ಬಳ್ಳಾರಿಯಲ್ಲಿಂದು ಬಿಜೆಪಿ ಹಮ್ಮಿಕೊಂಡಿದ್ದ ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ BJP ಶಾಸಕ ಸೋಮಶೇಖರ್ರೆಡ್ಡಿ ಭಾರತದ ಮುಸ್ಲಿಮರ ವಿರುದ್ಧ ಎಗ್ಗಿಲ್ಲದೇ ನಾಲಿಗೆ ಹರಿಯಬಿಟ್ಟಿದ್ದು ಮನಬಂದಂತೆ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ನೇರವಾಗಿ ನೀವು ಇರೋದೋ 17% ಹಾಗಾಗಿ ನಾವು ಹೇಳಿದಂತೆ ಕೇಳಿಕೊಂಡಿರಿ. ಇಲ್ಲಿದಿದ್ದರೆ ನಿಮ್ಮನ್ನು ಉಳಿಸೊಲ್ಲ ಅಂತ ಅವಾಜ್ ಹಾಕಿದ್ದಾರೆ.
ಮಚ್ಚು ಖಡ್ಗ ಹಿಡಿದು ರಣರಂಗ ಮಾಡ್ತೀವಿ ಅಂತ ಹೇಳಿರುವ ಅವರ ಭಾಷಣದ ಪೂರ್ಣ ವಿವರ ಈ ಕೆಳಗಿನಂತಿದೆ ಓದಿ.
ಹೋರಾಟ ಮಾಡುತ್ತಿರುವವರಿಗೆ ಒಂದು ಎಚ್ಚರಿಕೆ ಎಂದರೆ, ಫೈವ್ ಪರ್ಸೆಂಟ್ ಮಾತ್ರ. ಜಾಸ್ತಿ ನಖರಾ ಮಾಡಿದರೆ, 100% ಜನ ಬಂದ್ರೆ ನಿಮ್ಮ ಪರಿಸ್ಥಿತಿ ಎನಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ
ಕಾಂಗ್ರೆಸ್ ಬೆವುಕೂಫ್ಗಳನ್ನು ನಂಬಿಕೊಂಡು ಬೀದಿಗೆ ಬರ್ತಿರಾ ನೀವು? ನಾವು 80% ಇರೋರು. ನೀವು ಬರೀ 17% ಇರೋದು. ನಾವು ತಿರುಗಿಬಿದ್ರೆ ನಿಮ್ ಪರಿಸ್ಥಿತಿ ಎನಾಗುತ್ತೆ ಗೊತ್ತಾ? ಎಚ್ಚರವಿರಲಿ, ಮೈಮೇಲೆ ಎಚ್ಚರವಿಟ್ಟುಕೊಂಡು ನಮ್ ದೇಶದಲ್ಲಿರಿ…
ಇದು ನನ್ ದೇಶ. ನಮ್ಮೆಲ್ಲರ ದೇಶ. ನೀವು ನಮ್ಮ ದೇಶದಲ್ಲಿರಬೇಕಾದರೆ ಆಸ್ಟ್ರೇಲಿಯಾ ಪ್ರಧಾನಿ ಹೇಳಿದಂತೆ ನಮ್ಮ ಪದ್ಧತಿ ಪ್ರಕಾರ ಇರಬೇಕು. ಹೆಚ್ಚಿಗೆ ನಖರಾ ಮಾಡಿದರೆ ನಿಮ್ ದೇಶಕ್ಕೆ ಕಳಿಸಿಕೊಡಬೇಕಾಗುತ್ತದೆ. ಆ ಪರಿಸ್ಥಿತಿ ಬರದಂತೆ ನೋಡಿಕೊಳ್ಳಿ
ನಾವು ಹಿಂದೂಗಳು ಶಾಂತಿಯಿಂದ ಇದ್ದೀವಿ. ನಮ್ಮ ಶಾಂತಿನ ನೀವು ಪರೀಕ್ಷೆ ಮಾಡೋದಾದರೆ ಒಂದು ಸಲ, ಎರಡು ಸಾರಿ. ನಾವು ತಿರುಗಿಬಿದ್ದರೆ ಮೂರನೇ ಸಾರಿ ಉಳಿಯೊಲ್ಲ ನೀವು.
ನಮ್ಮ ದೇಶದ, ಸರ್ಕಾರದ ವಾಹನಗಳು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಪಂಕ್ಚರ್ ಹಾಕುವವರು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ನಮ್ಮ ಸೌತ್ ಎಂಪಿ ತೇಜಸ್ವಿ ಸೂರ್ಯ ಹೇಳಿದ್ದರು. ಅದು ನಿಜ. ಏಕೆಂದರೆ ನಿಮಗೆ ಪಂಕ್ಚರ್ ಹಾಕುವವರಿಗೆ ಏನೂ ಗೊತ್ತಿಲ್ಲ. ಯಾರದೋ ಮಾತು ಕೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದೀರಿ. ನಾವು ಒಂದು ಕೂಗು ಕೊಟ್ರೆ 95% ಮಂದಿ ಬರ್ತಾರೆ. ನಾವು ಉಫ್ ಅಂತ ಊದಿದರೆ ನೀವು ಹಾರಿಹೋಗ್ತೀರಿ..
ಅಣ್ಣ ತಮ್ಮಂದಿರು ಅಣ್ಣತಮ್ಮಂದಿರ ಥರ ಇರಬೇಕು. ನೀವು ಶತ್ರುಗಳ ಥರ ಆಡಿದರೆ ನಾವು ಶತ್ರುಗಳಾಗುತ್ತವೆ. ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ಥರ ಆಗಿ ಮಚ್ಚು ಹಿಡಿದುಕೊಂಡರೆ, ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ.
ಸಿಎಎ ಮತ್ತು ಎನ್ಆರ್ಸಿ ನಮ್ಮ ಆಕ್ಟ್ಗಳು. ಮೋದಿ ಸಾಹೇಬರು, ಅಮಿತ್ ಶಾ ಮಾಡಿರುವ ತಂದಿರುವ ಆಕ್ಟ್ಗಳು. ಇದಕ್ಕೆ ಯಾರಾದರೂ ವಿರುದ್ಧವಾಗಿ ನಡೆದುಕೊಂಡರೆ ಚೆನ್ನಾಗಿರೋಲ್ಲ.
ಇದಿಷ್ಟು ಒರ್ವ ಜನಪ್ರತಿನಿಧಿ ಮಾಡಿರುವ ಭಾಷಣವಾಗಿದೆ. ಈ ವಿಷಯಕ್ಕೆ ಇವರ ಮೇಲೆ ದೂರು ದಾಖಲಿಸುವ ಸಾಧ್ಯತೆಯೂ ಸಹ ಇದೆ.



ಯುದ್ದ ಪ್ರಾರಂಭವಾಗುವುದಾದರೆ ಎದುರಲ್ಲಿ ಇವನೇ ನಿಲ್ಲಲಿ.
ಮುಗ್ದ ಬಡವರ ಮನೆಯ ಮಕ್ಕಳನ್ನು ನಿಲ್ಲಿಸಿ ಇವನು ಅಧಿಕಾರ ಪಡೆಯುವುದು ಬೇಡ.
ಬಳ್ಳಾರಿಯನ್ನು ಲೂಟಿಮಾಡಿದ ಇವನ ಪರಂಪರೆ ಎಷ್ಟು ಚೆನ್ನಾಗಿರಬಹುದು
ಹಿಂದೂ 19% ಮುಲನಿವಾಸಿಗಲು, 8% ………. ಆದಿವಾಸಿಗಲು ಮತ್ತು ದ್ರಾವಿಡ ರು ……. ನೆನಪಿಡಿ ……….. ಯಾವಾಗ ಸತ್ಯ …….. …. (ಇತಿಹಾಸ) ಹೋರಾಗ್ ….. ಬರುತೆ ……….. ಅಗಾ ??????????????????????????????????????????
ಪ್ರಜಾಪ್ರಭುತ್ವ ಅಂದ್ರೆ ಏನು ಅಂತ ಗೊತ್ತಿದಿಯಾ ಮಿಸ್ಟರ್ ಸೋಮಶೇಖರ ರೆಡ್ಡಿ…
ಬಿಜೆಪಿ ಶಾಸಕರು ಎಂಥ ವಿಕೃತಿ ಮನೋಸ್ಥಿತಿಯವರು ಅನ್ನೋದಕ್ಕೆ ಇದೊಂದು ನಿದರ್ಶನ…. ಯಾರು ದೇಶದ ಭ್ರಾತೃತ್ವಕ್ಕೆ , ಪ್ರಜಾಪ್ರಭುತ್ವಕ್ಕೆ, ಗೌರವಿಸಲ್ವೋ ಅವರನ್ನು ದೇಶ ದ್ರೋಹಿ ಅಂತ ತೀರ್ಮಾನಿಸಬೇಕು… ಆದರೆ ಭಾಜಪಾ ಶಾಸಕರೇ ಇಂಥ ಅಸಭ್ಯ, ಹೇಳಿಕೆಗಳ್ನ ಕೊಟ್ಕೂಂಡು ನಿರ್ಭಯವಾಗಿ ಸಮರ್ಥಿಸಿಕೊಳ್ಳುತ್ತಿರುವುದು ಇದನ್ನು ಪಕ್ಷ ಗಣನೆಗೆ ತೆಗೆದುಕೊಳ್ಳದಿರುವುದನ್ನ ನೋಡಿದರೆ ಪಕ್ಷದ ಹಿನ್ನೋಟ, ಅಜೆಂಡಾ, ಧ್ಯೇಯ ಒಂದೇ ಎಂದೆನಿಸುತ್ತಿದೆ ಸಹಜವಾಗಿ..