Homeಸಾಮಾಜಿಕಪೋಸ್ಟ್ ಕಾರ್ಡ್ ಸೈಜಿನ ಫೇಕ್ ಫ್ಯಾಕ್ಟರಿಗೆ ಬಿತ್ತು ಬೀಗ!

ಪೋಸ್ಟ್ ಕಾರ್ಡ್ ಸೈಜಿನ ಫೇಕ್ ಫ್ಯಾಕ್ಟರಿಗೆ ಬಿತ್ತು ಬೀಗ!

- Advertisement -
- Advertisement -

ಕಡೆಗೂ ಎಚ್ಚೆತ್ತುಕೊಂಡ ಫೇಸ್‍ಬುಕ್ಕು ಕೆಟ್ಟದೊಂದು ಪುಟಕ್ಕೆ ಫುಲ್‍ಸ್ಟಾಪ್ ಇಟ್ಟಿದೆ. ಅದು `ಪೋಸ್ಟ್‍ಕಾರ್ಡ್’! ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಆರೆಸ್ಸೆಸ್ ಮಾಣಿ ನಡೆಸುತ್ತಿದ್ದ ಫೇಕ್ ನ್ಯೂಸ್‍ಗಳ ಸುಳ್ಳಿನ ಫ್ಯಾಕ್ಟರಿಯಂತಿದ್ದ ಅದು ಬಿತ್ತರಿಸುತ್ತಿದುದ್ದೆಲ್ಲ ಕೋಮು ಪ್ರಚೋದಕ ಸುಳ್ಳುಗಳನ್ನು. ಸಮಾಜದ ಸ್ವಾಸ್ಥ್ಯ ಕದಡುವ, ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಸೈಬರ್ ಕ್ರೈಮ್ ಪೊಲೀಸರು ಮಹೇಶ್ ವಿಕ್ರಂ ಹೆಗ್ಡೆಯನ್ನು ಅರೆಸ್ಟ್ ಮಾಡಿ ಜೈಲಿಗೂ ಗದುಮಿದ್ದರು. ಈಗ ಎಚ್ಚೆತ್ತುಕೊಂಡಿರುವ ಫೇಸ್‍ಬುಕ್ ಕೋಮುಕ್ರಿಮಿಯಿಂದ ತನಗೆ ಅಂಟಬಹುದಾದ ಕಳಂಕವನ್ನು ತೊಳೆದುಕೊಳ್ಳಲು ಆತನ ಪೋಸ್ಟ್‍ಕಾರ್ಡ್ ನ್ಯೂಸ್ ಫೇಸ್‍ಬುಕ್ ಪೇಜನ್ನು ರದ್ದು ಮಾಡಿ ಮಾನಸ್ಥ ಮನುಷ್ಯರ ಕೊಂಚ ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಅಸಲಿಗೆ, ಬಿಜೆಪಿ ಮತ್ತು ಸಂಘ ಪರಿವೆಂದರೇನೆ ಪೇಕ್‍ನ್ಯೂಸ್‍ಗಳ ಪಿತೃಸ್ಥಾನಗಳಂತೆ ಎಂಬ ಆರೋಪವಿದೆ. ಅದನ್ನು ನಿಜ ಮಾಡುವಂತೆಯೇ ಅವರ ವರ್ತನೆಗಳಿರೋದು ದುರಾದೃಷ್ಟ. ರಾಜಕೀಯ ದುರುದ್ದೇಶದಿಂದ ಸೃಷ್ಟಿಸಿ, ಹರಿದಾಡಿಸಲ್ಪಟ್ಟ ಫೇಕ್ ನ್ಯೂಸ್‍ಗಳು ಜನರ ನೆಮ್ಮದಿಯನ್ನೇ ಹಾಳುಗೆಡವುತ್ತಿರೋದು ಈ ಸಂದರ್ಭದ ದುರಂತ. ಕನ್ನಡದ ವಾತಾವರಣದ ಮಟ್ಟಿಗೆ ಅಂತಹ ಸುದ್ದಿಗಳಿಗೆಲ್ಲ ತವರುಮನೆಯಂತಿದ್ದಿದ್ದು ಈ ಪೋಸ್ಟ್‍ಕಾರ್ಡ್ ವೆಬ್‍ಸೈಟು ಮತ್ತದರ ಫೇಸ್‍ಬುಕ್ ಪೇಜು!
ಮಹೇಶ್ ವಿಕ್ರಮ್ ಹೆಗ್ಡೆಯ ಈ ಪೇಜ್‍ನಲ್ಲಿ ಮುಸ್ಲಿಂ ಸಮುದಾಯದ ವಿರುದ್ದ ಹಿಂದೂತ್ವದ ಕೋಮುಭಾವನೆ ಬಿತ್ತುವಂತ ಸುದ್ದಿಗಳದ್ದೇ ಕಾರುಬಾರು. ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವರ ಬಗ್ಗೆ ಅಶ್ಲೀಲ ಪೋಸ್ಟ್ ಹಾಕಿದ್ದ ಈತ, ಮಾರ್ಚ್ 18ರಂದು ಆಕ್ಸಿಡೆಂಟ್‍ನಲ್ಲಿ ಮರಣ ಹೊಂದಿದ್ದ ಜೈನ ಸನ್ಯಾಸಿಯನ್ನು ಮುಸ್ಲಿಂ ಯುವಕರು ಕೊಲೆ ಮಾಡಿದ್ದಾರೆಂದು ತನ್ನ ಪೋಸ್ಟ್‍ಕಾರ್ಡ್ ಪೇಜ್‍ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ಸುಳ್ಳನ್ನು ಆಧಾರವಾಗಿಟ್ಟುಕೊಂಡೇ ಮಾರ್ಚ್ 29ರಂದು ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ 66 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅರೆಸ್ಟ್ ಮಾಡಿ, ಸಿಲವರ್ ತಟ್ಟೆಯಲ್ಲಿ ಜೈಲೂಟ ಬಡಿಸಿದ್ದರು. ಈತನನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಕಂ ಕಾಂಟ್ರವರ್ಸಿ ಕಿಂಗ್ ಅನಂತಕುಮಾರ್ ಹೆಗಡೆಯನ್ನೂ ಒಳಗೊಂಡಂತೆ ಬಿಜೆಪಿಯ ಹಲವಾರು ಲೀಡರುಗಳು ಒಂದು ಕ್ಯಾಂಪೇನನ್ನೇ ನಡೆಸಿದ್ದರು! ಮಹೇಶ್ ವಿಕ್ರಂ ಹೆಗ್ಡೆಯ ಫೇಕ್ ನ್ಯೂಸ್‍ಗಳ ಫಲಾನುಭವಿಗಳು ಯಾರು ಅನ್ನೋದಕ್ಕೆ ಇದೊಂದು Phಥಿsiಛಿಚಿಟ ನಿದರ್ಶನವಷ್ಟೆ. ಅಂದಹಾಗೆ, ಬಿಜೆಪಿ ಸಂಸದ ಪ್ರತಾಪ್ ಸಿಂಗ ಹೆಗ್ಡೆ ಈತನ ಅತ್ಯಾಪ್ತ!
ಹಾಗೆ ನೋಡಿದರೆ, 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಭರಪೂರ ಫಸಲು ತಂದುಕೊಡುವಲ್ಲಿ ಇಂಥಾ ಫೇಕ್‍ಸುದ್ದಿ ವೀರರ ಪಾತ್ರವೂ ಇತ್ತೆಂದರೆ ತಪ್ಪಾಗಲಿಕ್ಕಿಲ್ಲ. ಮೋದಿಯ ಸುಳ್ಳು ಪೊಳ್ಳು ಭಾಷಣಗಳನ್ನು ಹೈಲೈಟ್ ಮಾಡಿ, ಫೋಟೋಶಾಪ್‍ನಲ್ಲೇ ಗುಜರಾತ್ ಅಭಿವೃದ್ಧಿಯನ್ನು ಸೃಷ್ಟಿಸಿ ಜನರ ನಡುವೆ ಹರಿಯಬಿಟ್ಟ ಇಂತವರಿಂದಾಗಿಯೇ ಮೋದಿ ಸಲೀಸಾಗಿ ಗದ್ದುಗೆ ಏರಲು ಸಾಧ್ಯವಾದದ್ದು. ಅಂತವರಿಂದ ಪ್ರೇರಣೆ ಪಡೆದೇ ವಿಕ್ರಂ ಹೆಗ್ಡೆ ಪೋಸ್ಟ್‍ಕಾರ್ಡ್‍ಗೆ ಜನ್ಮಕೊಟ್ಟಿದ್ದ. ಹಿಂದೂತ್ವದ, ರಾಷ್ಟ್ರಪ್ರೇಮದ ಹುಸಿ ಸುದ್ದಿಗಳ ಜೊತೆಗೆ ಮುಸ್ಲಿಂ ವಿರೋಧಿ ಒಗ್ಗರಣೆ ಬೆರೆಸಿ ಆತ ಬಿಡುಗಡೆ ಮಾಡುತ್ತಿದ್ದ ಪೋಸ್ಟ್‍ಗಳು ಕೋಮುಗಲಭೆ ಹಬ್ಬಲು ಏನು ಬೇಕೊ ಅದೆಲ್ಲವನ್ನು ಒಳಗೊಂಡಿರುತ್ತಿದ್ದವು. ಅಂತಹ ‘ಪೋಸ್ಟ್‍ಕಾರ್ಡ್ ನ್ಯೂಸ್’ ಫೇಸ್‍ಬುಕ್ ಪೇಜ್‍ನ ವಿರುದ್ಧ ಪ್ರಜ್ಞಾವಂತ ಜನರು ಫೇಸ್‍ಬುಕ್ ಮ್ಯಾನೆಜ್‍ಮೆಂಟ್‍ಗೆ ದೂರುತ್ತಲೇ ಬಂದಿದ್ದರು. ಆದರೆ ಮಾರ್ಕ್ ಜುಗರ್‍ಬರ್ಗ್‍ನ ಫೇಸ್‍ಬುಕ್ಕು ಎಚ್ಚೆತ್ತುಕೊಂಡಿರಲಿಲ್ಲ.
ಯಾವಾಗ ಫೇಕ್‍ಪೇಜ್‍ನ ಪಿತಾಮಹನನ್ನು ಪೊಲೀಸರು ಅರೆಸ್ಟ್ ಮಾಡಿದರೋ ಆಗ ಎಚ್ಚೆತ್ತುಕೊಂಡ ಫೇಸ್‍ಬುಕ್ ಆತನ ವಿರುದ್ಧ ತನಗೆ ಹರಿದುಬಂದ ಬೃಹತ್ ದೂರುಗಳನ್ನು ಮುಂದಿಟ್ಟುಕೊಂಡು ಜುಲೈ 16ರಂದು ಡಿಆಕ್ಟಿವೇಟ್ ಮಾಡಿದೆ. ಪೋಸ್ಟ್ ಕಾರ್ಡು ಇಷ್ಟು ದಿನ ಪ್ರಕಟಿಸಿದ್ದ ಸುದ್ದಿಗಳಲ್ಲಿ ಶೇ. 96ರಷ್ಟು ಸುದ್ದಿಗಳು ಮುಸ್ಲಿಂ ವಿರೋಧಿಯಾಗಿದ್ದವೆನ್ನುವುದು ವಿಕ್ರಂ ಹೆಗ್ಡೆಯ ಉದ್ದೇಶವನ್ನು ಬಿಚ್ಚಿಡುತ್ತದೆ.
ಈ ಕೇಸರಿ ಮಂದಿ ಅದೆಷ್ಟು ದೂ(ದು)ರಾಲೋಚನೆ ಹೊಂದಿರುತ್ತಾರೆಂದರೆ, ಮಾರ್ಚ್‍ನಲ್ಲಿ ವಿಕ್ರಂ ಹೆಗ್ಡೆ ಅರೆಸ್ಟಾಗುತ್ತಿದ್ದಂತೆಯೇ, ಸದ್ಯದಲ್ಲೇ ತಮ್ಮ ಫೇಸ್‍ಬುಕ್ ಪೇಜ್ ಕೂಡಾ ರದ್ದಾಗಬಹುದೆನ್ನುವುದನ್ನು ಅಂದಾಜಿಸಿ, ಏಪ್ರಿಲ್‍ನಲ್ಲಿ ಅದೇ ಹೆಸರಿನಲ್ಲಿ ಮತ್ತೊಂದು ಇಂಗ್ಲಿಷ್ ಭಾಷೆಯ ಪೇಜ್ ಓಪನ್ ಮಾಡಿದ್ದರು. ಪೋಸ್ಟ್‍ಕಾರ್ಡ್ ಇಂಗ್ಲಿಷ್ ನ್ಯೂಸ್ ಎಂಬ ಹೆಸರಿನ ಆ ಪುಟ ಕನ್ನಡ ಪೋಸ್ಟ್‍ಕಾರ್ಡ್ ಪುಟದ ವಿನ್ಯಾಸ, ಲೋಗೊಗಳನ್ನೇ ಹೊಂದಿದೆ. ಇತ್ತ ಫೇಸ್‍ಬುಕ್, ಕನ್ನಡದ ಪೋಸ್ಟ್ ಕಾರ್ಡ್ ರದ್ದು ಮಾಡುತ್ತಿದ್ದಂತೆಯೇ, ಇಂಗ್ಲಿಷ್ ಪುಟದ ಲಿಂಕನ್ನು ಮುಂಚೂಣಿಗೆ ತಂದು, ತಮ್ಮ ಪುಟವನ್ನು ಫೇಸ್‍ಬುಕ್ ರದ್ದು ಮಾಡಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ಜನರನ್ನು ಯಾಮಾರಿಸಲು ಯತ್ನಿಸಿತ್ತು. ಆದರೆ ಅಧಿಕೃತ ಮೂಲಗಳೇ ಫೇಸ್‍ಬುಕ್ ನಿರ್ಣಯವನ್ನು ಖಾತ್ರಿಪಡಿಸಿದ ತರುವಾಯ ಇದೀಗ ಅವರ ಬಣ್ಣ ಬಯಲಾಗಿದೆ. ಆದರೇನಂತೆ ಇಂಗ್ಲಿಷ್ ಪುಟದಲ್ಲಿ ಯಥಾ ಪ್ರಕಾರ ತಮ್ಮ ಕೋಮುವಾಂತಿಯನ್ನು ಮುಂದುವರಿಸಿದ್ದಾರೆ. ಫೇಸ್‍ಪುಸ್ತಕ ಅದಕ್ಕೆ ಯಾವಾಗ ಒಂದು ಗತಿ ಕಾಣಿಸುತ್ತೋ ನೋಡಬೇಕು.

-ಸೋಮಶೇಖರ್ ಚೆಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...