*ನೀರು* (ಪುಟ್ಕತೆ)

- Advertisement -
- Advertisement -

‘ಬೇಕೇ ಬೇಕು ನೀರೂ ಬೇಕು’ ಹೀಗೆ ಸುತ್ತ ಎಂಬತ್ತಾರು ಹಳ್ಳಿ ಜನ ಘೋಷಣೆ ಕೂಗುತ್ತ ಸತ್ಯಾಗ್ರಹಕ್ಕೆ ಕುಳಿತಿದ್ದರು. ಕುಡಿಯೊ ನೀರಿಗಾಗಿ ಎಂಟು ವರ್ಷದಿಂದ ಅರ್ಜಿ ಕೊಟ್ಟು ಸಾಕಾಗಿ ಹೋಗಿತ್ತು. ಇನ್ನೆರಡು ತಿಂಗಳಲ್ಲಿ ಚುನಾವಣೆ. ನೂರನೇ ದಿನದ ಸತ್ಯಾಗ್ರಹಕ್ಕೆ ಮಿನಿಸ್ಟರ್, ಅಧಿಕಾರಿಗಳು ಬಂದರು. ಜನರ ಗದ್ದಲ ಹೆಚ್ಚಾಯಿತು. ಯಾರೋ ‘ಭಾರತ್ ಮಾತಾಕಿ’ ಅಂದರು. ಜನ ‘ಜೈ’ ಅಂದು ನಿಶ್ಯಬ್ಧರಾದರು.

ಮಿನಿಸ್ಟರ್ ಮೈಕ್ ಹಿಡಿದು ‘ಮಹಾಜನಗಳೇ, ನಿಮ್ಮ ನೋವು ನನಗರ್ಥವಾಗತ್ತೆ. ಈ ಮಣ್ಣಿಗೆ ನೀರು ತರದೆ ನಾನು ಸಾಯಲಾರೆ’ ಎಂದು ಸ್ವಲ್ಪ ಹೊತ್ತು ಸುಮ್ಮನಾದರು. ಮಿನಿಸ್ಟರ್ ಹಿಂಬಾಲಕರು, ಅಧಿಕಾರಿಗಳನ್ನು ಬಿಟ್ಟು ಯಾರೂ ಚಪ್ಪಾಳೆ ತಟ್ಟಲಿಲ್ಲ. ‘ಇನ್ನೆರಡೇ ತಿಂಗಳು. ನನಗೆ ಮತ್ತೆ ಅಧಿಕಾರ ಕೊಡಿ. ನಿಮ್ಮ ಋಣ ತೀರಿಸದೇ ಸಾಯೋದಿಲ್ಲ’ ಎಂದರು. ಅಷ್ಟರಲ್ಲಿ ಮದ್ಯೆ ಬಾಯಿ ಹಾಕಿದ ಜನತೆ.

‘ಸಾಯೆಬ್ರೆ ಎಂಟು ವರ್ಷದಿಂದ ಒಂದು ಹನಿ ಮಳೆ ಬಿದ್ದಿಲ್ಲ’

‘ಸಾಯೆಬ್ರೆ ಕುಡಿಯೋ ನೀರಿಗೆ ಏಳು ಮೈಲಿ ನಡಿಬೇಕಾಗ್ಯದ’

‘ಸಾಯೆಬ್ರೆ ಮಕ್ಕಳು ಸಾಲಿ ಬಿಟ್ಟು ನೀರು ಹೊರಾಕತ್ತೇರ’

‘ಸಾಯೆಬ್ರೆ ಎಂಟು ವರ್ಷ ಆತ್ರಿ. ನಿಮ್ಮನ್ನ ಎರಡು ಸಲ ಗೆಲ್ಸಿವಿ ನೆಪ್ಪಿರ್ಲಿ’

ಪೊಲೀಸ್ ಎಲ್ಲರನ್ನು ಗದರಿಸಿ ಕೂರಿಸಿದರು.
ಮಿನಿಸ್ಟರ್ : ಮಹಾಜನಗಳೆ 100 ಕಿಲೋಮೀಟರಿಂದ ನದಿ ನೀರು ತರಬೇಕಂದ್ರೆ ಅಷ್ಟು ಸುಲಭವಲ್ಲ. ಆದ್ರೂ ನಾನು ಪ್ರಾಮಾಣಿಕ ಪ್ರಯತ್ನ ಮಾಡಿ ಫೈಲ್ ಮೂವ್ ಮಾಡ್ಸಿದಿನಿ. ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಕಾಮಗಾರಿ ಚಾಲೂ ಮಾಡ್ತಿನಿ’

ಜನತೆ : ಅಲ್ಲಿಮಟ ನಮ್ಕತಿ? ಸಾಯೆಬ್ರೆ ಅಂತರ್ಜಲ ಇಲ್ಲದಂಗಾಗ್ಯದ. ಬೋರ್ ಬಾವಿ ಬರಿದಾಗ್ಯವ. ಕೆರೆ, ಕುಂಟೆ ಬಾಯ್ಬಿಟ್ಕಂಡ್ ನೀರು ನೀರು ಅಂತಾವೆ. ದನಕರುಗಳಿಗಾದ್ರೂ ಕುಡಿಯೋ ನೀರು ವ್ಯವಸ್ಥೆ ಮಾಡ್ರಿ

ಮಿನಿಸ್ಟರ್: ಅದಕ್ಕೆ ಇನ್ನೂರು ಕೋಟಿ ಬೇಕು. ಸರ್ಕಾರ ಸಾಲದಲ್ಲಿದೆ. ಯಾವ್ದುಕ್ಕೂ ಎರಡು ತಿಂಗಳು ಸಮಯ ಕೊಡಿ ದಯಮಾಡಿ

ಜನತೆ ಮಾತಾಡಬೇಕೆಂದುಕೊಂಡರೂ ಪೊಲೀಸ್ ಬಿಡಲಿಲ್ಲ. ಅಧಿಕಾರಿಗಳು ಮಿನಿಸ್ಟರ್ ಕಿವಿಲಿ ಏನೋ ಹೇಳಿದಾಗ
ಮಿನಿಸ್ಟರ್: ಮಹಾಜನಗಳೇ ನಿಮಗೊಂದು ಸಂತಸದ ಸುದ್ಧಿ.

ಮಿನಿಸ್ಟರ್ ಮಾತು ಕೇಳಿ ಅಲ್ಲಿದ್ದ ರೈತರಿಗೆ ಬೆಳೆ ಕಂಡಂಗಾಯ್ತು. ಕೂಲಿ ಜನಗಳಿಗೆ ಕೆಲಸ ಕಂಡಂಗಾಯ್ತು. ಮಹಿಳೆಯರಿಗೆ ಮೋಡ ಕಟ್ಟಿದಂಗಾಯ್ತು. ಮಕ್ಕಳಿಗೆ ಬರಿಮೈಲಿ ಈಜು ಹೊಡೆದಂಗಾಯ್ತು. ಜನರ ಕಿವಿಗಳೆಲ್ಲ ನೆಟ್ಟಗಾದವು.

ಮಿನಿಸ್ಟರ್: ಈ ಸಾಧನೆ ಅಮೆರಿಕಾ, ಚೀನಾ, ರಷ್ಯಾ ಅಷ್ಟೇ ಮಾಡಿದ್ದು. ಈಗ ಆ ಸಾಧನೇನ ನಮ್ಮ ದೇಶ ಮಾಡುತ್ತಿದೆ. ಇವತ್ತು ರಾತ್ರಿ ಚಂದ್ರನ ಮೇಲೆ ಉಪಗ್ರಹ ಕಳಿಸುತ್ತಿದ್ದಾರೆ. ಸಾವಿರ ಕೋಟಿ ಪ್ರಾಜೆಕ್ಟ್ ಈ ಚಂದ್ರಯಾನ. ಎಲ್ಲರೂ ನೋಡಿ ಹಾರೈಸಿ. ದೇಶದ ಕೀರ್ತಿ ಪ್ರಚಾರ ಮಾಡಿ.

ಮಿನಿಸ್ಟರ್ ಮಾತು ಕೇಳಿ ಜನತೆಯಲ್ಲೊಬ್ಬ ‘ಸಾಯೆಬ್ರೆ ಸಾವ್ರ ಕೋಟಿಯಾ’ ಎಂದೊಡನೆ ಅದ್ಯಾರೋ ‘ಭಾರತ್ ಮಾತಾಕಿ’ ಅಂದರು. ಜನ ‘ಜೈ’ ಅಂದರು. ಮಿನಿಸ್ಟರ್ ಕಾರು ಹತ್ತುವವರೆಗೆ ಘೋಷಣೆ ಮೊಳಗುತ್ತಲೇ ಇತ್ತು. ಅಲ್ಲೆ ಸಂದಿಯಲ್ಲಿ ನುಗ್ಗಿ ಸೂಟು ತೊಟ್ಟ ಅಧಿಕಾರಿಯೊಬ್ಬರ ಕೈ ಹಿಡಿದುಕೊಂಡ ಶಾಲೆ ಯೂನಿಪಾರ್ಮ್ ತೊಟ್ಟ ಹುಡುಗಿ ‘ಸಾರ್ ಚಂದ್ರಯಾನ ಯಾಕೆ’ ಎಂದು ಕೇಳಿದಳು. ಅಧಿಕಾರಿ ಹೆಮ್ಮೆಯಿಂದ ಹೇಳಿದ ‘ ಚಂದ್ರನಲ್ಲಿ ನೀರು ಹುಡುಕೋಕೆ ಪುಟ್ಟ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...