Homeಮುಖಪುಟಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು

- Advertisement -
- Advertisement -

ಪರಸ್ಪರ ವೈಯುಕ್ತಿಕ ಸಂಬಂಧಗಳ ಬಗ್ಗೆ ಲೇಖನ ಬರೆದಾಗ, ಕೆಲವು ಸಂಬಂಧಗಳು ವಿಶೇಷವಾಗಿರುತ್ತವೆ ಎಂದು ತಿಳಿಸಿದ್ದೆ. ಅವುಗಳಲ್ಲಿ ಗುರು-ಶಿಷ್ಯ ಸಂಬಂಧವೂ ಒಂದು.

ಗುರುಗಳು ಶಿಷ್ಯರನ್ನು ಹುಡುಕುತ್ತಿದ್ದರೆ, ಶಿಷ್ಯರು ಗುರುಗಳನ್ನು ಅರಸುತ್ತಿರುತ್ತಾರೆ. ಇಬ್ಬರ ಮಿಲನವೂ ತೀರ ಅಪರೂಪ ಮತ್ತು ಕೇವಲ ಆಕಸ್ಮಿಕ. ಹೆಚ್ಚಾಗಿ ಇದು ರಾಂಗ್ ನಂಬರ್ ಅಥವಾ ಮಿಸ್ಡ್ ಕಾಲ್ ಪ್ರಸಂಗಗಳೇ ಆಗಿರುತ್ತದೆ.

ಯಾರು ಈ ಗುರುಗಳು? ಮನೆ ಬಿಟ್ಟು ಮಠದಲ್ಲಿರುವ ಕಾವಿ ಧರಿಸಿದ ಸನ್ಯಾಸಿಗಳೇ? ಸರಕಾರಿ ಜಮೀನು ಕಬಳಿಸಿ, ರಾಜಕಾರಣಿಗಳ ಹಣವನ್ನು ಭದ್ರವಾಗಿರಿಸಿಕೊಂಡಿರುವ, ಸ್ವಿಸ್ ಬ್ಯಾಂಕ್ ಎಕ್ಸ್ಟೆನ್ಷನ್ ಕೌಂಟರ್ ನಡೆಸುತ್ತಿರುವ ಪ್ರವಚನಕಾರರೇ? ಸಾಮ್ರಾಜ್ಯ ಕಟ್ಟಿಕೊಂಡು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಸರಬರಾಜು ಮಾಡುತ್ತಿರುವ ಸ್ವಾಮೀಜಿಗಳೇ? ಮುಗ್ಧ ಜನರನ್ನು ದಾರಿತಪ್ಪಿಸಿ, ಮಾಡಬಾರದ್ದನ್ನು ಮಾಡಿ, ಜೈಲಿಗೆ ಹೋಗಿ ಕುಳಿತಿರುವ ಬಾಪೂ/ಬಾಬಾಗಳೇ? ನಾನು ಹೇಳುತ್ತಿರುವುದು ಇಂತಹ ಢೋಂಗಿಗಳ ಬಗ್ಗೆ ಅಲ್ಲ.

ಕಲಿಸಿದಾತಂ ವರ್ಣ ಮಾತ್ರಂ ಗುರು ಎಂದು ನಮ್ಮ ಭಾಷೆ ಹೇಳುತ್ತದೆ. ನಿನಗೆ ಒಂದು ಅಕ್ಷರ ಹೇಳಿಕೊಟ್ಟವರೂ ಸಹ ಗುರು ಎಂದು. ಅಂದ ಮಾತ್ರಕ್ಕೆ ಕೇವಲ ಒಂದಕ್ಷರ ಕಲಿಸಿದ ಮಾತ್ರಕ್ಕೆ ಅವರು ನಮ್ಮ ಸಂಪೂರ್ಣ ಜೀವನದ ಗುರುಗಳಾದರೇ? ಗುರುಗಳು ಇರಲೇ ಬೇಕೇ, ಅವರಿಲ್ಲದೆ ನಮಗೆ ಮೋಕ್ಷಕ್ಕೆ ದಾರಿಯೇ ಇಲ್ಲವೇ?

ನಮ್ಮ ಸಂಸ್ಕೃತಿ ಗುರುಗಳಿಗೆ ಬಹಳ ಉನ್ನತ ಸ್ಥಾನ ನೀಡಿದೆ. ಶ್ರೇಷ್ಠ ಕವಿ ಮತ್ತು ಭಕ್ತ ಕಬೀರ್ ದಾಸ್ ಹೇಳುತ್ತಾರೆ:

ಗುರು ಗೋವಿಂದ್ ದೋಊ ಖಡೇ ಕಾಕೆ ಲಾಗೌ ಪಾಯ್ |

ಬಲಿಹಾರೀ ಗುರು ಆಪನೇ ಗೋವಿಂದ್ ದಿಯೋ ಬತಾಯ್ ||

ಅರ್ಥಾತ್ (ಹೊರ ಮನಸ್ಸು ಪ್ರಶ್ನೆ ಮಾಡುತ್ತಿದೆ) ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು. ಹೀಗೆ ಗುರುಗಳನ್ನು ದೇವರಿಗಿಂತಲೂ ಎತ್ತರದ ಸ್ಥಾನದಲ್ಲಿ ನಾವು ನೋಡುತ್ತೇವೆ.

ನಮ್ಮ ತಾಯಿಯೇ ನಮಗೆಲ್ಲಾ ಮೊದಲ ಗುರು. ತಂದೆಯೂ ಸಹ ಗುರುವಿನ ಸ್ಥಾನದಲ್ಲಿದ್ದಾರೆ. ನಮ್ಮ ಶಾಲೆಯ ಶಿಕ್ಷಕರೂ ಸಹ ನಮಗೆ ಗುರುಗಳೇ. ಆದರೆ ನಿಜವಾದ, ನಾವು ಅರಸುತ್ತಿರುವ ಗುರು ಯಾರು? ಗುರುಗಳು ನಮಗೆ ಯಾವ ಕಾಲದಲ್ಲಿ ಯಾವ ರೂಪದಲ್ಲಿ ಸಿಗುತ್ತಾರೋ, ಕಾಣುತ್ತಾರೋ ಅದನ್ನು ಅಥವಾ ಯಾವಾಗ ನಮಗೆ ಯಾವ ಪಾಠ ಕಲಿಸುತ್ತಾರೆ ಅದನ್ನೂ ಹೇಳುವುದು ಸಾಧ್ಯವಿಲ್ಲ.

ನನ್ನ ಸ್ನೇಹಿತನೊಬ್ಬ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದ. ಅಲ್ಲಿನ ಪ್ರಾಚಾರ್ಯರು ಘನ ಪಂಡಿತರು ಮತ್ತು ಸಹಜಜ್ಞಾನಿಗಳು. ಒಳ್ಳೆಯ ವಿದ್ಯಾರ್ಥಿಯಾದ ಈತನನ್ನು ಕಂಡಾಗಲೆಲ್ಲಾ, ತಮ್ಮ ಕೊಠಡಿಗೆ ಕರೆದು, ಒಂದಿಷ್ಟು ಪುಡಿ ಅಥವಾ ಚೂರ್ಣ ಅಥವಾ ಲೇಹ್ಯ ಮುಂತಾದ ಆಯುರ್ವೇದದ ಔಷಧಿಯನ್ನು ಒಂದು ಕಾಗದದ ಮೇಲೆ ಹಾಕಿ, ಇವನಿಗೆ ಕೊಟ್ಟು ಅದನ್ನು ಸರಿಯಾಗಿ ತೂಕಮಾಡಿಸಿಕೊಂಡು ಬರಲು ಆದೇಶಿಸುತ್ತಿದ್ದರು. ಕಾಲೇಜಿನ ಹೊರಗೆ ಒಂದು ಸಣ್ಣ ಕಿರಾಣಿ ಅಂಗಡಿ ಇತ್ತು. ಆ ಹಳ್ಳಿಗೆ ಇದ್ದುದು ಒಂದೇ ಅಂಗಡಿಯಾದ್ದರಿಂದ ಯಾವಾಗಲೂ ಗ್ರಾಹಕರು ಇರುತ್ತಿದ್ದರು. ವ್ಯಾಪಾರವಿಲ್ಲದೆ ಸುಮ್ಮನೆ ಕೂತಿದ್ದಾಗ ಮಾತ್ರ, ಇಂತಹ (ಬಿಟ್ಟಿ) ತೂಕ ಮಾಡುವ ಕೆಲಸ ಅಂಗಡಿಯ ಮಾಲೀಕ ಮಾಡಿಕೊಡುತ್ತಿದ್ದ. ಮಿಕ್ಕಂತೆ ಇವನನ್ನು ಆತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಈತನಿಗೆ ತುಂಬಾ ಮುಜುಗರವಾಗಿ, ಅವಶ್ಯಕತೆ ಇಲ್ಲದಿದ್ದರೂ, ಅಂಗಡಿಯಿಂದ ಏನಾದರೂ ಸೋಪು, ಬ್ಲೇಡು ಮುಂತಾದ ವಸ್ತುವನ್ನು ಖರೀದಿಸಿ, ಪ್ರಾಚಾರ್ಯರ ಬಿಟ್ಟಿ ಕೆಲಸ ಬೇಗನೇ ಮಾಡಿಸಿಕೊಳ್ಳುತ್ತಿದ್ದ. ನಿದಾನವಾಗಿ ಹಿಂತಿರುಗಿದರೆ ಪ್ರಾಚಾರ್ಯರಿಂದಲೂ ಒಂದೆರಡು ಮಾತು ಕೇಳಬೇಕಾಗುತ್ತಿತ್ತು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ, ಆತ ಪ್ರಾಚಾರ್ಯಕರ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದ ಆದರೆ ಅವರ ಹದ್ದಿನ ಕಣ್ಣಿನಿಂದ ಸದಾ ತಪ್ಪಿಸಿಕೊಳ್ಳುವುದೂ ಸಹ ಕಷ್ಟದ ಕೆಲಸವಾಗಿತ್ತು.

ಹಾಗೂ ಹೀಗೂ ಒಂದು ವರ್ಷ ಕಳೆದ ನಂತರ, ಆತ ರಜೆಯ ಮೇಲೆ ತನ್ನ ಊರಿಗೆ ಬಂದ. ಪ್ರಾಚಾರ್ಯರ ಬಿಟ್ಟಿ ಚಾಕರಿಯಿಂದ ಬೇಸತ್ತಿದ್ದ ಆತ ತನ್ನ ತಂದೆಯ ಹತ್ತಿರ ಕೇಳಿ ಹಣ ಪಡೆದು, ನಗರಕ್ಕೆ ಹೋಗಿ, ಒಂದು ಸಣ್ಣ ತೂಕದ ಯಂತ್ರ ಖರೀದಿಸಿದ. ಅದನ್ನು ಜೋಪಾನವಾಗಿ ತನ್ನೊಡನೆ ರಜೆ ಮುಗಿದಾಗ ಕಾಲೇಜಿಗೆ ತೆಗೆದುಕೊಂಡು ಹೋದ. ಇವನನ್ನು ಕಂಡಕೂಡಲೇ ಮತ್ತೆ ಪ್ರಾಚಾರ್ಯರು ಕರೆದು ಒಂದಿಷ್ಟು ಪುಡಿ ಕೊಟ್ಟು, ತೂಕ ಮಾಡಿಸಿಕೊಂಡು ಬರಲು ಹೇಳಿದರು. ಇವನು ತನ್ನ ಹಾಸ್ಟೆಲ್ ರೂಮಿಗೆ ಹೋಗಿ, ತೂಕದ ಯಂತ್ರವನ್ನು ಹೊರತೆಗೆದು, ಅದರಲ್ಲಿ ಸರಿಯಾಗಿ ಪುಡಿಯನ್ನು ತೂಕ ಮಾಡಿ, ಜೊತೆಗೆ ಯಂತ್ರವನ್ನೂ ತೆಗೆದುಕೊಂಡು, ಪ್ರಾಚಾರ್ಯರ ಕೊಠಡಿಗೆ ಹೋದ. ಆ ಯಂತ್ರವನ್ನು ಅವರಿಗೆ ಕಾಣಿಕೆಯಾಗಿ ಕೊಡುತ್ತಾ, ಇನ್ನು ಮೇಲೆ ಯಾವುದೇ ಸಣ್ಣ-ಪುಟ್ಟ ವಸ್ತುವನ್ನು ಇಲ್ಲೇ ತೂಗಬಹುದು ಎಂದು ಹೇಳಿದ. ಕೆಲಸದಿಂದ ತಪ್ಪಿಸಿಕೊಂಡ ಸಾಧನೆಯಿಂದ ಬೀಗುತ್ತಿದ್ದ ಇವನ ಮುಖಚರ್ಯೆ ಕಂಡು ಖಿನ್ನರಾದ ಪ್ರಾಚಾರ್ಯರು ಇವನ ಯಂತ್ರವನ್ನು ಒಂದು ಸಣ್ಣ ಪೆಟ್ಟಿಗೆ ತೆಗೆದು ಅದರಲ್ಲಿ ಈಗಾಗಲೇ ಇದ್ದ, ಇನ್ನೂ ಹಲವಾರು ತೂಕದ ಯಂತ್ರಗಳ ಜೊತೆಗೆ ಸೇರಿಸಿ ಬಾಗಿಲು ಹಾಕಿದರು. ಇವನ ಮುಖ ಆಗಲೇ ಬಿಳಿಚಿತ್ತು. ಪ್ರಾಚಾರ್ಯರ ಬಳಿ ಈಗಾಗಲೇ ಇಷ್ಟೊಂದು ಯಂತ್ರಗಳಿದ್ದರೆ ಏಕೆ ನನ್ನನ್ನುಕಂಡಾಗಲೆಲ್ಲಾ ಪುಡಿ ಇತ್ಯಾದಿಯನ್ನು ಹೊರಗಿನಿಂದ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದರು ಎಂಬುದು ಇವನಿಗೆ ಅರ್ಥವಾಗಲಿಲ್ಲ. ಇವನ ಮನಃಸ್ಥಿತಿ ಅರಿತ ಪ್ರಾಚಾರ್ಯರು ಸ್ವತಃ ಹೇಳಿದರು.

ಮಗೂ, ಆಯುರ್ವೇದದ ಔಷದಿಗಳನ್ನು ಮಾಡುವ ಸಂಹಿತದಲ್ಲಿ ನಾವು ವಿವಿಧ ಸಾಮಗ್ರಿಗಳನ್ನು ಸೇರಿಸುತ್ತೇವೆ. ಅವನ್ನು ಈಗಿನ ಗ್ರಾಂ ಲೆಕ್ಕದಲ್ಲಿ ಅಲ್ಲ, ನಮ್ಮ ಕಾಲದ ಸೇರು, ಪಂಚೇರು, ಪಾವು, ತೊಲ ಗುಲಗಂಜಿ ತೂಕದಲ್ಲಿ ಅಳೆಯುತ್ತೇವೆ. ಒಳ್ಳೆಯ ವೈದ್ಯನಾಗಬೇಕಿದ್ದಲ್ಲಿ ವಸ್ತುವನ್ನು ಕಣ್ಣಿನಲ್ಲಿ ಕರಾರುವಾಕ್ಕಾಗಿ ತೂಗುವ, ಅಳೆಯುವ ಶಕ್ತಿ ಬರಬೇಕು. ಅ ಶಕ್ತಿ ನಿನಗೆ ಸಿಗಲಿ ಎಂದು ನಿನಗೆ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದೆ. ನಿನಗೆ ತೂಕಕ್ಕೆ ವಸ್ತುವನ್ನು ಕೊಡುವ ಮುಂಚೆಯೇ ಅದರಲ್ಲಿ ಎಷ್ಟಿದೆ ಅನ್ನುವುದು ನನಗೆ ಗೊತ್ತಿರುತ್ತಿತ್ತು, ಹಾಗಾಗಿ ನೀನು ಸರಿಯಾಗಿ ತೂಕ ಮಾಡಿಸಿಕೊಂಡು ಬಂದೆಯೋ ಅಥವಾ ಸುಳ್ಳು ಹೇಳಿದೆಯೋ ಅದೂ ಸಹ ನನಗೆ ತಿಳಿಯುತ್ತಿತ್ತು. ನಿನ್ನ ಜ್ಞಾನಕ್ಕಾಗಿ ನಾನು ನಿನಗೆ ಕೆಲಸ ಹೇಳುತ್ತಿದ್ದೆನೇ ಹೊರತು, ನನ್ನ ಪ್ರಯೋಜನಕ್ಕಾಗಿ ಅಲ್ಲ. ಕೂಡಲೇ ಜ್ಞಾನೋದಯವಾದ ಆತ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಈಗ ನನ್ನ ಸ್ನೇಹಿತ ಆಯುರ್ವೇದ ಪಂಡಿತನಾಗಿ ಒಳ್ಳೆಯ ಹೆಸರು ಮತ್ತು ಸಂಪಾದನೆ ಎರಡೂ ಮಾಡಿಕೊಳ್ಳುತ್ತಿದ್ದಾನೆ.

ಹೀಗೆ ನಮಗೆ ಯಾವಾಗ ಗುರುಗಳ ಸಾನಿಧ್ಯ, ಸಾಕ್ಷಾತ್ಕಾರ, ಜ್ಞಾನ ಲಭ್ಯವಾಗುತ್ತದೋ, ಇಲ್ಲವೋ ಯಾರೂ ಹೇಳಲು ಬರುವುದಿಲ್ಲ. ಜೀವನದಲ್ಲಿ ನಮಗೆ ಕಾಲಕಾಲಕ್ಕೆ ಹಲವಾರು ಗುರುಗಳ ಅವಶ್ಯಕತೆ ಬರುತ್ತದೆ. ಸರಿಯಾದ ಗುರು ಸಿಗುವವರೆಗೆ ಅರಸುವ ಕೆಲಸ ತಪ್ಪುವುದಿಲ್ಲ.

ಶ್ರೀ ಗುರುಭ್ಯೋ ನಮಃ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...