Homeನ್ಯಾಯ ಪಥಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

- Advertisement -
- Advertisement -

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ ‘ನಾಯಕನ ಪಾತ್ರದಲ್ಲಿ ಕಣ್ಣಪ್ಪನಾಗಿ…’ ನಟಿಸುತ್ತಿದ್ದಾರೆ ಎಂದು ಇನ್ನೊಂದು ಹೆಸರನ್ನು ಸೂಚಿಸಿದ್ದರು. ಅದನ್ನು ಕಂಡೊಡನೇ ನನಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ‘ಏಕೆ? ನಾನು ಪಾರ್ಟ್ ಮಾಡುತ್ತಿರುವುದು ಸರಿಯಾಗಿಲ್ಲವೆ?! ಅವರಿಗೆ ತೃಪ್ತಿಯಾಗಲಿಲ್ಲವೇ? ಈ ವಿಷಯ ನನಗೆ ಪತ್ರಿಕೆಯ ಮೂಲಕವೇ ತಿಳಿಯಬೇಕೆ? ನನಗೆ ಇದರ ಸುಳಿವೇ ಕೊಡಲಿಲ್ಲವಲ್ಲ…!!!’ ಎಂದು ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟು ದಿನಗಳಿಂದ ಇದ್ದ ’ಉತ್ಸಾಹ-ಹುಮ್ಮಸ್ಸುಗಳೆಲ್ಲಾ ಕುಸಿದುಬಿದ್ದಿತು. ಒಂದುಕ್ಷಣ ಮನಸ್ಸು ಮಂಕಾಯಿತಾದರೂ ಇದಕ್ಕೆ ಕಾರಣವನ್ನು ಕೇಳಿಯೇ ಬಿಡೋಣ ಎಂದು ಆ ದಿನಪತ್ರಿಕೆಯನ್ನು ಕೈಲಿ ಹಿಡಿದು ನೇರ ನಿರ್ದೇಶಕ ಶ್ರೀಯುತ ಸಿಂಹರವರ ಬಳಿ ಬಂದೆ. ನನ್ನ ಆ ಬಿರುಸಿನ ಬರುವಿಕೆಯನ್ನು ಕಂಡು ‘ಏನಪ್ಪ! ಮುತ್ತುರಾಜು?’ ಎಂದರು.

ನಾನು ‘ಏನಿಲ್ಲ ಸ್ವಾಮಿ! ತಮ್ಮನ್ನ ಒಂದ್ವಿಷಯ ಕೇಳ್ಬೇಕೂಂತ ಬಂದೆ… ಯಾಕ್ ಸ್ವಾಮಿ ನಾನು ತಮ್ಮ ಮನಸ್ಸಿಗೆ ತೃಪ್ತಿ ಕೊಡೋಷ್ಟರ ಮಟ್ಟಿಗೆ ಅಭಿನಯಿಸ್ತಿಲ್ವಾ…?” ಎಂದು ಕೇಳಿದೆ.

ಆಗ ಶ್ರೀಯುತ ಸಿಂಹರವರು ‘ಅದ್ಯಾಕಪ್ಪನಿಂಗೀ ಅನುಮಾನ? ಯಾರ್ ಹೇಳದ್ರು ಹಾಗಂತ?’ ಎಂದು ಕೇಳಿದರು. ತಕ್ಷಣ ನಾನು ಪತ್ರಿಕೆಯನ್ನು ಮುಂದೆ ನೀಡಿದೆ. ‘ಏನಿದೆ ಅದ್ರಲ್ಲಿ?’ ಎಂದು ಹುಸಿನಗೆ ನಕ್ಕರು.

ನಾನು ಆ ಸಾಲನ್ನು ಮಾತ್ರ ಓದಿದೆ. ’ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್, ನೀಲಾಳ ಪಾತ್ರದಲ್ಲಿ ಫಂಡರಿಬಾಯಿ… ಹಾಗೂ ಇತರ ತಾರಾಗಣದಲ್ಲಿ… ಸಂಪೂರ್ಣ ಪಟ್ಟಿಯನ್ನು ಓದಿ ’ಯಾರ್ ಸ್ವಾಮಿ ಈ ರಾಜ್‌ಕುಮಾರ್? ಈ ಪಾತ್ರಕ್ಕೆ ಅವರ್‍ನೇ ಹಾಕ್ ಬೇಕೂಂತಿದೀರಾ? ಹಾಗಾದ್ರೆ ನಾನಿಲ್ವಾ?’ ಎಂದೆ.

ಆಗ ಸಿಂಹರವರು ನಕ್ಕು ‘ಆ ರಾಜ್‌ಕುಮಾರ ಯಾರೂ ಅಲ್ಲಪ್ಪ… ನೀನೇ…’ ಎಂದರು.

ನನಗೆ ತಕ್ಷಣ ಗುಂಡಿಗೆ ಧಡಕ್ ಎಂದಿತು.

‘ನೋಡಪ್ಪ! ಮುತ್ತುರಾಜ್ ಅನ್ನೋದನ್ನ ’ರಾಜ್‌ಕುಮಾರ್ ಅಂತ ಬದಲಾಯ್ಸಿದೆ ಅಷ್ಟೆ’ ಎಂದು ಮಾತು ಮುಂದುವರಿಸಿದರು.

ಆಗ ನನಗೊಂದು ರೀತಿ ನಗು ಬಂದು ಜನಜನಿತವಾದ ಒಂದೆರಡು ಉಪಮಾನದ ವಾಕ್ಯಗಳೂ ನೆನಪಿಗೆ ಬಂದವು.

‘ರೆಕ್ಕೆಯಿಲ್ಲ-ಪುಕ್ಕ ಇಲ್ಲ ಗರುಡಯ್ಯಂಗರ್ರು, ವಿದ್ಯೆ ಇಲ್ಲ-ಬುದ್ಧಿ ಇಲ್ಲ ಶಾರದಮ್ಮನ್ನೋರು, ದುಡ್ಡಿಲ್ಲ-ಕಾಸಿಲ್ಲ ಸಂಪ್ಪತ್ತಯ್ಯಂಗರ್ರು, ರಾಜ್ಯ ಇಲ್ಲ-ಪ್ರಜೆ ಇಲ್ಲ ರಾಜಣ್ಣೋರು ಅನ್ನೋಹಾಗೆ ನನಗ್ಯಾಕ್ ಸ್ವಾಮೀ ಈ ಹೆಸರನ್ನಿಟ್ರಿ? ನಮ್ಮ ಅಪ್ಪಾಜಿಯವರು ಪ್ರೀತಿಯಿಂದ ಆ ರಾಮನ ಸೇವಕನ ಮೇಲಿನ ಭಕ್ತಿಯಿಂದ-ಪ್ರೀತಿಯಿಂದ ಅವನ ವರಪ್ರಸಾದವಾಗಿ ಹುಟ್ಟಿದೇಂತನೋ ಏನೋ ಆ ಮುತ್ತೆತ್ತಿರಾಯನ ಹೆಸರಲ್ಲಿ ನನಗೆ ಮುದ್ದಾಗಿ ’ಮುತ್ತುರಾಜು’ ಅಂತ ಹೆಸರಿಟ್ಟಿದ್ದಾರೆ. ದಯವಿಟ್ಟು ಆ ಹೆಸರ್‍ನ ಬದಲಾಯ್ಸೋದು ಬೇಡ ಸ್ವಾಮಿ, ಅದೂ ಅಲ್ದೇ ನಾಳೆ ಚಿತ್ರ ಬಿಡುಗಡೆ ಆಗಿ ನನ್ನ ಪಾತ್ರ ಜನಕ್ಕೆ ಒಪ್ಪಿಗೆ ಆಗ್ದೆ ‘ಈ ಸೌಭಾಗ್ಯಕ್ಕೆ ಇವ್ನು ’ರಾಜಕುಮಾರ’ ಅಂತ ಬೇರೆ ಹೆಸರನ್ನಿಟ್ಕೊಂಡ್ನೋ…? ಅಂತ ಅಂದ್ಕೋಬಹುದು. ದಯವಿಟ್ಟು ಬೇಡ ಸ್ವಾಮಿ’ ಎಂದೆ.

ಅದಕ್ಕೆ ಸಿಂಹರವರು ‘ನಿಮ್ಮ ಅಪ್ಪನ ಆಶೀರ್ವಾದದಿಂದ್ಲೇ ಈ ಹೆಸರು ಬಂತೂಂದ್ಕೋಪ್ಪ, ನಾನೊಬ್ನೇ ಅಲ್ಲ ಈ ಹೆಸರನ್ನಿಟ್ಟೋನು.. ಈ ಹೆಸರಿನ ಬದಲಾವಣೇಲಿ ವೀರಣ್ಣೋರು ಒಬ್ರು. (ಗುಬ್ಬಿ ವೀರಣ್ಣ) ನಿಮ್ಮಪ್ಪಾಜಿಯವ್ರೇ ಒಂದ್ಸಲ ವೀರಣ್ಣೊರ್‍ನ ಕೇಳಿದ್ರಂತೆ. ‘ನನ್ ಮಗ ನಾಟಕದಲ್ ಪಾರ್ಟ್ ಮಾಡ್ತಿದ್ರೆ ಒಳ್ಳೆ ರಾಜಕುಮಾರನ್ಹಾಗ್ ಕಾಣಸ್ತಾನೆ… ಅವರಿಗೆ ಸಿನಿಮಾದಲ್ ಒಂದ್ ಛಾನ್ಸ್ ಕೊಡಿ ಸ್ವಾಮಿ’ ಅಂತ ಕೇಳಿದ್ರಂತೆ ಅದನ್ನ ವೀರಣ್ಣೋರು ಈ ಸಂದರ್ಭದಲ್ಲಿ ಜ್ಞಾಪಿಸ್ಕೊಂಡು ಅವರ ಅಪ್ಪನ ಆತ್ಮಕ್ಕೆ ಶಾಂತಿ ಸಿಗ್ಲಿ… ಈ ಸಂದರ್ಭದಲ್ಲಿ ಅವರಿಗೆ ’ರಾಜಕುಮಾರ್ ಅಂತನೇ ಹೆಸರಿಟ್ ಬಿಡಿ’ ಅಂದಿದ್ರಂತೆ. ನೋಡಪ್ಪ! ದೊಡ್ಡೋರು ಆಶೀರ್ವಾದ ಮಾಡಿಟ್ಟಿರೋ ಹೆಸರು… ಏನು ಆಗಲ್ಲ… ಹೆದರ್‍ಕೋಬೇಡ ಧೈರ್ಯವಾಗಿರು. ಹಾಗೇನಾದ್ರೂ ಆಗಕ್ ನಾವ್ ಬಿಟ್ ಬಿಡ್ತೀವಾ?’ ಎಂದು ಹೇಳಿದರು ಶ್ರೀಯುತ ಸಿಂಹರವರು.

ಇದರ ಮೇಲೆ ನನಗೆ ಮತ್ತೆ ಮಾತನಾಡಲಾಗಲಿಲ್ಲ. ಅಂತೂ ಆ ಮುತ್ತೆತ್ತಿರಾಯನ ಕೃಪೆಯಿಂದ ಮುಕ್ಕೋಟಿ ಕನ್ನಡ ಕಲಾ ಬಂಧುಗಳ ಹೃದಯದವರ ಮನೆಯಲ್ಲಿ ನಾನು ಉಳಿಯಲು ಸ್ಥಳಾವಕಾಶ ದೊರೆತಿರುವುದು ನನ್ನ ಭಾಗ್ಯವೇ ತಾನೇ?

(ಡಾ. ರಾಜ್ ಕುಮಾರ್ ಆತ್ಮಚರಿತ್ರೆ: ಕಥಾನಾಯಕನ ಕಥೆ ಕೃತಿಯಿಂದ ಆಯ್ದ ಭಾಗ)
ಎ. ಎಸ್. ಪ್ರಭಾಕರ
ಸಂಚಾಲಕರು ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ


ನಿರೂಪಣೆ: ಚಿ. ದತ್ತರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....

ವೈಜಾಗ್ ಸ್ಟೀಲ್ ಅಪಘಾತಕ್ಕೆ 8 ಮಂದಿ ಬಲಿ: ಸಿಬ್ಬಂದಿ ಕೊರತೆಯ ಬಗ್ಗೆ ಕಾರ್ಮಿಕ ಸಂಘಗಳ ಆರೋಪ: ಸಾವಿನ ಅಂಚಿನಲ್ಲೂ ಕುಟುಂಬಕ್ಕಾಗಿ ಮಿಡಿದ ಕಾರ್ಮಿಕ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸೋಮವಾರ (ಜೂನ್ 8, 2026) ಸಂಜೆ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ಸ್ಥಾವರದ ಸ್ಟೀಲ್ ಮೆಲ್ಟ್ ಶಾಪ್-1 (SMS-1)...

ಅಂದು ಪಿಣರಾಯಿ ಮನೆ ಮೇಲೆ ದಾಳಿ; ಈಗ ವೀಣಾ ವಿಜಯನ್‌ಗೆ ಸಮನ್ಸ್‌: ಹಿರಿಯ ಕಮ್ಯುನಿಸ್ಟ್‌ ನಾಯಕನ ಕುಟುಂಬದ ಮೇಲೆ ಇಡಿ ಕಣ್ಣು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಕೊನೆಗೆ ಅಲ್ಲಿ ಏನೂ ಸಿಗದೆ ಬರಿಗೈನಲ್ಲಿ ಅಧಿಕಾರಿಗಳು...

ಮೋದಿ ಸರ್ಕಾರಕ್ಕೆ 12 ವರ್ಷ : 12 ರಿಂದ 4ಕ್ಕೆ ಇಳಿದ ಉಜ್ವಲ ಯೋಜನೆ ಸಿಲಿಂಡರ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ 12 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ ಅಥವಾ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ 2026ರ ಜೂನ್ 9ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ....

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...

ಆಪರೇಷನ್ ಕಮಲ ಭೀತಿ: ರಾಜ್ಯಸಭಾ ಚುನಾವಣೆಗೂ ಮುನ್ನ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಶಿಫ್ಟ್‌?

ಜೂನ್ 18 ರ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಡ್ಡ ಮತದಾನ ತಡೆಗಟ್ಟುವ ಜೊತೆಗೆ ತನ್ನ ಶಿಬಿರದ ಒಗ್ಗಟ್ಟು...

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ...

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...