Homeಮುಖಪುಟಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

- Advertisement -
- Advertisement -

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿನ ಕುರಿತು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತೀವ್ರ ಕಳವಳ ಹಾಗೂ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಮಾಡಿದೆ.  

ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿದ ಆದೇಶದಲ್ಲಿ ಕಾನೂನು ತತ್ವಗಳನ್ನು ಸರಿಯಾಗಿ ಅನ್ವಯಿಸಿಲ್ಲ ಮತ್ತು ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಪೀಠ ಹೇಳಿದೆ.

2021ರ ಕೆ.ಎ ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪನ್ನು ಖಾಲಿದ್‌ಗೆ ಜಾಮೀನು ನಿರಾಕರಿಸಿದ ಪೀಠ ಕಡೆಗಣಿಸಿದೆ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಆಕ್ಷೇಪಿಸಿದ್ದಾರೆ. ನಜೀಬ್ ಪ್ರಕರಣದ ತೀರ್ಪಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯ ಪ್ರಕರಣಗಳಲ್ಲಿ ಸುದೀರ್ಘ ಅವಧಿಯವರೆಗೆ ವಿಚಾರಣೆ ವಿಳಂಬವಾಗುವುದನ್ನು ಜಾಮೀನು ನೀಡಲು ಒಂದು ಪ್ರಮುಖ ಆಧಾರವಾಗಿ ಪರಿಗಣಿಸಲಾಗಿತ್ತು.

2024ರ ‘ಗುರ್ವಿಂದರ್ ಸಿಂಗ್ VS ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪಿನ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಏಕೆಂದರೆ, ಆ ತೀರ್ಪಿನಲ್ಲಿಯೂ ನಜೀಬ್ ಪ್ರಕರಣದ ತೀರ್ಪನ್ನು ಅನ್ವಯಿಸಿರಲಿಲ್ಲ ಎಂಬುವುದಾಗಿ ತಿಳಿಸಿದೆ ಎಂದು livelaw.in ವಿವರಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಸೈಯದ್ ಇಫ್ತಿಕಾರ್ ಅಂದ್ರಾವಿ ಎಂಬವರಿಗೆ ಜಾಮೀನು ಮಂಜೂರು ಮಾಡುವಾಗ ಈ ಅವಲೋಕನಗಳನ್ನು ಮಾಡಿದೆ. ಮಾದಕ ದ್ರವ್ಯಗಳ ಪೂರೈಕೆಯ ಮೂಲಕ ಭಯೋತ್ಪಾದನೆಗೆ ಧನಸಹಾಯ ನೀಡಿದ ಆರೋಪದ ಮೇಲೆ ಯುಎಪಿಎ ಅಡಿ ಬಂಧಿತರಾದ ಅಂದ್ರಾವಿ, 6 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು.

ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ರ ಅಡಿಯಲ್ಲಿ ಕಠಿಣ ನಿಯಮಗಳಿದ್ದಾಗ್ಯೂ, ಸುದೀರ್ಘ ಅವಧಿಯ ಬಂಧನವು ಸಾಂವಿಧಾನಿಕ ನ್ಯಾಯಾಲಯಗಳು ಜಾಮೀನು ನೀಡಲು ಒಂದು ಪ್ರಮುಖ ಆಧಾರವಾಗಿದೆ ಎಂದು ಕೆ.ಎ ನಜೀಬ್ ಪ್ರಕರಣದ ಮೂವರು ನ್ಯಾಯಾಧೀಶರ ಪೀಠ ಸ್ಪಷ್ಟವಾಗಿ ಹೇಳಿರುವುದನ್ನು ನ್ಯಾಯಮೂರ್ತಿ ಭುಯಾನ್ ಉಲ್ಲೇಖಿಸಿದ್ದಾರೆ. ಗುರ್ವಿಂದರ್ ಸಿಂಗ್ ಮತ್ತು ಗುಲ್ಫಿಶಾ ಫಾತಿಮಾ ಪ್ರಕರಣಗಳಲ್ಲಿ(ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ) ಇಬ್ಬರು ನ್ಯಾಯಾಧೀಶರ ಪೀಠಗಳು ನೀಡಿದ ತೀರ್ಪುಗಳು ಸ್ವಲ್ಪ ಭಿನ್ನವಾದ ನಿಲುವನ್ನು ತಳೆದಿವೆ ಎಂದಿದ್ದಾರೆ.

ಗಮನಾರ್ಹವಾಗಿ, ನ್ಯಾಯಪೀಠವು ‘ಗುರ್ವಿಂದರ್ ಸಿಂಗ್’ ಮತ್ತು ‘ಗುಲ್ಫಿಶಾ ಫಾತಿಮಾ’ ಪ್ರಕರಣಗಳಲ್ಲಿ ತಳೆದ ನಿಲುವುಗಳನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದೆ.

"ಕಡಿಮೆ ಸಂಖ್ಯೆಯ ನ್ಯಾಯಾಧೀಶರ ಪೀಠ ನೀಡಿದ ತೀರ್ಪು, ಹೆಚ್ಚಿನ ಸಂಖ್ಯೆಯ ನ್ಯಾಯಾಧೀಶರ ಪೀಠ ಘೋಷಿಸಿದ ಕಾನೂನಿಗೆ ಬದ್ಧವಾಗಿರುತ್ತದೆ. ನ್ಯಾಯಾಂಗ ಶಿಸ್ತು ಅಂತಹ ಬದ್ಧ ತೀರ್ಪನ್ನು ಪಾಲಿಸಬೇಕೆಂದು ಕಡ್ಡಾಯಗೊಳಿಸುತ್ತದೆ ಅಥವಾ ಅದರ ಬಗ್ಗೆ ಸಂದೇಹವಿದ್ದರೆ, ಅದನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕಾಗುತ್ತದೆ. ಸಣ್ಣ ಪೀಠ ದೊಡ್ಡ ಪೀಠದ ತೀರ್ಪಿನ ಸಾರವನ್ನು (ರೇಷಿಯೋ) ದುರ್ಬಲಗೊಳಿಸಲು, ತಪ್ಪಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಭುಯಾನ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ನ್ಯಾಯಪೀಠವು, ಯುಎಪಿಎ ಅಡಿಯಲ್ಲಿ ಸುದೀರ್ಘ ಅವಧಿಯ ವಿಚಾರಣಾ ಪೂರ್ವ ಬಂಧನವನ್ನು ಸಮರ್ಥಿಸಲು ‘ಎನ್‌ಐಎ VS ಜಹೂರ್ ಅಹಮದ್ ಶಾ ವತಾಲಿ’ (2019) ಪ್ರಕರಣದ ನಜೀಬ್-ಪೂರ್ವ ತೀರ್ಪನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ, ಯುಎಪಿಎ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸುವುದೇ ಒಂದು ಸಾಮಾನ್ಯ ನಿಯಮ ಎಂಬುದಾಗಿ ‘ವತಾಲಿ’ ತೀರ್ಪನ್ನು ಅರ್ಥೈಸಲು ‘ಗುರ್ವಿಂದರ್ ಸಿಂಗ್’ ಪ್ರಕರಣದಲ್ಲಿ ಮಾಡಲಾದ ಪ್ರಯತ್ನವನ್ನು ಒಪ್ಪಿಕೊಳ್ಳುವುದು ಕಷ್ಟಕರವಾಗಿದೆ ಎಂದು ತಿಳಿಸಿದೆ.

‘ಗುರ್ವಿಂದರ್ ಸಿಂಗ್’ ಪ್ರಕರಣದಲ್ಲಿ ರೂಪಿಸಲಾದ ‘ಎರಡು ಹಂತದ’ (ಟೂ-ಪ್ರಾಂಗ್) ಪರೀಕ್ಷೆಯು ಯುಎಪಿಎ ಕಾಯ್ದೆಯಿಂದಾಗಲಿ ಅಥವಾ ‘ಕೆ.ಎ ನಜೀಬ್’ ತೀರ್ಪಿನಿಂದಾಗಲಿ ಬಂದಿದ್ದಲ್ಲ ಎಂದೂ ನ್ಯಾಯಪೀಠವು ಹೇಳಿದೆ. ಈ ಎರಡು ಹಂತದ ಪರೀಕ್ಷೆಯ ಪ್ರಕಾರ, ಆರೋಪಿಯು ತನ್ನ ಮೇಲಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾವುದೇ ಹುರುಳಿಲ್ಲ (prima facie merit) ಎಂದು ಸಾಬೀತುಪಡಿಸಿದರೆ ಮಾತ್ರ ಜಾಮೀನನ್ನು ಪರಿಗಣಿಸಲಾಗುತ್ತದೆ. ಆದರೆ, ಇತರ ಯಾವುದೇ ಅಂಶಗಳನ್ನು ಲೆಕ್ಕಿಸದೆ, ವಿಚಾರಣೆಯಲ್ಲಿ ಸುದೀರ್ಘ ವಿಳಂಬವಾಗಿದ್ದರೆ ಜಾಮೀನನ್ನು ಪರಿಗಣಿಸಬೇಕು ಎಂಬ ‘ನಜೀಬ್’ ಪ್ರಕರಣದ ನಿಲುವಿಗೆ ಇದು ಸ್ಪಷ್ಟವಾಗಿ ವಿರುದ್ಧವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.

ಈ ಎರಡು ಹಂತದ ಪರೀಕ್ಷೆಯನ್ನು ಅಳವಡಿಸಿಕೊಳ್ಳುವುದರ ಅಪಾಯವನ್ನು ಎತ್ತಿ ತೋರಿಸುತ್ತಾ, ನ್ಯಾಯಮೂರ್ತಿ ಭುಯಾನ್ ಅವರ ತೀರ್ಪು ಹೀಗೆ ಹೇಳಿದೆ:

"ಒಂದು ವೇಳೆ ಈ ಪರೀಕ್ಷೆಯನ್ನು (ಟೂ-ಪ್ರಾಂಗ್) ಒಪ್ಪಿಕೊಂಡರೆ, ರಾಜ್ಯವು (ಪ್ರಾಸಿಕ್ಯೂಷನ್) ಕೇವಲ ಮೇಲ್ನೋಟದ ಕನಿಷ್ಠ ಅರ್ಹತೆಯನ್ನು ಸಾಬೀತುಪಡಿಸಿದರೆ ಸಾಕು ವಿಚಾರಣೆಯು ವರ್ಷಗಟ್ಟಲೆ ಮುಂದುವರಿಯಬಹುದು. ಇದರ ಪರಿಣಾಮವಾಗಿ, ವಿಚಾರಣಾ ಪೂರ್ವ ಬಂಧನವು ಶಿಕ್ಷೆಯ ನಂತರದ ದಂಡನಾತ್ಮಕ ಸ್ವರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ, ಬಂಧನದ ಅವಧಿಯು ಎಷ್ಟೇ ದೀರ್ಘವಾಗಿದ್ದರೂ ಯಾವುದೇ ನ್ಯಾಯಾಲಯವು ಎಂದಿಗೂ ಜಾಮೀನು ನೀಡುವುದಿಲ್ಲ, ಏಕೆಂದರೆ ಪ್ರಕರಣವು ಮೇಲ್ನೋಟಕ್ಕೆ ಸತ್ಯವಾಗಿರುತ್ತದೆ." 

ಸೆಕ್ಷನ್ 43D(5) ಕೇವಲ ಜಾಮೀನು ನಿರಾಕರಿಸುವ ಏಕೈಕ ಮಾನದಂಡವಾಗಬಾರದು ಮತ್ತು ಇದರಿಂದಾಗಿ ಶೀಘ್ರ ವಿಚಾರಣೆಯ ಸಾಂವಿಧಾನಿಕ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಬಾರದು ಎಂದು ಎಚ್ಚರಿಸುವಾಗ, ‘ನಜೀಬ್’ ತೀರ್ಪು ನಿಖರವಾಗಿ ಇಂತಹ ಪರಿಸ್ಥಿತಿ ಉದ್ಭವಿಸುವುದನ್ನು ತಡೆಯಲು ಪ್ರಯತ್ನಿಸುತ್ತಿತ್ತು ಎಂಬುದು ಅದರ ಸರಳ ಓದಿನಿಂದಲೇ ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

‘ಗುಲ್ಫಿಶಾ ಫಾತಿಮಾ’ ತೀರ್ಪಿಗೆ ಅಸಮ್ಮತಿ

‘ನಜೀಬ್’ ತೀರ್ಪಿನ ತತ್ವವು ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಕ್ಕಾಗಿ ನ್ಯಾಯಪೀಠವು ‘ಗುಲ್ಫಿಶಾ ಫಾತಿಮಾ’ ತೀರ್ಪಿನ ಬಗ್ಗೆಯೂ ತನ್ನ ನಿರ್ದಿಷ್ಟ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ.

‘ಕೆ.ಎ. ನಜೀಬ್’ ತೀರ್ಪು ಎಲ್ಲರನ್ನೂ ಬಾಧಿಸುವ ಕಾನೂನಾಗಿದೆ (binding law) ಮತ್ತು ಇದು ಪೂರ್ವ ನಿರ್ಧರಿತ ತೀರ್ಪಿನ ಗೌರವದ ರಕ್ಷಣೆಗೆ (stare decisis) ಅರ್ಹವಾಗಿದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಇದನ್ನು ವಿಚಾರಣಾ ನ್ಯಾಯಾಲಯವಾಗಲಿ, ಹೈಕೋರ್ಟ್ ಆಗಲಿ ಅಥವಾ ಈ ನ್ಯಾಯಾಲಯದ ಕಡಿಮೆ ಸಂಖ್ಯೆಯ ನ್ಯಾಯಾಧೀಶರ ಪೀಠಗಳಾಗಲಿ ದುರ್ಬಲಗೊಳಿಸಲು, ತಪ್ಪಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಭುಯಾನ್ ಅವರು ಹೇಳಿದ್ದಾರೆ.

ನ್ಯಾಯಪೀಠವು, ಯುಎಪಿಎಯ ಸೆಕ್ಷನ್ 43D(5) ರ ಕಠಿಣ ನಿಯಮಗಳು ಜಾಮೀನು ಪಡೆಯುವುದನ್ನು ಬಹುಪಾಲು ಅಸಾಧ್ಯವಾಗಿಸಿವೆ ಮತ್ತು ಇದು ವಿಚಾರಣಾ ಪೂರ್ವ ಸುದೀರ್ಘ ಬಂಧನಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ನಿರ್ದಿಷ್ಟವಾಗಿ ಗಮನಿಸಿ ‘ಕೆ.ಎ. ನಜೀಬ್’ ತೀರ್ಪನ್ನು ನೀಡಲಾಗಿತ್ತು ಎಂಬುವುದನ್ನು ಉಲ್ಲೇಖಿಸಿದೆ.

ಸಂವಿಧಾನದ ವಿಧಿ 21ರ ಅಡಿಯಲ್ಲಿ ಖಾತರಿಪಡಿಸಲಾದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಗೆ ಕಾರಣವಾಗುವ ಇಂತಹ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿಯೇ, ವಿಚಾರಣೆಯ ವಿಳಂಬದಿಂದ ಉಂಟಾಗುವ ಸುದೀರ್ಘ ಬಂಧನವನ್ನು ಜಾಮೀನು ನೀಡಲು ಒಂದು ಪ್ರಮುಖ ಆಧಾರವಾಗಿ ‘ಕೆ.ಎ. ನಜೀಬ್’ ತೀರ್ಪಿನಲ್ಲಿ ಗುರುತಿಸಲಾಗಿತ್ತು ಎಂದು ಪೀಠವು ತಿಳಿಸಿದೆ.

ದೊಡ್ಡ ಪೀಠಗಳು ರೂಪಿಸಿದ ಪೂರ್ವಾಪರ ತೀರ್ಪುಗಳನ್ನು (precedents) ಬಹಿರಂಗವಾಗಿ ವಿರೋಧಿಸದೇ, ಸಣ್ಣ ಪೀಠಗಳು ಅವುಗಳ ಆಶಯವನ್ನು ಒಳಹೊರತಾಗಿ “ದುರ್ಬಲಗೊಳಿಸುವ” (hollowing out) ಪ್ರವೃತ್ತಿಯ ಬಗ್ಗೆ ನ್ಯಾಯಪೀಠವು ನಿರ್ದಿಷ್ಟವಾಗಿ ತನ್ನ ಅಸಮ್ಮತಿಯನ್ನು ದಾಖಲಿಸಿದೆ.

ಗಮನಾರ್ಹವಾಗಿ, ‘ಗುರ್ವಿಂದರ್ ಸಿಂಗ್’ ಮತ್ತು ‘ಗುಲ್ಫಿಶಾ ಫಾತಿಮಾ’ ಎರಡೂ ಪ್ರಕರಣಗಳ ತೀರ್ಪುಗಳನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರೇ ಬರೆದಿದ್ದರು.

ಯುಎಪಿಎ ಪ್ರಕರಣಗಳಲ್ಲೂ ಜಾಮೀನೇ ನಿಯಮ

ಯುಎಪಿಎ ಅಡಿಯ ಪ್ರಕರಣಗಳಲ್ಲೂ ‘ಜಾಮೀನು ನೀಡುವುದೇ ನಿಯಮ, ಜೈಲಿಗೆ ಕಳುಹಿಸುವುದು ಅಪವಾದ’ ಎಂಬುವುದು ಜಾರಿಯಲ್ಲಿರುತ್ತದೆ ಎಂದು ನ್ಯಾಯಪೀಠ ಪುನರುಚ್ಚರಿಸಿದೆ. ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ರ ಶಾಸನಬದ್ಧ ನಿಷೇಧವು ಸಂವಿಧಾನದ ವಿಧಿಯ (ವಿಧಿ 21ರ) ಖಾತರಿಗೆ ಒಳಪಟ್ಟಿರಬೇಕಾಗುತ್ತದೆ.

ಆದ್ದರಿಂದ, ಯುಎಪಿಎ ಅಡಿಯಲ್ಲೂ ಸಹ ಜಾಮೀನು ನೀಡುವುದು ನಿಯಮ ಮತ್ತು ಜೈಲಿಗೆ ಕಳುಹಿಸುವುದು ಅಪವಾದ ಎಂದು ಹೇಳಲು ನಮಗೆ ಯಾವುದೇ ರೀತಿಯ ಸಂಶಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.







 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...