Homeನಿಜವೋ ಸುಳ್ಳೋಫೇಕ್ ಪೈಲ್ವಾನರ ಮತ್ತೊಂದು ಫೇಕ್ ನ್ಯೂಸ್ : ಸ್ವಿಸ್‌ ಬ್ಯಾಂಕ್‌ನ ಪಟ್ಟಿ ಸಿಕ್ತು ಎಂಬ ಅಪ್ಪಟ...

ಫೇಕ್ ಪೈಲ್ವಾನರ ಮತ್ತೊಂದು ಫೇಕ್ ನ್ಯೂಸ್ : ಸ್ವಿಸ್‌ ಬ್ಯಾಂಕ್‌ನ ಪಟ್ಟಿ ಸಿಕ್ತು ಎಂಬ ಅಪ್ಪಟ ಸುಳ್ಳು..

- Advertisement -
- Advertisement -

ಸುಳ್ಳು ಸುದ್ದಿಗಳನ್ನು ವೈರಲ್ ಮಾಡುವುದರಲ್ಲಿ ಚಡ್ಡಿ ಪೈಲ್ವಾನರು ನಿಸ್ಸೀಮರು. ಇಂತಹ ಫೇಕ್ ನ್ಯೂಸ್‌ಗಳನ್ನು ಹಬ್ಬಿಸಿಯೇ 2014ರಲ್ಲಿ ಅಧಿಕಾರದ ಗದ್ದುಗೆಯನ್ನು ಚೋರ್ ಚೌಕಿದಾರರು ಆಕ್ರಮಿಸಿಕೊಂಡರು. ಇವರ ಹುಸಿ ಆಶ್ವಾಸನೆಗಳಲ್ಲಿ ಪ್ರಮುಖವಾದುದು “ಸ್ವಿಸ್ ಬ್ಯಾಂಕ್ ನಲ್ಲಿ ಭಾರತದ ಲೂಟಿಕೋರರು ಇಟ್ಟಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಜಮೆ ಮಾಡುತ್ತೇವೆಂಬ” ದಾಳ ಜನರ ಮೇಲೆ ಹೆಚ್ಚು ಪರಿಣಾಮ ಬೀರಿತ್ತು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬುರುಡೆ ಆಶ್ವಾಸನೆ ಮತ್ತು ಖಾತೆಗೆ ಹಣ ಹಾಕಲು ಎಲ್ಲರೂ ಬ್ಯಾಂಕ್ ಖಾತೆ ಹೊಂದಿರಬೇಕು, ಅದಕ್ಕಾಗಿ ಜನಧನ್ ಅಕೌಂಟ್ ಮಾಡಿಸಬೇಕೆಂಬುದನ್ನು ನಂಬಿದ ಜನರು ಅಕೌಂಟ್ ಕೂಡ ಮಾಡಿಸಿದ್ದೂ ಆಯಿತು. ಆದರೆ ಖಾತೆಗೆ 15 ಲಕ್ಷ ಜಮೆಮಾಡುವುದಿರಲಿ, ಮಿನಿಮಮ್ ಬ್ಯಾಲೆನ್ಸ್ ರೂಲ್ಸ್ ತಂದು ಜನ ಅಷ್ಟೋ ಇಷ್ಟೊ ಕೂಡಿಟ್ಟಿದ್ದ  ಹಣವನ್ನೂ ಅಕೌಂಟ್ ಗೆ ಹಾಕುವಂತೆ ಮಾಡಿದರು. ಮತಹಾಕಿದ ತಪ್ಪಿಗೆ ಉಚಿತವಾಗಿ ಬಂದ ಅಕೌಂಟ್ ಗೆ ತಾವೇ ದಂಡ ಕಟ್ಟುವಂತಹ ದುಸ್ಥಿತಿಗೆ ಜನರನ್ನು ತಂದು ಫೇಕ್ ಸರದಾರರು ಜನರನ್ನು ಯಾಮಾರಿಸಿದರು.

ಈಗ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಚಡ್ಡಿ ಸರದಾರರು ತಮ್ಮ ಫೇಕ್ ನ್ಯೂಸ್ ಕಾರ್ಖಾನೆಯಿಂದ ಮತ್ತೊಂದು ಫೇಕ್ ನ್ಯೂಸನ್ನು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹಬ್ಬಿಸುತ್ತಿದೆ. ಅದೇನೆಂದರೆ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಹೊಂದಿರುವ ಭಾರತದ 24 ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರನ್ನು ವಿಕಿಲೀಕ್ಸ್ ಪ್ರಕಟಿಸಿದೆ ಎಂಬುದು. ಮೋದಿ ಮಹಾಶಯ ಹೇಳಿದಂತೆ ಕಪ್ಪುಹಣ ಕೂಳರ ಪಟ್ಟಿಯನ್ನು ತಂದರು. ಇದು ಟ್ರೇಲರ್ ಇನ್ನೂ ಪಿಕ್ಚರ್ ಬಾಕಿ ಇದೆ ಎಂದು ಚಡ್ಡಿ ಪೈಲ್ವಾನರು ಹರ್ಷೋದ್ಘಾರದಿಂದ ಹಬ್ಬಿಸುತ್ತಿದ್ದಾರೆ. ಸ್ವಿಸ್‌ ಬ್ಯಾಂಕ್‌ನ ಕಪ್ಪು ಕೂಳರ ಕೊರಳ ಪಟ್ಟಿ ಹಿಡಿದ ಮೋದಿ ಎಂದು ಮಾಧ್ಯಮಗಳು ಸುದ್ದಿ ಮಾಡಿ ಬಕೆಟ್ ಹಿಡಿಯುವಲ್ಲಿ ನಾ ಮುಂದು ತಾ ಮುಂದು ಪೈಪೋಟಿ ನಡೆಸಿದವು.

ಆದರೆ ಸತ್ಯ ಏನಂದ್ರೆ ವಿಕಿಲೀಕ್ಸ್ ಈ ಬಗ್ಗೆ ಯಾವುದೇ ವರದಿಯನ್ನು ಮಾಡಿಲ್ಲ. ಫೇಕ್ ಸರದಾರರು ಹರಿಬಿಟ್ಟಿದ್ದ ಈ ಸುದ್ದಿಯ ಬಗ್ಗೆ ಬೂಮ್ ಲೈವ್ ಸಂಸ್ಥೆಯು ಫ್ಯಾಕ್ಟ್ ಚೆಕ್ ಮಾಡಿ ವರದಿಯನ್ನು ಪ್ರಕಟಿಸಿದೆ. ವಿಕಿಲೀಕ್ಸ್ ಕಪ್ಪು ಹಣ ಹೊಂದಿರುವವರ ಪಟ್ಟಿಯ ಬಿಡುಗಡೆ ಮಾಡಿರುವ ಬಗ್ಗೆ ಎಲ್ಲಿಯೂ ವರದಿ ಮಾಡಿಲ್ಲ. ಅಲ್ಲದೆ ವಿಕಿಲೀಕ್ಸ್‌ ಅಧಿಕೃತ ಟ್ವಿಟರ್ ಖಾತೆಯಲ್ಲಾಗಲೀ, ವೆಬ್ ಸೈಟ್ ನಲ್ಲಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬೂಮ್ ಲೈಮ್ ದೃಢಪಡಿಸಿದೆ.

ಅಂದಹಾಗೆ ಚುನಾವಣೆಗಳನ್ನು ಗಿಮಿಕ್ ಮಾಡುತ್ತಲೇ ಎದುರಿಸುತ್ತಿರುವ ಚಡ್ಡಿ ಪೈಲ್ವಾನರ ಇಂತಹ ವರಸೆ ಇದೇ ಮೊದಲೇನೂ ಅಲ್ಲ. 2011ರಲ್ಲೇ ಇಂತದ್ದೇ 24 ಜನರ ಹೆಸರಿರುವ ಪಟ್ಟಿ ಎಲ್ಲಾ ಕಡೆ ಹರಿದಾಡಿತ್ತು. ನಂತರ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರವೂ ಮೋದಿ ಮೊದಲ ಹೆಜ್ಜೆ ಎಂದೂ ಫೇಕ್ ಸರದಾರರು ಇಂತದ್ದೇ ಸುದ್ದಿಯನ್ನು ಹಬ್ಬಿಸಿದ್ದರು. ತಮಾಷೆಯೆಂದರೆ ಈ ಚಡ್ಡಿ ಸರದಾರರಿಗೆ ಕೌಂಟರ್ ಕೊಟ್ಟು 2017-18ರಲ್ಲಿಯೂ ಇಂಥ ಫೇಕ್ ನ್ಯೂಸ್ ಹರಿದಾಡಿತ್ತು. ಆ ಪಟ್ಟಿಯಲ್ಲಿ ನಾನೊಬ್ಬ ಚೌಕಿದಾರ, ನಾನೂ ತಿನ್ನಲ್ಲ – ತಿನ್ನೋರಿಗೂ ಬಿಡಲ್ಲ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದ ಮೋದಿಯವರ ಹೆಸರನ್ನೂ ಸೇರಿಸಿ ವೈರಲ್ ಮಾಡಲಾಗಿತ್ತು.

2011ರಲ್ಲಿ ಮೊದಲ ಬಾರಿಗೆ ಹರಿದು ಬಂದ ಸುದ್ದಿ ಫೇಕ್ ಎಂದು ವಿಕಿಲೀಕ್ಸ್ ಸ್ಪಷ್ಟಪಡಿಸಿತ್ತು. ಮುಂದೆಯೂ ಇಂಥದ್ದೇ ಫೇಕ್ ನ್ಯೂಸ್ ಹರಿದಾಡಲಾರಂಭಿಸಿದಾಗ ವಿಕಿಲೀಕ್ಸ್ ತಲೆ ಕೆಡಿಸಿಕೊಳ್ಳಲಿಲ್ಲ. ಒಟ್ಟಿನಲ್ಲಿ ಚುನಾವಣೆಗಳು ಎದುರಾದಾಗಲೆಲ್ಲಾ ಈ ದೇಶಕ್ಕೆ ಕಪ್ಪು ಹಣ ಕೂಳರ ಪಟ್ಟಿಗಳು ಬಿಡುಗಡೆಯಾಗುತ್ತವೆ. ದಸರಾ ಸಂದರ್ಭದಲ್ಲಿ ಭಯೋತ್ಪಾದರು ಮೈಸೂರು, ಬೆಂಗಳೂರಿನ ಮೇಲೆ ಅಟ್ಯಾಕ್ ಮಾಡುವ ಫೇಕ್ ಸಂದರ್ಭಗಳೂ, ಫೇಕ್ ಸುದ್ದಿಗಳು ಹೆಗ್ಗಿಲ್ಲದೆ ಹರಿಯುತ್ತವೆ. ಇಂತಹ ಫೇಕ್ ಸುದ್ದಿಗಳನ್ನು ನೋಡಿ ನಿಜವಾಗಿಯೂ ಅಟ್ಯಾಕ್ ಆದರೂ ಜನರು ತಲೆ ಕೆಡಿಸಿಕೊಳ್ಳದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ.

ಇದೆಲ್ಲದರ ಮಧ್ಯೆ, ಸಾಮಾನ್ಯ ಜ್ಞಾನವೂ, ವಿಶ್ಲೇಷಣೆಯೂ ಇಲ್ಲದ ನ್ಯೂಸ್ ಚಾನಲ್ ಗಳು ಅದು ಫೇಕ್ ಅಥವಾ ಫ್ಯಾಕ್ಟ್ ಆಗಿದೆಯೇ ಎಂದೂ ನೋಡದೆ ನಾಮುಂದು ತಾಮುಂದು ಎಂಬಂತೆ ಫೇಕ್ ಸುದ್ದಿಯನ್ನೇ ಬಿತ್ತರಿಸುತ್ತಿರುವುದು ವಿಪರ್ಯಾಸ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...