Homeಅಂಕಣಗಳುಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

ಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

- Advertisement -
- Advertisement -

ಬೆಂಗಳೂರು ಸಮೀಪದ ಜಿಲ್ಲೆಯ ತಾಲೂಕು. ಆರೆಸ್ಸೆಸ್ ಮತ್ತು ಅದರ ಪರಿವಾರ ಅಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ಎಂದೂ ಗೆದ್ದಿಲ್ಲ. ಮುಸ್ಲಿಮರು ಹೆಚ್ಚಲ್ಲದಿದ್ದರೂ ದೇಶದ ಸರಾಸರಿಯ ಪ್ರಮಾಣದಲ್ಲಿ ಅಲ್ಲೂ ಇದ್ದಾರೆ. ಟಿಪ್ಪು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ತಹಸೀಲ್ದಾರರು ಸಭೆ ಕರೆದಿದ್ದಾರೆ. ನಿಯಮಗಳ ಪ್ರಕಾರ ಅವರು ರಾಷ್ಟಿçÃಯ ಹಬ್ಬಗಳ ಸಮಿತಿಯ ಅಧ್ಯಕ್ಷರು. ಇಂತಹ ಎಲ್ಲಾ ಜಯಂತಿಗಳಲ್ಲೂ ಮಾಡುವಂತೆ, ಯಾರ ಜಯಂತಿಯನ್ನು ಆಚರಿಸಲಾಗುತ್ತದೋ, ಆ ವ್ಯಕ್ತಿಯು ಯಾವ ಜಾತಿ ಅಥವಾ ಧರ್ಮಕ್ಕೆ ಸೇರಿದವರೆಂದು ಹೇಳಲಾಗುತ್ತದೋ ಅವರನ್ನು ಹೆಚ್ಚಾಗಿ ಕರೆಯಲಾಯಿತು. ಹಾಗಾಗಿ ಮುಸ್ಲಿಮರೂ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ತಹಸೀಲ್ದಾರರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಹೇಳಿದ್ದಿಷ್ಟು. ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡೋಣ; ಮೆರವಣಿಗೆ ಮಾಡಲು ಅಥವಾ ಮೈದಾನದಲ್ಲಿ ಮಾಡಲು ಈ ಸಾರಿ ಅನುಮತಿ ನೀಡಬಾರದೆಂದು ಮೇಲಿನಿಂದ ಆದೇಶ ಬಂದಿದೆ. ಇದನ್ನು ಸಭೆಯಲ್ಲಿದ್ದ ಮುಸ್ಲಿಮರು ಒಪ್ಪಲಿಲ್ಲ. ‘ಬೇರೆ ಎಲ್ಲಾ ಜಯಂತಿಗಳಿಗಾದರೆ ಈ ರೀತಿ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿÃರಿ, ಟಿಪ್ಪು ಜಯಂತಿಗೆ ಏಕೆ ಕೊಡುವುದಿಲ್ಲ?’ವೆಂದು ಕೇಳಿದರು. ಕೇಳಿದ್ದರಲ್ಲಿ ತಪ್ಪೆÃನಿರಲಿಲ್ಲ. ಆದರೆ, ಈ ಸಾರಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ತಹಸೀಲ್ದಾರರು ಇರಲಿಲ್ಲ. ಇದು ಮೇಲಿನಿಂದ ಬಂದ ಆದೇಶವಾಗಿತ್ತು. ಅಲ್ಲಿಗೂ ಇನ್ನೊಂದು ಮಾತನ್ನು ಹೇಳಿದರು, ‘ಒಂದು ವೇಳೆ ಈ ಆದೇಶದಲ್ಲಿ ಬದಲಾವಣೆ ಬಂದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮೆರವಣಿಗೆ ಇತ್ಯಾದಿಗಳ ವಿಚಾರದಲ್ಲಿ ಸ್ಥಳೀಯವಾಗಿಯೇ ತೀರ್ಮಾನ ತೆಗೆದುಕೊಳ್ಳಬಹುದು ಎಂದಾದರೆ, ನಾವು ಖಂಡಿತವಾಗಿ ಅವಕಾಶ ಮಾಡಿಕೊಡುತ್ತೆÃವೆ’. ಸರ್ಕಲ್ ಇನ್ಸ್ಪೆಕ್ಟರ್ ಸಹಾ ದನಿಗೂಡಿಸಿದರು.
ಇದನ್ನು ಒಪ್ಪದ ಮುಸ್ಲಿಂ ಮುಖಂಡರು ಸಭಾತ್ಯಾಗ ಮಾಡಿದರಲ್ಲದೇ, ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿಯೇ ಹೋದರು. ಅಷ್ಟು ಹೊತ್ತಿಗೆ ಮಧ್ಯಮ ಪ್ರಮಾಣದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಗಿತ್ತು ಮತ್ತು ಭಾಷಣ ಮಾಡಲು ಭಾಷಣಕಾರರನ್ನೂ ನಿಗದಿ ಮಾಡಲಾಗಿತ್ತು. ಈ ಸದ್ಯ ಎಲ್ಲಾ ಮಹಾಪುರುಷರೂ, ಮಹಿಳೆಯರೂ ಆಯಾ ಜಾತಿ ಅಥವಾ ಧರ್ಮಕ್ಕೆ ಸೀಮಿತರು. ಹಾಗಾಗಿ ಜಾತ್ಯಸ್ಥರೇ ಕೈಬಿಟ್ಟ ಮೇಲೆ ಟಿಪ್ಪು ಅನಾಥ.
ಆ ತಾಲೂಕಿನ ಶಾಸಕರು ಸಚಿವರಾಗಿದ್ದರಿಂದ, ಅವರು ಜಿಲ್ಲಾ ಕೇಂದ್ರಕ್ಕೆ ಹೋದರು. ಹೀಗಾಗಿ ಅವರನ್ನು ನೋಡಲು ಅಥವಾ ಮೆಚ್ಚಿಸಲು ಬರಬಹುದಾದವರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲಿನ ಸಂಘಪರಿವಾರದ ಗುಂಪೂ ದುರ್ಬಲವಾದ್ದರಿಂದ, ಗಲಭೆಯೆಬ್ಬಿಸಲು ಬರಬಹುದಾದವರೂ ಬರಲಿಲ್ಲ. ಕಾರ್ಯಕ್ರಮ ಆರಂಭದ ಸಮಯಕ್ಕೆ ಸಭಾಂಗಣದಲ್ಲಿ 30 ಜನರಿದ್ದರು. ತಹಸೀಲ್ದಾರರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಅವರು ಕ್ಷೆÃತ್ರ ಶಿಕ್ಷಣಾಧಿಕಾರಿಗಳನ್ನು ಕರೆದು, ಹತ್ತಿರದ ಯಾವುದಾದರೂ ಶಾಲೆಯಿಂದ ಮಕ್ಕಳನ್ನು ಕರೆಸಿರಿ ಎಂದರು. ಆದರೆ, ಅವರಿಗೆ ಹಿಂಜರಿಕೆ. ‘ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದಿದ್ದಾರೆ ಎಂದು ವಿವಾದವಾದರೆ?’ ಎಂಬುದು ಅವರ ಕಾರಣ. ಅಂದರೆ, ಟಿಪ್ಪು ಸುಲ್ತಾನ್ ನಾಡು ಕಂಡ ಹೆಮ್ಮೆಯ ದೊರೆ ಎಂದು ಪಠ್ಯಪುಸ್ತಕದಲ್ಲಿ ಇನ್ನೂ ಉಳಿದಿರಬಹುದಾದರೂ, ಸರ್ಕಾರವೇ ಟಿಪ್ಪು ಜಯಂತಿಯನ್ನು ಮಾಡುತ್ತಿದ್ದರೂ, ಮಕ್ಕಳನ್ನು ಕರೆದರೆ ‘ಇದು ಟಿಪ್ಪು ಜಯಂತಿ’ ಎನ್ನುವ ಕಾರಣಕ್ಕೆÃ ವಿವಾದವಾಗುತ್ತದೆಂಬುದು ಅವರ ಭಯ.
ಅಂತಿಮವಾಗಿ ಸಭಾಂಗಣದೊಳಗೆ ಒಂದಷ್ಟು ಜನ ಮುಸ್ಲಿಮರು ಬಂದರು. ಪುರಸಭೆಯ ಅಧ್ಯಕ್ಷ ಮುಸ್ಲಿಮರಾಗಿದ್ದುದರಿಂದ ಅವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡು ಕೆಲವರಾದರೂ ಬರಬೇಕೆಂದು ಶತಪ್ರಯತ್ನ ಹಾಕಿದ್ದರು! ಅಸಲು ಸಮಸ್ಯೆ ಏನಾಗಿತ್ತೆಂದರೆ, ಈ ಅಧ್ಯಕ್ಷರಿಗಿಂತ ಮುಂಚೆ ಅಧ್ಯಕ್ಷರಾಗಿದ್ದವರೂ ಮುಸ್ಲಿಮರೇ. ತನ್ನ ನಂತರ ಇನ್ನೊಬ್ಬ ನಾಯಕ ತನ್ನದೇ ಸಮುದಾಯದಲ್ಲಿ ಮೇಲೆ ಬಂದು, ಆತನ ವೇದಿಕೆಯ ಮೇಲೆ ವಿರಾಜಮಾನನಾಗಿರುವಾಗ ಆ ಕಾರ್ಯಕ್ರಮ ಯಶಸ್ವಿಯಾಗಬಾರದೆಂಬುದು ವಿರೋಧಕ್ಕೆ ಅಸಲೀ ಕಾರಣವಾಗಿತ್ತು. ಮೆರವಣಿಗೆ ಕೇವಲ ನೆಪವಾಗಿತ್ತು. ಹೊಸದಾಗಿ ಅಧ್ಯಕ್ಷರಾಗಿದ್ದ ವ್ಯಕ್ತಿಗಿಂತ ಪ್ರಭಾವಿಯಾಗಿದ್ದ ಹಿಂದಿನ ಅಧ್ಯಕ್ಷ ಮಿಕ್ಕವರನ್ನು ತಡೆದಿದ್ದರು!
ಇಂದು ಟಿಪ್ಪು ಸುಲ್ತಾನರ ಜಯಂತಿ ಹೀಗೂ ನಡೆಯುತ್ತಿದೆ. ನಾಡಿಗೆ ನಾಡೇ ಹೆಮ್ಮೆ ಪಡಬೇಕಿದ್ದ ಧೀಮಂತ ಆಡಳಿತಗಾರನೊಬ್ಬನನ್ನು, ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು. ಆ ಕಾರಣಕ್ಕೆÃ ಜಯಂತಿಯನ್ನು ಆಚರಿಸುವುದು ಅಥವಾ ವಿರೋಧಿಸುವುದು. ತಮ್ಮದೇ ಸ್ವಂತ ಹಿತಾಸಕ್ತಿಯು ಮುಂದೆ ಬರುವುದಾದಲ್ಲಿ, ಆ ಜಾತಿಯವರೂ ಕಾರ್ಯಕ್ರಮಕ್ಕೆ ತಿರಸ್ಕಾರ ತೋರುವುದು ಇದು ವಿದ್ಯಮಾನ.
ಇದಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮೊದಲು ಯಾವುದೇ ಕಾರಣ ನೀಡದೇ, ರಾಜ್ಯ ಮಟ್ಟದ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ತಮ್ಮ ಹೆಸರಿಲ್ಲದಂತೆ ಗೈರುಹಾಜರಿಯ ತೀರ್ಮಾನ ಘೋಷಿಸಿದ್ದರು. ನಂತರ ಇದೊಂದು ಸುದ್ದಿಯಾದಾಗ ಅನಾರೋಗ್ಯದ ಸ್ಪಷ್ಟಿÃಕರಣ ಕೊಟ್ಟರು. ಇದಲ್ಲದೇ ವಾಲ್ಮಿÃಕಿ ಜಯಂತಿ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ, ಈಗ ಹೋದರೆ ಬೇರೆ ಅರ್ಥ ಬರುತ್ತದೆಂಬ ಸುದ್ದಿಯನ್ನೂ ತೇಲಿಬಿಡಲಾಯಿತು. ಇದೇ ಮುಖ್ಯಮಂತ್ರಿಯವರು ಕೆಂಪೇಗೌಡ ಜಯಂತಿ ಸರ್ಕಾರದ ವತಿಯಿಂದ ಆದಾಗ ಬೆಂಗಳೂರಿನಲ್ಲೂ (ಜೂನ್ 27) ಭಾಗವಹಿಸಿದ್ದರು, (ಆಗಸ್ಟ್ 11ರಂದು) ಒಕ್ಕಲಿಗರ ಸಂಘದಿಂದ ಚಿಕ್ಕಬಳ್ಳಾಪುರದಲ್ಲಿ ನಡೆದಾಗಲೂ ಭಾಗವಹಿಸಿದ್ದರು.
ದೇಶದ ಇಂದಿನ ಸ್ಥಿತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸದೇ ಇದ್ದರೆ ಅದು ಯಾವ ಸಂದೇಶ ಕೊಡುತ್ತದೆಂಬುದು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಅಂತಹದೊಂದು ಸಂದೇಶ ಹೋಗಲಿ ಎಂಬ ಬಯಕೆಯೂ ಅವರದ್ದಿರಬಹುದು. ಇದು ಕೇವಲ ಜೆಡಿಎಸ್‌ನ ಸಮಸ್ಯೆಯಲ್ಲ. ಕಾಂಗ್ರೆಸ್ ನಾಯಕರಲ್ಲಿ ಟಿಪ್ಪು ಸುಲ್ತಾನರ ಮಹತ್ವವನ್ನು ಅರಿತು ಅದನ್ನು ಸಮರ್ಥಿಸಿಕೊಳ್ಳಬಲ್ಲವರು ಬಹಳ ಕಡಿಮೆ. ಹೇಗೂ ಮುಸ್ಲಿಮರು ತಮಗೇ ಓಟು ಹಾಕುತ್ತಾರೆಂಬ ಭಾವನೆ ಅವರದ್ದಿದ್ದರೆ, ಬಹುಶಃ ಇನ್ನು ಮುಂದೆ ಮುಸ್ಲಿಮರು ತಮಗೆ ಓಟು ಹಾಕಲಾರರು ಎಂದು ಜೆಡಿಎಸ್ ಭಾವಿಸಿದಂತಿದೆ. ಟಿಪ್ಪು ಕುರಿತು ಸಂಘಪರಿವಾರದ ಫೇಕ್ ಸ್ಟೊÃರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಬಹುಶಃ ಟಿಪ್ಪು ಸುಲ್ತಾನ್ ಆ ರೀತಿಯೂ ಇದ್ದಿರಬಹುದು ಎಂದು ಕಾಂಗ್ರೆಸ್ ನಾಯಕರಲ್ಲಿ ಹಲವರು ಭಾವಿಸಿರಲಿಕ್ಕೂ ಸಾಕು. ಇಂತಹ ಎಡಬಿಡಂಗಿತನವನ್ನು ಕಾಂಗ್ರೆಸ್ – ಜೆಡಿಎಸ್ ನಾಯಕರು ತೊರೆಯುವವರೆಗೂ ಅವರು ಬಿಜೆಪಿಗೆ ಸರಿಯಾದ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಇಂತಹುದೇ ಇನ್ನೊಂದು ಸುದ್ದಿ ಈ ವಾರ ಬೆಳಕಿಗೆ ಬಂದಿದೆ. ಗೌರಿ ಲಂಕೇಶರ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ ಆದ ಖರ್ಚಿನ ಬಾಕಿಯನ್ನು ಸರ್ಕಾರವಿನ್ನೂ ಪಾವತಿ ಮಾಡಿಲ್ಲವೆಂದು ವರದಿಯಾಗಿದೆ. ಬಹುಶಃ ಹಣ ಪಾವತಿಯಾಗಿಲ್ಲವೆಂಬ ಕಾರಣಕ್ಕೆ ಪೊಲೀಸ್ ಇಲಾಖೆಯು ತನಿಖೆಯನ್ನೆÃನೂ ನಿಲ್ಲಿಸುವುದಿಲ್ಲ ಅಥವಾ ಬೇರೆ ದಿಕ್ಕಿಗೆ ಹೋಗುವುದಿಲ್ಲ. ಆದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಡಚಣೆಯಾಗುವುದರಲ್ಲಂತೂ ಸಂದೇಹವಿಲ್ಲ. ಈ ಕುರಿತ ಸತ್ಯಾಸತ್ಯತೆಯನ್ನು ಸರ್ಕಾರ, ಇಲಾಖೆ ಜನರ ಮುಂದಿಡಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...