Homeಸಿನಿಮಾಸಿನಿ ಸುದ್ದಿಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

ಮಗನಿಗೆ ಅಂಬಿಯ ಆ ಕಿವಿಮಾತು ಮತ್ತು ಪುಟ್ಟಣ್ಣನ ತಮಿಳು ಸಿಟ್ಟು

- Advertisement -
- Advertisement -
  • ಗಿರೀಶ್ ತಾಳಿಕಟ್ಟೆ |

ಮಂಡ್ಯದ ಗಂಡು ಅಂಬಿ ಈಗ ಫುಲ್ ರಿಲೀಫ್ ಮೂಡ್‍ನಲ್ಲಿದ್ದಾರೆ. ತನಗೆ ಆಗಿಬರದ ಪೊಲಿಟಿಕ್ಸ್‍ನ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಅಂಬರೀಷ್, ಆ ಜೇಡರಬಲೆಯಿಂದ ಆಚೆ ಬಂದ ನಂತರ ಸಿಕ್ಕಾಪಟ್ಟೆ ಜಾಲಿ ಮೂಡಿನಲ್ಲಿರುವಂತಿದೆ. ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುತ್ತಾ, ತಮಾಷೆಗೆ ಎದುರಿನವರ ಕಾಲೆಳೆಯುತ್ತಾ ಹಳೇ ಅಂಬರೀಷ್ ಆಗಿ ಸ್ಯಾಂಡಲ್‍ವುಡ್‍ನಲ್ಲಿ ಹಗುರಾಗುತ್ತಿರೋದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆ. ಈ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಪಕ್ಷ ಅಂಬಿಗೆ ಟಿಕೇಟ್ ಘೋಷಿಸಿದರೂ, ಹಳೆ ಮುನಿಸುಗಳನ್ನು ಮುಂದೆಮಾಡಿ ಗೌಡಿಕೆ ಗತ್ತಿನಲ್ಲಿ ಗುಟುರು ಹಾಕಿದ ಅಂಬಿ ಸದ್ಯದ ಮಟ್ಟಿಗೆ ರಾಜಕಾರಣದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡದ್ದು ಅವರ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಬಹಳ ಆರೋಗ್ಯಕರ ನಿರ್ಧಾರ ಅಂತಲೇ ಹೇಳಬೇಕು. ಯಾಕೆಂದರೆ ಒಬ್ಬ ನಟನಾಗಿ ಅಂಬಿ ಅದೆಷ್ಟು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರೋ, ಒಬ್ಬ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಅಷ್ಟೇ ಮೂದಲಿಕೆಗೆ ಗುರಿಯಾಗುತ್ತಾ ಬಂದಿದ್ದರು. ಶಾಸಕ, ಸಚಿವರಾಗಿ ಅಂಬಿ ಜನರ ಕೈಗೆ ಸಿಗುವುದೇ ಇಲ್ಲವೆನ್ನುವ ಆಪಾದನೆಗಳು ದಂಡಿಯಾಗಿ ಕೇಳಿಬರುತ್ತಿದ್ದವು. ಹಾಗೆ ನೋಡಿದರೆ, ಅಂಬಿಯ ವ್ಯಕ್ತಿತ್ವಕ್ಕೆ ಇವತ್ತಿನ ಈ ಹಾಳು ಪೊಲಿಟಿಕ್ಸ್ ಒಗ್ಗುವಂತದ್ದೇ ಆಗಿರಲಿಲ್ಲ. ಮುಂದೆ ಹೇಗೋ, ಏನೋ, ಸದ್ಯಕ್ಕೆ ಎಲೆಕ್ಷನ್ ರಾಜಕಾರಣದ ಜಂಜಡದಿಂದ ಹೊರಬಂದ ತರುವಾಯ ಸಿನಿಮಾಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗುತ್ತಾ ತನ್ನ ಹಳೆಯ ಕೀಟಲೆ ದಿನಗಳತ್ತ ಅಂಬಿ ಮರುಪಯಣಿಸುತ್ತಿರೋದು Really a Good Sign!

ಸದ್ಯ, ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಶೂಟಿಂಗ್‍ನಲ್ಲಿ ಅಂಬಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ `ಪಾ ಪಾಂಡಿ’ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಅಂಬಿ ಪಾತ್ರದ ಯೌವ್ವನದ ದಿನಗಳ ರೂಪದಲ್ಲಿ ಸುದೀಪ್ ನಟಿಸುತ್ತಿದ್ದರೆ, ಅಂಬಿಗೆ ಜೋಡಿಯಾಗಿ 14 ವರ್ಷಗಳ ನಂತರ ನಟಿ ಸುಹಾಸಿನಿ ಹೆಜ್ಜೆ ಹಾಕಿದ್ದಾರೆ. ಇದರ ನಡುವೆ ಹೊಸಬರ ಚಿತ್ರಗಳ ಮುಹೂರ್ತ, ಸಿನಿಮಾ ಕಾರ್ಯಕ್ರಮಗಳು, ಪ್ರಶಸ್ತಿ ಸಮಾರಂಭಗಳಲ್ಲೂ ಅಂಬಿ ದಿಲ್‍ಖುಷ್ ಆಗಿ ಭಾಗವಹಿಸುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ, ನಟ ಯಶ್‍ಗೆ ಅಡ್ಡ ಹಾಕಿಕೊಂಡು `ಬಡ್ಡೇತದೆ, ನಿನ್ನ ಮುಖದ ಮೇಲೆ ಗಡ್ಡ ಸರಿ ಕಾಣಕ್ಕಿಲ್ಲ, ಗಡ್ಡ ಯಾವಾಗ್ಲಾ ತಗೀತೀಯಾ?’ ಅಂತ ಆತ್ಮೀಯವಾಗಿ ಗದರಿಕೊಂಡಿದ್ದ ಅಂಬಿ ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಿಗ್‍ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡಳ ಜೊತೆಗೆ ಅವಳದೇ ಧಾಟಿಯಲ್ಲಿ ಮಾತಾಡಿ, ಕಾಲೆಳೆದು ಕಿಚಾಯಿಸಿದ್ದರು. ಪಕ್ಕಾ ಪೊಲಿಟಿಷಿಯನ್ ಅವತಾರದಲ್ಲಿದ್ದಾಗ ಇಂಥಾ ಕಾರ್ಯಕ್ರಮಗಳಿಗಿರಲಿ, ಸರ್ಕಾರಿ ಸಮಾರಂಭಗಳಿಗೇ ಚಕ್ಕರ್ ಹೊಡೆಯುತ್ತಿದ್ದ ಅವರು ಈಗ ಕೊಂಚ ಬದಲಾಗಿದ್ದಾರೆ, ಬದಲಾಗುತ್ತಿದ್ದಾರೆ.

ಇದೀಗ ಅಂಬಿಯ ಮಗ ಅಭಿಷೇಕ್ ಗೌಡ ಕೂಡಾ `ಅಮರ್’ ಸಿನಿಮಾದ ಮೂಲಕ ಹೀರೋ ಆಗಲು ಸಜ್ಜಾಗಿದ್ದಾನೆ. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಅಭಿಷೇಕ್‍ಗೆ ನಾಯಕಿಯಾಗಿ ತಾನ್ಯ ನಟಿಸುತ್ತಿದ್ದಾರೆ. ಜೆಪಿ ನಗರದ ದೇವಸ್ಥಾನದಲ್ಲಿ ಮುಹೂರ್ತವೂ ಮುಗಿದಿದೆ. ಇನ್ನೇನು ಚಿತ್ರೀಕರಣ ಶುರುವಾಗಬೇಕು ಅಷ್ಟೇ. ಅಂದಹಾಗೆ, ಹೀರೊ ಆಗಲು ಹೊರಟಿರುವ ಮಗನಿಗೆ ಅಂಬಿ ಒಂದು ಕಿವಿಮಾತು ಹೇಳಿದ್ದಾರೆ. ಅದೇನು ಗೊತ್ತಾ, `ನನ್ನ ಥರಾ ಯಾವತ್ತೂ ಸೆಟ್‍ಗೆ ಲೇಟಾಗಿ ಹೋಗ್ಬೇಡ’ ಅಂತ! ಅಂಬಿ ಶೂಟಿಂಗ್ ಸ್ಪಾಟ್‍ಗೆ ಲೇಟಾಗಿ ಬರೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್ಸು. ಅದು ಇವತ್ತು ನಿನ್ನೆಯ ಅಭ್ಯಾಸವಲ್ಲ, ಮೊದಲ ಸಿನಿಮಾದ ಮೊದಲ ದಿನದಿಂದಲೇ ಅಂತದ್ದೊಂದು ಅದ್ಭುತ ಸಂಪ್ರದಾಯವನ್ನ ಪಾಲಿಸಿಕೊಂಡು ಬರ್ತಿದಾರೆ. ನಾಗರಹಾವು ಸಿನಿಮಾದ ಶೂಟಿಂಗ್‍ನ ಮೊದಲ ದಿನ ಅಂಬಿ ಸೆಟ್‍ಗೆ ತಡವಾಗಿ ಬಂದಿದ್ದರಂತೆ. ಆಗ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಿಟ್ಟಿನಿಂದ ಯಾಕಯ್ಯ ಲೇಟು ಅಂತ ಕೇಳಿದಾಗ, ಅಂಬಿ ಗುರುವಿನ ಎದುರು ನುಲಿದಾಡುತ್ತಾ `ದಾರೀಲಿ ಟೈರ್ ಪಂಕ್ಚರ್ ಆಗ್ಬಿಟ್ಟಿತ್ತು, ಸಾರ್, ಅದ್ಕೆ ಒಸಿ ಲೇಟಾಯ್ತು’ ಅಂತ ಏನೋ ಕಥೆ ಕಟ್ಟಲು ಹೋದರಂತೆ. ಆಗ ಪುಟ್ಟಣ್ಣ ಪಕ್ಕದಲ್ಲಿದ್ದ ತನ್ನ ತಮಿಳು ಅಸಿಸ್ಟೆಂಟ್ ಕಡೆ ತಿರುಗಿ ಅದೇ ಸಿಟ್ಟಿನಲ್ಲಿ `ನಾ ಕಥೆ ಏಡಕ್ಕೆ ವಂದಿರ್ಕೆ, ಕೇಕ್ಕೆ ವಂದಿಲ್ಲೈ’ (ನಾ ಕಥೆ ಹೇಳ್ಲಿಕ್ಕೆ ಬಂದಿದೀನಿ, ಕಥೆ ಕೇಳಕ್ಕೆ ಅಲ್ಲ!) ಎಂದು ಶೂಟಿಂಗ್‍ನಲ್ಲಿ ಬ್ಯುಸಿಯಾದರಂತೆ. ಅವತ್ತಿಂದ ಇಲ್ಲಿಯವರೆಗೂ ಅಂಬಿ ಶೂಟಿಂಗ್ ಸ್ಪಾಟ್‍ಗೆ ಆನ್‍ಟೈಂ ಬಂದಿದ್ದೇ ಅಪರೂಪ. ಅಂಥಾ ತನ್ನ ಗುಣವನ್ನು ನೀನು ಕಲೀಬೇಡ ಎಂದು ಮಗನಿಗೆ ಟಿಪ್ಸ್ ಕೊಟ್ಟಿದ್ದಾರೆ ಮಂಡ್ಯದ ಗಂಡು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...