Homeಅಂಕಣಗಳು`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳು, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.
ಬ್ಲೂಜೆಪಿಯೆಂಬ ಕೊಳಕುಮಂಡಲ ಪಾರ್ಟಿಯು ದೇಶದ ತುಂಬೆಲ್ಲ ಕಾರ್ಯಕರ್ತರ ಹೆಸರಿನಲ್ಲಿ ಮಿಡಿನಾಗರಗಳನ್ನು ಸಾಕಿ, ವಿರೋಧಿಗಳ ಮೇಲೆ ಎಸೆಯುತ್ತಿರುವುದು ಗೊತ್ತೇ ಇದೆ. ಕಂಡಕಂಡವರಿಗೆಲ್ಲ ಕಚ್ಚಿ ಕಚ್ಚಿ ಅಭ್ಯಾಸವಾಗಿರುವ ಈ ಹಾವುಗಳು ಕಚ್ಚಲು ಬೇರೆ ಯಾರೂ ಸಿಗದೆ ಇತ್ತೀಚೆಗೆ ಬ್ಲೂಜೆಪಿ ಪಕ್ಷದವರನ್ನೇ ಅಗಿಯುತ್ತಿರುವುದು ಹೊಸ ಸಮಾಚಾರ. ಅಂತರ್ಧರ್ಮೀಯ ಮದುವೆಯಾದ ದಂಪತಿಗಳಿಗೆ ಪಾಸ್ ಪೋರ್ಟ್ ಕೊಡಲ್ಲ ಎಂದ ಸರ್ಕಾರಿ ಅಧಿಕಾರಿಯೊಬ್ಬನನ್ನು ಕೇಂದ್ರ ವಿದೇಶಾಂಗ ಮಂತ್ರಿ ಚೆಷ್ಮಾ ಸುರಾಜಮ್ಮ ಒದೆಯಬಾರದ ಜಾಗಕ್ಕೆ ಒದ್ದು ಕೆಲಸದಿಂದ ಓಡಿಸಿದ್ದರು. ಇಷ್ಟಕ್ಕೇ ರೊಚ್ಚಿಗೆದ್ದ ಬ್ಲೂಜೆಪಿಯ ಕಾರ್ಯಕರ್ತ ಸರ್ಪಗಳ ಪಡೆಯು ಚೆಶ್ಮಮ್ಮನನ್ನು ಕೊಲೆ ಮಾಡಲು, ತುಳಿದು ಸಾಯಿಸಲು ಕರೆ ಕೊಟ್ಟಿದ್ದವು. ಮುದ್ದು ಮಾಡಿ, ತಲೆಸವರಿ, ವಿಷವುಣಿಸಿ ಬೆಳೆಸಿದ ತಮ್ಮ ಸ್ವಂತ ಸರ್ಪಗಳೇ ತಿರುಗಿ ಬಿದ್ದು ಕಚ್ಚುತ್ತಿರುವುದರಿಂದ ಘಾಸಿಗೊಂಡ ಚೆಷ್ಮಮ್ಮ `ಅರೆರೆ, ನಮ್ದು ಕುತ್ತಾ ನಮಿಗೇ ಬೌ..ಬೌ..’ ಎಂದು ಕನವರಿಸುತ್ತಾ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿಕೊಂಡಿದ್ದಾರೆಂದು ಅನಧಿಕೃತ ಮೂಲಗಳು ತಿಳಿಸಿವೆ.

******

ಬ್ರದಾನಮಂತ್ರಿ ಫಕೀರಪ್ಪನನ್ನು ರೋಡ್ ಶೋ ಟೈಮಿನಲ್ಲಿ ಆನೆಪಟಾಕಿ ಸರಕ್ಕೆ ಬೆಂಕಿಹಚ್ಚಿ ಎಸೆದು ಉಡೀಸ್ ಮಾಡಲು ದುಷ್ಕರ್ಮಿಗಳು ಹೊಂಚು ಹಾಕುತ್ತಿದ್ದಾರೆಂದು ಹಗಲುಕನಸು ಕಂಡ ಮಹಾರಾಷ್ಟ್ರ ಪೊಲೀಸರು ಈ ಕೆಟ್ಟಕನಸಿನ ಬಗ್ಗೆ ಬ್ರಧಾನಮಂತ್ರಿ ಕಚೇರಿಗೆ ಮಾಹಿತಿ ತಲುಪಿಸಿದ್ದಾರೆ. ಈ ತಳಬುಡವಿಲ್ಲದ ದುಸ್ವಪ್ನದ ಆಧಾರದ ಮೇಲೆ ಪಿ.ಎಂ ಫಕೀರಪ್ಪನಿಗೆ ಸೆಕ್ಯುರಿಟಿಯನ್ನು ಟೈಟ್ ಮಾಡಲಾಗಿದೆಯಂತೆ. ಹೊಸ ಆದೇಶದ ಪ್ರಕಾರ ಫಕೀರಪ್ಪನನ್ನು ದೇಶದ ಎಂ.ಎಲ್.ಎ, ಎಂಪಿಗಳು, ಅಧಿಕಾರಿಗಳೂ ಸಹ ಭೇಟಿ ಮಾಡಲು ನಿಬರ್ಂಧ ಹೇರಲಾಗಿದೆ. ಫಕೀರಪ್ಪನನ್ನು ಒಂದು ಪುರಿಮೂಟೆಯೊಳಗೆ ತುಂಬಿ, ಲಾರಿಯೊಂದಕ್ಕೆ ಎಸೆದು, ಆ ಲಾರಿಯ ಸುತ್ತ ಎಸ್.ಪಿ.ಜಿ ಕಮ್ಯಾಂಡೋಗಳು ಬಂದೂಕು ಹಿಡಿದು ಪಹರೆ ಕಾಯುತ್ತಿದ್ದಾರೆ ಎನ್ನಲಾಗಿದೆ. ತಿಂಡಿ, ಊಟ, ಸುಸ್ಸು ಮಾಡಲಷ್ಟೇ ಪುರಿಮೂಟೆಯಿಂದ ಹೊರಬರುವ ಫಕೀರಪ್ಪ, ಬಂದ ಕೆಲಸ ಮುಗಿಯುತ್ತಿದ್ದಂತೆ ಪುಸುಕ್ ಅಂತ ಲಾರಿ ಹತ್ತಿ ವಾಪಸ್ ಪುರಿಮೂಟೆಯೊಳಗೆ ಹೋಗಿ ಅವಿತು ಕುಳಿತುಕೊಳ್ಳುತ್ತಿದ್ದಾರೆಂದು ಅನಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

******

ರಾಜ್ಯ ರಾಜಕಾರಣದ ಕಲಬೆರಕೆ ಸರ್ಕಾರದಲ್ಲಿ ದಿನಕ್ಕೊಂದು ಧೀಂತಕಿಟತೋಂ ಅವಾಂತರಗಳನ್ನು ನೋಡಿ ನೋಡಿ ಕಣ್ಣು ಬೇನೆ ಬರಿಸಿಕೊಂಡಿರುವ ಸಮಾಜವಾದಿ ಸಿದ್ದಣ್ಣನವರು ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದೂ ಪಡೆದೂ ಬೇಜಾರಾಗಿರೋ ಸಿದ್ದಣ್ಣ ‘ಬೆರಕೆ ಸರ್ಕಾರದ ಆಯುಸ್ಸು ಇಷ್ಟು ತಿಂಗಳು, ಆಮೇಲಿದು ಕಾಲೆತ್ತಿಕೊಂಡು ಮಲಗುತ್ತದೆ’ ಅಂತ ದಿನಕ್ಕೊಂದು ಆಡಿಯೋ ರೆಕಾಡಿರ್ಂಗ್, ವಿಡಿಯೋ ಕ್ಲಿಪಿಂಗ್ ರಿಲೀಸ್ ಮಾಡುತ್ತ ಕುಮಾರಣ್ಣನ ಬೋಳುಮಂಡೆಯ ಮೇಲೆ ಟುಕುಟುಕು ಕುಟ್ಟಿಕೊಂಡು ಎಂಜಾಯ್ ಮಾಡುತ್ತಿರುವುದು ಕೈಕಮಾಂಡ್ ತಲೆ ಕೆಡಿಸಿದೆ. ಈ ಬಗ್ಗೆ ಚಿಂತಾಕ್ರಾಂತರಾದ ಕೈಕಮ್ಯಾಂಡ್ ಮುಖ್ಯಸ್ಥರು ಪೇಟದ ಹೆಗ್ಗಡೆಯವರಿಗೆ ಫೋನು ಮಾಡಿ, ಸಿದ್ದಣ್ಣನವರ ಚಿಕಿತ್ಸೆ ಮುಗಿಯುವವರೆಗೆ ಅವರು ಮಾತನಾಡಲು ಸಾಧ್ಯವಾಗದಂತೆ ಯಾವುದಾದರೂ ಬೇರನ್ನು ಅರೆದು ಸಿದ್ದಣ್ಣನಿಗೆ ಬಲವಂತವಾಗಿ ಕುಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆಂದು ಸೋರಿಕೆ ಸುದ್ದಿಗಳು ತಿಳಿಸಿವೆ.

******

ಬೀದಿಬೀದಿಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಮೊಬೈಲ್ ರಿಪೇರಿ ಅಂಗಡಿಗಳ ಹುಡುಗರಿಗಿಂತ ಕಡಿಮೆ ಕಾಮನ್ ಸೆನ್ಸ್ ಮತ್ತು ಸೈನ್ಸ್ ತಿಳುವಳಿಕೆಯಿರೋ ‘ಪವನಜ್ಜ’ ಎಂಬ ವಯೋವೃದ್ಧ ಚೆಡ್ಡಿಯೊಂದು ತನ್ನ ಮಾನವನ್ನು ತಾನೇ ತೆಗೆದುಕೊಂಡಿರೋ ಘಟನೆ ವರದಿಯಾಗಿದೆ. ಮೊಬೈಲ್‍ಗಳಲ್ಲಿ ಅದಿದೆ, ಇದು ಹಂಗೆ ಕೆಲ್ಸ ಮಾಡುತ್ತೆ, ಅದು ಹಿಂಗೆ ಕೆಲ್ಸ ಮಾಡುತ್ತೆ ಅಂತ ಪತ್ರಿಕೆಗಳಲ್ಲಿ ಪುಂಗುವ ಈ ಹಳೇ ದೊಗಳೆಚೆಡ್ಡಿಯು ಪುಸ್ತಕ ನೋಡಿ ಪರೀಕ್ಷೆ ಬರೆಯುವ ಶಿಕ್ಷಣ ಇಲಾಖೆಯ ಹೊಸ ಆಲೋಚನೆಯನ್ನು ಮೀಸಲಾತಿಗೆ ಗಂಟುಹಾಕಿ ತನ್ನ ಪುಳಚಾರ್ ಪಾಲಿಟಿಕ್ಸನ್ನು ಬಟಾಬಯಲು ಮಾಡಿಕೊಂಡಿದೆ. ಮೀಸಲಾತಿ ಅನುಪಾತದ ಹಿಂದುಮುಂದು ಗೊತ್ತಿಲ್ಲದೆ ಕೆಕರುಮಕರು ಪಟ್ಟಿಯೊಂದನ್ನು ಫೇಸ್ಬುಕ್ಕಲ್ಲಿ ಪೋಸ್ಟ್ ಮಾಡಿರುವ ಪವನಜ್ಜ.. ತಾನೆಂಥ ಶ್ರೇಷ್ಟಜಾತಿಯ ಹುಳ ಎಂಬುದನ್ನು ಅಂಡು ತಟ್ಟಿಕೊಂಡು ಘೋಷಿಸಿ ಜನರಿಂದ ಛೀಥೂ ಎಂದು ಉಗಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

******

ಬಿಹಾರದಲ್ಲಿ ಲಲ್ಲೂ ಯಾದವ್ ಜೊತೆಗೆ ನೆಟ್ಟಗೆ ನಡೆಯುತ್ತಿದ್ದ ಕೂಡುಸಂಸಾರದ ಸರ್ಕಾರಕ್ಕೆ ಕೈ ಕೊಟ್ಟು ಬ್ಲೂಜೆಪಿಯೆಂಬ ಮಾನಸಿಕ ಅಸ್ವಸ್ಥ ಕತ್ತೆಯೊಂದರ ಜೊತೆಗೆ ಹೊಸ ಸಂಸಾರದ ಸರ್ಕಾರ ಮಾಡಿಕೊಂಡಿದ್ದ ನಿತೀಶ್ ಕುಮಾರ್‍ಗೆ ತಾನು ಓತಿಕ್ಯಾತಕ್ಕೆ ಹೆದರಿ ಹೆಬ್ಬಾವನ್ನು ತಬ್ಬಿಕೊಂಡಿದ್ದೇನೆ ಅಂತ ತಡವಾಗಿ ಅರಿವಾಗಿದೆಯತೆ. ಬ್ಲೂಜೆಪಿ ತಿಕ್ಕಲರು ಕೊಡ್ತಿರೋ ಚಿತ್ರಹಿಂಸೆಯಿಂದ ಹೇಗಾದರೂ ಸರಿ ತಪ್ಪಿಸಿಕೊಳ್ಳಲು ಹೆಣಗುತ್ತಿರೋ ನಿತೀಶ್, ಹಳೇ ಹಸ್ಬೆಂಡಿನ ಲೆಗ್ಗೇ ಗತಿ ಎಂಬ ತೀರ್ಮಾನಕ್ಕೆ ಬಂದು “ಲಲ್ಲೂ ಮಾಮ, ಐ ಲವ್ ಯೂ ಮಾಮಾ “ ಎಂದು ಲಲ್ಲೂ ಯಾದವ್‍ಗೆ ಮೆಸೇಜು ಪಾಸ್ ಮಾಡ್ತಿದ್ದಾರೆಂದು ಗೊತ್ತಾಗಿದೆ. ಹೋದ ಬಂದಲ್ಲೆಲ್ಲ ಮಕಮೂತಿಗೆ ಇಕ್ಕಿಸಿಕೊಂಡು ಏದುಸಿರು ಬಿಡುತ್ತಿರೋ ಹಮೀದ್ ಷಾ ಎಂಬ ಹಳೇ ಕ್ರಿಮಿನಲ್ ಗಿರಾಕಿಗೆ ಈ ಬೆಳವಣಿಗೆಯಿಂದ ಹೊಸದಾಗಿ ಬೇಧಿ ಕಿತ್ಕೊಂಡಿದೆಯೆಂದು ಗುಪ್ತಮೂಲಗಳು ತಿಳಿಸಿವೆ. ಬಿಹಾರದಲ್ಲೇನಾದ್ರೂ ಎಡವಟ್ಟಾದರೆ ಅಕ್ಕಪಕ್ಕದ ರಾಜ್ಯಗಳೂ ಕೈಗೆ ಕೆರ ಎತ್ತಿಕೊಳ್ತವೆ ಅಂತ ಗಾಬರಿಯಾಗಿರುವ ಡ್ರಾಮಾ ಮಾಸ್ಟರ್ ಫಕೀರಪ್ಪ ಪಕೋಡೇಂದ್ರನು ನಿತೀಶ್ ಕುಮಾರ್‍ಗೆ ತಕ್ಷಣ ಫೋನ್ ಮಾಡಿ “ಬಾ.. ಮುತ್ತು ಕೊಡುವೆ ಕಂದನೆ, ನನ್ನ ಮುದ್ದು ರಾಜ” ಎಂಬ ಹಾಡನ್ನು ಹಾಡಿದರಂತೆ.. ಇದಕ್ಕೆ ಉತ್ತರಿಸಿದ ನಿತೀಶ್ ಕುಮಾರ್ “ನಾನು ಆ ಟೈಪ್‍ನವನಲ್ಲ… ಮುಚ್ಕೊಂಡ್ ಫೋನ್ ಮಡಗು” ಎಂದು ಖಡಕ್‍ಆಗಿ ಹೇಳಿ ಫೋನು ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.

******

ಕಳೆದ ಮುವ್ವತ್ತು ವರ್ಷಗಳಿಂದಲೂ ‘ಮಂದಿರ್ ವಹೀ ಬನಾಯೇಂಗೆ, ಇಟ್ಟಿಗೆ ಕೊಡಿ, ಚಪ್ಪಡಿ ಕೊಡಿ, ಮಣ್ಣು ಕೊಡಿ, ಸಿಮೆಂಟು ಕೊಡಿ’ ಅಂತ ಗಂಟಲು ಹರಿದುಕೊಳ್ತಿದ್ದ ದೊಗಳೆಚಡ್ಡಿಗಳು 2014ರಲ್ಲಿ ತಮ್ಮದೇ ಮೆಜಾರಿಟಿ ಸರ್ಕಾರ ಬಂದ ತಕ್ಷಣ ತಮ್ಮ ನವರಂಧ್ರಗಳಿಗೂ ಮಂದಿರದ ಹೆಸರಿನಲ್ಲಿ ಕಲೆಕ್ಷನ್ ಮಾಡಿದ ಐಟಂಗಳನ್ನು ಇಟ್ಟುಕೊಂಡು ಗಪ್ ಚುಪ್ ಆಗಿದ್ದರು. 4 ವರ್ಷ ಇದೇ “ಗಪ್ ಚುಪ್ಪಾಸನ” ಮಾಡುತ್ತಿದ್ದ ಇದೇ ದೊಗಳೆಚಡ್ಡಿಗಳು, ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ. ಮತ್ತೆ “ಮಂದಿರ್ ವಹೀ ಬನಾಯೇಂಗೆ” ಎಂದು ಥಕಥಕ ಕುಣಿಯುತ್ತಿವೆ. ನಿಮ್ಮದೇ ಸರ್ಕಾರ, ನಿಮ್ಮದೇ ಕಾನೂನು, ನಿಮ್ಮದೇ ಆಡಳಿತ, ನಿಮ್ಮದೇ ರಾಜ್ಯ, ನಿಮ್ಮದೇ ಮುಖ್ಯಮಂತ್ರಿ, ಇಷ್ಟೆಲ್ಲ ಇದ್ದು ಮಂದಿರ ಕಟ್ಟದೇ ಇಷ್ಟು ವರ್ಷ ಎಲ್ಲಿ ಎಂಜಲೆತ್ತೋಕೆ ಹೋಗಿದ್ರಿ ಅಂತ ದೊಗಳೆ ಚಡ್ಡಿಗಳಿಗೆ ಜನ ಉಗಿಯುತ್ತಿದ್ದಾರೆ. ಇದನ್ನು ಕೇರು ಮಾಡದ ದೊಗಳೆಚಡ್ಡಿಗಳು ಅದೇ ಚಡ್ಡಿಯಲ್ಲಿ ಉಗುಳುಬಿದ್ದ ಮುಖವನ್ನು ಒರೆಸಿಕೊಂಡು “ಮಂದಿರ್ ವಹೀ….” ಅಂತ ತಲೆ ಮೇಲೆ ಟವೆಲ್ ಹಾಕಿಕೊಂಡು ಹತ್ತಿರದ ವೈನ್ ಸ್ಟೋರ್ ಕಡೆಗೆ ಠೀವಿಯಿಂದ ಹೆಜ್ಜೆಹಾಕಿದರು ಎಂಬ ಸುದ್ದಿ ಲಭ್ಯವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...