Homeಕರ್ನಾಟಕಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

ಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

- Advertisement -
- Advertisement -

– ಕೆ.ಪಿ ಸುರೇಶ್

RCEP ಬಗ್ಗೆ ಚುಟುಕು ಪ್ರಶ್ನೋತ್ತರ… 

RCEP ಎಂದರೇನು..?
ಭಾರತ, ಚೀನಾ, ಮಲೇಷಿಯಾ, ಜಪಾನ್, ಕಾಂಬೋಡಿಯಾ, ವಿಯೆಟ್ನಾಂ ಸಹಿತ ಹದಿನೈದು ದೇಶಗಳು ಸೇರಿದ ಪ್ರಾದೇಶಿಕ ಸಹಭಾಗಿತ್ವ.

ಪ್ರಸ್ತಾಪದ ಮಾತುಕತೆ ಶುರುವಾಗಿ ಎಷ್ಟು ವರ್ಷಗಳಾದವು..?
2012ರಲ್ಲಿ ಈ ಒಪ್ಪಂದದ ಸ್ಥೂಲ ಚರ್ಚೆ ಆರಂಭವಾಯಿತು. ವಿವಿಧ ಹಂತಗಳ ಮಾತುಕತೆಗಳು ಕಳೆದ ಏಳು ವರ್ಷಗಳಲ್ಲಿ ನಡೆದು ಬೆಳೆಯುತ್ತಾ ಇದೇ ನವೆಂಬರ್‌ 4ಕ್ಕೆ ಅಂತಿಮ ಸುತ್ತಿನ ಒಪ್ಪಂದದ ಸಭೆ ನಡೆಯಲಿದೆ.

ಇಷ್ಟು ವರ್ಷ ಏನಾಯಿತು..?
ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಒಪ್ಪಂದದ ಯಾವ ವಿವರಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಉಳಿದ ದೇಶಗಳು ತಮ್ಮ ತಮ್ಮ ಸಂಸತ್ತುಗಳಲ್ಲಿ ಇದರ ವಿವರಗಳನ್ನು ಪ್ರಸ್ತುತಪಡಿಸಿವೆ. ಆದರೆ ನಮ್ಮ ಸರ್ಕಾರ ಸಂಪೂರ್ಣ ರಹಸ್ಯವಾಗಿಟ್ಟಿದೆ. ಈ ಮಾತುಕತೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಷಯ ತಜ್ಞರು ಯಾರು ಎಂಬುದೂ ಸಹ ಸಾರ್ವಜನಿಕವಾಗಿಲ್ಲ.

RCEP ಒಪ್ಪಂದದ ಮುಖ್ಯ ಅಂಶಗಳೇನು..?
ಈ ಎಲ್ಲಾ ರಾಷ್ಟ್ರಗಳೂ ಒಂದೇ ದೇಶವೆಂಬಂತೆ ತಮ್ಮ ಸರಕುಗಳನ್ನು ಯಾವುದೇ ತೆರಿಗೆಗೆ ತಡೆ ಇಲ್ಲದೇ ಪರಸ್ಪರ ಮಾರಾಟ ಮಾಡುವ ಸೌಲಭ್ಯ ಹೊಂದುತ್ತಾರೆ. ಈ ರೀತಿಯ ಆರ್ಥಿಕ ವಲಯಗಳನ್ನು ಆಧುನಿಕ ವ್ಯಾಪಾರ ಸಂದರ್ಭದಲ್ಲಿ ಸೃಷ್ಟಿಸಿಕೊಳ್ಳಲಾಗುತ್ತಿದೆ.

ಉಳಿದ ಅಂಶಗಳೇನು..?
ಉಳಿದ ಯಾವ ವಿವರಗಳೂ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಸೋರಿಕೆಯಾದ ದಾಖಲೆಗಳನ್ನು ಗಮನಿಸಿದರೆ ಬೌದ್ಧಿಕ ಆಸ್ತಿ ಹಕ್ಕಿನಿಂದ ಹಿಡಿದು, ಹಲವು ಉತ್ಪನ್ನಗಳಲ್ಲಿ ಇದಕ್ಕೆ ತಡೆಯೊಡ್ಡುವ ದೇಶದಿಂದ ಪರಿಹಾರ ವಸೂಲಿ ಮಾಡುವ ಅಧಿಕಾರ ರಫ್ತು ಮಾಡುವ ಸರ್ಕಾರ ಅಥವಾ ಸಂಸ್ಥೆಗೆ ಇರುತ್ತದೆ.

ಇದರಿಂದ ನಮ್ಮ ದೇಶದ ಮೇಲಾಗುವ ಪರಿಣಾಮಗಳು ಏನು..? 
ಈಗಾಗಲೇ ಭಾರತ ವ್ಯಾಪಾರದಲ್ಲಿ ಡೆಫಿಸಿಟ್ ಹೊಂದಿದೆ. ಅದರಲ್ಲೂ ಚೀನಾ ರಾಷ್ಟ್ರವೊಂದೇ ಶೇ. 50 ರಷ್ಟು ಸರಕು ಸುರಿಯಬಹುದು. ಉಳಿದಂತೆ ಆಸ್ಟ್ರೇಲಿಯಾ, ನ್ಯೂಜಿಲಾಂಡ್‍ಗಳು ಡೈರಿ ಉತ್ಪನ್ನಗಳನ್ನು ಭಾರತಕ್ಕೆ ಸುರಿಯುವ ಸಾಧ್ಯತೆಯಿದೆ. ಸುಮಾರು ಹತ್ತು ಸಾವಿರ ವಿವಿಧ ವಸ್ತುಗಳು ಈ ಒಪ್ಪಂದದ ಅನ್ವಯ ಆಮದು- ರಫ್ತು ಆಗಲಿವೆ. ಈ ವಸ್ತುಗಳಲ್ಲಿ ಕೃಷಿ, ಹಾಲು ಉತ್ಪಾದನೆ, ಸಾಗರೋತ್ಪನ್ನಗಳು ಅಷ್ಟೇ ಅಲ್ಲ, ಔಷಧಿ ಕ್ಷೇತ್ರದ ಪಾಲೂ ಅಧಿಕವಾಗಿರಲಿದೆ. ಬೌದ್ಧಿಕ ಉತ್ಪನ್ನದ ಬೌದ್ಧಿಕ ಹಕ್ಕಿನ ವಾಯಿದೆಯನ್ನೂ ವಿಸ್ತರಿಸುವ ಹಕ್ಕು ಇದೆ.

ಯಾವ ಉತ್ಪನ್ನಗಳಿಂದ ದೇಶಕ್ಕೆ ತೊಂದರೆಯಾಗಲಿದೆ..? 
ನಿರ್ದಿಷ್ಟವಾಗಿ ಇಂಥದ್ದೇ ಉತ್ಪನ್ನಗಳಿಂದ ನಾವು ರಕ್ಷಣೆ ಪಡೆಯಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತಜ್ಞರ ಪ್ರಕಾರ 10 ಸಾವಿರ ಉತ್ಪನ್ನಗಳಲ್ಲಿ ಹೆಚ್ಚೆಂದರೆ ನೂರು ಉತ್ಪನ್ನಗಳಿಗೆ ರಕ್ಷಣೆ ನೀಡಬಹುದು. ಅಡಿಕೆ, ಮೆಣಸು ಇತ್ಯಾದಿಗೆ ತೊಂದರೆ ಇಲ್ಲ ಎನ್ನುತ್ತಾರಲ್ಲ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸದ್ಯಕ್ಕೆ ತೊಂದರೆ ಕಾಣಿಸದಿದ್ದರೂ, ಸದಸ್ಯ ರಾಷ್ಟ್ರಗಳು ನಿಯಮಗಳನ್ನು ತಿದ್ದುಪಡಿ ಮಾಡಿದಾಗ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಊಹಿಸುವುದು ಕಷ್ಟ. ಮುಖ್ಯವಾಗಿ ಯಾವ ಸರಕಿಗೂ ಆಧುನಿಕ ವ್ಯಾಪಾರ ಒಪ್ಪಂದದಲ್ಲಿ ಖಾಯಂ ರಕ್ಷಣೆ ಎಂಬುದು ಇಲ್ಲ.

ನಮಗೆ ಆಪತ್ತು ಇದೆ ಎಂದು ಏಕೆ ಭಾವಿಸಲಾಗುತ್ತಿದೆ..?
ನಮ್ಮ ಉತ್ಪನ್ನಗಳು ಸ್ಪರ್ಧಾತ್ಮಕವಾಗಿಲ್ಲ. ಗುಣಮಟ್ಟದಲ್ಲೂ, ಉತ್ಪಾದಕ ವೆಚ್ಚದಲ್ಲೂ ಎಂಬ ಆತಂಕ ಇದೆ. ಉಳಿದ ದೇಶಗಳ, ಅದರಲ್ಲೂ ಚೀನಾದ ಉತ್ಪನ್ನಗಳು, ನಮ್ಮ ಉತ್ಪನ್ನಗಳಿಗಿಂತ ಅಗ್ಗವಾಗಿ ಉತ್ಪಾದನೆಯಾಗುತ್ತವೆ. ಆದ್ದರಿಂದ ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುವ ಆತಂಕವೂ ಇದೆ.

ಸರ್ಕಾರ ಏನು ಮಾಡಬೇಕು..?
ಮುಖ್ಯವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆ ಮತ್ತು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಬಂಡವಾಳ ಹೂಡಬೇಕು. ಇದು ಮೂಲತಃ ತರಬೇತಿ , ಕೌಶಲ್ಯಗಳಿಗೆ ಸಂಬಂಧಿಸಿದ್ದಾಗಿದೆ. ಈ ರೀತಿ ದೇಶೀಯ ಉತ್ಪಾದನೆಯನ್ನು ಸನ್ನದ್ಧಗೊಳಿಸಲು ಮೊದಲು ಸಹಿ ಹಾಕಿದರೆ, ನಮ್ಮ ಉತ್ಪಾದಕರು ತೊಂದರೆಗೆ ಒಳಗಾಗುತ್ತಾರೆ.

ಸರ್ಕಾರ ಏನು ಮಾಡುತ್ತಿದೆ..?
ಕೃಷಿ ಮತ್ತಿತರ ಕ್ಷೇತ್ರಗಳು, ರಾಜ್ಯಗಳಿಗೆ ಸಂಬಂಧಿಸಿದ ಕಾರಣ ಆಯಾ ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಅಷ್ಟೇ ಅಲ್ಲ, ರೈತಾಪಿ ವರ್ಗಕ್ಕೆ ಮಾರ್ಗದರ್ಶನ ಮಾಡುವ ಬಲು ದೊಡ್ಡ ತರಬೇತುದಾರರ ಪಡೆಯನ್ನು ನಿಯೋಜಿಸಬೇಕಾಗಿದೆ. ಹಾಗೇ ಉತ್ಪಾದನಾ ಗುಣಮಟ್ಟದ ಬಗ್ಗೆ ಮಾನದಂಡಗಳನ್ನು ತಳಮಟ್ಟದವರೆಗೂ ಮನನ ಮಾಡಿಸಿ, ಉತ್ಪನ್ನವನ್ನು ಶ್ರೇಷ್ಠಗೊಳಿಸಬೇಕು. ಇದರೊಂದಿಗೆ ಒಳಸುರಿ, ಕೊಯ್ಲು ಸಾಗಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮೌಲ್ಯವರ್ಧನೆ- ಹೀಗೆ ಎಲ್ಲಾ ಆಯಾಮಗಳಲ್ಲೂ ಏಕಕಾಲಕ್ಕೆ ಸಂರಚನೆ ಸೃಷ್ಟಿಸಬೇಕು.

ಈಗಾಗಲೇ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಯಾವವು..?
ಕೃಷಿ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಘೋಷಿಸಿದ ಉಪಕ್ರಮಗಳ ಶೇ. 10ರಷ್ಟೂ ಕೆಲಸವಾಗಿಲ್ಲ. ಉದಾ: ಕೌಶಲ್ಯ ಕ್ಷೇತ್ರದಲ್ಲಿ 41 ಸ್ಕಿಲ್ ಕೌನ್ಸಿಲ್‍ಗಳನ್ನು ಘೋಷಿಸಿ, ಸುಮಾರು 5000 ಉದ್ಯೋಗ ಸಾಧ್ಯತೆಗಳನ್ನು ಗುರುತಿಸಬೇಕಿದೆ.  ಅಲ್ಪಕಾಲೀನ ತರಬೇತಿ ಮೂಲಕ ಕೌಶಲ್ಯ ತರಬೇತಿ ಪಡೆದ ಲಕ್ಷಾಂತರ ಯುವಕರನ್ನು ಸೃಷ್ಟಿಸುವ ಘೋಷಣೆ ಇದೆ. ಆದರೆ ಬಹುತೇಕ ಕೌನ್ಸಿಲ್‌ಗಳಲ್ಲಿ ಗುಣಮಟ್ಟದ ತರಬೇತಿಯೇ ಇಲ್ಲ.
ಆಹಾರ ಸಂಸ್ಕರಣೆಯಲ್ಲೂ ಅಷ್ಟೇ. ಶೇ. 10-30ರಷ್ಟು ಉತ್ಪನ್ನ ಹಾಳಾಗುತ್ತಿದೆ ಎಂದು ಸರ್ಕಾರದ ಅಧಿಕೃತ ವಿವರಗಳೇ ಹೇಳುತ್ತಿವೆ.

ಮುಖ್ಯವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರ ಈ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬೇಕಾದಷ್ಟು ಅನುದಾನ ಒದಗಿಸಿಲ್ಲ. ಈಗ ಈ ಒಪ್ಪಂದ ಎಂಬ ಪೆಡಂಭೂತ ನಮ್ಮ ದಿಡ್ಡಿ ಬಾಗಿಲಿಗೆ ಬಂದಿದೆ. ನಮ್ಮನ್ನು ಆಳುವವರ ಕೈ ತಿರುಚಿಯಾದರೂ ಇದಕ್ಕೆ ಸಹಿ ಹಾಕಿಸುವ ಶಕ್ತಿ ಚೀನಾದಿಂದ ಹಿಡಿದು ಇತರೆ ದೇಶಗಳಿಗೆ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...