Homeಮುಖಪುಟಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು

- Advertisement -
- Advertisement -

ಪರಸ್ಪರ ವೈಯುಕ್ತಿಕ ಸಂಬಂಧಗಳ ಬಗ್ಗೆ ಲೇಖನ ಬರೆದಾಗ, ಕೆಲವು ಸಂಬಂಧಗಳು ವಿಶೇಷವಾಗಿರುತ್ತವೆ ಎಂದು ತಿಳಿಸಿದ್ದೆ. ಅವುಗಳಲ್ಲಿ ಗುರು-ಶಿಷ್ಯ ಸಂಬಂಧವೂ ಒಂದು.

ಗುರುಗಳು ಶಿಷ್ಯರನ್ನು ಹುಡುಕುತ್ತಿದ್ದರೆ, ಶಿಷ್ಯರು ಗುರುಗಳನ್ನು ಅರಸುತ್ತಿರುತ್ತಾರೆ. ಇಬ್ಬರ ಮಿಲನವೂ ತೀರ ಅಪರೂಪ ಮತ್ತು ಕೇವಲ ಆಕಸ್ಮಿಕ. ಹೆಚ್ಚಾಗಿ ಇದು ರಾಂಗ್ ನಂಬರ್ ಅಥವಾ ಮಿಸ್ಡ್ ಕಾಲ್ ಪ್ರಸಂಗಗಳೇ ಆಗಿರುತ್ತದೆ.

ಯಾರು ಈ ಗುರುಗಳು? ಮನೆ ಬಿಟ್ಟು ಮಠದಲ್ಲಿರುವ ಕಾವಿ ಧರಿಸಿದ ಸನ್ಯಾಸಿಗಳೇ? ಸರಕಾರಿ ಜಮೀನು ಕಬಳಿಸಿ, ರಾಜಕಾರಣಿಗಳ ಹಣವನ್ನು ಭದ್ರವಾಗಿರಿಸಿಕೊಂಡಿರುವ, ಸ್ವಿಸ್ ಬ್ಯಾಂಕ್ ಎಕ್ಸ್ಟೆನ್ಷನ್ ಕೌಂಟರ್ ನಡೆಸುತ್ತಿರುವ ಪ್ರವಚನಕಾರರೇ? ಸಾಮ್ರಾಜ್ಯ ಕಟ್ಟಿಕೊಂಡು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಸರಬರಾಜು ಮಾಡುತ್ತಿರುವ ಸ್ವಾಮೀಜಿಗಳೇ? ಮುಗ್ಧ ಜನರನ್ನು ದಾರಿತಪ್ಪಿಸಿ, ಮಾಡಬಾರದ್ದನ್ನು ಮಾಡಿ, ಜೈಲಿಗೆ ಹೋಗಿ ಕುಳಿತಿರುವ ಬಾಪೂ/ಬಾಬಾಗಳೇ? ನಾನು ಹೇಳುತ್ತಿರುವುದು ಇಂತಹ ಢೋಂಗಿಗಳ ಬಗ್ಗೆ ಅಲ್ಲ.

ಕಲಿಸಿದಾತಂ ವರ್ಣ ಮಾತ್ರಂ ಗುರು ಎಂದು ನಮ್ಮ ಭಾಷೆ ಹೇಳುತ್ತದೆ. ನಿನಗೆ ಒಂದು ಅಕ್ಷರ ಹೇಳಿಕೊಟ್ಟವರೂ ಸಹ ಗುರು ಎಂದು. ಅಂದ ಮಾತ್ರಕ್ಕೆ ಕೇವಲ ಒಂದಕ್ಷರ ಕಲಿಸಿದ ಮಾತ್ರಕ್ಕೆ ಅವರು ನಮ್ಮ ಸಂಪೂರ್ಣ ಜೀವನದ ಗುರುಗಳಾದರೇ? ಗುರುಗಳು ಇರಲೇ ಬೇಕೇ, ಅವರಿಲ್ಲದೆ ನಮಗೆ ಮೋಕ್ಷಕ್ಕೆ ದಾರಿಯೇ ಇಲ್ಲವೇ?

ನಮ್ಮ ಸಂಸ್ಕೃತಿ ಗುರುಗಳಿಗೆ ಬಹಳ ಉನ್ನತ ಸ್ಥಾನ ನೀಡಿದೆ. ಶ್ರೇಷ್ಠ ಕವಿ ಮತ್ತು ಭಕ್ತ ಕಬೀರ್ ದಾಸ್ ಹೇಳುತ್ತಾರೆ:

ಗುರು ಗೋವಿಂದ್ ದೋಊ ಖಡೇ ಕಾಕೆ ಲಾಗೌ ಪಾಯ್ |

ಬಲಿಹಾರೀ ಗುರು ಆಪನೇ ಗೋವಿಂದ್ ದಿಯೋ ಬತಾಯ್ ||

ಅರ್ಥಾತ್ (ಹೊರ ಮನಸ್ಸು ಪ್ರಶ್ನೆ ಮಾಡುತ್ತಿದೆ) ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು. ಹೀಗೆ ಗುರುಗಳನ್ನು ದೇವರಿಗಿಂತಲೂ ಎತ್ತರದ ಸ್ಥಾನದಲ್ಲಿ ನಾವು ನೋಡುತ್ತೇವೆ.

ನಮ್ಮ ತಾಯಿಯೇ ನಮಗೆಲ್ಲಾ ಮೊದಲ ಗುರು. ತಂದೆಯೂ ಸಹ ಗುರುವಿನ ಸ್ಥಾನದಲ್ಲಿದ್ದಾರೆ. ನಮ್ಮ ಶಾಲೆಯ ಶಿಕ್ಷಕರೂ ಸಹ ನಮಗೆ ಗುರುಗಳೇ. ಆದರೆ ನಿಜವಾದ, ನಾವು ಅರಸುತ್ತಿರುವ ಗುರು ಯಾರು? ಗುರುಗಳು ನಮಗೆ ಯಾವ ಕಾಲದಲ್ಲಿ ಯಾವ ರೂಪದಲ್ಲಿ ಸಿಗುತ್ತಾರೋ, ಕಾಣುತ್ತಾರೋ ಅದನ್ನು ಅಥವಾ ಯಾವಾಗ ನಮಗೆ ಯಾವ ಪಾಠ ಕಲಿಸುತ್ತಾರೆ ಅದನ್ನೂ ಹೇಳುವುದು ಸಾಧ್ಯವಿಲ್ಲ.

ನನ್ನ ಸ್ನೇಹಿತನೊಬ್ಬ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದ. ಅಲ್ಲಿನ ಪ್ರಾಚಾರ್ಯರು ಘನ ಪಂಡಿತರು ಮತ್ತು ಸಹಜಜ್ಞಾನಿಗಳು. ಒಳ್ಳೆಯ ವಿದ್ಯಾರ್ಥಿಯಾದ ಈತನನ್ನು ಕಂಡಾಗಲೆಲ್ಲಾ, ತಮ್ಮ ಕೊಠಡಿಗೆ ಕರೆದು, ಒಂದಿಷ್ಟು ಪುಡಿ ಅಥವಾ ಚೂರ್ಣ ಅಥವಾ ಲೇಹ್ಯ ಮುಂತಾದ ಆಯುರ್ವೇದದ ಔಷಧಿಯನ್ನು ಒಂದು ಕಾಗದದ ಮೇಲೆ ಹಾಕಿ, ಇವನಿಗೆ ಕೊಟ್ಟು ಅದನ್ನು ಸರಿಯಾಗಿ ತೂಕಮಾಡಿಸಿಕೊಂಡು ಬರಲು ಆದೇಶಿಸುತ್ತಿದ್ದರು. ಕಾಲೇಜಿನ ಹೊರಗೆ ಒಂದು ಸಣ್ಣ ಕಿರಾಣಿ ಅಂಗಡಿ ಇತ್ತು. ಆ ಹಳ್ಳಿಗೆ ಇದ್ದುದು ಒಂದೇ ಅಂಗಡಿಯಾದ್ದರಿಂದ ಯಾವಾಗಲೂ ಗ್ರಾಹಕರು ಇರುತ್ತಿದ್ದರು. ವ್ಯಾಪಾರವಿಲ್ಲದೆ ಸುಮ್ಮನೆ ಕೂತಿದ್ದಾಗ ಮಾತ್ರ, ಇಂತಹ (ಬಿಟ್ಟಿ) ತೂಕ ಮಾಡುವ ಕೆಲಸ ಅಂಗಡಿಯ ಮಾಲೀಕ ಮಾಡಿಕೊಡುತ್ತಿದ್ದ. ಮಿಕ್ಕಂತೆ ಇವನನ್ನು ಆತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಈತನಿಗೆ ತುಂಬಾ ಮುಜುಗರವಾಗಿ, ಅವಶ್ಯಕತೆ ಇಲ್ಲದಿದ್ದರೂ, ಅಂಗಡಿಯಿಂದ ಏನಾದರೂ ಸೋಪು, ಬ್ಲೇಡು ಮುಂತಾದ ವಸ್ತುವನ್ನು ಖರೀದಿಸಿ, ಪ್ರಾಚಾರ್ಯರ ಬಿಟ್ಟಿ ಕೆಲಸ ಬೇಗನೇ ಮಾಡಿಸಿಕೊಳ್ಳುತ್ತಿದ್ದ. ನಿದಾನವಾಗಿ ಹಿಂತಿರುಗಿದರೆ ಪ್ರಾಚಾರ್ಯರಿಂದಲೂ ಒಂದೆರಡು ಮಾತು ಕೇಳಬೇಕಾಗುತ್ತಿತ್ತು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ, ಆತ ಪ್ರಾಚಾರ್ಯಕರ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದ ಆದರೆ ಅವರ ಹದ್ದಿನ ಕಣ್ಣಿನಿಂದ ಸದಾ ತಪ್ಪಿಸಿಕೊಳ್ಳುವುದೂ ಸಹ ಕಷ್ಟದ ಕೆಲಸವಾಗಿತ್ತು.

ಹಾಗೂ ಹೀಗೂ ಒಂದು ವರ್ಷ ಕಳೆದ ನಂತರ, ಆತ ರಜೆಯ ಮೇಲೆ ತನ್ನ ಊರಿಗೆ ಬಂದ. ಪ್ರಾಚಾರ್ಯರ ಬಿಟ್ಟಿ ಚಾಕರಿಯಿಂದ ಬೇಸತ್ತಿದ್ದ ಆತ ತನ್ನ ತಂದೆಯ ಹತ್ತಿರ ಕೇಳಿ ಹಣ ಪಡೆದು, ನಗರಕ್ಕೆ ಹೋಗಿ, ಒಂದು ಸಣ್ಣ ತೂಕದ ಯಂತ್ರ ಖರೀದಿಸಿದ. ಅದನ್ನು ಜೋಪಾನವಾಗಿ ತನ್ನೊಡನೆ ರಜೆ ಮುಗಿದಾಗ ಕಾಲೇಜಿಗೆ ತೆಗೆದುಕೊಂಡು ಹೋದ. ಇವನನ್ನು ಕಂಡಕೂಡಲೇ ಮತ್ತೆ ಪ್ರಾಚಾರ್ಯರು ಕರೆದು ಒಂದಿಷ್ಟು ಪುಡಿ ಕೊಟ್ಟು, ತೂಕ ಮಾಡಿಸಿಕೊಂಡು ಬರಲು ಹೇಳಿದರು. ಇವನು ತನ್ನ ಹಾಸ್ಟೆಲ್ ರೂಮಿಗೆ ಹೋಗಿ, ತೂಕದ ಯಂತ್ರವನ್ನು ಹೊರತೆಗೆದು, ಅದರಲ್ಲಿ ಸರಿಯಾಗಿ ಪುಡಿಯನ್ನು ತೂಕ ಮಾಡಿ, ಜೊತೆಗೆ ಯಂತ್ರವನ್ನೂ ತೆಗೆದುಕೊಂಡು, ಪ್ರಾಚಾರ್ಯರ ಕೊಠಡಿಗೆ ಹೋದ. ಆ ಯಂತ್ರವನ್ನು ಅವರಿಗೆ ಕಾಣಿಕೆಯಾಗಿ ಕೊಡುತ್ತಾ, ಇನ್ನು ಮೇಲೆ ಯಾವುದೇ ಸಣ್ಣ-ಪುಟ್ಟ ವಸ್ತುವನ್ನು ಇಲ್ಲೇ ತೂಗಬಹುದು ಎಂದು ಹೇಳಿದ. ಕೆಲಸದಿಂದ ತಪ್ಪಿಸಿಕೊಂಡ ಸಾಧನೆಯಿಂದ ಬೀಗುತ್ತಿದ್ದ ಇವನ ಮುಖಚರ್ಯೆ ಕಂಡು ಖಿನ್ನರಾದ ಪ್ರಾಚಾರ್ಯರು ಇವನ ಯಂತ್ರವನ್ನು ಒಂದು ಸಣ್ಣ ಪೆಟ್ಟಿಗೆ ತೆಗೆದು ಅದರಲ್ಲಿ ಈಗಾಗಲೇ ಇದ್ದ, ಇನ್ನೂ ಹಲವಾರು ತೂಕದ ಯಂತ್ರಗಳ ಜೊತೆಗೆ ಸೇರಿಸಿ ಬಾಗಿಲು ಹಾಕಿದರು. ಇವನ ಮುಖ ಆಗಲೇ ಬಿಳಿಚಿತ್ತು. ಪ್ರಾಚಾರ್ಯರ ಬಳಿ ಈಗಾಗಲೇ ಇಷ್ಟೊಂದು ಯಂತ್ರಗಳಿದ್ದರೆ ಏಕೆ ನನ್ನನ್ನುಕಂಡಾಗಲೆಲ್ಲಾ ಪುಡಿ ಇತ್ಯಾದಿಯನ್ನು ಹೊರಗಿನಿಂದ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದರು ಎಂಬುದು ಇವನಿಗೆ ಅರ್ಥವಾಗಲಿಲ್ಲ. ಇವನ ಮನಃಸ್ಥಿತಿ ಅರಿತ ಪ್ರಾಚಾರ್ಯರು ಸ್ವತಃ ಹೇಳಿದರು.

ಮಗೂ, ಆಯುರ್ವೇದದ ಔಷದಿಗಳನ್ನು ಮಾಡುವ ಸಂಹಿತದಲ್ಲಿ ನಾವು ವಿವಿಧ ಸಾಮಗ್ರಿಗಳನ್ನು ಸೇರಿಸುತ್ತೇವೆ. ಅವನ್ನು ಈಗಿನ ಗ್ರಾಂ ಲೆಕ್ಕದಲ್ಲಿ ಅಲ್ಲ, ನಮ್ಮ ಕಾಲದ ಸೇರು, ಪಂಚೇರು, ಪಾವು, ತೊಲ ಗುಲಗಂಜಿ ತೂಕದಲ್ಲಿ ಅಳೆಯುತ್ತೇವೆ. ಒಳ್ಳೆಯ ವೈದ್ಯನಾಗಬೇಕಿದ್ದಲ್ಲಿ ವಸ್ತುವನ್ನು ಕಣ್ಣಿನಲ್ಲಿ ಕರಾರುವಾಕ್ಕಾಗಿ ತೂಗುವ, ಅಳೆಯುವ ಶಕ್ತಿ ಬರಬೇಕು. ಅ ಶಕ್ತಿ ನಿನಗೆ ಸಿಗಲಿ ಎಂದು ನಿನಗೆ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದೆ. ನಿನಗೆ ತೂಕಕ್ಕೆ ವಸ್ತುವನ್ನು ಕೊಡುವ ಮುಂಚೆಯೇ ಅದರಲ್ಲಿ ಎಷ್ಟಿದೆ ಅನ್ನುವುದು ನನಗೆ ಗೊತ್ತಿರುತ್ತಿತ್ತು, ಹಾಗಾಗಿ ನೀನು ಸರಿಯಾಗಿ ತೂಕ ಮಾಡಿಸಿಕೊಂಡು ಬಂದೆಯೋ ಅಥವಾ ಸುಳ್ಳು ಹೇಳಿದೆಯೋ ಅದೂ ಸಹ ನನಗೆ ತಿಳಿಯುತ್ತಿತ್ತು. ನಿನ್ನ ಜ್ಞಾನಕ್ಕಾಗಿ ನಾನು ನಿನಗೆ ಕೆಲಸ ಹೇಳುತ್ತಿದ್ದೆನೇ ಹೊರತು, ನನ್ನ ಪ್ರಯೋಜನಕ್ಕಾಗಿ ಅಲ್ಲ. ಕೂಡಲೇ ಜ್ಞಾನೋದಯವಾದ ಆತ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಈಗ ನನ್ನ ಸ್ನೇಹಿತ ಆಯುರ್ವೇದ ಪಂಡಿತನಾಗಿ ಒಳ್ಳೆಯ ಹೆಸರು ಮತ್ತು ಸಂಪಾದನೆ ಎರಡೂ ಮಾಡಿಕೊಳ್ಳುತ್ತಿದ್ದಾನೆ.

ಹೀಗೆ ನಮಗೆ ಯಾವಾಗ ಗುರುಗಳ ಸಾನಿಧ್ಯ, ಸಾಕ್ಷಾತ್ಕಾರ, ಜ್ಞಾನ ಲಭ್ಯವಾಗುತ್ತದೋ, ಇಲ್ಲವೋ ಯಾರೂ ಹೇಳಲು ಬರುವುದಿಲ್ಲ. ಜೀವನದಲ್ಲಿ ನಮಗೆ ಕಾಲಕಾಲಕ್ಕೆ ಹಲವಾರು ಗುರುಗಳ ಅವಶ್ಯಕತೆ ಬರುತ್ತದೆ. ಸರಿಯಾದ ಗುರು ಸಿಗುವವರೆಗೆ ಅರಸುವ ಕೆಲಸ ತಪ್ಪುವುದಿಲ್ಲ.

ಶ್ರೀ ಗುರುಭ್ಯೋ ನಮಃ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...