Homeಮುಖಪುಟವಿಕಲಾಂಗಚೇತನರ ಕಲ್ಯಾಣಕ್ಕಾಗಿ ತಮಿಳುನಾಡಿಗೆ ರಾಷ್ಟ್ರೀಯ ಪ್ರಶಸ್ತಿ

ವಿಕಲಾಂಗಚೇತನರ ಕಲ್ಯಾಣಕ್ಕಾಗಿ ತಮಿಳುನಾಡಿಗೆ ರಾಷ್ಟ್ರೀಯ ಪ್ರಶಸ್ತಿ

- Advertisement -
- Advertisement -

‘ವಿಕಲಾಂಗಚೇತನರ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಅತ್ಯುತ್ತಮ ರಾಜ್ಯ’ ಎಂದು ತಮಿಳುನಾಡು ಗುರುತಿಸಲ್ಪಟ್ಟಿದೆ. ಸಾಮಾಜಿಕ ನ್ಯಾಯ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಸಚಿವಾಲಯವು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಅಂತರಾಷ್ಟ್ರೀಯ ದಿನದಂದು (ಶುಕ್ರವಾರ) ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ತಮಿಳುನಾಡಿನ ಆರು ವಿಕಲಾಂಗ ನಾಗರಿಕರ ಗಣನೀಯ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಯವರು ಪ್ರಶಸ್ತಿಗಳನ್ನು ನೀಡಿದ್ದಾರೆ.

ತಮಿಳುನಾಡು ಸರ್ಕಾರವು ವಿಕಲಾಂಗಚೇತನರ ಜೀವನ ಮಟ್ಟವನ್ನು ಸುಧಾರಿಸಲು ವಿಕಲಚೇತನರ ಶಿಕ್ಷಣ ಮತ್ತು ಉದ್ಯೋಗದ ಮೇಲೆ ಹೆಚ್ಚುವರಿ ಗಮನವನ್ನು ಹರಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ರಾಜ್ಯ ಕಮಿಷನರೇಟ್ ಶ್ರಮಿಸಿದೆ. ವಿಕಲಾಂಗಚೇತನ ವ್ಯಕ್ತಿಗಳು ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಕಾರ ನೀಡಲಾಗಿದೆ.

“ಲಾಕ್‌ಡೌನ್ ಸಮಯದಲ್ಲಿ ಅಂಗವಿಕಲರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಮನೆ-ಮನೆಗೆ ಪ್ರಚಾರವನ್ನು ಪ್ರಾರಂಭಿಸಿದೆವು. ಇಲಾಖೆಯಿಂದ ಈಗಾಗಲೇ ಗುರುತಿಸಲ್ಪಟ್ಟವರಲ್ಲದೆ, ಅಧಿಕಾರಿಗಳು ಮತ್ತು ಸ್ವಯಂಸೇವಕರ ಸ್ಥಳೀಯ ಸಂಪರ್ಕಗಳ ಮೂಲಕ ನಮ್ಮ ದಾಖಲೆಗಳಲ್ಲಿಲ್ಲದ ಜನರನ್ನೂ ನಾವು ತಲುಪಿದ್ದೇವೆ ” ಎಂದು ರಾಜ್ಯ ವಿಕಲಚೇತನರ ಕಲ್ಯಾಣ ಆಯುಕ್ತ ಜಾನಿ ಟಾಮ್ ವರ್ಗೀಸ್ ಹೇಳಿದ್ದಾರೆ.

ನಗದು ನೆರವು ಮತ್ತು ಔಷಧಿಗಳನ್ನು ಒದಗಿಸುವುದು, ವೈದ್ಯಕೀಯ ಉಪಕರಣಗಳನ್ನು ದೊರಕಿಸುವುದು, ಆನ್‌ಲೈನ್ ಫಿಸಿಯೋಥೆರಪಿ ಸೆಷನ್‌ಗಳನ್ನು ನೀಡುವುದು ಇಷ್ಟೇ ಅಲ್ಲದೇ, ವಿಕಲಾಂಗಚೇತನರಿಗೆ ಮತ್ತು ವೃದ್ಧರಿಗೆ ಲಸಿಕೆ ಹಾಕಿಸಲು ಮನೆಮನೆಗೆ ಭೇಟಿ ನೀಡಲಾಗಿದೆ. ಶೇ. 70ಕ್ಕಿಂತ ಹೆಚ್ಚು ವಯಸ್ಕ ವಿಕಲಾಂಗ ಚೇತನರಿಗೆ ಈ ಕಾರ್ಯಕ್ರಮ ತಲುಪಿದೆ ಎನ್ನುತ್ತಾರೆ ಅಧಿಕಾರಿಗಳು.

ವಿಕಲಚೇತನರ ಉದ್ಯೋಗ ಮತ್ತು ಜೀವನೋಪಾಯ ಕೇಂದ್ರವನ್ನು (DELC) ಸ್ಥಾಪಿಸಲಾಗಿದೆ. ಇದು ವಿಕಲಾಂಗ ವ್ಯಕ್ತಿಗಳ ಕೌಶಲ್ಯ, ಸಾಮಾಜಿಕ-ಆರ್ಥಿಕ ಸ್ಥಿತಿ ಮತ್ತು ಜೀವನೋಪಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಆಯುಕ್ತರು ಹೇಳಿದ್ದಾರೆ.

ಡಿಇಎಲ್‌ಸಿ ಕೇಂದ್ರವು ವಿಕಲಾಂಗ ಚೇತನರಿಗೆ ಉದ್ಯೋಗ ದೊರಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿತ್ತಿದೆ. ಕಾರ್ಯಕ್ರಮಗಳನ್ನು ನಡೆಸಲು ಕೌಶಲ್ಯ ಅಭಿವೃದ್ಧಿ ಮಿಷನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ವರ್ಗೀಸ್‌‌ ತಿಳಿಸಿದ್ದಾರೆ.

ಸೇಲಂ ಜಿಲ್ಲೆಯು ಪುನರ್ವಸತಿ ಸೇವೆಗಳನ್ನು ಒದಗಿಸುವ ಅತ್ಯುತ್ತಮ ಜಿಲ್ಲೆ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿ ಪಡೆದ ದೇಶದ ಎರಡು ಜಿಲ್ಲೆಗಳಲ್ಲಿ ಸೇಲಂ ಕೂಡ ಒಂದಾಗಿದೆ.


ಇದನ್ನೂ ಓದಿರಿ: ಎನ್‌‌ಇಪಿ: ಅವೈಜ್ಞಾನಿವಾಗಿ ಪಠ್ಯಕ್ರಮ ದಿಢೀರ್ ಬದಲು, ಮಹಾರಾಜ ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣಾ ಬಾಂಡ್’ ಯೋಜನೆ ಬಿಜೆಪಿ ಮತ್ತೆ ಜಾರಿಗೆ ತರಲಿದೆ?

0
ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದ 'ಚುನಾವಣಾ ಬಾಂಡ್ ಯೋಜನೆ'ಯನ್ನು ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಪ್ರತಿಪಕ್ಷಗಳು 'ಸ್ವತಂತ್ರ ಭಾರತದ...