Homeಕರ್ನಾಟಕಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

- Advertisement -
- Advertisement -

ದಸರಾ ಉದ್ಘಾಟನಾ ಭಾಷಣದಲ್ಲಿ “ಮಹಿಳೆ ಮುಟ್ಟಾದಾಗ ಆಫೀಸಿಗೆ ಹೋಗೋದು ಬೇರೆ ದೇವಸ್ಥಾನಕ್ಕೆ ಹೋಗೋದು ಬೇರೆ” ಎಂದು ಹೇಳುವ ಮೂಲಕ ಮಹಿಳೆಯರ ಸಹಜ ಮುಟ್ಟನ್ನು ಅವಮಾನಿಸಿದ್ದ ಎಸ್.ಎಲ್ ಭೈರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಹಿತಿ ಭೈರಪ್ಪನವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದು ಆಯ್ದ ಕೆಲವು ಇಲ್ಲಿವೆ.

ಎಡಗಡೆ ಮುಖ್ಯಮಂತ್ರಿ ಯಡಿಯೂರಪ್ಪ, ಬಲಗಡೆ ಕೇಂದ್ರ ಸಚಿವ ಸದಾನಂದರನ್ನು ಕೂರಿಸಿಕೊಂಡಿದ್ದ ಬೈರಪ್ಪ ನಾಡಿನ ಬಗ್ಗೆ ಕಾಳಜಿ ಇರುವ ಮನುಷ್ಯನೇ ಆಗಿದ್ದರೆ, ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿಯ ಜನರ ಬದುಕಿನ ಬಗ್ಗೆ‌ ಮಾತನಾಡಬೇಕಿತ್ತು. ಅವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಬೇಕು ಎಂಬ ಸಲಹೆ ಕೊಡಬಹುದಿತ್ತು.

ಅಲ್ಲಿ ಕೂತು ಬೆಂಡೆತ್ತಬೇಕಾಗಿರುವುದು ಪ್ರವಾಹ ಪರಿಹಾರಕ್ಕೆಂದು ಚಿಕ್ಕಾಸೂ ಕೊಡದ ಕೇಂದ್ರ ಸರ್ಕಾರವನ್ನು. ವಿಚಾರವಾದಿಗಳು, ಮುಟ್ಟಾಗುವ ಮಹಿಳೆಯರ ಬಗ್ಗೆ ಮಾತಾಡಿದರೆ ಯಾರಿಗೆ ಏನು ಪ್ರಯೋಜನ?

“ನಾಡಹಬ್ಬ ಉದ್ಘಾಟಕರಾಗಿ ಯಾವ ವಿಷಯ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಬೈರಪ್ಪನವರಿಗೇನಾದರೂ, ಈ ಎಲ್ಲಾ ಘನಂದಾರಿ ಸಾಧನೆಗೆ ಜ್ಞಾನಪೀಠ ಕೊಟ್ಟರೆ ಅಲ್ಲಿಗೆ ಜ್ಞಾನಪೀಠದ ಮಾನ ಮೂರ್ಕಾಸಿಗೆ ಹರಾಜಾದಂತೆಯೇ ಸರಿ” ಎಂದು ಪತ್ರಕರ್ತೆ ಹೇಮಾವತಿ ವೆಂಕಟ್‌ರವರು ಕಿಡಿಕಾರಿದ್ದಾರೆ.

ಮುಟ್ಟು ಎಂಬ ಪ್ರಕೃತಿ ವಿಸ್ಮಯ ಪುರುಷರ ದೇಹದಲ್ಲಿ ಆಗಿರುತ್ತಿದ್ದರೆ, ಇಲ್ಲ ಶಿಶ್ನವೇ ತಿಂಗಳಿಗೆ ನಾಲ್ಕೈದು ದಿನಗಳ ಕಾಲ ರಕ್ತ ಕಾರುವಂತೆ ಇದ್ದಿದ್ದರೆ ಅದಕ್ಕೆಂದೇ ಹಬ್ಬ, ವೃತಗಳು ಹುಟ್ಟಿರುತ್ತಿದ್ದವು. ಹಾಗಾಗಿ ಭೈರಪ್ಪನಂಥವರ ವಿರೋಧ ಕೇವಲ ಮುಟ್ಟಿಗಲ್ಲ ಬದಲಾಗಿ ಅದು ಪುರುಷ ಪ್ರಧಾನ ಸಮಾಜ ಮಹಿಳಾ ವಿರೋಧಿ ಧೋರಣೆಗಳ ಒಂದು ಭಾಗವಷ್ಟೇ. ಒಂದಂತೂ ಸತ್ಯ. ಮುಟ್ಟು ಪುರುಷರ ದೇಹದಲ್ಲಾಗಿರುತ್ತಿದ್ದರೂ ಮನೆಯಿಂದ ಆಚೆ ಹೆಣ್ಮಕ್ಕಳೇ ಹೋಗಬೇಕಾಗಿತ್ತು. ಮುಟ್ಟು ಪವಿತ್ರ. ಮುಟ್ಟಾದ ಪುರುಷರು Holy of Holies Periodನಲ್ಲಿರುವಾಗ ಮುಟ್ಟಾಗದ ಅಪವಿತ್ರ ಮಹಿಳೆಯರು ಪುರುಷರಿಂದ ದೂರವಿರಬೇಕೆಂದು ಕಟ್ಟಳೆಗಳನ್ನು ಮಾಡಿ ಮಹಿಳೆಯರನ್ನೇ ಮನೆಯಿಂದ ಹೊರಗಿಡುತ್ತಿದ್ದರು. ಪುರುಷ ಪ್ರಧಾನ ವ್ಯವಸ್ಥೆಯ ನೀಚತನಕ್ಕೆ ಪರಿಧಿಗಳಿಲ್ಲ. ಎಂದು ಆಲ್‌ಮೀಡಿಯಾ ಗ್ಲಾಡ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

ಕರುಳಿನಲ್ಲಿ ಮಲವಿರುತ್ತದೆ. ಮೂತ್ರಾಶಯದಲ್ಲಿ ಮೂತ್ರ ಇರುತ್ತದೆ. ಅದನ್ನೆಲ್ಲ ಭರ್ತಿ ಇರಿಸಿಕೊಂಡು ದೇವಸ್ಥಾನಕ್ಕೆ ಹೋಗಬಹುದು. ಆದರೆ ಋತುಸ್ರಾವ ಅನುಭವಿಸುತ್ತಿರುವ ಹೆಣ್ಣುಮಗಳು ಮಾತ್ರ ದೇವಸ್ಥಾನ ಪ್ರವೇಶಿಸಕೂಡದು ಅಲ್ವಾ ಬೈರಪ್ಪನವರೇ?!
ಸಾಹಿತಿಯಾದವರಲ್ಲಿ ಜೀವಪರ ಸಂವೇದನೆ ಇರುತ್ತದೆ ಅಂದುಕೊಂಡಿದ್ದೆವು, ವಯಸ್ಸಾಗುತ್ತಿದ್ದಂತೆ ಬುದ್ಧಿ ಬೆಳೆಯುತ್ತದೆ ಅಂದುಕೊಂಡಿದ್ದೆವು! ತಪ್ಪು ನಮ್ಮದೇ…

ಒಬ್ಬ ಅತ್ಯಾಚಾರಿ ದೇವಸ್ಥಾನ ಪ್ರವೇಶಿಸಬಹುದು. ಕೊಲೆಗಡುಕ, ಕಳ್ಳ, ಭ್ರಷ್ಟ, ವಂಚಕ, ದರೋಡೆಕೋರ ದೇವಸ್ಥಾನ ಪ್ರವೇಶಿಸಬಹುದು. ಜಗತ್ತಿಗೆ ಜೀವ ಕೊಟ್ಟ ಹೆಣ್ಣುಮಗಳು ಮಾತ್ರ ಋತುಸ್ರಾವ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಬಾರದು!.
ವಾವ್! ಅದ್ಭುತ ವಾದ ಬೈರಪ್ನೋರೆ!-
ಎಂದು  ಶ್ರೀನಿವಾಸ ಕಾರ್ಕಳರವರು ಬರೆದಿದ್ದಾರೆ.

ಅದೇ ರೀತಿ ಶ್ರೀನಿವಾಸ ಕಾರ್ಕಳರವರು ಮುಟ್ಟಿನ ಬಗ್ಗೆ ಬರೆದಿದ್ದ ಜಾಗೃತಿ ಹಾಡು ಕೂಡ ವೈರಲ್ ಆಗಿದೆ.

ಮುಟ್ಟುಮುಟ್ಟೆಂದೇಕೆ ಕೀಳಾಗಿ ಕಾಣುವಿರಿ
ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು
ಮುಟ್ಟುಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿ
ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು //

ಮುಟ್ಟು ಕಾಣದ ಹೆಣ್ಣು ಬಸಿರು ಹೊಂದುವುದಿಲ್ಲ
ತಾಯಿಯಾಗುವುದಿನ್ನು ಸಾಧ್ಯವೇನು?
ನಮ್ಮನ್ನು ಹೆತ್ತವಳು ಮುಟ್ಟಾಗದಿರುತಿದ್ರೆ
ಭೂಮಿಯಲಿ ನಾವು ಇರುತ್ತಿದ್ದೆವೇನು //

ಮುಟ್ಟುಸ್ರಾವಗಳೆಲ್ಲ ಪ್ರಕೃತಿಯ ಸಹಜ ಕ್ರಿಯೆ
ಬೆವರು ಬಾಧೆಗಳಂತೆ ಅಲ್ಲವೇನು?
ಮುಟ್ಟಾದ ಹೆಣ್ಣನ್ನು ದೂರ ಅಟ್ಟುವುದೇಕೆ
ಅವಳು ಮಾಡಿದ ಘೋರ ಪಾಪವೇನು //

ಜಗದ ಜೀವಿಗಳೆಲ್ಲ ದೈವ ಸೃಷ್ಟಿ ಆದರೆ
ಮುಟ್ಟು ಕೂಡಾ ಪವಿತ್ರ ಹೌದು ತಾನೇ?
ದೇವರದೇ ಸೃಷ್ಟಿಯು ಶುಭದ ಕಾರ್ಯಗಳಲ್ಲಿ
ವರ್ಜ್ಯ ಅನ್ನುವುದೆಲ್ಲ ತಪ್ಪು ತಾನೇ //

ಮುಟ್ಟಿನ ಕುರಿತಾಗಿ ಸತ್ಯ ಸಂಗತಿ ಅರಿತು
ಹೊಸ ದೃಷ್ಟಿಯನು ನಾವು ಹೊಂದಬೇಕು
ಕುರುಡು ನಂಬಿಕೆಗಳನು ಇಲ್ಲವಾಗಿಸಿ ನಾವು
ಮಾನವೀಯತೆಯಿಂದ ಬದುಕಬೇಕು //..

“ಮುಟ್ಟಾಗುವುದು ಅಪವಿತ್ರ ಅನ್ನೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಈ ಭೈರಪ್ಪನಿಗೆ ತನ್ನ ಮನೆಯಲ್ಲಿರುವ ಹೆಣ್ಮಕ್ಳು ನೆನಪಾಗುವುದೇ ಇಲ್ವಾ?” ಎಂದು ಮಹಾಲಿಂಗಪ್ಪ ಆಲಬಾಳರವರು ಪ್ರಶ್ನಿಸಿದ್ದಾರೆ.

“ಹೆಣ್ಣು ಮಕ್ಳ ಮುಟ್ಟಿನ ಸ್ರಾವ ಅವರ ಗರ್ಭಕೋಶದಲ್ಲಿ ಮಾತ್ರ ಇರುತ್ತೆ.
(ಕೆಲವು) ಗಂಡಸರಿಗೆ ಸದಾ ಕಾಲ ತಲೇಲೆ ಇರುತ್ತೆ. ಯಾರಪ್ಪಾ ಹೆಚ್ಚು ಮೈಲಿಗೆ ಈಗ?” ಎಂದು ಪ್ರೀತಿ ನಾಗರಾಜ್ ಪ್ರಶ್ನೆ ಹಾಕಿದ್ದಾರೆ..

“ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡವೆಂದು ತೊಲಗುವ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ?” ಎಂದು ನೀಲಾ ಕೆ ಗುಲಬರ್ಗಾ ರವರು ಬರೆದುಕೊಂಡಿದ್ದಾರೆ.

“ಭೈರಪ್ಪನವರೇ ನಮ್ಗೆ ‘ಕಾಯಕವೇ ಕೈಲಾಸ’
ಕೈಲಾಸದಂತ ಆಫೀಸ್ಗೆ ಮುಟ್ಟಾದಾಗ ನಾವು ಹೋಗೋದು ಬೇಡ.
ನಿಮ್ ಹೆಸರಲ್ಲಿ ತಿಂಗ್ಳಿಗೆ ಮೂರ್ ದಿನ ರಜೆ ಕೊಡಿಸ್ಬಿಡಿ ಪ್ಲೀಸ್” ಎಂದು ಚೈತ್ರ ಕೋಟುರುರವರು ಟ್ರೋಲ್ ಮಾಡಿದ್ದಾರೆ.

ತಕಳ್ರಪ್ಪಾ… ಮುಟ್ಟಲ್ಲೇ ಹುಟ್ಟಿದವರು ಮುಟ್ಟಿನ ಬಗ್ಗೆ ಮಾತಾಡುತ್ತಾರೆ! ಎಂದು ಕಾದಂಬಿನಿ ರಾವಿಯವರು ಕಿಚಾಯಿಸಿದ್ದಾರೆ.

ಹಿರಿಯ ಸಾಹಿತಿಯೊಬ್ಬರು ಬರೆದ ಈ ಹೇಳಿಕೆ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದನ್ನು ಕಾದಂಬಿನಿ ರಾವಿಯವರು ಮೊದಲು ಷೇರ್ ಮಾಡಿಕೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಸವಣ್ಣ ಅಂತರ್ಜಾತೀಯ ವಿವಾಹ ಮಾಡಿಸಿದ ಸಂದರ್ಭದಲ್ಲಿ ಸಮಾಜದಲಿ ಆರಥಿಕತೆ ಪಕವವಾಗಿರಲಿಲ ಎಂದು ಹೇಳಿದ ಭೈರಪ್ಪನವರೆ ನಿಮ್ಮ ಬುದ್ಧಿಗೆ ಸವಲಪ ಸಗಣಿ ಹಾಕಿಕೊಳ್ಳಿ. ಬಸವಣ್ಣನವರು ಆ ಇಬ್ಬರು ಗಂಡು ಹೆಣ್ಣು ಪೃಕೃತಿ ಸಹಜ ಆಕರ್ಷಣೆಗೊಂಡಿದರಿಂದ ಅವರಿಬ್ಬರಿಗೂ ಮುತಸದಿಯ ಜಾಗೃತೆ ವಹಿಸಿ ಆಗಿನ ಕಾಲದ ಸಮಾಜ ಹಾಕಿಕೊಂಡ ಜಾತಿಯತೆಯ ಸಾಮಾಜಿಕ ಕಟ್ಟಳೆಯಿಂದ ಇವರಿಬ್ಬರಿಗೂ ತೊಂದರೆಯಾಗಬಾರದೆಂಬ ಕಳಕಳಿಯಿಂದ ಇಬ್ಬರಿಗೂ ಸಾಂಕೇತಿಕವಾಗಿ ಲಿಂಗ ದೀಕ್ಷೆ ಕೊಟ್ಟು ಸತಿಪತಿ ಗಳಾಗಿ ಬಾಳುವಂತೆ ಮದುವೆ ಮಾಡಿಸಿ ಜಾತ್ಯತೀತದ ಆದರ್ಶ ವನ್ನು ಎತ್ತಿ ಹಿಡಿದರು. ವಸ್ತು ಸ್ಥಿತಿ ವಿಷಯದ ಅಜಾನಿಗಳಾದ ನೀವು ನಿಮ್ಮ ಗೊಮುಖ ವಾಘೃದ ಮುಖವಾಡ ಹಾಕಿ ಕೊಂಡು ಕೈಗೆ ಮೈಕ್ ಮತ್ತು ನಿಂತು ಕೊಳಲು ಪುಕ್ಕಟೆಯ ವೇದಿಕೆ ಸಿಕಿದರಿಂದ ನಾನು ಹೇಳುವೆನೊ ಜನ ಅದನ್ನು ಕೇಳುತ್ತಾರೆ ಎಂಬ ಅಹಂನಿಂದ ಬಸವಣ್ಣನವರ ಮಾಡಿಸಿದ ಮದುವೆಯನ್ನು ಆರಥಿಕತೆ ರೂಪಕ್ಕೆ ಹೋಗಿ ಜೊಡಿಸಿದಿರಲ ನಿಮ್ಮ ಅಪೃಬುದತೆಗೆ ಛೀ ಮಾರಿ ಹಾಕುತಿದೆನೆ.
    ಹಾಗಾದರೆ ಇವತಿಗೆ ಆರಥಿಕತೆ ಪಕವವಾಗಿದೆ ಎನುವುದಾದರೆ ಒಬ್ಬರಿಗೂಬಬರಿಗೂ ಯಾವ ಆಕರ್ಷಣೆ ಇಲ್ಲದೇ ಕೇವಲ ಆರಥಿಕ ಆಕರ್ಷಣೆ ಗೊಸಕರ ಮದುವೆ ಯಾಗಬೇಕಾ. ಛೀ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...