Homeಎಕಾನಮಿ460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ 'ಆಕ್ಸ್‌ಫಾಮ್'...

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಭಾರತದ ಕೇವಲ 63 ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತು 2018-19ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ಮೊತ್ತವಾದ 24,42,200 ಕೋಟಿ ರೂ.ಗಳನ್ನು ಮೀರಿತ್ತು. ಇದರಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು

- Advertisement -
- Advertisement -

ಮೂಲ: ‘ಲೈವ್‌ಮಿಂಟ್’
ನಿರೂಪಣೆ: ನಿಖಿಲ್ ಕೋಲ್ಪೆ

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯ 50ನೇ ವಾರ್ಷಿಕ ಸಭೆಯ ಸಂದರ್ಭದಲ್ಲಿ ಮಾನವ ಹಕ್ಕು ಸಂಸ್ಥೆ ‘ಆಕ್ಸ್‌ಫಾಮ್’ ತನ್ನ ಅಧ್ಯಯನ ವರದಿ ‘ಟೈಮ್ ಟು ಕೇರ್” ಬಿಡುಗಡೆ ಮಾಡಿದ್ದು, ಅದು, ಭಾರತ ಮತ್ತು ಜಗತ್ತಿನಾದ್ಯಂತ ಅತಿ ಶ್ರೀಮಂತರು ಹಾಗೂ ಬಡವರ ನಡುವಿನ ಕಂದರ ಆತಂಕಕಾರಿಯಾಗಿ ಬೆಳೆದಿರುವುದು ಮತ್ತು ಜಗತ್ತಿನ ಸಂಪತ್ತು ಕೆಲವೇ ಶ್ರೀಮಂತರ ಕೈಯಲ್ಲಿರುವುದನ್ನು ತೋರಿಸಿಕೊಟ್ಟಿದೆ.

ಅದರ ಪ್ರಕಾರ, ಒಂದು ಶೇಕಡಾ ಸಿರಿವಂತ ಭಾರತೀಯರ ಸಂಪತ್ತು- 70 ಶೇಕಡಾ ಬಡ ಭಾರತೀಯರ, ಅಂದರೆ 95.3 ಕೋಟಿ ಜನರ ಒಟ್ಟು ಸಂಪತ್ತಿನ ನಾಲ್ಕು ಪಟ್ಟಿನಷ್ಟಿದೆ. ಜಗತ್ತಿನ ಕೇವಲ 2,153 ಮಂದಿ ಶತಕೋಟಿಪತಿಗಳು 460 ಕೋಟಿ, ಅಂದರೆ ಈ ಭೂಮಿಯ 60 ಶೇಕಡಾ ಜನರ ಒಟ್ಟು ಸಂಪತ್ತಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಕಳೆದ ದಶಕದಲ್ಲಿ ಶತಕೋಟಿಪತಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಕಡು ಬಡವರ ಸಂಖ್ಯೆಯೂ ಅದೇ ರೀತಿಯಲ್ಲಿ ಬೆಳೆದಿದೆ.

“ಇಂತಹಾ ದಂಗುಬಡಿಸುವ ಕಂದರವನ್ನು ಕಡಿಮೆ ಮಾಡುವುದು, ಉದ್ದೇಶಪೂರ್ವಕವಾದ ಧೋರಣೆ ಮತ್ತು ಪ್ರಯತ್ನವಿಲ್ಲದೇ ಸಾಧ್ಯವಿಲ್ಲ. ಆದರೆ, ಕೆಲವೇ ಕೆಲವು ಸರಕಾರಗಳು ಇಂತಹಾ ಪ್ರಯತ್ನಗಳಿಗೆ ಬದ್ಧತೆ ಹೊಂದಿವೆ” ಎಂದು ‘ಆಕ್ಸ್‌ಫಾಮ್’ನ ಭಾರತ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಬೆಹರ್ ಹೇಳುತ್ತಾರೆ.

ಆದಾಯ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳು ಐದು ದಿನಗಳ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗುವ ನಿರೀಕ್ಷೆಯಿದೆ. ಡಬ್ಲ್ಯೂಇಎಫ್‌ನ ವಾರ್ಷಿಕ ಜಾಗತಿಕ ಅಪಾಯ ಕುರಿತ ಸ್ವಂತ ವರದಿ ಕೂಡಾ 2020ರಲ್ಲಿ ಜಾಗತಿಕ ಆರ್ಥಿಕತೆಯು ಕೆಳಮುಖ ಒತ್ತಡ ಎದುರಿಸುವ ಕುರಿತು ಎಚ್ಚರಿಕೆ ನೀಡಿದೆ. 2019ರಲ್ಲಿಯೂ ಅರ್ಥಿಕ ಅಸಮಾನತೆಯ ತೀವ್ರತೆ ಮುಂದುವರಿದಿತ್ತು.

ಲ್ಯಾಟಿನ್ ಮತ್ತು ಮಧ್ಯ ಅಮೆರಿಕ ದೇಶಗಳು ಸೇರಿದಂತೆ, ಜಗತ್ತಿನ ಪ್ರತಿಯೊಂದು ಖಂಡದಲ್ಲಿ ಸಾಮಾಜಿಕ ತಲ್ಲಣಗಳು ಸಂಭವಿಸುತ್ತಿದ್ದು, ಪ್ರಜಾಪ್ರಭುತ್ವಗಳು ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಆರ್ಥಿಕ ಕಂದರ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದು, ಪರಿಸ್ಥಿತಿಯ ಸ್ಫೋಟಕತೆಯನ್ನು ಸೂಚಿಸುತ್ತದೆ. ಏಕೆಂದರೆ, ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಕಂಡುಬರುತ್ತಿದ್ದು, ತೀವ್ರಗೊಳ್ಳುತ್ತಿರುವ ಸಾಮಾಜಿಕ ಅಶಾಂತಿಗೆ ಹೆಚ್ಚುತ್ತಿರುವ ಭ್ರಷ್ಟಾಚಾರ, ಸಂವಿಧಾನದ ಉಲ್ಲಂಘನೆ, ಬಲಪಂಥೀಯ ಪ್ರಭಾವ, ಫ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆ, ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಳ, ನಿರುದ್ಯೋಗ, ಕುಸಿಯುತ್ತಿರುವ ಆದಾಯ ಇತ್ಯಾದಿಯಾಗಿ ಹಲವಾರು ಕಾರಣಗಳಿವೆ.

ದೇಶದೇಶಗಳ ನಡುವಿನ ಆರ್ಥಿಕ ಅಸಮಾನತೆ ಕಳೆದ ಮೂರು ದಶಕಗಳಲ್ಲಿ ಕಡಿಮೆಯಾಗಿದ್ದರೂ, ದೇಶಗಳೊಳಗೆ ಜನರ ಆದಾಯದಲ್ಲಿ ಅಸಮಾನತೆ ತೀವ್ರಗೊಂಡಿದೆ. ಇದು ಮುಖ್ಯವಾಗಿ ಮುಂದುವರಿದ ಆರ್ಥಿಕತೆಗಳನ್ನೂ ತಟ್ಟಿದ್ದು, ಕೆಲವು ದೇಶಗಳಲ್ಲಿ ಐತಿಹಾಸಿಕ ಮಟ್ಟವನ್ನು ತಲುಪಿದೆ. ಇದರ ಅರ್ಥ ಶ್ರೀಮಂತರು ಹೆಚ್ಚುಹೆಚ್ಚು ಶ್ರೀಮಂತರಾಗುತ್ತಿದ್ದು, ಬಡವರು ಹೆಚ್ಚುಹೆಚ್ಚು ಬಡವರಾಗುತ್ತಿದ್ದಾರೆ.

‘ಆಕ್ಸ್‌ಫಾಮ್’ ವರದಿ ಹೇಳುವ ಪ್ರಕಾರ ಕೆಲವು ದೊಡ್ಡ ರಾಷ್ಟ್ರಗಳು- ಸಾಮಾನ್ಯ ಜನರು, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು, ಕೆಲವೇ ಅತಿ ಶ್ರೀಮಂತರು ಹೆಚ್ಚು ಹೆಚ್ಚು ಹಣ ಸಂಗ್ರಹಿಸಲು ಅವಕಾಶ ಮಾಡಿಕೊಡುವುದರ ಮೂಲಕ ಅಸಮಾನತೆಯ ಬೆಂಕಿಗೆ ತುಪ್ಪ ಸುರಿಯುತ್ತಿವೆ.

ಭಾರತದಲ್ಲಿಯೂ ಸಾಮಾನ್ಯ ಜನರು ಮತ್ತು ಮಧ್ಯಮ ಕೈಗಾರಿಕೆಗಳು ಆರ್ಥಿಕ ಬಿಕ್ಕಟ್ಟಿನ ಬಿಸಿ ಅನುಭವಿಸುತ್ತಿರುವಾಗ, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿರುವಾಗ, ನಿರುದ್ಯೋಗ ದಾಖಲೆ ಪ್ರಮಾಣಕ್ಕೆ ಏರುತ್ತಿರುವಾಗ, ಆರ್ಥಿಕ ಬೆಳವಣಿಗೆ 4.3 ಶೇಕಡಾದ ಆಸುಪಾಸಿಗೆ ಕುಸಿದಿರುವಾಗ ಅದಾನಿ, ಅಂಬಾನಿಗಳ ಹಾಗೂ ಬಿಜೆಪಿಯ ಆದಾಯ ಮತ್ತು ಸಂಪತ್ತು ಗಣನೀಯವಾಗಿ ಏರಿರುವುದನ್ನು ಉದಾಹರಣೆಯಾಗಿ ನೋಡಬಹುದು.

‘ಆಕ್ಸ್‌ಫಾಮ್’ ವರದಿಯ ಪ್ರಕಾರ ಭಾರತದ ಕೇವಲ 63 ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತು 2018-19ರ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ಮೊತ್ತವಾದ 24,42,200 ಕೋಟಿ ರೂ.ಗಳನ್ನು ಮೀರಿತ್ತು. ಇದರಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲಿಗೆ ಹೆಸರು ಮಾಡುವವರು ಬಡ ಸಾಮಾನ್ಯರನ್ನ ತಲೆ ಹೊಡೆಯುತ್ತಾರೆ ಎರಡನೆಯದಾಗಿ ಪೊಲಿಟಿಕಲ್ ಪವರ್ ಬಳಸಿಕೊಳ್ಳುವ ತಂತ್ರ ಹುಡುಕಿಕೊಳ್ಳುತ್ತಾರೆ
    ಅದಾದ ನಂತರ ಅವರದೇ ಆದ ಧಾಟಿಯಲ್ಲಿ ಸಮಾಜದ ನಾಗರಿಕರ ಮೇಲೆ ಒತ್ತಡ ಭಯ ಹೆಸರು ಗಳಿಸಿಕೊಳ್ಳುತ್ತಾರೆ
    ಇವಿಷ್ಟು ಆದನಂತರ ಒಬ್ಬ ನಿಷ್ಠಾವಂತ ವ್ಯಕ್ತಿಯನ್ನು ತಲೆ ಹೊಡೆದು ನನ್ನದೇನೂ ತಪ್ಪಿಲ್ಲ ಎಂದು ಕಾನೂನಿನ ಚೌಕಟ್ಟಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯಾಲಯದಲ್ಲಿ ನಾನು ಅಪರಾಧಿಯಲ್ಲ ಎಂದು ಪ್ರೊ ಮಾಡಿಕೊಳ್ಳುತ್ತಾರೆ ಇದಾದ ನಂತರ ಗಣ್ಯಾತಿಗಣ್ಯರು ಅವನ ಬಲಾಡ್ಯ ತನಕ್ಕೆ ಮಣಿದು ಪೊಲಿಟಿಕಲ್ ಸ್ಕೆಳೆ ತರುತ್ತಾರೆ ಅದಾದ ನಂತರ ಯಾವುದು 1 ದೊಡ್ಡ ಇಮೇಜ್ ಬಂದಂತಾಗುತ್ತದೆ
    ನ್ಯಾಯವಾಗಿ ಸಂಪಾದನೆ ಮಾಡಬಹುದಾದ ವ್ಯಕ್ತಿಗಳಿಗೆ ಸಮಾಜದಲ್ಲಿ ಬೆಲೆ ಇಲ್ಲ
    ಲೂಟಿಕೋರರ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿತ್ವವುಳ್ಳವರು ಬದುಕುವಂತಹ ದುರ್ದೈವ ಭಾರತ ದೇಶಕ್ಕೆ ಬಂದೊದಗಿದೆ
    ಆಳುವವರಿಗೆ ನಾನು ಮೊದಲು ಅಖಂಡ ಚಕ್ರವರ್ತಿಯಾಗಬೇಕು ಎನ್ನುವ ಆಸೆ ಅಧಿಕವಾಗಿ ತುಂಬಿಕೊಂಡಿರುತ್ತವೆ
    ಬಡವರ ಬಂಧು ದೀನದಲಿತರ ಕಣ್ಮಣಿ ದಲಿತರ ಮನೆ ಊಟ ದಲಿತರ ಏಳಿಗೆಗೆ ನಾಯಕ ನಾನು ಎಂದು ಬಿಂಬಿಸಿಕೊಳ್ಳುತ್ತಾರೆ ಇವೆಲ್ಲಾ ಹೇಳುವುದಷ್ಟೇ ಸೀಮಿತವಾಗಿರುತ್ತದೆ ಬದಲಾವಣೆ ಮಾತ್ರ ಶೂನ್ಯ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....