Homeಮುಖಪುಟ’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!

’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!

1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಬ್ರಾಹ್ಮಣರ ಮೀಸಲಾತಿಗಾಗಿ ರಚಿಸಿದ ಮಿಲ್ಲರ್ ಸಮಿತಿಯ ಪ್ರಕಾರ "ಮೀಸಲಾತಿ ಎಂದರೆ ಪ್ರಾತಿನಿಧ್ಯ. ಸರ್ಕಾರದ ಆಡಳಿತದಲ್ಲಿ ತಮ್ಮ ಜನಸಂಖ್ಯಾವಾರು ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಮೀಸಲಾತಿಯನ್ನು ಒದಗಿಸಲಾಗಿದೆ. ಹಾಗೆ ನೋಡಿದರೆ ಇಂದು ಪಾದಯಾತ್ರೆ ಮಾಡುತ್ತಿರುವ ಕುರುಬ ಮತ್ತು ಪಂಚಮಸಾಲಿ ಲಿಂಗಾಯತರು ತಮ್ಮ ಜನಸಂಖ್ಯೆಯ ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಬೇಕಿದೆ.

- Advertisement -
- Advertisement -

ಮೊದಲಿಗೆ ಮೀಸಲಾತಿ ಹೋರಾಟವನ್ನು ಕೈಗೆತ್ತಿಕೊಂಡಿರುವ ಜನ ಸಮುದಾಯಗಳಿಗೆ ಧನ್ಯವಾದಗಳು. ಅದರಲ್ಲಿಯೂ ಮಂಡಲ್ ವರದಿ ಜಾರಿಯಾದಾಗ ಅದರ ವಿರುದ್ಧ ಕಮಂಡಲ್ ಯಾತ್ರೆಗೆ ಕೈ ಜೋಡಿಸಿದ ಹಿಂದುಳಿದ ಜಾತಿಗಳು ತಮ್ಮ ಮೀಸಲಾತಿಯ ವಿರುದ್ಧ ತಮ್ಮನ್ನೇ ಎತ್ತಿ ಕಟ್ಟಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ದಶಕಗಳೇ ಬೇಕಾದವು. ಹಿಂದುಳಿದ ಜಾತಿಗಳು ಭಾವನಾತ್ಮಕವಾಗಿ ತೇಲುತ್ತಿರುವಾಗ ಅವರ ಪ್ರಾತಿನಿಧಿಕ ಭದ್ರತೆಯನ್ನು ಪ್ರಧಾನಿ ವಿ.ಪಿ.ಸಿಂಗ್ ಬದ್ಧತೆ ಕಾಪಾಡಿತ್ತು.

ಈಗ ಹಿಂದುಳಿದ ಮೇಲ್‌ಮಧ್ಯಮ ಜಾತಿಗಳು ಮತ್ತೆ ಮೀಸಲಾತಿ ಹೋರಾಟಕ್ಕೆ ಮುಂದಾಗಿವೆ. ಅಭಿನಂದನೆಗಳು, ಆದರೆ ಮತ್ತದೇ ತಪ್ಪಿನ ದಾರಿ ಹಿಡಿದಿವೆ. ಆಳುವ ಸರ್ಕಾರಗಳು ಸರ್ಕಾರಿ ಕಾರ್ಖಾನೆ, ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಕಾನೂನು ರೂಪಿಸಿರುವ ಹೊತ್ತಲ್ಲಿ ಈ ಮೀಸಲಾತಿ ಹೋರಾಟಗಳು ಒಗ್ಗಟ್ಟಾಗಿ ದುಡಿಯಬೇಕಿತ್ತು. ಆದರೆ ಈ ಹೋರಾಟವನ್ನು ಬಿಡಿಬಿಡಿಯಾಗಿ ತಮ್ಮ ಜಾತಿಗಳಿಗೆ ಸೀಮಿತಗೊಳಿಸಿಕೊಂಡಿರುವುದನ್ನು ನೋಡಿದರೆ ಇದು ಮತ್ತೊಂದು ಹಿನ್ನಡೆಯೇ ಸರಿ. ಇತಿಹಾಸದ ಕಮಂಡಲದ ಕೈಗಳು ಶೋಷಿತ ಜಾತಿಗಳ ಬದುಕಿಗೆ ಮತ್ತೆ ಕೈ ಹಾಕಿರುವಂತೆ ಕಾಣುತ್ತದೆ.

ನಮ್ಮ ದೇಶದ ಮೀಸಲಾತಿ ಇತಿಹಾಸವನ್ನು ಗಮನಿಸಿದರೆ ಎರಡು ರೀತಿಯ ಮೀಸಲಾತಿಗಳು ಕಣ್ಣಿಗೆ ಬೀಳುತ್ತವೆ. ಒಂದು ’ಅಸಮಾನತೆಗಾಗಿ ಮೀಸಲಾತಿ’ ಮತ್ತೊಂದು ’ಸಮಾನತೆಗಾಗಿ ಮೀಸಲಾತಿ’. ಅಸಮಾನತೆಗಾಗಿ ಮೀಸಲಾತಿ ಋಗ್ವೇದ ಕಾಲದಿಂದಲೂ ಜಾರಿಯಲ್ಲಿದೆ. ಚಾತುರ್ವರ್ಣ ಧರ್ಮವೇ ಅದರ ಮೂಲ. ವರ್ಣ/ಜಾತಿ ಶ್ರೇಣಿಯಲ್ಲಿ ಯಾರು ಮೇಲಿರುತ್ತಾರೋ ಅವರಿಗೆ ಹೆಚ್ಚು ಪ್ರಾತಿನಿಧ್ಯ ಹಾಗೂ ಕೆಳಗೆ ಬಂದಂತೆ ಆ ಪ್ರಾತಿನಿಧ್ಯ ಕಡಿಮೆಯಾಗುತ್ತಾ ಬರುತ್ತದೆ. ಈ ಮೀಸಲಾತಿಯನ್ನು ಕೌಟಿಲ್ಯನ ಅರ್ಥಶಾಸ್ತ್ರ, ಧರ್ಮಸೂತ್ರಗಳು, ಮನುಸ್ಮೃತಿ ಮುಂತಾದ ಧರ್ಮಗ್ರಂಥಗಳು ಕಾಪಾಡಿಕೊಂಡು ಬಂದಿವೆ. ಆದರೆ ಸಮಾನತೆಗಾಗಿ ಮೀಸಲಾತಿಯು ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತಹ ಜನಾನುರಾಗಿ ರಾಜರಿಂದ ಜಾರಿಯಾಯಿತು. ಇದಕ್ಕೆ ಫುಲೆ ದಂಪತಿಗಳು, ಅಬ್ರಾಹ್ಮಣ ಚಳವಳಿ, ಜಸ್ಟೀಸ್ ಪಾರ್ಟಿಯ ಸ್ವಾಭಿಮಾನ ಚಳವಳಿಗಳು ಶಕ್ತಿ ತುಂಬಿದ್ದವು. ಇವರೆಲ್ಲರ ಪ್ರತಿನಿಧಿಯಂತೆ ಭಾಸವಾಗುವ ಡಾ. ಬಿ.ಆರ್. ಅಂಬೇಡ್ಕರ್ ಶ್ರಮವಹಿಸಿ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಅದನ್ನು ಹರಳುಗಟ್ಟಿಸಿ ಕಾನೂನನ್ನಾಗಿಸಿದರು.

ಹಾಗಾಗಿ ಸಮಾನತೆಗಾಗಿ ಮೀಸಲಾತಿ ಎಂಬುದು ಶೂದ್ರ-ದಲಿತರು ಒಗ್ಗಟ್ಟಿನ ಹೋರಾಟದಿಂದ ಪಡೆದುಕೊಂಡ ಹಕ್ಕಾಗಿದೆ. ಆದರೆ ಅಸಮಾನತೆಗಾಗಿ ಮೀಸಲಾತಿಯು ಆಳುವವರು ತಮಗೆ ತಾವೇ ಜಾರಿ ಮಾಡಿಕೊಂಡ ಮೀಸಲಾತಿಯಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದ ಶೇ. 10 ಮೀಸಲಾತಿ. ಈ ಮೀಸಲಾತಿಯನ್ನು ಬ್ರಾಹ್ಮಣರು, ಆರ್ಯ ವೈಶ್ಯರು ಮುಂತಾದ ಮೇಲ್ಜಾತಿಗಳಿಗೆ ಕಳೆದ ವರ್ಷದಿಂದ ನೀಡಲಾಗುತ್ತಿದೆ. ಇಲ್ಲಿ ಗಮನಾರ್ಹ ವಿಚಾರವೆಂದರೆ, ಈ ಜಾತಿಗಳು ಒಂದು ದಿನವೂ ಮೀಸಲಾತಿಗಾಗಿ ಬೀದಿಗಿಳಿದು ಹೋರಾಡಲಿಲ್ಲ. ಇವರಿಗೆ ಶೇ. 10 ಮೀಸಲಾತಿ ನಿಗದಿಪಡಿಸಲು ಒಂದು ಆಯೋಗ ರಚನೆಯಾಗಲಿಲ್ಲ. ಇವರಲ್ಲಿ ಬಡವರ ಸಂಖ್ಯೆ ಎಷ್ಟು ಎಂಬುದಕ್ಕೆ ಜನಸಂಖ್ಯಾಗಣತಿ ಆಗಲಿಲ್ಲ. ಯಾವ ರಾಜ್ಯಗಳೂ ಇವರಿಗೆ ಮೀಸಲಾತಿ ಬೇಕೆಂದು ಶಿಫಾರಸು ಮಾಡಲಿಲ್ಲ. ಆದಾಗ್ಯೂ ಮೀಸಲಾತಿ ದಕ್ಕಿಬಿಟ್ಟಿತು. ಇದನ್ನೇ ನಾವು, ಆಳುವವರು ತಾವು ಜಾರಿ ಮಾಡಿಕೊಳ್ಳುವ ಅಸಮಾನತೆಗಾಗಿ ಮೀಸಲಾತಿ ಎನ್ನುತ್ತೇವೆ. ಆದರೆ ಇದೇ ರೀತಿಯಲ್ಲಿ ಶೋಷಿತ ಜನರ ಮೀಸಲಾತಿ ಜಾರಿಯಾಗುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕಳೆದ ಮೂರು ದಶಕಗಳಿಂದ ಜೀವವನ್ನೂ ಒತ್ತೆಯಿಟ್ಟು ಒಳಮೀಸಲಾತಿಗಾಗಿ ಹೋರಾಡುತ್ತಿರುವ ಮಾದಿಗ ಜಾತಿಯ ಜನಸಮುದಾಯ.

ಹೀಗಿರುವಾಗ ಆಳುವವರೊಂದಿಗೆ ಕೈ ಜೋಡಿಸಿದರೆ ಕೆಲಸ ಮುಗಿಯಿತು ಎಂದುಕೊಳ್ಳುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆದರೆ ಇಡೀ ಪ್ರಪಂಚದ ಇತಿಹಾಸದಲ್ಲಿಯೇ ಆಳುವ ವರ್ಗ ತಾನು ಶೋಷಿಸುವ ವರ್ಗಗಳ ಹಿತಾಸಕ್ತಿಯನ್ನು, ತನ್ನ ಸ್ವಹಿತಾಸಕ್ತಿಯಿಂದ ಹೊರತುಪಡಿಸಿ ಎಂದಿಗೂ ನೋಡಿಲ್ಲ. ಅಷ್ಟೇ ಅಲ್ಲ, ಶೋಷಿತರೊಳಗಿನ ಅವಕಾಶವಾದಿಗಳನ್ನು ಕಬಳಿಸಿ ಇಡೀ ಶೋಷಿತರನ್ನೇ ಒಡೆದು ಆಳಿದ ಇತಿಹಾಸ ನಮ್ಮ ದೇಶದಲ್ಲಿ ಬೆಟ್ಟದಷ್ಟು ಸಿಗುತ್ತದೆ.

ಈ ಮೇಲಿನ ಎಚ್ಚರವಿಟ್ಟುಕೊಂಡೇ ನಾವು ಇಂದು ಮೀಸಲಾತಿಗಾಗಿ ಬೀದಿಗಿಳಿದಿರುವ ಬಾಂಧವರ ಬಗ್ಗೆ ಯೋಚಿಸಬೇಕಿದೆ. ಹಾಗೆ ಯೋಚಿಸಿದಾಗ ಮಾತ್ರ ಶೋಷಿತರ ಇಡೀ ಮೀಸಲಾತಿ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಲ್ಲದಿದ್ದರೆ ಸಾವಿರಾರು ಜಾತಿಗಳು ಬಿಡಿ ಬಿಡಿಯಾಗಿ ಹೋರಾಟಕ್ಕಿಳಿದು ಪರಸ್ಪರ ಹೊಡೆದಾಡಿಕೊಂಡು ಮತ್ತೆ ಆಳುವ ವರ್ಗದ ಹಿತಾಸಕ್ತಿಗಾಗಿ ತಮ್ಮ ಹಿತಾಸಕ್ತಿಯನ್ನು ಬಲಿಕೊಟ್ಟಂತಾಗುತ್ತದೆ.

ಮೀಸಲಾತಿ ಎಂದರೇನು? 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಬ್ರಾಹ್ಮಣರ ಮೀಸಲಾತಿಗಾಗಿ ರಚಿಸಿದ ಮಿಲ್ಲರ್ ಸಮಿತಿಯ ಪ್ರಕಾರ “ಮೀಸಲಾತಿ ಎಂದರೆ ಪ್ರಾತಿನಿಧ್ಯ. ಸರ್ಕಾರದ ಆಡಳಿತದಲ್ಲಿ ತಮ್ಮ ಜನಸಂಖ್ಯಾವಾರು ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಲು ಮೀಸಲಾತಿಯನ್ನು ಒದಗಿಸಲಾಗಿದೆ. ಹಾಗೆ ನೋಡಿದರೆ ಇಂದು ಪಾದಯಾತ್ರೆ ಮಾಡುತ್ತಿರುವ ಕುರುಬ ಮತ್ತು ಪಂಚಮಸಾಲಿ ಲಿಂಗಾಯತರು ತಮ್ಮ ಜನಸಂಖ್ಯೆಯ ಪ್ರಾತಿನಿಧ್ಯವನ್ನು ಖಾತ್ರಿಗೊಳಿಸಿಕೊಳ್ಳಬೇಕಿದೆ.

ಇವರ ಹೊರತಾಗಿ ಮತ್ತಷ್ಟು ಶೋಷಿತ ಸಮುದಾಯಗಳು ಬಿಡಿಬಿಡಿಯಾಗಿ ಹೋರಾಟ ಹಮ್ಮಿಕೊಂಡಿದ್ದು ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಹಂಚಿಬಿಡಿ ಎಂಬ ವಾದವನ್ನು ಇಟ್ಟಿವೆ. ಆದರೆ ಇವಿಷ್ಟೇ ಬೇಡಿಕೆಗಳು ಈ ಮೇಲಿನ ಸಮುದಾಯಗಳ ಸಮಾಜೋ-ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಿಲ್ಲ ಎಂಬುದಕ್ಕೆ ರಾಶಿರಾಶಿ ದತ್ತಾಂಶಗಳು ನಮಗಿಂದು ಸಿಗುತ್ತವೆ. ಏಕೆಂದರೆ ಹಿಂದುಳಿದ ಜಾತಿಗಳಿಗೆ ನಿಗದಿಗೊಳಿಸಿರುವಷ್ಟು ಪ್ರಮಾಣದ ಪ್ರಾತಿನಿಧ್ಯವನ್ನು 25 ವರ್ಷಗಳ ನಂತರವೂ ನೀಡಲಾಗಿಲ್ಲ. ಇದಕ್ಕೆ ಉದಾಹರಣೆಯಾಗಿ 2017ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಿಂದ ಕೇಂದ್ರದ 24 ಮಂತ್ರಿ ಕಛೇರಿಗಳು ಹಾಗೂ 25 ಕೇಂದ್ರ ಇಲಾಖೆಗಳಿಂದ ಪಡೆದ ಮಾಹಿತಿಯೊಂದು ಹಿಂದುಳಿದ ಜಾತಿಗಳಿಗಾಗಿರುವ ಅನ್ಯಾಯವನ್ನು ತಿಳಿಸುತ್ತಿದೆ. ಈ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 23, 1993ರಿಂದ ಹಿಂದುಳಿದ ಜಾತಿಗಳಿಗೆ ನೀಡಿದ್ದ 27% ಮೀಸಲಾತಿಯಲ್ಲಿ ಜನವರಿ 2017ರಷ್ಟೊತ್ತಿಗೆ 24 ಮಂತ್ರಿ ಕಚೆರಿಗಳಲ್ಲಿ ಅವರಿಗೆ ನೀಡಿರುವ ಪಾಲೆಷ್ಟೆಂದರೆ ಗ್ರೂಪ್ ’ಎ’ ಹುದ್ದೆಗಳಲ್ಲಿ 17%. ಗ್ರೂಪ್ ’ಬಿ’ ಹುದ್ದೆಗಳಲ್ಲಿ 14%. ಗ್ರೂಪ್ ’ಸಿ’ ಹುದ್ದೆಗಳಲ್ಲಿ 11% ಮತ್ತು ಗ್ರೂಪ್ ’ಡಿ’ ಹುದ್ದೆಗಳಲ್ಲಿ 10%. ಒಟ್ಟಾರೆ 11.25% ಮಾತ್ರ. 25 ಇಲಾಖೆಗಳಲ್ಲಿ ಗ್ರೂಪ್ ’ಎ’ ಹುದ್ದೆಗಳಲ್ಲಿ 14%. ಗ್ರೂಪ್ ’ಬಿ’ ಹುದ್ದೆಗಳಲ್ಲಿ 15%. ಗ್ರೂಪ್ ’ಸಿ’ ಹುದ್ದೆಗಳಲ್ಲಿ 17%. ಗ್ರೂಪ್ ’ಡಿ’ ಹುದ್ದೆಗಳಲ್ಲಿ 18% ಮಾತ್ರ ಹಿಂದುಳಿದ ಜಾತಿಗಳವರಿದ್ದಾರೆ. ಒಟ್ಟಾರೆ ಸರಾಸರಿಯಾಗಿ 16% ಮಾತ್ರ. 64 ಕ್ಯಾಬಿನೆಟ್ ಸೆಕ್ರೆಟೇರಿಯಟ್ ಹುದ್ದೆಗಳಲ್ಲಿ ಒಬ್ಬರೂ ಸಹ ಹಿಂದುಳಿದ ಜಾತಿಯವರಿಲ್ಲ. ಹೀಗೆ ಈಗ ನೀಡಿರುವ ಮೀಸಲಾತಿಯನ್ನೇ ಸಂಪೂರ್ಣ ನೀಡದಿರುವ ಈ ಪರಿಸ್ಥಿತಿಯಲ್ಲಿ ನೂತನ ಮೀಸಲಾತಿಯ ಮಾನದಂಡ ಪ್ರಾಮಾಣಿಕವಾಗಿ ಶೋಷಿತ ಸಮುದಾಯಗಳನ್ನು ರಕ್ಷಿಸುತ್ತದೆಯೇ?

PC : suddiDina

ಇನ್ನೊಂದು ಸೂಕ್ತವಾದ ವಾದವೊಂದಿದೆ. ಎಲ್ಲಾ ಜಾತಿಗಳಿಗೂ ಅವರವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸುವುದು. ಇದಾಗಬೇಕೆಂದರೆ ಒಂದು ಇಡಿಯಾದ ಹೋರಾಟವಾಗಬೇಕಿದೆ. ಏಕೆಂದರೆ ಈಗಾಗಲೇ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮಾಡಿ ಅದರ ವರದಿಯನ್ನು ಬಿಡುಗಡೆ ಮಾಡುವುದಕ್ಕೇ ಅಡ್ಡಗಾಲು ಹಾಕುತ್ತಿರುವ ಬಲಾಢ್ಯ ಜಾತಿಗಳು ಇನ್ನು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಅನುವು ಮಾಡಿಕೊಡುತ್ತವೆಯೇ? ಸಾಧ್ಯವೇ ಇಲ್ಲ. ಹಾಗಾಗಿ ಕನಿಷ್ಠ ಪಕ್ಷ ಜಾತಿಗಣತಿ ವರದಿ ಬಹಿರಂಗಗೊಳಿಸಲು ಶೋಷಿತರ ಒಗ್ಗಟ್ಟಾದ ಹೋರಾಟದ ಅವಶ್ಯಕತೆ ಇದೆ. ಆಗ ಮಾತ್ರ ನಮ್ಮನ್ನೂ ಒಳಗೊಂಡಂತೆ ಹಲವು ಜಾತಿ ಮುಖಂಡರ ನಿಜವಾದ ಚಹರೆಗಳು ಬಿಚ್ಚಿಕೊಳ್ಳಲಿವೆ.

ಹಾಗೆ ಸುಮ್ಮನೆ ಜನಸಂಖ್ಯಾವಾರು ಮೀಸಲಾತಿ ಜಾರಿಯಾಗಿದೆ ಎಂದುಕೊಳ್ಳೋಣ. ಆಗ ಮೀಸಲಾತಿ ಪ್ರಮಾಣ ಎಷ್ಟು ದಕ್ಕುತ್ತದೆ ಎಂಬುದಕ್ಕೆ ಕಳೆದ 1990ರಿಂದೀಚೆಗೆ ಖಾಸಗೀಕರಣದ ಭರಾಟೆ ನಂತರದ ಅಂಕಿಅಂಶಗಳನ್ನು ಗಮನಿಸೋಣ. 2012ರಲ್ಲಿ 856 ಲಕ್ಷ ನೌಕರಿಗಳಲ್ಲಿ 70%ರಷ್ಟು (600 ಲಕ್ಷ) ಖಾಸಗಿ ಕ್ಷೇತ್ರದಲ್ಲಿದ್ದರು. ಕೇವಲ 30% ಅಂದರೆ 256 ಲಕ್ಷ ನೌಕರಿಗಳು ಮಾತ್ರ ಸಾರ್ವಜನಿಕ ಕ್ಷೇತ್ರದವಾಗಿದ್ದವು. ಅದರಲ್ಲಿ 40%ನಷ್ಟು ನೌಕರಿಗಳು ತಾತ್ಕಾಲಿಕವಾದವು. ಅಂದರೆ ಕೇವಲ 154 ಲಕ್ಷ ನೌಕರಿಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತವೆ. ಅಂದರೆ ಒಟ್ಟಾರೆ ಭಾರತದ ನೌಕರಿಗಳಲ್ಲಿ ಕೇವಲ 18% ರಷ್ಟು ನೌಕರಿಗಳು ಮಾತ್ರ ಮೀಸಲಾತಿಗೆ ಒಳಪಡುತ್ತವೆ. ಅದರಲ್ಲಿ 50% ಮಾತ್ರ ಮೀಸಲಾತಿ, ಅಂದರೆ ಜುಜುಬಿ 9% ಮಾತ್ರ ಮೀಸಲಾತಿ ದಕ್ಕುತ್ತದೆ. ಭಾರತದಲ್ಲಿ ಸೃಷ್ಟಿಯಾಗುವ 100 ನೌಕರಿಗಳಲ್ಲಿ ಕೇವಲ 9 ನೌಕರಿಗಳಿಗೆ ಮಾತ್ರ ಮೀಸಲಾತಿ ನಿಯಮ ಅನ್ವಯವಾಗುತ್ತದೆ. ಇದು ಸ್ವತಂತ್ರ ಭಾರತದ ಮೀಸಲಾತಿಯ ಕತೆ. ಈ 9% ನೌಕರಿ ಪ್ರಮಾಣವನ್ನು ನಾವು ಹೆಚ್ಚು ಮಾಡಿಕೊಳ್ಳದೇ ಇದ್ದರೆ ಮೀಸಲಾತಿ ಪಡೆಯುವುದಕ್ಕೂ, ಪಡೆಯದೇ ಇರುವುದಕ್ಕೂ ಅಂತಹ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ. ಆ ಕಾರಣಕ್ಕಾಗಿ ಶೋಷಿತ ಜಾತಿಗಳು ಒಗ್ಗಟ್ಟಾಗಿ ಖಾಸಗೀಕರಣದ ವಿರುದ್ಧ ಹೋರಾಟ ರೂಪಿಸಬೇಕಿದೆ. ಸಾರ್ವಜನಿಕ ಕ್ಷೇತ್ರ ಗಟ್ಟಿಯಾಗುವವರೆಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಪಡೆಯಬೇಕಿದೆ.

ಈಗ ಮೀಸಲಾತಿಯ ಪ್ರವರ್ಗವನ್ನೇ ಬದಲಾಯಿಸಿಕೊಳ್ಳಲು ಹೋರಾಡುತ್ತಿರುವ ಬಾಂಧವರಿಗೊಂದು ಕಿವಿಮಾತು. ಹಿಂದುಳಿದ ಜಾತಿಗಳನ್ನು ಪ್ರವರ್ಗಗಳಲ್ಲಿ ಪಟ್ಟಿ ಮಾಡಿರುವುದಕ್ಕೆ ಮೂಲಕಾರಣ ಸಮಾಜದಲ್ಲಿನ ಜಾತಿಶ್ರೇಣಿಯೇ ಆಗಿದೆ. ಜಾತಿ ಶ್ರೇಣಿಯಲ್ಲಿ ತಮ್ಮನ್ನು ತಾವು ಎಸ್‌ಟಿ ಜಾತಿಗಳಿಗಿಂತ ಮೇಲು ಎಂದುಕೊಳ್ಳುತ್ತವೆಯೋ ಆ ಜಾತಿಗಳು ಎಸ್‌ಟಿ ಮೀಸಲಾತಿಯನ್ನು ಕೇಳುವುದು ಸೂಕ್ತವಲ್ಲ. ಹಾಗೆಯೇ ತಳಜಾತಿಗಳ ಹಕ್ಕನ್ನು ಮೇಲ್ಜಾತಿಯೊಂದು ಹೊಂದಲು ಬಯಸುವುದೂ ಸೂಕ್ತವಲ್ಲ. ಈ ರೀತಿಯ ಮೀಸಲಾತಿ ನಮ್ಮ ಸಂವಿಧಾನದ ಆಶಯವಲ್ಲ. ಒಂದುವೇಳೆ ನನ್ನ ಈ ಮೇಲಿನ ಮಾತುಗಳು ಸುಳ್ಳೆಂದು ಎನಿಸಿದರೆ ಮೀಸಲಾತಿ ಕೇಳುತ್ತಿರುವ ಜಾತಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಳಜಾತಿಗಳ ಸಮಾನದಲ್ಲಿರುವುದನ್ನೋ ಅಥವಾ ಅವರಿಗಿಂತಲೂ ಕಡಿಮೆ ಪ್ರಾತಿನಿಧ್ಯ ಹೊಂದಿರುವುದನ್ನೋ ಸಾಬೀತುಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಮೀಸಲಾತಿ ಎಂಬುದು ಬಡತನ ನಿರ್ಮೂಲನೆ ಕಾರ್ಯಕ್ರಮವಾಗುವತ್ತ  ಸಾಗುತ್ತದೆ. ಇಡೀ ಮೀಸಲಾತಿ ಕಲ್ಪನೆಯೇ ನಾಶವಾಗುತ್ತದೆ.

ಕೊನೆಯದಾಗಿ ಮತ್ತೊಂದು ಗಂಭೀರ ವಿಚಾರವೊಂದಿದೆ. ಅದೇನೆಂದರೆ ಮೀಸಲಾತಿಯೊಂದೇ ಎಲ್ಲಾ ಜಾತಿಗಳ ಹಸಿವನ್ನು, ಘನತೆಯಿಂದ ಬದುಕುವ ಹಕ್ಕನ್ನು ಖಾತ್ರಿಗೊಳಿಸಲಾರದು. ಆ ಕಾರಣದಿಂದ ಭಾರತದ ಸಂಪತ್ತಿನಲ್ಲಿ ಸಮಪಾಲನ್ನು ಕೇಳುವ ಹೋರಾಟವೂ ಮೀಸಲಾತಿ ಹೋರಾಟದ ಕೇಂದ್ರದಿಂದಲೇ ಹುಟ್ಟಬೇಕಿದೆ. ಎಲ್ಲಾ ಜಾತಿಗಳ ಬಡತನ ನಿರ್ಮೂಲನೆ ಆಗಬೇಕೆಂದರೆ ಭಾರತದ ಪ್ರತಿಯೊಬ್ಬರ ತಲಾದಾಯ ಹೆಚ್ಚಾಗಬೇಕು. ಇದನ್ನು ಶಿಕ್ಷಣ ಉದ್ಯೋಗ ಕ್ಷೇತ್ರದ ಮೀಸಲಾತಿಯೊಂದೇ ಮಾಡಲಾರದು.


ಇದನ್ನೂ ಓದಿ:  ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ ಎನ್ನುವುದು ಸುಳ್ಳು: ಇಲ್ಲಿವೆ ನೋಡಿ ಬ್ರಾಹ್ಮಣರಿಗಿರುವ ಸರ್ಕಾರದ 15 ಯೋಜನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...