Homeಚಳವಳಿ’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ...

’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ…

- Advertisement -
- Advertisement -

ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪಕ್ಷಪಾತಿಯಾಗಿವೆಯೇ? ಹಣಕ್ಕಾಗಿ ಕೆಲವರ ಹಿತಾಸಕ್ತಿ ಕಾಪಾಡಲು ಮಾತ್ರ ಕೆಲಸ ಮಾಡುತ್ತಿವೆಯೇ? ಜಾತಿವಾದಿಯಾಗಿ ಮತ್ತು ಕೋಮುವಾದಿಯಾಗಿ ನಡೆದುಕೊಳ್ಳುತ್ತಿವೆಯೇ ಎಂಬ ಪ್ರಶ್ನೆಗಳು ಎದುರಾದರೆ ಅದಕ್ಕಿರುವ ಒಂದೇ ಉತ್ತರ ’ಹೌದು’ ಆಗಿರುತ್ತದೆ.

ಹೌದು ನಾವಂದೂಕೊಂಡಿರುವ ಈ ಸೋಷಿಯಲ್‌ ಸ್ಪೇಸ್‌ಗಳು ಕೂಡ ಜಾತಿ, ಧರ್ಮದಿಂದ ಮುಕ್ತವಾಗಿಲ್ಲ. ಅಲ್ಲದೇ ನಿಷ್ಪಕ್ಷಪಾತವಾಗಿಲ್ಲ. ಏಕೆಂದರೆ ಎಲ್ಲರಿಗೂ ಅವರದೇ ಆದ ಹಿತಾಸಕ್ತಿಯಿರುವಂತೆ ಟ್ವಿಟ್ಟರ್‌ ಫೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೂ ತಮ್ಮದೇ ಆದ ಹಿತಾಸಕ್ತಿಗಳಿರುವುದು ಸ್ಪಷ್ಟ. ಇವುಗಳ ಮುಖ್ಯಸ್ಥರು ಹಣಕ್ಕಾಗಿ ಕೆಲ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ, ವ್ಯಾಪಾರಿ ಕಂಪನಿಗಳಿಗೆ ಮಾರಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇದರ ಕುರಿತು ಹಲವು ಕೋರ್ಟ್‌ ಕೇಸುಗಳನ್ನು ಸಹ ಎದುರಿಸುತ್ತಿದ್ದಾರೆ.

ಇನ್ನು ಇವು ಜಾತಿವಾದಿಯೇ? ಕೋಮುವಾದಿಯೇ ಎಂದರೆ ಅದು ಸಹ ಸತ್ಯ. ಸ್ವತಃ ಈ ಕಂಪನಿಗಳ ಮುಖ್ಯಸ್ಥರು ಜಾತಿವಾದಿ, ಕೋಮುವಾದಿ ಅಲ್ಲದಿದ್ದರೂ ಈ ಸಂಸ್ಥೆಗಳ ಆಯಾಕಟ್ಟಿನ ಜಾಗದಲ್ಲಿ ಕೂತಿರುವ ಸಾವಿರಾರು ಉದ್ಯೋಗಿಗಳು ಮಾತ್ರ ತಮ್ಮ ತಲೆಯಲ್ಲಿ ಜಾತಿ ಕೋಮು ವಿಷವನ್ನು ತುಂಬಿಕೊಂಡಿರುವುದು ದುರಂತ.

ಇಷ್ಟೇಲ್ಲಾ ವಿವರಣೆ ಏಕೆಂದರೆ ನಿನ್ನೆ ಟ್ವಿಟ್ಟರ್‌ನಲ್ಲಿ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದೂ ಜೊತೆಗೆ ಇಂದು ಜೈಭೀಮ್‌ ಟ್ವಿಟ್ಟರ್‌ ಎಂಬಂತಹ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಇನ್ನು ಸ್ಯಾಕ್ ಮನೀಶ್ ಮಹೇಶ್ವರಿ ಎಂಬ ಟ್ವಿಟ್ಟರ್‌ ಟ್ರೆಂಡಿಂಗ್‌ ಅನ್ನು ಟ್ವಿಟ್ಟರ್‌ ಕ್ಷಣಾರ್ಧದಲ್ಲಿ ಅಳಿಸಿಬಿಟ್ಟಿತ್ತು. ಇದು ಟ್ಟಿಟ್ಟರ್‌ನಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಇದೆಲ್ಲಾ ಯಾಕಾಯಿತು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಈ ಸಾಮಾಜಿಕ ಜಾಲತಾಣಗಳ ಜಾತಿರಾಜಕೀಯವನ್ನು ಅರಿಯಲು ಸುಲಭವಾಗುತ್ತದೆ.

ಕೆಲದಿನಗಳ ಹಿಂದೆ ಹಿರಿಯ ಪತ್ರಕರ್ತ ದಿಲೀಪ್ ಮಂಡಲ್ ಅವರ ಖಾತೆಯನ್ನು ಟ್ವಿಟ್ಟರ್‌ ನಿರ್ಬಂಧಿಸಿ‍ತ್ತು. ಇದಕ್ಕೆ ಕೊಟ್ಟ ಕಾರಣವೆಂದರೆ ದ್ವೇಷಪೂರಿತ ಹೇಳಿಕೆಗಳನ್ನು ತಡೆಯುವುದಕ್ಕಾಗಿ ಹಲವಾರು ಜನರ ಖಾತೆಯನ್ನು ಹೀಗೆ ನಿರ್ಭಂದಿಸುತ್ತಿದ್ದೇವೆ ಎಂದು ಟ್ವಿಟ್ಟರ್‌ ವಿವರಣೆ ನೀಡಿತ್ತು.

ಹಾಗೆ ನೋಡಿದರೆ ದಿಲೀಪ್‌ ಮಂಡಲ್‌ರವರು ಆ ರೀತಿಯ ಯಾವುದೇ ದ್ವೇಷಪೂರಿತ ಹೇಳಿಕೆಗಳನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರಲಿಲ್ಲ. ಬದಲಿಗೆ ನಿಜವಾಗಿಯೂ ದ್ವೇಷ ಬಿತ್ತುತ್ತಿದ್ದ, ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುತ್ತಿದ್ದ ಬಹಳಷ್ಟು ಜನರ, ಪತ್ರಕರ್ತರ ಟ್ವಿಟ್ಟರ್‌ಗಳು ಹಾಗೆ ರಾರಾಜಿಸುತ್ತಿದ್ದವು. ಇದು ದಿಲೀಪ್ ಮಂಡಲ್‌ರವರಿಗೆ ಮಾತ್ರವಲ್ಲದೇ ಬಹಳಷ್ಟು ಪ್ರಗತಿಪರ ಟ್ವಿಟ್ಟರ್‌ಗಳಿಗೆ ಇದೇ ಪರಿಸ್ಥಿತಿ ಇದುರಾಗಿತ್ತು.

ಇದರಿಂದ ಕೋಪಗೊಂಡ ದಿಲೀಪ್ ಮಂಡಲ್ ಅವರು ಟ್ವಿಟ್ಟರ್‌ನ ಈ ಪಕ್ಷಪಾತವನ್ನು ಅದೇ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದರು. ಇದೆಲ್ಲದಕ್ಕೂ ಉತ್ತರ ಬೇಕೆಂದು ಆಗ್ರಹಿಸಿದರು. ಅವರು #SackManishMaheshari ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ಪ್ರಶ್ನೆಗಳನ್ನು ಕೇಳಿದರು.

ಮಣಿಶ್ ಮಹೇಶ್ವರಿಯವರು ಭಾರತದ ಟ್ವಿಟ್ಟರ್‌ನ ಎಂಡಿಯಾಗಿದ್ದಾರೆ. ದ್ವೇಷ ಹರಡುವ ಖಾತೆಗಳನ್ನು ಹಾಗೆ ಬಿಟ್ಟು ಜನಪರ ಪತ್ರಕರ್ತರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ವಿರೋಧಿಸಿ ಸಾವಿರಾರು ಜನರು ಅಸಮಾಧಾನಗೊಂಡಿದ್ದಾರೆ. ಮತ್ತು ಅವರೆಲ್ಲರೂ #SackManishMaheshari ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಆಕ್ರೊಶವನ್ನು ಹೊರಹಾಕಿದರು.

ಶೀಘ್ರದಲ್ಲೇ ಇದು ಮೇಲ್ಭಾಗದಲ್ಲಿ ಟ್ರೆಂಡಿಂಗ್ ಆಗಿತ್ತು. ನೋಡನೋಡುತ್ತಿದ್ದಂತೆಯೇ ಭಾರತದಲ್ಲಿ ಎಂಟರಿಂದ ಮೂರನೆಯ ಸ್ಥಾನಕ್ಕೆ ಜಿಗಿಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತು. ಆದರೆ ಕ್ಷಣಾರ್ಧದಲ್ಲಿಯೇ ಅದು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.

ಅಂದರೆ ಟ್ವಿಟ್ಟರ್‌ ಇಂಡಿಯಾ ಆ ಹ್ಯಾಸ್‌ಟ್ಯಾಗ್‌ ಅನ್ನು ಟ್ರೆಂಡಿಂಗ್‌ ನಿಂದ ತೆಗೆದುಹಾಕಿತ್ತು. ಇದರಿಂದ ಜಾಲತಾಣಿಗರು ಮತ್ತಷ್ಟು ಕ್ರೋಧಗೊಂಡರು. ಟ್ವಿಟರ್ ದ್ವೇಷದ ಮಾತನ್ನು ನಿಲ್ಲಿಸುವುದಿಲ್ಲ, ದ್ವೇಷಿಸುವವರಿಗೆ ಜಾಗವನ್ನು ನೀಡುತ್ತದೆ ಮತ್ತು ಟ್ವಿಟ್ಟರ್‌ನ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸುವ ಜನರ ಮೇಲೆ ಮೃದುಭಾವನೆ ತಳೆಯುತ್ತದೆ ಆದರೆ ಅಂಚಿನಲ್ಲಿರುವ ವಿಭಾಗಗಳಾದ ದಲಿತರು, ಮುಸ್ಲಿಮರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಈ ಗುಂಪುಗಳ ಬಳಕೆದಾರರ ಮೇಲೆ ಅತ್ಯಂತ ಕಠಿಣ ನಿರ್ಭಂಧಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದಾದ ಸ್ವಲ್ಪ ಸಮಯದಲ್ಲಿಯೇ ಟ್ವಿಟ್ಟರ್‌ ಬಳಕೆದಾರರು #ಕ್ಯಾಸ್ಟಿಸ್ಟ್ ಟ್ವಿಟರ್ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಅದನ್ನು ಸಹ ಟ್ರೆಂಡ್ ಮಾಡಿದ್ದಾರೆ. ವಿಚಿತ್ರವೆಂದರೆ, ಯಾವುದೇ ಉಲ್ಲಂಘನೆ ಇಲ್ಲದಿದ್ದರೂ ತಳಸಮುದಾಯಕ್ಕೆ ಸೇರಿದ ಖಾತೆಗಳನ್ನು ಟ್ವಿಟ್ಟರ್‌ ತ್ವರಿತವಾಗಿ ನಿರ್ಬಂಧಿಸಲಾಗುತ್ತದೆ. ಇದಕ್ಕೆ ಕಾರಣ ಟ್ವಿಟರ್ ಇಂಡಿಯಾದಲ್ಲಿ ಸಾಮಾಜಿಕ ಅಸಮತೋಲನವಿದೆ (ಕಂಪನಿಯಲ್ಲಿ ಹಲವಾರು ಪ್ರಮುಖ ಹುದ್ದೆಗಳಲ್ಲಿ ವಿವಿಧ ಸಮುದಾಯಗಳ ಪ್ರಾತಿನಿಧ್ಯದ ಕೊರತೆ) ಅದರ ಬಗ್ಗೆ ಗಮನಹರಿಸಲು ಅದರ ಸಿಇಒಗೆ ಬಹಳಷ್ಟು ಜನರು ಒತ್ತಾಯಿಸಿದ್ದಾರೆ.

ಪತ್ರಕರ್ತ ದಿಲೀಪ್‌ ಮಂಡಲ್‌ರವರ ಟ್ವಿಟ್ಟರ್‌ ಖಾತೆಯನ್ನು ವೆರಿಫೈಡ್‌ ಎಂದು ಘೋಷಿಸಿದ ಟ್ವಿಟ್ಟರ್‌ಗೆ ಹಿರಿಯ ಪತ್ರಕರ್ತ ದಿ ಪ್ರಿಂಟ್‌ನ ಶೇಖರ್‌ ಗುಪ್ತಾ ಸಹ ಛೀಮಾರಿ ಹಾಕಿದ್ದಾರೆ.

ಟ್ವಿಟ್ಟರ್‌ಗೆ ಎಲ್ಲಾ ಸಮುದಾಯದವರನ್ನು ಒಳಗೊಳ್ಳುವ ಮತ್ತು ಸಮಾನತೆಯ ಪಾಠ ಬೋಧಿಸಲು ನೆಟ್ಟಿಗರು ತೀರ್ಮಾನಿಸಿದರು. ಅದಕ್ಕಾಗಿ ಭಾರತದಲ್ಲಿ ಸಮಾನತೆಗಾಗಿ ಜೀವಮುಡಿಪಿಟ್ಟ ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ನೆನಪಿಸಲು ಇಂದು ಬೆಳಿಗ್ಗೆಯೇ ಜೈಭೀಮ್‌ ಟ್ವಿಟ್ಟರ್‌ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಹರಿಯಬಿಟ್ಟರು. ಕಾಂಗ್ರೆಸ್‌ನ ದಲಿತ ವಿಭಾಗದ ಅಧ್ಯಕ್ಷ ಮತ್ತು ಶಾಸಕ ಡಾ.ನಿತಿನ್‌ ರಾವತ್‌, ಗುಜರಾತ್‌ನ ಹೋರಾಟಗಾರ ಮತ್ತು ಶಾಸಕ ಜಿಗ್ನೇಶ್‌ ಮೇವಾನಿ ಅಲ್ಲವೇ ದಲಿತ್ ಏಕತಾ, ಬಹುಜನ್‌ಫಾರ್‌ ಇಂಡಿಯಾ, ಟ್ರೈಬಲ್‌ ಆರ್ಮಿ ಸೇರಿದಂತೆ ಸಾವಿರಾರು ಖಾತೆಗಳಿಂದ ಜೈಭೀಮ್‌ ಟ್ವಿಟ್ಟರ್‌ ಟ್ರೆಂಡ್‌ ಆಗಿದೆ.

ಅಂತೂ ಇದರಿಂದ ಟ್ವಿಟ್ಟರ್‌ ಮುಜುಗರಕ್ಕೆ ಒಳಗಾಗಿದೆ. ಇದು ಇಂದಿನ ತಳಸಮುದಾಯದ ಯುವತಲೆಮಾರಿನ ಸ್ವಾಭಿಮಾನ ಪ್ರದರ್ಶನದ ಧ್ಯೋತಕವಾಗಿದೆ. ಹೆಚ್ಚು ಹೆಚ್ಚು ಯುವಜನರು ಈ ಸಾಮಾಜಿಕ ಫ್ಲಾಟ್‌ಫಾರಂಗಳಿಗೆ ಬಂದಂತೆ ತಮ್ಮ ಅಸರ್ಸನ್‌ ಅನ್ನು ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟ್ಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಈ ವಿದ್ಯಮಾನದಿಂದ ಪಾಠ ಕಲಿಯಬೇಕಿದೆ. ಇಲ್ಲದಿದ್ದಲ್ಲಿ ಮತ್ತಷ್ಟು ಪ್ರತಿರೋಧ ವ್ಯಕ್ತವಾಗುವುದರಲ್ಲಿ ಸಂಶಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...