Homeಮುಖಪುಟನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ವ್ಯಕ್ತಿತ್ವ ವಿಕಸನ 1- ಮೈಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್

ನಾನು ನನ್ನ ಹಿಂದಿನ ಲೇಖನದಲ್ಲಿ “ಜೀವನಾವಶ್ಯಕ ಕಲೆ” ಬಗ್ಗೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿರುವ  10 ಕಲೆಗಳ ಪೈಕಿ ಮೊದಲನೆಯದಾದ “ಸ್ವ-ಅರಿವು” (ಸೆಲ್ಫ್ ಅವೇರ್ನೆಸ್) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೆ. ಈ ಜೀವನಾವಶ್ಯಕ ಕಲೆಗಳು ನಮಗೆ ಜೀವನದ ಉದ್ದಕ್ಕೂ ಬೇಕಾಗುತ್ತದೆ. ಆದ್ದರಿಂದ ಇದನ್ನು ಚಿಕ್ಕಂದಿನಲ್ಲಿಯೇ ಕಲಿತರೂ ಸಹ, ಸಾಯುವವರೆಗೂ ಬಳಸುತ್ತಿರಬೇಕು. ಇದರಿಂದ ನಾವು ನಿರಂತರ ಲಾಭ ಪಡೆಯಬಹುದು. ಸ್ವ-ಅರಿವನ್ನು ಸ್ವಲ್ಪ ಆಳಕ್ಕಿಳಿಸಿದಾಗ ಓರ್ವ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದನ್ನು ಪರ್ಸನಾಲಿಟಿ ಟ್ರೇಟ್ (Personality Trait) ಎಂದು ಕರೆಯುತ್ತಾರೆ. ಇದರ ಬಗ್ಗೆ ಸುದೀರ್ಘವಾಗಿ ಅಧ್ಯಯನ/ಅನುಸಂಧಾನ ನಡೆಸಿರುವ ಮನೋವೈಜ್ಞಾನಿಕರು ಮತ್ತು ಸಾಮಾಜಿಕ ಶಾಸ್ತ್ರಜ್ಞರು ವ್ಯಕ್ತಿಗಳಲ್ಲಿ ಮುಖ್ಯವಾಗಿ ಎಂಟು ಗುಣಲಕ್ಷಣವನ್ನು ಗುರುತಿಸಿದ್ದಾರೆ. ಇವುಗಳು ಒಂದು ರೀತಿಯಲ್ಲಿ ವಿರೋಧಾಭಾಸ ಅಥವಾ ಜೋಡಿಗಳು ಎಂಬಂತೆಯೂ ಕಾಣುತ್ತವೆ: ಈ ಎಂಟಕ್ಕೆ ಸೂಚಕವಾಗಿ ಒಂದು ಇಂಗ್ಲೀಷ್ ಅಕ್ಷರವನ್ನೂ ಸೇರಿಸಿದ್ದಾರೆ.

1. ಅಂತರ್ಮುಖಿ (ಇನ್ಟ್ರೊವರ್ಟ್)    -I                   2. ಬಹಿರ್ಮುಖಿ (ಎಕ್ಸ್ಟ್ರೊವರ್ಟ್)     – E

3. ಸೂಕ್ಷ್ಮವೇದಿ (ಸೆನ್ಸಿಟಿವ್)         – S                 4. ಸಹಜ ಜ್ಞಾನಿ (ಇನ್ಟ್ಯೂಟಿವ್)      – N

5. ಯೋಚನಾಶೀಲ (ಥಿಂಕಿಂಗ್)     – T                 6. ಸಂವೇದನಾಶೀಲ (ಫೀಲಿಂಗ್)   – F

7. ತೀರ್ಪುಗಾರ (ಜಡ್ಜಿಂಗ್)           – J                 8. ಗ್ರಹಿಕಾಶಕ್ತಿಯ (ಪರ್ಸೆಪ್ಟಿವ್)      – P

ಒಂದು ಗುಣಲಕ್ಷಣ ಪ್ರಮುಖವಾಗಿದ್ದಾಗ ಅದರ ಜೊತೆಗೆ ಮಿಕ್ಕ ಜೋಡಿಗಳ ಪೈಕಿ ಒಂದನ್ನು ಸೇರಿಸಿ ರಚಿಸಿದ ಹದಿನಾರು ಸಂಯೋಗ ಗುಂಪುಗಳನ್ನು ಮೈಯ್ಯರ್ಸ್-ಬ್ರಿಗ್ಸ್ ಟೈಪ್ ಇಂಡಿಕೇಟರ್ (MBTI) ಎನ್ನುತ್ತಾರೆ. ಇದು ಸಂಪೂರ್ಣ ವೈಜ್ಞಾನಿಕ ತತ್ವವಾದ ಎನ್ನಲು ಬರುವುದಿಲ್ಲ, ಆದರೂ ಸಾಕಷ್ಟು ಪ್ರಚಲಿತವಿರುವ ಅರೆ-ವೈಜ್ಞಾನಿಕ ತತ್ವವಾದ ಎನ್ನಲು ಅಡ್ಡಿಯಿಲ್ಲ. ಈ ನಾಲ್ಕು ಅಕ್ಷರದ ಹಣೆಪಟ್ಟಿ ವಿಶ್ಲೇಷಣೆಯಿಂದ ಓರ್ವ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ಬಹಳಷ್ಟು ಮಟ್ಟಿಗೆ ಗ್ರಹಿಸಬಹುದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ. MBTI ರಚಿಸಿದ ಶ್ರೇಯ ಕ್ಯಾಥರೀನ್ ಕುಕ್ ಬ್ರಿಗ್ಸ್ ಮತ್ತು ಅವರ ಮಗಳು ಇಸಬೆಲ್ ಬ್ರಿಗ್ಸ್ ಮೈಯ್ಯರ್ಸ್ ಅವರಿಗೆ ಸಲ್ಲುತ್ತದೆ. ಇದು ಮೂಲತಃ ಕಾರ್ಲ್ ಜಂಗ್ ಎಂಬ ಸ್ವಿಸ್ ಮನೋವಿಜ್ಞಾನಿಯ ತತ್ವವಾದದ ಮೇಲೆ ಆಧರಿಸಲ್ಪಟ್ಟಿವೆ. ಕಾರ್ಲ್ ಜಂಗ್ ಪ್ರಕಾರ ಮನುಷ್ಯರಲ್ಲಿ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬ ನಾಲ್ಕು ಗುಣ-ಲಕ್ಷಣಗಳು, ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಮೇಲೆ ಹೆಸರಿಸಿದ ಎಂಟು ಗುಣ-ಲಕ್ಷಣಗಳನ್ನು ಪ್ರತ್ಯೇಕವಾಗಿ ನೋಡಿದಾಗ:

1. ಅಂತರ್ಮುಖಿ: ಇವರು ಹೆಚ್ಚು ಸಂಘಜೀವಿಗಳಲ್ಲ. ಇವರಿಗೆ ಜನ ಸಂಪರ್ಕಕ್ಕಿಂತ ಒಂಟಿತನ ಹೆಚ್ಚು ಪ್ರಿಯ. ಇವರಿಗೆ ಬೇರೆಯವರೊಂದಿಗೆ ಮಾತುಕತೆ, ಚರ್ಚೆ ಬೇಕಿಲ್ಲ. ಇದು ಒಂದು ರೀತಿಯ ಮನೋದೌರ್ಬಲ್ಯ ಅಥವಾ ರೋಗವಲ್ಲ, ಕೇವಲ ಅವರ ಆಯ್ಕೆ. ತಮಗೆ ಬೇಕಾದ ವಿಷಯದ ಚರ್ಚೆ ನಡೆಯುತ್ತಿದ್ದಾಗ ಇವರು ಇದ್ದಕ್ಕಿದ್ದಂತೆ ಬಹಿರ್ಮುಖಿಯಾಗಿ ಭಾಗವಹಿಸಲೂಬಹುದು ಆದರೆ ಹೆಚ್ಚಾಗಿ ಮೌನವಾದಿ.

2. ಬಹಿರ್ಮುಖಿ: ಅಂತರ್ಮುಖಿಯ ತದ್ವಿರುದ್ಧ, ಇವರಿಗೆ ಯಾವಾಗಲೂ ಜನರ ಜೊತೆ ಇರಬೇಕು. ಏನೇ ಮಾತುಕತೆ ಇರಲಿ, ಚರ್ಚೆ ಇರಲಿ, ಇವರು ಸದಾ ಸಿದ್ಧ. ಇವರಿಗೆ ಒಂಟಿತನ ಇಷ್ಟವಿಲ್ಲ. ಪಕ್ಕದಲ್ಲಿ ಗುರುತಿಲ್ಲದವರಿದ್ದರೂ ಅವರನ್ನು ತಾವಾಗಿಯೇ ಮಾತನಾಡಿಸುತ್ತಾರೆ. ಇವರೂ ಸಹ ತಮಗೆ ಇಷ್ಟವಿಲ್ಲದ ವಿಷಯದ ಚರ್ಚೆ ಬಂದಾಗ ಅಂತರ್ಮುಖಿಯಾಗಿ ಸುಮ್ಮನಿರಲೂಬಹುದು ಆದರೆ ಹೆಚ್ಚಾಗಿ ಮಾತುಗಾರರು.

3. ಸೂಕ್ಷ್ಮವೇದಿ: ಇವರು ಬಹಳ ಸೂಕ್ಷ್ಮ ಸ್ವಭಾವದವರು ಹಾಗಾಗಿ ಯಾವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇವರು ಉದ್ವೇಗಕ್ಕೆ ಬೇಗ ಒಳಗಾಗುತ್ತಾರೆ.

4. ಸಹಜಜ್ಞಾನಿ: ಇವರು ಹೇಳದೆಯೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗುತ್ತದೆ ಎಂದು ಇವರಿಗೆ ಮೊದಲೇ ಅನುಮಾನವಿರುತ್ತದೆ.

5. ಯೋಚನಾಶೀಲ: ಇವರು ಎಲ್ಲವನ್ನೂ ಬಹಳ ಗಂಭೀರವಾಗಿ, ಮಾಹಿತಿ ಸಂಗ್ರಹಿಸಿ, ಆಳವಾಗಿ ಯೋಚಿಸುತ್ತಾರೆ.

6. ಸಂವೇದನಾಶೀಲ: ಇವರು ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

7. ತೀರ್ಪುಗಾರ: ಇವರು ಇನ್ನೊಬ್ಬರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸದಾ ಘೋಷಿಸುತ್ತಿರುತ್ತಾರೆ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರಿಗೆ ಇವರು “ನೀವು ಹೇಳಿದ್ದು ತಪ್ಪು” ಎಂದು ನೇರವಾಗಿ ಉತ್ತರಿಸುತ್ತಾರೆ.

8. ಗ್ರಹಿಕಾಶಕ್ತಿಯ ವ್ಯಕ್ತಿ: ಇವರು ತಮ್ಮ ಅನಿಸಿಕೆಯನ್ನು ಅನಿಸಿದಂತೆ ತಿಳಿಸಿದರೂ ಸಹ ಇನ್ನೊಬ್ಬರ ಬಗ್ಗೆ ಅದನ್ನು “ತೀರ್ಪು” ಎಂದು ಘೋಷಿಸುವುದಿಲ್ಲ. ಉದಾ: ಯಾರೋ ಒಬ್ಬರು ಹೇಳಿದ್ದು ಸರಿ ಇಲ್ಲ ಎಂದು ಇವರಿಗೆ ಅನಿಸಿದಲ್ಲಿ ಅವರು “ನೀವು ಹೇಳಿದ್ದು ತಪ್ಪು” ಎಂದು ಹೇಳದೆ, ”ನೀವು ಹೇಳಿದ್ದು ನನಗೆ ತಪ್ಪು ಎಂದು ಅನಿಸುತ್ತದೆ” ಎಂದು ಹೇಳುತ್ತಾರೆ ಹಾಗಾಗಿ, ತೀರ್ಪುಗಾರರಲ್ಲ.

ಈ ಎಂಟು ಲಕ್ಷಣಗಳು ಯಾವುದೇ ತರಹದ ದೌರ್ಬಲ್ಯವನ್ನು ತೋರಿಸುವುದಿಲ್ಲ, ಕೇವಲ ವ್ಯಕ್ತಿತ್ವದ ವೈಶಿಷ್ಠ್ಯವನ್ನು ತಿಳಿಸುತ್ತದೆ. ಹೀಗೆ ಜನರನ್ನು ಪ್ರತ್ಯೇಕಿಸಿ “ಗೂಡಿನೊಳಗೆ ಸೇರಿಸು”ವುದರಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಈ ಗುಣಲಕ್ಷಣಗಳನ್ನು ಆ ವ್ಯಕ್ತಿ ಅರಿತು ಅದನ್ನು ತನ್ನ “ಶಕ್ತಿ”ಯನ್ನಾಗಿಸಿಕೊಳ್ಳಬಹುದು ಅಥವಾ ಅವರಿಗೆ ಇದು ತನ್ನ ದೌರ್ಬಲ್ಯ ಎಂದು ಅನಿಸಿದಲ್ಲಿ ಅದನ್ನು ತಿದ್ದಿಕೊಳ್ಳಲೂಬಹುದು. ಉದಾ: ಅಂತರ್ಮುಖಿ ವ್ಯಕ್ತಿ ಪ್ರಯತ್ನಪಟ್ಟು ಬಹಿರ್ಮುಖಿಯಾಗಲೂ ಬಹುದು. ಇದರಿಂದ ವ್ಯಕ್ತಿಗೆ ತನ್ನ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನೋಪಾಯ/ವೃತ್ತಿ, ಅಧ್ಯಯನ ಮಾರ್ಗ ಆರಿಸಿಕೊಳ್ಳಲು ಸಹಕಾರಿಯಾಗುತ್ತದೆ.

MBTI ತರಹದ್ದೇ ಇನ್ನೊಂದು ಪ್ರಚಲನೆಯಲ್ಲಿರುವ ವ್ಯಕ್ತಿತ್ವ ವಿಶ್ಲೇಷಣೆ ಬಿಗ್-ಫೈವ್ ಅಥವಾ ಒಷನ್ (OCEAN) ಮಾಡೆಲ್. ಇವೆರಡರ ಬಗ್ಗೆ ಮುಂದೊಮ್ಮೆ ತಿಳಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...