Homeಮುಖಪುಟಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿ : ಸಿಎಎ ಪ್ರತಿಭಟನಾಕಾರ ಮುಂಬೈ ಪೊಲೀಸ್‌ ವಶಕ್ಕೆ

ಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿ : ಸಿಎಎ ಪ್ರತಿಭಟನಾಕಾರ ಮುಂಬೈ ಪೊಲೀಸ್‌ ವಶಕ್ಕೆ

ಕೆಂಪು ಸ್ಕಾರ್ಫ್ ಧರಿಸಬೇಡಿ.  "ವಾತಾವರಣವು ಉತ್ತಮವಾಗಿಲ್ಲ ಮತ್ತು ಏನು ಬೇಕಾದರೂ ಆಗಬಹುದು" ಎಂದು ಪೊಲೀಸರು ಎಂದು ಸಲಹೆ ನೀಡಿದ್ದಾರೆ

- Advertisement -
- Advertisement -

ಮುಂಬೈ ಉಬರ್ ಕ್ಯಾಬ್ ಚಾಲಕನೊಬ್ಬ, ಸಿಎಎ ಪ್ರತಿಭಟನೆಯ ಕುರಿತು ಫೋನ್‌ನಲ್ಲಿ ಮಾತನಾಡುತ್ತಿದ್ದ ತನ್ನ ಪ್ರಯಾಣಿಕ (ಕವಿ ಮತ್ತು ಸಾಮಾಜಿಕ ಕಾರ್ಯಕರ್ತ)ನನ್ನು ದೇಶದ್ರೋಹಿ ಎಂದು ಭಾವಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.

ಹೋರಾಟಗಾರ್ತಿ ಕವಿತಾ ಕೃಷ್ಣನ್ ಈ ಘಟನೆಯನ್ನು “ಭಯಾನಕ ಪ್ರಸಂಗ” ಎಂದು ಕರೆದು ಟ್ವೀಟ್‌ ಮಾಡಿದ್ದಾರೆ. ಈ ಕುರಿತು ಕ್ಯಾಬ್‌ ಚಾಲಕನ ಮೇಲೆ ತುರ್ತು ಕ್ರಮ ಕೈಗೊಳ್ಳುವಂತೆ ಉಬರ್‌ ಸಂಸ್ಥೆ ಮತ್ತು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ.

ನಡೆದಿದ್ದೇನು?

ಸರ್ಕಾರ್‌ರವರ ಹೇಳಿಕೆಯನ್ನು ಕವಿತಾ ಕೃಷ್ಣನ್‌ರವರು ಟ್ವೀಟ್‌ ಮಾಡಿದ್ದಾರೆ. ಅದರಂತೆ ಸರ್ಕಾರ್‌ ಎಂಬ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ಬುಧವಾರ ರಾತ್ರಿ 10:30ರ ಸುಮಾರಿಗೆ ಜುಹುನಿಂದ ಕುರ್ಲಾಕ್ಕೆ ಉಬರ್ ಕ್ಯಾಬ್ ತೆಗೆದುಕೊಂಡಿದ್ದಾರೆ. ಪ್ರಯಾಣದ ಸಮಯದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ (ಮೊಬೈಲ್ ಫೋನ್‌ನಲ್ಲಿ) ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ “ಲಾಲ್ ಸಲಾಮ್” ಘೋಷಣೆಯು ಜನರಿಗೆ ಹೆಚ್ಚು ಒಪ್ಪಿತವಾಗಿಲ್ಲ ಎಂಬ ವಿಷಯದ ಕುರಿತು ಚರ್ಚಿಸುತ್ತಿದ್ದರು.

ಇದನ್ನು ಕೇಳುತ್ತಿದ್ದ ಚಾಲಕ, ಸರ್ಕಾರ್‌ಗೆ ತಾನು ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಕಾರು ನಿಲ್ಲಿಸಿದ್ದಾರೆ. ಆದರೆ ಚಾಲಕ ಇಬ್ಬರು ಪೊಲೀಸರೊಂದಿಗೆ ಹಿಂತಿರುಗಿದ್ದಾನೆ. ಪೊಲೀಸರು ಸರ್ಕಾರ್ ಅವರನ್ನು “ದಫ್ಲಿ” (ತಾಳವಾದ್ಯ) ಏಕೆ ಸಾಗಿಸುತ್ತಿದ್ದೀರಿ ಎಂದು ಕೇಳಿದರು ಮತ್ತು ಅವರ ವಿಳಾಸವನ್ನೂ ಕೇಳಿದ್ದಾರೆ.

ಸರ್ಕಾರ್ ಅವರು ಜೈಪುರದವರು ಮತ್ತು ಸಿಎಎ ವಿರೋಧಿ “ಮುಂಬೈ ಬಾಗ್” ಪ್ರತಿಭಟನೆಗೆ ಭೇಟಿ ನೀಡಿದ್ದರು ಎಂದು ಹೇಳಿದರು. ಅವರು ಪ್ರತಿಭಟನೆಯಲ್ಲಿ ಹಾಡು ಮತ್ತು ಘೋಷಣೆ ಕೂಗಲು ಅವರ ವಾದ್ಯವನ್ನು ಹೊತ್ತೊಯ್ಯುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಆದರೆ ಕ್ಯಾಬ್‌ ಚಾಲಕ “ಅವನು ಕಮ್ಯುನಿಸ್ಟ್ ಎಂದು ಹೇಳಿಕೊಂಡಿದ್ದಾನೆ. ದೇಶವನ್ನು ಸುಡುವ ಬಗ್ಗೆ ಮತ್ತು ಮುಂಬೈನಲ್ಲಿ ಶಾಹೀನ್ ಬಾಗ್ ಮಾಡುವ ಬಗ್ಗೆ ಮಾತನಾಡುತ್ತಿದ್ದಾನೆ. ಹಾಗಾಗಿ ಆ ಪ್ರಯಾಣಿಕನನ್ನು ಬಂಧಿಸುವಂತೆ” ಪೊಲೀಸರನ್ನು ಕೇಳಿಕೊಂಡಿದ್ದಾನೆ. ತಾನು ಅವನ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಚಾಲಕ ಹೇಳಿಕೊಂಡಿದ್ದಾನೆ.

ಸರ್ಕಾರ್ ಅವರನ್ನು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಹೇಳಿಕೆ ತಿಳಿಸಿದೆ. ಆಗ ಸರ್ಕಾರ್‌ ಸಂಭಾಷಣೆಯನ್ನು ಆಲಿಸುವಂತೆ ಪೊಲೀಸರಿಗೆ ಮನವಿ ಮಾಡಿದರು ಮತ್ತು ಆ ಸಂಭಾಷಣೆಯಲ್ಲಿ ಏನು ಅಪರಾಧವೆಂದು ಅವರು ಚಾಲಕನನ್ನು ಕೇಳಿದರು.

“ನೀವು ದೇಶವನ್ನು ನಾಶಪಡಿಸುತ್ತಿದ್ದಾಗ ನಾವು ಸುಮ್ಮನೆ ಕೈಕಟ್ಟಿ ನೋಡಬೇಕೆಂದು ನೀವು ನಿರೀಕ್ಷಿಸುತ್ತೀರಾ? ನಾನು ನಿಮ್ಮನ್ನು ಬೇರೆಲ್ಲಿಗೋ ಒಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ಯಿದ್ದೇನೆ. ಅದಕ್ಕೆ ನೀವು ಕೃತಜ್ಞರಾಗಿರಬೇಕು” ಎಂದು ಚಾಲಕ ಏರುದನಿಯಲ್ಲಿ ಬೆದರಿಸಿದ್ದಾನೆ.

ಕಾರು ಚಾಲಕನ ರೈಡ್-ಹೇಲಿಂಗ್ ಅಪ್ಲಿಕೇಶನ್‌ನಲ್ಲಿನ ಅವರ ಪ್ರೊಫೈಲ್ ವಿವರಣೆಯಲ್ಲಿ ಹೀಗೆ ಬರೆಯಲಾಗಿದೆ: “ನಾನು ಕಾರು ಚಾಲನ ವೃತ್ತಿ ಮಾಡುವುದು ಏಕೆಂದರೆ ಅದು ವಿಭಿನ್ನ ಪಾತ್ರಗಳು ಮತ್ತು ವ್ಯಕ್ತಿತ್ವಗಳನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ”.

“ಆ ಸಮಯದಲ್ಲಿ ಸ್ವಲ್ಪ ಭಯದ ಭಾವನೆ ಮೂಡಿತು. ಅದು ತಕ್ಷಣದಲ್ಲಿಯೇ ಬಗೆಹರಿಯಲಿಲ್ಲ, ಮತ್ತು ರಾತ್ರಿಯಿಡೀ ಉಳಿದಿದೆ” ಎಂದು ಕವಿ-ಕಾರ್ಯಕರ್ತ ಸರ್ಕಾರ್‌ ತಿಳಿಸಿದ್ದಾರೆ.

ಪೊಲೀಸರು ಸರ್ಕಾರ್‌ರವರ ಸಿದ್ಧಾಂತ ಮತ್ತು ಅವರು ಓದಿದ ಜನರ ಬಗ್ಗೆ ಕೇಳಿದರು. ಸರ್ಕಾರ್ ಅವರ ಪ್ರಕಾರ, ಕೇವಲ ಅವನ ತಂದೆಯ ಸಂಬಳದಲ್ಲಿ ಮತ್ತು ಕೆಲಸವಿಲ್ಲದೆ ತಾನು ಹೇಗೆ ಬದುಕಲು ಸಾಧ್ಯ ಎಂಬಂತಹ “ಅಸಂಬದ್ಧ” ಪ್ರಶ್ನೆಗಳನ್ನು ಸಹ ಪೊಲೀಸರು ಕೇಳಿದರು. ಮತ್ತು ಅವರು “ದಫ್ಲಿ” ಯನ್ನು ಏಕೆ ಸಾಗಿಸುತ್ತಿದ್ದಾರೆಂದು ಪದೇ ಪದೇ ಕೇಳುತ್ತಲೇ ಇದ್ದರು.

ಪೊಲೀಸರು ಆತನೊಂದಿಗೆ ಸಭ್ಯರಾಗಿದ್ದರು ಮತ್ತು ಅವರ ಮತ್ತು ಚಾಲಕ ಇಬ್ಬರನ್ನೂ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಕೇಳಿಕೊಂಡರು.

ಮುಂಜಾನೆ 1 ಗಂಟೆ ಸುಮಾರಿಗೆ ಮತ್ತೊಬ್ಬ ಕಾರ್ಯಕರ್ತ ಎಸ್ ಗೋಹಿಲ್ ಪೊಲೀಸ್ ಠಾಣೆಗೆ ಬಂದ ನಂತರ ಸರ್ಕಾರ್ ಅವರಿಗೆ ಅಲ್ಲಿಂದ ಹೋಗಲು ಅನುಮತಿ ನೀಡಲಾಯಿತು.

ಕವಿತಾ ಕೃಷ್ಣನ್ ಅವರ ಟ್ವೀಟ್ ಹೇಳಿಕೆಯ ಪ್ರಕಾರ, ಸರ್ಫಾರ್‌ಗೆ ಡಫ್ಲಿ ಒಯ್ಯಬೇಡಿ ಮತ್ತು ಕೆಂಪು ಸ್ಕಾರ್ಫ್ ಧರಿಸಬೇಡಿ.  “ವಾತಾವರಣವು ಉತ್ತಮವಾಗಿಲ್ಲ ಮತ್ತು ಏನು ಬೇಕಾದರೂ ಆಗಬಹುದು” ಎಂದು ಪೊಲೀಸರು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಘಟನೆಯು “ಎನ್‌ಪಿಆರ್ ಎನ್‌ಆರ್‌ಸಿ ಸಿಎಎ ಅಡಿಯಲ್ಲಿ ಭಯಾನಕ ಭಾರತದ ದರ್ಶನವಾಗಿದೆ, ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇತರರನ್ನು ಅನುಮಾನಿಸಲು ಮತ್ತು ವಿಚಾರಣೆ ನಡೆಸಲು ಪ್ರೋತ್ಸಾಹಿಸಲಾಗುವುದು ಮತ್ತು ಪೊಲೀಸರು ಎಲ್ಲರಿಗೂ ಕಿರುಕುಳ ನೀಡಬಹುದು” ಎಂದು ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ. ಅವರು ಮುಂಬೈ ಪೊಲೀಸ್ ಮತ್ತು ಉಬರ್ ಅನ್ನು ಟ್ಯಾಗ್ ಮಾಡಿದ್ದಾರೆ.

“ನಾವು ನಿಮ್ಮನ್ನು ಫಾಲೋ ಮಾಡುತ್ತಿದ್ದೇವೆ. ದಯವಿಟ್ಟು ಡಿಎಂನಲ್ಲಿ ಪ್ರಕರಣದ ನಿಖರವಾದ ವಿವರಗಳನ್ನು ಹಂಚಿಕೊಳ್ಳಿ” ಎಂದು ಮುಂಬೈ ಪೊಲೀಸರು ಕೃಷ್ಣನ್‌ರವರ ಟ್ವೀಟ್‌ಗೆ ಉತ್ತರಿಸಿದ್ದಾರೆ.

ಟ್ವಿಟರ್ ಹ್ಯಾಂಡಲ್ ‘ಉಬರ್ ಇಂಡಿಯಾ ಸಪೋರ್ಟ್’ ಈ ಘಟನೆಗೆ ಸಂಬಂಧಿಸಿದೆ “ನಾವು ಇದನ್ನು ಆದ್ಯತೆಯ ಮೇರೆಗೆ ವಿಚಾರನೆ ನಡೆಸಲು ಬಯಸುತ್ತೇವೆ. ಪ್ರಯಾಣವನ್ನು ವಿನಂತಿಸಿದ ನೋಂದಾಯಿತ ವಿವರಗಳನ್ನು ದಯವಿಟ್ಟು ಹಂಚಿಕೊಳ್ಳಿ” ಎಂದು ಅದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನೈತಿಕ ಪೊಲೀಸ್ ಗಿರಿ ಮೆರೆದಿರುವ ಉಬರ್ ಚಾಲಕನ ವಿರುದ್ಧ ಉಬರ್ ಕಂಪನಿಯು ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

  2. Questionable act’s are harassment is very dangerous zone this is the encashment if BJP govt
    They doesn’t want to development of so many sectors
    They want to only got power and smashing all constional institutions
    This very condemned one and shame full to NDA givt

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...