತ....

ಮೋದಿಯವರ ಸಚಿವ ಸಂಪುಟದಲ್ಲಿ ‘ಸಾಮಾಜಿಕ ನ್ಯಾಯ’ದ ದನಿ ಹುಡುಕುತ್ತ….

ಇತರ ರಾಜ್ಯಗಳಲ್ಲಿ ಶೇ.50% ರಷ್ಟು ಮತ ಹಾಕಿದ ಆದಿವಾಸಿಗಳಿಗೆ ಕೇವಲ 2 ಸಚಿವ ಸ್ಥಾನ ನೀಡಿದರೆ, ಕರ್ನಾಟಕದಲ್ಲಿ ಎಲ್ಲ 7 ಮೀಸಲು ಕ್ಷೇತ್ರ ಗೆದ್ದರೂ ಒಬ್ಬರಿಗೂ ಸಚಿವಗಿರಿಯಿಲ್ಲ!

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ನಮ್ಮ ಅಧಿಕಾರ ಕೇಂದ್ರಗಳು ಎಂದಿಗೂ ಜನಪರವಲ್ಲ, ಹೀಗಾಗಿ ಇಲ್ಲಿ ಸಂಸತ್ತಿನಲ್ಲಿ ಸಾಮಾಜಿಕ ನ್ಯಾಯದ ಪ್ರಾಮಾಣಿಕ ದನಿ ಕೇಳೀತೇ ಎಂಬುದೂ ಸಂಶಯಾತ್ಮಕವೇ. ಸದ್ಯ ನಮ್ಮ ಸಂಸತ್ತಿಗೆ ಆಯ್ಕೆಯಾದವರು ಯಾವ ಯಾವ ಧರ್ಮ, ಸಮುದಾಯಕ್ಕೆ ಸೇರಿದವರು ಎಂಬ ಅಂಕಿಸಂಖ್ಯೆ ನೋಡಿದರೇನೇ ಇಲ್ಲಿ ‘ಬಹು ಸಂಖ್ಯಾತ’ರು ಪ್ರಬಲವಾಗಿ ಆವರಿಸುತ್ತಲೇ ಹೋಗುತ್ತಿರುವುದನ್ನು ಗಮನಿಸಬಹುದು…

ಈ 17ನೇ ಲೋಕಸಭೆಯಲ್ಲಿ ಶೇ, 90.4ರಷ್ಟು ಜಾತಿ- ಹಿಂದುಗಳು, ಶೇ. 5.2ರಷ್ಟು ಮುಸ್ಲಿಮರು (2014ಕ್ಕೆ ಹೋಲಿಸಿದರೆ ಈ ಸಲ ಐವರು ಮುಸ್ಲಿಂ ಎಂಪಿಗಳು ಹೆಚ್ಚಾಗಿದ್ದಾರೆ), ಶೇ. 4ರಷ್ಟು ಇತರೆ ಧಾರ್ಮಿಕ ಅಲ್ಪಸಂಖ್ಯಾತರು. ಬಿಜೆಪಿಯ ಎಂಪಿಗಳ ಪೈಕಿ ಶೇ. 99ರಷ್ಟು ಜಾತಿ-ಹಿಂದೂಗಳೇ.

ಜಾತಿ/ಸಮುದಾಯವಾರು ಲೆಕ್ಕಕ್ಕೆ ಬಂದರೆ, 542ರಲ್ಲಿ ಮೇಲ್ಜಾತಿಯವರ ಸಂಖ್ಯೆ 232, ಒಬಿಸಿ-120, ಎಸ್‍ಸಿ-86, ಎಸ್‍ಟಿ-52, ಧಾರ್ಮಿಕ ಅಲ್ಪಸಂಖ್ಯಾತರು-52.

ಕರ್ನಾಟಕದ ಉದಾಹರಣೆ ತೆಗೆದುಕೊಂಡರೆ, ಇಲ್ಲಿ 5 ಪರಿಶಿಷ್ಟ ಜಾತಿ ಮತ್ತು 2 ಪರಿಶಿಷ್ಟ ಪಂಗಡ ಮೀಸಲಿನ ಕ್ಷೇತ್ರಗಳೆಲ್ಲವೂ ಬಿಜೆಪಿಯ ಪಾಲಾಗಿವೆ. ಉಳಿದ ಸಾಮಾನ್ಯ ಕ್ಷೇತ್ರಗಳಲ್ಲಿ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರದ್ದೇ ಪ್ರಾಬಲ್ಯ! ಈ ಸಲ 9 ಲಿಂಗಾಯತ ಸಂಸದರು, 3 ಬ್ರಾಹಣ ಸಂಸದರು (ಎಲ್ಲ ಬಿಜೆಪಿ) ಆಯ್ಕೆಯಾಗಿದ್ದಾರೆ. 6 ಒಕ್ಕಲಿಗರು (ಬಿಜೆಪಿ 4, ಕಾಂಗ್ರೆಸ್ ಜೆಡಿಎಸ್ ತಲಾ ಒಂದು) ಸಂಸತ್ ಪ್ರವೇಶಿಸಿದ್ದಾರೆ. ಅಂದರೆ 28ರಲ್ಲಿ 18 ಸಂಸದರು ಮೇಲ್ಜಾತಿಗೆ ಸೇರಿದವರೇ!

ಉತ್ತರ ಭಾರತದ ಹಿಂದು ಬೆಲ್ಟಿನಲ್ಲಿ ಬಿಜೆಪಿ ಮೇಲ್ಜಾತಿ, ಒಬಿಸಿ ಮತ್ತು ಆದಿವಾಸಿಗಳನ್ನು ಕೇಂದ್ರಿಕರಿಸಿ ಚುನಾವಣಾ ತಂತ್ರ ಹೆಣೆದಿತ್ತು ಎಂದು ಲೋಕನೀತಿ-ಸಿಎಸ್‍ಡಿಎಸ್ ಸಂಸ್ಥೆಯ ಸಮೀಕ್ಷೆ ಹೇಳಿದೆ. ಇಂತಹ ಯಾವ ಪ್ಲಾನೂ ಅಲ್ಲಿನ ಕಾಂಗ್ರೆಸ್ ಮತ್ತು ಮಹಾಘಟಬಂಧನದ ಪಕ್ಷಗಳಿಗೆ ಇರಲೇ ಇಲ್ಲ. ಎಸ್‍ಪಿ-ಬಿಎಸ್‍ಪಿ ಮತ್ತು ಆರ್‍ಎಲ್‍ಡಿ ನಡುವೆ ಮತವರ್ಗಾವಣೆ ಆಗುತ್ತದೆ ಎಂಬ ದೃಢ ನಿರ್ಧಾರಕ್ಕೆ ಘಟಬಂಧನ ಜೋತು ಬಿದ್ದು ಹಿಂದಕ್ಕೆ ಚಲಿಸಿತು.

ಸಹಜವಾಗಿ ಈ ಸಲ ಮೇಲ್ಜಾತಿಯ ಮತಗಳನ್ನು ಪಕ್ಕ ಮಾಡಿಕೊಂಡಿದ್ದ ಬಿಜೆಪಿ, ಒಬಿಸಿ ಮತ್ತು ಆದಿವಾಸಿಗಳನ್ನು ಕೇಂದ್ರೀಕರಿಸಿ ತನ್ನ ಪ್ರಚಾರ ವ್ಯೂಹವನ್ನು ಹೆಣೆದಿತ್ತು.. ಡಿಸೆಂಬರ್‍ನಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 34ರಷ್ಟು ಆದಿವಾಸಿ ಮತಗಳು ಬಂದಿದ್ದರೆ ಈ ಲೊಕಸಭಾ ಚುನಾವಣೆಯಲ್ಲಿ ಅದು ಶೇ. 52ಕ್ಕೆ ಏರಿತ್ತು! ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಘಡ್, ಹಿಮಾಚಲ ಪ್ರದೇಶ, ಬಿಹಾರ್-ಹೀಗೆ ಆದಿವಾಸಿಗಳಿಂದ ಸಾಕಷ್ಟು ಮತ ಪಡೆದ ಬಿಜೆಪಿ ಈಗ ಅವರಿಗೆ ಕಾಟಾಚಾರಕ್ಕೆ ಎಂಬಂತೆ ಎರಡೇ ಎರಡು ಸಚಿವ ಸ್ಥಾನ ನೀಡಿದೆ.

ಕರ್ನಾಟಕದಲ್ಲಿ ಇಬ್ಬರು ಬ್ರಾಹ್ಮಣ ಬಿಜೆಪಿ ಸಂಸದರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಅಂದಾಜಿತ್ತು. ಕಳೆದ ಸಲ ಆರಂಭದಲ್ಲಿ ದಾವಣಗೆರೆಯ ಸಿದ್ದೇಶ್ವರ್ ಅವರಿಗೆ ಸಚಿವಗಿರಿ ಕೊಟ್ಟು ನಂತರ ಅವರನ್ನು ತೆಗೆದು ಹಾಕಲಾಗಿತ್ತು. 2018ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅನಂತ ಹೆಗಡೆಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಆಗ ಮೂವರು ಬ್ರಾಹ್ಮಣ ಸಂಸದರ ಪೈಕಿ ಇಬ್ಬರು ಸಚಿವರಾಗಿದ್ದರೆ ಬಿಜೆಪಿಯ ಬೆಂಬಲಿಗರು ಅನಿಸಿಕೊಂಡ ಲಿಂಗಾಯತ ಸಮುದಾಯಕ್ಕೆ ಯಾವ ಸಚಿವಗಿರಿಯೂ ಇರಲಿಲ್ಲ.

ಈ ಸಲ ಬೆಂಗಳೂರು ದಕ್ಷಿಣದ ಅನಂತಕುಮಾರ್ ಸಾವಿನ ಕಾರಣದಿಂದ ಆ ಕೋಟಾ ಅವರ ಶಿಷ್ಯ ಧಾರವಾಡದ ಪ್ರಹ್ಲಾದ್ ಜೋಶಿಗೆ ಸಿಕ್ಕಿದೆ. ಮತ್ತೆ ಒಕ್ಕಲಿಗರ ಕೋಟಾದಲ್ಲಿ ನಾಲ್ವರು ಒಕ್ಕಲಿಗ ಸಂಸದರ ಪೈಕಿ ‘ಹಿರಿಯ’ ಸದಾನಂದಗೌಡರಿಗೆ ಮತ್ತೆ ಚಾನ್ಸು ಲಭಿಸಿದೆ. ಇವರಿಬ್ಬರೂ ಕ್ಯಾಬಿನೆಟ್ ಸಚಿವರು. ಬೆಳಗಾವಿಯಿಂದ 4 ಸಲ ಗೆದ್ದಿರುವ ಸುರೇಶ ಅಂಗಡಿ ಎಂಬ ಬಣಜಿಗ ಲಿಂಗಾಯತರಿಗೆ ರಾಜ್ಯ ಸಚಿವ ಸ್ಥಾನವನ್ನಷ್ಟೇ ನೀಡಲಾಗಿದೆ.

ಯಡಿಯೂರಪ್ಪ ನೀಡಿದ ಪಟ್ಟಿಯಲ್ಲಿ ಒಬ್ಬರಿಗೂ ಸ್ಥಾನವಿಲ್ಲ! ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಗದ್ದಿಗೌಡರ್, ಹಾವೇರಿ ಶಿವಕುಮಾರ್ ಉದಾಸಿ, ಕೊಪ್ಪಳದ ಕರಡಿ ಸಂಗಣ್ಣ ಮತ್ತು ತುಮಕೂರಿನ ಬಸವರಾಜು- ಇವರಲ್ಲಿ ಒಬ್ಬಿಬ್ಬರಿಗೆ ಸಚಿವ ಸ್ಥಾನ ಅಪೇಕ್ಷಿಸಿದ್ದರು!

ಎಸ್‍ಸಿ, ಎಸ್ಟಿಗೆ ಶೂನ್ಯ!
ಕಳೆದ ಸಲ 2014ರಲ್ಲಿ ಬಿಜೆಪಿ 7 ಮೀಸಲು ಕ್ಷೇತ್ರಗಳಲ್ಲಿ ಕೇವಲ ವಿಜಯಪುರ ಒಂದರಲ್ಲಿ ಮಾತ್ರ ಗೆದ್ದಿತ್ತು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆಗ ವಿಜಯಪುರದ ರಮೇಶ ಜಿಗಜಿಗಣಿಯವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈ ಸಲ ಬಿಜೆಪಿ ಎಲ್ಲ 7 ಮೀಸಲು ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಆ ಸಮುದಾಯಗಳಿಗೆ ಸೇರಿದ ಒಬ್ಬ ಸಂಸದನಿಗೂ ಸಚಿವ ಸ್ಥಾನ ನೀಡಿಲ್ಲ. ಕಲಬುರ್ಗಿ ವಿಭಾಗದಲ್ಲೇ ಅದು 3 ಮೀಸಲು ಕ್ಷೇತ್ರಗಳನ್ನು ಗೆದ್ದಿದ್ದರೂ ಆ ಭಾಗಕ್ಕೂ ಮಣೆ ಹಾಕಿಲ್ಲ.
ಒಟ್ಟು 57 ಸಚಿವ ಸ್ಥಾನದಲ್ಲಿ 21ನ್ನು ಬ್ರಾಹ್ಮಣರಿಗೆ ನೀಡಿರುವ, ಸಂಘ ಪರಿವಾರ ನಿರ್ಧರಿಸುವ ಪಟ್ಟಿಯಲ್ಲಿ ಇನ್ನೆಂತಾ ಸಾಮಾಜಿಕ ನ್ಯಾಯ ಹುಡುಕೋಣ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...