Homeರಾಜಕೀಯಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

ಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

- Advertisement -
ಢೋಂಗಿ ಪರಿಸರ ಪರಾಕ್ರಮಿಗಳ ದಗಲುಬಾಜಿ ಆಟದಿಂದ ಉತ್ತರ ಕನ್ನಡಿಗರೀಗ ಬೇಸತ್ತು ಹೋಗಿದ್ದಾರೆ. ಮೂಲತಃ ತಮ್ಮ ಅಡಿಕೆ ತೋಟಗಳ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಹವ್ಯಕ ಬ್ರಾಹ್ಮಣರ ಮುಖವಾಡವಾಗಿಯಷ್ಟೆÃ ಚಲಾವಣೆಗೆ ಬರುವ ಈ ಢೋಂಗಿ ಪರಿಸರವಾದ ಅಬ್ರಾಹ್ಮಣ ಸಮುದಾಯಗಳಿಗೆ ದಕ್ಕೆಯಾಗುವ ಯಾವ ಯೋಜನೆಗಳಿಗೂ ಚಕಾರವೆತ್ತುವುದಿಲ್ಲ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಯಿಂದ ಅನಂತ್ ಹೆಗಡೆ ಆಶೀಸರನಂಥ ಬ್ರಾಹ್ಮಣ ಜಾತ್ಯಸ್ಥರೆಲ್ಲ ಪರಿಸರವಾದವನ್ನು ತಮ್ಮಿಷ್ಟದಂತೆ ಕನವರಿಸೋದು ತಮ್ಮ ಜಾತಿಯ ಹಿತ ಕಾಪಾಡುವುದಕ್ಕಷ್ಟೆÃ!
ಜಿಲ್ಲೆಯ ಅಭಿವೃದ್ಧಿಗೆ ಅನಿವಾರ್ಯ ಅಗತ್ಯವಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಗಾಲು ಹಾಕುವ ಈ ಪ್ರಚಂಡರು, ತಮ್ಮ ಶಿರಸಿ-ಯಲ್ಲಾಪುರ ಹೈಗರ ಸೀಮೆಗೆ ಅನುಕೂಲವಾಗುವ ತಾಳಗುಪ್ಪಾ-ಸಿದ್ಧಾಪುರ-ಶಿರಸಿ-ಹಾವೇರಿ ರೈಲು ಮಾರ್ಗಕ್ಕೆ ಒತ್ತಾಯಿಸುತ್ತಾರೆ. ಆಗ ಆಗುವ ಪರಿಸರ-ಅರಣ್ಯ ನಾಶ ಇವರಿಗೆ ಕಾಣಿಸುವುದಿಲ್ಲ. ಈ ದ್ವಿಮುಖ ನಾಟಕದ ಪರಿಸರವಾದಿ ತಂಡದಲ್ಲಿ ಆರಂಭದಲ್ಲಿ ಕೇಂದ್ರ ಮಂತ್ರಿ ಅನಂತ್ಮಾಣಿಯೂ ಇದ್ದ. ಯಾವಾಗ ಅನಂತ್ ಹೆಗಡೆ ಆಶೀಸರ ಎಂಬ ಮತ್ತೊÃರ್ವ ಬ್ರಾಹ್ಮಣ ಪಟು ಪರಿಸರ ಹೋರಾಟವನ್ನೆÃ ತನ್ನ ಚೆಡ್ಡಿ ರಾಜಕಾರಣಕ್ಕೆ ಚಿಮ್ಮುಹಲಗೆ ಮಾಡಿಕೊಳ್ಳಲು ಹವಣಿಸಿದನೋ ಆಗ ಅನಂತ್ಮಾಣಿ ತಿರುಗಿಬಿದ್ದ. ಒಂದು ಹಂತದಲ್ಲಿ ಈ ಪರಿಸರವ್ಯಾಧಿ ಅಶೀಸರ ಆರೆಸ್ಸೆಸ್ ಸಂಪರ್ಕ ಸಾಧಿಸಿ, ಮಾಣಿಗೆ ಕೊಕ್ ಕೊಟ್ಟು  ಬಿಜೆಪಿ ಸಂಸದಗಿರಿ ಟಿಕೆಟ್ ತರಲು ಹವಣಿಸಿದ್ದೂ ಇದೆ. ಅದೇ ಕಾರಣಕ್ಕೆ ಅನಂತ್ಮಾಣಿ ಈಗ ಈ ಪರಿಸರ ಗ್ಯಾಂಗನ್ನು ಅಭಿವೃದ್ಧಿ ವಿರೋಧಿ ಅಡ್ನಾಡಿಗಳು ಎಂಬಂತೆ ಮೂದಲಿಸುತ್ತಿದ್ದಾನೆ.
ಢೋಂಗಿ ಪರಿಸರವಾದಿ ತಂಡದ ಕೆಟ್ಟ ಕಣ್ಣಿÃಗ ಕುಮಟಾ-ಶಿರಸಿ ರಸ್ತೆ ಅಗಲೀಕರಣ ಯೋಜನೆ ಮೇಲೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿದ್ದ ಸದ್ರಿ ರಸ್ತೆಯನ್ನು ಹಾವೇರಿಯಿಂದ ಕುಮಟಾವರೆಗೆ ರಾಷ್ಟಿçಯ ಹೆದ್ದಾರಿ 766ಇ ಎಂದು ಘೋಷಿಸಲಾಗಿದೆ. ಸಾಗರಮಾಲಾ ಯೋಜನೆಯಲ್ಲಿ ಮಂಜೂರಾಗಿರುವ ಈ 60 ಕಿ.ಮೀ ಉದ್ದದ ರಸ್ತೆ ಯೋಜನಾ ವೆಚ್ಚ ಬರೋಬ್ಬರಿ 360.60 ಕೋಟಿ ರೂಪಾಯಿಗಳು. ಈ ಕಾಮಗಾರಿ ಗುತ್ತಿಗೆ ಆರ್‌ಎನ್‌ಎಸ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಸಹಭಾಗಿತ್ವದಲ್ಲಿ ಪಡೆದುಕೊಂಡಿವೆ. ಯೋಜನೆಯ ವಿಸ್ತೃತ ವರದಿ(ಡಿಪಿಆರ್)ನಂತೆ ಈಗಿರುವ ರಸ್ತೆಯನ್ನು 11 ಮೀಟರ್‌ನಿಂದ 18 ಮೀಟರ್ ಅಗಲ ಮಾಡಲಾಗುತ್ತದೆ. ಈಗಿರುವ 11 ಸೇತುವೆಗಳನ್ನು ಪುನರ್ ನಿರ್ಮಿಸಲಾಗುತ್ತದೆ.
ಹಾಗೆ ನೊಡಿದರೆ ಈ ಅಗಲೀಕರಣ ಬಹುದಿನದ ಅಗತ್ಯವಾಗಿತ್ತು. ಆದರೆ ಇಲ್ಲಿಯ ಹೊಣೆಗೇಡಿ ಎಂಪಿ, ಎಮ್ಮೆಲ್ಲೆ, ಮಿನಿಸ್ಟರ್‌ಗಳು ಎಷ್ಟೆÃ ಸಾವು-ನೋವಾದರೂ, ಸರಕು ಸಾಗಾಣಿಕೆಗೆ ತೊಂದರೆಯಾದರೂ, ಅಭಿವೃದ್ಧಿ ವೇಗಕ್ಕೆ ಬ್ರೆÃಕ್ ಬಿದ್ದಿದ್ದರೂ ತಲೆಯೇ ಕೆಡಿಸಿಕೊಂಡಿರಲಿಲ್ಲ. ಆದರೆ ಸದ್ರಿ ಯೋಜನೆಯ ಪ್ರಸ್ತಾಪ ಹೊರೆ ಬೀಳುತ್ತಿದ್ದಂತೆಯೇ ಘಟ್ಟದ ಮೇಲಿನ ಪರಿಸರ ವ್ಯಾಧಿ ತಂಡ ಹುಸಿ ಹಸಿರು ಕಳಕಳಿ ಪ್ರದರ್ಶಿಸತೊಡಗಿದೆ. ಅನಂತ ಹೆಗಡೆ ಆಶೀಸರನ ಗ್ಯಾಂಗ್ ಪಶ್ಚಿಮ ಘಟ್ಟ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ ಬರುತ್ತದೆ; ಗಿಡಮೂಲಿಕೆ ಸಂರಕ್ಷಿತ ದೇವಿಮನೆ ಘಟ್ಟ ಪ್ರದೇಶ ಧ್ವಂಸವಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದೆ. ಕಂಡ-ಕಂಡ ಅಧಿಕಾರಿಗಳಿಗೆಲ್ಲಾ ಮನವಿ ಕೊಟ್ಟು ಉದ್ದುದ್ದ ಬೋಗಸ್ ಭಾಷಣ ಬಿಗಿಯುತ್ತಿದ್ದಾರೆ.
ಆದರೆ ವಾಸ್ತವ ಇವರೇಳುವಷ್ಟು ಭೀಭತ್ಸವಾಗೇನೂ ಇಲ್ಲ. ದೇವಿಮನೆಯ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಸ್ತೆಯಿಂದ ತುಂಬ ದೂರದಲ್ಲಿದೆ. ಇಲ್ಲಿಯ ಔಷಧಿ ಮೂಲಿಕೆಗಳ ವಾಸ್ತವ ಸ್ಥಿತಿ ಅರಣ್ಯ ಇಲಾಖೆಗೂ ಗೊತ್ತಿಲ್ಲ. ಪರಿಸರ ವ್ಯಾಧಿಗಳು ಮಾತ್ರ ಅಮೂಲ್ಯ ಗಿಡಮೂಲಿಕೆಯಿದೆ ಎಂದು ಬೊಂಬಡಾ ಬಜಾಯಿಸುತ್ತಿದ್ದಾರೆ. ಸ್ವಾತಂತ್ರö್ಯ ನಂತರ ಶಿರಸಿ-ಕುಮಟಾ ರಸ್ತೆ ನಿರ್ಮಾಣವಾಗಿದೆ. ಆಗಾಗ ರಸ್ತೆ ಅಗಲೀಕರಣವೂ ಆಗಿದೆ. ಇದರಿಂದ ಗುಡ್ಡಗಳ ಕುಸಿತವಾಗಲಿ, ಹತ್ತಿರದ ಗ್ರಾಮಗಳಿಗೆ ಅನಾಹುತವಾಗಲಿ ಆಗಿದ್ದಿಲ್ಲ; ರಸ್ತೆ ಅಗಲೀಕರಣದಿಂದ ವನ್ಯಜೀವಿಗಳ ಓಡಾಟಕ್ಕೆ ಕಷ್ಟವಾಗಲಿದೆ ಎಂಬುದೇ ಹಾಸ್ಯಾಸ್ಪದ. ಈಗಾಗಲೇ ಇಲ್ಲಿ ರಸ್ತೆಯಿದೆ. ಹಗಲೂ-ಇರುಳು ವಾಹನ ಓಡಾಟವಿದೆ. ಪ್ರಾಣಿಗಳಿಗೆ ತೊಂದರೆಯೇನಾಗಿಲ್ಲ. ದೇವಿಮನೆ ಘಟ್ಟ-ಕಣಿವೆಯಲ್ಲಿ ವಿದ್ಯುತ್ ಮಾರ್ಗದ ಕಾರಿಡಾರ್ ಕೂಡ ಇದೆ. ಇದರಿಂದ ಪರಿಸರಕ್ಕೆ ಹಾನಿಯೇನಾಗಿಲ್ಲ. ಅಷ್ಟಕ್ಕೂ ಕಡಿಯುವುದು ರಸ್ತೆ ಅಂಚಿನ ಸ್ವಲ್ಪ ಕಾಡಷ್ಟೆÃ! ಹೆದ್ದಾರಿ ನಿರ್ಮಾಣದ ನಂತರ ಅಕ್ಕ-ಪಕ್ಕದಲ್ಲಿ ಮರ ಬೆಳೆಸಲು ಅವಕಾಶ ಇದ್ದೆÃಯಿದೆ.
ಮೂರು ದಶಕದಿಂದ ಹಾವೇರಿ-ಕುಮಟಾ-ತಡಸ-ಕುಮಟಾ ರಸ್ತೆ ಮೇಲ್ದರ್ಜೆಗೇರಿಸುವ ಬೇಡಿಕೆ ವಾಣಿಜ್ಯೊÃದ್ಯಮಿಗಳು, ಜನಸಾಮಾನ್ಯರು ಮಂಡಿಸುತ್ತಾ ಬಂದಿದ್ದರು. ಈ ರಸ್ತೆ ಅಗಲೀಕರಣ ಜಿಲ್ಲೆಯ ಅಭಿವೃದ್ಧಿಗೆ ಹೆಬ್ಬಾಗಿಲು. ಜಿಲ್ಲೆಯ ಬಂದರುಗಳ ಅಭಿವೃದ್ಧಿ ಇದರಿಂದಾಗುತ್ತದೆ. ಹುಬ್ಬಳ್ಳಿ-ಹಾವೇರಿ-ದಾವಣಗೆರೆ ಮುಂತಾದೆಡೆಯಿಂದ ಕರಾವಳಿಗೆ ಉತ್ಪಾದಿತ ವಸ್ತುಗಳ ರಫ್ತಿಗೆ ಉತ್ತೆÃಜನ ಸಿಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ, ಸ್ಕೊಬಾ ಡ್ರೆöÊವಿಂಗ್‌ಗೆ ಈ ಹೆದ್ದಾರಿ ಪೂರಕÀವಾಗುತ್ತದೆ. ಕಡಿಮೆ ಅವಧಿಯಲ್ಲಿ ಸುರಕ್ಷಿತ ಪ್ರಯಾಣ ಮಾಡಬಹುದು. ಈಗಿನದು ಯಮಯಾತನೆಯ ಪ್ರವಾಸ!! ರಸ್ತೆ ಅಗಲಿಕರಣ ಉದ್ಯಮಿಗಳಗಷ್ಟೆÃ ಅಲ್ಲ. ಶಿಕ್ಷಣ, ಆರೋಗ್ಯ, ಮತ್ತಿತರ ಕಾರಣಕ್ಕೆ ಕರಾವಳಿಯತ್ತ ಹೋಗುವವರಿಗೆ ಮತ್ತು ಕರಾವಳಿಯಿಂದ ಬಯಲು ಸೀಮೆಗೆ ಹೋಗುವವರಿಗೂ ವರದಾನವೇ ಸರಿ.
ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ತುಲನಾತ್ಮಕವಾಗಿ ಕಡಿಮೆ ಬಂಡವಾಳ ಸಾಕು. ಯಲ್ಲಾಪುರ-ಶಿರಸಿ-ಸಿದ್ಧಾಪುರ-ಮುಂಡಗೋಡ ತಾಲ್ಲೂಕುಗಳು ರೈಲು ಮಾರ್ಗ ಕಾಣುವುದು ಅನುಮಾನ ಎಂದು ಹೊಣೆಗೇಡಿ ಸಂಸದ ಕಮ್ ಕೇಂದ್ರ ಮಂತ್ರಿ ಅನಂತ್ಮಾಣಿಯೇ ಬಡಬಡಿಸುತ್ತಿದ್ದಾನೆ. ಹೀಗಿರುವಾಗ ರಾಷ್ಟಿçÃಯ ಹೆದ್ದಾರಿಯಾಗಿ ರಸ್ತೆ ಅಗಲೀಕರಣವೂ ಬೇಡವೆಂದರೆ ಹೇಗೆ? ಸ್ವಾರ್ಥಕ್ಕಾಗಿ ಪರಿಸರ ಸಂರಕ್ಷಣೆ ಪ್ರಹಸನ ಮಾಡುತ್ತಿರುವ ಹುಸಿ ಪರಿಸರವಾದಿಗಳಿಗೆ ಜನರೀಗ ಉಗಿಯುತ್ತಿದ್ದಾರೆ. ಉತ್ತರ ಕನ್ನಡಿಗರು ಈ ಛಲವನ್ನು ದಶಕದ ಹಿಂದೆಯೇ ತೋರಿಸಬೇಕಿತ್ತು. ಸೋಗಲಾಡಿ ಪರಿಸರ ಪರಾಕ್ರಮಿಗಳ ಬಂಡಲ್ ಭಾಷಣ, ಅಂಕಣ, ಮಾನವ ಸರಪಳಿಗಳಿಗೆ ಜಿಲ್ಲೆಯ ಮುಗ್ಧ ಜನ ಸಿಲುಕಿದ್ದರಿಂದಲೇ ಅಭಿವೃದ್ಧಿ ಕಾಣದಂತಾಯ್ತು. ಪರಿಸರವಾದಿಗಳ ಕಿರಿಕಿರಿಯೊಂದಿಲ್ಲದಿದ್ದರೆ ಎಂದೋ ಜಿಲ್ಲೆಗೆ ರೈಲು-ಸುಸಜ್ಜಿತ ರಸ್ತೆ, ಬಂದರು, ಬೃಹತ್ ಉದ್ಯಮ ಬರುತ್ತಿತ್ತು. ವಿದ್ಯೆ, ಉದ್ಯೊಗ, ವ್ಯವಹಾರಕ್ಕೆ ಗುಳೇ ಹೋಗುವುದು ತಪ್ಪುತ್ತಿತ್ತು. ಉತ್ತರ ಕನ್ನಡ ಪಕ್ಕದ ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡದಂತೆ ಪ್ರಗತಿ ಕಾಣುತ್ತಿತ್ತು.
ಈಗ ಜನರಿಗೆ ಪರಿಸರ ವ್ಯಾಧಿಗಳ ಬಣ್ಣ ಗೊತ್ತಾಗಿದೆ. ತದಡಿ ಬಂದರು ಬೇಕೆಂದು ಪರಿಸರವಾದಿಗಳಿಗೆ ತಿರುಗಿ ಬಿದ್ದಿದ್ದ ಜನರೀಗ ಕುಮಟಾ-ಹಾವೇರಿ ರಸ್ತೆ ಅಗಲೀಕರಣದ ಪರವಿದ್ದಾರೆ. ಇನ್ನಾದರೂ ಪರಿಸರವಾದಿಗಳು ದ್ರೊÃಹದ ಆಟ ನಿಲ್ಲಿಸುವರಾ?
– ಶುದ್ಧೊಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...