Homeಕರ್ನಾಟಕಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

- Advertisement -
- Advertisement -

ದಸರಾ ಉದ್ಘಾಟನಾ ಭಾಷಣದಲ್ಲಿ “ಮಹಿಳೆ ಮುಟ್ಟಾದಾಗ ಆಫೀಸಿಗೆ ಹೋಗೋದು ಬೇರೆ ದೇವಸ್ಥಾನಕ್ಕೆ ಹೋಗೋದು ಬೇರೆ” ಎಂದು ಹೇಳುವ ಮೂಲಕ ಮಹಿಳೆಯರ ಸಹಜ ಮುಟ್ಟನ್ನು ಅವಮಾನಿಸಿದ್ದ ಎಸ್.ಎಲ್ ಭೈರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಹಿತಿ ಭೈರಪ್ಪನವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದು ಆಯ್ದ ಕೆಲವು ಇಲ್ಲಿವೆ.

ಎಡಗಡೆ ಮುಖ್ಯಮಂತ್ರಿ ಯಡಿಯೂರಪ್ಪ, ಬಲಗಡೆ ಕೇಂದ್ರ ಸಚಿವ ಸದಾನಂದರನ್ನು ಕೂರಿಸಿಕೊಂಡಿದ್ದ ಬೈರಪ್ಪ ನಾಡಿನ ಬಗ್ಗೆ ಕಾಳಜಿ ಇರುವ ಮನುಷ್ಯನೇ ಆಗಿದ್ದರೆ, ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿಯ ಜನರ ಬದುಕಿನ ಬಗ್ಗೆ‌ ಮಾತನಾಡಬೇಕಿತ್ತು. ಅವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಬೇಕು ಎಂಬ ಸಲಹೆ ಕೊಡಬಹುದಿತ್ತು.

ಅಲ್ಲಿ ಕೂತು ಬೆಂಡೆತ್ತಬೇಕಾಗಿರುವುದು ಪ್ರವಾಹ ಪರಿಹಾರಕ್ಕೆಂದು ಚಿಕ್ಕಾಸೂ ಕೊಡದ ಕೇಂದ್ರ ಸರ್ಕಾರವನ್ನು. ವಿಚಾರವಾದಿಗಳು, ಮುಟ್ಟಾಗುವ ಮಹಿಳೆಯರ ಬಗ್ಗೆ ಮಾತಾಡಿದರೆ ಯಾರಿಗೆ ಏನು ಪ್ರಯೋಜನ?

“ನಾಡಹಬ್ಬ ಉದ್ಘಾಟಕರಾಗಿ ಯಾವ ವಿಷಯ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಬೈರಪ್ಪನವರಿಗೇನಾದರೂ, ಈ ಎಲ್ಲಾ ಘನಂದಾರಿ ಸಾಧನೆಗೆ ಜ್ಞಾನಪೀಠ ಕೊಟ್ಟರೆ ಅಲ್ಲಿಗೆ ಜ್ಞಾನಪೀಠದ ಮಾನ ಮೂರ್ಕಾಸಿಗೆ ಹರಾಜಾದಂತೆಯೇ ಸರಿ” ಎಂದು ಪತ್ರಕರ್ತೆ ಹೇಮಾವತಿ ವೆಂಕಟ್‌ರವರು ಕಿಡಿಕಾರಿದ್ದಾರೆ.

ಮುಟ್ಟು ಎಂಬ ಪ್ರಕೃತಿ ವಿಸ್ಮಯ ಪುರುಷರ ದೇಹದಲ್ಲಿ ಆಗಿರುತ್ತಿದ್ದರೆ, ಇಲ್ಲ ಶಿಶ್ನವೇ ತಿಂಗಳಿಗೆ ನಾಲ್ಕೈದು ದಿನಗಳ ಕಾಲ ರಕ್ತ ಕಾರುವಂತೆ ಇದ್ದಿದ್ದರೆ ಅದಕ್ಕೆಂದೇ ಹಬ್ಬ, ವೃತಗಳು ಹುಟ್ಟಿರುತ್ತಿದ್ದವು. ಹಾಗಾಗಿ ಭೈರಪ್ಪನಂಥವರ ವಿರೋಧ ಕೇವಲ ಮುಟ್ಟಿಗಲ್ಲ ಬದಲಾಗಿ ಅದು ಪುರುಷ ಪ್ರಧಾನ ಸಮಾಜ ಮಹಿಳಾ ವಿರೋಧಿ ಧೋರಣೆಗಳ ಒಂದು ಭಾಗವಷ್ಟೇ. ಒಂದಂತೂ ಸತ್ಯ. ಮುಟ್ಟು ಪುರುಷರ ದೇಹದಲ್ಲಾಗಿರುತ್ತಿದ್ದರೂ ಮನೆಯಿಂದ ಆಚೆ ಹೆಣ್ಮಕ್ಕಳೇ ಹೋಗಬೇಕಾಗಿತ್ತು. ಮುಟ್ಟು ಪವಿತ್ರ. ಮುಟ್ಟಾದ ಪುರುಷರು Holy of Holies Periodನಲ್ಲಿರುವಾಗ ಮುಟ್ಟಾಗದ ಅಪವಿತ್ರ ಮಹಿಳೆಯರು ಪುರುಷರಿಂದ ದೂರವಿರಬೇಕೆಂದು ಕಟ್ಟಳೆಗಳನ್ನು ಮಾಡಿ ಮಹಿಳೆಯರನ್ನೇ ಮನೆಯಿಂದ ಹೊರಗಿಡುತ್ತಿದ್ದರು. ಪುರುಷ ಪ್ರಧಾನ ವ್ಯವಸ್ಥೆಯ ನೀಚತನಕ್ಕೆ ಪರಿಧಿಗಳಿಲ್ಲ. ಎಂದು ಆಲ್‌ಮೀಡಿಯಾ ಗ್ಲಾಡ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

ಕರುಳಿನಲ್ಲಿ ಮಲವಿರುತ್ತದೆ. ಮೂತ್ರಾಶಯದಲ್ಲಿ ಮೂತ್ರ ಇರುತ್ತದೆ. ಅದನ್ನೆಲ್ಲ ಭರ್ತಿ ಇರಿಸಿಕೊಂಡು ದೇವಸ್ಥಾನಕ್ಕೆ ಹೋಗಬಹುದು. ಆದರೆ ಋತುಸ್ರಾವ ಅನುಭವಿಸುತ್ತಿರುವ ಹೆಣ್ಣುಮಗಳು ಮಾತ್ರ ದೇವಸ್ಥಾನ ಪ್ರವೇಶಿಸಕೂಡದು ಅಲ್ವಾ ಬೈರಪ್ಪನವರೇ?!
ಸಾಹಿತಿಯಾದವರಲ್ಲಿ ಜೀವಪರ ಸಂವೇದನೆ ಇರುತ್ತದೆ ಅಂದುಕೊಂಡಿದ್ದೆವು, ವಯಸ್ಸಾಗುತ್ತಿದ್ದಂತೆ ಬುದ್ಧಿ ಬೆಳೆಯುತ್ತದೆ ಅಂದುಕೊಂಡಿದ್ದೆವು! ತಪ್ಪು ನಮ್ಮದೇ…

ಒಬ್ಬ ಅತ್ಯಾಚಾರಿ ದೇವಸ್ಥಾನ ಪ್ರವೇಶಿಸಬಹುದು. ಕೊಲೆಗಡುಕ, ಕಳ್ಳ, ಭ್ರಷ್ಟ, ವಂಚಕ, ದರೋಡೆಕೋರ ದೇವಸ್ಥಾನ ಪ್ರವೇಶಿಸಬಹುದು. ಜಗತ್ತಿಗೆ ಜೀವ ಕೊಟ್ಟ ಹೆಣ್ಣುಮಗಳು ಮಾತ್ರ ಋತುಸ್ರಾವ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಬಾರದು!.
ವಾವ್! ಅದ್ಭುತ ವಾದ ಬೈರಪ್ನೋರೆ!-
ಎಂದು  ಶ್ರೀನಿವಾಸ ಕಾರ್ಕಳರವರು ಬರೆದಿದ್ದಾರೆ.

ಅದೇ ರೀತಿ ಶ್ರೀನಿವಾಸ ಕಾರ್ಕಳರವರು ಮುಟ್ಟಿನ ಬಗ್ಗೆ ಬರೆದಿದ್ದ ಜಾಗೃತಿ ಹಾಡು ಕೂಡ ವೈರಲ್ ಆಗಿದೆ.

ಮುಟ್ಟುಮುಟ್ಟೆಂದೇಕೆ ಕೀಳಾಗಿ ಕಾಣುವಿರಿ
ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು
ಮುಟ್ಟುಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿ
ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು //

ಮುಟ್ಟು ಕಾಣದ ಹೆಣ್ಣು ಬಸಿರು ಹೊಂದುವುದಿಲ್ಲ
ತಾಯಿಯಾಗುವುದಿನ್ನು ಸಾಧ್ಯವೇನು?
ನಮ್ಮನ್ನು ಹೆತ್ತವಳು ಮುಟ್ಟಾಗದಿರುತಿದ್ರೆ
ಭೂಮಿಯಲಿ ನಾವು ಇರುತ್ತಿದ್ದೆವೇನು //

ಮುಟ್ಟುಸ್ರಾವಗಳೆಲ್ಲ ಪ್ರಕೃತಿಯ ಸಹಜ ಕ್ರಿಯೆ
ಬೆವರು ಬಾಧೆಗಳಂತೆ ಅಲ್ಲವೇನು?
ಮುಟ್ಟಾದ ಹೆಣ್ಣನ್ನು ದೂರ ಅಟ್ಟುವುದೇಕೆ
ಅವಳು ಮಾಡಿದ ಘೋರ ಪಾಪವೇನು //

ಜಗದ ಜೀವಿಗಳೆಲ್ಲ ದೈವ ಸೃಷ್ಟಿ ಆದರೆ
ಮುಟ್ಟು ಕೂಡಾ ಪವಿತ್ರ ಹೌದು ತಾನೇ?
ದೇವರದೇ ಸೃಷ್ಟಿಯು ಶುಭದ ಕಾರ್ಯಗಳಲ್ಲಿ
ವರ್ಜ್ಯ ಅನ್ನುವುದೆಲ್ಲ ತಪ್ಪು ತಾನೇ //

ಮುಟ್ಟಿನ ಕುರಿತಾಗಿ ಸತ್ಯ ಸಂಗತಿ ಅರಿತು
ಹೊಸ ದೃಷ್ಟಿಯನು ನಾವು ಹೊಂದಬೇಕು
ಕುರುಡು ನಂಬಿಕೆಗಳನು ಇಲ್ಲವಾಗಿಸಿ ನಾವು
ಮಾನವೀಯತೆಯಿಂದ ಬದುಕಬೇಕು //..

“ಮುಟ್ಟಾಗುವುದು ಅಪವಿತ್ರ ಅನ್ನೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಈ ಭೈರಪ್ಪನಿಗೆ ತನ್ನ ಮನೆಯಲ್ಲಿರುವ ಹೆಣ್ಮಕ್ಳು ನೆನಪಾಗುವುದೇ ಇಲ್ವಾ?” ಎಂದು ಮಹಾಲಿಂಗಪ್ಪ ಆಲಬಾಳರವರು ಪ್ರಶ್ನಿಸಿದ್ದಾರೆ.

“ಹೆಣ್ಣು ಮಕ್ಳ ಮುಟ್ಟಿನ ಸ್ರಾವ ಅವರ ಗರ್ಭಕೋಶದಲ್ಲಿ ಮಾತ್ರ ಇರುತ್ತೆ.
(ಕೆಲವು) ಗಂಡಸರಿಗೆ ಸದಾ ಕಾಲ ತಲೇಲೆ ಇರುತ್ತೆ. ಯಾರಪ್ಪಾ ಹೆಚ್ಚು ಮೈಲಿಗೆ ಈಗ?” ಎಂದು ಪ್ರೀತಿ ನಾಗರಾಜ್ ಪ್ರಶ್ನೆ ಹಾಕಿದ್ದಾರೆ..

“ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡವೆಂದು ತೊಲಗುವ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ?” ಎಂದು ನೀಲಾ ಕೆ ಗುಲಬರ್ಗಾ ರವರು ಬರೆದುಕೊಂಡಿದ್ದಾರೆ.

“ಭೈರಪ್ಪನವರೇ ನಮ್ಗೆ ‘ಕಾಯಕವೇ ಕೈಲಾಸ’
ಕೈಲಾಸದಂತ ಆಫೀಸ್ಗೆ ಮುಟ್ಟಾದಾಗ ನಾವು ಹೋಗೋದು ಬೇಡ.
ನಿಮ್ ಹೆಸರಲ್ಲಿ ತಿಂಗ್ಳಿಗೆ ಮೂರ್ ದಿನ ರಜೆ ಕೊಡಿಸ್ಬಿಡಿ ಪ್ಲೀಸ್” ಎಂದು ಚೈತ್ರ ಕೋಟುರುರವರು ಟ್ರೋಲ್ ಮಾಡಿದ್ದಾರೆ.

ತಕಳ್ರಪ್ಪಾ… ಮುಟ್ಟಲ್ಲೇ ಹುಟ್ಟಿದವರು ಮುಟ್ಟಿನ ಬಗ್ಗೆ ಮಾತಾಡುತ್ತಾರೆ! ಎಂದು ಕಾದಂಬಿನಿ ರಾವಿಯವರು ಕಿಚಾಯಿಸಿದ್ದಾರೆ.

ಹಿರಿಯ ಸಾಹಿತಿಯೊಬ್ಬರು ಬರೆದ ಈ ಹೇಳಿಕೆ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದನ್ನು ಕಾದಂಬಿನಿ ರಾವಿಯವರು ಮೊದಲು ಷೇರ್ ಮಾಡಿಕೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಸವಣ್ಣ ಅಂತರ್ಜಾತೀಯ ವಿವಾಹ ಮಾಡಿಸಿದ ಸಂದರ್ಭದಲ್ಲಿ ಸಮಾಜದಲಿ ಆರಥಿಕತೆ ಪಕವವಾಗಿರಲಿಲ ಎಂದು ಹೇಳಿದ ಭೈರಪ್ಪನವರೆ ನಿಮ್ಮ ಬುದ್ಧಿಗೆ ಸವಲಪ ಸಗಣಿ ಹಾಕಿಕೊಳ್ಳಿ. ಬಸವಣ್ಣನವರು ಆ ಇಬ್ಬರು ಗಂಡು ಹೆಣ್ಣು ಪೃಕೃತಿ ಸಹಜ ಆಕರ್ಷಣೆಗೊಂಡಿದರಿಂದ ಅವರಿಬ್ಬರಿಗೂ ಮುತಸದಿಯ ಜಾಗೃತೆ ವಹಿಸಿ ಆಗಿನ ಕಾಲದ ಸಮಾಜ ಹಾಕಿಕೊಂಡ ಜಾತಿಯತೆಯ ಸಾಮಾಜಿಕ ಕಟ್ಟಳೆಯಿಂದ ಇವರಿಬ್ಬರಿಗೂ ತೊಂದರೆಯಾಗಬಾರದೆಂಬ ಕಳಕಳಿಯಿಂದ ಇಬ್ಬರಿಗೂ ಸಾಂಕೇತಿಕವಾಗಿ ಲಿಂಗ ದೀಕ್ಷೆ ಕೊಟ್ಟು ಸತಿಪತಿ ಗಳಾಗಿ ಬಾಳುವಂತೆ ಮದುವೆ ಮಾಡಿಸಿ ಜಾತ್ಯತೀತದ ಆದರ್ಶ ವನ್ನು ಎತ್ತಿ ಹಿಡಿದರು. ವಸ್ತು ಸ್ಥಿತಿ ವಿಷಯದ ಅಜಾನಿಗಳಾದ ನೀವು ನಿಮ್ಮ ಗೊಮುಖ ವಾಘೃದ ಮುಖವಾಡ ಹಾಕಿ ಕೊಂಡು ಕೈಗೆ ಮೈಕ್ ಮತ್ತು ನಿಂತು ಕೊಳಲು ಪುಕ್ಕಟೆಯ ವೇದಿಕೆ ಸಿಕಿದರಿಂದ ನಾನು ಹೇಳುವೆನೊ ಜನ ಅದನ್ನು ಕೇಳುತ್ತಾರೆ ಎಂಬ ಅಹಂನಿಂದ ಬಸವಣ್ಣನವರ ಮಾಡಿಸಿದ ಮದುವೆಯನ್ನು ಆರಥಿಕತೆ ರೂಪಕ್ಕೆ ಹೋಗಿ ಜೊಡಿಸಿದಿರಲ ನಿಮ್ಮ ಅಪೃಬುದತೆಗೆ ಛೀ ಮಾರಿ ಹಾಕುತಿದೆನೆ.
    ಹಾಗಾದರೆ ಇವತಿಗೆ ಆರಥಿಕತೆ ಪಕವವಾಗಿದೆ ಎನುವುದಾದರೆ ಒಬ್ಬರಿಗೂಬಬರಿಗೂ ಯಾವ ಆಕರ್ಷಣೆ ಇಲ್ಲದೇ ಕೇವಲ ಆರಥಿಕ ಆಕರ್ಷಣೆ ಗೊಸಕರ ಮದುವೆ ಯಾಗಬೇಕಾ. ಛೀ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...