Homeಅಂಕಣಗಳುಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

ಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

- Advertisement -
- Advertisement -

ಬೆಂಗಳೂರು ಸಮೀಪದ ಜಿಲ್ಲೆಯ ತಾಲೂಕು. ಆರೆಸ್ಸೆಸ್ ಮತ್ತು ಅದರ ಪರಿವಾರ ಅಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ಎಂದೂ ಗೆದ್ದಿಲ್ಲ. ಮುಸ್ಲಿಮರು ಹೆಚ್ಚಲ್ಲದಿದ್ದರೂ ದೇಶದ ಸರಾಸರಿಯ ಪ್ರಮಾಣದಲ್ಲಿ ಅಲ್ಲೂ ಇದ್ದಾರೆ. ಟಿಪ್ಪು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ತಹಸೀಲ್ದಾರರು ಸಭೆ ಕರೆದಿದ್ದಾರೆ. ನಿಯಮಗಳ ಪ್ರಕಾರ ಅವರು ರಾಷ್ಟಿçÃಯ ಹಬ್ಬಗಳ ಸಮಿತಿಯ ಅಧ್ಯಕ್ಷರು. ಇಂತಹ ಎಲ್ಲಾ ಜಯಂತಿಗಳಲ್ಲೂ ಮಾಡುವಂತೆ, ಯಾರ ಜಯಂತಿಯನ್ನು ಆಚರಿಸಲಾಗುತ್ತದೋ, ಆ ವ್ಯಕ್ತಿಯು ಯಾವ ಜಾತಿ ಅಥವಾ ಧರ್ಮಕ್ಕೆ ಸೇರಿದವರೆಂದು ಹೇಳಲಾಗುತ್ತದೋ ಅವರನ್ನು ಹೆಚ್ಚಾಗಿ ಕರೆಯಲಾಯಿತು. ಹಾಗಾಗಿ ಮುಸ್ಲಿಮರೂ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ತಹಸೀಲ್ದಾರರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಹೇಳಿದ್ದಿಷ್ಟು. ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡೋಣ; ಮೆರವಣಿಗೆ ಮಾಡಲು ಅಥವಾ ಮೈದಾನದಲ್ಲಿ ಮಾಡಲು ಈ ಸಾರಿ ಅನುಮತಿ ನೀಡಬಾರದೆಂದು ಮೇಲಿನಿಂದ ಆದೇಶ ಬಂದಿದೆ. ಇದನ್ನು ಸಭೆಯಲ್ಲಿದ್ದ ಮುಸ್ಲಿಮರು ಒಪ್ಪಲಿಲ್ಲ. ‘ಬೇರೆ ಎಲ್ಲಾ ಜಯಂತಿಗಳಿಗಾದರೆ ಈ ರೀತಿ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿÃರಿ, ಟಿಪ್ಪು ಜಯಂತಿಗೆ ಏಕೆ ಕೊಡುವುದಿಲ್ಲ?’ವೆಂದು ಕೇಳಿದರು. ಕೇಳಿದ್ದರಲ್ಲಿ ತಪ್ಪೆÃನಿರಲಿಲ್ಲ. ಆದರೆ, ಈ ಸಾರಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ತಹಸೀಲ್ದಾರರು ಇರಲಿಲ್ಲ. ಇದು ಮೇಲಿನಿಂದ ಬಂದ ಆದೇಶವಾಗಿತ್ತು. ಅಲ್ಲಿಗೂ ಇನ್ನೊಂದು ಮಾತನ್ನು ಹೇಳಿದರು, ‘ಒಂದು ವೇಳೆ ಈ ಆದೇಶದಲ್ಲಿ ಬದಲಾವಣೆ ಬಂದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮೆರವಣಿಗೆ ಇತ್ಯಾದಿಗಳ ವಿಚಾರದಲ್ಲಿ ಸ್ಥಳೀಯವಾಗಿಯೇ ತೀರ್ಮಾನ ತೆಗೆದುಕೊಳ್ಳಬಹುದು ಎಂದಾದರೆ, ನಾವು ಖಂಡಿತವಾಗಿ ಅವಕಾಶ ಮಾಡಿಕೊಡುತ್ತೆÃವೆ’. ಸರ್ಕಲ್ ಇನ್ಸ್ಪೆಕ್ಟರ್ ಸಹಾ ದನಿಗೂಡಿಸಿದರು.
ಇದನ್ನು ಒಪ್ಪದ ಮುಸ್ಲಿಂ ಮುಖಂಡರು ಸಭಾತ್ಯಾಗ ಮಾಡಿದರಲ್ಲದೇ, ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿಯೇ ಹೋದರು. ಅಷ್ಟು ಹೊತ್ತಿಗೆ ಮಧ್ಯಮ ಪ್ರಮಾಣದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಗಿತ್ತು ಮತ್ತು ಭಾಷಣ ಮಾಡಲು ಭಾಷಣಕಾರರನ್ನೂ ನಿಗದಿ ಮಾಡಲಾಗಿತ್ತು. ಈ ಸದ್ಯ ಎಲ್ಲಾ ಮಹಾಪುರುಷರೂ, ಮಹಿಳೆಯರೂ ಆಯಾ ಜಾತಿ ಅಥವಾ ಧರ್ಮಕ್ಕೆ ಸೀಮಿತರು. ಹಾಗಾಗಿ ಜಾತ್ಯಸ್ಥರೇ ಕೈಬಿಟ್ಟ ಮೇಲೆ ಟಿಪ್ಪು ಅನಾಥ.
ಆ ತಾಲೂಕಿನ ಶಾಸಕರು ಸಚಿವರಾಗಿದ್ದರಿಂದ, ಅವರು ಜಿಲ್ಲಾ ಕೇಂದ್ರಕ್ಕೆ ಹೋದರು. ಹೀಗಾಗಿ ಅವರನ್ನು ನೋಡಲು ಅಥವಾ ಮೆಚ್ಚಿಸಲು ಬರಬಹುದಾದವರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲಿನ ಸಂಘಪರಿವಾರದ ಗುಂಪೂ ದುರ್ಬಲವಾದ್ದರಿಂದ, ಗಲಭೆಯೆಬ್ಬಿಸಲು ಬರಬಹುದಾದವರೂ ಬರಲಿಲ್ಲ. ಕಾರ್ಯಕ್ರಮ ಆರಂಭದ ಸಮಯಕ್ಕೆ ಸಭಾಂಗಣದಲ್ಲಿ 30 ಜನರಿದ್ದರು. ತಹಸೀಲ್ದಾರರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಅವರು ಕ್ಷೆÃತ್ರ ಶಿಕ್ಷಣಾಧಿಕಾರಿಗಳನ್ನು ಕರೆದು, ಹತ್ತಿರದ ಯಾವುದಾದರೂ ಶಾಲೆಯಿಂದ ಮಕ್ಕಳನ್ನು ಕರೆಸಿರಿ ಎಂದರು. ಆದರೆ, ಅವರಿಗೆ ಹಿಂಜರಿಕೆ. ‘ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದಿದ್ದಾರೆ ಎಂದು ವಿವಾದವಾದರೆ?’ ಎಂಬುದು ಅವರ ಕಾರಣ. ಅಂದರೆ, ಟಿಪ್ಪು ಸುಲ್ತಾನ್ ನಾಡು ಕಂಡ ಹೆಮ್ಮೆಯ ದೊರೆ ಎಂದು ಪಠ್ಯಪುಸ್ತಕದಲ್ಲಿ ಇನ್ನೂ ಉಳಿದಿರಬಹುದಾದರೂ, ಸರ್ಕಾರವೇ ಟಿಪ್ಪು ಜಯಂತಿಯನ್ನು ಮಾಡುತ್ತಿದ್ದರೂ, ಮಕ್ಕಳನ್ನು ಕರೆದರೆ ‘ಇದು ಟಿಪ್ಪು ಜಯಂತಿ’ ಎನ್ನುವ ಕಾರಣಕ್ಕೆÃ ವಿವಾದವಾಗುತ್ತದೆಂಬುದು ಅವರ ಭಯ.
ಅಂತಿಮವಾಗಿ ಸಭಾಂಗಣದೊಳಗೆ ಒಂದಷ್ಟು ಜನ ಮುಸ್ಲಿಮರು ಬಂದರು. ಪುರಸಭೆಯ ಅಧ್ಯಕ್ಷ ಮುಸ್ಲಿಮರಾಗಿದ್ದುದರಿಂದ ಅವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡು ಕೆಲವರಾದರೂ ಬರಬೇಕೆಂದು ಶತಪ್ರಯತ್ನ ಹಾಕಿದ್ದರು! ಅಸಲು ಸಮಸ್ಯೆ ಏನಾಗಿತ್ತೆಂದರೆ, ಈ ಅಧ್ಯಕ್ಷರಿಗಿಂತ ಮುಂಚೆ ಅಧ್ಯಕ್ಷರಾಗಿದ್ದವರೂ ಮುಸ್ಲಿಮರೇ. ತನ್ನ ನಂತರ ಇನ್ನೊಬ್ಬ ನಾಯಕ ತನ್ನದೇ ಸಮುದಾಯದಲ್ಲಿ ಮೇಲೆ ಬಂದು, ಆತನ ವೇದಿಕೆಯ ಮೇಲೆ ವಿರಾಜಮಾನನಾಗಿರುವಾಗ ಆ ಕಾರ್ಯಕ್ರಮ ಯಶಸ್ವಿಯಾಗಬಾರದೆಂಬುದು ವಿರೋಧಕ್ಕೆ ಅಸಲೀ ಕಾರಣವಾಗಿತ್ತು. ಮೆರವಣಿಗೆ ಕೇವಲ ನೆಪವಾಗಿತ್ತು. ಹೊಸದಾಗಿ ಅಧ್ಯಕ್ಷರಾಗಿದ್ದ ವ್ಯಕ್ತಿಗಿಂತ ಪ್ರಭಾವಿಯಾಗಿದ್ದ ಹಿಂದಿನ ಅಧ್ಯಕ್ಷ ಮಿಕ್ಕವರನ್ನು ತಡೆದಿದ್ದರು!
ಇಂದು ಟಿಪ್ಪು ಸುಲ್ತಾನರ ಜಯಂತಿ ಹೀಗೂ ನಡೆಯುತ್ತಿದೆ. ನಾಡಿಗೆ ನಾಡೇ ಹೆಮ್ಮೆ ಪಡಬೇಕಿದ್ದ ಧೀಮಂತ ಆಡಳಿತಗಾರನೊಬ್ಬನನ್ನು, ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು. ಆ ಕಾರಣಕ್ಕೆÃ ಜಯಂತಿಯನ್ನು ಆಚರಿಸುವುದು ಅಥವಾ ವಿರೋಧಿಸುವುದು. ತಮ್ಮದೇ ಸ್ವಂತ ಹಿತಾಸಕ್ತಿಯು ಮುಂದೆ ಬರುವುದಾದಲ್ಲಿ, ಆ ಜಾತಿಯವರೂ ಕಾರ್ಯಕ್ರಮಕ್ಕೆ ತಿರಸ್ಕಾರ ತೋರುವುದು ಇದು ವಿದ್ಯಮಾನ.
ಇದಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮೊದಲು ಯಾವುದೇ ಕಾರಣ ನೀಡದೇ, ರಾಜ್ಯ ಮಟ್ಟದ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ತಮ್ಮ ಹೆಸರಿಲ್ಲದಂತೆ ಗೈರುಹಾಜರಿಯ ತೀರ್ಮಾನ ಘೋಷಿಸಿದ್ದರು. ನಂತರ ಇದೊಂದು ಸುದ್ದಿಯಾದಾಗ ಅನಾರೋಗ್ಯದ ಸ್ಪಷ್ಟಿÃಕರಣ ಕೊಟ್ಟರು. ಇದಲ್ಲದೇ ವಾಲ್ಮಿÃಕಿ ಜಯಂತಿ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ, ಈಗ ಹೋದರೆ ಬೇರೆ ಅರ್ಥ ಬರುತ್ತದೆಂಬ ಸುದ್ದಿಯನ್ನೂ ತೇಲಿಬಿಡಲಾಯಿತು. ಇದೇ ಮುಖ್ಯಮಂತ್ರಿಯವರು ಕೆಂಪೇಗೌಡ ಜಯಂತಿ ಸರ್ಕಾರದ ವತಿಯಿಂದ ಆದಾಗ ಬೆಂಗಳೂರಿನಲ್ಲೂ (ಜೂನ್ 27) ಭಾಗವಹಿಸಿದ್ದರು, (ಆಗಸ್ಟ್ 11ರಂದು) ಒಕ್ಕಲಿಗರ ಸಂಘದಿಂದ ಚಿಕ್ಕಬಳ್ಳಾಪುರದಲ್ಲಿ ನಡೆದಾಗಲೂ ಭಾಗವಹಿಸಿದ್ದರು.
ದೇಶದ ಇಂದಿನ ಸ್ಥಿತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸದೇ ಇದ್ದರೆ ಅದು ಯಾವ ಸಂದೇಶ ಕೊಡುತ್ತದೆಂಬುದು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಅಂತಹದೊಂದು ಸಂದೇಶ ಹೋಗಲಿ ಎಂಬ ಬಯಕೆಯೂ ಅವರದ್ದಿರಬಹುದು. ಇದು ಕೇವಲ ಜೆಡಿಎಸ್‌ನ ಸಮಸ್ಯೆಯಲ್ಲ. ಕಾಂಗ್ರೆಸ್ ನಾಯಕರಲ್ಲಿ ಟಿಪ್ಪು ಸುಲ್ತಾನರ ಮಹತ್ವವನ್ನು ಅರಿತು ಅದನ್ನು ಸಮರ್ಥಿಸಿಕೊಳ್ಳಬಲ್ಲವರು ಬಹಳ ಕಡಿಮೆ. ಹೇಗೂ ಮುಸ್ಲಿಮರು ತಮಗೇ ಓಟು ಹಾಕುತ್ತಾರೆಂಬ ಭಾವನೆ ಅವರದ್ದಿದ್ದರೆ, ಬಹುಶಃ ಇನ್ನು ಮುಂದೆ ಮುಸ್ಲಿಮರು ತಮಗೆ ಓಟು ಹಾಕಲಾರರು ಎಂದು ಜೆಡಿಎಸ್ ಭಾವಿಸಿದಂತಿದೆ. ಟಿಪ್ಪು ಕುರಿತು ಸಂಘಪರಿವಾರದ ಫೇಕ್ ಸ್ಟೊÃರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಬಹುಶಃ ಟಿಪ್ಪು ಸುಲ್ತಾನ್ ಆ ರೀತಿಯೂ ಇದ್ದಿರಬಹುದು ಎಂದು ಕಾಂಗ್ರೆಸ್ ನಾಯಕರಲ್ಲಿ ಹಲವರು ಭಾವಿಸಿರಲಿಕ್ಕೂ ಸಾಕು. ಇಂತಹ ಎಡಬಿಡಂಗಿತನವನ್ನು ಕಾಂಗ್ರೆಸ್ – ಜೆಡಿಎಸ್ ನಾಯಕರು ತೊರೆಯುವವರೆಗೂ ಅವರು ಬಿಜೆಪಿಗೆ ಸರಿಯಾದ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಇಂತಹುದೇ ಇನ್ನೊಂದು ಸುದ್ದಿ ಈ ವಾರ ಬೆಳಕಿಗೆ ಬಂದಿದೆ. ಗೌರಿ ಲಂಕೇಶರ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ ಆದ ಖರ್ಚಿನ ಬಾಕಿಯನ್ನು ಸರ್ಕಾರವಿನ್ನೂ ಪಾವತಿ ಮಾಡಿಲ್ಲವೆಂದು ವರದಿಯಾಗಿದೆ. ಬಹುಶಃ ಹಣ ಪಾವತಿಯಾಗಿಲ್ಲವೆಂಬ ಕಾರಣಕ್ಕೆ ಪೊಲೀಸ್ ಇಲಾಖೆಯು ತನಿಖೆಯನ್ನೆÃನೂ ನಿಲ್ಲಿಸುವುದಿಲ್ಲ ಅಥವಾ ಬೇರೆ ದಿಕ್ಕಿಗೆ ಹೋಗುವುದಿಲ್ಲ. ಆದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಡಚಣೆಯಾಗುವುದರಲ್ಲಂತೂ ಸಂದೇಹವಿಲ್ಲ. ಈ ಕುರಿತ ಸತ್ಯಾಸತ್ಯತೆಯನ್ನು ಸರ್ಕಾರ, ಇಲಾಖೆ ಜನರ ಮುಂದಿಡಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...