Homeಮುಖಪುಟವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

ವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

- Advertisement -
- Advertisement -

ಜೀವನ ಕಲೆಗಳು: ಅಂಕಣ-3

| ಜಿ. ಆರ್. ವಿದ್ಯಾರಣ್ಯ |

ತನ್ನ ಸ್ವಂತ ಶಕ್ತಿ/ದೌರ್ಬಲ್ಯವನ್ನು ಅರಿತುಕೊಳ್ಳುವ ಕಲೆಗೆ “ಸ್ವೊಟ್ ಎನಾಲಿಸಿಸ್” (SWOT ANALYSIS) ಎನ್ನುತ್ತಾರೆ. ಇದನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೂಡ ಬಳಸಬಹುದು. ಇದರಿಂದ ವ್ಯಕ್ತಿಯ/ಸಂಸ್ಥೆಯ ಶಕ್ತಿ (Strength), ದೌರ್ಬಲ್ಯ (Weakness), ಅವಕಾಶ (Opportunity) ಮತ್ತು ಭೀತಿ (Threat) ಗಳನ್ನು ಅರಿತುಕೊಳ್ಳಬಹುದು.ಈ ವಿಶ್ಲೇಷಣೆಯನ್ನು ವ್ಯಕ್ತಿಯ ಪರವಾಗಿ ಬಳಸಿದಲ್ಲಿ ವ್ಯಕ್ತಿಯ ಸಹಜ ಶಕ್ತಿ-ಸಾಮರ್ಥ್ಯಗಳನ್ನು ಅರಿತು ಅದಕ್ಕೆ ತಕ್ಕ ಅವಕಾಶಗಳನ್ನು ಹುಡುಕಲು ನೆರವಾಗುತ್ತದೆ. ಸಂಸ್ಥೆಯ ಪರವಾಗಿ ಉಪಯೋಗಿಸಿದಲ್ಲಿ ಅದರ ಮಾರುಕಟ್ಟೆಯ ಹಿಡಿತ ಬಲಪಡಿಸುವುದಕ್ಕೆ ಅಥವಾ ಹೊಸ ಆವಿಶ್ಕಾರವನ್ನು ಹೊರಬಿಡಲು ಸಹಕಾರಿಯಾಗುತ್ತದೆ.

ಸ್ವೊಟ್ ಎನಾಲಿಸಿಸ್ (SWOT ANALYSIS)ಮಾಡುವುದರಿಂದ ನಮ್ಮ ಶಕ್ತಿ ಏನು ಮತ್ತು ದೌರ್ಬಲ್ಯ ಏನು ಎಂಬುದನ್ನು ತಿಳಿಯಬಹುದು. ಉದಾಹರಣೆಗೆ ನಿಮ್ಮ ಇತ್ತೀಚಿನ ಶಾಲಾ/ಕಾಲೇಜು ತರಗತಿಯ ಅಂಕ ಪಟ್ಟಿ ನೋಡಿದಾಕ್ಷಣ ಯಾವ ವಿಷಯದಲ್ಲಿ ನೀವು ಗಟ್ಟಿಗರು, ಯಾವುದರಲ್ಲಿ ನಿಮಗೆ ಶಕ್ತಿ ಸಾಲದು ಎಂಬುದು ಕೂಡಲೇ ತಿಳಿಯುತ್ತದೆ. ಯಾವ ವಿಷಯದಲ್ಲಿ ನೀವು ಹೆಚ್ಚು ಅಂಕ ಗಳಿಸಿದ್ದೀರೋ, ಅದು ನಿಮ್ಮ ಸಹಜ ಶಕ್ತಿ. ಯಾವ ವಿಷಯ ಎಷ್ಟೇ ಪರಿಶ್ರಮ ಪಟ್ಟರೂ, ನಿಮ್ಮ ತಲೆಗೆ ಹತ್ತುವುದಿಲ್ಲವೋ ಅದು ನಿಮ್ಮ ದೌರ್ಬಲ್ಯ, ಆದರೆ ಎರಡೂ, ಶಕ್ತಿ ಮತ್ತು ದೌರ್ಬಲ್ಯ, ತಾತ್ಕಾಲಿಕ. ಇದಕ್ಕೆ ಕಾರಣ ನೀವು ಕಂಡುಕೊಳ್ಳಬೇಕು. ಬಹುಶಃ ನಿಮ್ಮ ಕಲಿಯುವ ರೀತಿ ಸರಿಯಾಗಿಲ್ಲದಿರಬಹುದು ಅಥವಾ ಶಾಲೆಯಲ್ಲಿ ಕಲಿಸುವ ವಿಧಾನದಲ್ಲಿ ತೊಂದರೆ ಇರಬಹುದು. ಸರಿಯಾದ ಕಾರಣ ತಿಳಿದು ಸಮಸ್ಯೆ ಪರಿಹರಿಸಿದಲ್ಲಿ ದೌರ್ಬಲ್ಯವನ್ನು ಶಕ್ತಿಯಾಗಿ ಬದಲಾಯಿಸಿಕೊಳ್ಳಲು ಸಾಧ್ಯ.

ಅದೇ ರೀತಿಯಲ್ಲಿ ನಿಮ್ಮ ಶಕ್ತಿಯಿಂದ ನಿಮಗೆ ಈಗಿರುವ ಅಥವಾ ಸಿಗಬಹುದಾದ ಅವಕಾಶಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದಲ್ಲಿ ಅತಿ ಹೆಚ್ಚಿನ ಆಸಕ್ತಿ/ಉತ್ಸಾಹವಿದ್ದಲ್ಲಿ ಅದಕ್ಕೆ ಸಿಗಬಹುದಾದ ಪಾರಿತೋಷಕ, ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮುಂತಾದವುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಅದಕ್ಕೆ ಪೂರಕವಾದ ಲೇಖನ ರಚಿಸಿ ಲಗತ್ತಿಸಬೇಕಾಗಬಹುದು. ಅದೇ ವಿಷಯದಲ್ಲಿ ಉನ್ನತ ಅಭ್ಯಾಸಕ್ಕೆ ಇರುವ ಬೇರೆ ಬೇರೆ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು.

ವಿಜ್ಞಾನ ಸಂಬಂಧಿ ವಿಷಯಗಳಲ್ಲಿ ನಿಮಗೆ ಹೆಚ್ಚು ಅಂಕಗಳು ಬರುತ್ತಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಕಷ್ಟವಾಗಿದ್ದರೆ ನೀವು ಎಸ್.ಎಸ್.ಎಲ್.ಸಿ. ನಂತರ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಸಿ. ಅಥವಾ ಪಿ.ಸಿ.ಎಂ.ಇ. ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ವಿಜ್ಞಾನ ಸಂಬಂಧಿ ವಿಷಯಗಳುನಿಮಗೆ ಕಷ್ಟಕರ ಎನಿಸುತ್ತಿದ್ದು, ಭಾಷೆ, ಇತಿಹಾಸ, ಭೂಗೋಳ ಮುಂತಾದವು ಸುಲಭವಾಗಿದ್ದರೆ ನೀವು ಹ್ಯುಮಾನಿಟೀಸ್ ಶಾಖೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ನೀವು ಲೆಕ್ಕದಲ್ಲಿ ಗಟ್ಟಿಗರು ಮತ್ತು ಭಾಷೆಯೂ ಸುಲಭ ಎನಿಸಿದರೆ ಕಾಮರ್ಸ್ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇ ಬೇಕೆಂಬ ನಿಯಮವೂ ಇಲ್ಲ, ಅಗತ್ಯವೂ ಇಲ್ಲ. ಯಾವುದೇ ಮಾರ್ಗವನ್ನು ನೀವು ನಿಮ್ಮ ಸಹಜ ಶಕ್ತಿ ಗುಣವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ, ಹೆಚ್ಚು ಪರಿಶ್ರಮವಿಲ್ಲದೇ ಉನ್ನತ ಸಾಧನೆ ಮಾಡಲು ಬಹಳಷ್ಟು ಅವಕಾಶವಿರುತ್ತದೆ.

ಇತ್ತೀಚೆಗೆ ಏಪ್ರಿಲ್/ಮೇ ತಿಂಗಳಲ್ಲಿ ಕಾಲೇಜುಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳು ನಗರದಾದ್ಯಂತ ಮಾರಾಟ ಮೇಳಗಳನ್ನು ಆಯೋಜಿಸುತ್ತಾರೆ. ಇದರಲ್ಲಿ, ಶಿಕ್ಷಣ ತಜ್ಞರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಅವರಿಗೆ ಇರುವ ಹೊಸ ಹೊಸ ವೃತ್ತಿಪರ ಕೋರ್ಸುಗಳ ಬಗ್ಗೆ ತಿಳಿಸಿಕೊಡುತ್ತಾರೆ. ಇಂತಹ ಮೇಳಗಳಲ್ಲಿ ಮಕ್ಕಳು ಮತ್ತು ಪೋಷಕರು ಭಾಗವಹಿಸಬೇಕು. ಒಳ್ಳೆಯ ವರಮಾನ/ಬಡ್ತಿ ಅವಕಾಶವಿರುವ ಹುದ್ದೆಗಳ ದೃಷ್ಟಿಯಿಂದ ಯಾವ ಯಾವ ಕ್ಷೇತ್ರದಲ್ಲಿ, ಮುಂಬರುವ ಎಷ್ಟು ವರ್ಷದಲ್ಲಿ, ಎಷ್ಟು ಹುದ್ದೆಗಳು ಸೃಷ್ಟಿಯಾಗಲಿವೆ ಎಂಬ ಖಚಿತ ಮಾಹಿತಿ ದುರದೃಷ್ಟವಶಾತ್ ಎಲ್ಲೂ ಸಿಗುವುದಿಲ್ಲ. ಈಗ ಕಂಪ್ಯೂಟರ್ ಕ್ಷೇತ್ರದಲ್ಲಿ ಎ.ಐ. (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಶಕ್ತಿ) ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದೆ ಎಂದು ಕೇಳಿಬಂದರೂ ಸಹ ಮುಂಬರುವ ಐದು ವರ್ಷದಲ್ಲಿ ಏನಾಗಬಹುದು ಎಂದು ಯಾರಿಗೂ ಗೊತ್ತಿಲ್ಲ ಆದ್ದರಿಂದ ಈಗ ಆ ಕೋರ್ಸಿಗೆ ಸೇರುವ ಮಕ್ಕಳಿಗೆ ತಮ್ಮ ಭವಿಷ್ಯ ಹೇಗಿರುತ್ತದೆ ಎಂದು ಖಚಿತಗೊಳಿಸಿಕೊಳ್ಳಲು ಸಾಧ್ಯವಿಲ್ಲ.

ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳು ಆನ್-ಲೈನ್ ಉಚಿತ ಪರೀಕ್ಷೆ ಮಾಡಿಕೊಂಡಲ್ಲಿ ಅವರ ವ್ಯಕ್ತಿತ್ವ ಮಾದರಿ ಯಾವುದು ಎಂಬುದು ತಿಳಿಯುತ್ತದೆ. ಈ ಸ್ವ-ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ವ್ಯಕ್ತಿತ್ವದ ಇಂಡಿಕೇಟರ್ ಪ್ರಕಾರ ಯಾವ ಜೀವನೋಪಾಯ/ವೃತ್ತಿ ಅವರಿಗೆ ಸಹಜ ಮತ್ತು ಸರಳ ಎಂಬುದನ್ನು ನಿರ್ಧರಿಸಬಹುದು. ಅದೇ ರೀತಿ ಅವರ ಮುಂದಿನ ಉನ್ನತ ಶೈಕ್ಷಣಿಕ ಆಯ್ಕೆಯನ್ನೂ ಸಹ ಅವರು ಅಥವಾ ಪೋಷಕರು ನಿರ್ಧರಿಸಬಹುದು.

ಅಪಾಯದ ಎಚ್ಚರಿಕೆ: ಎಂಬಿಟಿಐ ಅಥವಾ ಬಿಗ್-ಫೈವ್ ಆಗಲೀ ಸಂಪೂರ್ಣ ವೈಜ್ಞಾನಿಕ ತತ್ವವಾದ ಅಲ್ಲ, ಆದ್ದರಿಂದ ಮಕ್ಕಳ ಭವಿಷ್ಯ ರೂಪಿಸುವ ಮುನ್ನ, ಪರಿಣಿತರ, ವೃತ್ತಿಪರರ ಸಲಹೆ ಪಡೆಯುವುದು ಅತ್ಯಂತ ಅವಶ್ಯಕ. ಕೇವಲ ಅಂತರ್ಜಾಲದ ಮಾಹಿತಿ ನಂಬಿ, ಅಥವಾ ಒಂದು ಲೇಖನ ಓದಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಹು ದೊಡ್ಡ ನಿರ್ಧಾರಕ್ಕೆ ಬರಬೇಡಿ.

ಎಸ್.ಎಸ್.ಎಲ್.ಸಿ. ನಂತರ ದ್ವಿತೀಯ ಪಿಯುಸಿ ಸಾಕು (ಅಥವಾ ಯಾವುದೋ ಒಂದು ಪದವಿ ಗಿಟ್ಟಿಸಿದರೆ ಸಾಕು) ಎಂದು ಓದನ್ನು ಅಲ್ಲಿಗೇ ನಿಲ್ಲಿಸಿ, ಯಾವ ಕೆಲಸಕ್ಕೆ ಸೇರಬೇಕು ಎಂಬುದನ್ನು ನಿರ್ಧರಿಸಲಾಗದೇ ಇರುವ ಯುವಕ/ಯುವತಿಯರಿಗೆ ಇಲ್ಲಿದೆ ಒಂದು ಸರಳ ದಾರಿ. ಮೊದಲು ಮೇಲೆ ತಿಳಿಸಿದಂತೆ, ನಿಮ್ಮ ಸ್ವೊಟ್ ಎನಾಲಿಸಿಸ್ ನೀವೇ ಮಾಡಿಕೊಳ್ಳಿ. ನೀವು ಎಂತಹ ವ್ಯಕ್ತಿ ಎಂದು ನೀವೇ ನಿರ್ಧರಿಸಿಕೊಳ್ಳಿ. ನಂತರ ಶಾಲೆ/ಕಾಲೇಜಿನಲ್ಲಿ ನೀವು ಸುಲಭವಾಗಿ ಕಲಿತ ವಿಷಯ, ನೀವು ಸ್ವ-ಇಚ್ಛೆಯಿಂದ, ಸ್ವಯಂಸೇವಕರಾಗಿ, ಇಷ್ಟ ಪಟ್ಟು ಮಾಡಿದ ಕೆಲಸಗಳು (ಸ್ಕೌಟ್/ಗೈಡ್, ಎನ್.ಎಸ್.ಎಸ್., ಗ್ರಾಹಕ ಕ್ಲಬ್, ವಿಜ್ಞಾನ ಕ್ಲಬ್, ಬರವಣಿಗೆ/ಚಿತ್ರಕಲೆ, ಸಾಮಾಜಿಕ/ಧಾರ್ಮಿಕ ಚಟುವಟಿಕೆ, ಅಥವಾ ಧನಸಂಗ್ರಹ ಇತ್ಯಾದಿ), ಇಷ್ಟವಾದ/ಭಾಗವಹಿಸಿದ ಕ್ರೀಡೆಗಳು ಯಾವುದು ಎಂದು ಒಂದನ್ನೂ ಬಿಡದೆ, ಹಾಳೆಯಲ್ಲಿ ಗುರುತು ಹಾಕಿಕೊಳ್ಳಿ. ಇವನ್ನೆಲ್ಲಾ ಒಂದೊಂದು ಮಣಿಗಳು ಎಂದು ಭಾವಿಸಿ, ಅವನ್ನು ಪೋಣಿಸಿ ಹಾರವನ್ನಾಗಿ ಮಾಡಬಹುದೇ ಯೋಚಿಸಿ. ಹಾರಕ್ಕೆ ಒಂದೆರಡು ಮಣಿಗಳು ಕಡಿಮೆ ಎಂದೆನಿಸಿದರೆ ಅವನ್ನು ಪಡೆಯಲು ನಿಮ್ಮ ಪ್ರಯತ್ನ ಹೇಗಿರಬೇಕು ಎಂದು ಯೋಚಿಸಿ. ನಿಮ್ಮ ಮುಂದಿನ ದಾರಿ ತಾನಾಗಿಯೇ ಗೋಚರಿಸುತ್ತದೆ.

ಇದನ್ನೂ ಒದಿ: ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ಇದನ್ನೂ ಓದಿ: ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...