Homeಅಂಕಣಗಳು'ಅವರ ಅರಿವಿನ ಪಾದಕ್ಕೆ ಶರಣು'

‘ಅವರ ಅರಿವಿನ ಪಾದಕ್ಕೆ ಶರಣು’

- Advertisement -
- Advertisement -

 

ಅಂಕಿ ಅಂಶಗಳು ಯಾವಾಗಲೂ ಬೋರ್‍ಹೊಡೆಸುತ್ತವೆ. ಕ್ಷಮಿಸಿ, ಈ ಅಂಕಿಅಂಶಗಳನ್ನು ಹೇಳಲೇಬೇಕಾಗಿದೆ.

2017ರ ಫೆಬ್ರವರಿ ಮೊದಲ ವಾರದಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹಖಾತೆಯ ರಾಜ್ಯಸಚಿವ ಕಿರಣ್ ರಿಜಿಜು ಈ ಅಂಕಿ-ಅಂಶಗಳನ್ನು ನೀಡಿದರು. ಆ ಪ್ರಕಾರ ಉತ್ತರಪ್ರದೇಶದ ಕೋಮುಗಲಭೆಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. 2015ರಲ್ಲಿ ನಡೆದ 155 ಗಲಭೆಗಳಲ್ಲಿ 22 ಜನರು ಬಲಿಯಾಗಿ, 419 ಮಂದಿ ಗಾಯಗೊಂಡಿದ್ದರು. 2016ರಲ್ಲಿ ಒಟ್ಟು 162 ಗಲಭೆಗಳು ನಡೆದು 29 ಮಂದಿ ಸತ್ತು, 488 ಮಂದಿ ಗಾಯಗೊಂಡಿದ್ದರು. 2017ರ ಅಧಿಕೃತ ಅಂಕಿಅಂಶಗಳ ಪ್ರಕಾರ 195 ಕೋಮುಗಲಭೆಗಳು ನಡೆದಿದ್ದು 44 ಮಂದಿ ಕೊಲೆಯಾಗಿ 452 ಮಂದಿ ಗಾಯಗೊಂಡಿದ್ದರು. ದೇಶದಾದ್ಯಂತ ಕೋಮುಗಲಭೆಗಳಲ್ಲಾದ ಸಾವುಗಳಲ್ಲಿ ಶೇ.40ರಷ್ಟು ಸಾವುಗಳು ಉತ್ತರಪ್ರದೇಶದಲ್ಲೇ ನಡೆದಿದ್ದವು.

ಈ ಸರಣಿ ಗಲಭೆಗಳನ್ನು ಅನುಸರಿಸುತ್ತಾ 2017ರ ಫೆಬ್ರವರಿ 11ರಿಂದ ಮಾರ್ಚ್ 8ರವರೆಗೆ ಅಲ್ಲಿ ಚುನಾವಣೆ ನಡೆಯಿತು. ಫಲಿತಾಂಶ ಹೊರಬಿದ್ದಾಗ ಒಟ್ಟು 403 ಸೀಟುಗಳ ವಿಧಾನಸಭೆಯಲ್ಲಿ 312 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಇದು ಕೇವಲ ಉತ್ತರಪ್ರದೇಶದ ಕತೆ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳ ಹೊಸ್ತಿಲಲ್ಲಿ ಕೋಮುಗಲಭೆಗಳು ನಡೆಯುವುದು ಒಂದು ವಾಡಿಕೆಯಂತಾಗಿ ಹೋಗಿದೆ.

ಆದರೆ ಕರ್ನಾಟಕದ ನೆಲದಲ್ಲಿ ಈ ಸ್ಟ್ರಾಟೆಜಿ ಫಲಿಸಲಿಲ್ಲ. ಮಾತ್ರವಲ್ಲ, ಕಳೆದ ಕೆಲವು ತಿಂಗಳ ವಿದ್ಯಮಾನಗಳನ್ನು ಅವಲೋಕಿಸಿದರೆ ಈ ಷಡ್ಯಂತ್ರ ಮತೀಯ ಶಕ್ತಿಗೆ ತಿರುಗುಬಾಣವಾಗಿ ಪರಿಣಮಿಸಿದೆ ಎಂಬುದು ವೇದ್ಯವಾಗುತ್ತದೆ.

ಹೆಣ ರಾಜಕಾರಣ..

ಚುನಾವಣೆಯ ಪೂರ್ವತಯಾರಿಯೆಂಬಂತೆ ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆಯ ಕಾರ್ಮೋಡಗಳು ಕವಿದುಕೊಂಡಿದ್ದು, ನಾಡಿನ ಸೌಹಾರ್ದಪ್ರಿಯ ಜನತೆಯಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿತ್ತು. ಹೆಣಗಳನ್ನು ಮುಂದಿಟ್ಟುಕೊಂಡು ಕೋಮು ದಳ್ಳುರಿ ಎಬ್ಬಿಸಲು ಸ್ವತಃ ಶಾಸಕರು, ಸಂಸದರು, ಅಷ್ಟೇ ಏಕೆ? ಕೇಂದ್ರದ ಮಂತ್ರಿ ಅನಂತಕುಮಾರ್ ಹೆಗಡೆಯವರೇ ಅಖಾಡಕ್ಕಿಳಿದರು. ಜನರಿಂದ ಬಂದ ಸ್ಪಂದನೆ ಅವರ ಲೆಕ್ಕಾಚಾರಕ್ಕೆ ವಿರುದ್ಧವಾಗಿತ್ತು.

ಮಂಗಳೂರಿನಲ್ಲಿ ಕೊಲೆಯಾದ ನತದೃಷ್ಟ ಯುವಕ ದೀಪಕ್ ರಾವ್ ಕೆಲಸ ಮಾಡುತ್ತಿದ್ದ ಮೊಬೈಲ್ ಅಂಗಡಿಯ ಮಾಲಿಕ ಒಬ್ಬ ಮುಸ್ಲಿಂ. ಆತ ದೀಪಕ್‍ನ ಕುಟುಂಬದವರಂತೆಯೇ ದುಃಖಿತನಾಗಿದ್ದ. ಆ ಮಾಲಿಕನ ಹೆಂಡತಿ ದೀಪಕ್‍ನ ತಾಯಿಯನ್ನು ತಬ್ಬಿ ಸಂತೈಸಿದ್ದು, ತನ್ನ ಸ್ವಂತ ಮಗನೇ ಸತ್ತಂತೆ ಆ ತಾಯಿ ಹೃದಯ ರೋದಿಸಿದ್ದು ಬಹುಜನರ ಅಂತಃಕರಣವನ್ನು ಕಲಕಿತ್ತು. ಕೊಲೆಯಾದ ಶರತ್ ಮಡಿವಾಳ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ಆತನ ನೆರವಿಗೆ ಧಾವಿಸಿ, ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದವನು ಒಬ್ಬ ಮಸಲ್ಮಾನ ಆಟೋ ಚಾಲಕನಾಗಿದ್ದ. ಈ ಘಟನೆಗಳು ಒಟ್ಟಾರೆ ನಾಡಿನ ಜನಸ್ಪಂದನೆಯ ಕೆಲ ಬಿಡಿ ಚಿತ್ರಗಳಷ್ಟೆ.

ಚುನಾವಣೆಗೆ ತಯಾರಿಯೆಂಬಂತೆ ಅನಾವರಣಗೊಳ್ಳಲಿದ್ದ ಮತೀಯ ಜ್ವಾಲೆಯ ಅಪಾಯದ ವಿರುದ್ದ ಹಲವಾರು ಸಂಘಟನೆಗಳು, ಸಾಹಿತಿ, ಕಲಾವಿದರು, ಚಿಂತಕರು ದನಿಯೆತ್ತಿದರು. ಜನಸಾಮಾನ್ಯರು ಕೂಡ ಈ ಷಡ್ಯಂತ್ರವನ್ನು ಮನಗಂಡು ಈ ಕೋಮುವ್ಯಾಧಿಗಳನ್ನು ಪ್ರಶ್ನಿಸಿದರು, ಅವರ ಮತೀಯ ಕರೆಗಳನ್ನು ತಿರಸ್ಕರಿಸಿದರು. ಬಹುಶಃ ಇದು ನಮ್ಮ ಮಣ್ಣಿನ ಗುಣ ಅನಿಸುತ್ತೆ.

ಅತ್ತ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಇಂಥದೇ ಅಜೆಂಡಾ ಜಾರಿ ಮಾಡಲು ಹೊರಟಿದ್ದು, ಮೈಮೇಲೆ ದೆವ್ವ ಬಂದವನಂತೆ ಕೂಗಾಡಿ ಪೊಲೀಸರ ಬ್ಯಾರಿಕೇಡ್ ಮೇಲೆಯೇ ಕಾರು ಚಲಾಯಿಸಿ, ಪೊಲೀಸರನ್ನು ಗಾಯಗೊಳಿಸಿದ್ದೂ ಆಯ್ತು. ಈತನ ಈ ಗೂಂಡಾ ವರ್ತನೆಗೆ ಸ್ಪಷ್ಟೀಕರಣ ಎಂಬಂತೆ ತದನಂತರ ಒಂದು ವಾಟ್ಸಪ್ ವಿಡಿಯೋ ವೈರಲ್ ಆಗಿತ್ತು. ಅದು ಬಿಜೆಪಿಯ ಹುನ್ನಾರವನ್ನು ಬಟಾಬಯಲಾಗಿಸಿತ್ತು. ಕರ್ನಾಟಕದ ಬಿಜೆಪಿ ಕಾರ್ಯಕರ್ತರ ‘ದುರ್ಬಲ’ ಚಟುವಟಿಕೆಗಳನ್ನು ವಿಮರ್ಶಿಸಿದ ಅಮಿತ್ ಶಾ ‘ನೀವು ಎಷ್ಟು ಲಾಠಿ ಚಾರ್ಜ್ ಮಾಡಿಸಿದ್ದೀರಿ? ಎಷ್ಟು ಟಿಯರ್ ಗ್ಯಾಸ್ ಹೋರಾಟ ಮಾಡಿದ್ದೀರಿ? ಎಷ್ಟು ಕಫ್ರ್ಯೂ ಬೀಳುವ ಹೋರಾಟ ಮಾಡಿದ್ದೀರಿ?’ ಅಂತ ಪ್ರಶ್ನೆ ಮಾಡಿ, ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವಂತೆ ಬೋಧಿಸಿದ್ದರೆಂದೂ, ಅದರ ಪ್ರಕಾರವೇ ನಾವು ಇಂತಹ ಹೋರಾಟ ನಡೆಸುತ್ತಿದ್ದೇವೆಂದೂ ಸ್ವತಃ ಪ್ರತಾಪ ಸಿಂಹ ವಿವರಣೆ ಕೊಟ್ಟಿದ್ದ! ಈ ವಿಡಿಯೋ ಬಹಿರಂಗವಾದ ನಂತರ ಈ ಸಿಮ್ಮ ತಲೆತಪ್ಪಿಸಿಕೊಂಡು ತಿರುಗಾಡಬೇಕಾಯ್ತು.

ಹೀಗೆ ಬೆಂಕಿ ಹಚ್ಚಿ ಮತಗಳನ್ನು ದೃವೀಕರಣ ಮಾಡುವ ಅಮಿತ್ ಶಾನ ಈ ‘ಮಾಸ್ಟರ್ ಸ್ಟ್ರಾಟೆಜಿ’ಗಳು ಕರ್ನಾಟಕದಲ್ಲಿ ಮಕಾಡೆ ಬಿದ್ದಿವೆ. ಇವರು ಹೆಚ್ಚೆಚ್ಚು ಆಕ್ರಮಣಶಾಲಿಯಾಗಿ ವರ್ತಿಸಿದಷ್ಟೂ ಜನರು ಇವರಿಂದ ದೂರ ಸರಿದಿದ್ದು ಮಾತ್ರ ನಿಜ. ಹೀಗಾಗಿ ವಿಧಿಯಿಲ್ಲದೆ ಇವರು ಪ್ಲೇಟು ಬದಲಿಸಬೇಕಾಯ್ತು. ನಂತರ ಜನಪ್ರಿಯ ಯೋಜನೆಗಳಾದ ಅನ್ನ ಭಾಗ್ಯದ ಯಶಸ್ಸು ಮೋದಿಯದು ಎಂದರು. ನುಡಿದಂತೆ ನಡೆದಿದ್ದೇವೆ ಎಂಬ ಕಾಂಗ್ರೆಸ್ ಘೋಷಣೆಯನ್ನೇ ಹೈಜಾಕ್ ಮಾಡುವ ಹತಾಶ ಪ್ರಯತ್ನ ಮಾಡಿದರು. ಊಹೂಂ, ಯಾವುದೂ ವರ್ಕ್‍ಔಟ್ ಆಗುತ್ತಿಲ್ಲ.

ಗತಿಯಿಲ್ಲದೆ ಈಗ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ವರ್ಕ್‍ಔಟ್ ಮಾಡುತ್ತಿದ್ದಾರೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಯಾವ ಸ್ಥಿತಿಗೆ ದೂಡಲ್ಪಟ್ಟಿದ್ದಾರೆಂದರೆ ತಮ್ಮ ಉಡುಪಿಯ ಸಮಾವೇಶದಲ್ಲಿ ಸ್ವತಃ ಪ್ರಧಾನಿ ಮೋದಿಯೇ ದೇವೇಗೌಡರನ್ನು ಯದ್ವಾತದ್ವಾ ಹೊಗಳಿದ್ದಾರೆ. ‘ದೇವೇಗೌಡರು ವೃದ್ಧಾಶ್ರಮ ಸೇರಿಕೊಳ್ಳಲಿ’ ಎಂದು ಹೀಯಾಳಿಸಿ ಇದೇ ಮೋದಿ ಮಾತಾಡಿದ್ದರೆಂಬುದನ್ನು ಮರೆಮಾಚಿದ ದೊಡ್ಡಗೌಡರು ಮೋದಿಯ ‘ಮುತ್ಸದ್ದಿತನ’ ಮೆಚ್ಚಿ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ವಿರುದ್ಧ ಎಂದು ತೋರಿಸಿಕೊಳ್ಳಲು ಅವರು ನಡೆಸುತ್ತಿರುವ ಹತಾಶ ಕಸರತ್ತುಗಳು ಜನರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿವೆಯಷ್ಟೆ. ಒಂದೆಡೆ ಅಕ್ರಮ ಗಣಿದಣಿ ‘ಜನಾರ್ಧನರೆಡ್ಡಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ವೆಂದು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹೇಳುತ್ತಿದ್ದರೆ, ಅದರ ಬೆನ್ನಿಗೇ ಯಡ್ಯೂರಪ್ಪನವರು ‘ರೆಡ್ಡಿ ನಮ್ಮ ಪಕ್ಷದ ದೊಡ್ಡ ಶಕ್ತಿ, ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಅಮಿತ್‍ಶಾ ಅವರೇ ಹೇಳಿದ್ದಾರೆ’ ಅಂದುಬಿಡೋದೇ? ಇವರ ಇಂಥಾ ಗೋಸುಂಬೆ ಬಣ್ಣ ಆಡಿಕೊಳ್ಳುವವರಿಗೆ ಸರಕಾಗಿದೆ.

ಫೆಬ್ರವರಿ 19ರಂದು ಶ್ರವಣಬೆಳಗೊಳದಲ್ಲಿ ಮಾತಾಡಿದ ಮೋದಿ ‘ಸಮಾಜದಲ್ಲಿ ಅನಾಚಾರ ವ್ಯಾಪಿಸಿದಾಗ ಸಂತರು, ಮುನಿಗಳು ಜನ್ಮತಾಳಿ ಸಮಾಜವನ್ನು ಸರಿದಾರಿಗೆ ತಂದಿದ್ದಾರೆ. ಅನಾಗರಿಕತೆಯಿಂದ ನಾಗರಿಕತೆಯ ಕಡೆ ಬದುಕಲು ಪ್ರೇರಣೆ ನೀಡಿದ್ದಾರೆ’ ಎಂದು ಭರ್ಜರಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದರು. ಮೊನ್ನೆಯ ದಿನ ಸಚಿವ ಅನಂತಕುಮಾರ್ ಹೆಗಡೆ, ರಾಹುಲ್‍ಗಾಂಧಿಯನ್ನು ಟೀಕಿಸುವ ಭರದಲ್ಲಿ ಶ್ರವಣಬೆಳಗೊಳದ ಬಾಹುಬಲಿಯನ್ನು ಅಪಹಾಸ್ಯ ಮಾಡಿ ತನ್ನ ನಿಜ ಬಣ್ಣ ತೋರಿಸಿಯೇಬಿಟ್ಟರು. ಇದರಿಂದ ಆಕ್ರೋಶಗೊಂಡ ಜೈನರು ಈ ಹರಕುಬಾಯಿ ಸಚಿವನ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದ್ದಾರೆ.

ಹಾಗೆಯೇ ಕನ್ನಡ ಸೆಂಟಿಮೆಂಟನ್ನು ಎನ್‍ಕ್ಯಾಷ್ ಮಾಡಿಕೊಳ್ಳಲು ಹೋದ ಮೋದಿ ಮಹಾಶಯ ‘ನಾನೊಬ್ಬ ಕನ್ನಡಿಗ’ ಎಂದು ಹೇಳಿದ್ದು ಇನ್ನಷ್ಟು ಪೀಕಲಾಟಕ್ಕೆ ಇಟ್ಟುಕೊಂಡಿದೆ. ‘ನೀವು ನಿಜವಾದ ಕನ್ನಡಿಗನೇ ಆಗಿದ್ದರೆ ಕನ್ನಡ ನಾಡ ದ್ವಜಕ್ಕೆ ಮಾನ್ಯತೆ ಕೊಡಿ’ ಎಂದರೆ ಅವರಲ್ಲಿ ಉತ್ತರವಿಲ್ಲ. ಹೀಗೆ ಅವರ ಪ್ರತಿಯೊಂದು ತಂತ್ರವೂ ಬೂಮರಾಂಗ್ ಆಗುತ್ತಿದೆ; ಉಗ್ರ ಆಟಾಟೋಪ ದಿನೇದಿನೇ ಕ್ಷೀಣವಾಗುತ್ತಿದೆ. ಸ್ವತಃ ಮೋದಿಯ ಮಾತುಗಳೇ ಆಕರ್ಷಣೆ ಕಳೆದುಕೊಂಡಿವೆ.

ಹೀಗೆ ಕರ್ನಾಟಕದಲ್ಲಿ ಸೋ ಕಾಲ್ಡ್ ಚಾಣಕ್ಯ ಅಮಿತ್ ಶಾ ಹೆಣೆಯುತ್ತಿರುವ ತಂತ್ರಗಳು ಒಂದೊಂದಾಗಿ ಫ್ಲಾಪ್ ಆಗಿದ್ದು ನಾಡಿನ ಶಾಂತಿ, ಸೌಹಾರ್ದ ಪರಂಪರೆ ಸದ್ಯಕ್ಕೆ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಇದು ಬಸವಣ್ಣನ ನಾಡು, ಶರೀಫಜ್ಜ, ಕುವೆಂಪು ಅವರ ನಾಡು. ಇಲ್ಲಿ ಸೌಹಾರ್ದ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ನಮ್ಮ ಸೌಹಾರ್ದ ಪರಂಪರೆಯನ್ನು ಉಳಿಸಿ, ಬೆಳೆಸಲಿಕ್ಕಾಗಿ ಅನೇಕ ಚೇತನಗಳು ದುಡಿಯುತ್ತಿವೆ. ಅವರೆಲ್ಲರ ಅರಿವಿನ ಪಾದಕ್ಕೆ ಶರಣು ಎನ್ನೋಣ.

  • ಸಂಪಾದಕೀಯ ತಂಡದ ಪರವಾಗಿ
    ದೊಡ್ಡಿಪಾಳ್ಯ ನರಸಿಂಹಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...