Homeಮುಖಪುಟಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕೋರಿ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ

- Advertisement -
- Advertisement -

ಲಕ್ಷ ಕಂಠ ಗೀತಾ ಪಾರಾಯಣ (ಸುಮಾರು 5 ಲಕ್ಷ ಜನರಿಂದ ಭಗವದ್ಗೀತೆ ಪಾರಾಯಣ) ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಬಡ ಮುಸ್ಲಿಂ ವ್ಯಾಪಾರಿಗೆ ಥಳಿಸಿದ ಘಟನೆ ಭಾನುವಾರ (ಡಿಸೆಂಬರ್ 7) ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಘಟನೆ ಸಂಬಂಧ ಪ್ರಮುಖ ಆರೋಪಿಗಳಾದ ಸೌಮಿಕ್ ಗೋಲ್ಡರ್ (23), ಸ್ವರ್ಣೇಂದು ಚಕ್ರವರ್ತಿ (32) ಮತ್ತು ತರುಣ್ ಭಟ್ಟಾಚಾರ್ಯ (51) ಅವರನ್ನು ಬುಧವಾರ (ಡಿಸೆಂಬರ್ 11) ಬೆಳಿಗ್ಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸೌಮಿಕ್ ಗೋಲ್ಡರ್ ಪ್ರಕರಣ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.

ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ರಾಜಕೀಯ ಸಮಾವೇಶಗಳು ಸೇರಿದಂತೆ ವಿವಿಧ ರೀತಿಯ ಬೃಹತ್ ಕಾರ್ಯಕ್ರಮಗಳು ನಡೆಯುವಾಗ ಕಲರ್‌ಫುಲ್ ಟ್ಯೂಬ್ ಪಾಪಡ್, (ಬಣ್ಣದ ನಳಿಕೆ ರೀತಿಯ ಹಪ್ಪಳ), ಲೋಝೆಂಜ್‌ಗಳು (ಮಾತ್ರೆ ರೀತಿಯ ಬಣ್ಣ ತಿಂಡಿಗಳು), ಕಾಟನ್ ಕ್ಯಾಂಡಿ, ಸ್ಕಿನ್ನಿ ಐಸ್‌ಕ್ರೀಮ್ ಸ್ಟಿಕ್‌ಗಳು ಇತ್ಯಾದಿ ಸಣ್ಣಪುಟ್ಟ ತಿಂಡಿ-ತಿನಿಸುಗಳನ್ನು ಮಾರಿ ಜೀವನ ನಡೆಸುವ ನೂರಾರು ಮಂದಿಯಿದ್ದಾರೆ.

ಅಂತಹ ಮಾರಾಟಗಾರರಲ್ಲಿ ಹಲ್ಲೆಗೊಳಗಾದ ಶೇಖ್ ರಿಯಾಝುಲ್ ಕೂಡ ಒಬ್ಬರು. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಅರಂಬಾಗ್ ನಿವಾಸಿಯಾದ ಇವರು, ಸುಮಾರು ಇಪ್ಪತ್ತು ವರ್ಷಗಳಿಂದ ಕೋಲ್ಕತ್ತಾದಲ್ಲಿ ಪಫ್ಸ್ ಮಾರಾಟ ಮಾಡುತ್ತಿದ್ದಾರೆ ಎಂದು ದಿ ವೈರ್ ವರದಿ ಹೇಳಿದೆ.

ಭಾನುವಾರದ ಭಗವದ್ಗೀತೆ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ರಿಯಾಝುಲ್ ಅವರು ವೆಜ್ ಮತ್ತು ಚಿಕನ್ ಎರಡೂ ರೀತಿಯ ಪಫ್ಸ್‌ಗಳನ್ನು ಬಾಕ್ಸ್‌ವೊಂದರಲ್ಲಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು.

ಈ ವೇಳೆ, ಕೆಲವರು ನಿಮ್ಮ ಬಾಕ್ಸ್‌ನಲ್ಲಿ ಚಿಕನ್ ಪಫ್ಸ್ ಇದೆಯಾ? ಎಂದು ರಿಯಾಝುಲ್ ಅವರಿಗೆ ಕೇಳಿದ್ದಾರೆ. ರಿಯಾಝುಲ್ ಇದೆ ಎಂದಾಗ ಅವರು ಥಳಿಸಲು ಶುರು ಮಾಡಿದ್ದಾರೆ. ರಿಯಾಝುಲ್ ಅವರ ಹೆಸರು ಗೊತ್ತಾದ ಮೇಲೆ ಇನ್ನಷ್ಟು ತೀವ್ರವಾಗಿ ಥಳಿಸಿದ್ದಾರೆ. ಅಲ್ಲದೆ, ಬಸ್ಕಿ ಹೊಡೆಸಿದ್ದಾರೆ ಎಂದು ದಿ ವೈರ್ ವರದಿ ವಿವರಿಸಿದೆ.

“ಅವರು ನನ್ನಲ್ಲಿದ್ದ 3 ಸಾವಿರ ರೂಪಾಯಿ ವಸ್ತುವನ್ನು ಹಾಳುಗಡೆವಿದರು. ಆ ಮೊತ್ತ ನನ್ನ ಒಂದು ವಾರದ ಆದಾಯಕ್ಕಿಂತ ಹೆಚ್ಚು” ಎಂದು ರಿಯಾಝುಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ರಿಯಾಝುಲ್ ಪ್ರತಿದಿನ ಕೋಲ್ಕತ್ತಾದ ಮಧ್ಯಭಾಗದಲ್ಲಿರುವ ಬೇಕರಿಯೊಂದರಿಂದ ವೋಲ್‌ಸೇಲ್ ದರದಲ್ಲಿ ಪಫ್ಸ್ ಖರೀದಿಸಿ, ನಗರದ ವಿವಿಧ ಭಾಗಗಳಲ್ಲಿ ನಡೆದುಕೊಂಡು ಹೋಗಿ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಗಳು ಅಥವಾ ದೊಡ್ಡ ರಾಜಕೀಯ ಸಮಾವೇಶಗಳು ಇದ್ದರೆ, ಅಲ್ಲಿಯೇ ವ್ಯಾಪಾರ ಮಾಡಿ ದಿನವೊಂದಕ್ಕೆ 500 ರಿಂದ 1,000 ರೂ.ಗಳವರೆಗೆ ಗಳಿಸುತ್ತಿದ್ದರು. ಸಾಮಾನ್ಯ ದಿನಗಳಲ್ಲಿ, ಅವರ ಆದಾಯ 200-300 ರೂ. ಇತ್ತು. ತಲಾ 30-35 ರೂ. ಬೆಲೆಗೆ ಪಫ್ಸ್ ಮಾರುತ್ತಿದ್ದರು. ಕೆಲಸ ನಿಮಿತ್ತ ನಗರದ ಖಿದ್ದರ್ಪೋರ್‌ನಲ್ಲಿ ವಾಸಿಸುತ್ತಿದ್ದರು.

ರಿಯಾಝುಲ್ ಈ ಪಫ್ಸ್ ಮಾರಿಯೇ ಜೀವನದ ಬಂಡಿ ಓಡಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಹೈದರಾಬಾದ್‌ನಲ್ಲಿ ಆಭರಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ವರ್ಕ್‌ಶಾಪ್‌ ಒಂದರಲ್ಲಿ ಅಪ್ರೆಂಟಿಸ್ ಆಗಿದ್ದಾನೆ.

ಹಲ್ಲೆಯ ವಿಡಿಯೋ ಬಹಿರಂಗವಾದಾಗಿನಿಂದ ನನ್ನ ಕುಟುಂಬ ಭಯದಿಂದ ಬದುಕುತ್ತಿದೆ ಎಂದು ರಿಯಾಝುಲ್ ಹೇಳಿಕೊಂಡಿದ್ದಾರೆ. “ನನಗೆ ಏನಾಯಿತು ಎಂದು ನನ್ನ ಮನೆಯವರು ಅಳುತ್ತಿದ್ದಾರೆ. ಅವರು ಭಯಭೀತರಾಗಿದ್ದಾರೆ. ನಾನು ಕಡು ಬಡವ. ಈಗ ನನಗೆ ನನ್ನ ಕುಟುಂಬದ ಭವಿಷ್ಯದ ಚಿಂತೆಯಾಗಿದೆ. ನಾನು ಯಾರನ್ನೂ ಮಾಂಸಹಾರ ಖರೀದಿಸಲು ಒತ್ತಾಯಿಸಿಲ್ಲ. ಆದರೂ, ಅವರು ನನಗೆ ಏಕೆ ಹೊಡೆದರು ಎಂದು ಗೊತ್ತಿಲ್ಲ” ಎಂದಿದ್ದಾರೆ.

ರಿಯಾಝುಲ್ ಮೇಲೆ ಹಲ್ಲೆ ನಡೆದಿರುವುದು ಒಂದು ಘಟನೆ ಮಾತ್ರವಲ್ಲ. ಟೋಪ್ಸಿಯಾ ಮೂಲದ ಶೇಖ್ ಸಲಾವುದ್ದೀನ್ ಎಂಬ ಮಾರಾಟಗಾರ ಸೇರಿದಂತೆ ಕನಿಷ್ಠ ಇಬ್ಬರು ಇತರ ಪಫ್ಸ್ ಮಾರಾಟಗಾರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

“ಅವತ್ತು ನನ್ನ ಮೇಲೆಯೂ ಹಲ್ಲೆ ನಡೆಯುತ್ತಿತ್ತು. ಆದರೆ, ನಾನು ಆಗಲೇ ಮನೆಗೆ ಹೋದ ಕಾರಣ ಸ್ವಲ್ಪದರಲ್ಲಿ ಪಾರಾದೆ. ನಮ್ಮಲ್ಲಿ ಸುಮಾರು 15ರಿಂದ 20 ಜನರು ಪಫ್ಸ್ ಮಾರುತ್ತಾರೆ. ದುರ್ಗಾ ಪೂಜೆಯಿಂದ ಹಿಡಿದು ವಿವಿಧ ಪಂದ್ಯಾಟಗಳವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಹಲವು ವರ್ಷಗಳಿಂದ ನಾವು ಪಫ್ಸ್ ಮಾರಿದ್ದೇವೆ. ಎಂದಿಗೂ ಇಂತಹ ಅನುಭ ಆಗಿಲ್ಲ ಎಂದು ರಿಯಾಝುಲ್ ಅವರ ಸ್ನೇಹಿತ ಹಾಗೂ ಪಫ್ಸ್ ಮಾರಾಟಗಾರ ಶೇಖ್ ಮೊಯ್ದುಲ್ ಇಸ್ಲಾಂ ಹೇಳಿರುವುದಾಗಿ ದಿ ವೈರ್‌ ತಿಳಿಸಿದೆ.

ರಿಯಾಝುಲ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್) (ಸಿಪಿಐ(ಎಂ)) ನಾಯಕ ಮತ್ತು ವಕೀಲ ಸಯಾನ್ ಬಂಡೋಪಾಧ್ಯಾಯ ಅವರು ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನುಸಾರ ಇದು ಗುಂಪು ಹತ್ಯೆಗೆ ಸಮಾನವಾದ ಪ್ರಕರಣ ಎಂದಿದ್ದಾರೆ. ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಳ್ಳಲು ಮನವಿ ಮಾಡಿದ್ದಾರೆ.

ಬಂಡೋಪಾಧ್ಯಾಯ ಅವರು ಸೋಮವಾರ (ಡಿಸೆಂಬರ್ 8) ಮಧ್ಯಾಹ್ನ ಕೋಲ್ಕತ್ತಾದ ಮೈದಾನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ನೇರವಾಗಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ದೂರಿನ ಜೊತೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಬರೆದ ಪತ್ರದ ಪ್ರತಿಯನ್ನೂ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಗುಂಪು ಹಲ್ಲೆ ಕೂಡ ‘ಗುಂಪು ಹತ್ಯೆ’ಯ ವ್ಯಾಪ್ತಿಗೆ ಬರುತ್ತದೆ. ಈ ಘಟನೆ ಕೋಲ್ಕತ್ತಾದ ಹೃದಯ ಭಾಗದಲ್ಲಿ ನಡೆದಿದೆ, ದೂರದ ಜಿಲ್ಲೆಯಲ್ಲಿ ಅಲ್ಲ. ಇಂತಹ ಘಟನೆ ನಗರದ ಮಧ್ಯಭಾಗದಲ್ಲಿ ನಡೆದಿದ್ದರೂ ಕೋಲ್ಕತ್ತಾ ಪೊಲೀಸರು ಮೌನವಾಗಿದ್ದಾರೆ. ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು ಎಂದು ಬಂಡೋಪಾಧ್ಯಾಯ ಹೇಳಿದ್ದರು.

ಪ್ರಮುಖ ಆರೋಪಿ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಪದಾಧಿಕಾರಿ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.

ಸಿಪಿಐ(ಎಂ) ನಾಯಕಿ ದೀಪ್ಸಿತಾ ಧರ್ ರಿಯಾಝುಲ್ ಮೇಲಿನ ದಾಳಿಯ ವಿರುದ್ಧ ಮೊದಲು ಧ್ವನಿ ಎತ್ತಿದವರು. ಇವರು ಸಂತ್ರಸ್ತ ವ್ಯಾಪಾರಿಗಳಿಗೆ ಪರಿಹಾರ ನೀಡಲು ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ.

ಮಾಂಸಹಾರ ಸಾಮಾನ್ಯವಾಗಿರುವ ಬಂಗಾಳದಂತಹ ಸ್ಥಳದಲ್ಲಿ ಮಾಂಸಹಾರ ಮಾರಾಟದ ಹೆಸರಿನಲ್ಲಿ ಹಲ್ಲೆ ನಡೆದಿರುವುದು ಆಶ್ಚರ್ಯಕರ. ವೈರಲ್ ವಿಡಿಯೋದಲ್ಲಿ ಹಲ್ಲೆಕೋರರು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಏಕೆ? ಚುನಾವಣಾ ಲಾಭಕ್ಕಾಗಿ ಈ ದ್ವೇಷ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತಿದೆಯೇ ಎಂದು ನಾನು ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ಪ್ರಶ್ನಿಸಲು ಬಯಸುತ್ತೇವೆ ಎಂದು ದೀಪ್ಸಿತಾ ಧರ್ ಹೇಳಿದ್ದರು.

“ನೀವು ಮಾಂಸಾಹಾರ ತಿನ್ನದಿದ್ದರೆ ಖರೀದಿಸಬೇಡಿ, ಆದರೆ ಮಾರಾಟಗಾರನಿಗೆ ಥಳಿಸಿದ್ದು ಏಕೆ? ಅದು ಅವರ ಜೀವನೋಪಾಯ. ನಾನು ಈ ಘಟನೆಯನ್ನು ಖಂಡಿಸುತ್ತೇನೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಬರೆದುಕೊಂಡಿದ್ದರು.

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋವಾ ನೈಟ್ ಕ್ಲಬ್ ಮಾಲೀಕರ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ: ಥೈಲ್ಯಾಂಡ್‌ನಿಂದಲೂ ಗಡಿಪಾರು ಪ್ರಕ್ರಿಯೆ ಆರಂಭ 

ನವದೆಹಲಿ: ಕಳೆದ ವಾರ ಕನಿಷ್ಠ 25 ಜನರ ಸಾವಿಗೆ ಕಾರಣವಾಗಿದ್ದ, ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುಥ್ರಾಸ್ ಅವರ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು...

ಮಾದಕ ದ್ರವ್ಯ ಬಳಕೆ-ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ: ಪರಮೇಶ್ವರ್

ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಗುರುವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ...

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ 'ಟ್ರಂಪ್ ಗೋಲ್ಡ್ ಕಾರ್ಡ್'ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ. 'ಟ್ರಂಪ್ ಗೋಲ್ಡ್...

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲು ಶಿಕ್ಷೆ ಅಮಾನತು ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್

1996 ರ ಮಾದಕ ದ್ರವ್ಯ ವಶ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಗುರುವಾರ ಅವರ ಬಿಡುಗಡೆಗಾಗಿನ ಪ್ರಯತ್ನ...

ಅರುಣಾಚಲ ಪ್ರದೇಶ: ಟ್ರಕ್ ಕಂದಕಕ್ಕೆ ಉರುಳಿ ಅಸ್ಸಾಂ ಮೂಲದ 21 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ, 18 ಮೃತದೇಹಗಳು ಪತ್ತೆ

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಅಸ್ಸಾಂನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಉರುಳಿದ್ದು, 21 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲಿಯವರೆಗೆ 18 ಶವಗಳನ್ನು ಹೊರತೆಗೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.  ಡಿಸೆಂಬರ್ 8ನೇ...

ಜಾರ್ಖಂಡ್‌ನ 27 ಮಕ್ಕಳು ನೇಪಾಳಕ್ಕೆ ಕಳ್ಳಸಾಗಣೆ; ತನಿಖೆ ಆರಂಭಿಸಿದ ಪೊಲೀಸರು

ಉತ್ತಮ ಶಿಕ್ಷಣ ಒದಗಿಸುವ ನೆಪದಲ್ಲಿ 27 ಮಕ್ಕಳನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಪೊಲೀಸರು ಗುರುವಾರ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಕ್ಕಳನ್ನು...

ಉಮರ್ ಖಾಲಿದ್‌ಗೆ 14 ದಿನಗಳ ಮಧ್ಯಂತರ ಜಾಮೀನು; ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ

ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ಡಿಸೆಂಬರ್ 27 ರಂದು ನಿಗದಿಯಾಗಿದ್ದ ತಮ್ಮ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 16 ರಿಂದ 29 ರವರೆಗೆ 14 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು....

ಜಾತ್ಯತೀತತೆಯನ್ನು ಮಾತ್ರ ನಂಬುತ್ತೇನೆ; ಕೋಮುವಾದವನ್ನಲ್ಲ: ಮಮತಾ ಬ್ಯಾನರ್ಜಿ

ನಾನು ಕೋಮುವಾದದಲ್ಲಿ ನಂಬಿಕೆ ಇಡುವುದಿಲ್ಲ. ಜಾತ್ಯತೀತತೆಯನ್ನು ಮಾತ್ರ ನಂಬುತ್ತೇನೆ. ಚುನಾವಣೆ ಸಮೀಪಿಸಿದಾಗಲೆಲ್ಲಾ, ಬಿಜೆಪಿ ಹಣವನ್ನು ಬಳಸಿ ಇತರ ರಾಜ್ಯಗಳಿಂದ ಜನರನ್ನು ಕರೆತಂದು ಸಾರ್ವಜನಿಕರನ್ನು ವಿಭಜಿಸಲು ಪ್ರಯತ್ನಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ...

ಅತ್ಯಾಚಾರ ಪ್ರಕರಣದ ವಿಚಾರಣೆ ವರ್ಗಾವಣೆ ಕೋರಿ ಪ್ರಜ್ವಲ್ ರೇವಣ್ಣ ಮನವಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರುವ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳನ್ನು ಬೇರೆ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್‌...

ಪರಿಶಿಷ್ಟ ಜಾತಿ ಪಟ್ಟಿಗೆ ಜಮ್ಮು-ಕಾಶ್ಮೀರದ ವಾಲ್ಮೀಕಿ ಸಮುದಾಯ: ಒಕ್ಕೂಟ ಸರ್ಕಾರ

ಜಮ್ಮು ಮತ್ತು ಕಾಶ್ಮೀರದ ವಾಲ್ಮೀಕಿ ಸಮುದಾಯವನ್ನು ಈಗ ಅಧಿಕೃತವಾಗಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬುಧವಾರ ಸಂಸತ್ತಿಗೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಕ್ರಿಯೆಗೊಳಿಸಲಾದ...