Homeಮುಖಪುಟಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

ಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

- Advertisement -
- Advertisement -

ಜೀವನ ಕಲೆಗಳು ಅಂಕಣ – 6

ವ್ಯಕ್ತಿತ್ವ ವಿಕಸನ –5 ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ) ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಇದೇ ರೀತಿಯ, ಆದರೆ ಅಧಿಕ ವೈಜ್ಞಾನಿಕ ಪದ್ಧತಿ ಎನಿಸಿಕೊಂಡಿರುವುದು ಬಿಗ್-5 (ಒ.ಸಿ.ಇ.ಎ.ಎನ್.) ಫೈವ್ ಫ್ಯಾಕ್ಟರ್ ಮಾಡೆಲ್. ಇದೂ ಸಹ ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಹಲವಾರು ಕಂಪನಿಗಳು ತಮ್ಮ ನೌಕರಿ ಆಕಾಂಕ್ಷಿ ಅಭ್ಯರ್ಥಿಗಳನ್ನು ಈ ಒರೆಗಲ್ಲಿಗೆ ಹಚ್ಚಿ ತಮ್ಮ ಆಯ್ಕೆ ಮಾಡಿಕೊಳ್ಳುತ್ತಾರೆ.

ಗ್ರೀಕ್ ತತ್ವಜ್ಞಾನಿ ಮತ್ತು ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೇ ಖ್ಯಾತಿ ಪಡೆದ ಹಿಪ್ಪೊಕ್ರೇಟಿಸ್ II ಅವರ ತತ್ವವಾದ ಆಧರಿಸಿ, 1884ರಲ್ಲಿ ಸರ್ ಫ್ರಾನ್ಸಿಸ್ ಗಾಲ್ಟನ್ ಅವರ ವಾದವನ್ನು ಒರೆಹಚ್ಚಿದ ನಂತರ, 1936ರಲ್ಲಿ ಗೊರ್ಡನ್ ಆಲ್ಪೊರ್ಟ್ ಮತ್ತು ಎಸ್. ಒಡ್ಬರ್ಟ್ ಸೇರಿ ವ್ಯಕ್ತಿತ್ವದ ಬಗ್ಗೆ ಸುಮಾರು 4,500 ಗುಣಸೂಚಕಗಳ ಪಟ್ಟಿ ತಯಾರಿಸಿದರು. ಮುಂದೆ ಇನ್ನೂ ಹಲವಾರು ಸಂಶೋಧಕರು/ಶಾಸ್ತ್ರಜ್ಞರು ಇದಕ್ಕೆ ತಮ್ಮ ಮೌಲ್ಯವನ್ನು ಸೇರಿಸಿ, ಈಗಿರುವ ರೂಪಕ್ಕೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಂಬ್ರಿಜ್ ಎನಲಿಟಿಕಾ ಎಂಬ ಸಂಸ್ಥೆ ಇದನ್ನು ಬಳಸಿ ವಿವಾದ ಎಬ್ಬಿಸಿತ್ತು.

ನಿಮಗೂ ನಿಮ್ಮ OCEAN ಸೂಚ್ಯಾಂಕ ತಿಳಿಯಲು ಇಷ್ಟವಿದ್ದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ಕಿಸಿ:

ಈ ಮಾದರಿಯಲ್ಲಿ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಐದು ವಿಧವಾಗಿ ವಿಂಗಡಿಸಿ ಅದರ ಆಧಾರದ ಮೇಲೆ ಅವರು ಒಂಟಿಯಾಗಿ ಮತ್ತು ಒಂದು ತಂಡದ ಸದಸ್ಯರಾಗಿ ಹೇಗೆ ಬೇರೆ ಬೇರೆ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದನ್ನು ಅರಿತುಕೊಳ್ಳಬಹುದು. ಈ ಐದು ಗುಣಲಕ್ಷಣಗಳು ಹೀಗಿವೆ.

ಓಪನ್ನೆಸ್ ಟು ಎಕ್ಸ್ಪಿರಿಯೆನ್ಸ್ (Openness to Experience): ಅಂದರೆ ಹೊಸ ಅನುಭವಕ್ಕೆ ಸಿದ್ಧರೇ ಎಂಬ ಪ್ರಶ್ನೆ. ಇದರಲ್ಲಿ ವ್ಯಕ್ತಿಯಲ್ಲಿ ಎಷ್ಟು ಹೊಸತನ ಹುಡುಕುವ, ತಿಳಿಯುವ ಕುತೂಹಲ ಇದೆಯೇ ಅಥವಾ ಹೇಳಿದಷ್ಟು ಮಾಡುವ/ಜಾಗರೂಕತೆ ಮಾತ್ರ ಇದೆಯೇ ಎಂಬುದನ್ನು ಅರಿಯುವ ಪ್ರಯತ್ನ.

ಕಾನ್ಸೆನ್ಷಿಯಸ್ನೆಸ್(Conscientiousness): ಅಂದರೆ ಇವರ ಆತ್ಮಸಾಕ್ಷಿ/ಕರ್ತವ್ಯಜ್ಞಾನ ಹೇಗಿದೆ, ವ್ಯಕ್ತಿ ಸಮರ್ಥನೋ, ವ್ಯವಸ್ಥಿತನೋ ಅಥವಾ ಉದಾಸೀನ ಮನೋಭಾವನೋ ಎಂದು ಅರಿಯುವ ಪ್ರಯತ್ನ.

ಎಕ್ಸ್ಟ್ರಾವರ್ಷನ್ (Extraversion): ಅಂದರೆ ಇವರ ವ್ಯಕ್ತಿತ್ವ ಸ್ಪೂರ್ತಿಯುತ ಮತ್ತು ಬಾಹ್ಯ ಪ್ರವೃತ್ತಿಯೋ ಅಥವಾ ಏಕಾಂಗಿ ಮತ್ತು ಸಂಕೋಚದ ಸ್ವಭಾವವೋ ಎಂದು ಅರಿಯುವ ಪ್ರಯತ್ನ.

ಅಗ್ರೀಯಬಲ್ನೆಸ್(Agreeableness): ಅಂದರೆ ಒಪ್ಪಬಹುದಾದ ವ್ಯಕ್ತಿತ್ವವೇ? ಸ್ನೇಹಪರವೋ, ಬೇರೆಯವರ ಬಗ್ಗೆ ಅನುಕಂಪ ಇರುವಂತಹುದೋ ಅಥವಾ ಸ್ಪರ್ಧಾತ್ಮಕ ಮತ್ತು ನಿರ್ಲಿಪ್ತವಾದಿಯೋ ಎಂಬುದನ್ನು ಅರಿಯುವ ಪ್ರಯತ್ನ.

ನ್ಯೂರೋಟಿಸಿಸ್ಮ್(Neuroticism): ಅಂದರೆ ಇವರ ವ್ಯಕ್ತಿತ್ವ ವಿಪರೀತ ಸೂಕ್ಷ್ಮವೇದಿಯೋ ಅಥವಾ ಸುಭದ್ರ ಮತ್ತು ಆತ್ಮಸ್ಥೈರ್ಯವುಳ್ಳದ್ದೋ ಅದನ್ನು ಅರಿಯುವ ಪ್ರಯತ್ನ.

ಹೊಸ ಅನುಭವಕ್ಕೆ ಸಿದ್ದವಾದ ವ್ಯಕ್ತಿ ಸಾಮಾನ್ಯವಾಗಿ ಕಲಾಪ್ರೇಮಿ, ಸಾಹಸಪ್ರಿಯ, ಊಹಾಶಕ್ತಿಯುಳ್ಳ ಮತ್ತು ಕುತೂಹಲಶಾಲಿಯಾಗಿರುತ್ತಾರೆ. ಹೊಸದನ್ನು ಪ್ರಯತ್ನಿಸಲು ಮುಂದಾಗಿರುತ್ತಾರೆ, ಸೃಜನಾತ್ಮಕವಾಗಿರುತ್ತಾರೆ. ಮಿಕ್ಕವರಿಗಿಂತ ಅವರ ನಂಬಿಕೆ ವಿಭಿನ್ನವಾಗಿರುತ್ತದೆ. ಆದರೆ ಅತಿ ಕುತೂಹಲಕಾರಿ ನಡತೆ ನಕಾರಾತ್ಮಕ ಸೂಚಕವೂ ಆಗಿರಬಹುದು. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಹೊಸ ಯೋಚನೆಯನ್ನು ನಾನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ.

·         ನಾನು ಕಷ್ಟಕರ ಪದಗಳನ್ನು ಬಳಸುತ್ತೇನೆ.

·         ನನಗೆ ಅಮೂರ್ತದಲ್ಲಿ ಆಸಕ್ತಿ ಇಲ್ಲ (ತದ್ವಿರುದ್ಧ).

·         ನನಗೆ ಇದನ್ನು ಊಹಿಸಿಕೊಳ್ಳುವುದು ಕಷ್ಟ (ತದ್ವಿರುದ್ಧ).

ಕರ್ತವ್ಯಜ್ಞಾನಿಗಳು ತಮ್ಮ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಇನ್ನೊಬ್ಬರ ಅಪೇಕ್ಷೆಗೆ ಅಥವಾ ಅದನ್ನು ಮೀರಿ ಕೆಲಸ ಮಾಡುತ್ತಾರೆ. ಇವರನ್ನು ಕೆಲವರು ಕಟ್ಟುನಿಟ್ಟು ಅಥವಾ ಮೊಂಡರು ಎಂದೂ ಭಾವಿಸಬಹುದು. ಹಾಗೆಯೇ ನಿಯಮ ಪಾಲನೆ ಮಾಡದವರನ್ನು ಕಾಲಕ್ಕೆ ತಕ್ಕಂತೆ ಬಗ್ಗುವವರೆಂದು ಪರಿಗಣಿಸಬಹುದು. ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ನಿಯಮಪಾಲಕರಲ್ಲದವರು ವಯಸ್ಸಾಗುತ್ತ ಬಂದಂತೆ ಕಟ್ಟುನಿಟ್ಟಾಗುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಸದಾ ಸಿದ್ಧ, ಸಣ್ಣ ಸಣ್ಣ ವಸ್ತುಗಳಿಗೆ ನಾನು ಗಮನ ನೀಡುತ್ತೇನೆ.

·         ನಾನು ಎಲ್ಲಾ ಕೆಲ್ಸಗಳನ್ನು ಸಮಯಸಾರಣಿ ಪ್ರಕಾರ ಮಾಡುತ್ತೇನೆ.

·         ನಾನು ನನ್ನ ವಸ್ತುಗಳನ್ನು ಚೆಲ್ಲಪಿಲ್ಲಿಯಾಗಿ ಹರಡಿರುತ್ತೇನೆ (ತದ್ವಿರುದ್ಧ).

·         ನಾನು ತೆಗೆದುಕೊಂಡ ವಸ್ತುಗಳನ್ನು ಸ್ವಸ್ಥಾನದಲ್ಲಿ ಇಡುವುದಿಲ್ಲ. (ತದ್ವಿರುದ್ಧ).

ಬಾಹ್ಯಪ್ರವೃತ್ತಿಯ ವ್ಯಕ್ತಿಗಳು ಬಹಳಷ್ಟು ಕೆಲಸದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಇವರಿಗೆ ಸ್ಪೂರ್ತಿ ಹೊರಗಿನಿಂದ ಬರುತ್ತದೆ. ಹೊರಜಗತ್ತಿನ ಒಡನಾಟದಲ್ಲಿ, ಗುಂಪಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಜನರ ಮಧ್ಯೆ ಇರಲು ಬಯಸುತ್ತೇನೆ.

·         ಯಾವುದೇ ಚರ್ಚೆಯ ಕೇಂದ್ರಬಿಂದುವಾಗಲು ನಾನು ಸಿದ್ಧ.

·         ನಾನು ಹೆಚ್ಚಾಗಿ ಮಾತನಾಡುವುದಿಲ್ಲ (ತದ್ವಿರುದ್ಧ).

·         ಭಾಷಣ ಮಾಡಬೇಕೆಂದರೆ ನನಗೆ ಹೆದರಿಕೆ (ತದ್ವಿರುದ್ಧ).

ಒಪ್ಪಬಹುದಾದ ವ್ಯಕ್ತಿಗಳು ಸಾಮಾಜಿಕ ಸಾಮರಸ್ಯಕ್ಕೆ ಬಹಳಷ್ಟು ಮಟ್ಟಿಗೆ ಹೊಂದಿಕೊಳ್ಳುತ್ತಾರೆ. ಸ್ವಾರ್ಥಿಗಳಲ್ಲ. ಸಹಾಯ ಮಾಡುವವರು, ಆಶಾವಾದಿಗಳು. ವ್ಯತಿರಿಕ್ತರು ಸದಾ ಜಗಳವಾಡುವವರು ಅಥವಾ ನಂಬಿಕರ್ಹರಲ್ಲ.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಬೇರೆಯವರ ಬಗ್ಗೆ ನನಗೆ ಅನುಕಂಪವಿದೆ.

·         ಬೇರೆಯವರಿಗಾಗಿ ನಾನು ಸಮಯ ನೀಡುತ್ತೇನೆ.

·         ಬೇರೆಯವರ ಸಮಸ್ಯೆ ಕಟ್ಟಿಕೊಂಡು ನನಗೇನಾಗಬೇಕು (ತದ್ವಿರುದ್ಧ).

·         ನಾನು ಬೇರೆಯವರನ್ನು ಅವಮಾನಿಸುತ್ತೇನೆ (ತದ್ವಿರುದ್ಧ).

ಅತಿಸೂಕ್ಷ್ಮವೇದಿಗಳು ಋಣಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಕೋಪ, ಆತಂಕ ಅಥವಾ ಖಿನ್ನತೆ, ನಿರಾಶಾವಾದಿ ಇತ್ಯಾದಿ. ಸಾಧಾರಣವಾಗಿ ಭಾವನೆಗಳ ಅಸ್ಥಿರತೆ ಅಥವಾ ತದ್ವಿರುದ್ಧದಲ್ಲಿ ಭಾವನೆಗಳ ಸ್ಥಿರತೆ ಎಂದೂ ಕರೆಯಬಹುದು. ಜೀವನದಲ್ಲಿ ಅಸಂತೃಪ್ತರು.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನನಗೆ ಬೇಗ ಸಿಟ್ಟು ಬರುತ್ತದೆ.

·         ನನಗೆ ಎಲ್ಲದರ ಬಗ್ಗೆಯೂ ಆತಂಕವಿರುತ್ತದೆ.

·         ನಾನು ಸದಾ ಜಾಲಿಯಾಗಿರುತ್ತೇನೆ (ತದ್ವಿರುದ್ಧ).

·         ನಾನು ಯಾವಾಗಲೂ ದುಃಖಿಯಾಗಿರುವುದಿಲ್ಲ (ತದ್ವಿರುದ್ಧ).

ನೀವು ಈ ಪರೀಕ್ಷೆ ತೆಗೆದುಕೊಂಡಲ್ಲಿ ನಿಮ್ಮ ಫಲಿತಾಂಶ ಈ ರೀತಿ ಇರಬಹುದು O93-C74-E31-A96-N5. ಅದರ ವಿಶ್ಲೇಷಣೆಯನ್ನೂ ಜಾಲತಾಣದಲ್ಲಿ ತಿಳಿಯಬಹುದು. ನಿಮಗೆ ಯಾವ ರೀತಿಯ ಕೆಲಸ ಸರಿಹೊಂದುತ್ತದೆ ಎಂದು ನೀವೇ ನಿರ್ಧರಿಸಿಕೊಳ್ಳಬಹುದು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...