HomeUncategorizedಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ...

ಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ…

25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

- Advertisement -
- Advertisement -

ಕರ್ನಾಟಕಕ್ಕೆ ಸತತವಾಗಿ ತಗುಲಿದ ಬರಗಾಲ ಹಾಗೂ ನೆರೆಯಿಂದಾಗಿ ಅಪಾರ ನಷ್ಟವಾಗಿದೆ. ರೈತರು ಜನಸಾಮಾನ್ಯರು ಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ನೀಡಬೇಕು ಎಂಬ ನ್ಯಾಯಯುತವಾದ ಹಕ್ಕೊತ್ತಾಯವನ್ನು ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದಿಟ್ಟಿವೆ…

ಕರ್ನಾಟಕದಂತೆಯೇ ಹೆಚ್ಚು ಬರಗಾಲ ಹಾಗೂ ರೈತರ ಆತ್ಮಹತ್ಯೆಗೆ ಕುಖ್ಯಾತಿಯನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. 2015 ರಲ್ಲಿ ಮಹಾರಾಷ್ಟ್ರದ ಸರ್ಕಾರದ ಪ್ರಕಾರ ಶೇ. 60% ಹಳ್ಳಿಗಳು ಬರಕ್ಕೆ ತುತ್ತಾಗಿದ್ದವು. ಶೇ 50% ಇಳುವರಿ ಕಡಿಮೆಯಾಗಿತ್ತು. ಈ ಸಮಯದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸತ್ಯಮೇವ ಜಯತೆ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಮೀರ್ ಖಾನ್ ಮತ್ತು ಕಾರ್ಯಕ್ರಮದ ತಂಡ ಪಾನಿ ಫೌಂಡೇಷನ್ ಅನ್ನು ಶುರು ಮಾಡಿತ್ತು. 2016 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ ಸತ್ಯಮೇವ ಜಯತೆ ಕಾರ್ಯಕ್ರಮದ ಮುಖ್ಯಸ್ಥರಾದ ಸತ್ಯಜಿತ್ ಬಟ್ಕಳ್ ಅವರೇ ಪಾನಿ ಫೌಂಡೇಷನ್ ನ ಮುಖ್ಯಸ್ಥರಾದರು. ಅಮೀರ್ ಖಾನ್ ಹಾಗೂ ಸಿನೆಮಾ ಬರಹಗಾರರು, ನಿರ್ದೇಶಕರು ಆಗಿರುವ ಕಿರಣ್ ರಾವ್ (ಅಮೀರ್ ಖಾನ್‍ರ ಹೆಂಡತಿ) ಅವರುಗಳು ಇದರ ಸಂಸ್ಥಾಪಕರಾದರು. ಪಾನಿ ಫೌಂಡೇಷನ್ ನ ಮುಖ್ಯ ಉದ್ದೇಶ ಮಳೆ ಬಂದಾಗ ನೀರು ಹರಿದು ಪೋಲಾಗದಂತೆ ತಡೆದು ವೈಜ್ಞಾನಿಕ ವಿಧಾನದಲ್ಲಿ ಸಂಗ್ರಹಿಸಿ ಬಳಸುವುದಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ  ಪ್ರತಿ ವರ್ಷ “ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”ಯನ್ನು ನಡೆಸುತ್ತಿದೆ.

ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಮಾಡುವಾಗ ತಳಮಟ್ಟದಲ್ಲಿ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದಾರೆ ಮತ್ತು ಅಂತಹ ಕೆಲಸಗಳು ಮತ್ತಷ್ಟು ಆಗಬೇಕಿದೆ ಎಂದು ನನಗೆ ಅನಿಸಿತು. ಬೇಕಾದಷ್ಟು ಬೋರ್‍ವೆಲ್‌ಗಳನ್ನು ಕೊರೆದು ನೀರನ್ನು ಹೀರುತ್ತಾ ಅಂತರ್ಜಲವನ್ನು ನಾವು ಸಾಕಷ್ಟು ಬಳಸಿಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ನಾವು ನೀರು ಇಲ್ಲದಂತೆ ಮಾಡುತ್ತಿದ್ದೇವೆ. ಹಾಗಾಗಿ ನಾವು ನೀರು ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಈ ಸಂಸ್ಥೆಯನ್ನು ಪ್ರಾರಂಭಿಸಿದೆವು ಎನ್ನುತ್ತಾರೆ ಅಮೀರ್ ಖಾನ್.

“ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”

ಈ ಬಾರಿ ವಾಟರ್‌ಕಪ್‌ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲು ಅಮೀರ್‌ ಖಾನ್‌ ಹಾಜರಿರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಅವರ ಬದಲಿಗೆ ಅವರ ಸ್ನೇಹಿತ ಬಾಲಿವುಡ್ ನಟ ಶಾರೂಕ್‌ ಖಾನ್‌ ಪ್ರಶಸ್ತಿ ವಿತರಿಸಿದರು. ಮಹಾರಾಷ್ಟ್ರ ಸರ್ಕಾರ ಪಾನಿ ಫೌಂಡೇಷನ್‌ಗೆ ಅಭಾರಿಯಾಯಿತು.

2016 ರಿಂದ ಶುರುವಾಗಿರುವ ಈ ಸ್ಫರ್ಧೆಯಲ್ಲಿ ವಿಜೇತವಾದ ಹಳ್ಳಿಗಳಿಗೆ ಮೊದಲ ಬಹುಮಾನ 50ಲಕ್ಷ, ದ್ವಿತೀಯ ಬಹುಮಾನ 30 ಲಕ್ಷ ಮತ್ತು ತೃತೀಯ ಬಹುಮಾನ 20 ಲಕ್ಷ ನೀಡಲಾಗುತ್ತದೆ. ಇದನ್ನು “ಬರದ ವಿರುದ್ಧ ಜನಾಂದೋಲನ” ಎಂದು ಕರೆಯಲಾಗುತ್ತದೆ. ಇದೊಂದು ‘ವಾಟರ್ ಗೇಮಿಂಗ್’ ಎನ್ನಬಹುದು. ಈ ಸ್ಫರ್ಧೆಯಲ್ಲಿ ಬೇರೆ ಬೇರೆ ಹಳ್ಳಿಗಳು ಭಾಗವಹಿಸಬಹುದು. ತಮ್ಮ ಹಳ್ಳಿಯಲ್ಲಿ ಅಂತರ್ಜಲ ಹೆಚ್ಚಿಸಲು ನೀರು ಸಂಗ್ರಹ ಮಾಡುವುದು ಈ ಆಟದ ನಿಯಮ. ಸುಸಜ್ಜಿತವಾಗಿ ಹೆಚ್ಚು ನೀರು ಸಂಗ್ರಹ ಮಾಡುವ ಹಳ್ಳಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಫರ್ಧೆ ಪ್ರತಿ ವರ್ಷ ಬೇಸಿಗೆಯ ಮಾರ್ಚ್ ಏಪ್ರಿಲ್ ನಿಂದ ಆರಂಭವಾಗಿ ಮಳೆಗಾಲ ಪ್ರಾರಂಭದ ಜೂನ್ ತಿಂಗಳಲ್ಲಿ ಮುಗಿಯುತ್ತದೆ.

ಸ್ಫರ್ಧೆಗೆ ಮುನ್ನ ತರಬೇತಿ: ಈ ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಿಗೆ ನೀರು ಶೇಖರಣ ವಲಯವನ್ನು ಹೇಗೆ ನಿರ್ಮಿಸಬೇಕು ಎನ್ನುವುದರ ಕುರಿತು ತಾಂತ್ರಿಕ ವಿಚಾರಗಳ ತರಬೇತಿ ಹಾಗೂ ಸಾಮಾಜಿಕ ನಾಯಕತ್ವದ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿ ಪಡೆದವರನ್ನು ‘ಜಲಧೂತ’ ಎಂದು ಕರೆಯಲಾಗುತ್ತದೆ.

ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಲ್ಲಿ ತರಬೇತಿ ಪಡೆಯಲು ಬಂದಾಗ ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು ಎಂಬ ನಿಯಮವೂ ಇದೆ. ತರಬೇತಿ ಪಡೆದವರು ವಾಪಸು ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸಿ ಸ್ಫರ್ಧೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಬೇಕಿರುತ್ತದೆ. ಈ ಕಾರ್ಯಕ್ಕೆ ಪಾನಿ ಫೌಂಡೇಷನ್ ನಿಂದ ತರಬೇತಿ ಮತ್ತು ಯಂತ್ರೋಪಕರಣಗಳಿಗೆ ಹಣ ನೀಡಲಾಗುತ್ತದೆ. ಇನ್ನುಳಿದಂತೆ ಯಂತ್ರಗಳ ನಿರ್ವಹಣೆ, ತೈಲ, ಇತ್ಯಾದಿಗಳಿಗೆ ಗ್ರಾಮಸ್ಥರೇ ಹಣ ಸಂಗ್ರಹ ಮಾಡಿಕೊಳ್ಳಬೇಕಿರುತ್ತದೆ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಸಹಾಯವನ್ನು ಗ್ರಾಮಸ್ಥರು ಪಡೆಯಬಹುದಾಗಿರುತ್ತದೆ. ಈ ಸ್ಫರ್ಧೆಯ ಮುಖ್ಯ ಒತ್ತು ಶ್ರಮಧಾನ ಆಗಿರುತ್ತದೆ.

ಹೆಮ್ಮರವಾಗಿ ಬೆಳೆಯುತ್ತಿರುವ ಬೀಜ: 25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

ಈ ಸ್ಪರ್ಧೆಯಲ್ಲಿ 2017 ರಲ್ಲಿ 30 ತಾಲ್ಲೂಕಿನ 1321 ಹಳ್ಳಿಗಳು ಭಾಗಿಯಾದರೆ, 2018 ರಲ್ಲಿ 75 ತಾಲ್ಲೂಕಿನ 4,025 ಹಳ್ಳಿಗಳನ್ನು ತಲುಪಿತ್ತು. 2019ರಲ್ಲಿ 9.15 ಕೋಟಿ ರೂಪಾಯಿಯ ಬಹುಮಾನದೊಂದಿಗೆ 24 ಜಿಲ್ಲೆಯ 76 ತಾಲ್ಲೂಕಿನ 4 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಪಾನಿ ಫೌಂಡೇಷನ್ ತಲುಪಿದೆ. 2016-17ರ ಒಂದು ವರ್ಷದ ಹೊತ್ತಿಗೆ ಸ್ಫರ್ಧೆಯಲ್ಲಿ ಭಾಗವಹಿಸಿದ ಹಳ್ಳಿಗಳಿಂದ 10 ಸಾವಿರ ಕೋಟಿ ಲೀಟರ್ ನೀರು ಸಂಗ್ರಹ ಪ್ರದೇಶವನ್ನು ಸೃಷ್ಟಿ ಮಾಡಿತ್ತು. ಅಂದಾಜು ಶೇ. 90% ರಷ್ಟು ಬರಪ್ರದೇಶಗಳನ್ನು ಪಾನಿ ಫೌಂಡೇಷನ್ ತಲುಪಿದೆ.

ನಗರ ನಿವಾಸಿಗಳು ಭಾಗಿ: 2017 ರಲ್ಲಿ ‘ಚಲಾ ಗಾವಿ’ (ಹಳ್ಳಿಗೆ ಹೋಗೋಣ) ಎಂಬ ಕರೆ ಕೊಟ್ಟು ಕಾರ್ಯಕ್ರಮ ರೂಪಿಸಿದಾಗ ಸುಮಾರು 25,000 ನಗರವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಊಟದ ವ್ಯವಸ್ಥೆಯನ್ನು ಜನರೇ ಮಾಡಿಕೊಂಡಿದ್ದರು. ಮೇ 1 ಕಾರ್ಮಿಕ ದಿನದಂದು ಹಳ್ಳಿಗಳಿಗೆ ಹೋಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ‘ಜಲ್ ಮಿತ್ರಾ’ (ನೀರಿನ ಸ್ನೇಹಿತ) ಎಂಬ ಕರೆ ನೀಡಿದಾಗ 1.3 ಲಕ್ಷ ಜನರು ಸ್ವಯಂಪ್ರೇರಿತರಾಗಿ ಶ್ರಮಧಾನದಲ್ಲಿ ಭಾಗಿಯಾಗಿದ್ದರು. ಇನ್ನೂ ಸಾವಿರಾರು ಜನರು ನಾವು ಕೇಳದೇ ಇದ್ದರೂ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ಸಂಸ್ಥಾಪಕರು.

ಬಾಲಿವುಡ್‌ನ ಘಟಾನುಘಟಿ ಸ್ಟಾರ್‌ಗಳಲ್ಲಿ ಬಹುತೇಕರು ಪಾನಿ ಫೌಂಡೇಶನ್‌ ಚಟುವಟಿಕೆಗಳೊಂದಿಗೆ ಕೈ ಜೋಡಿಸಿದ್ದಾರೆ.

ಯಾರೂ ಸೋಲದ ಆಟ: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವರ್ಷಕ್ಕೆ ಸುಮಾರು 9 ಕೋಟಿಗೂ ಹೆಚ್ಚು ಹಣದ ಬಹುಮಾನವನ್ನು ಕೆಲವು ಹಳ್ಳಿಗಳಿಗೆ ನೀಡುತ್ತಿದೆ ಆದರೂ ಸ್ಫರ್ಧೆಯಲ್ಲಿ ಬಹುಮಾನ ಪಡೆಯದೇ ಇರುವವರು ಯಾರೂ ಸೋಲುವುದಿಲ್ಲ. ಯಾಕೆಂದರೆ ಆ ಹಳ್ಳಿಯಲ್ಲಿ ನೀರು ಶೇಖರಣೆ ಪ್ರದೇಶ ನಿರ್ಮಾಣವಾಗಿರುತ್ತದೆ. ಹಲವು ಹಳ್ಳಿಗಳು ಈಗಾಗಲೇ ಟ್ಯಾಂಕರ್ ಮುಕ್ತವಾಗಿದ್ದು, ಅಂತರ್ಜಲ ಹೆಚ್ಚು ಮಾಡಿಕೊಂಡಿವೆ. ಈ ರೀತಿ ನೀರು ಸಂಗ್ರಹಸಿದ್ದರಿಂದ ಹಲವು ಹಳ್ಳಿಗಳು ಇದೀಗ ವರ್ಷಕ್ಕೆ ಮೂರು ಬೆಳೆಗಳನ್ನೂ ತೆಗೆಯುತ್ತಿವೆ.

ಒಮ್ಮೆ ನೆರೆ ಮತ್ತೊಮ್ಮೆ ಬರಗಾಲಕ್ಕೆ ನೈಸರ್ಗಿಕ ಕಾರಣಗಳು ಹಾಗೂ ಮಾನವ ನಿರ್ಮಿತ ಕಾರಣಗಳು ಇರಡೂ ಇದ್ದೇಯಿದೆ. ಮಳೆಯ ಜೊತೆಗಿನ ರೈತರ ಜೂಜಿನಾಟದಲ್ಲಿ ರೈತರ ಸೋಲು ಸಾವಿನವರಗೂ ಕರೆದುಕೊಂಡು ಹೋಗುತ್ತಿದೆ. ಇದನ್ನು ಸುಧಾರಿಸುವ ಕೆಲಸದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ಅದೊಂದು ಸಂಘಟಿತ ಕೆಲಸವಾಗಿರಬೇಕು. ಸರ್ಕಾರಗಳು ಮಾಡಬೇಕಿರುವ ಕೆಲಸಗಳನ್ನು ಪಾನಿ ಫೌಂಡೇಷನ್ ನಂತಹ ಸಂಸ್ಥೆಗಳು ದೇಶದಾದ್ಯಂತ ಮಾಡಲು ಸಾಧ್ಯವಿಲ್ಲ. ರೈತರ ಸಾಲ ಮನ್ನಾ, ವೈಜ್ಞಾನಿಕ ಬೆಲೆ, ಸ್ವಾಮಿನಾಥನ್ ಆಯೋಗದ ಶೀಪಾರಸ್ಸಿನ ಜಾರಿ ಇತ್ಯಾದಿ ಪಾಲಿಸಿ ವಿಚಾರಗಳು ಸರ್ಕಾರಗಳೇ ಮಾಡಬೇಕಿರುತ್ತದೆ. ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಷನ್‍ನ ಕೆಲಸಗಳನ್ನು ಅಭಿನಂದಿಸುತ್ತಲೇ ಸರ್ಕಾರದ ಜವಾಬ್ದಾರಿಯನ್ನು ನೆನಪಿಸುವ ಕೆಲಸಗಳನ್ನು ಜನರು ಮಾಡಬೇಕಿರುತ್ತದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...