Homeಕರ್ನಾಟಕಜಿಂದಾಲ್ ವಿರುದ್ಧ ಲೋಕಲ್ ಫೈಟ್ ಹತ್ತಿಕ್ಕಿದ ಸರ್ಕಾರದ ಆಡಳಿತ ವ್ಯವಸ್ಥೆ

ಜಿಂದಾಲ್ ವಿರುದ್ಧ ಲೋಕಲ್ ಫೈಟ್ ಹತ್ತಿಕ್ಕಿದ ಸರ್ಕಾರದ ಆಡಳಿತ ವ್ಯವಸ್ಥೆ

ಅತ್ಯಂತ ಬೆಲೆಬಾಳುವ ಭೂಮಿಯನ್ನು ತೀರಾ ಕಡಿಮೆ ರೊಕ್ಕಕ್ಕೆ ಮಾರಿದ ಬಡ ರೈತರು ಇವತ್ತಿಗೂ ಸರಿಯಾದ ಬದುಕು ಕಟ್ಟಿಗೊಂಡಿಲ್ಲ.

- Advertisement -
- Advertisement -

| ನಾನುಗೌರಿ ಡೆಸ್ಕ್ |

2016ರ ಸಂದರ್ಭದಲ್ಲಿ ಸ್ಥಳೀಯರು ಜಿಂದಾಲ್ ವಿರುದ್ಧ ಕಟ್ಟಿದ ಹೋರಾಟವನ್ನು ಪೊಲೀಸ್ ಶಕ್ತಿಯನ್ನು ಬಳಸಿ ಹತ್ತಿಕ್ಕಿದ್ದು ಆಡಳಿತ ವ್ಯವಸ್ಥೆಯೇ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇತರ ಯಾವ ಪಕ್ಷವೂ ಹೋರಾಟ ರೂಪಿಸಿದ ಜನರ ನೆರವಿಗೆ ನಿಲ್ಲಲಿಲ್ಲ. ಇಲ್ಲಿ ಎಲ್ಲ ಪಕ್ಷಗಳನ್ನು, ಅಧಿಕಾರಿಗಳನ್ನು ಜಿಂದಾಲ್ ‘ಒಳ ಹಾಕಿಕೊಂಡಿದೆ’ ಎಂಬುದು ಸ್ಥಳೀಯರ ಆರೋಪ,,,,

‘ಎಲ್ಲ ಪಾರ್ಟಿದವರೂ ಅವ್ರ ಜೊತೆಗಿನ ಅದಾರ್ರಿ. ಈಗ 3,600 ಎಕರೆ ಭೂಮೀನಾ ಜುಜಬಿ ರೇಟಿಗೆ ಸರ್ಕಾರ ಮಾರಾಕ ಹೊಂಟೈತಿ. ಈಗ್ಲೂ ನಾವು ಜನರನ್ನ ಸೇರಿಸೋಕ್ ಟ್ರೈ ಮಾಡ್ತಿದ್ದೀವಿ, ಆದ್ರ 2016ರೊಳಗ ಪ್ರತಿಭಟನೆ ಮಾಡಿದಾಗ, ಪೊಲೀಸರು ಮಂದಿಗೆ ಬಾಳ ಕಾಟ ಕೊಟ್ರು. 42 ಜನರ ಮ್ಯಾಲ ಕೇಸು ಹಾಕಿ ಕೋರ್ಟು ಕಚೇರಿ ಅಡ್ಡಾಡಿಸಿ ಸುಸ್ತು ಮಾಡಿದ್ರು. ಈಗ ಹೋರಾಟಕ್ಕ ಕರೆದ್ರ ಜನ ಯಾಕ್ ಬೇಕಪ್ಪ, ಎಲ್ಲ ಅವ್ರ ಕಡಿಗೆ ಅದಾರ’ ಎನ್ನುವ ಪರಿಸ್ಥಿತಿಯಿದೆ.

2016ರಲ್ಲಿ ಜಿಂದಾಲ್‍ನ ಡಾಂಬರು ಪ್ಲಾಂಟ್ (ECPL ಘಟಕ) ವಿರೋಧಿಸಿ ತೋರಣಗಲ್ಲಿನಲ್ಲಿ ಬೃಹತ್ ಪ್ತತಿಭಟನೆ ಮತ್ತು ಸಭೆ ನಡೆಸಿದ್ದ ಮುಂದಾಳುಗಳ ಪೈಕಿ ಒಬ್ಬರಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶರಣಪ್ಪ ಕೋಟಿಗನಾಳ 2016ರಲ್ಲಿ ನಡೆದ ಸರ್ಕಾರದ ದೌರ್ಜನ್ಯವನ್ನು ನೆನಪಿಸಿದರು.

‘ಆಗ ಜಿಂದಾಲ್ ಸಪೋರ್ಟು ಮಾಡಿದ್ದ ನಮ್ ಸರ್ಕಾರದ ವಿರುದ್ಧವೂ ನಾವು ನಿಂತಿದ್ದೀವಿ’ ಎನ್ನುತ್ತಾರೆ ಕಾಂಗ್ರೆಸ್‍ನಿಂದ ಆ ಭಾಗದಲ್ಲಿ 2011-15ರ ಅವಧಿಯಲ್ಲಿ ಜಿಪಂ ಸದಸ್ಯರಾಗಿದ್ದ ಶರಣಪ್ಪ. ‘ಜನರ ಬದುಕು, ಇಲ್ಲಿನ ಅಗ್ರಿಕಲ್ಚರ್ ಎಲ್ಲ ಎಕ್ಕುಟ್ಟಿ ಹೋಗುವಾಗ ಪಾರ್ಟಿ-ಗೀರ್ಟಿ ನೋಡಬಾರ್ದಲ್ಲರಿ?’ ಎನ್ನುತ್ತಾರೆ.

ಇನ್ಸುರನ್ಸ್ ಉದ್ಯೋಗಿಯಾಗಿದ್ದು ಆ ಹೋರಾಟದಲ್ಲಿ ಭಾಗವಹಿಸಿದ್ದ ಚನ್ನಬಸಯ್ಯ, ‘ಇವತ್ತು ಅದಾ ಪ್ರಾಬ್ಲಂ ಆಗೈತಿ. ಯಾವುದೋ ಪಕ್ಷದ ಸದಸ್ಯರು ಅಂತಾ ತಮಗ ತಾವ ಅನಕೊಂಡಿರುವ ಜನ್ರು ಕೂಡ ಪ್ರತಿಭಟನೆ ಅಂದ್ರ ಹಿಂದಕ್ಕ ಸರಿತಾರ…ಈ ಸಲ ನಾವು ಪ್ರೆಸ್‍ಗೆಲ್ಲ ಮಾಹಿತಿ ಕೊಟ್ಟೀವಿ…ಹೋರಾಟನೂ ಶುರು ಮಾಡ್ತೀವಿ…’ ಎಂದರು.

ಜಿಂದಾಲಿನ ಹೆಡ್ ಆಫೀಸ್ ಇರುವ ತೋರಣಗಲ್ಲಿನ ಈ ಇಬ್ಬರು ನಮ್ಮ ಪೋರ್ಟಲ್ ಮುಂದೆ ತೆರೆದಿಟ್ಟ ಜಿಂದಾಲಿನ ಕತೆ ಮತ್ತು ಜನರ ವ್ಯಥೆ ಇಲ್ಲಿದೆ. ಇಡೀ ರಾಜಕೀಯ ವ್ಯವಸ್ಥೆಯೇ ಹೇಗೆ ಜಿಂದಾಲ್ ಪರ ಎನ್ನುವುದರ ಒಳಸುಳಿಗಲೂ ಇವೆ:

“ತೋರಣಗಲ್ ಮತ್ತು ಸುತ್ತಮುತ್ತಲಿನ ಹಳ್ಳಿಗಳೆಲ್ಲ ಇವತ್ತು ಸ್ಲಮ್ ತರಹ ಆಗಿವೆ. ಜನರ ಆರೋಗ್ಯ ಮತ್ತು ಹಳ್ಳಿಗಳ ಬದುಕಿನ ಸ್ವಾಸ್ಥ್ಯವನ್ನೇ ಹಾಳು ಮಾಡುವ ಡಾಂಬರು ಪ್ಲಾಂಟು ಇಲ್ಲಿ ಬೇಡ. ಇಲ್ಲಿನ ಪರಿಸರಕ್ಕೆ ಇದು ಮಾರಕ. ಪ್ಲಾಂಟಿನ ಕಲ್ಮಷ ಅಂತರ್ಜಲಕ್ಕೆ ಸೇರಿದರೆ ದೊಡ್ಡ ಅಪಾಯ ಎಂದು ಹೋರಾಟ ಕಟ್ಟಿದ್ದೆವು. ತೋರಣಗಲ್, ಹಂಸಾಪುರ, ಕುಡತಿನಿ ಜನರೆಲ್ಲ ನಮಗೆ ಸಪೋರ್ಟು ಮಾಡಿದ್ದರು. ಆದರೆ ಈ ಪ್ರತಿಭಟನೆ ನೋಡಿ ದಂಗಾದ ಜಿಂದಾಲ್ ಜಿಲ್ಲೆಯ ಆಡಳಿತ ವ್ಯವಸ್ಥೆಯ ನೆರವು ಪಡೆದು ಜನರಲ್ಲಿ ಭೀತಿ ಉಂಟು ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕಿತು. ಎಲ್ಲ ಪಕ್ಷಗಳ ಪ್ರಮುಖರೂ ಜಿಂದಾಲಿನ ಫಲಾನುಭವಿಗಳೇ ಆಗಿರುವುದರಿಂದ ಹೊರಗಿನ ಸಂಘಟನೆಗಳ ನೆರವನ್ನೂ ಪಡೆದು ಮತ್ತೆ ಹೋರಾಟ ಕಟ್ಟಬೇಕಿದೆ….

1971ರಲ್ಲಿ ಇಲ್ಲಿ ಸರ್ಕಾರಿ ಸ್ವಾಮ್ಯದ ಉಕ್ಕಿನ ಘಟಕ ಸ್ಥಾಪಿಸಲು ನಿರ್ಧರಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು 1972ರಲ್ಲಿ ನೋಟಿಫಿಕೆಷನ್ ಹೊರಡಿಸಿದರು. 1972ರಲ್ಲಿ ಇಲ್ಲಿ ಪ್ರತಿ ಎಕರೆಗೆ ಕೇವಲ 800ರಿಂದ 1,200 ರೂಗೆ ನೀಡಿ ಭೂಸ್ವಾಧಿನ ಮಾಡಿಕೊಳ್ಳಲಾಗಿತ್ತು. 1991-92ರಲ್ಲಿ ಮನಮೋಹನಸಿಂಗ್ ಸರ್ಕಾರದಲ್ಲಿ ಉಕ್ಕು ಖಾತೆಯ ಸಚಿವರಾಗಿದ್ದ ಇಲ್ಲಿನ ಸಂಸದ ಬಸವರಾಜ ಪಾಟೀಲ ಅನ್ವರಿಯವರು ದೆಹಲಿಯಲ್ಲಿ ಒಂದು ಪ್ರೆಸ್ ಮೀಟ್ ಮಾಡಿ, ನಷ್ಟದಲ್ಲಿರುವ ಸರ್ಕಾರಿ ಉಕ್ಕು ಉದ್ಯಮಗಳನ್ನು ಖಾಸಗಿಯವರಿಗೆ ಕೊಡುವ ನಿರ್ಧಾರ ಪ್ರಕಟಿಸಿದರು. ಅವರ ಮೂಲ ಉದ್ದೇಶವೇ ವಿಜಯನಗರ ಸ್ಟೀಲ್ಸ್ ಅನ್ನು ಜಿಂದಾಲ್ಗೆ ನೀಡೋದೇ ಆಗಿತ್ತು….ಕಾರ್ಮಿಕ ಸಂಘಟನೆಗಳ ಹೋರಾಟಗಳನ್ನೆಲ್ಲ ಮುರಿಯಲಾಗಿತು.

1994ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್‍ನ ಭೂಮಿಪೂಜೆ ನಡೆದೇ ಹೋಯ್ತು. ವಿಜಯನಗರ ಸ್ಟೀಲ್ಸ್‍ನ ಭೂಮಿಯೆಲ್ಲ ಜಿಂದಾಲ್ ಪಾಲಾಯಿತು. ಆಗ ರೈತರಿಗೆ ಎಕ್ಸಗ್ರೇಸಿಯಾ ಅಂತ 5 ಸಾವಿರ ಕೊಟ್ಟು ಮರಳು ಮಾಡಿದರು. ಲೀಸ್‍ನಲ್ಲಿರುವ ಈ ಭೂಮಿಯನ್ನು ಹತ್ತು ವರ್ಷಕ್ಕೊಮ್ಮೆ ರಿನೀವಲ್ ಮಾಡಬೇಕು. 2006ರಲ್ಲಿ ರಿನೀವಲ್ ಮಾಡುವಾಗ ಮತ್ತೆ ಭೂಮಿ ಕಳೆದುಕೊಂಡ ರೈತರಿಗೆ 5 ಸಾವಿರ ಎಕ್ಸ್‍ಗ್ರೇಸಿಯಾ ಕೊಟ್ಟು ಹಿಂದಕ್ಕೆ ತಳ್ಳಿದರು. ಫಲವತ್ತಾದ ಭೂಮಿ, ನೀರಿನ ಅನುಕೂಲವನ್ನು ಪಡೆದ ಭೂಮಿಯೂ ಉಕ್ಕಿಗಾಗಿ ನೆಗೆದು ಬಿದ್ದಂತಾಯಿತು…

ವ್ಯಾಪಾರದಲ್ಲಿ ಎಷ್ಟ ಕಿತ್ತಾಟ ಇರ್ಲಿ, ಅದಿರುಗಳ್ಳರೆಲ್ಲ ಇಂತಹಾ ವಿಷ್ಯದೊಳಗ ಒಂದಾಗ್ತಾರ..ಯಡಿಯೂರಪ್ಪ ಇದ್ದಾಗ ಇವರದೇ ಸಾಮ್ರಾಜ್ಯ ಮಾಡಿಕೊಂಡಿದ್ದರಲ್ಲ? ಅಕ್ರಮವಾಗಿ ಅದಿರು ಮಾರಿಕೊಂಡ ಆರೋಪವೂ ಜಿಂದಾಲ್ ಮ್ಯಾಲ ಇದೆ. ಸರ್ಕಾರ ವಶಪಡಿಸಿಕೊಂಡ ಅಕ್ರಮ ಅದಿರನ್ನು ಹರಾಜಿಗೆ ಹಾಕುವಾಗಲೂ ಇಲ್ಲಿ ದಂಧೆ ನಡೆತಾ ಇದೆ. ಉತ್ತಮ ದರ್ಜೇಯ ಅದಿರನ್ನು ಕಡಿಮೆ ದರ್ಜೆಯ ಅದಿರು ಎಂದು ನಮೂದಿಸುವ ಅಧಿಕಾರಿಗಳು ಜುಜುಬಿ ರೇಟಿಗೆ ಜಿಂದಾಲ್‍ನಂತಹ ಕಂಪನಿಗಳಿಗೆ ಮಾರಿ ತಾವೂ ದುಂಡಗಾಗ್ತಾರ…ಎಲ್ಲ ಪಾರ್ಟಿಗಳಿಗೂ ಇದೆಲ್ಲ ಗೊತ್ತು….

ಅತ್ಯಂತ ಬೆಲೆಬಾಳುವ ಭೂಮಿಯನ್ನು ತೀರಾ ಕಡಿಮೆ ರೊಕ್ಕಕ್ಕೆ ಮಾರಿದ ಬಡ ರೈತರು ಇವತ್ತಿಗೂ ಸರಿಯಾದ ಬದುಕು ಕಟ್ಟಿಗೊಂಡಿಲ್ಲ. ಈಗ ಮತ್ತೆ ಲೀಸ್ ಭೂಮಿಯನ್ನು ತೀರಾ ಕಡಿಮೆ ದರಕ್ಕೆ ಕ್ರಯಪತ್ರ ಮಾಡಾಕ್ ಹೊರಟ ಸರ್ಕಾರದ ವಿರುದ್ಧ ರಾಜ್ಯದ ತುಂಬ ದೊಡ್ಡ ದನಿ ಎತ್ತಬೇಕು. ರಾಜಕೀಯ ಪಕ್ಷಗಳನ್ನು ಈ ಹೋರಾಟದ ಸನಿಹಕ್ಕೂ ಬಿಡಬಾರದು. ಅವೂ ಬರೋದೂ ಇಲ್ಲ ಬಿಡ್ರಿ…

ಆಗೀಗ ಕೊಟ್ಟ ಭೂಮಿ ಲೆಕ್ಕ ಹಾಕಿದ್ರ ಜಿಂದಾಲ್ ಹತ್ರ ಈಗ ಸಾವಿರ ಎಕರೆ ಭೂಮಿನ ಇರಬಹುದು. ಡಾಂಬರು. ಪೇಂಟ್ಸ್ ಅಂತಾ ಕೆಮಿಕಲ್ ವ್ಯಹಾರಕ್ಕ ಅವ್ರು ಬ್ಯಾರೆದಾರ ಜತಿ ಒಪ್ಪಂದ ಮಾಡಿಕೊಂತ ಹೊಂಟಾರ,,,ಇದೂ ಒಂದ ತರಹ ರಿಯಲ್ ಎಸ್ಟೇಟ್ ದಂಧೇನಾ…ಸಿಎಸ್‍ಆರ್ ಯೋಜನೆ ಅಡಿ ಇಲ್ಲಿಯ ಹಳ್ಳಿಗಳ ಶಾಲೆಗಳನ್ನಾದರೂ ದತ್ತು ತಗೋಬಹುದಿತ್ತು.. ಆದರೆ ಪ್ರವಾಸಿಗರು ಬರುವ ಹೊಸಪೇಟೆ ಬಸ್‍ಸ್ಟ್ಯಾಂಡ್ ಸೌಂದರ್ಯೀಕರಣ ಮಾಡ್ಯಾರ…ಇಲ್ಲಿವರೆಗೆ ಇಪ್ಪಂದದಂತೆ ಜಿಂದಾಲ್ ನಡೆದುಕೊಂಡಿದೆಯಾ, ಸ್ಥಳಿಯರಿಗೆ ಎಷ್ಟು ಕೆಲಸ ನೀಡಿದೆ ಇವೆಲ್ಲವನ್ನೂ ಸಾರ್ವಜನಿಕರ ಮುಂದೆ ಇಡುವ ಕೆಲಸವನ್ನು ಸರ್ಕಾರ ಮೊದಲು ಮಾಡ್ಲಿ… ಆಮ್ಯಾಲ ಹ್ಯಂಗ ಭೂಮಿ ಕೊಡ್ತಾರ ನೋಡೋಣಂತ….”

ಇವು ಹೋರಾಟದ ಮುಂಚೂಣಿ ವಹಿಸಿದ್ದ ಹತ್ತಾರು ಮುಂದಾಳುಗಳಲ್ಲಿದ್ದ ಶರಣಪ್ಪ ಮತ್ತು ಚನ್ನಬಸಯ್ಯರ ಮಾತುಗಳು. ಬಳ್ಳಾರಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳೆಲ್ಲ ಸೇರಿ ಒಂದು ದೊಡ್ಡ ಆಂದೋಲನ ಕಟ್ಟುತ್ತಿವೆ ಎಂಬ ಮಾತು ಕೇಳಿ ಬಂದಿವೆ. ಅದೂ ಆದಷ್ಟು ಬೇಗ ಶುರುವಾಗಲಿ… ಗಟ್ಟಿಗೊಳ್ಳಲಿ ಎಂಬುದು ನಮ್ಮ ಆಶಯ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...