Homeಮುಖಪುಟನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ವ್ಯಕ್ತಿತ್ವ ವಿಕಸನ 1- ಮೈಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್

ನಾನು ನನ್ನ ಹಿಂದಿನ ಲೇಖನದಲ್ಲಿ “ಜೀವನಾವಶ್ಯಕ ಕಲೆ” ಬಗ್ಗೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿರುವ  10 ಕಲೆಗಳ ಪೈಕಿ ಮೊದಲನೆಯದಾದ “ಸ್ವ-ಅರಿವು” (ಸೆಲ್ಫ್ ಅವೇರ್ನೆಸ್) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೆ. ಈ ಜೀವನಾವಶ್ಯಕ ಕಲೆಗಳು ನಮಗೆ ಜೀವನದ ಉದ್ದಕ್ಕೂ ಬೇಕಾಗುತ್ತದೆ. ಆದ್ದರಿಂದ ಇದನ್ನು ಚಿಕ್ಕಂದಿನಲ್ಲಿಯೇ ಕಲಿತರೂ ಸಹ, ಸಾಯುವವರೆಗೂ ಬಳಸುತ್ತಿರಬೇಕು. ಇದರಿಂದ ನಾವು ನಿರಂತರ ಲಾಭ ಪಡೆಯಬಹುದು. ಸ್ವ-ಅರಿವನ್ನು ಸ್ವಲ್ಪ ಆಳಕ್ಕಿಳಿಸಿದಾಗ ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದನ್ನು ಪರ್ಸನಾಲಿಟಿ ಟ್ರೇಟ್ (Personality Trait) ಎಂದು ಕರೆಯುತ್ತಾರೆ. ಇದರ ಬಗ್ಗೆ ಸುದೀರ್ಘವಾಗಿ ಅಧ್ಯಯನ/ಅನುಸಂಧಾನ ನಡೆಸಿರುವ ಮನೋವೈಜ್ಞಾನಿಕರು ಮತ್ತು ಸಾಮಾಜಿಕ ಶಾಸ್ತ್ರಜ್ಞರು ವ್ಯಕ್ತಿಗಳಲ್ಲಿ ಮುಖ್ಯವಾಗಿ ಎಂಟು ಗುಣಲಕ್ಷಣವನ್ನು ಗುರುತಿಸಿದ್ದಾರೆ. ಇವುಗಳು ಒಂದು ರೀತಿಯಲ್ಲಿ ವಿರೋಧಾಭಾಸ ಅಥವಾ ಜೋಡಿಗಳು ಎಂಬಂತೆಯೂ ಕಾಣುತ್ತವೆ: ಈ ಎಂಟಕ್ಕೆ ಸೂಚಕವಾಗಿ ಒಂದು ಇಂಗ್ಲೀಷ್ ಅಕ್ಷರವನ್ನೂ ಸೇರಿಸಿದ್ದಾರೆ.

1. ಅಂತರ್ಮುಖಿ (ಇನ್ಟ್ರೊವರ್ಟ್)    -I                   2. ಬಹಿರ್ಮುಖಿ (ಎಕ್ಸ್ಟ್ರೊವರ್ಟ್)     – E

3. ಸೂಕ್ಷ್ಮವೇದಿ (ಸೆನ್ಸಿಟಿವ್)         – S                 4. ಸಹಜ ಜ್ಞಾನಿ (ಇನ್ಟ್ಯೂಟಿವ್)      – N

5. ಯೋಚನಾಶೀಲ (ಥಿಂಕಿಂಗ್)     – T                 6. ಸಂವೇದನಾಶೀಲ (ಫೀಲಿಂಗ್)   – F

7. ತೀರ್ಪುಗಾರ (ಜಡ್ಜಿಂಗ್)           – J                 8. ಗ್ರಹಿಕಾಶಕ್ತಿಯ (ಪರ್ಸೆಪ್ಟಿವ್)      – P

ಒಂದು ಗುಣಲಕ್ಷಣ ಪ್ರಮುಖವಾಗಿದ್ದಾಗ ಅದರ ಜೊತೆಗೆ ಮಿಕ್ಕ ಜೋಡಿಗಳ ಪೈಕಿ ಒಂದನ್ನು ಸೇರಿಸಿ ರಚಿಸಿದ ಹದಿನಾರು ಸಂಯೋಗ ಗುಂಪುಗಳನ್ನು ಮೈಯ್ಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್ (MBTI) ಎನ್ನುತ್ತಾರೆ. ಇದು ಸಂಪೂರ್ಣ ವೈಜ್ಞಾನಿಕ ತತ್ವವಾದ ಎನ್ನಲು ಬರುವುದಿಲ್ಲ, ಆದರೂ ಸಾಕಷ್ಟು ಪ್ರಚಲಿತವಿರುವ ಅರೆ-ವೈಜ್ಞಾನಿಕ ತತ್ವವಾದ ಎನ್ನಲು ಅಡ್ಡಿಯಿಲ್ಲ. ಈ ನಾಲ್ಕು ಅಕ್ಷರದ ಹಣೆಪಟ್ಟಿ ವಿಶ್ಲೇಷಣೆಯಿಂದ ಓರ್ವ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ಬಹಳಷ್ಟು ಮಟ್ಟಿಗೆ ಗ್ರಹಿಸಬಹುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ. MBTI ರಚಿಸಿದ ಶ್ರೇಯ ಕ್ಯಾಥರೀನ್ ಕುಕ್ ಬ್ರಿಗ್ಸ್ ಮತ್ತು ಅವರ ಮಗಳು ಇಸಬೆಲ್ ಬ್ರಿಗ್ಸ್ ಮೈಯ್ಯರ್ಸ್ ಅವರಿಗೆ ಸಲ್ಲುತ್ತದೆ. ಇದು ಮೂಲತಃ ಕಾರ್ಲ್ ಜಂಗ್ ಎಂಬ ಸ್ವಿಸ್ ಮನೋವಿಜ್ಞಾನಿಯ ತತ್ವವಾದದ ಮೇಲೆ ಆಧರಿಸಲ್ಪಟ್ಟಿವೆ. ಕಾರ್ಲ್ ಜಂಗ್ ಪ್ರಕಾರ ಮನುಷ್ಯರಲ್ಲಿ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬ ನಾಲ್ಕು ಗುಣ-ಲಕ್ಷಣಗಳು, ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಮೇಲೆ ಹೆಸರಿಸಿದ ಎಂಟು ಗುಣ-ಲಕ್ಷಣಗಳನ್ನು ಪ್ರತ್ಯೇಕವಾಗಿ ನೋಡಿದಾಗ:

1. ಅಂತರ್ಮುಖಿ: ಇವರು ಹೆಚ್ಚು ಸಂಘಜೀವಿಗಳಲ್ಲ. ಇವರಿಗೆ ಜನ ಸಂಪರ್ಕಕ್ಕಿಂತ ಒಂಟಿತನ ಹೆಚ್ಚು ಪ್ರಿಯ. ಇವರಿಗೆ ಬೇರೆಯವರೊಂದಿಗೆ ಮಾತುಕತೆ, ಚರ್ಚೆ ಬೇಕಿಲ್ಲ. ಇದು ಒಂದು ರೀತಿಯ ಮನೋದೌರ್ಬಲ್ಯ ಅಥವಾ ರೋಗವಲ್ಲ, ಕೇವಲ ಅವರ ಆಯ್ಕೆ. ತಮಗೆ ಬೇಕಾದ ವಿಷಯದ ಚರ್ಚೆ ನಡೆಯುತ್ತಿದ್ದಾಗ ಇವರು ಇದ್ದಕ್ಕಿದ್ದಂತೆ ಬಹಿರ್ಮುಖಿಯಾಗಿ ಭಾಗವಹಿಸಲೂಬಹುದು ಆದರೆ ಹೆಚ್ಚಾಗಿ ಮೌನವಾದಿ.

2. ಬಹಿರ್ಮುಖಿ: ಅಂತರ್ಮುಖಿಯ ತದ್ವಿರುದ್ಧ, ಇವರಿಗೆ ಯಾವಾಗಲೂ ಜನರ ಜೊತೆ ಇರಬೇಕು. ಏನೇ ಮಾತುಕತೆ ಇರಲಿ, ಚರ್ಚೆ ಇರಲಿ, ಇವರು ಸದಾ ಸಿದ್ಧ. ಇವರಿಗೆ ಒಂಟಿತನ ಇಷ್ಟವಿಲ್ಲ. ಪಕ್ಕದಲ್ಲಿ ಗುರುತಿಲ್ಲದವರಿದ್ದರೂ ಅವರನ್ನು ತಾವಾಗಿಯೇ ಮಾತನಾಡಿಸುತ್ತಾರೆ. ಇವರೂ ಸಹ ತಮಗೆ ಇಷ್ಟವಿಲ್ಲದ ವಿಷಯದ ಚರ್ಚೆ ಬಂದಾಗ ಅಂತರ್ಮುಖಿಯಾಗಿ ಸುಮ್ಮನಿರಲೂಬಹುದು ಆದರೆ ಹೆಚ್ಚಾಗಿ ಮಾತುಗಾರರು.

3. ಸೂಕ್ಷ್ಮವೇದಿ: ಇವರು ಬಹಳ ಸೂಕ್ಷ್ಮ ಸ್ವಭಾವದವರು ಹಾಗಾಗಿ ಯಾವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇವರು ಉದ್ವೇಗಕ್ಕೆ ಬೇಗ ಒಳಗಾಗುತ್ತಾರೆ.

4. ಸಹಜಜ್ಞಾನಿ: ಇವರು ಹೇಳದೆಯೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗುತ್ತದೆ ಎಂದು ಇವರಿಗೆ ಮೊದಲೇ ಅನುಮಾನವಿರುತ್ತದೆ.

5. ಯೋಚನಾಶೀಲ: ಇವರು ಎಲ್ಲವನ್ನೂ ಬಹಳ ಗಂಭೀರವಾಗಿ, ಮಾಹಿತಿ ಸಂಗ್ರಹಿಸಿ, ಆಳವಾಗಿ ಯೋಚಿಸುತ್ತಾರೆ.

6. ಸಂವೇದನಾಶೀಲ: ಇವರು ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

7. ತೀರ್ಪುಗಾರ: ಇವರು ಇನ್ನೊಬ್ಬರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸದಾ ಘೋಷಿಸುತ್ತಿರುತ್ತಾರೆ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರಿಗೆ ಇವರು “ನೀವು ಹೇಳಿದ್ದು ತಪ್ಪು” ಎಂದು ನೇರವಾಗಿ ಉತ್ತರಿಸುತ್ತಾರೆ.

8. ಗ್ರಹಿಕಾಶಕ್ತಿಯ ವ್ಯಕ್ತಿ: ಇವರು ತಮ್ಮ ಅನಿಸಿಕೆಯನ್ನು ಅನಿಸಿದಂತೆ ತಿಳಿಸಿದರೂ ಸಹ ಇನ್ನೊಬ್ಬರ ಬಗ್ಗೆ ಅದನ್ನು “ತೀರ್ಪು” ಎಂದು ಘೋಷಿಸುವುದಿಲ್ಲ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರು “ನೀವು ಹೇಳಿದ್ದು ತಪ್ಪು” ಎಂದು ಹೇಳದೆ, ”ನೀವು ಹೇಳಿದ್ದು ನನಗೆ ತಪ್ಪು ಎಂದು ಅನಿಸುತ್ತದೆ” ಎಂದು ಹೇಳುತ್ತಾರೆ ಹಾಗಾಗಿ, ತೀರ್ಪುಗಾರರಲ್ಲ.

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಹೀಗೆ ಜನರನ್ನು ಪ್ರತ್ಯೇಕಿಸಿ “ಗೂಡಿನೊಳಗೆ ಸೇರಿಸು”ವುದರಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು. ಉದಾ: ಅಂತರ್ಮುಖಿ ವ್ಯಕ್ತಿ ಪ್ರಯತ್ನಪಟ್ಟು ಬಹಿರ್ಮುಖಿಯಾಗಲೂ ಬಹುದು. ಇದರಿಂದ ವ್ಯಕ್ತಿಗೆ ತನ್ನ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನೋಪಾಯ/ವೃತ್ತಿ, ಅಧ್ಯಯನ ಮಾರ್ಗ ಆರಿಸಿಕೊಳ್ಳಲು ಸಹಕಾರಿಯಾಗುತ್ತದೆ.

MBTI ತರಹದ್ದೇ ಇನ್ನೊಂದು ಪ್ರಚಲನೆಯಲ್ಲಿರುವ ವ್ಯಕ್ತಿತ್ವ ವಿಶ್ಲೇಷಣೆ ಬಿಗ್-ಫೈವ್ ಅಥವಾ ಒಷನ್ (OCEAN) ಮಾಡೆಲ್. ಇವೆರಡರ ಬಗ್ಗೆ ಮುಂದೊಮ್ಮೆ ತಿಳಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...