Homeಮುಖಪುಟಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

- Advertisement -
- Advertisement -

ಬನ್ನಿ ನಮ್ಮೆದುರಿಗಿರುವ ವಾಸ್ತವವನ್ನು ಎದುರಿಸುವ. ಶಬರಿಮಲದಲ್ಲಿ ನಮ್ಮ ಸಂವಿಧಾನಾತ್ಮಕ ಆದೇಶ ಸೋತಿದೆ. ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.
ಸುಲಭವಾದ, ನಮಗೆ ಅನುಕೂಲಕರವಾದ ಉತ್ತರಗಳನ್ನು ಹುಡುಕುವುದನ್ನು ಬಿಟ್ಟುಬಿಡುವ. ಹೌದು, ಬಿಜೆಪಿಯ ಬೆಂಬಲದೊಂದಿಗೆ, ಈ ಜನಪ್ರಿಯ ಪ್ರತಿಭಟನೆಯನ್ನು ಹಿಂದುತ್ವದ ಕಟ್ಟಾ ಬೆಂಬಲಿಗರಿಂದ ಆಯೋಜಿಸಲಾಗಿತ್ತು. ಹೌದು, ಕಾಂಗ್ರೆಸ್ ಮೃದು ಹಿಂದುತ್ವದ ನೀತಿಯನ್ನನುಸರಿಸಿತು, ಮೊದಲ ಬಾರಿಗೇನೂ ಅಲ್ಲ. ಹೌದು, ಆಡಳಿತ ಪಕ್ಷ ಸಿಪಿಐ(ಎಮ್) ಜನಪ್ರಿಯ ಭಾವನೆಗಳ ಎದುರಿಗೆ ಓಲಾಡುವಂತಾಯಿತು. ಆದರೆ, ಇವರ ಬಾಗಿಲಿಗೇ ಎಲ್ಲಾ ಅಸಮಾಧಾನವನ್ನು ತೂರುವುದು ನಿರರ್ಥಕ. ದಯವಿಟ್ಟು ಜನರ ಮನಃಸ್ಥಿತಿ ಮತ್ತು ಅವರ ವೋಟುಗಳನ್ನು ಹಿಂಬಾಲಿಸಿ. ನಿಜವಾದ ಪ್ರಶ್ನೆಯೇನೆಂದರೆ: ಜನರ ಮನಃಸ್ಥಿತಿ ಸಂವಿಧಾನಾತ್ಮಕ ಆದೇಶಕ್ಕೆ ತದ್ವಿರುದ್ಧವೇಕಿತ್ತು?
ತಮಾಷೆ ಮಾಡೋದನ್ನು ಬಿಟ್ಟುಬಿಡುವ: ನ್ಯಾಯಾಲಯದ ಒಂದು ‘ಶ್ರದ್ಧೆ ವಿರೋಧಿ’ ಆದೇಶವನ್ನು ಕೇರಳದಲ್ಲಿ, ಅದೂ ಜಗತ್ತಿನಲ್ಲಿ ಉಳಿದುಕೊಂಡಿರುವ ಕೆಲವೇ ಕಲವು ಸ್ಟಾö್ಯಲಿನಿಸ್ಟ್ ಪಕ್ಷದ ಆಡಳಿತದಲ್ಲಿಯೇ ಇಂತಹ ಆದೇಶವನ್ನು ಜಾರಿಗೊಳಿಸಲು ಆಗಲಿಲ್ಲ ಎಂದಲ್ಲಿ ಬೇರೆಡೆಯಂತೂ ಸಾಧ್ಯವೇ ಇಲ್ಲ. ನಿಜ, ಇಂಥದ್ದೆÃ ಆದೇಶವನ್ನು ಹಾಜಿ ಅಲಿ ದರ್ಗಾ ಪ್ರಕರಣದಲ್ಲಿ ಸಮುದಾಯದ ಭಾವನೆಗಳ ವಿರುದ್ಧವಾಗಿದ್ದರೂ ಜಾರಿಗೊಳಿಸಲಾಗಿತ್ತು. ಆದರೆ ಒಂದು ‘ಜಾತ್ಯತೀತ’ ಆಡಳಿತವಿದ್ದಾಗ ಹಾಗೆ ಆಗಲು ಸಾಧ್ಯವಿತ್ತೆ? ಶಾ ಬಾನೊ ಪ್ರಕರಣವನ್ನು ನಾವು ಮರತಿದ್ದೆÃವೆಯೇ? ಸಿಖ್ ಮತಶ್ರದ್ಧೆಯ ಹೆಸರಿನಲ್ಲಿ ಎಸ್‌ಜಿಪಿಸಿ ತನ್ನ ನ್ಯಾಯಬಾಹಿರ ಕ್ರಮಗಳನ್ನು ಮುಂದುವರೆಸಿರಲಿಲ್ಲವೇ?
ಇದನ್ನು ನೈತಿಕತೆಯ ಪ್ರಶ್ನೆಯಾಗಿಸಿ ನಮ್ಮ ಶಕ್ತಿಗಳನ್ನು ವ್ಯಯಿಸುವುದು ಬೇಡ. ಹೌದು ಈ ವೈಫಲ್ಯಗಳನ್ನು ಖಂಡಿತವಾಗಿಯೂ ಖಂಡಿಸುವ. ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನೆÃ ಉಲ್ಲಂಘಿಸುವಂತಾದರೆ ಒಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ನಡೆಸುವ ಹಕ್ಕನ್ನೆÃ ಕಳೆದುಕೊಂಡಂತೆ. ಆದರೆ, ಗೋಳಾಟ, ಅಸಮಾಧಾನ ಮತ್ತು ಕಟು ವಿರೋಧ ಇವ್ಯಾವುಗಳೂ ಆತ್ಮಾವಲೋಕನ ಮತ್ತು ಚಿಂತನೆಗೆ ಪರ್ಯಾಯಗಳಲ್ಲ. ಖಂಡನೆಗಿಂತ ಈ ಸನ್ನಿವೇಶ ಆಳವಾದ ಚಿಂತನೆಗೆ ಕರೆನೀಡುತ್ತದೆ. ಸಂವಿಧಾನಾತ್ಮಕ ನೈತಿಕತೆ ಮತ್ತು ಜನಾಭಿಪ್ರಾಯದ ನಡುವಿನ ಒಂದು ಸಂಘರ್ಷವನ್ನು ನಾವು ಹೇಗೆ ಸಮಾಲೋಚಿಸುತ್ತೆÃವೆ?
ಶೇಖರ್ ಗುಪ್ತ ಮಾಡಿದಂತೆ, ನ್ಯಾಯಾಲಯಕ್ಕೆ ಹೊಣೆ ಹೊರೆಸಿ ಈ ಕಠಿಣ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವುದು ಬೇಡ. ಹೌದು ನ್ಯಾಯಾಂಗದ ಓವರ್‌ರೀಚ್ ನಮ್ಮ ವ್ಯವಸ್ಥೆಯ ಒಂದು ಸಮಸ್ಯೆ, ಆದರೆ ಈ ಪ್ರಕರಣದಲ್ಲಿ ಹಾಗನ್ನಲು ಆಗುವುದಿಲ್ಲ. ಪೂಜೆ ಆಗುವ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾನವಾದ ಅವಕಾಶವನ್ನು ಕೋರಿ ಒಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ತಲುಪಿದರೆ, ನ್ಯಾಯಾಧೀಶರು ಅಸಹಾಯಕತೆಯನ್ನು ತೋಡಿಕೊಳ್ಳಲಾಗುವುದಿಲ್ಲ, ಅದೂ ನಮ್ಮ ಸಂವಿಧಾನದಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ಸ್ಪಷ್ಟವಾಗಿ ನಮೂದಿಸಿರುವಾಗ. ಭಾರತೀಯ ಜಾತ್ಯತೀತತೆ ಫ್ರಾನ್ಸಿನ ಕಟ್ಟುನಿಟ್ಟಾದ ತಟಸ್ಥ ಧೋರಣೆಯನ್ನು ಅನುಸರಿಸುವುದಿಲ್ಲ. ಧಾರ್ಮಿಕ ವಿಷಯಗಳಲ್ಲಿ ತತ್ವಾಧಾರಿತ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಅಪೇಕ್ಷಿಸುವ ‘ತತ್ವಾಧಾರಿತ ಅಂತರ’ಕ್ಕೆ ನಮ್ಮ ಸಂವಿಧಾನ ಅನುವು ಮಾಡಿಕೊಡುತ್ತದೆ ಎಂದು ರಾಜೀವ್ ಭಾರ್ಗವ್ ಹೇಳಿದ್ದು ಸರಿಯಾಗಿದೆ.
ಈಗ ನೇರವಾಗಿ ವಿಷಯಕ್ಕೆ ಬರುವ. ದುಃಖಕರ ಮತ್ತು ಅಪ್ರಿಯವಾದ ವಾಸ್ತವವೇನೆಂದರೆ, ಈ ಲಿಬರಲ್ ಆದ ಸಂವಿಧಾನಾತ್ಮಕ ಆದೇಶ ಜನಾಭಿಪ್ರಾಯದೊಂದಿಗೆ ಮೇಳೆ ಆಗಿರಲಿಲ್ಲ, ಆಗಿಲ್ಲ. ಸುಪ್ರಿÃಮ್ ಕೋರ್ಟಿನ ನ್ಯಾಯಾಧೀಶರ ಮತ್ತು ಭಾರತದ ಲಿಬರಲ್ ಚಿಂತಕರ ನೈತಿಕ ಸಂವೇದನಗಳಿಗೂ ಹಾಗೂ ಒಬ್ಬ ಅಂiÀÄ್ಯಪ್ಪ ಸ್ವಾಮಿಯ ಸಾಮಾನ್ಯ ಭಕ್ತನ ನೈತಿಕ ಸಂವೇದನೆಗಳೊಂದಿಗೆ ಸಂಬಂಧವಿಲ್ಲದಿರುವುದು ಸ್ಪಷ್ಟ. ಸಾಮಾನ್ಯ ಭಾರತೀಯರಿಗೆ ನಮ್ಮ ಸಂವಿಧಾನಕ್ಕೆ ಅತಿ ಹಚ್ಚಿನ ಆದರೆ ಅಮೂರ್ತವಾದ ಮನ್ನಣೆಯಿದೆ. ಆದರೆ ಸಂವಿಧಾನಾತ್ಮಕ ತತ್ವಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದ ಸಂದರ್ಭಗಳಲ್ಲಿ ಅನೇಕ ಸಲ ಜನರು ಅದರ ವಿರುದ್ಧ ಹೋಗುವ ಸಾಧ್ಯತೆಗಳಿವೆ.
ಈ ಕಟುಸತ್ಯದಿಂದ ಪಲಾಯನ ಮಾಡುವುದು ಬೇಡ. ಇದನ್ನು ನಾನು 1992ರಲ್ಲಿ ಬಾಬರಿ ಮಸೀದಿಯ ಧ್ವಂಸವಾದ ಸಮಯದಲ್ಲಿ ಅರಿತೆ. ಆಗ ನಾನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದೆ, ಚಂಡೀಗಡದ ಒಂದು ದುಡಿಯುವ ಜನರ ವಸತಿಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೆ. ಅಂiÉÆÃಧ್ಯೆಯ ಪ್ರಕರಣದಲ್ಲಿ ಸುಪ್ರಿÃಮ್ ಕೋರ್ಟಿನ ಆದೇಶವನ್ನು ಉಲ್ಲಂಘಿಸಿದರ ಬಗ್ಗೆ ನಾನು ನನ್ನ ನೈತಿಕ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ನನ್ನ ನೆರೆಯವರೊಬ್ಬರು ಕೇಳಿದ್ದು ‘ಪ್ರೊಫೆಸರ್ ಸಾಬ್, ರಾಮನ ಮಂದಿರ ಅಂiÉÆÃಧ್ಯೆಯಲ್ಲೆÃ ಕಟ್ಟಬೇಕಲ್ವಾ, ಮತ್ತೆÃನು ಇಂಗ್ಲೆಂಡಿನಲ್ಲಿ ಕಟ್ಟಬೇಕೇ?” ಆಗ ನಾನು ನನ್ನ ಪಾಠ ಕಲಿತೆ. ಆದರೆ ಭಾರತದ ಲಿಬರಲ್, ಪ್ರಗತಿಪರರು ಇನ್ನೂ ಆ ಪಾಠ ಕಲಿತಂತಿಲ್ಲ.
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳುವ: ಇಂಗ್ಲಿÃಷ್ ಮಾತನಾಡುವ ನೆಲದೊಂದಿಗಿನ ಬೇರನ್ನು ಕಳಚಿಕೊಂಡಿರುವ ಭಾರತದ ಎಲೀಟ್ ಜನರ ಬಗ್ಗೆ ಇರುವ ಸ್ಟಿರಿಯೋಟೈಪ್‌ನಲ್ಲಿ ಸತ್ಯಾಂಶವಿದೆ. ಭಾರತದ ಲಿಬರಲ್ ಜನಗಳು ಒಂದು ಪರಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚೂಣಿಯಲ್ಲಿರುವ ಯಾವುದೇ ಭಾರತೀಯ ಚಿಂತಕನಿಗೆ ಕೇಳಿ : ಇಂಗ್ಲಿÃಷಿನಲ್ಲಿರಿದ, ಯಾವುದೇ ಒಂದು ಭಾರತೀಯ ಭಾಷೆಯಲ್ಲಿಯ ಪುಸ್ತಕವನ್ನು ಕೊನೆಯ ಸಲ ಓದಿದ್ದು ಯಾವಾಗ ಅಥವಾ ಇಂಗ್ಲಿÃಷ್ ಬಿಟ್ಟು ಯಾವುದೇ ಒಂದು ಭಾರತೀಯ ಭಾಷೆಯಲ್ಲಿ ಏ4 ಸೈಜಿನ ಒಂದು ಪುಟದ ಎರಡೂ ಬದಿಗಳಲ್ಲಿ ಕೊನೆಯ ಸಲ ಬರೆದಿದ್ದು ಯಾವಾಗ? ಭಾರತದ ಧಾರ್ಮಿಕ ಪರಂಪರೆಗಳ ವಿಷಯ ಬಂದಾಗ ಇವರುಗಳು ಕೆಲವು ಸಲ ತಾತ್ಸಾರ ಹೊಂದಿದವರಾಗಿದ್ದರೆ ಅನೇಕ ಸಲ ಅನಕ್ಷರಸ್ಥರಾಗಿರುತ್ತಾರೆ. ಉಪನಿಷತ್ತುಗಳು ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಎಷ್ಟು ಜನ ವಿದ್ಯಾವಂತ ಭಾರತೀಯರು ಹೇಳಬಲ್ಲರು? ಅಥವಾ ಶರಿಯತ್ ಮತ್ತು ಹದೀಸ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ. ಹಾಗಾಗಿ ಇವರಿಂದ ಭಾರತೀಯರು ನೈತಿಕ ಪಾಠಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರುಗಳು ವಿಮರ್ಶೆ ಮತ್ತು ಸುಧಾರಣೆಯನ್ನು ಸಂಪೂರ್ಣವಾಗಿ ನಿರಾಕರಿಸದಿದ್ದರೂ ಅದು ಒಂದು ತೀರ ಭಿನ್ನವಾದ ಮತ್ತು ಪ್ರತಿಕೂಲವಾದ ನುಡಿಗಟ್ಟಿನಲ್ಲಿ ಬಂದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಲ್ಯಾಟಿನ್ ಅಮೇರಿಕದಲ್ಲಿ ಕ್ರಾಂತಿಯನ್ನು ಪ್ರತಿಪಾದಿಸಲು ಬೈಬಲ್ ಉದಾಹರಿಸಿ ಅಲ್ಲಿನ ವಿಮೋಚನೆಯ ಧರ್ಮಶಾಸ್ತçವನ್ನು ಬಳಸಲಾಗುತ್ತದೆ. ಆದರೆ, ಹೊಸ ನೈತಿಕ (ಎಥಿಕಲ್) ಚೌಕಟ್ಟುಗಳನ್ನು ಎಳೆಯಲು ಮರ್ಯಾದಾ ಪುರುಷೋತ್ತಮನನ್ನು ಅರ್ಥೈಸಿಕೊಳ್ಳುವ ಹಾಗೂ ಉದಾಹರಿಸುವ ಲಿಬರಲ್ ಚಿಂತಕರು ನಮ್ಮಲ್ಲೆÃಕಿಲ್ಲ?
ಹೆಚ್ಚಿನ ಸೂಕ್ಷö್ಮತೆಗೆ ಹೋಗುವ ಅಗತ್ಯವಿಲ್ಲ. ಭಾರತದಲ್ಲಿ ಲಿಬರಲಿಸಂಗಾಗಿ ಯಾವುದೇ ರಾಜಕೀಯ ಕ್ಷೆÃತ್ರವಿಲ್ಲ; ಮೆಟ್ರೊÃಪಾಲಿಟನ್ ಎಂದು ಕರೆದುಕೊಳ್ಳುವ ಭಾರತದ ದ್ವಿÃಪದ ಹೃದಯದಲ್ಲೂ ಇಲ್ಲ. ಲಿಬರಲ್ ಮತ್ತು ಸಂವಿಧಾನಾತ್ಮಕ ಆದೇಶವನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೇಲೆಯೇ ಅವಲಂಬಿಸುವುದು ಸರಿಯಲ್ಲ. ಕಟು ವಾಸ್ತವವೇನೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಜನಾಭಿಪ್ರಾಯವನ್ನು ಲೆಕ್ಕಿಸದೇ ತಮ್ಮ ತೀರ್ಪನ್ನು ಕೆಲವು ಸಲ ನೀಡಬಹುದು. ಆದರೆ ತುಲನಾತ್ಮಕವಾಗಿ ನೋಡಿದಾಗ, ಜನಪ್ರಿಯ ಭಾವನೆಗಳ ಹರವಿನೊಂದಿಗೇ ನ್ಯಾಯಾಲಯಗಳು ಹೋಗುವ ಸಾಧ್ಯತೆಗಳೇ ಹೆಚ್ಚು. ಸದ್ಯದ ಇದೇ ಪ್ರವೃತ್ತಿ ಮುಂದುವರೆದಲ್ಲಿ, ನಮ್ಮ ಗಣರಾಜ್ಯವನ್ನು ಇದೇ ಗಣರಾಜ್ಯದಿಂದಲೇ ವಿಫಲವಾಗಿಸಬಹುದಾದ ನಿಜವಾದ ಆತಂಕ ನಮ್ಮೆದುರಿಗಿದೆ.
ನಮ್ಮೆದುರಿಗಿರುವ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವ. ಒಂದು, ಜನಾಭಿಪ್ರಾಯದ ಹರವಿನೊಂದಿಗೆ ಹೋಗುವುದು, ಅದು ನಮ್ಮನ್ನೆಲ್ಲಿಗೆ ಕೊಂಡೊಯ್ಯುತ್ತದೋ ಅಲ್ಲಿಗೆ ಹೋಗುವುದು ಒಂದು ಆಯ್ಕೆ. ಅದು ಒಂದು ಅಪಾಯಕಾರಿ ಜಾರುಬಂಡೆ. ಇನ್ನೊಂದು ಆಯ್ಕೆ; ಜನಾಭಿಪ್ರಾಯವನ್ನು ಬದಲಿಸುವಂತೆ ಜನರೊಂದಿಗೆ ಮಾತುಕತೆಗೆ ಇಳಿಯುವುದು. ಈ ಮಾತುಕತೆ ಮೋನೋಲಾಗ್ ಅಥವಾ ಸ್ವಗತವಾಗಿರಬಾರದು. ನಾವುಗಳು ಹೊಸದೊಂದು ಭಾಷೆಯನ್ನು ಕಲಿಯಲು ಮುಕ್ತರಾಗಿರಬೇಕು, ಹೊಸದೊಂದು ಸಂವೇದನೆಯನ್ನು ಅನುಭವಿಸಲು ಇಚ್ಛುಕರಾಗಿರಬೇಕು ಹಾಗೂ ಜ್ಞಾನದ ಇತರೆ ಸ್ವರೂಪಗಳ ಬಗ್ಗೆ ಗೌರವ ಹೊಂದಿರಬೇಕು. ಇದುವೇ ಗಾಂಧಿಯ ಮಾರ್ಗ, ಒಬ್ಬ ವಿಮರ್ಶಾತ್ಮಕ ಆಂತರ್ಯದವಳ/ನ ಮಾರ್ಗ. ಮೂರನೇಯ ಆಯ್ಕೆಯೂ ಒಂದಿದೆ: ಹೊಸ ಜನರನ್ನು ಆಯ್ಕೆ ಮಾಡುವುದು.
ಬನ್ನಿ, ಆಯ್ಕೆ ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...