Homeಮುಖಪುಟನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ವ್ಯಕ್ತಿತ್ವ ವಿಕಸನ 1- ಮೈಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್

ನಾನು ನನ್ನ ಹಿಂದಿನ ಲೇಖನದಲ್ಲಿ “ಜೀವನಾವಶ್ಯಕ ಕಲೆ” ಬಗ್ಗೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿರುವ  10 ಕಲೆಗಳ ಪೈಕಿ ಮೊದಲನೆಯದಾದ “ಸ್ವ-ಅರಿವು” (ಸೆಲ್ಫ್ ಅವೇರ್ನೆಸ್) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೆ. ಈ ಜೀವನಾವಶ್ಯಕ ಕಲೆಗಳು ನಮಗೆ ಜೀವನದ ಉದ್ದಕ್ಕೂ ಬೇಕಾಗುತ್ತದೆ. ಆದ್ದರಿಂದ ಇದನ್ನು ಚಿಕ್ಕಂದಿನಲ್ಲಿಯೇ ಕಲಿತರೂ ಸಹ, ಸಾಯುವವರೆಗೂ ಬಳಸುತ್ತಿರಬೇಕು. ಇದರಿಂದ ನಾವು ನಿರಂತರ ಲಾಭ ಪಡೆಯಬಹುದು. ಸ್ವ-ಅರಿವನ್ನು ಸ್ವಲ್ಪ ಆಳಕ್ಕಿಳಿಸಿದಾಗ ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದನ್ನು ಪರ್ಸನಾಲಿಟಿ ಟ್ರೇಟ್ (Personality Trait) ಎಂದು ಕರೆಯುತ್ತಾರೆ. ಇದರ ಬಗ್ಗೆ ಸುದೀರ್ಘವಾಗಿ ಅಧ್ಯಯನ/ಅನುಸಂಧಾನ ನಡೆಸಿರುವ ಮನೋವೈಜ್ಞಾನಿಕರು ಮತ್ತು ಸಾಮಾಜಿಕ ಶಾಸ್ತ್ರಜ್ಞರು ವ್ಯಕ್ತಿಗಳಲ್ಲಿ ಮುಖ್ಯವಾಗಿ ಎಂಟು ಗುಣಲಕ್ಷಣವನ್ನು ಗುರುತಿಸಿದ್ದಾರೆ. ಇವುಗಳು ಒಂದು ರೀತಿಯಲ್ಲಿ ವಿರೋಧಾಭಾಸ ಅಥವಾ ಜೋಡಿಗಳು ಎಂಬಂತೆಯೂ ಕಾಣುತ್ತವೆ: ಈ ಎಂಟಕ್ಕೆ ಸೂಚಕವಾಗಿ ಒಂದು ಇಂಗ್ಲೀಷ್ ಅಕ್ಷರವನ್ನೂ ಸೇರಿಸಿದ್ದಾರೆ.

1. ಅಂತರ್ಮುಖಿ (ಇನ್ಟ್ರೊವರ್ಟ್)    -I                   2. ಬಹಿರ್ಮುಖಿ (ಎಕ್ಸ್ಟ್ರೊವರ್ಟ್)     – E

3. ಸೂಕ್ಷ್ಮವೇದಿ (ಸೆನ್ಸಿಟಿವ್)         – S                 4. ಸಹಜ ಜ್ಞಾನಿ (ಇನ್ಟ್ಯೂಟಿವ್)      – N

5. ಯೋಚನಾಶೀಲ (ಥಿಂಕಿಂಗ್)     – T                 6. ಸಂವೇದನಾಶೀಲ (ಫೀಲಿಂಗ್)   – F

7. ತೀರ್ಪುಗಾರ (ಜಡ್ಜಿಂಗ್)           – J                 8. ಗ್ರಹಿಕಾಶಕ್ತಿಯ (ಪರ್ಸೆಪ್ಟಿವ್)      – P

ಒಂದು ಗುಣಲಕ್ಷಣ ಪ್ರಮುಖವಾಗಿದ್ದಾಗ ಅದರ ಜೊತೆಗೆ ಮಿಕ್ಕ ಜೋಡಿಗಳ ಪೈಕಿ ಒಂದನ್ನು ಸೇರಿಸಿ ರಚಿಸಿದ ಹದಿನಾರು ಸಂಯೋಗ ಗುಂಪುಗಳನ್ನು ಮೈಯ್ಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್ (MBTI) ಎನ್ನುತ್ತಾರೆ. ಇದು ಸಂಪೂರ್ಣ ವೈಜ್ಞಾನಿಕ ತತ್ವವಾದ ಎನ್ನಲು ಬರುವುದಿಲ್ಲ, ಆದರೂ ಸಾಕಷ್ಟು ಪ್ರಚಲಿತವಿರುವ ಅರೆ-ವೈಜ್ಞಾನಿಕ ತತ್ವವಾದ ಎನ್ನಲು ಅಡ್ಡಿಯಿಲ್ಲ. ಈ ನಾಲ್ಕು ಅಕ್ಷರದ ಹಣೆಪಟ್ಟಿ ವಿಶ್ಲೇಷಣೆಯಿಂದ ಓರ್ವ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ಬಹಳಷ್ಟು ಮಟ್ಟಿಗೆ ಗ್ರಹಿಸಬಹುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ. MBTI ರಚಿಸಿದ ಶ್ರೇಯ ಕ್ಯಾಥರೀನ್ ಕುಕ್ ಬ್ರಿಗ್ಸ್ ಮತ್ತು ಅವರ ಮಗಳು ಇಸಬೆಲ್ ಬ್ರಿಗ್ಸ್ ಮೈಯ್ಯರ್ಸ್ ಅವರಿಗೆ ಸಲ್ಲುತ್ತದೆ. ಇದು ಮೂಲತಃ ಕಾರ್ಲ್ ಜಂಗ್ ಎಂಬ ಸ್ವಿಸ್ ಮನೋವಿಜ್ಞಾನಿಯ ತತ್ವವಾದದ ಮೇಲೆ ಆಧರಿಸಲ್ಪಟ್ಟಿವೆ. ಕಾರ್ಲ್ ಜಂಗ್ ಪ್ರಕಾರ ಮನುಷ್ಯರಲ್ಲಿ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬ ನಾಲ್ಕು ಗುಣ-ಲಕ್ಷಣಗಳು, ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಮೇಲೆ ಹೆಸರಿಸಿದ ಎಂಟು ಗುಣ-ಲಕ್ಷಣಗಳನ್ನು ಪ್ರತ್ಯೇಕವಾಗಿ ನೋಡಿದಾಗ:

1. ಅಂತರ್ಮುಖಿ: ಇವರು ಹೆಚ್ಚು ಸಂಘಜೀವಿಗಳಲ್ಲ. ಇವರಿಗೆ ಜನ ಸಂಪರ್ಕಕ್ಕಿಂತ ಒಂಟಿತನ ಹೆಚ್ಚು ಪ್ರಿಯ. ಇವರಿಗೆ ಬೇರೆಯವರೊಂದಿಗೆ ಮಾತುಕತೆ, ಚರ್ಚೆ ಬೇಕಿಲ್ಲ. ಇದು ಒಂದು ರೀತಿಯ ಮನೋದೌರ್ಬಲ್ಯ ಅಥವಾ ರೋಗವಲ್ಲ, ಕೇವಲ ಅವರ ಆಯ್ಕೆ. ತಮಗೆ ಬೇಕಾದ ವಿಷಯದ ಚರ್ಚೆ ನಡೆಯುತ್ತಿದ್ದಾಗ ಇವರು ಇದ್ದಕ್ಕಿದ್ದಂತೆ ಬಹಿರ್ಮುಖಿಯಾಗಿ ಭಾಗವಹಿಸಲೂಬಹುದು ಆದರೆ ಹೆಚ್ಚಾಗಿ ಮೌನವಾದಿ.

2. ಬಹಿರ್ಮುಖಿ: ಅಂತರ್ಮುಖಿಯ ತದ್ವಿರುದ್ಧ, ಇವರಿಗೆ ಯಾವಾಗಲೂ ಜನರ ಜೊತೆ ಇರಬೇಕು. ಏನೇ ಮಾತುಕತೆ ಇರಲಿ, ಚರ್ಚೆ ಇರಲಿ, ಇವರು ಸದಾ ಸಿದ್ಧ. ಇವರಿಗೆ ಒಂಟಿತನ ಇಷ್ಟವಿಲ್ಲ. ಪಕ್ಕದಲ್ಲಿ ಗುರುತಿಲ್ಲದವರಿದ್ದರೂ ಅವರನ್ನು ತಾವಾಗಿಯೇ ಮಾತನಾಡಿಸುತ್ತಾರೆ. ಇವರೂ ಸಹ ತಮಗೆ ಇಷ್ಟವಿಲ್ಲದ ವಿಷಯದ ಚರ್ಚೆ ಬಂದಾಗ ಅಂತರ್ಮುಖಿಯಾಗಿ ಸುಮ್ಮನಿರಲೂಬಹುದು ಆದರೆ ಹೆಚ್ಚಾಗಿ ಮಾತುಗಾರರು.

3. ಸೂಕ್ಷ್ಮವೇದಿ: ಇವರು ಬಹಳ ಸೂಕ್ಷ್ಮ ಸ್ವಭಾವದವರು ಹಾಗಾಗಿ ಯಾವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇವರು ಉದ್ವೇಗಕ್ಕೆ ಬೇಗ ಒಳಗಾಗುತ್ತಾರೆ.

4. ಸಹಜಜ್ಞಾನಿ: ಇವರು ಹೇಳದೆಯೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗುತ್ತದೆ ಎಂದು ಇವರಿಗೆ ಮೊದಲೇ ಅನುಮಾನವಿರುತ್ತದೆ.

5. ಯೋಚನಾಶೀಲ: ಇವರು ಎಲ್ಲವನ್ನೂ ಬಹಳ ಗಂಭೀರವಾಗಿ, ಮಾಹಿತಿ ಸಂಗ್ರಹಿಸಿ, ಆಳವಾಗಿ ಯೋಚಿಸುತ್ತಾರೆ.

6. ಸಂವೇದನಾಶೀಲ: ಇವರು ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

7. ತೀರ್ಪುಗಾರ: ಇವರು ಇನ್ನೊಬ್ಬರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸದಾ ಘೋಷಿಸುತ್ತಿರುತ್ತಾರೆ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರಿಗೆ ಇವರು “ನೀವು ಹೇಳಿದ್ದು ತಪ್ಪು” ಎಂದು ನೇರವಾಗಿ ಉತ್ತರಿಸುತ್ತಾರೆ.

8. ಗ್ರಹಿಕಾಶಕ್ತಿಯ ವ್ಯಕ್ತಿ: ಇವರು ತಮ್ಮ ಅನಿಸಿಕೆಯನ್ನು ಅನಿಸಿದಂತೆ ತಿಳಿಸಿದರೂ ಸಹ ಇನ್ನೊಬ್ಬರ ಬಗ್ಗೆ ಅದನ್ನು “ತೀರ್ಪು” ಎಂದು ಘೋಷಿಸುವುದಿಲ್ಲ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರು “ನೀವು ಹೇಳಿದ್ದು ತಪ್ಪು” ಎಂದು ಹೇಳದೆ, ”ನೀವು ಹೇಳಿದ್ದು ನನಗೆ ತಪ್ಪು ಎಂದು ಅನಿಸುತ್ತದೆ” ಎಂದು ಹೇಳುತ್ತಾರೆ ಹಾಗಾಗಿ, ತೀರ್ಪುಗಾರರಲ್ಲ.

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಹೀಗೆ ಜನರನ್ನು ಪ್ರತ್ಯೇಕಿಸಿ “ಗೂಡಿನೊಳಗೆ ಸೇರಿಸು”ವುದರಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು. ಉದಾ: ಅಂತರ್ಮುಖಿ ವ್ಯಕ್ತಿ ಪ್ರಯತ್ನಪಟ್ಟು ಬಹಿರ್ಮುಖಿಯಾಗಲೂ ಬಹುದು. ಇದರಿಂದ ವ್ಯಕ್ತಿಗೆ ತನ್ನ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನೋಪಾಯ/ವೃತ್ತಿ, ಅಧ್ಯಯನ ಮಾರ್ಗ ಆರಿಸಿಕೊಳ್ಳಲು ಸಹಕಾರಿಯಾಗುತ್ತದೆ.

MBTI ತರಹದ್ದೇ ಇನ್ನೊಂದು ಪ್ರಚಲನೆಯಲ್ಲಿರುವ ವ್ಯಕ್ತಿತ್ವ ವಿಶ್ಲೇಷಣೆ ಬಿಗ್-ಫೈವ್ ಅಥವಾ ಒಷನ್ (OCEAN) ಮಾಡೆಲ್. ಇವೆರಡರ ಬಗ್ಗೆ ಮುಂದೊಮ್ಮೆ ತಿಳಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...