Homeಮುಖಪುಟಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

ಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

- Advertisement -
- Advertisement -

ಜೀವನ ಕಲೆಗಳು ಅಂಕಣ – 6

ವ್ಯಕ್ತಿತ್ವ ವಿಕಸನ –5 ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ) ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಇದೇ ರೀತಿಯ, ಆದರೆ ಅಧಿಕ ವೈಜ್ಞಾನಿಕ ಪದ್ಧತಿ ಎನಿಸಿಕೊಂಡಿರುವುದು ಬಿಗ್-5 (ಒ.ಸಿ.ಇ.ಎ.ಎನ್.) ಫೈವ್ ಫ್ಯಾಕ್ಟರ್ ಮಾಡೆಲ್. ಇದೂ ಸಹ ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಹಲವಾರು ಕಂಪನಿಗಳು ತಮ್ಮ ನೌಕರಿ ಆಕಾಂಕ್ಷಿ ಅಭ್ಯರ್ಥಿಗಳನ್ನು ಈ ಒರೆಗಲ್ಲಿಗೆ ಹಚ್ಚಿ ತಮ್ಮ ಆಯ್ಕೆ ಮಾಡಿಕೊಳ್ಳುತ್ತಾರೆ.

ಗ್ರೀಕ್ ತತ್ವಜ್ಞಾನಿ ಮತ್ತು ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೇ ಖ್ಯಾತಿ ಪಡೆದ ಹಿಪ್ಪೊಕ್ರೇಟಿಸ್ II ಅವರ ತತ್ವವಾದ ಆಧರಿಸಿ, 1884ರಲ್ಲಿ ಸರ್ ಫ್ರಾನ್ಸಿಸ್ ಗಾಲ್ಟನ್ ಅವರ ವಾದವನ್ನು ಒರೆಹಚ್ಚಿದ ನಂತರ, 1936ರಲ್ಲಿ ಗೊರ್ಡನ್ ಆಲ್ಪೊರ್ಟ್ ಮತ್ತು ಎಸ್. ಒಡ್ಬರ್ಟ್ ಸೇರಿ ವ್ಯಕ್ತಿತ್ವದ ಬಗ್ಗೆ ಸುಮಾರು 4,500 ಗುಣಸೂಚಕಗಳ ಪಟ್ಟಿ ತಯಾರಿಸಿದರು. ಮುಂದೆ ಇನ್ನೂ ಹಲವಾರು ಸಂಶೋಧಕರು/ಶಾಸ್ತ್ರಜ್ಞರು ಇದಕ್ಕೆ ತಮ್ಮ ಮೌಲ್ಯವನ್ನು ಸೇರಿಸಿ, ಈಗಿರುವ ರೂಪಕ್ಕೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಂಬ್ರಿಜ್ ಎನಲಿಟಿಕಾ ಎಂಬ ಸಂಸ್ಥೆ ಇದನ್ನು ಬಳಸಿ ವಿವಾದ ಎಬ್ಬಿಸಿತ್ತು.

ನಿಮಗೂ ನಿಮ್ಮ OCEAN ಸೂಚ್ಯಾಂಕ ತಿಳಿಯಲು ಇಷ್ಟವಿದ್ದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ಕಿಸಿ:

ಈ ಮಾದರಿಯಲ್ಲಿ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಐದು ವಿಧವಾಗಿ ವಿಂಗಡಿಸಿ ಅದರ ಆಧಾರದ ಮೇಲೆ ಅವರು ಒಂಟಿಯಾಗಿ ಮತ್ತು ಒಂದು ತಂಡದ ಸದಸ್ಯರಾಗಿ ಹೇಗೆ ಬೇರೆ ಬೇರೆ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದನ್ನು ಅರಿತುಕೊಳ್ಳಬಹುದು. ಈ ಐದು ಗುಣಲಕ್ಷಣಗಳು ಹೀಗಿವೆ.

ಓಪನ್ನೆಸ್ ಟು ಎಕ್ಸ್ಪಿರಿಯೆನ್ಸ್ (Openness to Experience): ಅಂದರೆ ಹೊಸ ಅನುಭವಕ್ಕೆ ಸಿದ್ಧರೇ ಎಂಬ ಪ್ರಶ್ನೆ. ಇದರಲ್ಲಿ ವ್ಯಕ್ತಿಯಲ್ಲಿ ಎಷ್ಟು ಹೊಸತನ ಹುಡುಕುವ, ತಿಳಿಯುವ ಕುತೂಹಲ ಇದೆಯೇ ಅಥವಾ ಹೇಳಿದಷ್ಟು ಮಾಡುವ/ಜಾಗರೂಕತೆ ಮಾತ್ರ ಇದೆಯೇ ಎಂಬುದನ್ನು ಅರಿಯುವ ಪ್ರಯತ್ನ.

ಕಾನ್ಸೆನ್ಷಿಯಸ್ನೆಸ್(Conscientiousness): ಅಂದರೆ ಇವರ ಆತ್ಮಸಾಕ್ಷಿ/ಕರ್ತವ್ಯಜ್ಞಾನ ಹೇಗಿದೆ, ವ್ಯಕ್ತಿ ಸಮರ್ಥನೋ, ವ್ಯವಸ್ಥಿತನೋ ಅಥವಾ ಉದಾಸೀನ ಮನೋಭಾವನೋ ಎಂದು ಅರಿಯುವ ಪ್ರಯತ್ನ.

ಎಕ್ಸ್ಟ್ರಾವರ್ಷನ್ (Extraversion): ಅಂದರೆ ಇವರ ವ್ಯಕ್ತಿತ್ವ ಸ್ಪೂರ್ತಿಯುತ ಮತ್ತು ಬಾಹ್ಯ ಪ್ರವೃತ್ತಿಯೋ ಅಥವಾ ಏಕಾಂಗಿ ಮತ್ತು ಸಂಕೋಚದ ಸ್ವಭಾವವೋ ಎಂದು ಅರಿಯುವ ಪ್ರಯತ್ನ.

ಅಗ್ರೀಯಬಲ್ನೆಸ್(Agreeableness): ಅಂದರೆ ಒಪ್ಪಬಹುದಾದ ವ್ಯಕ್ತಿತ್ವವೇ? ಸ್ನೇಹಪರವೋ, ಬೇರೆಯವರ ಬಗ್ಗೆ ಅನುಕಂಪ ಇರುವಂತಹುದೋ ಅಥವಾ ಸ್ಪರ್ಧಾತ್ಮಕ ಮತ್ತು ನಿರ್ಲಿಪ್ತವಾದಿಯೋ ಎಂಬುದನ್ನು ಅರಿಯುವ ಪ್ರಯತ್ನ.

ನ್ಯೂರೋಟಿಸಿಸ್ಮ್(Neuroticism): ಅಂದರೆ ಇವರ ವ್ಯಕ್ತಿತ್ವ ವಿಪರೀತ ಸೂಕ್ಷ್ಮವೇದಿಯೋ ಅಥವಾ ಸುಭದ್ರ ಮತ್ತು ಆತ್ಮಸ್ಥೈರ್ಯವುಳ್ಳದ್ದೋ ಅದನ್ನು ಅರಿಯುವ ಪ್ರಯತ್ನ.

ಹೊಸ ಅನುಭವಕ್ಕೆ ಸಿದ್ದವಾದ ವ್ಯಕ್ತಿ ಸಾಮಾನ್ಯವಾಗಿ ಕಲಾಪ್ರೇಮಿ, ಸಾಹಸಪ್ರಿಯ, ಊಹಾಶಕ್ತಿಯುಳ್ಳ ಮತ್ತು ಕುತೂಹಲಶಾಲಿಯಾಗಿರುತ್ತಾರೆ. ಹೊಸದನ್ನು ಪ್ರಯತ್ನಿಸಲು ಮುಂದಾಗಿರುತ್ತಾರೆ, ಸೃಜನಾತ್ಮಕವಾಗಿರುತ್ತಾರೆ. ಮಿಕ್ಕವರಿಗಿಂತ ಅವರ ನಂಬಿಕೆ ವಿಭಿನ್ನವಾಗಿರುತ್ತದೆ. ಆದರೆ ಅತಿ ಕುತೂಹಲಕಾರಿ ನಡತೆ ನಕಾರಾತ್ಮಕ ಸೂಚಕವೂ ಆಗಿರಬಹುದು. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಹೊಸ ಯೋಚನೆಯನ್ನು ನಾನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ.

·         ನಾನು ಕಷ್ಟಕರ ಪದಗಳನ್ನು ಬಳಸುತ್ತೇನೆ.

·         ನನಗೆ ಅಮೂರ್ತದಲ್ಲಿ ಆಸಕ್ತಿ ಇಲ್ಲ (ತದ್ವಿರುದ್ಧ).

·         ನನಗೆ ಇದನ್ನು ಊಹಿಸಿಕೊಳ್ಳುವುದು ಕಷ್ಟ (ತದ್ವಿರುದ್ಧ).

ಕರ್ತವ್ಯಜ್ಞಾನಿಗಳು ತಮ್ಮ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಇನ್ನೊಬ್ಬರ ಅಪೇಕ್ಷೆಗೆ ಅಥವಾ ಅದನ್ನು ಮೀರಿ ಕೆಲಸ ಮಾಡುತ್ತಾರೆ. ಇವರನ್ನು ಕೆಲವರು ಕಟ್ಟುನಿಟ್ಟು ಅಥವಾ ಮೊಂಡರು ಎಂದೂ ಭಾವಿಸಬಹುದು. ಹಾಗೆಯೇ ನಿಯಮ ಪಾಲನೆ ಮಾಡದವರನ್ನು ಕಾಲಕ್ಕೆ ತಕ್ಕಂತೆ ಬಗ್ಗುವವರೆಂದು ಪರಿಗಣಿಸಬಹುದು. ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ನಿಯಮಪಾಲಕರಲ್ಲದವರು ವಯಸ್ಸಾಗುತ್ತ ಬಂದಂತೆ ಕಟ್ಟುನಿಟ್ಟಾಗುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಸದಾ ಸಿದ್ಧ, ಸಣ್ಣ ಸಣ್ಣ ವಸ್ತುಗಳಿಗೆ ನಾನು ಗಮನ ನೀಡುತ್ತೇನೆ.

·         ನಾನು ಎಲ್ಲಾ ಕೆಲ್ಸಗಳನ್ನು ಸಮಯಸಾರಣಿ ಪ್ರಕಾರ ಮಾಡುತ್ತೇನೆ.

·         ನಾನು ನನ್ನ ವಸ್ತುಗಳನ್ನು ಚೆಲ್ಲಪಿಲ್ಲಿಯಾಗಿ ಹರಡಿರುತ್ತೇನೆ (ತದ್ವಿರುದ್ಧ).

·         ನಾನು ತೆಗೆದುಕೊಂಡ ವಸ್ತುಗಳನ್ನು ಸ್ವಸ್ಥಾನದಲ್ಲಿ ಇಡುವುದಿಲ್ಲ. (ತದ್ವಿರುದ್ಧ).

ಬಾಹ್ಯಪ್ರವೃತ್ತಿಯ ವ್ಯಕ್ತಿಗಳು ಬಹಳಷ್ಟು ಕೆಲಸದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಇವರಿಗೆ ಸ್ಪೂರ್ತಿ ಹೊರಗಿನಿಂದ ಬರುತ್ತದೆ. ಹೊರಜಗತ್ತಿನ ಒಡನಾಟದಲ್ಲಿ, ಗುಂಪಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಜನರ ಮಧ್ಯೆ ಇರಲು ಬಯಸುತ್ತೇನೆ.

·         ಯಾವುದೇ ಚರ್ಚೆಯ ಕೇಂದ್ರಬಿಂದುವಾಗಲು ನಾನು ಸಿದ್ಧ.

·         ನಾನು ಹೆಚ್ಚಾಗಿ ಮಾತನಾಡುವುದಿಲ್ಲ (ತದ್ವಿರುದ್ಧ).

·         ಭಾಷಣ ಮಾಡಬೇಕೆಂದರೆ ನನಗೆ ಹೆದರಿಕೆ (ತದ್ವಿರುದ್ಧ).

ಒಪ್ಪಬಹುದಾದ ವ್ಯಕ್ತಿಗಳು ಸಾಮಾಜಿಕ ಸಾಮರಸ್ಯಕ್ಕೆ ಬಹಳಷ್ಟು ಮಟ್ಟಿಗೆ ಹೊಂದಿಕೊಳ್ಳುತ್ತಾರೆ. ಸ್ವಾರ್ಥಿಗಳಲ್ಲ. ಸಹಾಯ ಮಾಡುವವರು, ಆಶಾವಾದಿಗಳು. ವ್ಯತಿರಿಕ್ತರು ಸದಾ ಜಗಳವಾಡುವವರು ಅಥವಾ ನಂಬಿಕರ್ಹರಲ್ಲ.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಬೇರೆಯವರ ಬಗ್ಗೆ ನನಗೆ ಅನುಕಂಪವಿದೆ.

·         ಬೇರೆಯವರಿಗಾಗಿ ನಾನು ಸಮಯ ನೀಡುತ್ತೇನೆ.

·         ಬೇರೆಯವರ ಸಮಸ್ಯೆ ಕಟ್ಟಿಕೊಂಡು ನನಗೇನಾಗಬೇಕು (ತದ್ವಿರುದ್ಧ).

·         ನಾನು ಬೇರೆಯವರನ್ನು ಅವಮಾನಿಸುತ್ತೇನೆ (ತದ್ವಿರುದ್ಧ).

ಅತಿಸೂಕ್ಷ್ಮವೇದಿಗಳು ಋಣಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಕೋಪ, ಆತಂಕ ಅಥವಾ ಖಿನ್ನತೆ, ನಿರಾಶಾವಾದಿ ಇತ್ಯಾದಿ. ಸಾಧಾರಣವಾಗಿ ಭಾವನೆಗಳ ಅಸ್ಥಿರತೆ ಅಥವಾ ತದ್ವಿರುದ್ಧದಲ್ಲಿ ಭಾವನೆಗಳ ಸ್ಥಿರತೆ ಎಂದೂ ಕರೆಯಬಹುದು. ಜೀವನದಲ್ಲಿ ಅಸಂತೃಪ್ತರು.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನನಗೆ ಬೇಗ ಸಿಟ್ಟು ಬರುತ್ತದೆ.

·         ನನಗೆ ಎಲ್ಲದರ ಬಗ್ಗೆಯೂ ಆತಂಕವಿರುತ್ತದೆ.

·         ನಾನು ಸದಾ ಜಾಲಿಯಾಗಿರುತ್ತೇನೆ (ತದ್ವಿರುದ್ಧ).

·         ನಾನು ಯಾವಾಗಲೂ ದುಃಖಿಯಾಗಿರುವುದಿಲ್ಲ (ತದ್ವಿರುದ್ಧ).

ನೀವು ಈ ಪರೀಕ್ಷೆ ತೆಗೆದುಕೊಂಡಲ್ಲಿ ನಿಮ್ಮ ಫಲಿತಾಂಶ ಈ ರೀತಿ ಇರಬಹುದು O93-C74-E31-A96-N5. ಅದರ ವಿಶ್ಲೇಷಣೆಯನ್ನೂ ಜಾಲತಾಣದಲ್ಲಿ ತಿಳಿಯಬಹುದು. ನಿಮಗೆ ಯಾವ ರೀತಿಯ ಕೆಲಸ ಸರಿಹೊಂದುತ್ತದೆ ಎಂದು ನೀವೇ ನಿರ್ಧರಿಸಿಕೊಳ್ಳಬಹುದು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....