Homeಅಂಕಣಗಳುಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

ಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

- Advertisement -
- Advertisement -

ಬೆಂಗಳೂರು ಸಮೀಪದ ಜಿಲ್ಲೆಯ ತಾಲೂಕು. ಆರೆಸ್ಸೆಸ್ ಮತ್ತು ಅದರ ಪರಿವಾರ ಅಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ಎಂದೂ ಗೆದ್ದಿಲ್ಲ. ಮುಸ್ಲಿಮರು ಹೆಚ್ಚಲ್ಲದಿದ್ದರೂ ದೇಶದ ಸರಾಸರಿಯ ಪ್ರಮಾಣದಲ್ಲಿ ಅಲ್ಲೂ ಇದ್ದಾರೆ. ಟಿಪ್ಪು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ತಹಸೀಲ್ದಾರರು ಸಭೆ ಕರೆದಿದ್ದಾರೆ. ನಿಯಮಗಳ ಪ್ರಕಾರ ಅವರು ರಾಷ್ಟಿçÃಯ ಹಬ್ಬಗಳ ಸಮಿತಿಯ ಅಧ್ಯಕ್ಷರು. ಇಂತಹ ಎಲ್ಲಾ ಜಯಂತಿಗಳಲ್ಲೂ ಮಾಡುವಂತೆ, ಯಾರ ಜಯಂತಿಯನ್ನು ಆಚರಿಸಲಾಗುತ್ತದೋ, ಆ ವ್ಯಕ್ತಿಯು ಯಾವ ಜಾತಿ ಅಥವಾ ಧರ್ಮಕ್ಕೆ ಸೇರಿದವರೆಂದು ಹೇಳಲಾಗುತ್ತದೋ ಅವರನ್ನು ಹೆಚ್ಚಾಗಿ ಕರೆಯಲಾಯಿತು. ಹಾಗಾಗಿ ಮುಸ್ಲಿಮರೂ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ತಹಸೀಲ್ದಾರರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಹೇಳಿದ್ದಿಷ್ಟು. ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡೋಣ; ಮೆರವಣಿಗೆ ಮಾಡಲು ಅಥವಾ ಮೈದಾನದಲ್ಲಿ ಮಾಡಲು ಈ ಸಾರಿ ಅನುಮತಿ ನೀಡಬಾರದೆಂದು ಮೇಲಿನಿಂದ ಆದೇಶ ಬಂದಿದೆ. ಇದನ್ನು ಸಭೆಯಲ್ಲಿದ್ದ ಮುಸ್ಲಿಮರು ಒಪ್ಪಲಿಲ್ಲ. ‘ಬೇರೆ ಎಲ್ಲಾ ಜಯಂತಿಗಳಿಗಾದರೆ ಈ ರೀತಿ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿÃರಿ, ಟಿಪ್ಪು ಜಯಂತಿಗೆ ಏಕೆ ಕೊಡುವುದಿಲ್ಲ?’ವೆಂದು ಕೇಳಿದರು. ಕೇಳಿದ್ದರಲ್ಲಿ ತಪ್ಪೆÃನಿರಲಿಲ್ಲ. ಆದರೆ, ಈ ಸಾರಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ತಹಸೀಲ್ದಾರರು ಇರಲಿಲ್ಲ. ಇದು ಮೇಲಿನಿಂದ ಬಂದ ಆದೇಶವಾಗಿತ್ತು. ಅಲ್ಲಿಗೂ ಇನ್ನೊಂದು ಮಾತನ್ನು ಹೇಳಿದರು, ‘ಒಂದು ವೇಳೆ ಈ ಆದೇಶದಲ್ಲಿ ಬದಲಾವಣೆ ಬಂದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮೆರವಣಿಗೆ ಇತ್ಯಾದಿಗಳ ವಿಚಾರದಲ್ಲಿ ಸ್ಥಳೀಯವಾಗಿಯೇ ತೀರ್ಮಾನ ತೆಗೆದುಕೊಳ್ಳಬಹುದು ಎಂದಾದರೆ, ನಾವು ಖಂಡಿತವಾಗಿ ಅವಕಾಶ ಮಾಡಿಕೊಡುತ್ತೆÃವೆ’. ಸರ್ಕಲ್ ಇನ್ಸ್ಪೆಕ್ಟರ್ ಸಹಾ ದನಿಗೂಡಿಸಿದರು.
ಇದನ್ನು ಒಪ್ಪದ ಮುಸ್ಲಿಂ ಮುಖಂಡರು ಸಭಾತ್ಯಾಗ ಮಾಡಿದರಲ್ಲದೇ, ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿಯೇ ಹೋದರು. ಅಷ್ಟು ಹೊತ್ತಿಗೆ ಮಧ್ಯಮ ಪ್ರಮಾಣದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಗಿತ್ತು ಮತ್ತು ಭಾಷಣ ಮಾಡಲು ಭಾಷಣಕಾರರನ್ನೂ ನಿಗದಿ ಮಾಡಲಾಗಿತ್ತು. ಈ ಸದ್ಯ ಎಲ್ಲಾ ಮಹಾಪುರುಷರೂ, ಮಹಿಳೆಯರೂ ಆಯಾ ಜಾತಿ ಅಥವಾ ಧರ್ಮಕ್ಕೆ ಸೀಮಿತರು. ಹಾಗಾಗಿ ಜಾತ್ಯಸ್ಥರೇ ಕೈಬಿಟ್ಟ ಮೇಲೆ ಟಿಪ್ಪು ಅನಾಥ.
ಆ ತಾಲೂಕಿನ ಶಾಸಕರು ಸಚಿವರಾಗಿದ್ದರಿಂದ, ಅವರು ಜಿಲ್ಲಾ ಕೇಂದ್ರಕ್ಕೆ ಹೋದರು. ಹೀಗಾಗಿ ಅವರನ್ನು ನೋಡಲು ಅಥವಾ ಮೆಚ್ಚಿಸಲು ಬರಬಹುದಾದವರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲಿನ ಸಂಘಪರಿವಾರದ ಗುಂಪೂ ದುರ್ಬಲವಾದ್ದರಿಂದ, ಗಲಭೆಯೆಬ್ಬಿಸಲು ಬರಬಹುದಾದವರೂ ಬರಲಿಲ್ಲ. ಕಾರ್ಯಕ್ರಮ ಆರಂಭದ ಸಮಯಕ್ಕೆ ಸಭಾಂಗಣದಲ್ಲಿ 30 ಜನರಿದ್ದರು. ತಹಸೀಲ್ದಾರರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಅವರು ಕ್ಷೆÃತ್ರ ಶಿಕ್ಷಣಾಧಿಕಾರಿಗಳನ್ನು ಕರೆದು, ಹತ್ತಿರದ ಯಾವುದಾದರೂ ಶಾಲೆಯಿಂದ ಮಕ್ಕಳನ್ನು ಕರೆಸಿರಿ ಎಂದರು. ಆದರೆ, ಅವರಿಗೆ ಹಿಂಜರಿಕೆ. ‘ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದಿದ್ದಾರೆ ಎಂದು ವಿವಾದವಾದರೆ?’ ಎಂಬುದು ಅವರ ಕಾರಣ. ಅಂದರೆ, ಟಿಪ್ಪು ಸುಲ್ತಾನ್ ನಾಡು ಕಂಡ ಹೆಮ್ಮೆಯ ದೊರೆ ಎಂದು ಪಠ್ಯಪುಸ್ತಕದಲ್ಲಿ ಇನ್ನೂ ಉಳಿದಿರಬಹುದಾದರೂ, ಸರ್ಕಾರವೇ ಟಿಪ್ಪು ಜಯಂತಿಯನ್ನು ಮಾಡುತ್ತಿದ್ದರೂ, ಮಕ್ಕಳನ್ನು ಕರೆದರೆ ‘ಇದು ಟಿಪ್ಪು ಜಯಂತಿ’ ಎನ್ನುವ ಕಾರಣಕ್ಕೆÃ ವಿವಾದವಾಗುತ್ತದೆಂಬುದು ಅವರ ಭಯ.
ಅಂತಿಮವಾಗಿ ಸಭಾಂಗಣದೊಳಗೆ ಒಂದಷ್ಟು ಜನ ಮುಸ್ಲಿಮರು ಬಂದರು. ಪುರಸಭೆಯ ಅಧ್ಯಕ್ಷ ಮುಸ್ಲಿಮರಾಗಿದ್ದುದರಿಂದ ಅವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡು ಕೆಲವರಾದರೂ ಬರಬೇಕೆಂದು ಶತಪ್ರಯತ್ನ ಹಾಕಿದ್ದರು! ಅಸಲು ಸಮಸ್ಯೆ ಏನಾಗಿತ್ತೆಂದರೆ, ಈ ಅಧ್ಯಕ್ಷರಿಗಿಂತ ಮುಂಚೆ ಅಧ್ಯಕ್ಷರಾಗಿದ್ದವರೂ ಮುಸ್ಲಿಮರೇ. ತನ್ನ ನಂತರ ಇನ್ನೊಬ್ಬ ನಾಯಕ ತನ್ನದೇ ಸಮುದಾಯದಲ್ಲಿ ಮೇಲೆ ಬಂದು, ಆತನ ವೇದಿಕೆಯ ಮೇಲೆ ವಿರಾಜಮಾನನಾಗಿರುವಾಗ ಆ ಕಾರ್ಯಕ್ರಮ ಯಶಸ್ವಿಯಾಗಬಾರದೆಂಬುದು ವಿರೋಧಕ್ಕೆ ಅಸಲೀ ಕಾರಣವಾಗಿತ್ತು. ಮೆರವಣಿಗೆ ಕೇವಲ ನೆಪವಾಗಿತ್ತು. ಹೊಸದಾಗಿ ಅಧ್ಯಕ್ಷರಾಗಿದ್ದ ವ್ಯಕ್ತಿಗಿಂತ ಪ್ರಭಾವಿಯಾಗಿದ್ದ ಹಿಂದಿನ ಅಧ್ಯಕ್ಷ ಮಿಕ್ಕವರನ್ನು ತಡೆದಿದ್ದರು!
ಇಂದು ಟಿಪ್ಪು ಸುಲ್ತಾನರ ಜಯಂತಿ ಹೀಗೂ ನಡೆಯುತ್ತಿದೆ. ನಾಡಿಗೆ ನಾಡೇ ಹೆಮ್ಮೆ ಪಡಬೇಕಿದ್ದ ಧೀಮಂತ ಆಡಳಿತಗಾರನೊಬ್ಬನನ್ನು, ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು. ಆ ಕಾರಣಕ್ಕೆÃ ಜಯಂತಿಯನ್ನು ಆಚರಿಸುವುದು ಅಥವಾ ವಿರೋಧಿಸುವುದು. ತಮ್ಮದೇ ಸ್ವಂತ ಹಿತಾಸಕ್ತಿಯು ಮುಂದೆ ಬರುವುದಾದಲ್ಲಿ, ಆ ಜಾತಿಯವರೂ ಕಾರ್ಯಕ್ರಮಕ್ಕೆ ತಿರಸ್ಕಾರ ತೋರುವುದು ಇದು ವಿದ್ಯಮಾನ.
ಇದಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮೊದಲು ಯಾವುದೇ ಕಾರಣ ನೀಡದೇ, ರಾಜ್ಯ ಮಟ್ಟದ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ತಮ್ಮ ಹೆಸರಿಲ್ಲದಂತೆ ಗೈರುಹಾಜರಿಯ ತೀರ್ಮಾನ ಘೋಷಿಸಿದ್ದರು. ನಂತರ ಇದೊಂದು ಸುದ್ದಿಯಾದಾಗ ಅನಾರೋಗ್ಯದ ಸ್ಪಷ್ಟಿÃಕರಣ ಕೊಟ್ಟರು. ಇದಲ್ಲದೇ ವಾಲ್ಮಿÃಕಿ ಜಯಂತಿ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ, ಈಗ ಹೋದರೆ ಬೇರೆ ಅರ್ಥ ಬರುತ್ತದೆಂಬ ಸುದ್ದಿಯನ್ನೂ ತೇಲಿಬಿಡಲಾಯಿತು. ಇದೇ ಮುಖ್ಯಮಂತ್ರಿಯವರು ಕೆಂಪೇಗೌಡ ಜಯಂತಿ ಸರ್ಕಾರದ ವತಿಯಿಂದ ಆದಾಗ ಬೆಂಗಳೂರಿನಲ್ಲೂ (ಜೂನ್ 27) ಭಾಗವಹಿಸಿದ್ದರು, (ಆಗಸ್ಟ್ 11ರಂದು) ಒಕ್ಕಲಿಗರ ಸಂಘದಿಂದ ಚಿಕ್ಕಬಳ್ಳಾಪುರದಲ್ಲಿ ನಡೆದಾಗಲೂ ಭಾಗವಹಿಸಿದ್ದರು.
ದೇಶದ ಇಂದಿನ ಸ್ಥಿತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸದೇ ಇದ್ದರೆ ಅದು ಯಾವ ಸಂದೇಶ ಕೊಡುತ್ತದೆಂಬುದು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಅಂತಹದೊಂದು ಸಂದೇಶ ಹೋಗಲಿ ಎಂಬ ಬಯಕೆಯೂ ಅವರದ್ದಿರಬಹುದು. ಇದು ಕೇವಲ ಜೆಡಿಎಸ್‌ನ ಸಮಸ್ಯೆಯಲ್ಲ. ಕಾಂಗ್ರೆಸ್ ನಾಯಕರಲ್ಲಿ ಟಿಪ್ಪು ಸುಲ್ತಾನರ ಮಹತ್ವವನ್ನು ಅರಿತು ಅದನ್ನು ಸಮರ್ಥಿಸಿಕೊಳ್ಳಬಲ್ಲವರು ಬಹಳ ಕಡಿಮೆ. ಹೇಗೂ ಮುಸ್ಲಿಮರು ತಮಗೇ ಓಟು ಹಾಕುತ್ತಾರೆಂಬ ಭಾವನೆ ಅವರದ್ದಿದ್ದರೆ, ಬಹುಶಃ ಇನ್ನು ಮುಂದೆ ಮುಸ್ಲಿಮರು ತಮಗೆ ಓಟು ಹಾಕಲಾರರು ಎಂದು ಜೆಡಿಎಸ್ ಭಾವಿಸಿದಂತಿದೆ. ಟಿಪ್ಪು ಕುರಿತು ಸಂಘಪರಿವಾರದ ಫೇಕ್ ಸ್ಟೊÃರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಬಹುಶಃ ಟಿಪ್ಪು ಸುಲ್ತಾನ್ ಆ ರೀತಿಯೂ ಇದ್ದಿರಬಹುದು ಎಂದು ಕಾಂಗ್ರೆಸ್ ನಾಯಕರಲ್ಲಿ ಹಲವರು ಭಾವಿಸಿರಲಿಕ್ಕೂ ಸಾಕು. ಇಂತಹ ಎಡಬಿಡಂಗಿತನವನ್ನು ಕಾಂಗ್ರೆಸ್ – ಜೆಡಿಎಸ್ ನಾಯಕರು ತೊರೆಯುವವರೆಗೂ ಅವರು ಬಿಜೆಪಿಗೆ ಸರಿಯಾದ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಇಂತಹುದೇ ಇನ್ನೊಂದು ಸುದ್ದಿ ಈ ವಾರ ಬೆಳಕಿಗೆ ಬಂದಿದೆ. ಗೌರಿ ಲಂಕೇಶರ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ ಆದ ಖರ್ಚಿನ ಬಾಕಿಯನ್ನು ಸರ್ಕಾರವಿನ್ನೂ ಪಾವತಿ ಮಾಡಿಲ್ಲವೆಂದು ವರದಿಯಾಗಿದೆ. ಬಹುಶಃ ಹಣ ಪಾವತಿಯಾಗಿಲ್ಲವೆಂಬ ಕಾರಣಕ್ಕೆ ಪೊಲೀಸ್ ಇಲಾಖೆಯು ತನಿಖೆಯನ್ನೆÃನೂ ನಿಲ್ಲಿಸುವುದಿಲ್ಲ ಅಥವಾ ಬೇರೆ ದಿಕ್ಕಿಗೆ ಹೋಗುವುದಿಲ್ಲ. ಆದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಡಚಣೆಯಾಗುವುದರಲ್ಲಂತೂ ಸಂದೇಹವಿಲ್ಲ. ಈ ಕುರಿತ ಸತ್ಯಾಸತ್ಯತೆಯನ್ನು ಸರ್ಕಾರ, ಇಲಾಖೆ ಜನರ ಮುಂದಿಡಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...

ಪಶ್ಚಿಮ ಬಂಗಾಳ| ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧ ಆದೇಶ ಹೊರಡಿಸಿದ ವಿಎಚ್‌ಪಿ; ಬಲಪಂಥೀಯ ಸಂಘನೆಯ ಅಧಿಕಾರ ಪ್ರಶ್ನಿಸಿದ ವಿಪಕ್ಷಗಳು

ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೊರಡಿಸಿರುವ ಮಾರ್ಗಸೂಚಿಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಮಂಟಪಗಳ ಸುತ್ತಮುತ್ತ ಸಸ್ಯಾಹಾರಿ ಅಲ್ಲದ ಮಾಂಸ ಮತ್ತು ಮೀನು...

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ,...

ಮೋಹನ್ ಭಾಗವತ್ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ವಿರೋಧ : ಅಮೆರಿಕದ 61 ಸಂಘಟನೆಗಳಿಂದ ಪ್ರತಿಭಟನೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಲಿರುವ, ಶನಿವಾರ (ಆ.29) ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರು...

ಶಿವಮೊಗ್ಗ| ಈದ್-ಎ-ಮಿಲಾದ್ ರ್‍ಯಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ: ಮೂವರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಗಾಗಿ ನಿರ್ಮಿಸಲಾಗಿದ್ದ ಕಟೌಟ್ ಒಂದರ ಮೇಲೆ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನಿಹಾಲ್ ಉರುಫ್ ಬೆಕ್ಕು,...

ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ FIR: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ವಿದ್ಯಾರ್ಥಿ...

ಈದ್ ಮಿಲಾದ್ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನ; ಭಜರಂಗದಳ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಈದ್-ಎ-ಮಿಲಾದ್ ಪೋಸ್ಟರ್‌ಗಳ ವಿಚಾರವಾಗಿ ಗುಂಪುಗಳ ನಡುವೆ ಶತ್ರುತ್ವ ಸೃಷ್ಟಿಸಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಕಲಬುರಗಿಯಲ್ಲಿ ಭಜರಂಗದಳದ ಕಾರ್ಯಕರ್ತನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಯ ಭಾಗವಾಗಿ...

ವೆನೆಜುವೆಲಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ನಿಯಂತ್ರಣ: ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ವಾಷಿಂಗ್ಟನ್/ಕಾರಕಾಸ್: ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ದೇಶದ 65 ಬಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಸಾಬೀತಾದ ತೈಲ ನಿಕ್ಷೇಪಗಳ ಮೇಲೆ ಬಹುಮತ ನಿಯಂತ್ರಣ ಸಾಧಿಸುವ ಒಪ್ಪಂದವನ್ನು ಅಮೆರಿಕ ಮಾಡಿಕೊಂಡಿದೆ....

ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ; ಇದು ಬಿಜೆಪಿಯ ಗೆಲುವಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ...