HomeUncategorizedಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ...

ಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ…

25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

- Advertisement -
- Advertisement -

ಕರ್ನಾಟಕಕ್ಕೆ ಸತತವಾಗಿ ತಗುಲಿದ ಬರಗಾಲ ಹಾಗೂ ನೆರೆಯಿಂದಾಗಿ ಅಪಾರ ನಷ್ಟವಾಗಿದೆ. ರೈತರು ಜನಸಾಮಾನ್ಯರು ಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ನೀಡಬೇಕು ಎಂಬ ನ್ಯಾಯಯುತವಾದ ಹಕ್ಕೊತ್ತಾಯವನ್ನು ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದಿಟ್ಟಿವೆ…

ಕರ್ನಾಟಕದಂತೆಯೇ ಹೆಚ್ಚು ಬರಗಾಲ ಹಾಗೂ ರೈತರ ಆತ್ಮಹತ್ಯೆಗೆ ಕುಖ್ಯಾತಿಯನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. 2015 ರಲ್ಲಿ ಮಹಾರಾಷ್ಟ್ರದ ಸರ್ಕಾರದ ಪ್ರಕಾರ ಶೇ. 60% ಹಳ್ಳಿಗಳು ಬರಕ್ಕೆ ತುತ್ತಾಗಿದ್ದವು. ಶೇ 50% ಇಳುವರಿ ಕಡಿಮೆಯಾಗಿತ್ತು. ಈ ಸಮಯದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸತ್ಯಮೇವ ಜಯತೆ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಮೀರ್ ಖಾನ್ ಮತ್ತು ಕಾರ್ಯಕ್ರಮದ ತಂಡ ಪಾನಿ ಫೌಂಡೇಷನ್ ಅನ್ನು ಶುರು ಮಾಡಿತ್ತು. 2016 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ ಸತ್ಯಮೇವ ಜಯತೆ ಕಾರ್ಯಕ್ರಮದ ಮುಖ್ಯಸ್ಥರಾದ ಸತ್ಯಜಿತ್ ಬಟ್ಕಳ್ ಅವರೇ ಪಾನಿ ಫೌಂಡೇಷನ್ ನ ಮುಖ್ಯಸ್ಥರಾದರು. ಅಮೀರ್ ಖಾನ್ ಹಾಗೂ ಸಿನೆಮಾ ಬರಹಗಾರರು, ನಿರ್ದೇಶಕರು ಆಗಿರುವ ಕಿರಣ್ ರಾವ್ (ಅಮೀರ್ ಖಾನ್‍ರ ಹೆಂಡತಿ) ಅವರುಗಳು ಇದರ ಸಂಸ್ಥಾಪಕರಾದರು. ಪಾನಿ ಫೌಂಡೇಷನ್ ನ ಮುಖ್ಯ ಉದ್ದೇಶ ಮಳೆ ಬಂದಾಗ ನೀರು ಹರಿದು ಪೋಲಾಗದಂತೆ ತಡೆದು ವೈಜ್ಞಾನಿಕ ವಿಧಾನದಲ್ಲಿ ಸಂಗ್ರಹಿಸಿ ಬಳಸುವುದಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ  ಪ್ರತಿ ವರ್ಷ “ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”ಯನ್ನು ನಡೆಸುತ್ತಿದೆ.

ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಮಾಡುವಾಗ ತಳಮಟ್ಟದಲ್ಲಿ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದಾರೆ ಮತ್ತು ಅಂತಹ ಕೆಲಸಗಳು ಮತ್ತಷ್ಟು ಆಗಬೇಕಿದೆ ಎಂದು ನನಗೆ ಅನಿಸಿತು. ಬೇಕಾದಷ್ಟು ಬೋರ್‍ವೆಲ್‌ಗಳನ್ನು ಕೊರೆದು ನೀರನ್ನು ಹೀರುತ್ತಾ ಅಂತರ್ಜಲವನ್ನು ನಾವು ಸಾಕಷ್ಟು ಬಳಸಿಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ನಾವು ನೀರು ಇಲ್ಲದಂತೆ ಮಾಡುತ್ತಿದ್ದೇವೆ. ಹಾಗಾಗಿ ನಾವು ನೀರು ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಈ ಸಂಸ್ಥೆಯನ್ನು ಪ್ರಾರಂಭಿಸಿದೆವು ಎನ್ನುತ್ತಾರೆ ಅಮೀರ್ ಖಾನ್.

“ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”

ಈ ಬಾರಿ ವಾಟರ್‌ಕಪ್‌ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲು ಅಮೀರ್‌ ಖಾನ್‌ ಹಾಜರಿರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಅವರ ಬದಲಿಗೆ ಅವರ ಸ್ನೇಹಿತ ಬಾಲಿವುಡ್ ನಟ ಶಾರೂಕ್‌ ಖಾನ್‌ ಪ್ರಶಸ್ತಿ ವಿತರಿಸಿದರು. ಮಹಾರಾಷ್ಟ್ರ ಸರ್ಕಾರ ಪಾನಿ ಫೌಂಡೇಷನ್‌ಗೆ ಅಭಾರಿಯಾಯಿತು.

2016 ರಿಂದ ಶುರುವಾಗಿರುವ ಈ ಸ್ಫರ್ಧೆಯಲ್ಲಿ ವಿಜೇತವಾದ ಹಳ್ಳಿಗಳಿಗೆ ಮೊದಲ ಬಹುಮಾನ 50ಲಕ್ಷ, ದ್ವಿತೀಯ ಬಹುಮಾನ 30 ಲಕ್ಷ ಮತ್ತು ತೃತೀಯ ಬಹುಮಾನ 20 ಲಕ್ಷ ನೀಡಲಾಗುತ್ತದೆ. ಇದನ್ನು “ಬರದ ವಿರುದ್ಧ ಜನಾಂದೋಲನ” ಎಂದು ಕರೆಯಲಾಗುತ್ತದೆ. ಇದೊಂದು ‘ವಾಟರ್ ಗೇಮಿಂಗ್’ ಎನ್ನಬಹುದು. ಈ ಸ್ಫರ್ಧೆಯಲ್ಲಿ ಬೇರೆ ಬೇರೆ ಹಳ್ಳಿಗಳು ಭಾಗವಹಿಸಬಹುದು. ತಮ್ಮ ಹಳ್ಳಿಯಲ್ಲಿ ಅಂತರ್ಜಲ ಹೆಚ್ಚಿಸಲು ನೀರು ಸಂಗ್ರಹ ಮಾಡುವುದು ಈ ಆಟದ ನಿಯಮ. ಸುಸಜ್ಜಿತವಾಗಿ ಹೆಚ್ಚು ನೀರು ಸಂಗ್ರಹ ಮಾಡುವ ಹಳ್ಳಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಫರ್ಧೆ ಪ್ರತಿ ವರ್ಷ ಬೇಸಿಗೆಯ ಮಾರ್ಚ್ ಏಪ್ರಿಲ್ ನಿಂದ ಆರಂಭವಾಗಿ ಮಳೆಗಾಲ ಪ್ರಾರಂಭದ ಜೂನ್ ತಿಂಗಳಲ್ಲಿ ಮುಗಿಯುತ್ತದೆ.

ಸ್ಫರ್ಧೆಗೆ ಮುನ್ನ ತರಬೇತಿ: ಈ ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಿಗೆ ನೀರು ಶೇಖರಣ ವಲಯವನ್ನು ಹೇಗೆ ನಿರ್ಮಿಸಬೇಕು ಎನ್ನುವುದರ ಕುರಿತು ತಾಂತ್ರಿಕ ವಿಚಾರಗಳ ತರಬೇತಿ ಹಾಗೂ ಸಾಮಾಜಿಕ ನಾಯಕತ್ವದ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿ ಪಡೆದವರನ್ನು ‘ಜಲಧೂತ’ ಎಂದು ಕರೆಯಲಾಗುತ್ತದೆ.

ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಲ್ಲಿ ತರಬೇತಿ ಪಡೆಯಲು ಬಂದಾಗ ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು ಎಂಬ ನಿಯಮವೂ ಇದೆ. ತರಬೇತಿ ಪಡೆದವರು ವಾಪಸು ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸಿ ಸ್ಫರ್ಧೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಬೇಕಿರುತ್ತದೆ. ಈ ಕಾರ್ಯಕ್ಕೆ ಪಾನಿ ಫೌಂಡೇಷನ್ ನಿಂದ ತರಬೇತಿ ಮತ್ತು ಯಂತ್ರೋಪಕರಣಗಳಿಗೆ ಹಣ ನೀಡಲಾಗುತ್ತದೆ. ಇನ್ನುಳಿದಂತೆ ಯಂತ್ರಗಳ ನಿರ್ವಹಣೆ, ತೈಲ, ಇತ್ಯಾದಿಗಳಿಗೆ ಗ್ರಾಮಸ್ಥರೇ ಹಣ ಸಂಗ್ರಹ ಮಾಡಿಕೊಳ್ಳಬೇಕಿರುತ್ತದೆ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಸಹಾಯವನ್ನು ಗ್ರಾಮಸ್ಥರು ಪಡೆಯಬಹುದಾಗಿರುತ್ತದೆ. ಈ ಸ್ಫರ್ಧೆಯ ಮುಖ್ಯ ಒತ್ತು ಶ್ರಮಧಾನ ಆಗಿರುತ್ತದೆ.

ಹೆಮ್ಮರವಾಗಿ ಬೆಳೆಯುತ್ತಿರುವ ಬೀಜ: 25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

ಈ ಸ್ಪರ್ಧೆಯಲ್ಲಿ 2017 ರಲ್ಲಿ 30 ತಾಲ್ಲೂಕಿನ 1321 ಹಳ್ಳಿಗಳು ಭಾಗಿಯಾದರೆ, 2018 ರಲ್ಲಿ 75 ತಾಲ್ಲೂಕಿನ 4,025 ಹಳ್ಳಿಗಳನ್ನು ತಲುಪಿತ್ತು. 2019ರಲ್ಲಿ 9.15 ಕೋಟಿ ರೂಪಾಯಿಯ ಬಹುಮಾನದೊಂದಿಗೆ 24 ಜಿಲ್ಲೆಯ 76 ತಾಲ್ಲೂಕಿನ 4 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಪಾನಿ ಫೌಂಡೇಷನ್ ತಲುಪಿದೆ. 2016-17ರ ಒಂದು ವರ್ಷದ ಹೊತ್ತಿಗೆ ಸ್ಫರ್ಧೆಯಲ್ಲಿ ಭಾಗವಹಿಸಿದ ಹಳ್ಳಿಗಳಿಂದ 10 ಸಾವಿರ ಕೋಟಿ ಲೀಟರ್ ನೀರು ಸಂಗ್ರಹ ಪ್ರದೇಶವನ್ನು ಸೃಷ್ಟಿ ಮಾಡಿತ್ತು. ಅಂದಾಜು ಶೇ. 90% ರಷ್ಟು ಬರಪ್ರದೇಶಗಳನ್ನು ಪಾನಿ ಫೌಂಡೇಷನ್ ತಲುಪಿದೆ.

ನಗರ ನಿವಾಸಿಗಳು ಭಾಗಿ: 2017 ರಲ್ಲಿ ‘ಚಲಾ ಗಾವಿ’ (ಹಳ್ಳಿಗೆ ಹೋಗೋಣ) ಎಂಬ ಕರೆ ಕೊಟ್ಟು ಕಾರ್ಯಕ್ರಮ ರೂಪಿಸಿದಾಗ ಸುಮಾರು 25,000 ನಗರವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಊಟದ ವ್ಯವಸ್ಥೆಯನ್ನು ಜನರೇ ಮಾಡಿಕೊಂಡಿದ್ದರು. ಮೇ 1 ಕಾರ್ಮಿಕ ದಿನದಂದು ಹಳ್ಳಿಗಳಿಗೆ ಹೋಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ‘ಜಲ್ ಮಿತ್ರಾ’ (ನೀರಿನ ಸ್ನೇಹಿತ) ಎಂಬ ಕರೆ ನೀಡಿದಾಗ 1.3 ಲಕ್ಷ ಜನರು ಸ್ವಯಂಪ್ರೇರಿತರಾಗಿ ಶ್ರಮಧಾನದಲ್ಲಿ ಭಾಗಿಯಾಗಿದ್ದರು. ಇನ್ನೂ ಸಾವಿರಾರು ಜನರು ನಾವು ಕೇಳದೇ ಇದ್ದರೂ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ಸಂಸ್ಥಾಪಕರು.

ಬಾಲಿವುಡ್‌ನ ಘಟಾನುಘಟಿ ಸ್ಟಾರ್‌ಗಳಲ್ಲಿ ಬಹುತೇಕರು ಪಾನಿ ಫೌಂಡೇಶನ್‌ ಚಟುವಟಿಕೆಗಳೊಂದಿಗೆ ಕೈ ಜೋಡಿಸಿದ್ದಾರೆ.

ಯಾರೂ ಸೋಲದ ಆಟ: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವರ್ಷಕ್ಕೆ ಸುಮಾರು 9 ಕೋಟಿಗೂ ಹೆಚ್ಚು ಹಣದ ಬಹುಮಾನವನ್ನು ಕೆಲವು ಹಳ್ಳಿಗಳಿಗೆ ನೀಡುತ್ತಿದೆ ಆದರೂ ಸ್ಫರ್ಧೆಯಲ್ಲಿ ಬಹುಮಾನ ಪಡೆಯದೇ ಇರುವವರು ಯಾರೂ ಸೋಲುವುದಿಲ್ಲ. ಯಾಕೆಂದರೆ ಆ ಹಳ್ಳಿಯಲ್ಲಿ ನೀರು ಶೇಖರಣೆ ಪ್ರದೇಶ ನಿರ್ಮಾಣವಾಗಿರುತ್ತದೆ. ಹಲವು ಹಳ್ಳಿಗಳು ಈಗಾಗಲೇ ಟ್ಯಾಂಕರ್ ಮುಕ್ತವಾಗಿದ್ದು, ಅಂತರ್ಜಲ ಹೆಚ್ಚು ಮಾಡಿಕೊಂಡಿವೆ. ಈ ರೀತಿ ನೀರು ಸಂಗ್ರಹಸಿದ್ದರಿಂದ ಹಲವು ಹಳ್ಳಿಗಳು ಇದೀಗ ವರ್ಷಕ್ಕೆ ಮೂರು ಬೆಳೆಗಳನ್ನೂ ತೆಗೆಯುತ್ತಿವೆ.

ಒಮ್ಮೆ ನೆರೆ ಮತ್ತೊಮ್ಮೆ ಬರಗಾಲಕ್ಕೆ ನೈಸರ್ಗಿಕ ಕಾರಣಗಳು ಹಾಗೂ ಮಾನವ ನಿರ್ಮಿತ ಕಾರಣಗಳು ಇರಡೂ ಇದ್ದೇಯಿದೆ. ಮಳೆಯ ಜೊತೆಗಿನ ರೈತರ ಜೂಜಿನಾಟದಲ್ಲಿ ರೈತರ ಸೋಲು ಸಾವಿನವರಗೂ ಕರೆದುಕೊಂಡು ಹೋಗುತ್ತಿದೆ. ಇದನ್ನು ಸುಧಾರಿಸುವ ಕೆಲಸದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ಅದೊಂದು ಸಂಘಟಿತ ಕೆಲಸವಾಗಿರಬೇಕು. ಸರ್ಕಾರಗಳು ಮಾಡಬೇಕಿರುವ ಕೆಲಸಗಳನ್ನು ಪಾನಿ ಫೌಂಡೇಷನ್ ನಂತಹ ಸಂಸ್ಥೆಗಳು ದೇಶದಾದ್ಯಂತ ಮಾಡಲು ಸಾಧ್ಯವಿಲ್ಲ. ರೈತರ ಸಾಲ ಮನ್ನಾ, ವೈಜ್ಞಾನಿಕ ಬೆಲೆ, ಸ್ವಾಮಿನಾಥನ್ ಆಯೋಗದ ಶೀಪಾರಸ್ಸಿನ ಜಾರಿ ಇತ್ಯಾದಿ ಪಾಲಿಸಿ ವಿಚಾರಗಳು ಸರ್ಕಾರಗಳೇ ಮಾಡಬೇಕಿರುತ್ತದೆ. ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಷನ್‍ನ ಕೆಲಸಗಳನ್ನು ಅಭಿನಂದಿಸುತ್ತಲೇ ಸರ್ಕಾರದ ಜವಾಬ್ದಾರಿಯನ್ನು ನೆನಪಿಸುವ ಕೆಲಸಗಳನ್ನು ಜನರು ಮಾಡಬೇಕಿರುತ್ತದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...