Homeಅಂತರಾಷ್ಟ್ರೀಯ2050ರ ವೇಳೆಗೆ ಮುಂಬೈ, ಕೋಲ್ಕತ್ತಾ ನಗರಗಳು ಸಮುದ್ರದೊಳಗೆ ಮುಳುಗಲಿವೆಯೇ? ಹೊಸ ವರದಿ ಬಿಚ್ಚಟ್ಟ ವಾಸ್ತವ....

2050ರ ವೇಳೆಗೆ ಮುಂಬೈ, ಕೋಲ್ಕತ್ತಾ ನಗರಗಳು ಸಮುದ್ರದೊಳಗೆ ಮುಳುಗಲಿವೆಯೇ? ಹೊಸ ವರದಿ ಬಿಚ್ಚಟ್ಟ ವಾಸ್ತವ….

- Advertisement -
- Advertisement -

ಪ್ರಾಕೃತಿಕ ವಿಕೋಪದಿಂದ ಭಾರತದ ಹಲವು ಪ್ರದೇಶಗಳು ಈಗಾಗಲೇ ತತ್ತರಿಸಿ ಹೋಗಿವೆ. ಚಂಡಮಾರುತ, ಮಳೆ, ಪ್ರವಾಹಕ್ಕೆ ತುತ್ತಾಗಿ ಭಾರಿ ಹಾನಿಯುಂಟಾಗಿದೆ. ಲಕ್ಷಾಂತರ ಜನ ಸಂತ್ರಸ್ತರಾಗಿದ್ದು, ಮನೆ-ಮಠ ಕಳೆದುಕೊಂಡಿದ್ದಾರೆ. ಹೀಗಿರುವಾಗ ಅಮೆರಿಕ ಮೂಲದ ಸಂಸ್ಥೆಯಿಂದ ಬಿಡುಗಡೆ ಮಾಡಿದ ವರದಿ ಜನರನ್ನು ಮತ್ತಷ್ಟು ಗಾಬರಿ ಬೀಳಿಸುವಂತಿದೆ.

ಅಮೆರಿಕ ಮೂಲದ ಹವಾಮಾನ ಕೇಂದ್ರ ಅಧ್ಯಯನ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿ, ಭಾರತಕ್ಕೆ ಜಲದಿಗ್ಬಂಧನ ಉಂಟಾಗುವ ಸಾಧ್ಯತೆಗಳನ್ನು ಗಂಭೀರವಾಗಿ ಉಲ್ಲೇಖಿಸಿದೆ. 2050 ರ ವೇಳೆಗೆ ಕಡಲ್ಕೊರೆತ ಮತ್ತು ಸಮುದ್ರದ ಉಬ್ಬರ, ಉಕ್ಕುವಿಕೆ, ಕಾರ್ಬನ್ ಡೈಆಕ್ಸೈಡ್ ಪ್ರಮಾಣದ ಹೆಚ್ಚಳದಿಂದ ಕರಾವಳಿ ಭಾಗಗಳಾದ ಮುಂಬೈ, ನವೀ ಮುಂಬೈ, ಕೋಲ್ಕತ್ತಾ ನಗರಗಳು ಮುಳುಗಿ ಹೋಗಲಿವೆ. ಕಡಲ್ಕೊರೆತದ ಹೆಚ್ಚಳದಿಂದ ಈಗ 50 ಲಕ್ಷ ಜನ ಮಾತ್ರ ಸಂತ್ರಸ್ತರಾಗಿದ್ದಾರೆ. ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮೂರೂವರೆ ಕೋಟಿ ಜನ ಸಂಕಷ್ಟ ಅನುಭವಿಸಲಿದ್ದಾರೆ ಎಂದು ವರದಿ ಹೇಳಿದೆ.

ಯುಎಸ್ ಮೂಲದ ಹವಾಮಾನ ಸಂಶೋಧನೆ ಮತ್ತು ಸಂವಹನ ಸಂಸ್ಥೆ ಹವಾಮಾನ ಕೇಂದ್ರ, ನೂತನ ಡಿಜಿಟಲ್ ಎಲಿವೇಶನ್ ಮಾದರಿಯ ಸಮುದ್ರ ಉಬ್ಬರ ಮಾಪನವನ್ನು ಸಂಶೋಧನೆ ಮಾಡಿದೆ. ಈ ಮೂಲಕ ಸಂಶೋಧನೆ ನಡೆಸಿ, ಹವಾಮಾನ ಅಧ್ಯಯನ ಕೇಂದ್ರ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ನೈಸರ್ಗಿಕ ಬದಲಾವಣೆ, ಕರಾವಳಿಯಲ್ಲಿ ಪ್ರವಾಹ, ಕಡಲ್ಕೊರೆತದಂತ ವಿಷಯಗಳನ್ನು ನಾಸಾದ ಎಸ್.ಆರ್.ಟಿ.ಎಂ ( ಶಟಲ್ ರಾಡಾರ್ ಟೋಪೋಗ್ರಫಿ ಮಿಷನ್ ) ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದೂ ಅಲ್ಲದೇ ಇವುಗಳಿಂದ ಆಗಬಹುದಾದ ಅನಾಹುತವನ್ನು ಇಲ್ಲಿಯವರೆಗೆ ಕಡಿಮೆ ಮಟ್ಟದಲ್ಲಿ ಊಹಿಸಿದೆ ಎಂದು ಉಲ್ಲೇಖಿಸಿದೆ.

ನಾಸಾ ಮಾದರಿಯಲ್ಲಿ  ಆಗಸಕ್ಕೆ ಹತ್ತಿರವಿರುವ ಸಮುದ್ರದ ಮೇಲ್ಮೆ ಉಬ್ಬರವನ್ನು ಅಳೆಯುವಾಗ, ಅಂತಹ ಜಲಪ್ರದೇಶವು ಆವರಿಸಿರುವ ಭೂಭಾಗದಲ್ಲಿರುವ ಮರದ ತುದಿಗಳು ಮತ್ತು ಕಟ್ಟಡಗಳ ಮೇಲ್ಛಾವಾಣಿಗಳನ್ನು ಪರಿಗಣಿಸಲಾಗುತ್ತಿದೆ. ಹೊಸ ಸಂಶೋಧನಾ ವಿಧಾನದಲ್ಲಿ ಇಂತಹ ದೋಷಗಳನ್ನು ಸರಿಪಡಿಸಿಕೊಂಡು ಕೃತಕ ಬುದ್ದಿಮತ್ತೆ ಸಾಧನಗಳ ಮೂಲಕ ಸಮುದ್ರದ ಮೇಲ್ಮೈ ಉಬ್ಬರವನ್ನು ಸಂಶೋಧಕರು ಮಾಪನ ಮಾಡಿದ್ದಾರೆ. ಅದರ ಪ್ರಕಾರ 2050ರ ವೇಳೆಗೆ ಸಮುದ್ರತೀರ ಪ್ರದೇಶಗಳಲ್ಲಿ ನಾಸಾ ಊಹಿಸಿದ್ದಕ್ಕಿಂತಲೂ ಗಂಭೀರ ಉಬ್ಬರ ಸಂಭವಿಸಲಿದೆ.  ಇದು ಜಾಗತಿಕವಾಗಿ 300 ದಶಲಕ್ಷ ಜನರ ಮೇಲೆ ಪರಿಣಾಮ ಬೀರಬಹುದು. ಏಷ್ಯಾ ಭಾಗಗಳಲ್ಲಿ ಕರಾವಳಿ ಭಾಗಗವನ್ನು ಅತಿಕ್ರಮಿಸಿಕೊಂಡಿರುವವರ ಭೂಮಿಯನ್ನೂ ಸಹ ಇದು ಮುಳುಗಿಸಲಿದೆ. ಸುಮಾರು 150 ದಶಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ.

2015ರ ಪ್ಯಾರಿಸ್ ಒಪ್ಪಂದವನ್ನು ಉಲ್ಲಂಘಿಸಿ ಹೊರಸೂಸುತ್ತಿರುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣದ ಆಧಾರದಲ್ಲಿ ಮತ್ತು ಹಿಮಗಡ್ಡೆಗಳ ತ್ವರಿತ ಕರಗುವಿಕೆಯಿಂದಾಗಿ ಸಮುದ್ರಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಸುಮಾರು 640 ದಶಲಕ್ಷ ಜನ ವಾಸಿಸುತ್ತಿರುವ ಕರಾವಳಿ ಭೂಭಾಗವು ಅಲೆಗಳ ಅಪಾಯಕಾರಿ ಉಬ್ಬರದ ಆತಂಕಕ್ಕೆ ಈಡಾಗಲಿವೆ. ಅದರಲ್ಲಿ 340 ದಶಲಕ್ಷ ಜನ ವಾಸಿಸುತ್ತಿರುವ ಭೂಪ್ರದೇಶವು 2100ರ ವೇಳೆಗೆ ಸರಾಸರಿ ಅಲೆಗಳ ಎತ್ತರಕ್ಕಿಂತಲೂ ತಗ್ಗಿನ ಪ್ರದೇಶವಾಗಿ ರೂಪಾಂತರವಾಗಲಿದೆ. ಇದರ ಅರ್ಥ ಏಷ್ಯಾದ ಎಂಟು ದೇಶಗಳಲ್ಲಿ ಅಪಾಯ ಹೆಚ್ಚಲಿದೆ. ಕನಿಷ್ಠ 10 ದಶಲಕ್ಷ ಜನ ವಾಸಿಸುವ ಭೂಮಿಗೆ ಹೋಲಿಸಿದರೆ ಉಬ್ಬರವಿಳಿತ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಜಾಗತಿಕ ಸರಾಸರಿ ಸಮುದ್ರಮಟ್ಟ, ಇಪ್ಪತ್ತನೇ ಶತಮಾನದಲ್ಲಿ 11-16 ಸೆಂ.ಮೀ ಹೆಚ್ಚಾಗಿದೆ. ಇಂಗಾಲದ ಹೊರಸೂಸುವಿಕೆಗೆ ತೀಕ್ಷ್ಣ ಮತ್ತು ತಕ್ಷಣದ ಕಡಿತವಿದ್ದರೂ ಸಹ, ಇದು ಈ ಶತಮಾನದಲ್ಲಿ 0.5 ಮೀ. ಆಗಿದೆ. ಆದರೆ ಹೆಚ್ಚಿನ ಇಂಗಾಲ ಹೊರಸೂಸುವಿಕೆಯ ಸನ್ನಿವೇಶಗಳಲ್ಲಿ, ಇಪ್ಪತ್ತೊಂದನೇ ಶತಮಾನದಲ್ಲಿ 2 ಮೀ.ನಷ್ಟು ಮೀರಿ ಹೋಗಲಿದೆ ಎಂದು ಅಧ್ಯಯನ ಎಚ್ಚರಿಸಿದೆ. ಹೊಸ ಅಂಕಿ ಅಂಶಗಳ ಪ್ರಕಾರ, 2050ರ ವೇಳೆಗೆ ಬಾಂಗ್ಲಾದೇಶ ಮತ್ತು ಚೀನಾದಲ್ಲಿ ಕ್ರಮವಾಗಿ ಕರಾವಳಿ ಪ್ರದೇಶದ 93 ಮತ್ತು 42 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...