Homeಚಳವಳಿಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ...

ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…

ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಇವರ ಕೆಲಸ, ಖಾಯಂ ನೌಕರರ ಕೆಲಸ ಒಂದೇ ಆಗಿದ್ದರೂ ಸಂಬಳ ಮಾತ್ರ ಬೇರೆ ಬೇರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

- Advertisement -
- Advertisement -

ಮಳೆ, ಚಳಿ, ಬಿಸಿಲು ಏನೇ ಇರಲಿ ಅಥವಾ ಕೊರೊನಾದಂತಹ ದೊಡ್ಡ ದೊಡ್ಡ ಸಾಂಕ್ರಾಮಿಕ ರೋಗಗಳೆ ಬರಲಿ ಇವರು ಮಾತ್ರ ತಮ್ಮ ಕೆಲಸ ನಿಲ್ಲಿಸುವುದಿಲ್ಲ.. ಮನೆಯೊಳಗೆ ಬೆಚ್ಚಗೆ ಮಲಗುವುದಿಲ್ಲ..ಅದೆಂತಹದ್ದೇ ಪರಿಸ್ಥಿತಿಯಿರಲಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗೆ ಇಳಿಯುತ್ತಾರೆ. ಒಂದು ದಿನ ಇವರ್‍ಯಾರೂ ಕೆಲಸ ಮಾಡದಿದ್ದರೇ, ಬೀದಿಗಿಳಿಯದಿದ್ದರೇ ನಾವ್ಯಾರೂ ರಸ್ತೆಗಳಲ್ಲಿ, ಮಾರ್ಕೆಟ್‌ಗಳಲ್ಲಿ, ಬಸ್ ನಿಲ್ದಾಣಗಳ್ಲಲಿ ಓಡಾಡಲು ಸಾಧ್ಯವೇ ಇಲ್ಲ. ಹೌದು ಇವರೇ ನಮ್ಮ ನಗರಗಳನ್ನು ಸ್ವಚ್ಛಗೊಳಿಸಿ ನಮಗಾಗಿ ತಮ್ಮ ಸುರಕ್ಷತೆಯನ್ನೂ ಬದಿಗಿಟ್ಟ ಪೌರಕಾರ್ಮಿಕರು. ಅರ್ಥಾಥ್ ಸಾಮಾಜಿಕ ವೈದ್ಯರು.

ನಮ್ಮ ನಗರಗಳು, ನಮ್ಮ ಮನೆಯ ಬೀದಿಗಳು, ನಾವು ಓಡಾಡುವ ಸ್ಥಳಗಳು ಸ್ವಚ್ಛವಾಗಿರಲು ಇವರೇ ಪ್ರಮುಖ ಕಾರಣಕರ್ತರು. ಇಂದು ಇವರ ದಿನ. ಅಂದರೆ ಪೌರಕಾರ್ಮಿಕರ ದಿನ. ಈ ದಿನದ ನೆಪದಲ್ಲೊಮ್ಮೆ ಇವರನ್ನ ನೆನಪಿಸಿಕೊಳ್ಳುವ..

ನಾವು ಗಣೇಶ ಹಬ್ಬ, ದೀಪಾವಳಿ ಮಾಡಿ ರಸ್ತೆಗಳಲ್ಲಿ ಕಸ ಎಸೆದು ಮನೆಗೆ ಹೋಗುತ್ತಿವೆ. ಬೆಳಗ್ಗೆ ಆ ಕಸ ಕಾಣಿಸುವುದಿಲ್ಲ ಎಂದರೇ ಅದಕ್ಕೆ ಇವರೆ ಕಾರಣ. ನಾವು ಕೆಲಸಕ್ಕೆ ಹೋಗುತ್ತೇವೆ, ನಮಗೆ ವಾರದ ರಜೆ, ಹಬ್ಬಗಳ ರಜೆ ಎಂಬ ಸವಲತ್ತುಗಳು ಇವೆ ಅಲ್ಲವೇ? ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯಾದ್ರೂ ಇರುತ್ತೆ ಅಲ್ಲವೇ.. ಆದ್ರೆ ವಿಪರ್ಯಾಸ ನೋಡಿ ಇವರ್‍ಯಾರಿಗೂ ರಜೆ ಎಂಬುದೇ ಇಲ್ಲ..ರಜೆ ಬೇಕಿದ್ದರೇ ಸಂಬಳ ಕೇಳೋ ಹಾಗಿಲ್ಲ ಅಷ್ಟೆ..

ಇದನ್ನೂ ಓದಿ: ಪೌರಕಾರ್ಮಿಕರಿಗೂ ಕೊರೊನ ಸೋಂಕು; ಸಮುದಾಯದ ನಡುವೆ ಹರಡುವ ಆತಂಕದಲ್ಲಿ ಕುಟುಂಬಗಳು

ಪೌರಕಾರ್ಮಿಕರ ಪರಿಸ್ಥಿತಿ ಹೇಗಿರುತ್ತೇ ಗೊತ್ತಿದ್ಯಾ..? ಬೆಳಗ್ಗೆ 5-6 ಗಂಟೆಗೆ ಕೆಲಸಕ್ಕೆ ಹಾಜರಾಗುವ ಇವರಿಗೆ ಕುಡಿಯಲು ನೀರು, ಬಳಸಲು ಶೌಚಾಲಯ, ಬಟ್ಟೆ ಬದಲಿಸಲು ಒಂದು ಪುಟ್ಟ ಕೊಠಡಿ ಸಹ ಇರಲ್ಲ. ಅದರಲ್ಲೂ ಮಹಿಳಾ ಪೌರಕಾರ್ಮಿಕರ ಪರಿಸ್ಥಿತಿ ಊಹಿಸಲಸಾಧ್ಯ..

PC: eesanje

ಆಶ್ಚರ್ಯದ ವಿಷಯವೆಂದರೇ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ದಿನ ಇದೆ ಎಂಬುದೇ ಒಂದು ನಗೆಪಾಟಿಲಿನ ಸಂಗತಿ ಎಂದರೆ ನೀವು ನಂಬಲೇಬೇಕು. ನಮಗೆ ಅಂತಾ ದಿನ ಇದ್ಯಾ ಎಂದು ಕೇಳುತ್ತಾರೆ ಈ ಕಾರ್ಮಿಕರು. ಹಾಗಾದ್ರೆ ಈ ಪೌರಕಾರ್ಮಿಕ ಸಂಘಟನೆ ಮುಖಂಡರು ಏನಂತಾರೆ.. ನೀವೇ ಓದಿ

ಈ ಕುರಿತು ನಾನುಗೌರಿ.ಕಾಂ ಎಐಸಿಸಿಟಿಯು ನೇತೃತ್ವದ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾರವರನ್ನು ಮಾತನಾಡಿಸಿತು. “ಪೌರಕಾರ್ಮಿಕರ ದಿನಾಚರಣೆ ಅಂದ್ರೆ ನಮಗೆ ಆಶ್ಚರ್ಯ ಆಗ್ತದೆ. ದಿನ ಕೆಲಸ ಮಾಡಿ ಮನೆಗೆ ಹೋಗುವ ನಮ್ಮ ಕಾರ್ಮಿಕರಿಗೆ ಈ ದಿನವೆಲ್ಲಾ ಗೊತ್ತಿರುವುದಿಲ್ಲ. ಮೇ 1ರ ಕಾರ್ಮಿಕರ ದಿನಾಚರಣೆಯಷ್ಟೇ ನಮ್ಮ ಕಾರ್ಮಿಕರಿಗೆ ಗೊತ್ತಿರುವುದು. ಪೌರಕಾರ್ಮಿಕ ದಿನಾಚರಣೆಗಳು ನಮ್ಮ ಕಾರ್ಮಿಕರ ಬದುಕಿನಲ್ಲಿ ಯಾವ ಬದಲಾವಣೆಯನ್ನು ತಂದಿಲ್ಲ. ಪ್ರಧಾನಿಗಳು ಕಾರ್ಮಿಕರ ದಿನ ಅಂತಾ 4 ಜನ ಪೌರಕಾರ್ಮಿಕರ ಕಾಲು ತೊಳೆದರೆ, ನಾವು ದೇವರಾಗುವುದಿಲ್ಲ ಅಲ್ವಾ..?” ಎಂದು ಪ್ರಶ್ನಿಸುತ್ತಾರೆ.

ಕೊರೊನಾ ಸಮಯದಲ್ಲಿ ಪ್ರತಿದಿನ ಪೌರಕಾರ್ಮಿಕರಿಗೆ 100 ರೂಪಾಯಿ ಬಸ್ ಚಾರ್ಜ್‌ ಕೊಡುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ಆದ್ರೆ ಅದನ್ನೂ ಕೊಟ್ಟಿಲ್ಲ. ದಿನಪ್ರತಿ ದುಡಿಯುತ್ತಿರುವ ಪೌರಕಾರ್ಮಿಕರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ನಾವು ಹಲವು ಬಾರಿ ಹೋರಾಟ ಮಾಡಿದ ಪರಿಣಾಮ ಕೇವಲ ಮಾಸ್ಕ್, ಸ್ಯಾನಿಟೈಜರ್‌ ಕೆಲವರಿಗೆ ಸಿಕ್ಕಿವೆ ಅಷ್ಟೇ. ಕೊರೊನಾ ಹಾಟ್‌ಸ್ಪಾಟ್‌ಗಳಲ್ಲೇ ಇವರಿಗೆ ಪಿಪಿಇ ಕಿಟ್ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್‌.ಟಿ.ನಗರದಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಗಂಗಮ್ಮ ಹೇಳುತ್ತಾರೆ, “ಕೊರೊನಾ ಬಂದಾಗಿನಿಂದ ಎಲ್ಲರು ಭಯಪಟ್ತಿದ್ದಾರೆ. ಆದ್ರೆ ನಮಗೆ ಮಾಸ್ಕ್, ಸ್ಯಾನಿಟೈಜರ್‌, ಪಿಪಿಇ ಕಿಟ್ ಯಾವುದು ಸರಿಯಾಗಿ ಸಿಕ್ಕಿಲ್ಲ. ಕೊಡಿ ಅಂತಾ ಎಷ್ಟೋ ಬಾರಿ ಕೇಳಿದ್ರೂ ಬರಿ ಭರವಸೆ ನೀಡ್ತಾರೆ. ನಮಗೆ ಕೆಲಸ ಮಾಡುವ ಸ್ಥಳದಲ್ಲಿ ವಾಶ್‌ ರೂಂ ಇಲ್ಲ, ಬಟ್ಟೆ ಬದಲಿಸೋಕೆ ಸ್ಥಳ ಇರಲ್ಲ. ಒಂದು ದಿನ ಕೂಡ ರಜೆ ಇಲ್ಲದೆ ಕೆಲಸ ಮಾಡುವವರಿಗೆ ಯಾವ ಸೌಲಭ್ಯ ಕೂಡ ಇಲ್ಲ. ಒಂದು ದಿನ ರಜೆ ತಗೊಂಡರು ಆ ದಿನದ ಸಂಬಳ ಕಟ್ ಮಾಡ್ತಾರೆ ಎಂದು ನೋವು ತೋಡಿಕೊಳ್ಳುತ್ತಾರೆ ಗಂಗಮ್ಮ.

ಇದನ್ನೂ ಓದಿ: ಪೌರಕಾರ್ಮಿಕರನ್ನು ಪರಿಸರದ ಡಾಕ್ಟರುಗಳನ್ನಾಗಿಸಿದ ಶಿಕ್ಷಕ ನಾಗರಾಜ ಬಂಜಾರ

ಪೌರಕಾರ್ಮಿಕರೆಂದರೆ ಹಕ್ಕು ಇಲ್ಲದೆ ಇರುವ ಮನುಷ್ಯರು ಎಂದೇ ಅರ್ಥ ಎನ್ನುತ್ತಾರೆ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕಾಮ್ರೆಡ್ ಬಾಲನ್. ಮಹಿಳೆಯರ ಹಕ್ಕು, ಮಾನವ ಹಕ್ಕುಗಳು ಯಾವುದೂ ಇಲ್ಲದೆ ಬರುಕುತ್ತಿರುವ ಕಾರ್ಮಿಕರು ಇವರು. ಖಾಯಂ ನೌಕರರು ಮಾಡುವ ಕೆಲಸವೇ ಗುತ್ತಿಗೆ ನೌಕರರು ಮಾಡುತ್ತಾರೆ ಆದ್ರೆ ಸಂಬಳದಲ್ಲಿ ಮಾತ್ರ ತಾರತಮ್ಯ ಇದೆ. ಅವರನ್ನು ಖಾಯಂ ಮಾಡಲು ಹೈಕೋರ್ಟ್ ಆದೇಶ ನೀಡಿತ್ತು. ಆದ್ರೆ ಸರ್ಕಾರ ಹೈಕೋರ್ಟ್ ಆದೇಶ ಕೂಡ ಜಾರಿಗೊಳಿಸಲಿಲ್ಲ. ದಿನಾಚರಣೆಗಳ ಬದಲು ಅವರಿಗೆ ಇರಲು ಮನೆ ಕೊಡಲಿ, ಅವರ ಕೆಲಸ ಖಾಯಂ ಮಾಡಲಿ, ಹೆರಿಗೆ ರಜೆ ನೀಡಲಿ ಎನ್ನುತ್ತಾರೆ ಕಾಮ್ರೆಡ್ ಬಾಲನ್.

ಇಡೀ ಸಮಾಜವೇ ಇವರನ್ನು ದೂರ ಇಟ್ಟಿದೆ. ಸಮಾಜದ ಜನ ಇವರನ್ನು ಮನುಷ್ಯರು ಎಂದೇ ಪರಿಗಣಿಸುವುದಿಲ್ಲ. 4 ಜನ ಪೌರಕಾರ್ಮಿಕರ ಕಾಲು ತೊಳೆದು ದಿನಾಚರಣೆ ಮಾಡಿದರೇ ಪ್ರತಿ ದಿನ ಹೊಲಸು ಗುಂಡಿಯಲ್ಲಿ ಬೀಳುವುದು ತಪ್ಪುತ್ತದೇಯೇ? ಅವರಿಗೆ ಸೂಕ್ತ ಸೌಲಭ್ಯ ನೀಡಲಿ ಸಾಕು. ಎಲ್ಲಾ ಮಹಿಳೆಯರಿಗೆ ಸಿಗುವ ಕನಿಷ್ಠ ಹೆರಿಗೆ ರಜೆ ಕೂಡ ಇವರಿಗೆ ಇಲ್ಲ. ಸರ್ಕಾರ ಮಾಡುವ ಇಂತಹ ದಿನಾಚರಣೆಗಳು ಬರಿ ಬೋಗಸ್ ಎಂದು ಬಾಲನ್ ಕಿಡಿಕಾರುತ್ತಾರೆ.

PC: ThePrint

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಂದು ಪೌರಕಾರ್ಮಿಕರ ದಿನದ ಶುಭಾಷಯ ತಿಳಿಸಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಕುಮಾರಸ್ವಾಮಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದಿದ್ದಾರೆ.

 

ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಇವರ ಕೆಲಸ, ಖಾಯಂ ನೌಕರರ ಕೆಲಸ ಒಂದೇ ಆಗಿದ್ದರೂ ಸಂಬಳ ಮಾತ್ರ ಬೇರೆ ಬೇರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರೂ ಕೂಡ ಗುತ್ತಿಗೆ ಕಾರ್ಮಿಕರಿಗೆ ಸರಿಯಾದ  ಆರೋಗ್ಯ ವ್ಯವಸ್ಥೆ ಮಾಡುವುದಿಲ್ಲ. ಇನ್ನೂ ಸರ್ಕಾರ ಕೊರೊನಾ ಕಾಲದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಇವರೆಗೆ 4 ಮಂದಿ ಪೌರಕಾರ್ಮಿಕರು ಕೊರೊನಾಗೆ ಬಲಿಯಾಗಿದ್ದಾರೆ. ಒಂದು ವರದಿಯ ಪ್ರಕಾರ ಪೌರಕಾರ್ಮಿಕರ ಸರಾಸರಿ ವಯಸ್ಸು 40 ವರ್ಷ ಎಂದು ಗುರುತಿಸಲಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳುವುದೇ?


ಇದನ್ನೂ ಓದಿ: ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...