Homeಕರ್ನಾಟಕಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

ಆರ್‌ಸಿಇಪಿ ಎಂದರೇನು, ಆರ್‌ಸಿಇಪಿ ಜಾರಿಯಿಂದ ದೇಶದ ಮೇಲಾಗುವ ಪರಿಣಾಮವೇನು?: ಇಲ್ಲಿದೆ ಮಾಹಿತಿ

- Advertisement -
- Advertisement -

– ಕೆ.ಪಿ ಸುರೇಶ್

RCEP ಬಗ್ಗೆ ಚುಟುಕು ಪ್ರಶ್ನೋತ್ತರ… 

RCEP ಎಂದರೇನು..?
ಭಾರತ, ಚೀನಾ, ಮಲೇಷಿಯಾ, ಜಪಾನ್, ಕಾಂಬೋಡಿಯಾ, ವಿಯೆಟ್ನಾಂ ಸಹಿತ ಹದಿನೈದು ದೇಶಗಳು ಸೇರಿದ ಪ್ರಾದೇಶಿಕ ಸಹಭಾಗಿತ್ವ.

ಪ್ರಸ್ತಾಪದ ಮಾತುಕತೆ ಶುರುವಾಗಿ ಎಷ್ಟು ವರ್ಷಗಳಾದವು..?
2012ರಲ್ಲಿ ಈ ಒಪ್ಪಂದದ ಸ್ಥೂಲ ಚರ್ಚೆ ಆರಂಭವಾಯಿತು. ವಿವಿಧ ಹಂತಗಳ ಮಾತುಕತೆಗಳು ಕಳೆದ ಏಳು ವರ್ಷಗಳಲ್ಲಿ ನಡೆದು ಬೆಳೆಯುತ್ತಾ ಇದೇ ನವೆಂಬರ್‌ 4ಕ್ಕೆ ಅಂತಿಮ ಸುತ್ತಿನ ಒಪ್ಪಂದದ ಸಭೆ ನಡೆಯಲಿದೆ.

ಇಷ್ಟು ವರ್ಷ ಏನಾಯಿತು..?
ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಒಪ್ಪಂದದ ಯಾವ ವಿವರಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಉಳಿದ ದೇಶಗಳು ತಮ್ಮ ತಮ್ಮ ಸಂಸತ್ತುಗಳಲ್ಲಿ ಇದರ ವಿವರಗಳನ್ನು ಪ್ರಸ್ತುತಪಡಿಸಿವೆ. ಆದರೆ ನಮ್ಮ ಸರ್ಕಾರ ಸಂಪೂರ್ಣ ರಹಸ್ಯವಾಗಿಟ್ಟಿದೆ. ಈ ಮಾತುಕತೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಷಯ ತಜ್ಞರು ಯಾರು ಎಂಬುದೂ ಸಹ ಸಾರ್ವಜನಿಕವಾಗಿಲ್ಲ.

RCEP ಒಪ್ಪಂದದ ಮುಖ್ಯ ಅಂಶಗಳೇನು..?
ಈ ಎಲ್ಲಾ ರಾಷ್ಟ್ರಗಳೂ ಒಂದೇ ದೇಶವೆಂಬಂತೆ ತಮ್ಮ ಸರಕುಗಳನ್ನು ಯಾವುದೇ ತೆರಿಗೆಗೆ ತಡೆ ಇಲ್ಲದೇ ಪರಸ್ಪರ ಮಾರಾಟ ಮಾಡುವ ಸೌಲಭ್ಯ ಹೊಂದುತ್ತಾರೆ. ಈ ರೀತಿಯ ಆರ್ಥಿಕ ವಲಯಗಳನ್ನು ಆಧುನಿಕ ವ್ಯಾಪಾರ ಸಂದರ್ಭದಲ್ಲಿ ಸೃಷ್ಟಿಸಿಕೊಳ್ಳಲಾಗುತ್ತಿದೆ.

ಉಳಿದ ಅಂಶಗಳೇನು..?
ಉಳಿದ ಯಾವ ವಿವರಗಳೂ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಸೋರಿಕೆಯಾದ ದಾಖಲೆಗಳನ್ನು ಗಮನಿಸಿದರೆ ಬೌದ್ಧಿಕ ಆಸ್ತಿ ಹಕ್ಕಿನಿಂದ ಹಿಡಿದು, ಹಲವು ಉತ್ಪನ್ನಗಳಲ್ಲಿ ಇದಕ್ಕೆ ತಡೆಯೊಡ್ಡುವ ದೇಶದಿಂದ ಪರಿಹಾರ ವಸೂಲಿ ಮಾಡುವ ಅಧಿಕಾರ ರಫ್ತು ಮಾಡುವ ಸರ್ಕಾರ ಅಥವಾ ಸಂಸ್ಥೆಗೆ ಇರುತ್ತದೆ.

ಇದರಿಂದ ನಮ್ಮ ದೇಶದ ಮೇಲಾಗುವ ಪರಿಣಾಮಗಳು ಏನು..? 
ಈಗಾಗಲೇ ಭಾರತ ವ್ಯಾಪಾರದಲ್ಲಿ ಡೆಫಿಸಿಟ್ ಹೊಂದಿದೆ. ಅದರಲ್ಲೂ ಚೀನಾ ರಾಷ್ಟ್ರವೊಂದೇ ಶೇ. 50 ರಷ್ಟು ಸರಕು ಸುರಿಯಬಹುದು. ಉಳಿದಂತೆ ಆಸ್ಟ್ರೇಲಿಯಾ, ನ್ಯೂಜಿಲಾಂಡ್‍ಗಳು ಡೈರಿ ಉತ್ಪನ್ನಗಳನ್ನು ಭಾರತಕ್ಕೆ ಸುರಿಯುವ ಸಾಧ್ಯತೆಯಿದೆ. ಸುಮಾರು ಹತ್ತು ಸಾವಿರ ವಿವಿಧ ವಸ್ತುಗಳು ಈ ಒಪ್ಪಂದದ ಅನ್ವಯ ಆಮದು- ರಫ್ತು ಆಗಲಿವೆ. ಈ ವಸ್ತುಗಳಲ್ಲಿ ಕೃಷಿ, ಹಾಲು ಉತ್ಪಾದನೆ, ಸಾಗರೋತ್ಪನ್ನಗಳು ಅಷ್ಟೇ ಅಲ್ಲ, ಔಷಧಿ ಕ್ಷೇತ್ರದ ಪಾಲೂ ಅಧಿಕವಾಗಿರಲಿದೆ. ಬೌದ್ಧಿಕ ಉತ್ಪನ್ನದ ಬೌದ್ಧಿಕ ಹಕ್ಕಿನ ವಾಯಿದೆಯನ್ನೂ ವಿಸ್ತರಿಸುವ ಹಕ್ಕು ಇದೆ.

ಯಾವ ಉತ್ಪನ್ನಗಳಿಂದ ದೇಶಕ್ಕೆ ತೊಂದರೆಯಾಗಲಿದೆ..? 
ನಿರ್ದಿಷ್ಟವಾಗಿ ಇಂಥದ್ದೇ ಉತ್ಪನ್ನಗಳಿಂದ ನಾವು ರಕ್ಷಣೆ ಪಡೆಯಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ತಜ್ಞರ ಪ್ರಕಾರ 10 ಸಾವಿರ ಉತ್ಪನ್ನಗಳಲ್ಲಿ ಹೆಚ್ಚೆಂದರೆ ನೂರು ಉತ್ಪನ್ನಗಳಿಗೆ ರಕ್ಷಣೆ ನೀಡಬಹುದು. ಅಡಿಕೆ, ಮೆಣಸು ಇತ್ಯಾದಿಗೆ ತೊಂದರೆ ಇಲ್ಲ ಎನ್ನುತ್ತಾರಲ್ಲ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸದ್ಯಕ್ಕೆ ತೊಂದರೆ ಕಾಣಿಸದಿದ್ದರೂ, ಸದಸ್ಯ ರಾಷ್ಟ್ರಗಳು ನಿಯಮಗಳನ್ನು ತಿದ್ದುಪಡಿ ಮಾಡಿದಾಗ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಊಹಿಸುವುದು ಕಷ್ಟ. ಮುಖ್ಯವಾಗಿ ಯಾವ ಸರಕಿಗೂ ಆಧುನಿಕ ವ್ಯಾಪಾರ ಒಪ್ಪಂದದಲ್ಲಿ ಖಾಯಂ ರಕ್ಷಣೆ ಎಂಬುದು ಇಲ್ಲ.

ನಮಗೆ ಆಪತ್ತು ಇದೆ ಎಂದು ಏಕೆ ಭಾವಿಸಲಾಗುತ್ತಿದೆ..?
ನಮ್ಮ ಉತ್ಪನ್ನಗಳು ಸ್ಪರ್ಧಾತ್ಮಕವಾಗಿಲ್ಲ. ಗುಣಮಟ್ಟದಲ್ಲೂ, ಉತ್ಪಾದಕ ವೆಚ್ಚದಲ್ಲೂ ಎಂಬ ಆತಂಕ ಇದೆ. ಉಳಿದ ದೇಶಗಳ, ಅದರಲ್ಲೂ ಚೀನಾದ ಉತ್ಪನ್ನಗಳು, ನಮ್ಮ ಉತ್ಪನ್ನಗಳಿಗಿಂತ ಅಗ್ಗವಾಗಿ ಉತ್ಪಾದನೆಯಾಗುತ್ತವೆ. ಆದ್ದರಿಂದ ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುವ ಆತಂಕವೂ ಇದೆ.

ಸರ್ಕಾರ ಏನು ಮಾಡಬೇಕು..?
ಮುಖ್ಯವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆ ಮತ್ತು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಬಂಡವಾಳ ಹೂಡಬೇಕು. ಇದು ಮೂಲತಃ ತರಬೇತಿ , ಕೌಶಲ್ಯಗಳಿಗೆ ಸಂಬಂಧಿಸಿದ್ದಾಗಿದೆ. ಈ ರೀತಿ ದೇಶೀಯ ಉತ್ಪಾದನೆಯನ್ನು ಸನ್ನದ್ಧಗೊಳಿಸಲು ಮೊದಲು ಸಹಿ ಹಾಕಿದರೆ, ನಮ್ಮ ಉತ್ಪಾದಕರು ತೊಂದರೆಗೆ ಒಳಗಾಗುತ್ತಾರೆ.

ಸರ್ಕಾರ ಏನು ಮಾಡುತ್ತಿದೆ..?
ಕೃಷಿ ಮತ್ತಿತರ ಕ್ಷೇತ್ರಗಳು, ರಾಜ್ಯಗಳಿಗೆ ಸಂಬಂಧಿಸಿದ ಕಾರಣ ಆಯಾ ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಅಷ್ಟೇ ಅಲ್ಲ, ರೈತಾಪಿ ವರ್ಗಕ್ಕೆ ಮಾರ್ಗದರ್ಶನ ಮಾಡುವ ಬಲು ದೊಡ್ಡ ತರಬೇತುದಾರರ ಪಡೆಯನ್ನು ನಿಯೋಜಿಸಬೇಕಾಗಿದೆ. ಹಾಗೇ ಉತ್ಪಾದನಾ ಗುಣಮಟ್ಟದ ಬಗ್ಗೆ ಮಾನದಂಡಗಳನ್ನು ತಳಮಟ್ಟದವರೆಗೂ ಮನನ ಮಾಡಿಸಿ, ಉತ್ಪನ್ನವನ್ನು ಶ್ರೇಷ್ಠಗೊಳಿಸಬೇಕು. ಇದರೊಂದಿಗೆ ಒಳಸುರಿ, ಕೊಯ್ಲು ಸಾಗಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮೌಲ್ಯವರ್ಧನೆ- ಹೀಗೆ ಎಲ್ಲಾ ಆಯಾಮಗಳಲ್ಲೂ ಏಕಕಾಲಕ್ಕೆ ಸಂರಚನೆ ಸೃಷ್ಟಿಸಬೇಕು.

ಈಗಾಗಲೇ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಯಾವವು..?
ಕೃಷಿ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಘೋಷಿಸಿದ ಉಪಕ್ರಮಗಳ ಶೇ. 10ರಷ್ಟೂ ಕೆಲಸವಾಗಿಲ್ಲ. ಉದಾ: ಕೌಶಲ್ಯ ಕ್ಷೇತ್ರದಲ್ಲಿ 41 ಸ್ಕಿಲ್ ಕೌನ್ಸಿಲ್‍ಗಳನ್ನು ಘೋಷಿಸಿ, ಸುಮಾರು 5000 ಉದ್ಯೋಗ ಸಾಧ್ಯತೆಗಳನ್ನು ಗುರುತಿಸಬೇಕಿದೆ.  ಅಲ್ಪಕಾಲೀನ ತರಬೇತಿ ಮೂಲಕ ಕೌಶಲ್ಯ ತರಬೇತಿ ಪಡೆದ ಲಕ್ಷಾಂತರ ಯುವಕರನ್ನು ಸೃಷ್ಟಿಸುವ ಘೋಷಣೆ ಇದೆ. ಆದರೆ ಬಹುತೇಕ ಕೌನ್ಸಿಲ್‌ಗಳಲ್ಲಿ ಗುಣಮಟ್ಟದ ತರಬೇತಿಯೇ ಇಲ್ಲ.
ಆಹಾರ ಸಂಸ್ಕರಣೆಯಲ್ಲೂ ಅಷ್ಟೇ. ಶೇ. 10-30ರಷ್ಟು ಉತ್ಪನ್ನ ಹಾಳಾಗುತ್ತಿದೆ ಎಂದು ಸರ್ಕಾರದ ಅಧಿಕೃತ ವಿವರಗಳೇ ಹೇಳುತ್ತಿವೆ.

ಮುಖ್ಯವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರ ಈ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬೇಕಾದಷ್ಟು ಅನುದಾನ ಒದಗಿಸಿಲ್ಲ. ಈಗ ಈ ಒಪ್ಪಂದ ಎಂಬ ಪೆಡಂಭೂತ ನಮ್ಮ ದಿಡ್ಡಿ ಬಾಗಿಲಿಗೆ ಬಂದಿದೆ. ನಮ್ಮನ್ನು ಆಳುವವರ ಕೈ ತಿರುಚಿಯಾದರೂ ಇದಕ್ಕೆ ಸಹಿ ಹಾಕಿಸುವ ಶಕ್ತಿ ಚೀನಾದಿಂದ ಹಿಡಿದು ಇತರೆ ದೇಶಗಳಿಗೆ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...