Homeರಾಜಕೀಯಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

ಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

- Advertisement -
ಢೋಂಗಿ ಪರಿಸರ ಪರಾಕ್ರಮಿಗಳ ದಗಲುಬಾಜಿ ಆಟದಿಂದ ಉತ್ತರ ಕನ್ನಡಿಗರೀಗ ಬೇಸತ್ತು ಹೋಗಿದ್ದಾರೆ. ಮೂಲತಃ ತಮ್ಮ ಅಡಿಕೆ ತೋಟಗಳ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಹವ್ಯಕ ಬ್ರಾಹ್ಮಣರ ಮುಖವಾಡವಾಗಿಯಷ್ಟೆÃ ಚಲಾವಣೆಗೆ ಬರುವ ಈ ಢೋಂಗಿ ಪರಿಸರವಾದ ಅಬ್ರಾಹ್ಮಣ ಸಮುದಾಯಗಳಿಗೆ ದಕ್ಕೆಯಾಗುವ ಯಾವ ಯೋಜನೆಗಳಿಗೂ ಚಕಾರವೆತ್ತುವುದಿಲ್ಲ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಯಿಂದ ಅನಂತ್ ಹೆಗಡೆ ಆಶೀಸರನಂಥ ಬ್ರಾಹ್ಮಣ ಜಾತ್ಯಸ್ಥರೆಲ್ಲ ಪರಿಸರವಾದವನ್ನು ತಮ್ಮಿಷ್ಟದಂತೆ ಕನವರಿಸೋದು ತಮ್ಮ ಜಾತಿಯ ಹಿತ ಕಾಪಾಡುವುದಕ್ಕಷ್ಟೆÃ!
ಜಿಲ್ಲೆಯ ಅಭಿವೃದ್ಧಿಗೆ ಅನಿವಾರ್ಯ ಅಗತ್ಯವಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಗಾಲು ಹಾಕುವ ಈ ಪ್ರಚಂಡರು, ತಮ್ಮ ಶಿರಸಿ-ಯಲ್ಲಾಪುರ ಹೈಗರ ಸೀಮೆಗೆ ಅನುಕೂಲವಾಗುವ ತಾಳಗುಪ್ಪಾ-ಸಿದ್ಧಾಪುರ-ಶಿರಸಿ-ಹಾವೇರಿ ರೈಲು ಮಾರ್ಗಕ್ಕೆ ಒತ್ತಾಯಿಸುತ್ತಾರೆ. ಆಗ ಆಗುವ ಪರಿಸರ-ಅರಣ್ಯ ನಾಶ ಇವರಿಗೆ ಕಾಣಿಸುವುದಿಲ್ಲ. ಈ ದ್ವಿಮುಖ ನಾಟಕದ ಪರಿಸರವಾದಿ ತಂಡದಲ್ಲಿ ಆರಂಭದಲ್ಲಿ ಕೇಂದ್ರ ಮಂತ್ರಿ ಅನಂತ್ಮಾಣಿಯೂ ಇದ್ದ. ಯಾವಾಗ ಅನಂತ್ ಹೆಗಡೆ ಆಶೀಸರ ಎಂಬ ಮತ್ತೊÃರ್ವ ಬ್ರಾಹ್ಮಣ ಪಟು ಪರಿಸರ ಹೋರಾಟವನ್ನೆÃ ತನ್ನ ಚೆಡ್ಡಿ ರಾಜಕಾರಣಕ್ಕೆ ಚಿಮ್ಮುಹಲಗೆ ಮಾಡಿಕೊಳ್ಳಲು ಹವಣಿಸಿದನೋ ಆಗ ಅನಂತ್ಮಾಣಿ ತಿರುಗಿಬಿದ್ದ. ಒಂದು ಹಂತದಲ್ಲಿ ಈ ಪರಿಸರವ್ಯಾಧಿ ಅಶೀಸರ ಆರೆಸ್ಸೆಸ್ ಸಂಪರ್ಕ ಸಾಧಿಸಿ, ಮಾಣಿಗೆ ಕೊಕ್ ಕೊಟ್ಟು  ಬಿಜೆಪಿ ಸಂಸದಗಿರಿ ಟಿಕೆಟ್ ತರಲು ಹವಣಿಸಿದ್ದೂ ಇದೆ. ಅದೇ ಕಾರಣಕ್ಕೆ ಅನಂತ್ಮಾಣಿ ಈಗ ಈ ಪರಿಸರ ಗ್ಯಾಂಗನ್ನು ಅಭಿವೃದ್ಧಿ ವಿರೋಧಿ ಅಡ್ನಾಡಿಗಳು ಎಂಬಂತೆ ಮೂದಲಿಸುತ್ತಿದ್ದಾನೆ.
ಢೋಂಗಿ ಪರಿಸರವಾದಿ ತಂಡದ ಕೆಟ್ಟ ಕಣ್ಣಿÃಗ ಕುಮಟಾ-ಶಿರಸಿ ರಸ್ತೆ ಅಗಲೀಕರಣ ಯೋಜನೆ ಮೇಲೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿದ್ದ ಸದ್ರಿ ರಸ್ತೆಯನ್ನು ಹಾವೇರಿಯಿಂದ ಕುಮಟಾವರೆಗೆ ರಾಷ್ಟಿçಯ ಹೆದ್ದಾರಿ 766ಇ ಎಂದು ಘೋಷಿಸಲಾಗಿದೆ. ಸಾಗರಮಾಲಾ ಯೋಜನೆಯಲ್ಲಿ ಮಂಜೂರಾಗಿರುವ ಈ 60 ಕಿ.ಮೀ ಉದ್ದದ ರಸ್ತೆ ಯೋಜನಾ ವೆಚ್ಚ ಬರೋಬ್ಬರಿ 360.60 ಕೋಟಿ ರೂಪಾಯಿಗಳು. ಈ ಕಾಮಗಾರಿ ಗುತ್ತಿಗೆ ಆರ್‌ಎನ್‌ಎಸ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಸಹಭಾಗಿತ್ವದಲ್ಲಿ ಪಡೆದುಕೊಂಡಿವೆ. ಯೋಜನೆಯ ವಿಸ್ತೃತ ವರದಿ(ಡಿಪಿಆರ್)ನಂತೆ ಈಗಿರುವ ರಸ್ತೆಯನ್ನು 11 ಮೀಟರ್‌ನಿಂದ 18 ಮೀಟರ್ ಅಗಲ ಮಾಡಲಾಗುತ್ತದೆ. ಈಗಿರುವ 11 ಸೇತುವೆಗಳನ್ನು ಪುನರ್ ನಿರ್ಮಿಸಲಾಗುತ್ತದೆ.
ಹಾಗೆ ನೊಡಿದರೆ ಈ ಅಗಲೀಕರಣ ಬಹುದಿನದ ಅಗತ್ಯವಾಗಿತ್ತು. ಆದರೆ ಇಲ್ಲಿಯ ಹೊಣೆಗೇಡಿ ಎಂಪಿ, ಎಮ್ಮೆಲ್ಲೆ, ಮಿನಿಸ್ಟರ್‌ಗಳು ಎಷ್ಟೆÃ ಸಾವು-ನೋವಾದರೂ, ಸರಕು ಸಾಗಾಣಿಕೆಗೆ ತೊಂದರೆಯಾದರೂ, ಅಭಿವೃದ್ಧಿ ವೇಗಕ್ಕೆ ಬ್ರೆÃಕ್ ಬಿದ್ದಿದ್ದರೂ ತಲೆಯೇ ಕೆಡಿಸಿಕೊಂಡಿರಲಿಲ್ಲ. ಆದರೆ ಸದ್ರಿ ಯೋಜನೆಯ ಪ್ರಸ್ತಾಪ ಹೊರೆ ಬೀಳುತ್ತಿದ್ದಂತೆಯೇ ಘಟ್ಟದ ಮೇಲಿನ ಪರಿಸರ ವ್ಯಾಧಿ ತಂಡ ಹುಸಿ ಹಸಿರು ಕಳಕಳಿ ಪ್ರದರ್ಶಿಸತೊಡಗಿದೆ. ಅನಂತ ಹೆಗಡೆ ಆಶೀಸರನ ಗ್ಯಾಂಗ್ ಪಶ್ಚಿಮ ಘಟ್ಟ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ ಬರುತ್ತದೆ; ಗಿಡಮೂಲಿಕೆ ಸಂರಕ್ಷಿತ ದೇವಿಮನೆ ಘಟ್ಟ ಪ್ರದೇಶ ಧ್ವಂಸವಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದೆ. ಕಂಡ-ಕಂಡ ಅಧಿಕಾರಿಗಳಿಗೆಲ್ಲಾ ಮನವಿ ಕೊಟ್ಟು ಉದ್ದುದ್ದ ಬೋಗಸ್ ಭಾಷಣ ಬಿಗಿಯುತ್ತಿದ್ದಾರೆ.
ಆದರೆ ವಾಸ್ತವ ಇವರೇಳುವಷ್ಟು ಭೀಭತ್ಸವಾಗೇನೂ ಇಲ್ಲ. ದೇವಿಮನೆಯ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಸ್ತೆಯಿಂದ ತುಂಬ ದೂರದಲ್ಲಿದೆ. ಇಲ್ಲಿಯ ಔಷಧಿ ಮೂಲಿಕೆಗಳ ವಾಸ್ತವ ಸ್ಥಿತಿ ಅರಣ್ಯ ಇಲಾಖೆಗೂ ಗೊತ್ತಿಲ್ಲ. ಪರಿಸರ ವ್ಯಾಧಿಗಳು ಮಾತ್ರ ಅಮೂಲ್ಯ ಗಿಡಮೂಲಿಕೆಯಿದೆ ಎಂದು ಬೊಂಬಡಾ ಬಜಾಯಿಸುತ್ತಿದ್ದಾರೆ. ಸ್ವಾತಂತ್ರö್ಯ ನಂತರ ಶಿರಸಿ-ಕುಮಟಾ ರಸ್ತೆ ನಿರ್ಮಾಣವಾಗಿದೆ. ಆಗಾಗ ರಸ್ತೆ ಅಗಲೀಕರಣವೂ ಆಗಿದೆ. ಇದರಿಂದ ಗುಡ್ಡಗಳ ಕುಸಿತವಾಗಲಿ, ಹತ್ತಿರದ ಗ್ರಾಮಗಳಿಗೆ ಅನಾಹುತವಾಗಲಿ ಆಗಿದ್ದಿಲ್ಲ; ರಸ್ತೆ ಅಗಲೀಕರಣದಿಂದ ವನ್ಯಜೀವಿಗಳ ಓಡಾಟಕ್ಕೆ ಕಷ್ಟವಾಗಲಿದೆ ಎಂಬುದೇ ಹಾಸ್ಯಾಸ್ಪದ. ಈಗಾಗಲೇ ಇಲ್ಲಿ ರಸ್ತೆಯಿದೆ. ಹಗಲೂ-ಇರುಳು ವಾಹನ ಓಡಾಟವಿದೆ. ಪ್ರಾಣಿಗಳಿಗೆ ತೊಂದರೆಯೇನಾಗಿಲ್ಲ. ದೇವಿಮನೆ ಘಟ್ಟ-ಕಣಿವೆಯಲ್ಲಿ ವಿದ್ಯುತ್ ಮಾರ್ಗದ ಕಾರಿಡಾರ್ ಕೂಡ ಇದೆ. ಇದರಿಂದ ಪರಿಸರಕ್ಕೆ ಹಾನಿಯೇನಾಗಿಲ್ಲ. ಅಷ್ಟಕ್ಕೂ ಕಡಿಯುವುದು ರಸ್ತೆ ಅಂಚಿನ ಸ್ವಲ್ಪ ಕಾಡಷ್ಟೆÃ! ಹೆದ್ದಾರಿ ನಿರ್ಮಾಣದ ನಂತರ ಅಕ್ಕ-ಪಕ್ಕದಲ್ಲಿ ಮರ ಬೆಳೆಸಲು ಅವಕಾಶ ಇದ್ದೆÃಯಿದೆ.
ಮೂರು ದಶಕದಿಂದ ಹಾವೇರಿ-ಕುಮಟಾ-ತಡಸ-ಕುಮಟಾ ರಸ್ತೆ ಮೇಲ್ದರ್ಜೆಗೇರಿಸುವ ಬೇಡಿಕೆ ವಾಣಿಜ್ಯೊÃದ್ಯಮಿಗಳು, ಜನಸಾಮಾನ್ಯರು ಮಂಡಿಸುತ್ತಾ ಬಂದಿದ್ದರು. ಈ ರಸ್ತೆ ಅಗಲೀಕರಣ ಜಿಲ್ಲೆಯ ಅಭಿವೃದ್ಧಿಗೆ ಹೆಬ್ಬಾಗಿಲು. ಜಿಲ್ಲೆಯ ಬಂದರುಗಳ ಅಭಿವೃದ್ಧಿ ಇದರಿಂದಾಗುತ್ತದೆ. ಹುಬ್ಬಳ್ಳಿ-ಹಾವೇರಿ-ದಾವಣಗೆರೆ ಮುಂತಾದೆಡೆಯಿಂದ ಕರಾವಳಿಗೆ ಉತ್ಪಾದಿತ ವಸ್ತುಗಳ ರಫ್ತಿಗೆ ಉತ್ತೆÃಜನ ಸಿಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ, ಸ್ಕೊಬಾ ಡ್ರೆöÊವಿಂಗ್‌ಗೆ ಈ ಹೆದ್ದಾರಿ ಪೂರಕÀವಾಗುತ್ತದೆ. ಕಡಿಮೆ ಅವಧಿಯಲ್ಲಿ ಸುರಕ್ಷಿತ ಪ್ರಯಾಣ ಮಾಡಬಹುದು. ಈಗಿನದು ಯಮಯಾತನೆಯ ಪ್ರವಾಸ!! ರಸ್ತೆ ಅಗಲಿಕರಣ ಉದ್ಯಮಿಗಳಗಷ್ಟೆÃ ಅಲ್ಲ. ಶಿಕ್ಷಣ, ಆರೋಗ್ಯ, ಮತ್ತಿತರ ಕಾರಣಕ್ಕೆ ಕರಾವಳಿಯತ್ತ ಹೋಗುವವರಿಗೆ ಮತ್ತು ಕರಾವಳಿಯಿಂದ ಬಯಲು ಸೀಮೆಗೆ ಹೋಗುವವರಿಗೂ ವರದಾನವೇ ಸರಿ.
ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ತುಲನಾತ್ಮಕವಾಗಿ ಕಡಿಮೆ ಬಂಡವಾಳ ಸಾಕು. ಯಲ್ಲಾಪುರ-ಶಿರಸಿ-ಸಿದ್ಧಾಪುರ-ಮುಂಡಗೋಡ ತಾಲ್ಲೂಕುಗಳು ರೈಲು ಮಾರ್ಗ ಕಾಣುವುದು ಅನುಮಾನ ಎಂದು ಹೊಣೆಗೇಡಿ ಸಂಸದ ಕಮ್ ಕೇಂದ್ರ ಮಂತ್ರಿ ಅನಂತ್ಮಾಣಿಯೇ ಬಡಬಡಿಸುತ್ತಿದ್ದಾನೆ. ಹೀಗಿರುವಾಗ ರಾಷ್ಟಿçÃಯ ಹೆದ್ದಾರಿಯಾಗಿ ರಸ್ತೆ ಅಗಲೀಕರಣವೂ ಬೇಡವೆಂದರೆ ಹೇಗೆ? ಸ್ವಾರ್ಥಕ್ಕಾಗಿ ಪರಿಸರ ಸಂರಕ್ಷಣೆ ಪ್ರಹಸನ ಮಾಡುತ್ತಿರುವ ಹುಸಿ ಪರಿಸರವಾದಿಗಳಿಗೆ ಜನರೀಗ ಉಗಿಯುತ್ತಿದ್ದಾರೆ. ಉತ್ತರ ಕನ್ನಡಿಗರು ಈ ಛಲವನ್ನು ದಶಕದ ಹಿಂದೆಯೇ ತೋರಿಸಬೇಕಿತ್ತು. ಸೋಗಲಾಡಿ ಪರಿಸರ ಪರಾಕ್ರಮಿಗಳ ಬಂಡಲ್ ಭಾಷಣ, ಅಂಕಣ, ಮಾನವ ಸರಪಳಿಗಳಿಗೆ ಜಿಲ್ಲೆಯ ಮುಗ್ಧ ಜನ ಸಿಲುಕಿದ್ದರಿಂದಲೇ ಅಭಿವೃದ್ಧಿ ಕಾಣದಂತಾಯ್ತು. ಪರಿಸರವಾದಿಗಳ ಕಿರಿಕಿರಿಯೊಂದಿಲ್ಲದಿದ್ದರೆ ಎಂದೋ ಜಿಲ್ಲೆಗೆ ರೈಲು-ಸುಸಜ್ಜಿತ ರಸ್ತೆ, ಬಂದರು, ಬೃಹತ್ ಉದ್ಯಮ ಬರುತ್ತಿತ್ತು. ವಿದ್ಯೆ, ಉದ್ಯೊಗ, ವ್ಯವಹಾರಕ್ಕೆ ಗುಳೇ ಹೋಗುವುದು ತಪ್ಪುತ್ತಿತ್ತು. ಉತ್ತರ ಕನ್ನಡ ಪಕ್ಕದ ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡದಂತೆ ಪ್ರಗತಿ ಕಾಣುತ್ತಿತ್ತು.
ಈಗ ಜನರಿಗೆ ಪರಿಸರ ವ್ಯಾಧಿಗಳ ಬಣ್ಣ ಗೊತ್ತಾಗಿದೆ. ತದಡಿ ಬಂದರು ಬೇಕೆಂದು ಪರಿಸರವಾದಿಗಳಿಗೆ ತಿರುಗಿ ಬಿದ್ದಿದ್ದ ಜನರೀಗ ಕುಮಟಾ-ಹಾವೇರಿ ರಸ್ತೆ ಅಗಲೀಕರಣದ ಪರವಿದ್ದಾರೆ. ಇನ್ನಾದರೂ ಪರಿಸರವಾದಿಗಳು ದ್ರೊÃಹದ ಆಟ ನಿಲ್ಲಿಸುವರಾ?
– ಶುದ್ಧೊಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...