Homeಚಳವಳಿಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

- Advertisement -
- Advertisement -

| ಡಾ. ಹೆಚ್.ಡಿ. ಉಮಾಶಂಕರ್ |

ತಮಿಳಿನ ಯುವ ನಿರ್ದೇಶಕ ಪಾ ರಂಜಿತ್ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇಲ್ಲಿ ಎರಡು ನೆಲೆಗಳ ಮೂಲಕ  ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕಿದೆ.

 

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ದೇಶಕ ಅಂದರೆ ಪಾ. ರಂಜಿತ್. ತಮಿಳಿನ ಸುಪ್ರಸಿದ್ಧ ನಟ ರಜನಿಕಾಂತ್ ಜೊತೆಗೆ ಒಂದು ಸಿದ್ಧಾಂತದಡಿ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡ ಭೂಪ ಈತ. ಇವರಿಬ್ಬರ ಸಹಯೋಗದಲ್ಲಿ ‘ಕಾಲಾ’ ಎನ್ನುವ ಮರೆಯಲಾಗದ ಸಿನಿಮಾವೊಂದು ಮೂಡಿ ಬಂದು ಇಂದಿಗೂ ನಮ್ಮೆಲ್ಲರೆದೆಯೊಳಗೆ ಹಚ್ಚಹಸಿರಾಗಿ ನಿಂತಿದೆ. “ನನಗೆ ಮತ್ತೊಮ್ಮೆ ಯಾಕೋ ‘ಕಾಲ’ ನೋಡಬೇಕೆನಿಸುತ್ತಿದೆ! ಥಿಯೇಟರಿನಿಂದ ಹೊರಬಂದಾಗ ಅಸಂಖ್ಯಾತ ಜನ ನನ್ನಂತಹ ಕರಿಯರು ‘ಕಾಲ’ನಲ್ಲಿ ಲೀನವಾಗಿ ಯಾವುದೋ ಪ್ರತಿಭಟನೆಯ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ!!” ಎಂದು ಸಿ.ಎಸ್. ದ್ವಾರಕಾನಾಥ್ ಬರೆದಿರುವುದನ್ನು ಗಮನಿಸಿದರೆ ಅದರ ಯಶಸ್ಸಿನ ಗುಟ್ಟು ತಿಳಿಯುತ್ತದೆ. ಭಾರತದಾದ್ಯಂತ ಜಗದ್ವಿಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ತಂತ್ರಜ್ಞರು, ಸಂಗೀತಗಾರರು ಇದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದವರ ಸಾಲೂ ಇಲ್ಲಿದೆ. ಆದರೆ ಇಲ್ಲಿನ ರೋಗಗ್ರಸ್ತ ಮನಸ್ಥಿತಿಗಳನ್ನು ತಿದ್ದುವ ಸಿನಿಮಾಗಳನ್ನು ನಿರ್ಮಿಸಿದವರ ಸಂಖ್ಯೆ ತೀರಾ ವಿರಳಾತಿ ವಿರಳ ಎಂದರೆ ತಪ್ಪಾಗಲಾರದೇನೋ!

ಮೊನ್ನೆ ಡಾ. ರಾಜ್‍ಕುಮಾರ್ ಅವರ ಕಾಮನಬಿಲ್ಲು ಸಿನಿಮಾವನ್ನು ನೋಡುತ್ತಿದ್ದೆ. ಅದರಲ್ಲಿ ರಾಜ್‍ಕುಮಾರ್ ಅವರು, ಇಬ್ಬರು ಮಕ್ಕಳು ವಿನಾಕಾರಣ ಸಣ್ಣ ಜಗಳ ಮಾಡಿಕೊಂಡ ನಿಮಿತ್ತ ಅಲ್ಲಿಗೆ ಬಂದಾಗ ಇಬ್ಬರ ಜಾತಿಯನ್ನೂ ಕೇಳಿ ಅದರಲ್ಲಿ ಒಬ್ಬ ಒಕ್ಕಲಿಗರವನು ಮತ್ತೊಬ್ಬ ಹೊಲೆಯರವನೆಂದು ತಿಳಿದು ಇಬ್ಬರಿಗೂ ‘ಮಕ್ಕಳು ದೇವರ ಸಮಾನ’ ಅನ್ನುವುದನ್ನು ನೆನಪಿಸುತ್ತಾರೆ. ಒಂದಾಗಿ ಬಾಳುವ ಮಹತ್ವವನ್ನು ತಿಳಿಹೇಳಿ ತಾನೂ ಕೂಡ ಅಲ್ಲಿದ್ದ ಎಲ್ಲ ಮಕ್ಕಳ ಜೊತೆಗೆ ಕಬಡ್ಡಿ ಆಟವನ್ನು ಆಡುತ್ತಾರೆ. ಈ ಘಟನೆ ಅದೆಷ್ಟು ನನಗೆ ಕಾಡಿತೆಂದರೆ ಇಡೀ ಚಿತ್ರರಂಗದಲ್ಲಿ ಈ ತರದ ಜಾತ್ಯತೀತ ನೆಲೆಗಳನ್ನು ಬಿತ್ತಿದ ನಿರ್ದೇಶಕರು ಎಷ್ಟಿರಬಹುದು ಎಂದು ಹುಡುಕಲು ಆರಂಭಿಸಿದೆ. ಈ ಹುಡುಕಾಟದಲ್ಲಿ ಸಿಕ್ಕಿದ್ದು ಅಸ್ಪಷ್ಟ ನೆನಪುಗಳೇ ಹೊರತು ನಿಖರ ನೆನಪು ಇಲ್ಲವೇ ಇಲ್ಲ. ನಾನೇನೂ ಎಲ್ಲ ಸಿನಿಮಾಗಳನ್ನು ನೋಡಿಲ್ಲದ ಕಾರಣ, ಜಾತ್ಯತೀತ ನೆಲೆ ಒಂದೊಮ್ಮೆ ಇದ್ದರೆ ಅದಕ್ಕಿಂತ ಖುಷಿ ಬೇರಿಲ್ಲ ಎಂದುಕೊಂಡೆ. ಹೀಗೆ ಯೋಚಿಸುತ್ತಿರುವಾಗ ಮಹತ್ವದ್ದಾಗಿ ಕಾಡಿಸಿದ ನಿರ್ದೇಶಕನೆಂದರೆ ಪಾ. ರಂಜಿತ್. ಆತ ನಂಬಿರುವ ಸಿದ್ಧಾಂತ; ಜಾತಿ, ಧರ್ಮ, ಮತ ಇವುಗಳ ಬಗೆಗಿನ ನಿರ್ದಿಷ್ಟ ನಿಲುವು, ಇವುಗಳು ಹೇಗೆ ಮನುಷ್ಯನನ್ನು ತುಳಿದಿವೆ ಎನ್ನುವ ನೋವು, ಇದರೊಂದಿಗೇ ಬೆರೆತಿರುವ ಜೀವಪರ ನಿಲುವಿನ ಕಳಕಳಿ ಎಲ್ಲವೂ ಮತ್ತೆ ಮತ್ತೆ ಎದೆಗಿಳಿದು ಒಂದು ರೀತಿಯ ಹೆಮ್ಮೆಯ ಭಾವವನ್ನು ತುಂಬುತ್ತಿದ್ದವು.

ಇಂತಹ ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್‍ನ ಇತ್ತೀಚಿನ ಹೇಳಿಕೆಯಂತೂ ತುಂಬಾ ಸದ್ದು ಮಾಡುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇವರು “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇದಕ್ಕೆ ಬಾಲಾ ಎನ್ನುವವವರು ಪೊಲೀಸ್ ಸ್ಟೇಶನ್‍ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದಾರೆ. ಇಲ್ಲಿ ಎರಡು ನೆಲೆಗಳ ಮೂಲಕ ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎನಿಸುತ್ತದೆ. ಒಂದು ಪಾ. ರಂಜಿತ್‍ನ ಸಂಶೋಧನಾ ಮನೋಭಾವ ಮತ್ತು ಸತ್ಯದ ಹಲವು ಮುಖಗಳನ್ನು ಪರಿಚಯಿಸುವ ದಿಟ್ಟ ನೋಟ. ಇನ್ನೊಂದು ದೂರು ದಾಖಲಿಸಿದವರಲ್ಲಿ ಕಾಣುತ್ತಿರುವ ಅಸಹನೆ. ಇವರದ್ದು ಹಳೆಯ ಹಳಹಳಿಕೆಗಳಲ್ಲೇ ಕಾಲ ಕಳೆಯುವ ಮನ. ಯಥಾಸ್ಥಿತಿ ಚೂರು ಅಲುಗಿದರೂ ಅವರು ದಿಗಿಲುಗೊಳ್ಳುತ್ತಾರೆ ಮತ್ತು ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನ ಪರದೆಯಲ್ಲೇ ಸುತ್ತುವ ಹಿನ್ನೋಟವಿರುವ ಹೀನ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಇವೆರಡೂ ಒಂದು ರೀತಿಯಲ್ಲಿ ಈ ಘಟನೆಯಿಂದ ಮುಖಾಮುಖಿಗೊಂಡಿವೆ ಎನಿಸುತ್ತಿದೆ.

ಇಂತಹ ಮುಖಾಮುಖಿ ಇವತ್ತಿನದೇನಲ್ಲ; ಇಂತಹ ಸಾಕಷ್ಟು ಮುಖಾಮುಖಿಗಳು ಜಗತ್ತಿನಾದ್ಯಂತ ನಡೆದು ಹೋಗಿವೆ ಮತ್ತು ನಡೆಯುತ್ತಲೇ ಇವೆ. ಅಂಬೇಡ್ಕರ್ ಅವರು ಈ ದೇಶದ ಸಂಸ್ಕೃತಿ, ಪುರಾಣ, ಶಾಸ್ತ್ರ, ಸ್ಮೃತಿ, ಧರ್ಮ, ಇತಿಹಾಸ ಮುಂತಾದವುಗಳ ತಳಸ್ಪರ್ಶಿ ಅಧ್ಯಯನ ಮಾಡಿ ಅದರೊಳಗಿನ ಮಾನವ ವಿರೋಧಿತನವನ್ನು ಬಿಚ್ಚಿಟ್ಟ ಪರಿಣಾಮ ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಚರಿತ್ರೆಯ ಗತಿಯನ್ನು ಸ್ವಲ್ಪ ನಿಂತು ಹಿಂದಿರುಗಿ ನೋಡಿದರೆ ಸತ್ಯವನ್ನು ಯಾರು ಹೇಳಿದರೆ ತಾನೆ ಏನು? ಎನ್ನುವ ಮನೋಭಾವ ಇಲ್ಲಿ ನೆಲೆನಿಂತಂತೆ ಕಂಡುಬರುವುದಿಲ್ಲ. ಅದನ್ನು ಹೇಳಲಿಕ್ಕೆ ಕೆಲವರು ಬೇಕು! ಅವರು ಹೇಳಿದರೆ ಮಾತ್ರ ಅದು ಸತ್ಯವಾಗಿರುತ್ತದೆ! ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಹಾಗೆ! ಸುಳ್ಳಿನ ಸರಮಾಲೆ ಕಟ್ಟಿದರೂ ಸರಿ ಅವರು ಹೇಳಿದ್ದೇ ಸರಿ! ಎಂದು ನಂಬುವ ಭಾರತೀಯ ಪಡೆ ಇಲ್ಲಿ ಸದಾ ಸನ್ನದ್ಧವಾಗಿ ನಿಂತಿದೆ. ಇದರಿಂದಾಗಿಯೇ ಇಲ್ಲಿ ಚರಿತ್ರೆಯನ್ನು ಕಟ್ಟಿದವರು, ಪುರಾಣ, ಶಾಸ್ತ್ರ ಬರೆದಿಟ್ಟು ಹೋದವರೆಲ್ಲ ಬಹುಪಾಲು ಮೇಲ್ಜಾತಿಗೆ ಸೇರಿದವರೇ! ಹೀಗಿರುವಲ್ಲಿ ತಳಸಮುದಾಯದವರ ಮಾತು ಇವರಿಗೆ ಪಥ್ಯವಾಗುವುದಾದರೂ ಹೇಗೆ? ಪಾ. ರಂಜಿತ್ ವಿಷಯದಲ್ಲೂ ಹೀಗೇ ಆಗಿದೆ. ತಳ ಸಮುದಾಯದವರು ಚಿಂತಿಸಿದರೆ ಅನುಮಾನಿಸುವುದು, ಅವರಿಗಾಗುವ ಅನ್ಯಾಯಗಳ ಬಗ್ಗೆ ಮಾತನಾಡಿದರೆ ದೇಶಕ್ಕೆ ಗಂಡಾಂತರವೇನೋ ಕಾದಿದೆ ಎನ್ನುವಂತೆ ನೋಡುವುದು, ಇಂತಹ ಮನಸ್ಥಿತಿ ಈ ದೇಶದಲ್ಲಿ ಅಘೋಷಿತವಾಗೇ ಬೇರುಬಿಟ್ಟು ನಿಂತಿದೆ. ಇಂತಹ ಮನಸ್ಥಿತಿಯೇ ಸತ್ಯ ಹೇಳಲು ಹೊರಟ ರಂಜಿತ್ ಮೇಲೆ ಕೇಸು ಹಾಕುವಂತೆ ಮಾಡಿದೆ. ಅಷ್ಟಕ್ಕೂ ಈ ವಿರೋಧಿ ಪಡೆ ಇನ್ನೊಂದಕ್ಕಂತೂ ಹೆದರಿ ಕುಂತಿದೆ! ಅದ್ಯಾವುದೆಂದರೆ….ರಂಜಿತ್ ಹೇಳುತ್ತಿರುವ ಸತ್ಯ ಬರವಣಿಗೆಯ ಮಾಧ್ಯಮದ ಮೂಲಕ ಕೆಲವರಿಗಷ್ಟೇ ದಕ್ಕುತ್ತಿತ್ತು. ಈಗ ಸಿನಿಮಾ ಬಂದುಬಿಟ್ಟರೆ ಅದು ಏಕಕಾಲದಲ್ಲಿ ಕೋಟ್ಯಾಂತರ ಜನಕ್ಕೆ ಗೊತ್ತಾಗಿ ತಾವು ಕಟ್ಟಿದ ಸುಳ್ಳಿನ ಪರದೆಗೆ ಎಲ್ಲಿ ಬೆಂಕಿ ಬೀಳುವುದೋ ಎನ್ನುವ ಆತಂಕ ಅವರಿಗೆ ಹೆಚ್ಚಾಗಿದೆ. ಈ ಕಾರಣದಿಂದಲೇ ಆತಂಕದ ಮನಸ್ಸುಗಳೆಲ್ಲ ತೊಡೆತಟ್ಟಿ ನಿಂತಿವೆ ಅಷ್ಟೇ.

ಅಷ್ಟಕ್ಕೂ ಇವರು ಕೊಡುತ್ತಿರುವ ಕಾರಣವಾದರೂ ಏನು? ‘ಇದು ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ವೈಮನಸ್ಯ ಬೆಳೆಸುತ್ತದೆ’ ಎಂದು ಅಲ್ಲವೇ? ಇವರನ್ನೇ ನೇರವಾಗಿ ಕೇಳೋಣ… ಹಾಗಾದರೆ ಇಲ್ಲಿ ಜಾತ್ಯತೀತ ವ್ಯವಸ್ಥೆ ಇದೆಯೋ? ಜಾತಿ ವ್ಯವಸ್ಥೆ ಇದೆಯೋ? ಜಾತಿಜಾತಿಗಳ ಮಧ್ಯ ಪ್ರೀತಿ ಇದ್ದರೆ ತಾನೆ ವೈಮನಸ್ಯದ ಬಗ್ಗೆ ಆತಂಕಗೊಳ್ಳಬೇಕು!.. ಇಲ್ಲಿ ಮೊದಲೇ ತುಂಬಿತುಳುಕುತ್ತಿರುವ ಜಾತಿಗ್ರಸ್ತ ರೋಗದ ಮನಸ್ಸುಗಳಿವೆ. ಇಲ್ಲಿ ಈ ಕಾರಣಕ್ಕಾಗಿ ಸಾವಿರಾರು ಕೊಲೆಗಳು, ಅತ್ಯಾಚಾರಗಳು, ಮಾನಭಂಗಗಳು, ಅವಮಾನಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಇವೆಲ್ಲಕ್ಕೂ ಕುರುಡರಂತೆ ಕಣ್ಮುಚ್ಚಿ ಕುಳಿತು ಶೋಧಕನೊಬ್ಬ ಸತ್ಯ ತೋರಿಸಲು ಹೊರಟರೆ ಉಂಟಾಗಬಹುದಾದ ವೈಷಮ್ಯದ ಬಗ್ಗೆ ಮಾತನಾಡುವುದು ಎಷ್ಟು ಸರಿ?

‘ವ್ಯಕ್ತಿ ಸತ್ತರೂ ಸತ್ಯ ಸಾಯುವುದಿಲ್ಲ’ ಎನ್ನುವುದು ಹಳೆಯ ಮಾತಾದರೂ ಇದು ಸತ್ಯವೇ ಸರಿ. ಆದರೂ ವ್ಯಕ್ತಿಗೆ ಏನಾದರೂ ಆಗುವ ಮೊದಲು ಸತ್ಯದ ಪರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಜೀವಪರ ಇರುವರೆಲ್ಲ ಪಾ. ರಂಜಿತ್ ಪರ ನಿಲ್ಲಬೇಕಿದೆ. ಈ ಮೂಲಕ ಸತ್ಯ ಹೇಳಲು ಹೊರಟವರ ಬಾಯಿ ಮುಚ್ಚಿಸುತ್ತಿರುವ, ಸಂಸ್ಕøತಿ ಹೆಸರಿನಲ್ಲಿ ಹಳೆಯ ಹಳಹಳಿಕೆಯಲ್ಲೇ ಕೂತು ಜಾತಿಗ್ರಸ್ತವಾಗುತ್ತಿರುವ ಹೀನ ಮನಸ್ಸುಗಳ ಹುನ್ನಾರವನ್ನು ಬಯಲುಗೊಳಿಸಿ ಜೀವಪರ ನಿಲುವನ್ನು ಗಟ್ಟಿಗೊಳಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...