Homeಎಕಾನಮಿಕಳೆದ 5 ವರ್ಷದಲ್ಲಿ 12 ಲಕ್ಷ ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ : ಆದರೂ...

ಕಳೆದ 5 ವರ್ಷದಲ್ಲಿ 12 ಲಕ್ಷ ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ : ಆದರೂ ಆರ್ಥಿಕ ಕುಸಿತ ಏಕೆ?

- Advertisement -
- Advertisement -

2007-08ರಲ್ಲಿ ಬಹುತೇಕ ದೇಶಗಳ ಆರ್ಥಿಕತೆ ಕುಸಿತದಲ್ಲಿತ್ತು. ಆದರೆ ಭಾರತದಲ್ಲಿ ಅಪಾಯ ಜಾಸ್ತಿ ಆಗಲಿಲ್ಲ. ಏಕೆಂದರೆ ಗ್ರಾಮೀಣ ಭಾರತದಲ್ಲಿ ಬೇಡಿಕೆ ಹೆಚ್ಚಾಗಿತ್ತು. ಅದಕ್ಕೆ ಕಾರಣ 2006ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗ ಯೋಜನೆಯಾಗಿತ್ತು. ಅದೇ ಸಮಯದಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟವೂ ತಾರಕಕ್ಕೇರಿತ್ತು ಎಂದು ಗ್ರಾಮೀಣ ಕೂಲಿಕಾರರ ಸಂಘದ ಅಭಯ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಶಾಸಕರ ಭವನದಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ವತಿಯಿಂದ ನಡೆದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, 1991ರ ಜಾಗತೀಕರಣದ ನಂತರ ಅಗ್ಗದ ಕೂಲಿಗೆ ಕೆಲಸ ಮಾಡುವ ಕಾರ್ಮಿಕರು, ಅಗ್ಗದ ಬೆಲೆಗೆ ಭೂಮಿ ಮತ್ತು ಸಂಪನ್ಮೂಲಗಳು, ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕುಗಳಿಂದ ಸಾಲ ಸಿಗುವುದರಿಂದ ಬಹಳಷ್ಟು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿದವು. ದೊಡ್ಡ ಬಂಡವಾಳಶಾಹಿಗಳು ಇಂದು ಲಾಬಿ ನಡೆಸುತ್ತಿವೆ. ಅವರಿಗೆ ಇನ್ನೂ ಅಗ್ಗದ ಕೂಲಿಗಳು ನಗರ ಪ್ರದೇಶಗಳಲ್ಲಿ ಬೇಕಿರುವುದರಿಂದ ಜನರನ್ನು ನಗರಗಳಿಗೆ ವಲಸೆ ಬರುವಂತಹ ನೀತಿಗಳನ್ನು ಜಾರಿಗೆ ತರಲು ಸರ್ಕಾರಗಳ ಮೇಲೆ ಒತ್ತಡ ತರುತ್ತಿವೆ. ಹಾಗಾಗಿ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಜನರು ಅನಿವಾರ್ಯವಾಗಿ ನಗರಗಳಿಗೆ ವಲಸೆ ಬರುವಂತೆ ಮಾಡುತ್ತಿವೆ. ಇದರಿಂದ ಬಂಡವಾಳಶಾಹಿಗಳಿಗೆ ಎರಡು ರೀತಿಯ ಲಾಭಗಳಿವೆ. ಒಂದು ಜನ ನಗರಗಳಿಗೆ ವಲಸೆ ಬರುವುದರಿಂದ ಕಡಿಮೆ ಕೂಲಿಗೆ ಕಾರ್ಮಿಕರು ಸಿಗುತ್ತಾರೆ. ಎರಡನೇಯದಾಗಿ ಕೃಷಿ ಲಾಭದಾಯಕವಲ್ಲದ ಕಾರಣಕ್ಕಾಗಿ ಅವರು ತಮ್ಮ ಜಮೀನುಗಳನ್ನು ಮಾರುವುದರಿಂದ ಬಂಡವಾಳಿಗರಿಗೆ ಭೂಮಿ ಸಿಗುತ್ತಿದೆ. ಬಂಡವಾಳಶಾಹಿಗಳು ಲಾಭ ಮಾಡಿದರೆ ಅದು ಅವರ ವಯಕ್ತಿಕ ಖಾತೆಗೆ ಹೋಗುತ್ತದೆ. ಒಂದು ವೇಳೆ ಅವರು ನಷ್ಟ ಅನುಭವಿಸಿದರೆ ಅದರ ಪರಿಣಾಮ ಇಡೀ ಸಮಾಜವನ್ನು ತಟ್ಟುತ್ತದೆ ಎಂದರು.

ಇಂದು ಶೇ.60% ಜನ ಗ್ರಾಮೀಣ ಭಾರತದಲ್ಲಿದ್ದಾರೆ. ಇನ್ನು 20% ಜನ ನಗರಗಳಿಗೆ ವಲಸೆ ಬರುವಂತೆ ಮಾಡುವುದು ಸರ್ಕಾರಗಳ ಗುರಿಯಾಗಿದೆ. ಇದು ದೊಡ್ಡ ಬದಲಾವಣೆಯನ್ನು ತರಲಿದೆ. ಇಂದು ಆಟೋಮೇಷನ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪುಣೆಯ ಟಾಟಾ ಕಂಪನಿಯ ಕಾರು ತಯಾರಿಕ ಘಟಕದಲ್ಲಿ ಹಲವು ವರ್ಷಗಳಿಂದ 25 ಸಾವಿರ ಕಾರ್ಮಿಕರಿದ್ದು ವರ್ಷಕ್ಕೆ 2 ಲಕ್ಷ ಕಾರುಗಳನ್ನು ಉತ್ಪಾದಿಸುತ್ತಿದ್ದಾರೆ. ಆದರೆ ಹೊಸದಾಗಿ ಚನ್ನೈನಲ್ಲಿ ಸ್ಥಾಪಿಸಿರುವ ಅವರ ಹೊಸ ಘಟಕದಲ್ಲಿ ಕೇವಲ 1200 ಕಾರ್ಮಿಕರಿದ್ದು ಅವರು ವರ್ಷಕ್ಕೆ 4 ಲಕ್ಷ ಕಾರು ತಯಾರಿಸುವ ಸಾಮಥ್ರ್ಯ ಹೊಂದಿದ್ದಾರೆ. ಅಂದರೆ ಮಾನವರಹಿತ ಘಟಕಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಚಾರ್ಟಡ್ ಅಕೌಂಟೆಂಟ್ ಆದ ಜಿ.ವಿ ಸುಂದರ್ ರವರು ಮಾತನಾಡಿ 2014ರಲ್ಲಿ ಭಾರತದ ಒಟ್ಟಾರೆ ರಫ್ತು 325 ಬಿಲಿಯನ್ ಇತ್ತು. ಕಳೆದ ಆರು ವರ್ಷಗಳಿಂದ ಅದು ಕುಸಿಯುತ್ತಲೇ ಇದೆ. ಭಾರತದ ವಿದೇಶಿ ವ್ಯವಹಾರ ಬೆಳೆಯುತ್ತಿಲ್ಲ. ಸಾಫ್ಟ್ ವೇರ್ ಕ್ಷೇತ್ರ 10%ನಷ್ಟು ಬೆಳೆದಿದ್ದರೂ ಸಹ ಜೆಮ್ಸ್ ಅಂಡ್ ಜ್ಯುವೆಲ್ಲರಿ ಸೇರಿದಂತೆ ಉಳಿದೆಲ್ಲಾ ಕ್ಷೇತ್ರಗಳು ಕುಸಿದಿವೆ.  ಗಾರ್ಮೆಟ್ಸ್ ಕ್ಷೇತ್ರದಲ್ಲಿ ಭಾರತದ ರಫ್ತು ಕಡಿಮೆಯಾಗಿದೆ. ಚಿಕ್ಕ ದೇಶ ಬಾಂಗ್ಲಾದೇಶ ವರ್ಷಕ್ಕೆ 35 ಬಿಲಿಯನ್ ಡಾಲರ್ ರಫ್ತು ಮಾಡಿದರೆ ಭಾರತದ ಪಾಲು 15-16 ಬಿಲಿಯನ್ ಡಾಲರ್ ಮಾತ್ರ ಆಗಿದೆ. ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಿದೆ. ಆಟೋಮೊಬೈಲ್ ಕ್ಷೇತ್ರ ಕುಸಿದಿದೆ. ಇವೆಲ್ಲವೂಗಳಿಂದ ಭಾರತ ತೀವ್ರ ಆರ್ಥಿಕ ದುಸ್ಥಿತಿಯಲ್ಲಿದೆ ಎಂದು ಸುಲಭವಾಗಿ ಹೇಳಬಹುದಾಗಿದೆ ಎಂದರು.

ಇದಕ್ಕೆ ಕಾರಣಗಳೇನು ಎಂದು ನೋಡಿದರೆ ಅದು ನೋಟು ರದ್ದತಿಯತ್ತ ಕೈತೋರಿಸುತ್ತದೆ. 2 ತಿಂಗಳು ಹಣ ಜನರ ಕೈಯ್ಯಲಿರದೇ ಬ್ಯಾಂಕುಗಳಲ್ಲಿತ್ತು. ಸರಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವಾಗಲೇ ಜಿ.ಎಸ್.ಟಿ ಹೊಡೆತ ಬಿದ್ದಿತು. ಈ.ಎಸ್.ಟಿ ಜಾರಿಗೆ ತಂದಿದ್ದು ಬಹಳ ಒಳ್ಳೆಯದು. 5-6 ರೀತಿಯ ತೆರಿಗೆಗಳ ಬದಲಾಗಿ ಒಂದು ರೀತಿಯ ತೆರಿಗೆ ಪದ್ದತಿ ದೂರದೃಷ್ಠಿಯಿಂದ ಒಳ್ಳೇಯದು. ಆದರೆ ಅದನ್ನು ಜಾರಿಗೆ ತಂದ ರೀತಿ ಮಾತ್ರ ಸಂಪೂರ್ಣ ಅವೈಜ್ಞಾನಿಕವಾಗಿತ್ತು. ಸಾವಿರಾರು ಕೋಟಿಯ ಬಂಡವಾಳಿಗರಿಗೂ ಒಂದೇ ತೆರಿಗೆ 1-2 ಲಕ್ಷ ಹೂಡಿಕೆ ಮಾಡುವ ಅತಿ ಸಣ್ಣ ಉದ್ಯಮಿಗಳಿಗೂ ಒಂದೇ ತೆರಿಗೆ ಎಂಬುದು ಸರಿಯಲ್ಲ. ಜಿ.ಎಸ್.ಟಿ ಜಾರಿಗೆ ಬಂದ ಮೇಲೆ ಅವುಗಳನ್ನು ಸುಲಭ ಮಾಡುವ ಸಲುವಾಗಿ ಇದುವರೆಗೂ 700 ತಿದ್ದುಪಡಿಗಳಾಗಿವೆ. ಇದು ಜನರಿಗೆ ಸರಳವಾಗಿ ಅರ್ಥವಾಗದೇ ಮತ್ತಷ್ಟು ತೊಂದರೆ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದರು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಬಂದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್‍ರವರು ಬಹಳಷ್ಟು ಕ್ಷೇತ್ರಗಳಿಗೆ ತೆರಿಗೆ ಮನ್ನಾ ಮಾಡಿದ್ದರು. ಉದ್ಯಮಿಗಳ ಸಾಲ ಮರುಪಾವತಿಯ ಅವಧಿಯನ್ನು ಹೆಚ್ಚು ಮಾಡಿದ್ದರು. ಆದರೆ ಈಗಿನ ಸರ್ಕಾರ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಇನ್ನು ಇದನ್ನು ಅರ್ಥಮಾಡಿಕೊಳ್ಳುವ ಪ್ರಮುಖ ಅರ್ಥಶಾಸ್ತ್ರಜ್ಞರು ಕೂಡ ಸರ್ಕಾರದ ಬಳಿಯಿಲ್ಲ. ಇದ್ದ ಒಬ್ಬೊಬ್ಬರು ಸಹ ತಮ್ಮ ಮಾತುಗಳನ್ನು ಈ ಸರ್ಕಾರ ಕೇಳದ ಕಾರಣದಿಂದ ರಾಜಿನಾಮೇ ನೀಡಿ ಹೊರಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಬಳಿ ಹಣವಿಲ್ಲವೇ?
2014ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 120 ಡಾಲರ್ ಇತ್ತು. ಆಗ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 71ರೂ ಇತ್ತು. ಇನ್ನು 2016ರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 30 ಡಾಲರ್‍ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಲೀಟರ್ ಗೆ 65ರೂನಿಂದ 75 ರೂಗಳ ಆಸುಪಾಸಿನಲ್ಲಿಯೇ ಇದೆ. ಅಂದರೆ ಪ್ರೆಟ್ರೋಲ್ ಬೆಲೆ ಸಹ ಶೇ66% ರಷ್ಟು ಇಳಿಯಬೇಕಾಗಿತ್ತು. ಆದರೆ ಸರ್ಕಾರ ಹಲವು ತೆರಿಗೆಗಳನ್ನು ಹಾಕಿ ಪ್ರೆಟ್ರೋಲ್ ಬೆಲೆಯನ್ನು ಅಷ್ಟೇ ಮಾಡಿದ್ದಾರೆ. ಹೀಗಾಗಿ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 12 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎನ್ನಲಾಗುತ್ತಿದೆ.
ಈ ಹಣವನ್ನು ಸರ್ಕಾರ ಹೇಗೆ ಬಳಸಿದೆ ಎಂದು ಯಾರಿಗೂ ತಿಳಿದಿಲ್ಲ. ಈ ನಡುವೆ ಭಾರತದಲ್ಲಿರುವ 18 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 14 ಬ್ಯಾಂಕುಗಳು ನಷ್ಟದಲ್ಲಿವೆ. ಆರ್.ಬಿ.ಐ 1.76 ಲಕ್ಷ ಕೋಟಿ ರೂಗಳನ್ನು ಸರ್ಕಾರಕ್ಕೆ ನೀಡುವ ಪರಿಸ್ಥಿತಿ ಬಂದಿದೆ ಎಂದರು.

ಯುವ ಉದ್ಯಮಿ ಆದರ್ಶ್ ಯಲ್ಲಪ್ಪ ಮಾತನಾಡಿ ಬೇರೆ ಯಾವ ದೇಶಕ್ಕೂ ಇಲ್ಲದ ದೊಡ್ಡ ದೇಶಿಯ ಮಾರುಕಟ್ಟೆ ಭಾರತಕ್ಕಿತ್ತು. ಹಾಗಾಗಿಯೇ 2008ರಲ್ಲಿ ಆರ್ಥಿಕ ಕುಸಿತ ಕಂಡಾಗಲೂ ಭಾರತಕ್ಕೆ ಅದರ ಹೊಡೆತ ಬಿದ್ದಿರಲಿಲ್ಲ. ಅಂತಹ ದೇಶಿಯ ಬೇಡಿಕೆಯೂ ಇಂದು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ನೇರ ಕಾರಣ ನೋಟು ರದ್ದತಿ ಮತ್ತು ಜಿ.ಎಸ್.ಟಿ ಆಗಿದೆ. ಸರ್ಕಾರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರಿಗೆ ಹಲವು ಕಾನೂನು ಕಟ್ಟಳೆಗಳ ಮೂಲಕ ಬಹಳ ತೊಂದರೆ ಕೊಡುತ್ತಿದೆ. ದೊಡ್ಡ ಬಂಡವಾಳಶಾಹಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಇದು ತಪ್ಪು ಕ್ರಮ. ದೊಡ್ಡ ಬಂಡವಾಳಶಾಹಿಗಳು ಬೇರೆ ಯಾವ ದೇಶದಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ಆದರೆ 50 ಲಕ್ಷ, 1-2 ಕೋಟಿಯಷ್ಟೇ ಹೂಡಿಕೆ ಮಾಡಬಹುದಾದ ಸಣ್ಣ, ಅತಿಸಣ್ಣ ಉದ್ಯಮಿಗಳು ಭಾರತದಲ್ಲಷ್ಟೇ ಹೂಡಿಕೆ ಮಾಡಲು ಸಾಧ್ಯ. ಅಂತವರ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಬೇಕು ಎಂದರು.

ಸರ್ಕಾರದ ಯಾವುದೇ ನೀತಿಗಳು ಜನರ ಪರವಿರಬೇಕೆ ಹೊರತು ಜನರ ವಿರುದ್ಧವಲ್ಲ. ಯಾವುದೇ ರಾಜ್ಯದಲ್ಲಿ ವಿದ್ಯುತ್‍ಗಾಗಿ ಸಾಕಷ್ಟು ಬೇಡಿಕೆ ಇದೆ ಎಂದಾದರೆ ಆರ್ಥಿಕ ಬೆಳವಣಿಗೆ ಇದೆ ಎಂದರ್ಥ. ಈಗ ವಿದ್ಯುತ್ ಬೇಡಿಕೆಯಿಲ್ಲ ಎನ್ನಲಾಗುತ್ತಿದೆ. ಅಂದರೆ ನಮ್ಮ ಆರ್ಥಿಕ ಬೆಳವಣಿಗೆ ಎಷ್ಟು ಕುಸಿದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

ಸಭೆಯಲ್ಲಿ ಬಂದ ಹಕ್ಕೊತ್ತಾಯಗಳು
* ಗ್ರಾಮೀಣ ಭಾರತದ ಆರ್ಥಿಕ ಪುನಶ್ಚೇತನಕ್ಕೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು.
* ಕೃಷಿ ಆಧಾರಿತ ಸ್ಥಳೀಯ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಬೇಕು.
* ಎಂಎಸ್‍ಎಂಇ ಉದ್ದಿಮೆದಾರರ ಹಿತರಕ್ಷಣೆಗಾಗಿ ಕಾನೂನು ಮಾಡಬೇಕು.
* ಪರಿಸರಸ್ನೇಹಿ, ವಿಕೇಂದ್ರಿಕೃತ, ಉದ್ಯೋಗ ಸೃಷ್ಟಿಗೆ ಕೇಂದ್ರಿತ ಗ್ರಾಮೀಣ ಸಹಕಾರಿ ಕಾರ್ಖಾನೆಗಳ ಸ್ಥಾಪನೆಗೆ ಸರ್ಕಾರ ಒತ್ತು ಕೊಡಬೇಕು.
* ಎಂಎಸ್‍ಎಂಇ ಗೆ ಜಿ.ಎಸ್.ಟಿ ತೆರಿಗೆ ಇಳಿಸಬೇಕು.
* ರಾಜ್ಯ ಸರ್ಕಾರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನೂ ಕೂಡಲೇ ಭರ್ತಿ ಮಾಡಬೇಕು. ಗುತ್ತಿಗೆ ನೌಕರರಿಗೆ ಸೇವಾಭದ್ರತೆ ನೀಡಬೇಕು.
* ಕೇಂದ್ರ ಸರ್ಕಾರದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತೆ ರಾಜ್ಯ ಸರ್ಕಾರವೂ 100 ದಿನಗಳ ಉದ್ಯೋಗ ನೀಡುವ ಯೋಜನೆಯನ್ನು ಜಾರಿಗೆ ತರಬೇಕು.
* ಗ್ರಾಮೀಣ ಜನರಿಗೆ ಇರುವ ನರೇಗ ಯೋಜನೆಯಂತೆ ನಗರ ಪ್ರದೇಶಗಳಲ್ಲಿನ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯೊಂದನ್ನು ಸರ್ಕಾರ ಜಾರಿಗೆ ತರಬೇಕು.
* ಕೌಶಲ್ಯ ತರಬೇತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ತರಬೇತಿಗೆ ಸೇರಿದವರಿಗೆಲ್ಲರಿಗೂ ಕೌಶಲ್ಯಗಳು ತಲುಪುವಂತೆ ಖಾತರಿ ಮಾಡಿಕೊಳ್ಳಬೇಕು.
* ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಬದಲಾಗಬೇಕು. ಹೂಡಿಕೆಗೆ ಉತ್ತೇಜನ ನೀಡುವ ಬದಲು ಬೇಡಿಕೆಗೆ ಉತ್ತೇಜನವಾಗಲು ಕ್ರಮಗಳನ್ನು ಕೈಗೊಳ್ಳಬೇಕು.
* ಉದ್ಯೋಗಿಗಳಿಗೆ ವಿಮೆ ಇರಬೇಕು. ಅನಿವಾರ್ಯ ಕಾರಣಗಳಿಂದ ಉದ್ಯೋಗ ಕಡಿತವಾದರೆ ಅವರು ಹೊಸ ಉದ್ಯೋಗ ಪಡೆಯುವವರೆಗೂ ಆಸರೆಯಾಗಬೇಕು
* ಗ್ರಾಮೀಣ ಉದ್ದಿಮೆದಾರರ ಒಕ್ಕೂಟಗಳನ್ನು ರಚಿಸಿ ಅವರಿಗೆ ಸರ್ಕಾರ ನೆರವು ನೀಡಬೇಕು.
* ಉದ್ಯೋಗ ಸಚಿವಾಲಯವೊಂದನ್ನು ಸರ್ಕಾರ ರಚಿಸಬೇಕು ಮತ್ತು ಅದಕ್ಕೊಬ್ಬರು ಸಚಿವರು ಇರಬೇಕು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ, ವಿದ್ಯಾರ್ಥಿ ಬಂಧುತ್ವ ವೇದಿಕೆ, ಸಾಲಿಡಾರಿಟಿ ಯೂತ್ ಮೂವ್‍ಮೆಂಟ್, ಫ್ರೆಟರ್ನಿಟಿ ಮೂವ್‍ಮೆಂಟ್, ಸ್ವರಾಜ್ ಅಭಿಯಾನ, ಕರ್ನಾಟಕ ಜನಶಕ್ತಿ, ಎಸ್ಸಿ, ಎಸ್ಟಿ ಉದ್ದಿಮೆದಾರರ ಸಂಘ ಎಲ್ಲವೂ ಸೇರಿ ಒಟ್ಟಾಗಿ ಕೆಲಸ ಮಾಡುವುದಾಗಿ ನಿರ್ಧರಿಸಲಾಯಿತು.

ಎಸ್ ಸಿ/ಎಸ್‌‌ಟಿ ಉದ್ದಿಮೆದಾರರ ಸಂಘದ ಉಪಾಧ್ಯಕ್ಷರಾದ ಸಿ.ಜಿ. ಶ್ರೀನಿವಾಸನ್, ಫ್ರೆಟರ್ನಿಟಿ ಮೂವ್‌ಮೆಂಟ್ ನ ನಿಜಾಮುದ್ದೀನ್, ಮೋಹಿನ್ ಕಮರ್, ನಸೀಮ್, ಸ್ವರಾಜ್ ಅಭಿಯಾನದ ರಾಜಶೇಖರ್ ಅಕ್ಕಿ,  ಲೇಖಕರಾದ ಬಿ.ಶ್ರೀಪಾದ್ ಭಟ್, ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ನರಸಿಂಹ ಮೂರ್ತಿ, ಸರೋವರ್ ಬೆಂಕಿಕೆರೆ, ಡಾ.ಸ್ವಾತಿ ಶುಕ್ಲಾ, ಮುತ್ತುರಾಜು, ಪತ್ರಕರ್ತರಾದ ಸುನಿಲ್ ಸಿರಸಂಗಿ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ತೋಳಿ ಭರಮಣ್ಣ, ಕರ್ನಾಟಕ ಜನಶಕ್ತಿಯ ಡಾ.ವಾಸು ಎಚ್.ವಿ, ಮಲ್ಲಿಗೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜೇಂದ್ರ ರಾಜವಾಳ, ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಸಂತೋಷ್, ದೀಪಿಕ, ಮರಿಸ್ವಾಮಿ, ನಾಗರಾಜು, ಉಪನ್ಯಾಸಕರಾದ ಡಾ.ರಾಜೇಶ್, ಸಾಲಿಡಾರಿಟಿ ಯೂತ್ ಮೋವ್‌ಮೆಂಟ್ ನ ಮಹ್ಹಮದ್ ನವಾಜ್ ಮತ್ತಿತರರ ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...