Homeಮುಖಪುಟಚಪ್ಪಾಳೆ ತಟ್ಟುವವರೂ ಅವರೇ, ಉಲ್ಲಂಘಿಸುವವರೂ ಅವರೇ!: ಮಧ್ಯಮ ವರ್ಗ ಮತ್ತು ಕೊರೊನಾ

ಚಪ್ಪಾಳೆ ತಟ್ಟುವವರೂ ಅವರೇ, ಉಲ್ಲಂಘಿಸುವವರೂ ಅವರೇ!: ಮಧ್ಯಮ ವರ್ಗ ಮತ್ತು ಕೊರೊನಾ

ಹೇಳಿಕೊಳ್ಳಲು ಭಾರತದಲ್ಲಿ ಕಠಿಣವಾದ ಲಾಕ್‌ಡೌನ್ ಹೇರಲಾಗಿದೆಯಾದರೂ, ಎಲ್ಲರಿಗೂ ಒಂದೇ ರೀತಿಯಲ್ಲ. ಅಥವಾ ಎಲ್ಲಾ ಕಡೆ ಒಂದೇ ರೀತಿಯಲ್ಲ. ಅನಿವಾರ್ಯತೆ ಇರುವವರಿಗೆ ಬಿಗಿ ಮತ್ತು ಪ್ರಭಾವಿ, ಉಳ್ಳವರ ಮಟ್ಟಿಗೆ ಸಡಿಲ ಎಂಬಂತಾಗಿದೆ ಲಾಕ್‌ಡೌನ್. ಉದಾಹರಣೆಗೆ ಹಲವಾರು ಕುಟುಂಬಗಳು ತಮ್ಮ ಮನೆಗೆಲಸದವರನ್ನು ಉಳಿಸಿಕೊಂಡಿದ್ದು, ಅವರು ತಮ್ಮ ಮನೆಗಳಿಗೆ ತೆರಳಿ ರೋಗ ಹರಡುತ್ತಿದ್ದಾರೆ.

- Advertisement -
- Advertisement -

ಶೊಯೈಬ್ ಧನಿಯಾಲ್

ಅನುವಾದ: ನಿಖಿಲ್ ಕೋಲ್ಪೆ

ತನ್ನನ್ನು ತಾನು ಕೊರೋನ ವೈರಸ್ ಪಿಡುಗಿನಿಂದ ರಕ್ಷಿಸಿಕೊಳ್ಳಲು ಭಾರತವು ಮರಗಟ್ಟಿಸುವ ಲಾಕ್‌ಡೌನ್ ಅನುಷ್ಟಾನಗೊಳಿಸಿದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಕಠಿಣ ಲಾಕ್‌ಡೌನ್. ದೇಶವು ಸಂಚಾರ ಮತ್ತು ಉದ್ಯೋಗಗಳ ಮೇಲೆ ಹಿಂದೆಂದೂ ಕಾಣದಂತಹ  ನಿಯಂತ್ರಣಗಳನ್ನು ಹೇರಿದ್ದು, ಬಡವರು ಅಪ್ಪಚ್ಚಿಯಾಗುತ್ತಿದ್ದಾರೆ. ಆದರೂ, ಭಾರತದ ಈ ಯತ್ನದಲ್ಲಿ ದೊಡ್ಡದಾದ ತೂತೊಂದಿದೆ. ಆದೆಂದರೆ, ಬಡವರ ಮೇಲೆ ಹೇರಲಾಗಿರುವ ರೀತಿಯಲ್ಲಿಯೇ ಈ ನಿಯಂತ್ರಣವನ್ನು ಮಧ್ಯಮ ವರ್ಗ ಮತ್ತು ಶ್ರೀಮಂತರ ಮೇಲೆ ಹೇರಲಾಗದ ಆದರ ಅಸಾಮರ್ಥ್ಯ.

ದಿಲ್ಲಿಯ ಡಿಫೆನ್ಸ್ ಕಾಲನಿ ವಸತಿ ಪ್ರದೇಶದ ಒಂದು ಪ್ರಕರಣವನ್ನು ತೆಗೆದುಕೊಳ್ಳೋಣ. ಈ ಐಷಾರಾಮಿ ಪ್ರದೇಶದಲ್ಲಿ ಕಳೆದ ವಾರ ಮೂರು ಮಂದಿ ಸೋಂಕಿತರು ಪರೀಕ್ಷೆಯಲ್ಲಿ ಪತ್ತೆಯಾದರು. ದಿಲ್ಲಿ ಪೊಲೀಸರು ಈ ಕುಟುಂಬದ ಭದ್ರತಾ ಕಾವಲುಗಾರನನ್ನು ಸೋಂಕು ಹರಡಿದ ಆರೋಪ ಹೊರಿಸಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಆದರೆ, ಪೊಲೀಸರು ಯಾಕೆ ಆತನನ್ನು ಮಾತ್ರ ಸೋಂಕು ಹರಡಿದ್ದಕ್ಕಾಗಿ ಸಂಶಯಿಸಿದರು? ಆತನಿಗೆ ಸೋಂಕು ತಗಲಿಸಿದ್ದಾರೆ ಎಂದು ಆ ಮನೆಯವರನ್ನು ಯಾಕೆ ಶಂಕಿಸಲಿಲ್ಲ? ಇದಿನ್ನೂ ಅಸ್ಪಷ್ಟವಾಗಿದೆ.

ಕೊರೋನ ಸಮಯದಲ್ಲಿ ಸಿರಿವಂತರನ್ನು ಕಾಯುತ್ತಿರುವ ಸೆಕ್ಯುರಿಟಿ ಗಾರ್ಡ್‌ಗಳು.

ಹಲವಾರು ಮಂದಿ ಸೋಂಕಿಗೆ ಒಳಗಾದ ಧಾರ್ಮಿಕ ಸಭೆಯೊಂದರಲ್ಲಿ ಈ ಕಾವಲುಗಾರ ಭಾಗವಹಿಸಿದ್ದಾನೆಂಬುದು ಆರೋಪ. ಆದರೆ, ಈ ಕುಟುಂಬದವರು ಈ ಕಾವಲುಗಾರನನ್ನು ತಮ್ಮ ಮನೆಯ ಒಳಗೆ ಹೊರಗೆ ಹೋಗಲು ಬಿಡುವುದರಿಂದ ಲಾಕ್‌ಡೌನ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂಬುದರ ಬಗ್ಗೆ ಯಾರೂ ಕಿಂಚಿತ್ ಗಮನವನ್ನೂ ಹರಿಸಿಲ್ಲ. ಅಲ್ಲದೇ, ಇಡೀ ಡಿಫೆನ್ಸ್ ಕಾಲನಿ ವಸತಿ ಪ್ರದೇಶವನ್ನು ಅಪಾಯಕ್ಕೆ ತಳ್ಳಿದಕ್ಕಾಗಿ ಮತ್ತು ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕುಟುಂಬದ ವಿರುದ್ಧ ಯಾವುದೇ ಪೊಲೀಸ್ ಕಾರ್ಯಾಚರಣೆ ನಡೆದಿಲ್ಲ ಎಂಬ ಬಗ್ಗೆ ಯಾವುದೇ ವಿವರಣೆಯಿಲ್ಲ.

ಇದು ಇಂತಹಾ ಒಂದೇ ಉಲ್ಲಂಘನೆಯಲ್ಲ.  ಡಿಫೆನ್ಸ್ ಕಾಲನಿಯ ಹಲವಾರು ಕುಟುಂಬಗಳು ಇನ್ನೂ ಕಾವಲುಗಾರರು, ಮನೆಗೆಲಸದವರನ್ನು ಉಪಯೋಗಿಸಿಕೊಳ್ಳುತ್ತಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ, ಮನೆಗೆಲಸದವರು, ಚಾಲಕರು ಮತ್ತು ಕಾವಲುಗಾರರ ಮೇಲೆ ಕಣ್ಣಿಡುವಂತೆ ಅಲ್ಲಿನ ನಿವಾಸಿಗಳಿಗೆ ಹೇಳುವ ಮೂಲಕ ದಿಲ್ಲಿ ಪೊಲೀಸರು ಇಂತಹಾ ಕೃತ್ಯಗಳಿಗೆ ಪರೋಕ್ಷ ಸಮ್ಮತಿ ನೀಡಿದ್ದಾರೆ ಎಂದು ಪತ್ರಿಕಾ ವರದಿ ಹೇಳಿದೆ.

ಶ್ರೀಮಂತ ಮತ್ತು ಮಧ್ಯಮ ವರ್ಗಗಳ ಜನರು ಲಾಕ್‌ಡೌನ್ ಅವಧಿಯಲ್ಲಿ ಮನೆಗೆಲಸದವರ ಸೇವೆಯನ್ನು ಮುಂದುವರಿಸಿರುವ ಪ್ರಕರಣ ಇದೊಂದೇ ಅಲ್ಲ. ಕಳೆದ ಬುಧವಾರ  ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿ‌ಆರ್)ನ ಕೊಳೆಗೇರಿಯಲ್ಲಿ ವಾಸಿಸುವ ಮನೆಗೆಲಸದ ಮಹಿಳೆಯೊಬ್ಬರಿಗೆ ಸೋಂಕು ತಗಲಿದಾಗ ಇಡೀ ಕೊಳೆಗೇರಿಯನ್ನು ದಿಗ್ಬಬಂಧನದಲ್ಲಿ ಇರಿಸಲಾಯಿತು. ಆಕೆಗೆ ಆಕೆ ಕೆಲಸ ಮಾಡುವ ಮನೆ ಮಾಲಕರಿಂದ ಸೋಂಕು ತಗುಲಿದೆ ಎಂದು ಗೊತ್ತಾಗಿತ್ತು. ಈ ಮಾಲಕ ಅಗ್ನಿಸುರಕ್ಷಾ ಸಂಸ್ಥೆಯೊಂದರ ಉದ್ಯೋಗಿ. ಕಳೆದ ಬುಧವಾರದ ಒಳಗೆ ನೋಯ್ಡಾದಲ್ಲಿ ಸೋಂಕು ದೃಢಪಟ್ಟಿರುವ 58 ಮಂದಿಯಲ್ಲಿ 39 ಮಂದಿಗೆ ಇದೇ ಸಂಸ್ಥೆಯ ಉದ್ಯೋಗಿಗಳಿಂದ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.

ಮುಚ್ಚಿದ ಪೇಟೆಯಲ್ಲಿ ಮನೆಗೆಲಸಕ್ಕೆ ತೆರಳುತ್ತಿರುವ ಮಹಿಳೆ.

ಸಿರಿವಂತರಿಗೆ ಸಡಿಲಬಿಟ್ಟುದರ ಪರಿಣಾಮದ ಇನ್ನೊಂದು ನಂಬಲಸಾಧ್ಯವಾದ ಕತೆ ಬೆಳಕಿಗೆ ಬಂದಿದೆ. ಅದರಲ್ಲಿ ಮಧ್ಯಪ್ರದೇಶದ ದೊಡ್ಡ ಸಂಖ್ಯೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊರೋನ ವೈರಸ್ ಸೋಂಕಿತರಾಗಿದ್ದಾರೆ. ಎನ್‌ಡಿಟಿವಿ ವರದಿ ಮಾಡಿರುವಂತೆ, ಭೋಪಾಲ್‌ನಲ್ಲಿರುವ 85 ಸೋಂಕು ಪ್ರಕರಣಗಳಲ್ಲಿ ಕನಿಷ್ಟ 40  ಪ್ರರಕರಣಗಳು ಮಧ್ಯಪ್ರದೇಶ ಆರೋಗ್ಯ ಇಲಾಖೆಯೊಳಗೇ ನಡೆದಿವೆ. ಕೊರೋನ ವೈರಸ್ ನಿಯಂತ್ರಣಕ್ಕಾಗಿ ರೂಪಿಸಲಾದ ನಿಯಮಗಳನ್ನು ಬದಿಗೆ ಸರಿಸಿದ ಆರೋಪವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಎದುರಿಸುತ್ತಿದ್ದಾರೆ.

ಇದರ ಮೂಲ ಇರುವುದು ಇಲಾಖಾ ನಿರ್ದೇಶಕರಲ್ಲಿ ಎಂದು ಆರೋಪಿಸಲಾಗಿದೆ. ಅವರು ತನಗೆ ಸೋಕು ಇದೆಯೆಂದು ಪರೀಕ್ಷೆಯಲ್ಲಿ ತಿಳಿದುಬಂದರೂ, ತನ್ನನ್ನು ಸ್ವಯಂದಿಗ್ಬಂಧನಕ್ಕೆ ಒಳಪಡಿಸದೆ, ಕೆಲಸಕ್ಕೆ ಬರುವುದನ್ನು ಮುಂದುವರಿಸಿದ್ದರು ಎಂದು ನ್ಯೂಸ್ 18 ಚಾನೆಲ್ ವರದಿ ಮಾಡಿದೆ. ಮಧ್ಯಪ್ರದೇಶ ಸರಕಾರ ಈ ಪ್ರಕರಣದ  ಕುರಿತು ತನಿಖೆಗೆ ಆದೇಶಿರುವಂತೆಯೇ, ಅದರ ಪರಿಣಾಮಗಳು ಮಾತ್ರ ಆಘಾತಕಾರಿಯಾಗಿವೆ. ಈಗ ರಾಜಧಾನಿ ಭೋಪಾಲ್‌ನಲ್ಲಿ ಗುರುತಿಸಲಾಗಿರುವ ಪ್ರತೀ ಇಬ್ಬರು ಸೋಂಕಿತರಲ್ಲಿ ಒಬ್ಬ ಆರೋಗ್ಯ ಇಲಾಖೆಯ ನೌಕರ.

ಊರು ಕೊಳ್ಳೆಹೋದ ಮೇಲೆ ದಿಡ್ಡಿ ಬಾಗಿಲು: ಆಸ್ಪತ್ರೆಯೊಂದರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಪಾಟೀಲ್.

ರಜಾದ ಮಜಾ

ಇನ್ನೂ ಕೆಲವು ಪ್ರಕರಣಗಳಲ್ಲಿ ಸರಕಾರಗಳು ಉಳ್ಳವರಿಗೆ ಸಡಿಲ ತೋರುವುದಕ್ಕಿಂತಲೂ ಮುಂದುವರಿವರಿದು, ನೇರವಾಗಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವ ತನಕ ಮುಟ್ಟಿದೆ. ಕಳೆದ ಗುರುವಾರ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್‌ನ ಪ್ರವರ್ತಕರಾಗಿರುವ ವಾಧ್ವಾನ್ ಕುಟುಂಬವು ಲಾಕ್‌ಡೌನ್ ಉಲ್ಲಂಘಿಸಿ ಮಹಾರಾಷ್ಟ್ರದ ಗಿರಿಧಾಮವೊಂದಕ್ಕೆ ಹೋಗಿತ್ತು. ಕುಟುಂಬದ ಬಳಿ ಹಿರಿಯ ಅಧಿಕಾರಿಯೊಬ್ಬ ನೀಡಿದ ವಿಶೇಷ ತುರ್ತು ಪಾಸು ಇದ್ದುದರಿಂದ ಅವರು ಪೊಲೀಸ್ ತಪಾಸಣಾ ಠಾಣೆಗಳನ್ನು ಹಾದುಹೋಗಲು ಸಾಧ್ಯವಾಯಿತು ಎಂದು “ಟೈಮ್ಸ್‌ನೌ” ವರದಿ ಹೇಳುತ್ತದೆ.

ಇಂತದ್ದೇ ಘಟನೆಯನ್ನು “ದೈನಿಕ್ ಭಾಸ್ಕರ್” ವರದಿ ಮಾಡಿದ್ದು, ಗುಜರಾತ್ ಸರಕಾರವು ರಾಜ್ಯಗಳ ಗಡಿಗಳನ್ನು ಮುಚ್ಚಬೇಕು ಎಂಬ ಕಠಿಣ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ, ಉತ್ತರಖಂಡದಲ್ಲಿದ್ದ 1,800 ಗುಜರಾತಿಗಳನ್ನು ಮರಳಿತಂದಿತ್ತು. ನಗರದಿಂದ ನಗರಕ್ಕೆ ಸಂಚಾರವನ್ನೂ ನಿಷೇಧಿಸಿರುವುದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ಇರುವಲ್ಲಿಯೂ ಬದುಕಲಾಗದೆ, ಮನೆಗೂ ಮರಳಲಾಗದೆ ಒದ್ದಾಡುತ್ತಿರುವ ಸಂದರ್ಭದಲ್ಲಿ ಇಂತವು ನಡೆದಿವೆ.

ತಾತ್ವಿಕವಾಗಿ ಭಾರತವು ಬಹಳಷ್ಟು ಕಠಿಣವಾದ ಲಾಕ್‌ಡೌನ್ ನಿಯಮಗಳನ್ನು ಹೇರಿದೆಯಾದರೂ, ನೆಲಮಟ್ಟದಲ್ಲಿ ಇದು ರಂಧ್ರಗಳಿಂದ ಕೂಡಿದೆ, ಬಡವರು ಮತ್ತು ಅವಗಣಿತ ವರ್ಗಗಳ ನಡುವೆ ಲಾಕ್‌ಡೌನ್ ಅನುಷ್ಟಾನಗೊಳಿಸುವುದರಲ್ಲಿ ಭಾರತ ಸರಕಾರ ಹೆಚ್ಚಿನ ಯಶಸ್ಸು ಕಂಡಿದೆಯಾದರೂ, ಪ್ರಭಾವಿ ಮಧ್ಯಮ ವರ್ಗ ಮತ್ತು ಶ್ರೀಮಂತರು ನಿಯಮವನ್ನು ಎಗ್ಗಿಲ್ಲದೇ ಉಲ್ಲಂಘಿಸಿ ಬಚಾವಾಗುತ್ತಿದ್ದಾರೆ. ಇದು ಒಳಗೊಳಗೇ ಅನ್ಯಾಯ ಮಾತ್ರವಲ್ಲ, ನಾಚಿಗೆಗೇಡಿನ ಮತ್ತು ಹಾನಿಕಾರಕ ವಿಷಯ. ಪ್ರತಿಯೊಬ್ಬ ನಿವಾಸಿಗೆ ಲಾಕ್‌ಡೌನ್ ನಿಯಮಗಳನ್ನು ಮನದಟ್ಟು ಮಾಡಲು ಭಾರತ ಸರಕಾರದ ಅಸಾಮರ್ಥ್ಯವು ಖಂಡಿತವಾಗಿಯೂ ಸಾಮಾಜಿಕ ಅಂತರ (ದೈಹಿಕ ಅಂತರ) ಕಾಯ್ದುಕೊಳ್ಳುವ ಮತ್ತು ಈ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವ ಅದರ ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...