Homeಕರ್ನಾಟಕಮೋದಿಯವರ ಸಚಿವ ಸಂಪುಟದಲ್ಲಿ ‘ಸಾಮಾಜಿಕ ನ್ಯಾಯ’ದ ದನಿ ಹುಡುಕುತ್ತ....

ಮೋದಿಯವರ ಸಚಿವ ಸಂಪುಟದಲ್ಲಿ ‘ಸಾಮಾಜಿಕ ನ್ಯಾಯ’ದ ದನಿ ಹುಡುಕುತ್ತ….

ಇತರ ರಾಜ್ಯಗಳಲ್ಲಿ ಶೇ.50% ರಷ್ಟು ಮತ ಹಾಕಿದ ಆದಿವಾಸಿಗಳಿಗೆ ಕೇವಲ 2 ಸಚಿವ ಸ್ಥಾನ ನೀಡಿದರೆ, ಕರ್ನಾಟಕದಲ್ಲಿ ಎಲ್ಲ 7 ಮೀಸಲು ಕ್ಷೇತ್ರ ಗೆದ್ದರೂ ಒಬ್ಬರಿಗೂ ಸಚಿವಗಿರಿಯಿಲ್ಲ!

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ನಮ್ಮ ಅಧಿಕಾರ ಕೇಂದ್ರಗಳು ಎಂದಿಗೂ ಜನಪರವಲ್ಲ, ಹೀಗಾಗಿ ಇಲ್ಲಿ ಸಂಸತ್ತಿನಲ್ಲಿ ಸಾಮಾಜಿಕ ನ್ಯಾಯದ ಪ್ರಾಮಾಣಿಕ ದನಿ ಕೇಳೀತೇ ಎಂಬುದೂ ಸಂಶಯಾತ್ಮಕವೇ. ಸದ್ಯ ನಮ್ಮ ಸಂಸತ್ತಿಗೆ ಆಯ್ಕೆಯಾದವರು ಯಾವ ಯಾವ ಧರ್ಮ, ಸಮುದಾಯಕ್ಕೆ ಸೇರಿದವರು ಎಂಬ ಅಂಕಿಸಂಖ್ಯೆ ನೋಡಿದರೇನೇ ಇಲ್ಲಿ ‘ಬಹು ಸಂಖ್ಯಾತ’ರು ಪ್ರಬಲವಾಗಿ ಆವರಿಸುತ್ತಲೇ ಹೋಗುತ್ತಿರುವುದನ್ನು ಗಮನಿಸಬಹುದು…

ಈ 17ನೇ ಲೋಕಸಭೆಯಲ್ಲಿ ಶೇ, 90.4ರಷ್ಟು ಜಾತಿ- ಹಿಂದುಗಳು, ಶೇ. 5.2ರಷ್ಟು ಮುಸ್ಲಿಮರು (2014ಕ್ಕೆ ಹೋಲಿಸಿದರೆ ಈ ಸಲ ಐವರು ಮುಸ್ಲಿಂ ಎಂಪಿಗಳು ಹೆಚ್ಚಾಗಿದ್ದಾರೆ), ಶೇ. 4ರಷ್ಟು ಇತರೆ ಧಾರ್ಮಿಕ ಅಲ್ಪಸಂಖ್ಯಾತರು. ಬಿಜೆಪಿಯ ಎಂಪಿಗಳ ಪೈಕಿ ಶೇ. 99ರಷ್ಟು ಜಾತಿ-ಹಿಂದೂಗಳೇ.

ಜಾತಿ/ಸಮುದಾಯವಾರು ಲೆಕ್ಕಕ್ಕೆ ಬಂದರೆ, 542ರಲ್ಲಿ ಮೇಲ್ಜಾತಿಯವರ ಸಂಖ್ಯೆ 232, ಒಬಿಸಿ-120, ಎಸ್‍ಸಿ-86, ಎಸ್‍ಟಿ-52, ಧಾರ್ಮಿಕ ಅಲ್ಪಸಂಖ್ಯಾತರು-52.

ಕರ್ನಾಟಕದ ಉದಾಹರಣೆ ತೆಗೆದುಕೊಂಡರೆ, ಇಲ್ಲಿ 5 ಪರಿಶಿಷ್ಟ ಜಾತಿ ಮತ್ತು 2 ಪರಿಶಿಷ್ಟ ಪಂಗಡ ಮೀಸಲಿನ ಕ್ಷೇತ್ರಗಳೆಲ್ಲವೂ ಬಿಜೆಪಿಯ ಪಾಲಾಗಿವೆ. ಉಳಿದ ಸಾಮಾನ್ಯ ಕ್ಷೇತ್ರಗಳಲ್ಲಿ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರದ್ದೇ ಪ್ರಾಬಲ್ಯ! ಈ ಸಲ 9 ಲಿಂಗಾಯತ ಸಂಸದರು, 3 ಬ್ರಾಹಣ ಸಂಸದರು (ಎಲ್ಲ ಬಿಜೆಪಿ) ಆಯ್ಕೆಯಾಗಿದ್ದಾರೆ. 6 ಒಕ್ಕಲಿಗರು (ಬಿಜೆಪಿ 4, ಕಾಂಗ್ರೆಸ್ ಜೆಡಿಎಸ್ ತಲಾ ಒಂದು) ಸಂಸತ್ ಪ್ರವೇಶಿಸಿದ್ದಾರೆ. ಅಂದರೆ 28ರಲ್ಲಿ 18 ಸಂಸದರು ಮೇಲ್ಜಾತಿಗೆ ಸೇರಿದವರೇ!

ಉತ್ತರ ಭಾರತದ ಹಿಂದು ಬೆಲ್ಟಿನಲ್ಲಿ ಬಿಜೆಪಿ ಮೇಲ್ಜಾತಿ, ಒಬಿಸಿ ಮತ್ತು ಆದಿವಾಸಿಗಳನ್ನು ಕೇಂದ್ರಿಕರಿಸಿ ಚುನಾವಣಾ ತಂತ್ರ ಹೆಣೆದಿತ್ತು ಎಂದು ಲೋಕನೀತಿ-ಸಿಎಸ್‍ಡಿಎಸ್ ಸಂಸ್ಥೆಯ ಸಮೀಕ್ಷೆ ಹೇಳಿದೆ. ಇಂತಹ ಯಾವ ಪ್ಲಾನೂ ಅಲ್ಲಿನ ಕಾಂಗ್ರೆಸ್ ಮತ್ತು ಮಹಾಘಟಬಂಧನದ ಪಕ್ಷಗಳಿಗೆ ಇರಲೇ ಇಲ್ಲ. ಎಸ್‍ಪಿ-ಬಿಎಸ್‍ಪಿ ಮತ್ತು ಆರ್‍ಎಲ್‍ಡಿ ನಡುವೆ ಮತವರ್ಗಾವಣೆ ಆಗುತ್ತದೆ ಎಂಬ ದೃಢ ನಿರ್ಧಾರಕ್ಕೆ ಘಟಬಂಧನ ಜೋತು ಬಿದ್ದು ಹಿಂದಕ್ಕೆ ಚಲಿಸಿತು.

ಸಹಜವಾಗಿ ಈ ಸಲ ಮೇಲ್ಜಾತಿಯ ಮತಗಳನ್ನು ಪಕ್ಕ ಮಾಡಿಕೊಂಡಿದ್ದ ಬಿಜೆಪಿ, ಒಬಿಸಿ ಮತ್ತು ಆದಿವಾಸಿಗಳನ್ನು ಕೇಂದ್ರೀಕರಿಸಿ ತನ್ನ ಪ್ರಚಾರ ವ್ಯೂಹವನ್ನು ಹೆಣೆದಿತ್ತು.. ಡಿಸೆಂಬರ್‍ನಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 34ರಷ್ಟು ಆದಿವಾಸಿ ಮತಗಳು ಬಂದಿದ್ದರೆ ಈ ಲೊಕಸಭಾ ಚುನಾವಣೆಯಲ್ಲಿ ಅದು ಶೇ. 52ಕ್ಕೆ ಏರಿತ್ತು! ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಘಡ್, ಹಿಮಾಚಲ ಪ್ರದೇಶ, ಬಿಹಾರ್-ಹೀಗೆ ಆದಿವಾಸಿಗಳಿಂದ ಸಾಕಷ್ಟು ಮತ ಪಡೆದ ಬಿಜೆಪಿ ಈಗ ಅವರಿಗೆ ಕಾಟಾಚಾರಕ್ಕೆ ಎಂಬಂತೆ ಎರಡೇ ಎರಡು ಸಚಿವ ಸ್ಥಾನ ನೀಡಿದೆ.

ಕರ್ನಾಟಕದಲ್ಲಿ ಇಬ್ಬರು ಬ್ರಾಹ್ಮಣ ಬಿಜೆಪಿ ಸಂಸದರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಅಂದಾಜಿತ್ತು. ಕಳೆದ ಸಲ ಆರಂಭದಲ್ಲಿ ದಾವಣಗೆರೆಯ ಸಿದ್ದೇಶ್ವರ್ ಅವರಿಗೆ ಸಚಿವಗಿರಿ ಕೊಟ್ಟು ನಂತರ ಅವರನ್ನು ತೆಗೆದು ಹಾಕಲಾಗಿತ್ತು. 2018ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅನಂತ ಹೆಗಡೆಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಆಗ ಮೂವರು ಬ್ರಾಹ್ಮಣ ಸಂಸದರ ಪೈಕಿ ಇಬ್ಬರು ಸಚಿವರಾಗಿದ್ದರೆ ಬಿಜೆಪಿಯ ಬೆಂಬಲಿಗರು ಅನಿಸಿಕೊಂಡ ಲಿಂಗಾಯತ ಸಮುದಾಯಕ್ಕೆ ಯಾವ ಸಚಿವಗಿರಿಯೂ ಇರಲಿಲ್ಲ.

ಈ ಸಲ ಬೆಂಗಳೂರು ದಕ್ಷಿಣದ ಅನಂತಕುಮಾರ್ ಸಾವಿನ ಕಾರಣದಿಂದ ಆ ಕೋಟಾ ಅವರ ಶಿಷ್ಯ ಧಾರವಾಡದ ಪ್ರಹ್ಲಾದ್ ಜೋಶಿಗೆ ಸಿಕ್ಕಿದೆ. ಮತ್ತೆ ಒಕ್ಕಲಿಗರ ಕೋಟಾದಲ್ಲಿ ನಾಲ್ವರು ಒಕ್ಕಲಿಗ ಸಂಸದರ ಪೈಕಿ ‘ಹಿರಿಯ’ ಸದಾನಂದಗೌಡರಿಗೆ ಮತ್ತೆ ಚಾನ್ಸು ಲಭಿಸಿದೆ. ಇವರಿಬ್ಬರೂ ಕ್ಯಾಬಿನೆಟ್ ಸಚಿವರು. ಬೆಳಗಾವಿಯಿಂದ 4 ಸಲ ಗೆದ್ದಿರುವ ಸುರೇಶ ಅಂಗಡಿ ಎಂಬ ಬಣಜಿಗ ಲಿಂಗಾಯತರಿಗೆ ರಾಜ್ಯ ಸಚಿವ ಸ್ಥಾನವನ್ನಷ್ಟೇ ನೀಡಲಾಗಿದೆ.

ಯಡಿಯೂರಪ್ಪ ನೀಡಿದ ಪಟ್ಟಿಯಲ್ಲಿ ಒಬ್ಬರಿಗೂ ಸ್ಥಾನವಿಲ್ಲ! ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಗದ್ದಿಗೌಡರ್, ಹಾವೇರಿ ಶಿವಕುಮಾರ್ ಉದಾಸಿ, ಕೊಪ್ಪಳದ ಕರಡಿ ಸಂಗಣ್ಣ ಮತ್ತು ತುಮಕೂರಿನ ಬಸವರಾಜು- ಇವರಲ್ಲಿ ಒಬ್ಬಿಬ್ಬರಿಗೆ ಸಚಿವ ಸ್ಥಾನ ಅಪೇಕ್ಷಿಸಿದ್ದರು!

ಎಸ್‍ಸಿ, ಎಸ್ಟಿಗೆ ಶೂನ್ಯ!
ಕಳೆದ ಸಲ 2014ರಲ್ಲಿ ಬಿಜೆಪಿ 7 ಮೀಸಲು ಕ್ಷೇತ್ರಗಳಲ್ಲಿ ಕೇವಲ ವಿಜಯಪುರ ಒಂದರಲ್ಲಿ ಮಾತ್ರ ಗೆದ್ದಿತ್ತು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆಗ ವಿಜಯಪುರದ ರಮೇಶ ಜಿಗಜಿಗಣಿಯವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈ ಸಲ ಬಿಜೆಪಿ ಎಲ್ಲ 7 ಮೀಸಲು ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಆ ಸಮುದಾಯಗಳಿಗೆ ಸೇರಿದ ಒಬ್ಬ ಸಂಸದನಿಗೂ ಸಚಿವ ಸ್ಥಾನ ನೀಡಿಲ್ಲ. ಕಲಬುರ್ಗಿ ವಿಭಾಗದಲ್ಲೇ ಅದು 3 ಮೀಸಲು ಕ್ಷೇತ್ರಗಳನ್ನು ಗೆದ್ದಿದ್ದರೂ ಆ ಭಾಗಕ್ಕೂ ಮಣೆ ಹಾಕಿಲ್ಲ.
ಒಟ್ಟು 57 ಸಚಿವ ಸ್ಥಾನದಲ್ಲಿ 21ನ್ನು ಬ್ರಾಹ್ಮಣರಿಗೆ ನೀಡಿರುವ, ಸಂಘ ಪರಿವಾರ ನಿರ್ಧರಿಸುವ ಪಟ್ಟಿಯಲ್ಲಿ ಇನ್ನೆಂತಾ ಸಾಮಾಜಿಕ ನ್ಯಾಯ ಹುಡುಕೋಣ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...